Homeಸಾಹಿತ್ಯ-ಸಂಸ್ಕೃತಿಕವನಅಂತಿಮ ವಲಸೆಯ ಮುನ್ನ..; ಖಲೀಲ್ ಮಾಮೂನ್ ಅವರ ಉರ್ದು ಕವಿತೆಯ ಅನುವಾದ

ಅಂತಿಮ ವಲಸೆಯ ಮುನ್ನ..; ಖಲೀಲ್ ಮಾಮೂನ್ ಅವರ ಉರ್ದು ಕವಿತೆಯ ಅನುವಾದ

- Advertisement -
- Advertisement -

ಉಳಿದಿರುವ ಹಾದಿ ಇದೊಂದು ಈಗ
ಈ ಹಾದಿಯಿಂದಲೆ ಸಾಗಬೇಕಾಗಿದೆ ನಾನು
ಸಾಗಬೇಕು, ಚಲಿಸಬೇಕು,
ಎದ್ದೆದ್ದು ಬಿದ್ದು ಪಾರಾಗಬೇಕು

ರಮಣಿಸುವ ಕಾಲುಹಾದಿಗಳು
ನನ್ನ ಅಕ್ಕ-ಪಕ್ಕ, ಸುತ್ತ-ಮುತ್ತ
ಅಲ್ಲಲ್ಲಿ ಕಗ್ಗಂಟಾಗಿರುವ ಮುಳ್ಳಿನ ಪೊದೆಗಳು
ಬರೀ ಪೊದೆಗಳು
ತೀವ್ರ ವಿಷಕರ ಮುಳ್ಳುಗಂಟೆಗಳು
ಅವತಿಕೊಂಡ ಹಾವು, ಚೇಳು
ಮೋಹಿನಿ-ಭೂತ ಪ್ರೇತಗಳು
ರಂಜಿಸುವ ಮೋಹ-ಮಾಯೆಗೆ ಸಿಲುಕದೆ
ಸಾಗುತ್ತಿರುವೆ ಇತ್ತ ನೇರ ನಾನು

ಎಲ್ಲಾದರೊಂದು ಸಿಕ್ಕೆ ಸಿಗುವುದು
ಲಕ್ಷ್ಯದ ಘಟಕಗಳು
ಇಲ್ಲಿಯೇ ನಿಂತು ಮರಳಿ ಬಾರದೆಂದು
ಇಲ್ಲಿಂದಲೆ ಅಜ್ಹಾಂ, ಇಲ್ಲಿಯೇ ಗಂಟೆಯ ನಾದಸ್ವರ
ಮೌನಧರಿಸಿದ ಮೀನಾರದಿಂದ ಕೊಳೆತ ಕುರುಹುಗಳ
ಅರ್ತನಾದ
ಇಲ್ಲಿಯೇ ಹಗಲಿರುಳು
ಕ್ಷಣ ಕ್ಷಣಕ್ಕೂ ಧಗಧಗಿಸುತ್ತಿರುವ
ಹವನದ ತಾಜಾ ತಾಜಾ
ನೀಲಿ ನೀಲಿ ಹೊಗೆ ಹೊರಸೂಸುತ್ತಿದೆ
ಇಲ್ಲಿಯೇ ಕಂಪಿಸುತ್ತಿರುವ ಗಗನದ ನಿರರ್ಥಕ ದೆಸೆಯಲ್ಲಿ
ನನ್ನ ನಿನ್ನ ಕಣ್ಣೀರಿನ ಎತ್ತೆರೆತ್ತರಕ್ಕೇರುವ ನಿರಂತರ ಬಳ್ಳಿ
ಹಬ್ಬಿರಲಿ ನಂದನವನದಲ್ಲಿ

ಉಳಿದಿರುವ ಇದೇ ತಾನೆ ಏಕೈಕ ಹಾದಿ
ಇದರಿಂದ ಪಾರಾಗಲೇಬೇಕಿದೆ ನಾನು
ಒಮ್ಮೆ ನಿನ್ನ ಸನಿಹದೊಂದಿಗೆ
ಇನ್ನೊಮ್ಮೆ ಒಬ್ಬಂಟಿಯಾಗಿ
ಒಮ್ಮೆ ಜನಜಂಗುಳಿಯೊಂದಿಗೆ
ನನ್ನ ಅಸ್ಮಿತೆಯ ಪಾಪ-ಪುಣ್ಯವ
ಸತ್ಯ-ಮಿಥ್ಯವ ಏನಾದರೊಂದು ನಾನೇ ಅವಲೋಕಿಸಿಕೊಳ್ಳುತ್ತಾ
ನುಡಿಯಲೇಬೇಕು, ಪಠಿಸಲೇಬೇಕು
ಈ ಚೂರು-ಪಾರನ್ನು ಬರಿದಾದ ಹವೆಯಲ್ಲಿ ಹಾರಿಸುತ್ತಾ
ಆರಾಧನೆಯ ಹೊದಿಕೆಯಿಂದ ಹೊದಿಸಿ
ನೈಜತೆಯೋ ಅಥವಾ ಭ್ರಾಂತಿಯೋ
ದಾನಶೂರನೋ-ತಿರುಕನೋ
ತುಂಬಿ ತುಳುಕುತ್ತಿರುವುದೋ
ಅಥವಾ ಬರಿದು ಬರಡಾಗಿರುವುದೋ
ಉಳಿದಿರುವುದು ಇದೇ ಒಂದು ದಾರಿ

ಇಲ್ಲಿಯೇ ಚಂದಿರನ ಮಿಂಚಿನ ಕಾಂತಿ
ಕಂಬನಿಯ ಮುಸುಕುಗಟ್ಟಿದ ಕಾರ್ಮೋಡಗಳು
ಸರ್ವಶಕ್ತತೆಯಿಂದ ಸುರಿಯುತ್ತಿರುವ
ಮನೋ-ಸಲ್ವಾವಿನ(1) ಮಳೆಯು
ನನ್ನ ನಿನ್ನ ಹಸ್ತದೊಂದಿಗೆ
ಅಥವಾ
ಪರಹಸ್ತದಲ್ಲಿ
ಅಥವಾ
ನನ್ನೊಡನೆಯೋ
ಇಲ್ಲಿಯೇ ತೆರೆದಿರುವುದು ನಮ್ಮ
ಅಂತರಂಗದ ಕಣ್ಣುಗಳು
ಇಲ್ಲಿಯೇ ನಮ್ಮ ಸಂಗಮ ಇಲ್ಲಿಯೇ ನಮ್ಮ ವಿದಾಯ

ಒಗ್ಗೂಡುವುದಿಲ್ಲ
ಮತ್ತೆ ನಾವೆಂದಿಗೂ
ಚಂಚಲ ರಾತ್ರಿ ಸಾಕಷ್ಟು ನವರಾತ್ರಿಗಳನ್ನು ಬಿಟ್ಟು
ಎಲ್ಲಿಗೆ ಸಾಗುವೆ, ಯಾರಿಗೆ ಕೂಗುವೆ
ಯಾವ ಅಲ್ವಂದ್(2) ಪರ್ವತದಿಂದಲೂ
ಮರಳಿ ಬರುವುದುಂಟೆ ಕೂಗು

ನನ್ನ ಗದ್ಗದಿತ ಯಾವ ಶ್ರವಣಕ್ಕೂ ಕೇಳಿಸದೆ
ಇದೇ ಹಾದಿಯಲ್ಲಿ ಸಾಗುತ್ತಾ ಜೀವಿಸುವೆ,
ಮರಣಿಸುವೆ, ಕಾದಾಡುವೆ
ಮತ್ತು ಇಲ್ಲಿಯೇ ಆಲಂಗಿಸಿಕೊಳ್ಳುವೆ
ಇದೇ ಹಾದಿ ತಾನೇ ನನ್ನ ಏಕೈಕೆ ಸರ್ವಸ್ವ
ಇದರ ಹೊರತು ಅನ್ಯಕ್ಕೆ ಕಣ್ಣಾಡಿಸುವುದೇಕೆ
ನಿದ್ದೆ ಮಂಪರಿಸಿದರೆ ನಿದ್ದೆಗೆ ಜಾರೋಣ
ಆಯಾಸಕ್ಕೆ ತುತ್ತಾಗಿದ್ದರೆ ಕುಳ್ಳಿರಿಸೋಣ

ಎಂದಾದರೊಮ್ಮೆ ಇದೇ ಹಾದಿಯಿಂದ
ನನ್ನೆಡೆಗೆ ಯಾರಾದರೂ ಬಂದು ಸಂತೈಸಬಹುದು
ಮರಳಿ ಎಚ್ಚರಿಸಿ ತನ್ನೊಡನೆಯೇ
ಅಂತಿಮ ಗುರಿಯೆಡೆಗೆ
ಕರೆದೊಯ್ಯಬಹುದು

ಎಂದಾದರೊಮ್ಮೆ ಯಾರಾದರೂ ಬರುವರು.

ಅಡಿ ಟಿಪ್ಪಣಿ

1) ’ಮನೋ-ಸಲ್ವಾ’ ಎಂಬುದು ಖುರಾನ್‌ನಲ್ಲಿ ಉಲ್ಲೇಖಗೊಂಡಿರುವ ಪದ. ಪ್ರವಾದಿ ಮೂಸಾ ಅವರ ಕಾಲದಲ್ಲಿ ಭೀಕರವಾದ ಬರಗಾಲ ಬಂದಿತ್ತು. ಮೂಸಾ ಅವರು ಅಲ್ಹಾಗೆ ಪ್ರಾರ್ಥಿಸಿದಾಗ ಸ್ವರ್ಗದಿಂದ ಜನರ ಹಸಿವನ್ನು ತಣಿಸುವ ಸಲುವಾಗಿ ಜೇನಿನಂತೆ ಸಿಹಿಯಾಗಿರುವ ಮತ್ತು ಹಾಲಿನಂತೆ ಬೆಳ್ಳಗಾಗಿರುವ ಪದಾರ್ಥವನ್ನು ಭೂಮಿಗೆ ಕಳುಹಿಸಲಾಯಿತು. ಇದರ ಜೊತೆಗೆ Quail (ಕ್ವೇಲ್) ಎಂಬ ಪಕ್ಷಿಯನ್ನು ಕಳುಹಿಸಲಾಗಿತ್ತು. ಸಾಂಕೇತಿಕವಾಗಿ ಇದೊಂದು ಅಲ್ಹಾನ ವರದಾನ ಎಂದೇ ಭಾವಿಸಲಾಗಿದೆ.

2) ಇರಾನ್‌ನಲ್ಲಿ ಅತಿ ಎತ್ತರವಾದ ಪರ್ವತವೇ ಅಲ್ವಂದ್.

ಮೂಲ ಉರ್ದು : ಖಲೀಲ್ ಮಾಮೂನ್
ಅನುವಾದ : ಡಾ. ತಸ್ನೀಮ್ ತಾಜ್


ಇದನ್ನೂ ಓದಿ: ನಾವೂ ನೋಡುತ್ತೇವೆ, ಸಾಕ್ಷಿಯಾಗುತ್ತೇವೆ: ಈ ದುರಿತ ಕಾಲದಲ್ಲಿ ಮತ್ತೆ ನೆನಪಾಗುವ ಫೈಜ್‌ ಕವನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...