Homeಮುಖಪುಟತಮಿಳುನಾಡು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ "ಬೇಷರತ್ ಬೆಂಬಲ" ನೀಡಿದ ಕಮಲ್ ಹಾಸನ್

ತಮಿಳುನಾಡು ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ “ಬೇಷರತ್ ಬೆಂಬಲ” ನೀಡಿದ ಕಮಲ್ ಹಾಸನ್

- Advertisement -
- Advertisement -

ಮಕ್ಕಳ್ ನೀಧಿ ಮೈಯಂ ಪಕ್ಷದ ಸಂಸ್ಥಾಪಕ, ನಟ-ರಾಜಕಾರಣಿ ಕಮಲ್ ಹಾಸನ್ ತಮಿಳುನಾಡಿನ ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬೇಷರತ್ ಬೆಂಬಲ ನೀಡಿದ್ದಾರೆ. ಅವರ ಈ ನಡೆಯು  2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರಲು ಕಾರಣವಾಗಬಹುದು ಎಂದು ಸುಳಿವು ನೀಡಿದಂತಿದೆ.

ಆಡಳಿತಾರೂಢ ಡಿಎಂಕೆ ಮತ್ತು ಕಾಂಗ್ರೆಸ್ ಅನ್ನು ಕಮಲ್ ಹಾಸನ್ ಟೀಕಿಸಿರುವುದನ್ನು ಪರಿಗಣಿಸಿ, ಈ ನಿಮ್ಮ ನಡೆಯು ಕಾರ್ಯತಂತ್ರದ ಬದಲಾವಣೆಯೇ ಎಂದು ಎನ್‌ಡಿಟಿವಿ ಎಂದು ಪ್ರಶ್ನೆ ಮಾಡಿತು. ಅದಕ್ಕೆ ಉತ್ತರಿಸಿದ ಅವರು, “ಜನರ ವಿಷಯಕ್ಕೆ ಬಂದಾಗ ರಾಜಿ ಎಂದು ಕರೆಯುವುದು ಏನೂ ಇಲ್ಲ, ನಾನು ಮಧ್ಯಪಂಥೀಯ, ಸಿದ್ಧಾಂತ ಮಾಡಬಾರದು. ಇದು ಜನರ ಸೇವೆಗೆ ಅಡ್ಡಿಯಾಗುತ್ತದೆ” ಎಂದು ಹೇಳಿದರು.

ಇತ್ತೀಚೆಗೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯೊಂದಿಗೆ ಎಂಎನ್‌ಎಂ ನಾಯಕ ಪಥಸಂಚಲನ ನಡೆಸುತ್ತಿರುವುದನ್ನು ನೋಡಿದ ನಂತರ ಕಮಲ್ ಹಾಸನ್ ಅವರು ಕಾಂಗ್ರೆಸ್ ಜೊತೆಗೆ ಹೊಂದಾಣಿಯ ಬಗ್ಗೆ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ‘ಚೋಳರ ಕಾಲದಲ್ಲಿ ಹಿಂದೂ ಧರ್ಮವಿರಲಿಲ್ಲ’ – ಕಮಲ್ ಹಾಸನ್

“ಕಳೆದುಹೋದ ನಮ್ಮ ಭಾರತದ ನೀತಿಗಳನ್ನು ಮರಳಿ ಪಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ಇದು (ಭಾರತ್ ಜೋಡೋ ಅಭಿಯಾನ) ರಾಜಕೀಯವನ್ನು ಮೀರಿದ ಯಾತ್ರೆಯಾಗಿದೆ” ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಸುದ್ದಿಗಾರರಿಗೆ ತಿಳಿಸಿದ್ದರು.

ಬಿಜೆಪಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ಎಂಎನ್‌ಎಂ ಸಂಸ್ಥಾಪಕರು ಈರೋಡ್ ಚುನಾವಣೆಯು “ಕೋಮುವಾದಿ ಶಕ್ತಿಗಳ” ವಿರುದ್ಧ ಕೈಜೋಡಿಸುವ ಕಾರಣಕ್ಕಾಗಿ ಈ ಹೋರಾಟವಾಗಿದೆ. “ನಾನು ಏಕಸಂಸ್ಕೃತಿಯನ್ನು ದ್ವೇಷಿಸುತ್ತೇನೆ. ನನ್ನ ಯುದ್ಧವು ಇಲ್ಲಿ ಸಣ್ಣ ಮೈದಾನದಲ್ಲಿ ಪ್ರಾರಂಭವಾಗುತ್ತದೆ ಮತ್ತು ರಾಷ್ಟ್ರವ್ಯಾಪಿ ವಿಸ್ತರಿಸುತ್ತದೆ” ಎಂದು ಹೇಳಿದರು.

2019 ರ ಲೋಕಸಭೆ ಚುನಾವಣೆ ಮತ್ತು 2021 ರ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಎಂಎನ್‌ಎಂ ಪಕ್ಷ ಸ್ವತಂತ್ರವಾಗಿ ಎದುರಿಸಿತ್ತು. ಇದೇ ಮೊದಲ ಬಾರಿಗೆ ನಟ-ರಾಜಕಾರಣಿಯು ಚುನಾವಣೆಯಲ್ಲಿ ಮತ್ತೊಂದು ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ.

ಕಮಲ್ ಹಾಸನ್ ಅವರು, ಭ್ರಷ್ಟಾಚಾರ, ರಾಜವಂಶದ ರಾಜಕೀಯದ ವಿರುದ್ಧ ಹೋರಾಡುವ ಭರವಸೆ, ಗ್ರಾಮೀಣ ಸಬಲೀಕರಣದ ಜೊತೆಗೆ ಹಲವು ದ್ದೇಶಗಳೊಂದಿಗೆ 2018 ರಲ್ಲಿ MNM ಅನ್ನು ಪ್ರಾರಂಭಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಶಾಸಕ ತಿರುಮಹನ್ ಎವೆರಾ ನಿಧನದ ನಂತರ ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಕೆಲ ದಿನಗಳ ಹಿಂದೆ ಕಮಲ್ ಹಾಸನ್ ಅವರ ಬೆಂಬಲ ಕೋರಿದ್ದ ತಿರುಮಹಾನ್ ಅವರ ತಂದೆ, ಹಿರಿಯ ನಾಯಕ ಇವಿಕೆಎಸ್ ಇಳಂಗೋವನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇಳಂಗೋವನ್ ಅವರು ಒಬ್ಬ ವಿಚಾರವಾದಿ ನಾಯಕ ಹಾಗೂ ದಿವಂಗತ ಪೆರಿಯಾರ್ ಅವರ ಮೊಮ್ಮಗ ಕೂಡ ಹೌದು.

ಕಮಲ್ ಹಾಸನ್ ಅವರ ಬೆಂಬಲವು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಮೈತ್ರಿಕೂಟಕ್ಕೆ ಈ ಸ್ಥಾನವನ್ನು ಗೆಲ್ಲಲು ದೊಡ್ಡ ಉತ್ತೇಜನ ನೀಡಿದೆ. ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸಾಮಿ ಮತ್ತು ಉಚ್ಛಾಟಿತ ನಾಯಕ ಓ ಪನ್ನೀರಸೆಲ್ವಂ ನಡುವಿನ ಆಂತರಿಕ ಹೋರಾಟದಿಂದ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ತತ್ತರಿಸಿ ಹೋಗಿದ್ದು, ಇಬ್ಬರೂ ಚುನಾವಣೆಗೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ. ಬಿಜೆಪಿ ತನ್ನನ್ನು ತಾನು ಪ್ರಬಲ ಪ್ರತಿಪಕ್ಷ ಎಂದು ಬಿಂಬಿಸಿಕೊಂಡಿತ್ತು ಆದರೆ ಇಪಿಎಸ್ ಬಣ ಈ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ ನಂತರ ಹಿನ್ನಡೆ ಅನುಭವಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...