Homeಸಿನಿಮಾಕ್ರೀಡೆಬಿಸಿಸಿಐ ಅಧ್ಯಕ್ಷಗಿರಿ ಹೈಡ್ರಾಮಾ: ಗಂಗೂಲಿ ಅಮಿತ್ ಶಾರನ್ನು ಭೇಟಿಯಾಗಿದ್ದೇಕೆ?

ಬಿಸಿಸಿಐ ಅಧ್ಯಕ್ಷಗಿರಿ ಹೈಡ್ರಾಮಾ: ಗಂಗೂಲಿ ಅಮಿತ್ ಶಾರನ್ನು ಭೇಟಿಯಾಗಿದ್ದೇಕೆ?

- Advertisement -
- Advertisement -

ಕ್ರಿಕೆಟ್ ದಾದಾ ಸೌರವ್ ಗಂಗೂಲಿ ಬಿಸಿಸಿಐಗೆ ಅಧ್ಯಕ್ಷರಾಗಿ ಆಯ್ಕೆಯೇನೊ ಆಗಿದ್ದಾರೆ. ಆದರೆ ಆ ಆಯ್ಕೆಯ ಹಿಂದೆ ತಡರಾತ್ರಿವರೆಗೆ ನಡೆದ ವಿದ್ಯಮಾನಗಳು ಈಗ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಅಕ್ಟೋಬರ್ 14ರ ರಾತ್ರಿ ಸುಮಾರು 10.30ರವರೆಗೆ ಬಿಸಿಬಿಸಿ ಚರ್ಚೆಗಳು ನಡೆದ ನಂತರವೇ ಗಂಗೂಲಿ ಮತ್ತು ಬ್ರಿಜೇಶ್ ಪಟೇಲ್ ನಡುವಿನ ಉಮೇದುವಾರಿಕೆ ಇತ್ಯರ್ಥಕ್ಕೆ ಬಂದು ದಾದಾ ಬಿಸಿಸಿಐ ಅಧ್ಯಕ್ಷರೆಂದು ಆಯ್ಕೆಯಾಯ್ತು. ಆದರೆ ಅವತ್ತು ಸಂಜೆಯವರೆಗೂ ಅಧ್ಯಕ್ಷಗಿರಿಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದದ್ದು ಕರ್ನಾಟಕದ ಬ್ರಿಜೇಶ್ ಪಟೇಲ್ ಹೆಸರು. ಯಾಕೆಂದರೆ ಬ್ರಿಜೇಶ್ ಪಟೇಲ್ ಗೆ ಬೆನ್ನೆಲುಬಾಗಿ ನಿಂತದ್ದು ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್. ಇವತ್ತಿಗೂ ಇಂಡಿಯಾ ಕ್ರಿಕೆಟ್ ಅಡ್ಮಿನಿಸ್ಟ್ರೇಷನ್ ಮೇಲೆ ಶ್ರೀನಿವಾಸನ್ ಅವರಿಗೆ ಬಿಗಿ ಹಿಡಿತವಿದೆ. ಹಾಗಾಗಿಯೇ ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಪೂರ್ವ ಭಾರತದ ಹಲವು ರಾಜ್ಯಗಳ ಕ್ರಿಕೆಟ್ ಅಸೋಸಿಯೇಷನ್ ಗಳು ಬ್ರಿಜೇಶ್ ಪಟೇಲ್ ಗೆ ಬೆಂಬಲ ಸೂಚಿಸಿದ್ದವು.

ಸ್ವತಃ ಗಂಗೂಲಿಗೇ ತಾನು ಆಯ್ಕೆಯಾಗುವ ವಿಶ್ವಾಸ ಇರಲಿಲ್ಲ ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.”ರಾತ್ರಿ ಹತ್ತೂವರೆಗೆ ನನಗೆ ಫೋನ್ ಮಾಡಿ ಹೇಳಿದಾಗ ನಂಬಲೇ ಆಗಲಿಲ್ಲ. ಅಲ್ಲಿವರೆಗೂ ನಾನು ಚೇರ್ಮನ್ ಆಗ್ತೀನಿ ಅನ್ನೋ ವಿಶ್ವಾಸ ಇರಲಿಲ್ಲ” ಎಂಬ ಗಂಗೂಲಿಯ ಮಾತುಗಳು ಇಡೀ ಆಯ್ಕೆಯನ್ನು ಅನುಮಾನಿಸುವಂತೆ ಮಾಡುತ್ತವೆ. ಹಾಗಿದ್ದರೆ ಕೊನೇ ಕ್ಷಣದಲ್ಲಿ ಇಡೀ ಸಿನೇರಿಯಾವನ್ನೇ ಬದಲಾಯಿಸಿದ್ದು ಯಾರು? ಯಾವ ಲಾಭಕ್ಕಾಗಿ? ಇದರ ಹಿಂದೆ ಏನಾದರು ರಾಜಕೀಯ ಲೆಕ್ಕಾಚಾರಗಳಿವೆಯೇ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲೋದು ಕೇಂದ್ರ ಸಚಿವ ಅನುರಾಗ್ ಠಾಕೂರ್!

ಮೋದಿಯವರ ಸಂಪುಟದಲ್ಲಿ ಹಣಕಾಸು ರಾಜ್ಯ ಖಾತೆ ಸಚಿವರಾಗಿರುವ ಅನುರಾಗ್ ಠಾಕೂರ್ ಈ ಹಿಂದೆ ಇದೇ ಬಿಸಿಸಿಐನ ಅಧ್ಯಕ್ಷರಾಗಿದ್ದಂತವರು. ಹಾಗಾಗಿ ಅವತ್ತು ನಡೆದ ಸಭೆಗೆ ಹೋಗುವ ಹಕ್ಕು, ಅರ್ಹತೆಗಳು ಅವರಿಗಿದ್ದವು. ಅವರು ಸಭೆಗೆ ಬಂದ ನಂತರವೇ ಇಡೀ ವಾತಾವರಣ ತಲೆಕೆಳಗಾಯಿತು ಎನ್ನುತ್ತಿವೆ ಮೂಲಗಳು. ಮೇಲಿನಿಂದ ಆದೇಶವನ್ನು ಹೊತ್ತು ತಂದಂತಿದ್ದ ಅವರ ದೃಢ ನಿಲುವು ಗಂಗೂಲಿ ಪರ ವ್ಯಕ್ತವಾಗುತ್ತಿದ್ದಂತೆಯೇ ಬ್ರಿಜೇಶ್ ಪಟೇಲ್ ಪರವಾಗಿ ನಿಂತಿದ್ದವರು ಒಬ್ಬೊಬ್ಬರಾಗಿ ಗಂಗೂಲಿ ಬೆನ್ನ ಹಿಂದಕ್ಕೆ ಸರಿದುಕೊಂಡಿದ್ದರು. ಸ್ವತಃ ಶ್ರೀನಿವಾಸನ್ ಅಸಹಾಯಕರಾಗಬೇಕಾಗಿ ಬಂತು ಎನ್ನುತ್ತಾರೆ ಸಭೆಯಲ್ಲಿ ಭಾಗಿಯಾಗಿದ್ದವರೊಬ್ಬರು. ಅಲ್ಲಿಂದಾಚೆಗೆ ಶ್ರೀನಿವಾಸನ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಮುಖಕ್ಕೆ ಮುಖ ಕೊಟ್ಟು ಮಾತಾಡಲಿಲ್ಲವಾದರು ಗಂಗೂಲಿ ಅವಿರೋಧ ಆಯ್ಕೆಗೆ ಸಮ್ಮತಿ ಸೂಚಿಸಿದರು ಎನ್ನುವ ಮೂಲಗಳು, ಒಂದು ಹಂತದಲ್ಲಿ ಏಕಪಕ್ಷೀಯ ತೀರ್ಪು ನೀಡುವಂತೆ “ಗಂಗೂಲಿ ಬಿಸಿಸಿಐ ಪ್ರೆಸಿಡೆಂಟ್ ಆಗಲು ಸಹಕಾರ ಕೊಡಿ, ಅದಕ್ಕೆ ಬದಲಾಗಿ ನೀವು (ಬ್ರಿಜೇಶ್ ರತ್ತ ಬೆರಳು ತೋರಿ) ಐಪಿಎಲ್ ಚೇರ್ಮನ್ ಆಗಿ” ಎಂಬ ಸಂಧಾನ ಸೂತ್ರವನ್ನು ಮುಂದಿಟ್ಟಾಗ ಎಲ್ಲರೂ ಒಪ್ಪಿಕೊಳ್ಳಬೇಕಾಯ್ತು ಎಂಬುದನ್ನೂ ಬಯಲುಗೊಳಿಸಿವೆ.

ಅನುರಾಗ್ ಠಾಕೂರ್ ವಿರುದ್ಧ ಸಿಡಿದೇಳಬಹುದಾದ ಎಲ್ಲಾ ಸಾಮರ್ಥ್ಯವೂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮೂಲದ ಶ್ರೀನಿವಾಸನ್ ಅವರಿಗೆ ಇದ್ದವು. ಆದರೆ ಈ ಇಬ್ಬರೂ ಒಂದು ವಿಚಾರದಲ್ಲಿ ಸಮಾನ ಮನಸ್ಕರೂ ಹೌದು. ಬಿಸಿಸಿಐನಲ್ಲಿ ಹಣದ ಹರಿದಾಟ ಹೆಚ್ಚಾದಂತೆ ಭ್ರಷ್ಟಾಚಾರವೂ ಮಿತಿ ಮೀರಿತ್ತು. ಐಪಿಎಲ್ ಕಾಲಿಟ್ಟ ನಂತರವಂತೂ ಹಣದ ಹೊಳೆಯೇ ಹರಿದಾಡಲು ಶುರುವಾಗಿತ್ತು. ಆಗ ಮಧ್ಯಪ್ರವೇಶಿಸಿದ್ದ ಸುಪ್ರೀಂ ಕೋರ್ಟ್ 2017ರಲ್ಲಿ ನಾಲ್ಕು ಜನರ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್'  ಅನ್ನು ರಚಿಸಿ, ಅವರ ನಿಗಾವಣೆಯಲ್ಲೆ ಆಡಳಿತ ನಡೆಸಬೇಕು, ಮುಖ್ಯವಾಗಿ ಲೋಧಾ ಸಮಿತಿಯ ಶಿಫಾರಸ್ಸುಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದಿತ್ತು. ಮಾಜಿ ಮಹಾ ಲೇಖಪಾಲಕರಾದ ವಿನೋದ್ ರೈ ನೇತೃತ್ವದ ಸಮಿತಿಗೆ ರಾಮಚಂದ್ರ ಗುಹಾ, ವಿಕ್ರಂ ಲಿಮಾಯೆ ಮತ್ತು ಡಯಾನಾ ಎಡುಲ್ಜಿಯವರನ್ನು ಸದಸ್ಯರನ್ನಾಗಿ ನ್ಯಾಯಾಲಯವೇ ನೇಮಕ ಮಾಡಿತ್ತು. ಆ ಸಮಿತಿ ಬಂದ ನಂತರ ಬಿಸಿಸಿಐನ ಘಟಾನುಘಟಿಗಳ ಕೈಕಟ್ಟಿ ಹಾಕಿದಂತಾಗಿತ್ತು. ಸಾಕಷ್ಟು `ಬಿಸಿಸಿಐ ಬಿಗ್ ಹ್ಯಾಂಡ್’ಗಳು ಈ ಸಮಿತಿ ತೊಲಗಿದರೆ ಸಾಕು ಎಂದು ಕನವರಿಸುತ್ತಿದ್ದಾರೆ. ಅಂತವರಲ್ಲಿ ಠಾಕೂರ್ ಮತ್ತು ಶ್ರೀನಿವಾಸ್ ಕೂಡಾ ಇದ್ದಾರೆ. ಸಮಿತಿಯೇ ನಿಜವಾದ ದುಶ್ಮನ್ ಆಗಿರುವಾಗ, ಅದರ ವಿರುದ್ಧ ಹೋರಾಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ನಮ್ಮನಮ್ಮಲ್ಲೆ ಮನಸ್ತಾಪವೇಕೆ ಎಂಬ ಸೂತ್ರದಡಿ ಶ್ರೀನಿವಾಸನ್ ಕೂಡಾ ಠಾಕೂರ್ ಗೆ ಎದುರಾಡದೆ ಕೊಟ್ಟು-ತೆಗೆದುಕೊಳ್ಳುವ ಆಫರ್ ಗೆ ಒಪ್ಪಿ ಕೊಂಡಿದ್ದಾರೆ.

ಅದೇನೊ ಸರಿ, ಆದ್ರೆ ಅನುರಾಗ್ ಠಾಕೂರ್ ಗಂಗೂಲಿ ಬರ ಬ್ಯಾಟಿಂಗ್ ಮಾಡಿದ್ದೇಕೆ? ಇದೇ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ, ಹಾಲಿ ಕೇಂದ್ರ ಗೃಹಸಚಿವರ ಅಮಿತ್ ಶಾರ ಮಗ ಜಯ್ ಶಾ ಕೂಡಾ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿರುವುದಕ್ಕೂ ಇದಕ್ಕೂ ಏನಾದರು ನಂಟಿದೆಯಾ?

ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆ ಖಚಿತವಾಗುವುದಕ್ಕೂ ಹಿಂದಿನ ದಿನವಷ್ಟೇ ಮುಂಬೈ ನಗರಿಯಲ್ಲಿ ಅಮಿತ್ ಶಾ, ಗಂಗೂಲಿಯನ್ನು ಭೇಟಿಯಾಗಿ ಚರ್ಚಿಸಿದ್ದೇ ಈ ಎಲ್ಲಾ ಪ್ರಶ್ನೆಗಳು ಹುಟ್ಟಲು ಮೂಲ ಕಾರಣ. 2021ರಲ್ಲಿ ಎದುರಾಗಲಿರುವ ಗಂಗೂಲಿಯ ತವರು ರಾಜ್ಯ ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಮಣ್ಣು ಮುಕ್ಕಿಸಲು ಗಂಗೂಲಿಯನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಗಾಳ ಹಾಕಿದೆಯಾ? ಅದರ ಭಾಗವಾಗಿಯೇ ಬಿಸಿಸಿಐ ಅಧ್ಯಕ್ಷಗಿರಿಯನ್ನು ಗಂಗೂಲಿಗೆ ಕೊಟ್ಟು ಬಂಗಾಳಿಗರ ಮನಗೆಲ್ಲುವ ಜೊತೆಗೆ, ಬಿಜೆಪಿಯಿಂದ ಅವರನ್ನು ಕಣಕ್ಕಿಳಿಸಿ, ಸ್ಟಾರ್ ಪ್ರಚಾರಕರನ್ನಾಗೂ ಬಳಸುವ ಯೋಜನೆ ಶಾ ಭೇಟಿಯ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಈ ವಾದವನ್ನು ತಳ್ಳಿಹಾಕಿರುವ ಗಂಗೂಲಿ “ನಾನು ಅಮಿತ್ ಶಾರನ್ನು ಇದೇ ಮೊದಲ ಬಾರಿಗೆ ಭೇಟಿಯಾದದ್ದೇನೊ ನಿಜ. ಆದರೆ ಬಿಸಿಸಿಐ ಹುದ್ದೆಯ ಚರ್ಚೆಯೇ ಅಲ್ಲಿ ನಡೆಯಲಿಲ್ಲ. ನೀವು ಈ ಉಪಕಾರ ಮಾಡಿದ್ರ ನಾವು ಆ ಉಪಕಾರ ಮಾಡ್ತೀವಿ' ಅನ್ನೋ ಮಾತುಕತೆಯೇ ಅಲ್ಲಿ ನಡೆಯಲಿಲ್ಲ" ಎಂದಿದ್ದಾರೆ. ಅದೇನೆ ಆಗಲಿ ಬಿಸಿಸಿಐ ಅಧ್ಯಕ್ಷರಾಗಿರುವ ದಾದಾನ ಟೀಮಿನಲ್ಲಿ, ಶಾರ ಮಗ ಜಯ್ ಶಾ ಪ್ರಧಾನ ಪಾತ್ರ ವಹಿಸಲಿದ್ದಾರೆ.

`ಸರ್ವಂ ರಾಜಕೀಯಂ’ ಎನ್ನುವಂತಾಗಿರುವ ಇವತ್ತಿನ ಸಂದರ್ಭದಲ್ಲಿ ಬಿಸಿಸಿಐ ಅಂಗಳದಿಂದ ಎದ್ದು ಬರುತ್ತಿರುವ ಯಾವ ಸುದ್ದಿಯನ್ನೂ ತಳ್ಳಿಹಾಕಲಿಕ್ಕಾಗುವುದಿಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...