Homeಅಂಕಣಗಳುಪುಟಕ್ಕಿಟ್ಟ ಪುಟಗಳುಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು.

- Advertisement -
- Advertisement -

(ಇದು ಬೆಂಗಳೂರು ಮಿರರ್ ಪತ್ರಿಕೆಗಾಗಿ ಗೌರಿಲಂಕೇಶ್ 25, ಜುಲೈ 2016ರಲ್ಲಿ ಮಾಡಿದ ಪುಸ್ತಕ ವಿಮರ್ಶೆಯ ಭಾವಾನುವಾದ)

“ಭಾರತದ ಅರಸೊತ್ತಿಗೆಗಳ ರಾಜಕಾರಣದಲ್ಲಿ ಬೆಂಗಳೂರೊಂದು ಚದುರಂಗದಾಟದ ಕಾಯಿಯಂತಾಗಿದ್ದೇ ಒಂದು ಕುತೂಹಲಕರ ವಿಷಯ. ಕೆಂಪೇಗೌಡರು ನಿರ್ಮಿಸಿದರು. ಬಿಜಾಪುರದ ಸುಲ್ತಾನರಿದನ್ನು ಗೆದ್ದರು. ಮೊಘಲರು ಮಾರಿದರು. ಚಿಕ್ಕದೇವರಾಜ ಒಡೆಯರ್ ಕೊಂಡರು. ಇತಿಹಾಸದ ಭಿನ್ನ ಕಾಲಘಟ್ಟಗಳಲ್ಲಿ ಇದು ಶಹಾಜಿ ಭೋಸ್ಲೇ ಮತ್ತು ಹೈದರ್ ಅಲಿಯವರಿಗೆ ವ್ಯಕ್ತಿಗತವಾಗಿ ಗಳಿಸಿದ ಜಹಗೀರ್ ಆಗಿತ್ತು. ಬ್ರಿಟಿಷ್ ರಾಜ್ ಕಾಲದಲ್ಲಿ ಇಂಗ್ಲೆಂಡಿನ ಗಮನವಾಗಿತ್ತು,” ಇವು ಮೈಸೂರಿನ ರಾಜ್ಯಪಾಲರಾದ ಧರ್ಮವೀರರವರು ಎಂ ಫಜ್ಲುಲ್ ಬರೆದಿರುವ ‘ದ ಸೆಂಚುರೀಸ್’ ಪುಸ್ತಕದ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು. ಫಜ್ಲುಲ್ ಅವರ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೂ, 1970ರಲ್ಲಿ ಪ್ರಕಟವಾದ (ಈಗ ಪ್ರತಿಗಳು ದೊರಕುತ್ತಿಲ್ಲ) ಈ ಪುಸ್ತಕ, ಬೃಹತ್ತಾಗಿ ಬೆಳೆಯುತ್ತಿರುವ, ಆಕರ್ಷಕವಾದ ಮತ್ತು ಬಹುಭಾಷಿಕ ನಗರವಾದ ಬೆಂಗಳೂರನ್ನು ತಿಳಿಯಲು ಓದಲೇಬೇಕಾದ ಪುಸ್ತಕ.

ಒತ್ತೊತ್ತಾಗಿ ಬೆಳೆದಿರುವ ಕಾಡುಗಳಿಂದ ಮತ್ತು ಕುರುಚಲು ಕಳೆಗಳಿಂದ ತುಂಬಿದ್ದ ಈ ಪ್ರದೇಶವನ್ನು ಕೆಂಪೇಗೌಡರು ತಮ್ಮ ಕನಸಿನ ನಗರವನ್ನಾಗಿ ರೂಪಿಸಿದರು ಎಂಬುದೇನೋ ಎಲ್ಲರಿಗೂ ಗೊತ್ತು. ಆದರೆ, ಎತ್ತುಗಳು ನಮ್ಮ ಈ ನಗರದ ಮೊದಲ ದಾರಿಯನ್ನು ರೂಪಿಸಿದ್ದು ಎಂದು ಯಾರಿಗೆ ಊಹಿಸಲು ಸಾಧ್ಯ. ತಮ್ಮ ಜ್ಯೋತಿಷಿಗಳು ಗೊತ್ತುಪಡಿಸಿದ 1537ರ ಒಂದು ಶುಭ ಮುಂಜಾನೆಯಲ್ಲಿ ಗೌಡರು ಸಾಂಪ್ರದಾಯಿಕವಾಗಿ ನಿರ್ಮಾಣದ ಕೆಲಸವನ್ನು ಆರಂಭಿಸಿದ್ದರು. ನಗರದ ಹೃದಯಭಾಗವಾಗಿರುವ, ಈಗ ಯಾವುದನ್ನು ದೊಡ್ಡಪೇಟೆ ಚೌಕವೆನ್ನುತ್ತೇವೆಯೋ, ಅಲ್ಲಿ ಹಾಲು ಬಿಳುಪಿನ ನಾಲ್ಕು ಜೊತೆ ಎತ್ತುಗಳು, ಸಿಂಗರಿಸಿದ ನೇಗಿಲುಗಳಿಂದ ನಾಲ್ಕೂ ದಿಕ್ಕುಗಳಿಗೆ ಮುಖ ಮಾಡಿ ಚಲಿಸುತ್ತಾ ಉತ್ತಿದವು. ಹಾಗೆ ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ಉತ್ತಲ್ಪಟ್ಟ ಕೇಂದ್ರಭಾಗದಿಂದಲೇ ನಾಲ್ಕು ಮುಖ್ಯ ನಗರಗಳು ತಲೆಯೆತ್ತಿದವು. ಬೆಂಗಳೂರಿನ ಹಳೆಯ ರಸ್ತೆಗಳನ್ನು ಗಮನಿಸಿ. ಚಿಕ್ಕಪೇಟೆ ಮತ್ತು ದೊಡ್ಡಪೇಟೆಯ ರಸ್ತೆಗಳು ಪೂರ್ವದಿಂದ ಪಶ್ಚಿಮಕ್ಕೆ, ಹಲಸೂರು ಗೇಟಿಂದ ಸೊಂಡೇಕೊಪ್ಪ ಗೇಟಿಗಾದರೆ, ಉತ್ತರದಿಂದ ದಕ್ಷಿಣಕ್ಕೆ ಯಲಹಂಕ ಗೇಟಿನಿಂದ ಆನೇಕಲ್ ಗೇಟಿಗೆ ರಸ್ತೆಗಳಾದವು. ಈಗ ಇಕ್ಕಟ್ಟೆನಿಸುವ ದಾರಿಗಳು ಈಗಲೂ ಬೆಂಗಳೂರಿನ ಸದಾ ಚಟುವಟಿಕೆಯಿಂದ ಕೂಡಿರುವ ವಾಣಿಜ್ಯದ ಕೇಂದ್ರವಾಗಿವೆ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ಯಲಹಂಕದಲ್ಲಿದ್ದ ತಮ್ಮ ರಾಜಧಾನಿಯನ್ನು ಬೆಂಗಳೂರಿಗೆ ಬದಲಿಸಿ ಮಣ್ಣಿನ ಕೋಟೆಯನ್ನೂ ಕೂಡ ಕಟ್ಟಿಸಿದರು. ಆಗಲೇ ಇದು ಯಶಸ್ವೀ ವಾಣಿಜ್ಯ ನಗರಿಯಾಗಿ ಇವರ ಕೀರ್ತಿ ಹಬ್ಬಿತು. ಇದರಿಂದ ಪ್ರಭುಗಳು ತಾವು ಸಾಮಂತರೆಂಬುವ ಚೌಕಟ್ಟಿನಿಂದಾಚೆಗೂ ಒಂದು ಹೆಜ್ಜೆ ಇಟ್ಟರು. ಟಂಕಸಾಲೆಯನ್ನು ಸ್ಥಾಪಿಸಿ ತಾವೇ ವೀರಭದ್ರ ವರಹವೆಂದು ನಾಣ್ಯವನ್ನು ಚಲಾವಣೆಗೆ ತಂದರು. ಇದು ವಿಜಯನಗರದ ಆಗಿನ ಅರಸು ಸದಾಶಿವ ರಾಯನನ್ನು ಕೆರಳಿಸಿತು. ಇದು ಕೆಂಪೇಗೌಡರ ಬಂಧನಕ್ಕೆ ಕಾರಣವಾಗಿ ಐದು ವರ್ಷಗಳ ಕಾಲ ಕಾರಾಗೃಹದಲ್ಲಿರಬೇಕಾಯಿತು. ಸದಾಶಿವರಾಯನ ನಂತರ ಪಟ್ಟಕ್ಕೆ ಬಂದ ರಾಮರಾಯ. ಆಗ ಅಹಮದ್ ನಗರ, ಬಿಜಾಪುರ ಮತು ಗೋಲ್ಕಂಡದ ಅರಸರು ಒಟ್ಟಾಗಿ ವಿಜಯನಗರದ ಮೇಲೆ ದಾಳಿ ಮಾಡುವ ಭೀತಿಯಿಂದ ತಮ್ಮ ಅವರು ಖಜಾನೆಯನ್ನು ಹಿಗ್ಗಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಭಾರೀ ಮೊತ್ತದ ಹಣವನ್ನು ಸಂದಾಯ ಮಾಡುವ ಷರತ್ತಿನ ಮೇಲೆ ಕೆಂಪೇಗೌಡರನ್ನು ಬಿಡುಗಡೆ ಮಾಡಿದರು.

ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದೇ ಅಲ್ಲದೇ ಪ್ರಖ್ಯಾತವಾದ ನಾಲ್ಕು ಗೋಪುರಗಳನ್ನು ಕಟ್ಟಿಸಿದರು. ಅವರು ಮಹಾನ್ ಯೋಧರಾಗಿದ್ದರೂ ಬಿಜಾಪುರ ಸುಲ್ತಾನರ ವಿರುದ್ಧವಾಗಿ ಹೋರಾಡಲಾಗಲಿಲ್ಲ. ಬಿಜಾಪುರದ ಸುಸಜ್ಜಿತ ಸೇನೆಯಿಂದ ಕೋಟೆಯ ದ್ವಾರಗಳನ್ನು ತೆರೆಯಲು ಒತ್ತಡ ತಂದಾಗ ವಿಧಿಯಿಲ್ಲದೇ ವಿಜಯಿಗಳಿಗೆ ಬೆಂಗಳೂರನ್ನು ಒಪ್ಪಿಸಿ ಮಾಗಡಿಗೆ ಸರಿಯಬೇಕಾಯಿತು.

ಕುತೂಹಲಕರವಾದ ಸಂಗತಿಯೆಂದರೆ, ಛತ್ರಪತಿ ಶಿವಾಜಿಯ ತಂದೆ ಶಹಜಿ ಭೋನ್‍ಸ್ಲೇ ಬಿಜಾಪುರ ಸೇನೆಯ ಮುಂದಾಳಾಗಿದ್ದವರು. ಶಹಜಿಯ ಶೌರ್ಯದಿಂದ ಸಂಪ್ರೀತನಾದ ಎರಡನೆಯ ಅಲಿ ಆದಿಲ್ ಷಾ ಬೆಂಗಳೂರನ್ನು ಜಹಗೀರಾಗಿ ಶಹಜಿಗೇ ಕೊಟ್ಟರು. ಇದರಿಂದಾಗಿ ಶಹಜಿಯ ಇಬ್ಬರು ಮಕ್ಕಳು ಶಿವಾಜಿ ಮತ್ತು ವೆಂಕೋಜಿ ಇಬ್ಬರೂ ಬೆಂಗಳೂರಲ್ಲಿ ಬೆಳೆದರು. ಶಹಜಿಯ ಮರಣಾನಂತರ ಶಿವಾಜಿಗೆ ಪುಣೆಯ ಭಾಗವೂ, ವೆಂಕೋಜಿಗೆ ಬೆಂಗಳೂರಿನ ಭಾಗವೂ ಲಭಿಸಿತು. ಸ್ವಯಂ ಸೇನಾನಿಯಾಗಿದ್ದ ವೆಂಕೋಜಿಯು ತಂಜಾವೂರನ್ನು ವಶಪಡಿಸಿಕೊಂಡು ತನ್ನ ಕೇಂದ್ರವನ್ನು ಅಲ್ಲಿಗೆ ವರ್ಗಾಯಿಸಲು ಆಲೋಚಿಸಿದರು. ತನ್ನ ತುಂಬಿದ ಕೈಗಳಿಂದಾಗಿ ಬೆಂಗಳೂರಿನ ಬಿರುಸಿನ ಚಟುವಟಿಕೆಗಳನ್ನು ನಿರ್ವಹಿಸುವ ಒತ್ತಡವನ್ನು ತಾಳದೇ ಇದನ್ನು ಚಿಕ್ಕದೇವರಾಜ ಒಡೆಯರಿಗೆ ಮೂರು ಲಕ್ಷ ರೂಪಾಯಿಗಳ ರಾಯಧನಕ್ಕೆ ಮಾರುವ ನಿರ್ಧಾರ ಮಾಡಿದರು.

ಬೆಂಗಳೂರಿನೊಂದಿಗೆ ಬಹಳ ಭಾವನಾತ್ಮಕ ಸಂಬಂಧವಿದ್ದ ಶಿವಾಜಿಗೆ ವೆಂಕೋಜಿಯ ಆಲೋಚನೆ ತಿಳಿದು ಭಲೇ ಕೋಪ ಬಂತು. ಬೆಂಗಳೂರನ್ನು ಮಾರದಿರಲು ತಮ್ಮ ಸೋದರನನ್ನು ಕೋರಿಕೊಂಡರು. ವೆಂಕೋಜಿ ಮತ್ತು ಒಡೆಯರ್ ನಡುವೆ ಮಾತುಕತೆಗಳು ನಡೆಯುತ್ತಿರುವಾಗಲೇ ಶಿವಾಜಿಯ ದೇಹಾಂತ್ಯವಾಯಿತು. ಮೊಘಲರು ಮತ್ತು ಮರಾಠರಿಬ್ಬರೂ ಬೆಂಗಳೂರನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದ್ದರು. ಆದರೆ, ಮರಾಠರ ದುರದೃಷ್ಟಕ್ಕೆ ಮೊಘಲರ ಸೇನೆ ಮುಂದಾಗಿ ಬಂತು ಮತ್ತು 1687ರಲ್ಲಿ ವೆಂಕೋಜಿಯನ್ನು ಪರಾಜಯಗೊಳಿಸಿತು.

ಹಸನ್ ಗುರುತಿಸುವಂತೆ ಕಾಸ್ಮಾಪಾಲಿಟನ್ (ಸಮದರ್ಶಿ ಅಥವಾ ವಿಶ್ವಪ್ರಜೆ) ಗುಣ ಈ ನಗರದ ಚರಿತ್ರೆಯಲ್ಲೇ ಬೇರುಬಿಟ್ಟಿದೆ. ಮೊಘಲರ ಅಧಿಕಾರಿಗಳು ಮತ್ತು ಯೋಧರು ಪುಶ್ತು, ಪಂಜಾಬಿ, ಗುಜರಾತಿ, ರಾಜಸ್ತಾನಿ, ಮೊಘಲಾಯಿ ಮತು ಪಾರ್ಸಿ ಭಾಷೆಗಳನ್ನು ಆಡುತ್ತಿದ್ದರು. ಸ್ಥಳೀಯರು ಮತ್ತು ಹೊರಗಿಂದ ಬಂದವರಿಗೆ ಸಂಪರ್ಕ ಭಾಷೆಯಾಗಿದ್ದದ್ದು ದಕ್ಷಿಣದಲ್ಲಿ ದಖನಿ ಎಂದು ಕರೆಯಿಸಿಕೊಳ್ಳಲ್ಪಡುವ ರೆಖ್ತಾ ಮತ್ತು ವಿಂಧ್ಯ ಪ್ರಾಂತ್ಯವನ್ನು ದಾಟಿ ರೂಪುಗೊಂಡಿದ್ದ ಉರ್ದು. ಮೊಘಲರು ಬೆಂಗಳೂರಿನಲ್ಲಿ ತಮ್ಮ ಚಟುವಟಿಕೆಗಳಲ್ಲಿ ನಿರತವಾಗಿರುವಾಗಲೇ ಒಡೆಯರ್ ತಮ್ಮ ಬೆಂಗಳೂರು ಕೊಳ್ಳುವ ಪ್ರಸ್ತಾಪವನ್ನು ಮತ್ತೆ ಮುಂದಿಟ್ಟರು. ಆಗ 1690ರಲ್ಲಿ ಮೊಘಲರು ಒಡೆಯರಿಗೆ, ಮೊದಲು ವೆಂಕೋಜಿಯ ಜೊತೆ ಮಾತಾಡಿದ್ದ ಮೊತ್ತಕ್ಕೇ ಮಾರಿದರು.

ಚಿಕ್ಕದೇವರಾಜ ಒಡೆಯರ್ ಕೂಡಾ ಕೆಂಪೇಗೌಡರಂತೆ ಬೆಂಗಳೂರಿನ ಅಭಿವೃದ್ಧಿಗೆ ಹಾತೊರೆದರು. ಆದರೆ ಅವರ ಮರಣಾನಂತರ ತಮ್ಮ ನೆರೆಹೊರೆಯ ಪ್ರಾಂತ್ಯಗಳ ನಿರಂತರ ದಾಳಿ ಮತ್ತು ಕಿರುಕುಳಗಳಿಂದ ಮೈಸೂರು ಸೊರಗಿತು. ಆಗ ಮೈಸೂರು ಅರ್ಕಾಟಿನ ನವಾಬನಿಗೆ ನಾಲ್ಕು ಕೋಟಿಗಳ ಬಾಕಿಯನ್ನು ಸಲ್ಲಿಸಬೇಕಿತ್ತು, ಸಲಾಬತ್ ಜಂಗ್ 56 ಲಕ್ಷ ರೂಪಾಯಿಗಳನ್ನು ಕಸಿದುಕೊಂಡ. ಪೇಶ್ವೆ ಬಾಲಾಜಿ ರಾವ್ ಒತ್ತಾಯಪೂರ್ವಕವಾಗಿ 32 ಲಕ್ಷ ರೂಪಾಯಿಗಳನ್ನು ಪಡೆದರು. ಒಡೆಯರ್ ಅರಸೊತ್ತಿಗೆಯು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಾಗ ನೆರವಿಗೆ ಬಂದಿದ್ದು ಪರಾಕ್ರಮಿ ಯೋಧ ಹೈದರ್ ಅಲಿ. ಮತ್ತೊಮ್ಮೆ ಮರಾಠ ಸೈನ್ಯ ಮೈಸೂರಿನ ಮೇಲೆ ದಾಳಿ ಮಾಡಿದಾಗ ಎದುರಿಸಿದ್ದು ಇದೇ ಹೈದರ್ ಅಲಿ. ತಮ್ಮ ಅರಸೊತ್ತಿಗೆಯನ್ನು ಕಾಪಾಡಿದ್ದಕ್ಕೆ ಸಂತುಷ್ಟಗೊಂಡ ಮೈಸೂರಿನ ಅರಸರು ಫತೇ ಹೈದರ್ ಬಹಾದ್ದೂರ್ ಎಂದು ಬಿರುದು ನೀಡಿ ಗೌರವಿಸಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಜಹಗೀರಾಗಿ ನೀಡಿದರು. ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು. ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳ ತಯಾರಿಕೆಗಳಾಗತೊಡಗಿದವು.

ನಂತರ ಬಂದ ಬ್ರಿಟಿಷರು ಬೆಂಗಳೂರಿನ ಮಹತ್ವವನ್ನು ಅರಿತು ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಮೊದಲಿನ ಪ್ರಯತ್ನಗಳು ವಿಫಲವಾದರೂ 1791ರಲ್ಲಿ ಮಾಡಿದ ಮಹಾಯುದ್ಧದಲ್ಲಿ ಬೆಂಗಳೂರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದರು. ಹಸನ್ ದಾಖಲಿಸುವಂತೆ ಈ ಯುದ್ಧ ಅದೆಷ್ಟು ಭೀಕರವಾಗಿತ್ತೆಂದರೆ ಕೋಟೆಯ ವಿಸ್ತಾರದ ಪ್ರದೇಶಗಳು ಮತ್ತು ಹಳೆಯ ಪಟ್ಟಣ ಜರ್ಜರಿತವಾಗಿ ಅಕ್ಷರಶಃ ಸ್ಮಶಾನವಾಗಿತ್ತು. ಆದರೆ ಒಂದು ವರ್ಷ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದವರು ನಂತರ ಶ್ರೀರಂಗಪಟ್ಟಣದ ಸಂಧಾನದಂತೆ ಟಿಪ್ಪುವಿಗೆ ಮರಳಿ ನೀಡಬೇಕಾಯಿತು.

1799ನಲ್ಲಿ ಟಿಪ್ಪುವಿನ ಮರಣಾನಂತರ ಬೆಂಗಳೂರನ್ನು ಒಡೆಯರವರ ಅಧೀನಕ್ಕೆ ನೀಡಲಾಯಿತು. 1809ರಲ್ಲಿ ಬ್ರಿಟಿಷರು ಬೆಂಗಳೂರು ನಗರದಲ್ಲಿ ಸೇನೆಯ ದಂಡುಪ್ರದೇಶವನ್ನು (ಕಂಟೋನ್ಮೆಂಟ್) ನಿರ್ಮಿಸಿದರು. ಈ ದಂಡು ಪ್ರದೇಶ ವಿಸ್ತಾರವಾದಂತೆ ನಗರದ ಭಾಗವಾಗಿಬಿಟ್ಟಿತು. ಇಲ್ಲೊಂದು ವಿಲಕ್ಷಣ ಸನ್ನಿವೇಶವಿತ್ತು. ಅದೇನೆಂದರೆ, ಮೈಸೂರು ಮಹಾರಾಜರು ನಗರ ಭಾಗದ ಮುಖ್ಯಸ್ಥರಾದರೆ, ದಂಡುಪ್ರದೇಶದ ಯಜಮಾನಿಕೆ ಬ್ರಿಟಿಷರಲ್ಲಿಯೇ ಇತ್ತು. ಸ್ವಾತಂತ್ರ್ಯ ಹೋರಾಟವು ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದ ಸಮಯವದು. ಮಹಾರಾಜರು ದಂಡುಪ್ರದೇಶವೂ ತಮ್ಮ ಅಧಿಪತ್ಯಕ್ಕೇ ಒಳಪಡಬೇಕೆಂದು ಒತ್ತಾಯಿಸತೊಡಗಿದರು. ಭಾರತವು ಸ್ವಾತಂತ್ರ್ಯದ ಹೊಸ್ತಿಲಿನಲ್ಲಿರುವಾಗಲೇ 1947ನೇ ವರ್ಷದಲ್ಲೇ ಜುಲೈ 26ರಂದು ಬ್ರಿಟಿಷರು ದಂಡುಪ್ರದೇಶವನ್ನು ಮಹಾರಾಜರಿಗೆ ನೀಡಿದರು. ಎರಡು ವರ್ಷಗಳ ತರುವಾಯ, 1948ರಲ್ಲಿ ಕಂಟೋನ್ಮೆಂಟ್ ಪ್ರದೇಶವು ಬೆಂಗಳೂರು ನಗರದೊಳಗೇ ಸೇರಲ್ಪಟ್ಟು ಬೆಂಗಳೂರು ಮುನ್ಸಿಪಲ್ ಕಾರ್ಪೋರೇಶನ್ ರಚನೆಯಾಯಿತು.

ಇಲ್ಲಿಗೆ ಗೌರಿ ಲಂಕೇಶ್ ಪುಸ್ತಕದ ಬಗ್ಗೆ ಬರೆಯುವಲ್ಲಿ ಲೇಖನಿಗೆ ವಿರಾಮ ನೀಡುತ್ತಾರೆ.

175 ಪುಟಗಳ ಈ ಪುಸ್ತಕದಲ್ಲಿ ಎಂ ಫಜ್ಲುಲ್ ಹಸನ್ ಹಲವಾರು ಹಳೆಯ ಚಿತ್ರಗಳ ದಾಖಲೆಗಳನ್ನು ನೀಡುತ್ತಾರೆ. ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಂತಹ ಐತಿಹಾಸಿಕ ಮಹತ್ವದ ಅನೇಕ ದೇವಾಲಯಗಳ ಚರಿತ್ರೆಯನ್ನೂ, ಬೆಂಗಳೂರಿನ ಪ್ರಖ್ಯಾತ ಕರಗವು ಮೈದಳೆದಿರುವುದನ್ನೂ ವಿವರಿಸುತ್ತಾರೆ. ಬೆಂಗಳೂರಿನ ಮುಖ್ಯ ಆಯುಕ್ತರ ಕಚೇರಿಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳು ಸ್ಥಾಪಿತವಾಗಿ ಬೆಳೆದುಬಂದ ರೀತಿಯನ್ನು ವಿವರಿಸುತ್ತಾರೆ. ಬೆಂಗಳೂರು ಉದ್ಯಾನ ನಗರವಾಗಿರುವುದರ ಐತಿಹಾಸಿಕ ವಿವರಗಳೊಂದಿಗೆ ಪುಸ್ತಕವನ್ನು ಮುಗಿಸುತ್ತಾರೆ. ಒಟ್ಟಾರೆ ನಾವಿರುವ ನೆಲದ ಕತೆ ಅದೆಷ್ಟು ಥ್ರಿಲ್ ಆಗಿದೆ ಎಂದು ಪುಳಕಗೊಳ್ಳಲು ಪುಸ್ತಕ ಪ್ರೇರೇಪಿಸುತ್ತದೆ. ಜಯನಗರದ ಹಿಸ್ಟಾರಿಕಲ್ ಪಬ್ಲಿಕೇಶನ್ಸ್ 1970ರಲ್ಲಿ ಇದನ್ನು ಪ್ರಕಟಿಸಿದ್ದು ಸದ್ಯಕ್ಕೆ ಪ್ರತಿಗಳು ಸಿಗುವ ಅವಕಾಶದ ಬಗ್ಗೆ ತಿಳಿಯದು. ಆದರೆ Digital Rare Book ನ ರೇರ್ ಬುಕ್ ಸೊಸೈಟಿ ಆಫ್ ಇಂಡಿಯಾದ ಅಂತರ್ಜಾಲದಲ್ಲಿ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಇಡೀ ಪುಸ್ತಕ ಓದಬಹುದು.


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...