Homeಅಂಕಣಗಳುಪುಟಕ್ಕಿಟ್ಟ ಪುಟಗಳುಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

- Advertisement -
- Advertisement -

ಲಿಯೋ ಟಾಲ್ಸ್‌ಟಾಯ್ ಅವರ ಕಾದಂಬರಿ ‘ವಾರ್ ಅಂಡ್ ಪೀಸ್’ ನಾನಾ ಕಾರಣಗಳಿಂದ ಬಹು ಪ್ರಖ್ಯಾತವಾದದ್ದು. ಆದರೆ ಟಾಲ್ಸ್‌ಟಾಯ್ ಅದನ್ನು ಕಾದಂಬರಿ ಎನ್ನದೇ ‘ಹೇಳಬೇಕೆಂದರೆ ಅದೊಂದು ಕಾವ್ಯ, ಇನ್ನೂ ಹೇಳಬೇಕೆಂದರೆ ಅದು ಚರಿತ್ರೆಯ ಕಾಲಾನುಕ್ರಮಣಿಕೆ’ ಎನ್ನುತ್ತಾರೆ. ಕಾದಂಬರಿಯಲ್ಲಿ ಬಹುಪಾಲು ತಾತ್ವಿಕ ಚರ್ಚೆಗಳು ಮತ್ತು ಸಂವಾದಗಳಿದ್ದು ಕಾದಂಬರಿಯ ವ್ಯಾಪ್ತಿಗೆ ಸೇರುವಂತಹ ವಿವರ ಪ್ರವರಗಳಿಂದ ಹೊರತಾಗಿದೆ.

ಸ್ಥೂಲವಾಗಿ ‘ಯುದ್ಧ ಮತ್ತು ಶಾಂತಿ’ಯ ಭೂಮಿಕೆಯನ್ನು ಗುರುತಿಸುವುದಾದರೆ ನೆಪೋಲಿಯನ್ ರಶಿಯಾದ ಮೇಲೆ 1812ರಲ್ಲಿ ಮಾಡಿದ ದಾಳಿಯ ಕಥನವದು. ಆದರೆ ಆ ಸನ್ನಿವೇಶದಲ್ಲಿ ಜಮೀನುದಾರನೊಬ್ಬನ ಅಕ್ರಮ ಸಂತಾನದ ಫಲವಾದ ಪಿಯರೆ ಬೆಜುಕೋವ್ ತನ್ನ ಸ್ವಾಮಿತ್ವಕ್ಕಾಗಿ ಹೋರಾಡುತ್ತಾ ತನ್ನ ತಾತ್ವಿಕ ಸಾರ್ಥಕತೆಗಾಗಿ ಹೆಣಗಾಡುವ ಕಥೆ ಇದಾಗಿದೆ. ಹಾಗಂತ ಒಂದು ವ್ಯಕ್ತಿಯ ಸುತ್ತಲಿನ ಕತೆಯಲ್ಲವಿದು. ನೂರಾರು ಪಾತ್ರಗಳನ್ನು ಹೊಂದಿರುವ ಈ ಕಥನದಲ್ಲಿ ಯುದ್ಧ, ಶಾಂತಿ, ಮುದಿತನ, ಯೌವನ, ಸಾವು, ಮದುವೆ, ಭಿನ್ನಸ್ತರಗಳ ಬದುಕುಗಳನ್ನೆಲ್ಲಾ ಚರ್ಚಿಸುತ್ತಾ ಹೋಗುವುದರಿಂದ, ರಶಿಯಾದ ಸಾಮಾಜಿಕ ಪ್ರಭಾವಗಳು ವಿವಿಧ ವರ್ಗ ಮತ್ತು ಕ್ಷೇತ್ರಗಳ ವ್ಯಕ್ತಿಗಳ ಮೇಲೆ ಎಂತೆಂತಹ ಪ್ರಭಾವಗಳನ್ನು ಬೀರಿದ್ದವು ಎಂಬುದರ ಅನಾವರಣವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿಷಯಗಳನ್ನು ನಿಷ್ಟುರವಾಗಿ, ಪ್ರಾಮಾಣಿಕವಾಗಿ ಮತ್ತು ಪಕ್ಷಪಾತರಹಿತವಾಗಿ ನೋಡುವುದು.

ಈ ಕಾದಂಬರಿಯ ಸೌಂದರ್ಯವೇ ಅದು. ವಸ್ತುವಿಷಯಗಳನ್ನು ಯಥಾಸ್ಥಿತಿಯಲ್ಲಿ ಸಾಕ್ಷೀಕರಿಸುವುದು. ಆದರೆ ಯಥಾಸ್ಥಿತಿವಾದವನ್ನು ಖಂಡಿಸುವುದು. ಅಥವಾ ಪುರೋಗಾಮಿತನವನ್ನು ಬಯಸುವುದು. ರಾಜಕುಮಾರ ಆಂಡ್ರೀ ಬೊಲ್ಕೊನ್ಸ್ಕಿ ತನ್ನ ಕುಟುಂಬವನ್ನು ಬಿಟ್ಟು ನೆಪೋಲಿಯನ್ ವಿರುದ್ಧವಾಗಿ ಯುದ್ಧಕ್ಕಾಗಿ ತೆರಳುವನು. ಅವನ ಮತ್ತು ನಟಾಶ ರೊಸ್ತೋವ್, ಕುಲೀನ ಮನೆತನದ ಸುಂದರವಾದ ಹುಡುಗಿಯ ನಡುವಿನ ಪ್ರಸಂಗಗಳು, ವ್ಯಕ್ತಿಗತವಾದ ಸೆಳೆತಗಳು, ಕುಟುಂಬದ ಘನತೆ ಮತ್ತು ಸಾಂದರ್ಭಿಕ ಅನಿವಾರ್ಯತೆಗಳ ತಾಕಲಾಟಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವಳಿಗೆ ಪ್ರೇಮ, ಕಾಮ, ವ್ಯಾಮೋಹ ಎಲ್ಲವೂ ಒಂದೇ ಆಗಿದ್ದು ಎಲ್ಲದರಿಂದ ಹೊರತಾಗುವಂತಹ ಸ್ಥಿತಿಯೂ ಕೂಡಾ ಒಂದು ಪ್ರತಿಮಾ ಸಂದೇಶವೇ ಆಗಿದೆ.

ರಾಜಕೀಯ ಸಂಘರ್ಷದ ಕಾರಣಕ್ಕೆ ಯುದ್ಧವೆಂಬುದು ನಡೆದರೂ ಅದು ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ರೈತರು, ಕುಲೀನರು, ನಾಗರಿಕರು, ಸೈನಿಕರು ಎಲ್ಲರೂ ಸಮಸ್ಯೆಗಳನ್ನು ಅನುಭವಿಸುವತ್ತಾರೆ. ಅವರ ಕಾಲಘಟ್ಟದಲ್ಲಿ ಮತ್ತು ಗತಿಸಿದ ಚರಿತ್ರೆಯಲ್ಲಿಯೇ ಎದುರಿಸದಂತಹ ಸಂಕಟಗಳಿಂದ ಬಳಲಬೇಕು. ಅದೇ ಯುದ್ಧ ಮತ್ತು ಶಾಂತಿಯಲ್ಲಿಯೂ ಆಗುವುದು. ಟಾಲ್ಸ್ಟಾಯ್ ಈ ಹಿನ್ನೆಲೆಗಳ ಎಲ್ಲಾ ಪ್ರತಿನಿಧಿಗಳನ್ನು ಪಾತ್ರಗಳನ್ನಾಗಿಸಿ ಮಾನುಷವಾಗಿ ಚಿತ್ರಿಸುತ್ತಾಹೋಗುತ್ತಾರೆ. ಮನುಷ್ಯ ಹೃದಯದ ಸಂವೇದನೆಯುಳ್ಳವರಿಗೆಲ್ಲಾ ಸ್ಪಂದಿಸುವ ದುಃಖ ದುಮ್ಮಾನಗಳು – ಭಾವುಕತೆಗೂ ಮತ್ತು ತಾತ್ವಿಕತೆಗೂ ಭಿನ್ನಬೇಧಗಳನ್ನು ಕಾಣಲಾಗದು.

ಟಾಲ್ಸ್‌ಟಾಯ್ ಅವರ ಕಾಲಘಟ್ಟಕ್ಕೆ 60 ವರ್ಷಗಳ ಮುನ್ನದ ಕತೆಯ ಭೂಮಿಕೆಯಾದರೂ ಅವರಲ್ಲಿ ಫ್ರಾನ್ಸ್ ಮಾಡಿದ ಯುದ್ಧದ ಛಾಯೆ ಪೂರ್ತಿ ಕರಗಿಹೋಗಿರಲಿಲ್ಲ. ಯುದ್ಧವೇ ಹಾಗೆ. ಯಾವುದೇ ಕಾರಣದಿಂದ ಅದು ನಡೆದರೂ ಸಾಮಾಜಿಕ ಮತ್ತು ರಾಜತಾಂತ್ರಿಕ ವ್ಯವಸ್ಥೆ ಹದಗೆಡುತ್ತದೆ. ಜನತೆಗಾಗಿಯೇ ಆ ವ್ಯವಸ್ಥೆ ಇರುವುದಾದರೂ, ಅದಕ್ಕೆ ಬೀಳುವ ಏಟಿನಿಂದ ಉಂಟಾಗುವ ಅವ್ಯವಸ್ಥೆಯಿಂದ ಯಾವುದೇ ತಪ್ಪನ್ನು ಮಾಡಿರದ ಜನರು ಶಿಕ್ಷೆ ಅನುಭವಿಸುತ್ತಾರೆ. ತಮ್ಮ ಹಿತರಕ್ಷಣೆಗಾಗಿ ವ್ಯವಸ್ಥೆ ಎಂದು ನಂಬಿರುವ ಜನರು ಎದುರುನೋಡದ ತೊಂದರೆಗಳಿಗೆ ಎದೆಯೊಡ್ಡಬೇಕಾಗುತ್ತದೆ. ಶಿಕ್ಷಣದ ಸಮಸ್ಯೆ, ಉದ್ಯೋಗದಿಂದಲೇ ಅನ್ನವನ್ನು ಗಳಿಸಿಕೊಳ್ಳುವರ ಸಮಸ್ಯೆ, ವೈದ್ಯಕೀಯ ಸೌಲಭ್ಯಗಳಲ್ಲಿ ವ್ಯತ್ಯಯವುಂಟಾಗುವ ಸಮಸ್ಯೆ, ಗಮನವು ಯುದ್ಧದ ಕಡೆ ಹರಿಯುವುದರಿಂದ ಆಂತರಿಕವಾಗಿ ಸಡಿಲವಾಗುವ ಭದ್ರತಾ ವ್ಯವಸ್ಥೆ; ಹೀಗೆ ಅನೇಕಾನೇಕ ಸಮಸ್ಯೆಗಳು ಯುದ್ಧದ ಕಾರಣಗಳಿಂದಾಗುತ್ತವೆ.

ಯುದ್ಧವೆಂಬುದು ರೋಮಾಂಚನ. ಅದೊಂದು ಉನ್ಮತ್ತವಾದ ಭ್ರಾಮಕವಾದ ಆನಂದ. ಅದು ಕುಲೀನರ, ರಾಜಕಾರಣದ ಮತ್ತು ಆರ್ಥಿಕತೆಯ ಉತ್ತುಂಗದಲ್ಲಿರುವವರು ಬಲಿಪಶುಗಳನ್ನಾಗಿಸುವವರಿಗೆ ಮಾತ್ರವೇ ಬೇಕು. ದುಡಿಯುವವರಿಗಲ್ಲ, ಶ್ರಮಿಕರಿಗಲ್ಲ, ಮನೆಯಲ್ಲಿ ಮಕ್ಕಳನ್ನು ಸಲಹುವ ಮತ್ತು ಕುಟುಂಬವನ್ನು ನಿರ್ವಹಣೆ ಮಾಡುವ ಮಹಿಳೆಯರಿಗಲ್ಲ. ಆದರೆ ಇವರೆಲ್ಲರ ಸಮೂಹದ ಪ್ರತಿನಿಧಿಯಂತಿರುವ ರಾಜಕಾರಣ ವ್ಯವಸ್ಥೆಯನ್ನು ಯುದ್ಧಕ್ಕೆಳೆಯುವುದು ಮತ್ತು ಯುದ್ಧವನ್ನು ಎದುರಿಸುವಂತೆ ಮಾಡುವುದು, ಏನೇ ಆದರೂ ಯುದ್ಧದ ರೋಮಾಂಚನ ಒಲ್ಲದ, ಬದುಕಿನ ಉಸುರಿಗೆ ಹಾತೊರೆಯುವವರ ನರಳಾಟಕ್ಕೆ ಕಾರಣವಾಗುತ್ತದೆ.

‘ಯುದ್ಧ ಮತ್ತು ಶಾಂತಿಯ’ಲ್ಲಿ ಅನೇಕ ಕತೆಗಳಿವೆ, ಅನೇಕ ಬದುಕುಗಳಿವೆ. ನಾಯಕ ಎಂದೋ, ನಾಯಕಿ ಎಂದೋ ಯಾರೂ ಇಲ್ಲ. ಸಿದ್ಧಸೂತ್ರದ ನಾಯಕ ಮತ್ತು ನಾಯಕಿಯ ಪಾತ್ರವನ್ನು ನಿರೀಕ್ಷಿಸುವವರಿಗೆ ಯಾರೂ ಸಿಗುವುದಿಲ್ಲ. ಹಾಗೆಂದು ಇದು ಐತಿಹಾಸಿಕ ಕಾದಂಬರಿಯೂ ಅಲ್ಲ. ಕಲಾವಿದನಾಗಿ ಟಾಲ್ಸ್‌ಟಾಯ್ ಒಮ್ಮೆ ಕಂಡರೆ, ಮತ್ತೊಮ್ಮೆ ಬೋಧನೆಗಳನ್ನು ಮಾಡುವ ಋಷಿಯಾಗಿ ಬದಲಾಗುತ್ತಾರೆ. ಮತ್ತೊಮ್ಮೆ ಕ್ರಾಂತಿಕಾರಿಯಾಗಿ ವ್ಯವಸ್ಥೆಯೊಳಗಿನ ತಿದಿಗಳಿಗೆ ಕೆರಳುತ್ತಾರೆ.

ಮನುಷ್ಯನ ತಿಕ್ಕಲುತನದ ಉನ್ಮತ್ತತೆಗೆ ಶಾಂತಿಯ ಅವಧಿಯೂ ಕೂಡಾ ಯುದ್ಧದ ಸಿದ್ಧತೆಯೇ ಆಗಿರುತ್ತದೆ. ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

ಸುಮಾರು 1225 ಪುಟಗಳನ್ನು ಹೊಂದಿರುವ ‘ಯುದ್ಧ ಮತ್ತು ಶಾಂತಿ’ಯ ಕಾದಂಬರಿಯನ್ನು ಪರಿಚಯಿಸಲು ಸಾಧ್ಯವಾಗದ ಈ ಲೇಖನ ಅದು ಯುದ್ಧದ ಬಗ್ಗೆ ಹೊಂದಿರುವ ಧೋರಣೆಯ ಒಂದು ಮುಖವನ್ನು ಮಾತ್ರ ಧ್ವನಿಸುತ್ತದೆ. ಆದರೆ ಅದನ್ನು ಓದುವಾಗ ಯುದ್ಧದ ನೆರಳಿನಲ್ಲಿರುವ ಎಲ್ಲಾ ದೇಶಗಳೂ ನಮ್ಮ ಕಣ್ಪಟಲದ ಮುಂದೆ ಹಾದುಹೋಗುವಂತೆ ಮಾಡುವುದು ಈ ಕಾದಂಬರಿಯ ಶಕ್ತಿ.


ಇದನ್ನು ಓದಿ: ವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...