Homeಅಂಕಣಗಳುಪುಟಕ್ಕಿಟ್ಟ ಪುಟಗಳುಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ

ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ

ಮೊಟ್ಟ ಮೊದಲು ವ್ಯಕ್ತಿಯು ತನ್ನ ಮಾನಸಿಕ ಸಂಘರ್ಷಗಳಿಂದ ಮುಕ್ತವಾಗಲು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಪ್ರಾರ್ಥನೆ ಮತ್ತು ಶರಣಾಗತಿಗಳೆಂಬ ವಿಧಾನಗಳನ್ನು ಬಳಸಿಕೊಳ್ಳಬೇಕು. ನಂತರ ಸಹನೆ, ವಿನಯಶೀಲತೆ, ಔದಾರ್ಯ ಮತ್ತು ಸರಳತೆಯಂತಹ ಸದ್ಗುಣಗಳನ್ನು ಅಭ್ಯಾಸ ಮಾಡುವುದು.

- Advertisement -
- Advertisement -

ಮಾಡು ಎಲ್ಲವನೂ ಒಲವಿಂದ

ಮಾಡದೇನನೂ ಬಲವಂತದಿಂದ

ಅಂಜು ದೇವರಿಗೆ ಪ್ರೀತಿಯಿಂದ

ಪ್ರೀತಿಸದಿರವನ ಭೀತಿಯಿಂದ

ಇವು ಸಲೇಸಿಯಾದ ಫ್ರಾನ್ಸಿಸ್ ಅವರ ಮಾತುಗಳು. ಫ್ರಾನ್ಸಿನ ಕುಲೀನ ಮನೆತನದಲ್ಲಿ ಹುಟ್ಟಿದ ಫ್ರಾನ್ಸಿಸ್ (೧೫೬೭-೧೬೨೨) ಓರ್ವ ಶ್ರೀಮಂತರ ಹುಡುಗನಿಗೆ ಏನೇನೆಲ್ಲಾ ಸಂಪೂರ್ಣ ಸವಲತ್ತುಗಳು ಲಭ್ಯವಿದ್ದವೋ ಅವೆಲ್ಲವನ್ನೂ ಪಡೆದುಕೊಂಡು ಆಧ್ಯಾತ್ಮದ ಕಡೆಗೆ ಮುಖ ಮಾಡಿದ ಕ್ಯಾಥೋಲಿಕ್ ಸಂತ.

ಪ್ರೀತಿ, ವಿನಯ ಮತ್ತು ಸಹನೆಗಳನ್ನು ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಪ್ರತಿಪಾದಿಸಿಕೊಂಡು ಬಂದ ಫ್ರಾನ್ಸಿಸ್, ಕ್ಯಾಥೋಲಿಕ್ ಧರ್ಮಸಭೆಯು ಮಾಡಿದ ಎಡವಟ್ಟುಗಳನ್ನೂ ಮನಗಂಡಿದ್ದರು. ಅದಕ್ಕೆ ವಿರೋಧವೊಡ್ಡಿದ ಪ್ರೊಟೆಸ್ಟಂಟರ ಅತಿರೇಕಗಳ ಬಗ್ಗೆಯೂ ಎಚ್ಚೆತ್ತಿದ್ದರು. ಹಾಗಾಗಿ ಕ್ರಿಸ್ತನ ಪ್ರೀತಿ, ಮೂಲ ಧರ್ಮಸಭೆಯ ಭಕ್ತಿ ಇವುಗಳ ಬಗ್ಗೆ ಅರಿವು ಮೂಡಿಸಿ, ಧರ್ಮದ ಒಳತಿರುಳಿನ ಮಹತ್ವವನ್ನು ಮನಗಾಣಿಸಲು ಒಂದು ಸಾತ್ವಿಕ ಕ್ರಾಂತಿಯನ್ನೇ ಮಾಡಿ ಕ್ಯಾಥೋಲಿಕ್ ಚಳವಳಿಯ ಬಹುಮುಖ್ಯ ಭಾಗವಾದರು. ಅಪಾಯಗಳನ್ನು ಮತ್ತು ಬೆದರಿಕೆಗಳನ್ನೂ ಪ್ರೀತಿ ಮತ್ತು ಶಾಂತಿಯಿಂದಲೇ ಎದುರಿಸಿದ ಅವರ ಮನಸ್ಥೈರ್ಯ ಮತ್ತು ತಾತ್ವಿಕ ಬದ್ಧತೆ ಯಾರಿಗಾದರೂ, ಯಾವತ್ತಿಗೂ ಮಾದರಿ.

ಬರವಣಿಗೆ ಮತ್ತು ಪತ್ರಿಕಾ ಪ್ರಕಟಣೆಯನ್ನೂ ತಮ್ಮ ಆಧ್ಯಾತ್ಮಿಕ ಚಳವಳಿಯ ಭಾಗವನ್ನಾಗಿಸಿಕೊಂಡ ಅವರನ್ನು ಪತ್ರಕರ್ತರ ಮತ್ತು ಬರಹಗಾರರ ಪೇಟ್ರನ್ ಸೈಂಟ್ ಎಂದೂ ಕರೆಯುತ್ತಾರೆ.

ಒಂದಷ್ಟು ಜನ ಧಾರ್ಮಿಕ ಪಂಡಿತರು ಮತ್ತು ಕ್ಯಾಥೋಲಿಕ್ ಧಾರ್ಮಿಕ ಹುದ್ದೆಗಳಲ್ಲಿರುವ ಅಧಿಕಾರಸ್ಥರು ಒಂದಷ್ಟು ಪವಾಡಗಳನ್ನೂ ಮತ್ತು ಇನ್ನಿತರ ಮಾನದಂಡಗಳನ್ನು ಇರಿಸಿಕೊಂಡು ಸಂತರೆಂದು ಪ್ರಕಟಿಸುವ ಬಗ್ಗೆ ನನಗೆ ಆಶ್ಚರ್ಯವಿದೆ. ಅದೇನೇ ಇರಲಿ, ಜಿನಿವಾದಲ್ಲಿ ಬಿಷಪ್ ಆಗಿದ್ದ ಸಲೇಸಿಯಾದ ಫ್ರಾನ್ಸಿಸ್ ತಮ್ಮ ಕೆಲಸ, ಬರಹ ಮತ್ತು ನೀಡುವ ಒಳನೋಟಗಳ ಕಾರಣದಿಂದ ಬಹುಮುಖ್ಯರೆನಿಸುತ್ತಾರೆ.

ಮನುಷ್ಯ ಸಹಜವಾದ ತನ್ನ ಒಳದೋಟಿಗಳನ್ನು ಗುರುತಿಸಿಕೊಳ್ಳುವುದು, ಅವುಗಳನ್ನು ತಾನೇ ಮನ್ನಿಸುವುದು, ನಂತರ ಅವುಗಳಿಂದ ಬಿಡುಗಡೆಯಾಗಿ ತನ್ನ ಮನಸ್ಸನ್ನು, ಸಂಬಂಧಗಳನ್ನು ಮತ್ತು ಜೀವನವನ್ನು ಮುಕ್ತವಾಗಿಯೂ ಮತ್ತು ಶಾಂತವಾಗಿಯೂ ನಡೆಸಿಕೊಂಡು ಹೋಗಲು ಅವರು ನೀಡುವ ಮಾರ್ಗದರ್ಶನ ಎಲ್ಲಾ ಕಾಲಕ್ಕೂ ಪ್ರಸ್ತುತವೇ ಆಗುತ್ತದೆ.

ಇಂಟ್ರಡಕ್ಷನ್ ಟು ದ ಡಿವೋಟ್ ಲೈಫ್ ಮತ್ತು ಟ್ರೀಟೀಸ್ ಆನ್ ದ ಲವ್ಹ್ ಆಫ್ ಗಾಡ್ ಅವರ ಬಹಳ ಮುಖ್ಯವಾದ ಎರಡು ಕೃತಿಗಳು. ಧಾರ್ಮಿಕವಾಗಿ ಮಾತ್ರವಲ್ಲದೆಯೂ ಎರಡೂ ಕೃತಿಗಳೂ ನಿಜಕ್ಕೂ ಕ್ಲಾಸಿಕ್ ಎನ್ನಬಹುದು.

ಧರ್ಮ ಎಂಬುದನ್ನು ದಾರಿಯನ್ನಾಗಿಸಿಕೊಂಡು, ಶ್ರದ್ಧೆಯನ್ನು ಗಮನವಾಗಿರಿಸಿಕೊಂಡು, ಭಕ್ತಿಯನ್ನು ಪ್ರೀತಿಯಾಗಿಸಿ ವ್ಯಕ್ತಿಯೊಬ್ಬನು ತನ್ನನ್ನು ತಾನು ಅರಿತುಕೊಂಡು, ತನ್ನ ನೆರೆಹೊರೆಯವರನ್ನು ಕ್ಷಮಿಸಿಕೊಂಡು, ಯಾವುದೇ ಮಾನಸಿಕ ತೊಳಲಾಟಗಳಿಂದ ಮುಕ್ತವಾಗಿ ಶಾಂತಿಯನ್ನು ಹೊಂದಲು ಬೇಕಾದ ಸಮಾಲೋಚನೆಯನ್ನು ಮಾಡುವ ಪುಸ್ತಕವೇ ಇಂಟ್ರಡಕ್ಷನ್ ಟು ದ ಡಿವೋಟ್ ಲೈಫ್ ಅಂದರೆ ದಿವ್ಯ ಜೀವನಕೆ ಪ್ರವೇಶಿಕೆ.

ಇಲ್ಲೂ ಫ್ರಾನ್ಸಿಸ್ ಅವರ ವಿನಯವನ್ನು ಗಮನಿಸಬಹುದು. ದಿವ್ಯ ಜೀವನಕ್ಕೆ ಪ್ರವೇಶಿಕೆಯಷ್ಟೇ ಎಂದು ಹೇಳುವ ಅವರು ಧಾರ್ಮಿಕ ಮುಖಂಡರಂತೆ ವಾಗ್ದಾನಗಳನ್ನು ಮಾಡುವುದಿಲ್ಲ. ವ್ಯಕ್ತಿ ತನ್ನೊಳಗಿನ ಹೋರಾಟಗಳಿಂದ ಮುಕ್ತನಾಗದ ಹೊರತು ಸಹನೆ, ಪ್ರೀತಿ ಮತ್ತು ಶಾಂತಿಯನ್ನು ಪಡೆಯಲಾರ ಎಂದು ಧಾರ್ಮಿಕತೆಯ ದಾರಿಯಲ್ಲಿ, ಆಧ್ಯಾತ್ಮದ ಲೇಪದಲ್ಲಿ ಮನಶಾಸ್ತ್ರೀಯವಾದಂತಹ ಸಮಾಲೋಚನೆಯನ್ನು ಮಾಡುತ್ತಾರೆ. ಧಾರ್ಮಿಕತೆ ಎಂದರೆ ಎಷ್ಟೋ ಸಲ ಮೂಗುಮುರಿಯುವ ವೈಚಾರಿಕತೆಯ ಭರದಲ್ಲಿ ಜೀವಪರವಾಗಿರುವ ಮತ್ತು ಸಮಾಜಮುಖಿಯಾಗಿರುವ ಆಧ್ಯಾತ್ಮಿಕ ಸೇವೆಗಳನ್ನು ಮತ್ತು ಪ್ರಯೋಗಗಳನ್ನು ನಿರ್ಲಕ್ಷಿಸಬಾರದು ಎಂಬ ಸಂಗತಿ ಫ್ರಾನ್ಸಿಸ್ ಅವರ ದಿವ್ಯ ಜೀವನಕೆ ಪ್ರವೇಶಿಕೆಯನ್ನು ಓದಿದರೆ ಮನಗಾಣುವಂತಾಗುತ್ತದೆ.

ವಿವಾಹಿತರಾಗಿ, ನಾಗರಿಕ ಸೇವೆಯನ್ನು ಮಾಡುತ್ತಿರುವ, ಲೌಕಿಕ ಬದುಕನ್ನು ನಡೆಸುತ್ತಿರುವ ಧಾರ್ಮಿಕರಲ್ಲದ ವ್ಯಕ್ತಿಗಳಿಗೆ ನಾನು ಈ ಆಧ್ಯಾತ್ಮಿಕ ಒಳನೋಟಗಳನ್ನು ನೀಡಬೇಕಾಗಿರುವುದು ಎಂಬುದನ್ನು ತಮ್ಮ ಮುನ್ನುಡಿಯಲ್ಲಿಯೇ ಸ್ಪಷ್ಟಪಡಿಸುವ ಫ್ರಾನ್ಸಿಸ್, ಸಾಧಾರಣ ಬದುಕನ್ನು ನಡೆಸುವ ಜನರ ಮಾನಸಿಕ ಸಮಸ್ಯೆಗಳೇನು? ಅವರು ಎದುರಿಸುವ ಸಂಘರ್ಷಗಳೇನು? ಮತ್ತು ಅವರಿಗೆ ಯಾವುದು ಭಾರವಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಹಾಗೂ ತನ್ನ ಗಂಡನೊಬ್ಬನ ಸಾವಿಗೆ ಕಾರಣವಾದವನನ್ನು ಕ್ಷಮಿಸಲಾರದ ವಿಧವೆ ಎದುರಿಸುವ ಮಾನಸಿಕ ಕ್ಷೋಭೆಯಂತಹ ಗುರುತರ ವಿಷಯಗಳಿಂದ ಹಿಡಿದು, ಸಾಮಾನ್ಯವಾಗಿ ಮನಸ್ಸಿನಲ್ಲಿ ಉಂಟಾಗುವ ಆಕ್ರೋಶ ಮತ್ತು ಅಸಹನೆಗಳಿಗೂ ಕಾರಣ, ಪರಿಣಾಮ ಮತ್ತು ಪರಿಹಾರಗಳನ್ನು ನೀಡುತ್ತಾ ಹೋಗುವುದು ಇವರು ಮಾಡುವ ಲೋಕೋಪಕಾರ. ಇವರ ಸಮಾಲೋಚನೆಗಳು ನಿರ್ಧಿಷ್ಟವೂ ಹೌದು, ಸಾಮಾನ್ಯವೂ ಹೌದು.

ಈ ಪುಸ್ತಕವು ವೈಯಕ್ತಿಕ ಮಾರ್ಗದರ್ಶನಗಳನ್ನು ನೀಡಿರುವ ಸಂಕಲನವೇ ಆಗಿರುವುದರಿಂದ ಓದುವಾಗ ವ್ಯಕ್ತಿಗತವಾಗಿ ಓದುಗನಿಗೆ ಆಪ್ತವಾಗಿ ಮತ್ತು ಆತ್ಮೀಯವಾಗಿ ಹೇಳುವಂತೆ ತೋರುತ್ತದೆ. ಪರಿಸರ ವಿಜ್ಞಾನ, ಭೂಗೋಳದ ವಿದ್ಯಮಾನಗಳೆಲ್ಲಾ ಉದಾಹರಣೆ ಅಥವಾ ಉಪಮೆಗಳಾಗಿ ಬರುವುದರಿಂದ ಗಾಢ ಧಾರ್ಮಿಕತೆಯ ಅಥವಾ ಬರಿಯ ಆಧ್ಯಾತ್ಮದ ಛಾಯೆಯನ್ನು ಇದು ಹೊಂದಿರುವುದಿಲ್ಲ.

ಓದುಗನನ್ನು ಪ್ರೀತಿಯಿಂದ ಫಿಲೋಥೆಯಾ ಎಂದು ಕರೆಯುತ್ತಾರೆ. ದೇವರ ಪ್ರೀತಿಪಾತ್ರನೇ ಎಂದು ಕರೆಯುವ ಮೂಲಕ ವ್ಯಕ್ತಿಯ ಬಿಂದುತನವನ್ನು ಅಗಾಧವಾದ ಸಿಂಧುತನಕ್ಕೆ ಒಯ್ಯುತ್ತಾರೆ. ನಿನಗೆ ಎಂದು ಬರೆಯುತ್ತಿರುವ ಇದು ಮುಂದೆ ಎಷ್ಟೋಜನರಿಗೆ ಬೆಳಕು ನೀಡಲಿ ಎಂಬುವ ಅವರ ಮಾತಿನಲ್ಲಿ ನನಗೊಬ್ಬನಿಗೇ ಈ ಸಮಸ್ಯೆ ಎಂದು ಕೊರಗದಿರುವಂತೆಯೂ ಸಾಂತ್ವಾನ ನೀಡುತ್ತಾರೆ. ಮೆಕಾನಿಕ್ ಶಾಪಿನಲ್ಲಿ ಕೆಲಸ ಮಾಡುವವರಿಂದ ಹಿಡಿದು ಸರಕಾರಗಳಲ್ಲಿ ಕೆಲಸ ಮಾಡುವವರವರೆಗೂ ತಮ್ಮ ತಮ್ಮ ಬದುಕನ್ನು ದಿವ್ಯ ಜೀವನವನ್ನಾಗಿಸಿಕೊಳ್ಳಲು ಸಾಧ್ಯವಿದೆ ಎಂಬುದು ಅವರ ಮುಖ್ಯ ದೃಷ್ಟಿ.

ಮೊಟ್ಟ ಮೊದಲು ವ್ಯಕ್ತಿಯು ತನ್ನ ಮಾನಸಿಕ ಸಂಘರ್ಷಗಳಿಂದ ಮುಕ್ತವಾಗಲು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಪ್ರಾರ್ಥನೆ ಮತ್ತು ಶರಣಾಗತಿಗಳೆಂಬ ವಿಧಾನಗಳನ್ನು ಬಳಸಿಕೊಳ್ಳಬೇಕು. ನಂತರ ಸಹನೆ, ವಿನಯಶೀಲತೆ, ಔದಾರ್ಯ ಮತ್ತು ಸರಳತೆಯಂತಹ ಸದ್ಗುಣಗಳನ್ನು ಅಭ್ಯಾಸ ಮಾಡುವುದು. ನಂತರ ಸಾಮಾನ್ಯವಾಗಿ ನುಸುಳುವ ಪ್ರಲೋಭನೆಯೇ ಮೊದಲಾದ ಮಾನಸಿಕ ಒತ್ತಡಗಳನ್ನು ಉಂಟುಮಾಡುವ ನಕಾರಾತ್ಮಕ ಗುಣಗಳನ್ನು ಗುರುತಿಸಿ ಅವುಗಳಿಂದ ಹೊರಗೆ ಬರುವುದು ಹೇಗೆ ಎಂಬುದನ್ನು ತಿಳಿಸುವುದು ಇಡೀ ಕೃತಿಯ ಮುಖ್ಯ ಉದ್ದೇಶ. ಅದಕ್ಕೆ ಅವರ ನಿರೂಪಣೆ ಓರ್ವ ಆತ್ಮೀಯ ಹಿರಿಯ ಅಥವಾ ಆಪ್ತ ಗೆಳೆಯನೊಬ್ಬ ಸಾಮಿಪ್ಯದಲ್ಲಿ ಕುಳಿತು ತನ್ನ ಸ್ಪರ್ಷದಿಂದ ಸಾಂತ್ವನ ಮತ್ತು ಸ್ಥೈರ್ಯ ನೀಡುವಂತೆ ಇದೆ.

ಕ್ರಿಸ್ತನ ಆಶಯ ಮತ್ತು ಮೌಲ್ಯಗಳನ್ನು ತಮ್ಮ ಸಮಕಾಲೀನಕ್ಕೆ ತಮ್ಮ ಮಾತುಗಳಲ್ಲಿ ವಿಸ್ತರಿಸುವ ಧೋರಣೆಯೇ ಇದಾಗಿದ್ದರೂ ಅವರ ಒಲವು ಮತ್ತು ನಿಲುವು ಅತ್ಯಂತ ಮಾನುಷ. ವ್ಯಕ್ತಿಯ ಲೋಪದೋಷಗಳನ್ನು ಖಂಡಿಸುವ ಭರದಲ್ಲಿ ಅವನನ್ನೇ ತಳ್ಳಿಬಿಡಬೇಡ ಎನ್ನುವ ಅವರ ಅಂತಃಕರಣ ಮತ್ತೂ ಹೇಳುತ್ತದೆ, ಎಲ್ಲರೊಡನೆ ಮತ್ತು ಎಲ್ಲದರೊಂದಿಗೆ ತಾಳ್ಮೆಯಿಂದಿರು, ಮೊದಲು ನಿನ್ನ ಬಗ್ಗೆ ನಿನಗೆ ಸಹನೆ ಇರಲಿ ಎಂದು.

ಒಟ್ಟಾರೆ ಫ್ರಾನ್ಸಿಸ್ ಅವರ ಇಂಟ್ರಡಕ್ಷನ್ ಟು ದ ಡಿವೋಟ್ ಲೈಫ್ ಆಪ್ತ ಸಮಾಲೋಚನೆ ನೀಡುತ್ತಾ ನನಗೆ ಹೇಳಿದ ಗುಟ್ಟೇನೆಂದರೆ, ಧಾರ್ಮಿಕತೆಯ ನೆಪದಲ್ಲಿ, ಆಧ್ಯಾತ್ಮಿಕತೆಯ ಪ್ರಭಾವದಲ್ಲಿ ವ್ಯಕ್ತಿಗಳ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಜೀವಿಗಳನ್ನು ಪ್ರೀತಿಸು. ಯಾವ ಆತ್ಮವನ್ನೂ ನಿರಾಕರಿಸಬೇಡ. ಅವರಿಗೆ ನಿನ್ನಿಂದ ಏನು ಒಳಿತಾಗುವುದೋ, ಎಷ್ಟು ಶಾಂತಿ ಸಿಗುವುದೋ ಯಾರು ಬಲ್ಲರು? ಎಂಬ ಜೀವನಪ್ರೀತಿಯನ್ನು ಕಲಿಸುವ ಸರಳ ತಾತ್ವಿಕ ಮಾತುಗಳು.

  • ಯೋಗೇಶ್ ಮಾಸ್ಟರ್

ಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...