Homeಅಂತರಾಷ್ಟ್ರೀಯಭಾರತದೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಶಿಕ್ಷೆ: ಭೂತಾನ್

ಭಾರತದೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಶಿಕ್ಷೆ: ಭೂತಾನ್

ಕಳೆದ ವಾರ, ಚೀನಾ ಸರ್ಕಾರವು ಭೂತಾನ್‌ನ “ಪೂರ್ವ ವಲಯ” ಗಳನ್ನು ಉಭಯ ದೇಶಗಳ ನಡುವಿನ ವಿವಾದಿತ ಪ್ರದೇಶಗಳ ಭಾಗವಾಗಿ ಸೇರಿಸಿಕೊಂಡಿತು.

- Advertisement -
- Advertisement -

ಭಾರತ – ಚೀನಾ ನಡುವೆ ನಡೆದ ಭೀಕರ ಗಡಿ ಚಕಮಕಿಯ ನಂತರ ಭಾರತೀಯ ಮತ್ತು ಚೀನಾದ ಸೈನಿಕರು ಲಡಾಖ್‌ನಿಂದ ಹಿಂತಿರುಗುತ್ತಿದ್ದಂತೆ ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ನಡುವೆ ಸಿಕ್ಕಿಕೊಂಡಂತೆ ಭಾಸವಾಗುತ್ತಿದೆ ಎಂದು ಭೂತಾನ್ ಹೇಳಿದೆ.

ಕಳೆದ ವಾರ, ಚೀನಾ ಸರ್ಕಾರವು ಭೂತಾನ್‌ನ “ಪೂರ್ವ ವಲಯ” ಗಳನ್ನು ಉಭಯ ದೇಶಗಳ ನಡುವಿನ ವಿವಾದಿತ ಪ್ರದೇಶಗಳ ಭಾಗವಾಗಿ ಸೇರಿಸಿಕೊಂಡಿತು. “ಪೂರ್ವ, ಮಧ್ಯ ಮತ್ತು ಪಶ್ಚಿಮ ಕ್ಷೇತ್ರಗಳಲ್ಲಿ ದೀರ್ಘಕಾಲದ ವಿವಾದಗಳಿವೆ” ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೊಗ್ರಾಂನ ಜಾಗತಿಕ ಪರಿಸರ ಸೌಲಭ್ಯದಿಂದ ದೂರದ ಪೂರ್ವ ಭೂತಾನ್ ನಲ್ಲಿರುವ ಸಕ್ಟೆಂಗ್ ವನ್ಯಜೀವಿ ಅಭಯಾರಣ್ಯಕ್ಕೆ ಧನಸಹಾಯವನ್ನು ನಿಲ್ಲಿಸುವ ಪ್ರಯತ್ನವನ್ನು ಚೀನಾ ಅನುಸರಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮೂಲದ ಜಾಗತಿಕ ಸಂಸ್ಥೆಯು ಪರಿಸರ ಯೋಜನೆಗಳಿಗೆ ಹಣವನ್ನು ನೀಡುತ್ತದೆ. ಈಗ ಅಭಯಾರಣ್ಯವು “ವಿವಾದಿತ ಪ್ರದೇಶ” ದಲ್ಲಿದೆ ಎಂದು ಚೀನಾ ಹೇಳಿಕೊಂಡಿದೆ.

ಭೂತಾನ್‌ನ ಸುದ್ದಿ ವರದಿಗಳು ಹೇಳುವಂತೆ, ಚೀನಾ ಸರ್ಕಾರವು ಉಭಯ ದೇಶಗಳ ರಾಜತಾಂತ್ರಿಕ ವಿಷಯಗಳನ್ನು ಹಂಚಿಕೊಳ್ಳಲಾಗುವುದಿಲ್ಲ ಎಂಬ ಪ್ರತಿಭಟನಾತ್ಮಕ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಚೀನಾ ಸರ್ಕಾರ ಇದನ್ನು ನಿರಾಕರಿಸಿದೆ.

ಚೀನಾದ ಈ ಕ್ರಮವು ಭಾರತದೊಂದಿಗಿನ ದ್ವೇಷದೊಂದಿಗೆ ಸಂಬಂಧ ಹೊಂದಿರಬಹುದು ಎಂದು ಹಲವರು ಹೇಳುತ್ತಾರೆ.

“ಸಿನೊ-ಭೂತಾನ್ ಗಡಿ ವಿವಾದವು ಅಷ್ಟೇನೂ ತೀವ್ರವಾಗಿಲ್ಲ. ಭೂತಾನ್ ಭಾರತದೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಚೀನಾ ಬಯಸುತ್ತಿದೆ” ಎಂದು ಭೂತಾನ್‌ನ ಒಟ್ಟು ರಾಷ್ಟ್ರೀಯ ಸಂತೋಷ ಅಧ್ಯಯನ ಕೇಂದ್ರದ ಮುಖ್ಯಸ್ಥ ಡೋರ್ಜಿ ಪೆಂಜೋರ್ “Security of Bhutan: Walking Between the Giants” ಎಂಬ ಶೀರ್ಷಿಕೆಯ ಲೇಖನದಲ್ಲಿ ಬರೆದಿದ್ದಾರೆ.

ನಮಗೆ ಚೀನಾದೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೂ ನಾವು ಚೀನಾದೊಂದಿಗೆ ವಿವಾದಕ್ಕೆ ಸಿಲುಕುತ್ತಿದ್ದೇವೆ. ಏಕೆಂದರೆ ಭಾರತವು ಚೀನಾದೊಂದಿಗೆ ವಿವಾದಗಳನ್ನು ಎದುರಿಸುತ್ತಿದೆ. ಚೀನಾ ಮತ್ತು ಭಾರತದ ನಡುವಿನ ಸಂಬಂಧ ಸುಧಾರಿಸಿದರೆ ನಮಗೆ ತೊಂದರೆಯಿಲ್ಲ ಎಂದು ಅವರು ಹೇಳಿದರು.

ಸಾರ್ವಜನಿಕ ವಲಯದಲ್ಲಿ ವಿಶ್ವಾಸಾರ್ಹ ಮಾಹಿತಿಯ ಕೊರತೆಯಿದೆ. ಸ್ಥಳೀಯ ಮಾಧ್ಯಮಗಳು ಇಲ್ಲಿಯವರೆಗಿನ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಭೂತಾನಿಯರಲ್ಲಿ ಭಾರತೀಯ ಮಾಧ್ಯಮಗಳ ಮೇಲೆ ನಂಬಿಕೆ ಬಹಳ ಕಡಿಮೆ ಎಂದು ಪತ್ರಕರ್ತರು ಹೇಳಿದ್ದಾರೆ.

ಐತಿಹಾಸಿಕವಾಗಿ ನಡೆದಂತೆ, ಭೂತಾನ್ ಸಹಾನುಭೂತಿ ಭಾರತದೊಂದಿಗೆ ಮುಂದುವರೆದಿದೆ ಎಂದು ಡಕಾಲ್ ಹೇಳಿದರು. “ಒಂದೇ ಸಮಸ್ಯೆ ಎಂದರೆ ನೇಪಾಳದಂತೆಯೇ, ಭಾರತೀಯ ಮಾಧ್ಯಮಗಳು ಭೂತಾನ್ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತವೆ. ಇದು ಇಲ್ಲಿಯ ಬಹಳಷ್ಟು ಜನರನ್ನು ಆತಂಕಕ್ಕೆ ತಳ್ಳಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಭಾರತ-ಚೀನಾ ಗಡಿ ಬಿಕ್ಕಟ್ಟಿಗೆ ಕಾರಣಗಳೇನು? ಈಗಲಾದರೂ ಮೌನ ಮುರಿಯುವರೆ ಮೋದಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...