Homeಅಂಕಣಗಳುಪುಟಕ್ಕಿಟ್ಟ ಪುಟಗಳುಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

- Advertisement -
- Advertisement -

ಲಿಯೋ ಟಾಲ್ಸ್‌ಟಾಯ್ ಅವರ ಕಾದಂಬರಿ ‘ವಾರ್ ಅಂಡ್ ಪೀಸ್’ ನಾನಾ ಕಾರಣಗಳಿಂದ ಬಹು ಪ್ರಖ್ಯಾತವಾದದ್ದು. ಆದರೆ ಟಾಲ್ಸ್‌ಟಾಯ್ ಅದನ್ನು ಕಾದಂಬರಿ ಎನ್ನದೇ ‘ಹೇಳಬೇಕೆಂದರೆ ಅದೊಂದು ಕಾವ್ಯ, ಇನ್ನೂ ಹೇಳಬೇಕೆಂದರೆ ಅದು ಚರಿತ್ರೆಯ ಕಾಲಾನುಕ್ರಮಣಿಕೆ’ ಎನ್ನುತ್ತಾರೆ. ಕಾದಂಬರಿಯಲ್ಲಿ ಬಹುಪಾಲು ತಾತ್ವಿಕ ಚರ್ಚೆಗಳು ಮತ್ತು ಸಂವಾದಗಳಿದ್ದು ಕಾದಂಬರಿಯ ವ್ಯಾಪ್ತಿಗೆ ಸೇರುವಂತಹ ವಿವರ ಪ್ರವರಗಳಿಂದ ಹೊರತಾಗಿದೆ.

ಸ್ಥೂಲವಾಗಿ ‘ಯುದ್ಧ ಮತ್ತು ಶಾಂತಿ’ಯ ಭೂಮಿಕೆಯನ್ನು ಗುರುತಿಸುವುದಾದರೆ ನೆಪೋಲಿಯನ್ ರಶಿಯಾದ ಮೇಲೆ 1812ರಲ್ಲಿ ಮಾಡಿದ ದಾಳಿಯ ಕಥನವದು. ಆದರೆ ಆ ಸನ್ನಿವೇಶದಲ್ಲಿ ಜಮೀನುದಾರನೊಬ್ಬನ ಅಕ್ರಮ ಸಂತಾನದ ಫಲವಾದ ಪಿಯರೆ ಬೆಜುಕೋವ್ ತನ್ನ ಸ್ವಾಮಿತ್ವಕ್ಕಾಗಿ ಹೋರಾಡುತ್ತಾ ತನ್ನ ತಾತ್ವಿಕ ಸಾರ್ಥಕತೆಗಾಗಿ ಹೆಣಗಾಡುವ ಕಥೆ ಇದಾಗಿದೆ. ಹಾಗಂತ ಒಂದು ವ್ಯಕ್ತಿಯ ಸುತ್ತಲಿನ ಕತೆಯಲ್ಲವಿದು. ನೂರಾರು ಪಾತ್ರಗಳನ್ನು ಹೊಂದಿರುವ ಈ ಕಥನದಲ್ಲಿ ಯುದ್ಧ, ಶಾಂತಿ, ಮುದಿತನ, ಯೌವನ, ಸಾವು, ಮದುವೆ, ಭಿನ್ನಸ್ತರಗಳ ಬದುಕುಗಳನ್ನೆಲ್ಲಾ ಚರ್ಚಿಸುತ್ತಾ ಹೋಗುವುದರಿಂದ, ರಶಿಯಾದ ಸಾಮಾಜಿಕ ಪ್ರಭಾವಗಳು ವಿವಿಧ ವರ್ಗ ಮತ್ತು ಕ್ಷೇತ್ರಗಳ ವ್ಯಕ್ತಿಗಳ ಮೇಲೆ ಎಂತೆಂತಹ ಪ್ರಭಾವಗಳನ್ನು ಬೀರಿದ್ದವು ಎಂಬುದರ ಅನಾವರಣವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿಷಯಗಳನ್ನು ನಿಷ್ಟುರವಾಗಿ, ಪ್ರಾಮಾಣಿಕವಾಗಿ ಮತ್ತು ಪಕ್ಷಪಾತರಹಿತವಾಗಿ ನೋಡುವುದು.

ಈ ಕಾದಂಬರಿಯ ಸೌಂದರ್ಯವೇ ಅದು. ವಸ್ತುವಿಷಯಗಳನ್ನು ಯಥಾಸ್ಥಿತಿಯಲ್ಲಿ ಸಾಕ್ಷೀಕರಿಸುವುದು. ಆದರೆ ಯಥಾಸ್ಥಿತಿವಾದವನ್ನು ಖಂಡಿಸುವುದು. ಅಥವಾ ಪುರೋಗಾಮಿತನವನ್ನು ಬಯಸುವುದು. ರಾಜಕುಮಾರ ಆಂಡ್ರೀ ಬೊಲ್ಕೊನ್ಸ್ಕಿ ತನ್ನ ಕುಟುಂಬವನ್ನು ಬಿಟ್ಟು ನೆಪೋಲಿಯನ್ ವಿರುದ್ಧವಾಗಿ ಯುದ್ಧಕ್ಕಾಗಿ ತೆರಳುವನು. ಅವನ ಮತ್ತು ನಟಾಶ ರೊಸ್ತೋವ್, ಕುಲೀನ ಮನೆತನದ ಸುಂದರವಾದ ಹುಡುಗಿಯ ನಡುವಿನ ಪ್ರಸಂಗಗಳು, ವ್ಯಕ್ತಿಗತವಾದ ಸೆಳೆತಗಳು, ಕುಟುಂಬದ ಘನತೆ ಮತ್ತು ಸಾಂದರ್ಭಿಕ ಅನಿವಾರ್ಯತೆಗಳ ತಾಕಲಾಟಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವಳಿಗೆ ಪ್ರೇಮ, ಕಾಮ, ವ್ಯಾಮೋಹ ಎಲ್ಲವೂ ಒಂದೇ ಆಗಿದ್ದು ಎಲ್ಲದರಿಂದ ಹೊರತಾಗುವಂತಹ ಸ್ಥಿತಿಯೂ ಕೂಡಾ ಒಂದು ಪ್ರತಿಮಾ ಸಂದೇಶವೇ ಆಗಿದೆ.

ರಾಜಕೀಯ ಸಂಘರ್ಷದ ಕಾರಣಕ್ಕೆ ಯುದ್ಧವೆಂಬುದು ನಡೆದರೂ ಅದು ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ರೈತರು, ಕುಲೀನರು, ನಾಗರಿಕರು, ಸೈನಿಕರು ಎಲ್ಲರೂ ಸಮಸ್ಯೆಗಳನ್ನು ಅನುಭವಿಸುವತ್ತಾರೆ. ಅವರ ಕಾಲಘಟ್ಟದಲ್ಲಿ ಮತ್ತು ಗತಿಸಿದ ಚರಿತ್ರೆಯಲ್ಲಿಯೇ ಎದುರಿಸದಂತಹ ಸಂಕಟಗಳಿಂದ ಬಳಲಬೇಕು. ಅದೇ ಯುದ್ಧ ಮತ್ತು ಶಾಂತಿಯಲ್ಲಿಯೂ ಆಗುವುದು. ಟಾಲ್ಸ್ಟಾಯ್ ಈ ಹಿನ್ನೆಲೆಗಳ ಎಲ್ಲಾ ಪ್ರತಿನಿಧಿಗಳನ್ನು ಪಾತ್ರಗಳನ್ನಾಗಿಸಿ ಮಾನುಷವಾಗಿ ಚಿತ್ರಿಸುತ್ತಾಹೋಗುತ್ತಾರೆ. ಮನುಷ್ಯ ಹೃದಯದ ಸಂವೇದನೆಯುಳ್ಳವರಿಗೆಲ್ಲಾ ಸ್ಪಂದಿಸುವ ದುಃಖ ದುಮ್ಮಾನಗಳು – ಭಾವುಕತೆಗೂ ಮತ್ತು ತಾತ್ವಿಕತೆಗೂ ಭಿನ್ನಬೇಧಗಳನ್ನು ಕಾಣಲಾಗದು.

ಟಾಲ್ಸ್‌ಟಾಯ್ ಅವರ ಕಾಲಘಟ್ಟಕ್ಕೆ 60 ವರ್ಷಗಳ ಮುನ್ನದ ಕತೆಯ ಭೂಮಿಕೆಯಾದರೂ ಅವರಲ್ಲಿ ಫ್ರಾನ್ಸ್ ಮಾಡಿದ ಯುದ್ಧದ ಛಾಯೆ ಪೂರ್ತಿ ಕರಗಿಹೋಗಿರಲಿಲ್ಲ. ಯುದ್ಧವೇ ಹಾಗೆ. ಯಾವುದೇ ಕಾರಣದಿಂದ ಅದು ನಡೆದರೂ ಸಾಮಾಜಿಕ ಮತ್ತು ರಾಜತಾಂತ್ರಿಕ ವ್ಯವಸ್ಥೆ ಹದಗೆಡುತ್ತದೆ. ಜನತೆಗಾಗಿಯೇ ಆ ವ್ಯವಸ್ಥೆ ಇರುವುದಾದರೂ, ಅದಕ್ಕೆ ಬೀಳುವ ಏಟಿನಿಂದ ಉಂಟಾಗುವ ಅವ್ಯವಸ್ಥೆಯಿಂದ ಯಾವುದೇ ತಪ್ಪನ್ನು ಮಾಡಿರದ ಜನರು ಶಿಕ್ಷೆ ಅನುಭವಿಸುತ್ತಾರೆ. ತಮ್ಮ ಹಿತರಕ್ಷಣೆಗಾಗಿ ವ್ಯವಸ್ಥೆ ಎಂದು ನಂಬಿರುವ ಜನರು ಎದುರುನೋಡದ ತೊಂದರೆಗಳಿಗೆ ಎದೆಯೊಡ್ಡಬೇಕಾಗುತ್ತದೆ. ಶಿಕ್ಷಣದ ಸಮಸ್ಯೆ, ಉದ್ಯೋಗದಿಂದಲೇ ಅನ್ನವನ್ನು ಗಳಿಸಿಕೊಳ್ಳುವರ ಸಮಸ್ಯೆ, ವೈದ್ಯಕೀಯ ಸೌಲಭ್ಯಗಳಲ್ಲಿ ವ್ಯತ್ಯಯವುಂಟಾಗುವ ಸಮಸ್ಯೆ, ಗಮನವು ಯುದ್ಧದ ಕಡೆ ಹರಿಯುವುದರಿಂದ ಆಂತರಿಕವಾಗಿ ಸಡಿಲವಾಗುವ ಭದ್ರತಾ ವ್ಯವಸ್ಥೆ; ಹೀಗೆ ಅನೇಕಾನೇಕ ಸಮಸ್ಯೆಗಳು ಯುದ್ಧದ ಕಾರಣಗಳಿಂದಾಗುತ್ತವೆ.

ಯುದ್ಧವೆಂಬುದು ರೋಮಾಂಚನ. ಅದೊಂದು ಉನ್ಮತ್ತವಾದ ಭ್ರಾಮಕವಾದ ಆನಂದ. ಅದು ಕುಲೀನರ, ರಾಜಕಾರಣದ ಮತ್ತು ಆರ್ಥಿಕತೆಯ ಉತ್ತುಂಗದಲ್ಲಿರುವವರು ಬಲಿಪಶುಗಳನ್ನಾಗಿಸುವವರಿಗೆ ಮಾತ್ರವೇ ಬೇಕು. ದುಡಿಯುವವರಿಗಲ್ಲ, ಶ್ರಮಿಕರಿಗಲ್ಲ, ಮನೆಯಲ್ಲಿ ಮಕ್ಕಳನ್ನು ಸಲಹುವ ಮತ್ತು ಕುಟುಂಬವನ್ನು ನಿರ್ವಹಣೆ ಮಾಡುವ ಮಹಿಳೆಯರಿಗಲ್ಲ. ಆದರೆ ಇವರೆಲ್ಲರ ಸಮೂಹದ ಪ್ರತಿನಿಧಿಯಂತಿರುವ ರಾಜಕಾರಣ ವ್ಯವಸ್ಥೆಯನ್ನು ಯುದ್ಧಕ್ಕೆಳೆಯುವುದು ಮತ್ತು ಯುದ್ಧವನ್ನು ಎದುರಿಸುವಂತೆ ಮಾಡುವುದು, ಏನೇ ಆದರೂ ಯುದ್ಧದ ರೋಮಾಂಚನ ಒಲ್ಲದ, ಬದುಕಿನ ಉಸುರಿಗೆ ಹಾತೊರೆಯುವವರ ನರಳಾಟಕ್ಕೆ ಕಾರಣವಾಗುತ್ತದೆ.

‘ಯುದ್ಧ ಮತ್ತು ಶಾಂತಿಯ’ಲ್ಲಿ ಅನೇಕ ಕತೆಗಳಿವೆ, ಅನೇಕ ಬದುಕುಗಳಿವೆ. ನಾಯಕ ಎಂದೋ, ನಾಯಕಿ ಎಂದೋ ಯಾರೂ ಇಲ್ಲ. ಸಿದ್ಧಸೂತ್ರದ ನಾಯಕ ಮತ್ತು ನಾಯಕಿಯ ಪಾತ್ರವನ್ನು ನಿರೀಕ್ಷಿಸುವವರಿಗೆ ಯಾರೂ ಸಿಗುವುದಿಲ್ಲ. ಹಾಗೆಂದು ಇದು ಐತಿಹಾಸಿಕ ಕಾದಂಬರಿಯೂ ಅಲ್ಲ. ಕಲಾವಿದನಾಗಿ ಟಾಲ್ಸ್‌ಟಾಯ್ ಒಮ್ಮೆ ಕಂಡರೆ, ಮತ್ತೊಮ್ಮೆ ಬೋಧನೆಗಳನ್ನು ಮಾಡುವ ಋಷಿಯಾಗಿ ಬದಲಾಗುತ್ತಾರೆ. ಮತ್ತೊಮ್ಮೆ ಕ್ರಾಂತಿಕಾರಿಯಾಗಿ ವ್ಯವಸ್ಥೆಯೊಳಗಿನ ತಿದಿಗಳಿಗೆ ಕೆರಳುತ್ತಾರೆ.

ಮನುಷ್ಯನ ತಿಕ್ಕಲುತನದ ಉನ್ಮತ್ತತೆಗೆ ಶಾಂತಿಯ ಅವಧಿಯೂ ಕೂಡಾ ಯುದ್ಧದ ಸಿದ್ಧತೆಯೇ ಆಗಿರುತ್ತದೆ. ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

ಸುಮಾರು 1225 ಪುಟಗಳನ್ನು ಹೊಂದಿರುವ ‘ಯುದ್ಧ ಮತ್ತು ಶಾಂತಿ’ಯ ಕಾದಂಬರಿಯನ್ನು ಪರಿಚಯಿಸಲು ಸಾಧ್ಯವಾಗದ ಈ ಲೇಖನ ಅದು ಯುದ್ಧದ ಬಗ್ಗೆ ಹೊಂದಿರುವ ಧೋರಣೆಯ ಒಂದು ಮುಖವನ್ನು ಮಾತ್ರ ಧ್ವನಿಸುತ್ತದೆ. ಆದರೆ ಅದನ್ನು ಓದುವಾಗ ಯುದ್ಧದ ನೆರಳಿನಲ್ಲಿರುವ ಎಲ್ಲಾ ದೇಶಗಳೂ ನಮ್ಮ ಕಣ್ಪಟಲದ ಮುಂದೆ ಹಾದುಹೋಗುವಂತೆ ಮಾಡುವುದು ಈ ಕಾದಂಬರಿಯ ಶಕ್ತಿ.


ಇದನ್ನು ಓದಿ: ವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...