Homeಮುಖಪುಟಬಿಬಿಸಿ ಸಾಕ್ಷ್ಯಾಚಿತ್ರ: ಭಾಗ ಎರಡರಲ್ಲಿ ಪ್ರಧಾನಿ ಮೋದಿ ಕುರಿತು ಹೇಳಿರುವುದೇನು?

ಬಿಬಿಸಿ ಸಾಕ್ಷ್ಯಾಚಿತ್ರ: ಭಾಗ ಎರಡರಲ್ಲಿ ಪ್ರಧಾನಿ ಮೋದಿ ಕುರಿತು ಹೇಳಿರುವುದೇನು?

ಮೊದಲ ಭಾಗದಲ್ಲಿ ಗುಜರಾತ್ ಗಲಭೆಯ ಕುರಿತು ಚಿತ್ರಿಸಿದ್ದರೆ, ಮೋದಿ ಪ್ರಧಾನಿಯಾದ ಬಳಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಆಗಿರುವ ಬೆಳವಣಿಗೆಗಳ ಕುರಿತು ಎರಡನೇ ಭಾಗ ಚರ್ಚಿಸಿದೆ.

- Advertisement -
- Advertisement -

ಲಂಡನ್: ಪ್ರಧಾನಿ ಮೋದಿಯರವರ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವಾದ ‘ಇಂಡಿಯಾ: ದಿ ಮೋದಿ ಕ್ವಶ್ಚನ್‌’ ಎರಡನೇ ಭಾಗ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ 2002ರ ಗುಜರಾತ್‌ ಗಲಭೆಯ ಕುರಿತು ಬೆಳಕು ಚೆಲ್ಲಿದ್ದು ಸಾಕ್ಷ್ಯಾಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಮೋದಿಯವರು ಪ್ರಧಾನಿಯಾದ ಬಳಿಕ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಆಗಿರುವ ಬೆಳವಣಿಗೆಗಳನ್ನು ಸಾಕ್ಷ್ಯಾಚಿತ್ರದ ಎರಡನೇ (ಹಾಗೂ ಕೊನೆಯ) ಭಾಗದಲ್ಲಿ ಚರ್ಚಿಸಲಾಗಿದೆ.

ಮುಸ್ಲಿಮರ ಮೇಲೆ ಮಾಬ್‌ ಲಿಂಚಿಂಗ್‌, ಆರ್ಟಿಕಲ್ 370 ಮತ್ತು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯಿದೆ, 2020ರಲ್ಲಿ ಈಶಾನ್ಯ ದೆಹಲಿಯಲ್ಲಿದ್ದಾಗ ಕೋಮು ಹಿಂಸಾಚಾರದ ಕುರಿತು ಈ ಸಾಕ್ಷ್ಯಾಚಿತ್ರ ಚರ್ಚಿಸಿದೆ. ಈ ಅಂತಿಮ ಸರಣಿಯಲ್ಲಿ ಬಿಬಿಸಿ ಮಾಧ್ಯಮವು ಸ್ವತಂತ್ರ ವರದಿಗಳು, ಸಾಕ್ಷ್ಯಗಳು, ಬಾಧಿತರು, ಶಿಕ್ಷಣ ತಜ್ಞರು, ಪತ್ರಿಕರ್ತರು ಮತ್ತು ನಾಗರಿಕ ಸಮಾಜದ ಅಭಿಪ್ರಾಯಗಳನ್ನು ದಾಖಲಿಸಿದೆ. ಬಿಜೆಪಿಯ ದೃಷ್ಟಿಕೋನವನ್ನು ಪ್ರತಿನಿಧಿಸುವ ಮೂರು ವ್ಯಕ್ತಿಗಳ ಅಭಿಪ್ರಾಯಗಳನ್ನೂ ಇದು ಒಳಗೊಂಡಿದೆ. ಪ್ರಮುಖವಾಗಿ ಪತ್ರಕರ್ತ ಮತ್ತು ಬಿಜೆಪಿಯ ಮಾಜಿ ಸಂಸದ ಸ್ವಪನ್ ದಾಸ್‌ಗುಪ್ತಾ ಅವರ ಹೇಳಿಕೆಗಳು ಇಲ್ಲಿವೆ.

‘ಅಭ್ಯುದಯದ ಹೊಸ ಯುಗ’ ಮತ್ತು ‘ನವ ಭಾರತ’ದ ಭರವಸೆಯನ್ನು ಮೋದಿಯವರು ನೀಡಿದರೂ, ಅವರ ಅಧಿಕಾರವಧಿಯಲ್ಲಿ ದೇಶವು ‘ಧಾರ್ಮಿಕ ಪ್ರಕ್ಷುಬ್ಧತೆಯಿಂದ ಹಾಳಾಗಿದೆ’ ಎಂದು ಸಾಕ್ಷ್ಯಚಿತ್ರ ಪ್ರತಿಪಾದಿಸುತ್ತದೆ. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಭಾರತದ ಅತ್ಯುನ್ನತ ನ್ಯಾಯಾಲಯವು ತೆರವುಗೊಳಿಸಿದ್ದರೂ, ‘ಆತಂಕಗಳು ದೂರವಾಗುವುದಿಲ್ಲ’ ಎಂದು ಹೊಸ ಸಂಚಿಕೆ ಪ್ರತಿಪಾದಿಸಿದೆ.

ಮಾಬ್ ಲಿಂಚಿಂಗ್‌ (ಗೋರಕ್ಷಣೆ ನೆಪದಲ್ಲಿ ಹಿಂಸೆಗಳು)

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ, ಮುಸ್ಲಿಮರ ವಿರುದ್ಧ ವ್ಯಾಪಕವಾಗಿ ಹಲ್ಲೆ ಪ್ರಕರಣಗಳು ನಡೆದಿವೆ. ಗೋಮಾಂಸ ಸಾಗಣೆ ವಿಚಾರ ಹೆಚ್ಚಾಗಿ ವಿವಾದಾಸ್ಪದವಾಗಿದೆ.  ನಂತರ ಅನೇಕ ಭಾರತೀಯ ರಾಜ್ಯಗಳಲ್ಲಿ ಗೋಮಾಂಸವನ್ನು ಕಾನೂನುಬಾಹಿರ ಮಾಡಲಾಯಿತು. ಏಕೆಂದರೆ ಗೋವುಗಳನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಗೋವಿನ ರಕ್ಷಣೆ ವಿಷಯವನ್ನು ಕೇಂದ್ರೀಕರಿಸುವ ಈ ಭಾಗವು 2017ರಲ್ಲಿ ಗೋರಕ್ಷಕರಿಂದ ಕೊಲ್ಲಲ್ಪಟ್ಟ ಅಲಿಮುದ್ದೀನ್ ಅನ್ಸಾರಿ ಅವರ ಕಥೆಯನ್ನು ಹೇಳುತ್ತದೆ. ಸುದೀರ್ಘ ಮೌನದ ನಂತರ ಪ್ರಧಾನಿ ಮೋದಿಯವರು ಈ ಕುರಿತು ಮಾತನಾಡಿದ್ದರು.

ಅಲಿಮುದ್ದೀನ್‌ನ ಹತ್ಯೆಯಲ್ಲಿ ಬಿಜೆಪಿ ವಕ್ತಾರ ನಿತ್ಯಾನಂದ ಮಹತೋ ಹೇಗೆ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಜೀವಾವಧಿ ಶಿಕ್ಷೆಗೆ ಗುರಿಯಾದರು ಎಂಬುದನ್ನು ಸಾಕ್ಷ್ಯಚಿತ್ರವು ವರದಿ ಮಾಡಿದೆ. ಆದರೆ ಮೋದಿಯವರ ಮಂತ್ರಿಗಳಲ್ಲಿ ಒಬ್ಬರು ಅವರಿಗೆ ಸಹಾಯ ಮಾಡಿದ್ದನ್ನು, ತಪ್ಪಿತಸ್ತರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದ ಬೆಳವಣಿಗೆಗಳ ಕುರಿತು ಇಲ್ಲಿ ದಾಖಲಿಸಲಾಗಿದೆ.

“ಅವರು ಇಡೀ ದೇಶದ ಆಡಳಿತಗಾರರು. ಅಂಥವರು ಈ ಜನರನ್ನು ಬೆಂಬಲಿಸಿದಾಗ, ನಾವು ಬಡವರು ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ಚಿತ್ರದಲ್ಲಿ ಅನ್ಸಾರಿ ಅವರ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಹಲ್ಲೆ ನಡೆಸಿದವರು ನಾಲ್ಕು ವರ್ಷಗಳ ನಂತರವೂ ಸ್ವತಂತ್ರರಾಗಿದ್ದಾರೆ ಎಂದು ವಿಷಾದಿಸಿದ್ದಾರೆ.

ಹ್ಯೂಮನ್‌ ರೈಟ್ಸ್‌ ವಾಚ್ ಪ್ರಕಾರ, “ಮೇ 2015 ಮತ್ತು ಡಿಸೆಂಬರ್ 2018ರ ನಡುವೆ ಮೂರೂವರೆ ವರ್ಷಗಳಲ್ಲಿ, ಗೋರಕ್ಷಕರು, ಗೋಸಂಬಂಧಿ ಹಿಂಸಾಚಾರದಲ್ಲಿ 44 ಜನರನ್ನು ಕೊಂದು ಸುಮಾರು 280 ಮಂದಿಯನ್ನು ಗಾಯಗೊಳಿಸಿದ್ದಾರೆ, ಅದರಲ್ಲಿ ಹೆಚ್ಚಿನ ಬಲಿಪಶುಗಳು ಮುಸ್ಲಿಮರು” ಎನ್ನುತ್ತದೆ. ಈ ವಿಷಯಗಳನ್ನು ಸಾಕ್ಷ್ಯಾಚಿತ್ರ ದಾಖಲಿಸಿದೆ.

ವಿಧಿ 370 ರದ್ಧತಿ

ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ಆಗಸ್ಟ್ 2019ರಲ್ಲಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶಗಳನ್ನು ರೂಪಿಸಿದ್ದರ ಕುರಿತು ಸಾಕ್ಷಾಚಿತ್ರ ಮಾತನಾಡುತ್ತದೆ.  “ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂಬತ್ತು ವಾರಗಳ ನಂತರ” ಸೇನಾ ಬಲ ಹೆಚ್ಚಿಸಲಾಯಿತು. ಕೇಂದ್ರದ ಹಿಡಿತಕ್ಕೆ ಕಾಶ್ಮೀರವನ್ನು ತೆಗೆದುಕೊಳ್ಳಲಾಯಿತು. ಆದಾಗ್ಯೂ, ಸರ್ಕಾರವು ತನ್ನ ನೀತಿಗಳಿಂದ ಈ ಪ್ರದೇಶದಲ್ಲಿ “ಶಾಂತಿ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತಿದೆ” ಎಂದು ಹೇಳಿಕೊಂಡಿದೆ.

ವಿದ್ವಾಂಸ, ಲೇಖಕ ಕ್ರಿಸ್ಟೋಫ್ ಜಾಫ್ರೆಲಾಟ್ ಪ್ರಕಾರ, “ಭಾರತೀಕರಣ”ದ ಹೊಸ ನೀತಿಯು ನಡೆಯುತ್ತಿದೆ. ಆರ್ಟಿಕಲ್ 370 ರದ್ದುಗೊಳಿಸಲಾದ ಬಳಿಕ “ಮೊದಲ ತಿಂಗಳಲ್ಲೇ ಸುಮಾರು 4,000 ಜನರನ್ನು ಬಂಧಿಸಲಾಗಿದೆ” ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ಸಾಕ್ಷ್ಯಾಚಿತ್ರ ಎರಡನೇ ಭಾಗ ಮಾತನಾಡಿದೆ.

ಸಿಎಎ ಮತ್ತು ಈಶಾನ್ಯ ದೆಹಲಿ ಹಿಂಸಾಚಾರ

ಭಾರತದ ಪೌರತ್ವದೊಂದಿಗೆ ಧರ್ಮವನ್ನು ಥಳುಕು ಹಾಕಿದ್ದರಿಂದ ‘ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಸಿಎ) ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಭುಗಿಲೆದ್ದವು. ಇದು ಮಹತ್ವದ ವಿಭಾಗಗಳಲ್ಲಿ ಎಚ್ಚರಿಕೆಯ ಗಂಟೆಗಳನ್ನು ಬಾರಿಸಿತು. ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ಕನಿಷ್ಠ 53 ಜೀವಗಳನ್ನು ಬಲಿ ತೆಗೆದುಕೊಂಡ ಕೋಮು ಹಿಂಸಾಚಾರದ ಕುರಿತು ಸಾಕ್ಷ್ಯಾಚಿತ್ರವು ಆತಂಕ ವ್ಯಕ್ತಪಡಿಸಿದೆ. “ಕಟ್ಟರ್‌ ಹಿಂದುತ್ವ ಧರ್ಮಗುರುಗಳು ಮುಸ್ಲಿಂ ಪ್ರತಿಭಟನಾಕಾರರ ವಿರುದ್ಧ ಬೆದರಿಕೆ ಹಾಕಿದರು” ಎನ್ನುತ್ತದೆ.

ಫೈಜಾನ್ ಎಂಬ 23 ವರ್ಷದ ಮುಸ್ಲಿಂ ಯುವಕನನ್ನು “ಪೊಲೀಸರು ಹೊಡೆದು ಸಾಯಿಸಿದ್ದಾರೆ” ಎಂದು ಸಾಕ್ಷ್ಯಚಿತ್ರವು ವೈರಲ್ ವೀಡಿಯೊವೊಂದನ್ನು ಉಲ್ಲೇಖಿಸುತ್ತದೆ. ಫೈಜಾನ್‌ನ ತಾಯಿ ಮಾತನಾಡಿದ್ದು, “ನನಗೆ ಮತ್ತು ನನ್ನ ಮಗನಿಗೆ ನ್ಯಾಯ ಬೇಕು. ಆತ ನಿರಪರಾಧಿ ಮತ್ತು ಯಾವುದೇ ಕಾರಣವಿಲ್ಲದೆ ಕೊಲೆಯಾಗಿದ್ದಾನೆ” ಎಂದಿದ್ದಾರೆ.

ಇದನ್ನೂ ಓದಿರಿ: ಜನರು ದೂರದರ್ಶನ ನಂಬದಿದ್ದರೂ BBC ನಂಬುತ್ತಾರೆ: ಮೋದಿಯ ಹಳೆಯ ವಿಡಿಯೊ ವೈರಲ್‌

“2020ರ ದೆಹಲಿ ಹಿಂಸಾಚಾರದಲ್ಲಿ ಸತ್ತವರಲ್ಲಿ ಮೂರನೇ ಎರಡರಷ್ಟು ಜನರು ಮುಸ್ಲಿಮರಾಗಿದ್ದಾರೆ ಎಂದು ವರದಿಯಾಗಿದೆ” ಎಂದು ಸಾಕ್ಷ್ಯಾಚಿತ್ರ ಹೇಳುತ್ತದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ ಸಂಸ್ಥೆಯ ತನಿಖೆಯನ್ನು ಉಲ್ಲೇಖಿಸುತ್ತದೆ. “ಪೊಲೀಸರು ಚಿತ್ರಹಿಂಸೆ ನೀಡಿದರು, ಪ್ರತಿಭಟನಾಕಾರರ ಮೇಲೆ ಅತಿಯಾದ ಮತ್ತು ಅನಿಯಂತ್ರಿತ ಬಲ ಪ್ರಯೋಗ ಮಾಡಿದರು, ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸೇರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯಾಯಿತು” ಎಂದು ಅಮ್ನೆಸ್ಟಿ ಹೇಳಿದೆ.

ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಅಧ್ಯಕ್ಷ ಆಕರ್ ಪಟೇಲ್, “ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತು ಆಮ್ನೆಸ್ಟಿ ವರದಿಯು ಪೊಲೀಸರು ನಡೆದುಕೊಳ್ಳಬೇಕಾದಂತೆ ನಡೆದುಕೊಂಡಿಲ್ಲ ಎಂದು ತೋರಿಸಿದೆ” ಎಂದಿದ್ದಾರೆ.

ಕೊನೆಯಲ್ಲಿ…

“ಪತ್ರಕರ್ತರು ತಮ್ಮ ವೃತ್ತಿ ಕಾರಣಗಳಿಂದಾಗಿ ಹಿಂಸೆ, ಬೆದರಿಕೆ ಮತ್ತು ಬಂಧನವನ್ನು ಎದುರಿಸುತ್ತಿದ್ದಾರೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪತ್ರಿಕಾ ಸ್ವಾತಂತ್ರ್ಯ ಕ್ಷೀಣಿಸಿದೆ ಮತ್ತು ಈಗ ಬಿಕ್ಕಟ್ಟಿನಲ್ಲಿದೆ ಎಂದು ಹೋರಾಟಗಾರರು ಹೇಳುತ್ತಾರೆ. ಮಾನವ ಹಕ್ಕುಗಳ ಹೋರಾಟಗಾರರು ತಮ್ಮ ಮೇಲೆ ದಾಳಿ ನಡೆಯುತ್ತಿವೆ” ಎನ್ನುವುದನ್ನು ಡಾಕ್ಯುಮೆಂಟರಿ ಒಳಗೊಂಡಿದೆ.

(ಈ ವರದಿಯು ‘ದಿ ವೈರ್‌’ನಲ್ಲಿ ಪ್ರಕಟಿಸಲಾದ ಬರಹದಿಂದ ಆಯ್ದ ಅಂಶಗಳನ್ನು ಒಳಗೊಂಡಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...