Homeಮುಖಪುಟದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

ದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

- Advertisement -
- Advertisement -

“Time never dies, circle is not round”
ಸಿನೆಮಾ ರಚಿಸುವಲ್ಲಿ ಜಕ್ಸ್ಟಾಪೊಜಿಷನ್ (juxtaposition) ಎನ್ನುವ ಪದಕ್ಕೆ ತುಂಬಾ ಮಹತ್ವವಿದೆ. ಒಂದು ದೃಶ್ಯದ ನಂತರ ಇನ್ನೊಂದು ದೃಶ್ಯ, ಒಂದು ಶಾಟ್ ನಂತರ ಇನ್ನೊಂದು ದೃಶ್ಯ; ಈ ದೃಶ್ಯಗಳ ಸರಣಿಗಳೇ ಒಂದು ಕಥೆಯನ್ನು ಹೇಳುತ್ತವೆ. ಮೊದಲು ಬರುವ ದೃಶ್ಯ/ಶಾಟ್ ಮುಂದೆ ಬರುವ ದೃಶ್ಯ/ಶಾಟ್‍ಗೆ ಯಾವ ರೀತಿಯ ಸಂಬಂಧ ಹೊಂದಿರಬೇಕು? ಮುಂದಿನ ಶಾಟ್ ಕಥೆಯನ್ನು ಮುಂದುವರೆಸಲೇಬೇಕೆ? ನೇರಾನೇರ ಸಂಬಂಧ ಹೊಂದಿರಲೇಬೇಕೆ? ಇಲ್ಲಿ ನಾನು ಐಸೆನ್‍ಸ್ಟೇನ್ ಅವರ ಮೊಂಟಾಜ್ ಥಿಯರಿಯ ಬಗ್ಗೆ ಹೇಳುತ್ತಿಲ್ಲ. (ಮೋಂಟಾಜ್ ಥಿಯರಿಯ ಬಗ್ಗೆ ಇನ್ನೊಂದು ಕಡೆ ಬರೆದಿದ್ದೇನೆ.) ಕಥೆಯೊಂದು ಹಿಂದಿನಿಂದ ಮುಂದಕ್ಕೆ ಹೋಗಲೇಬೇಕೆ?

ನಮ್ಮ ಜೀವನದ ಕಥೆಯನ್ನು ನೆನಪಿಸಿಕೊಳ್ಳುವ. ಮೊದಲು ಯಾವ ಚಿತ್ರಗಳು ಕಣ್ಣುಮುಂದೆ ಮೂಡುತ್ತವೆ? ತುಂಬಾ ಮಹತ್ವದ ಸಂಗತಿಗಳೇ? ಮಹತ್ವವಲ್ಲದ ಸಂಗತಿಗಳೇ? ನಮ್ಮ ಜೀವನದಲ್ಲಿ ಏನೂ ಪರಿಣಾಮ ಬೀರದ ಒಂದು ಯಾವುದೋ ಚಿತ್ರವು ಮೂಡಿಬರುವುದೇ? ಯಾವ ಶಬ್ದಗಳು ನೆನಪಿನಲ್ಲಿಳಿದಿವೆ? ಯಾವ ಪದಗಳು? ಯಾವೆಲ್ಲ ವಾಸನೆಗಳು? ಎಲ್ಲದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವಿದೆಯೇ? ಸಂಬಂಧ ಕಾಣಿಸಿಕೊಳ್ಳದಿದ್ದರೂ ಯಾವುದೋ ಒಂದು ಸಂಬಂಧ ಇರಲೇಬೇಕಲ್ಲವೇ? ಯಾವುದೀ ಸಂಬಂಧ? ಯಾವುದೀ ಕಥೆ?

ಇನ್ನು ನಮ್ಮ ಸಮಾಜದ ಕಥೆಯನ್ನು ಅದೇ ರೀತಿ ಪರಿಶೀಲಿಸುವ. ಹೇಗೆ ರೂಪುಗೊಂಡಿತು ಈ ಸಮಾಜ, ಈ ದೇಶ? ಯುದ್ಧದಿಂದಲೋ, ಶಾಂತಿಯಿಂದಲೋ? ಬಲಿದಾನದಿಂದಲೋ? ಸ್ವಾರ್ಥದಿಂದಲೋ? ಇಂದು ಆಗುವ ಘಟನೆಗೂ ಮೊನ್ನೆ ಆದ ಘಟನೆಗೂ ನೂರಾರು ವರ್ಷ ಹಿಂದೆ ಎಲ್ಲೋ ಆದ ಘಟನೆಗೂ ಯಾವುದೇ ಸಂಬಂಧವಿದೆಯೇ? ಆ ಘಟನೆ ಇಂದು ಆದ ಘಟನೆಗೆ ಕಾರಣವಾಗಿದೆಯೇ? ಏನೆಲ್ಲ ಮಾಡಿದರೂ ಇತಿಹಾಸ ಮರುಕಳಿಸುತ್ತೆ ಎನ್ನುತ್ತಾರೆ, ಅದು ನಿಜವೇ? ಸಮಾಜದ ಆಗುಹೋಗುಗಳಲ್ಲಿ ಒಬ್ಬ ವ್ಯಕ್ತಿ ಎಂತಹ ಪಾತ್ರ ವಹಿಸುತ್ತಾನೆ? ಅವಳು ಅಥವಾ ಅವಳು ಪರಿಣಾಮಕಾರಿಯಾದ ಪಾತ್ರ ವಹಿಸಬಲ್ಲಳೇ? ಒಂದು ಪಾತ್ರ ವಹಿಸಬಲ್ಲಳು ಎನ್ನುವ ನಂಬಿಕೆ ಹುಸಿಯಾದರೆ?

ಇನ್ನು ದ್ವೇಷ ಮತ್ತು ಅದರೊಂದಿಗೆ ಬರುವ ಕಲಹ, ಯುದ್ಧಗಳಿಗೆ ಅರ್ಥವಿದೆಯೇ? ಇತಿಹಾಸದಿಂದ ನಾವು ಏನನ್ನೂ ಕಲಿಯುವುದೇ ಇಲ್ಲವೇ?
1994 ರಲ್ಲಿ ಬಿಡುಗಡೆಯಾದ ಚಿತ್ರ ಬಿಫೋರ್ ದ ರೇನ್ ಎನ್ನುವ ಚಿತ್ರ ಈ ಎಲ್ಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಇಂತಹ ಅನೇಕ ಪ್ರಶ್ನೆಗಳು ಮೂಡುವುದಂತೂ ನಿಜ.

ಈ ಚಿತ್ರವನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ; ಪದಗಳು (words), ಚಿತ್ರಗಳು (pictures) ಮತ್ತು ಚಹರೆಗಳು (faces). ಕೆಲವು ಮಕ್ಕಳು ಆಟವಾಡುತ್ತ ಒಂದು ಆಮೆಯನ್ನು ಒಂದು ಕಡೆ ಇರಿಸಿ, ಅದರ ಸುತ್ತಲೂ ಕಟ್ಟಿಗೆಗಳನ್ನಿಟ್ಟು, ಆ ಕಟ್ಟಿಗೆಗಳಿಗೆ ಬೆಂಕಿ ಹಚ್ಚುತ್ತಾರೆ. ಆಗ ಒಬ್ಬ ಬಾಲಕ ತನ್ನಲ್ಲಿದ್ದು ಜೀವಂತ ಗುಂಡುಗಳನ್ನು ಆ ಬೆಂಕಿಯಲ್ಲಿ ಹಾಕುತ್ತಾನೆ. ಆಮೆ ಸುಟ್ಟುಕರಕಲಾಗುತ್ತದೆ. ಈ ಮಕ್ಕಳ ಆಟದೊಂದಿಗೆ ಎರಡು ವರ್ಷಗಳಿಂದ ಮೌನವ್ರತ ಪಾಲಿಸುತ್ತಿರುವ ಒಬ್ಬ ಯುವ ಪಾದ್ರಿಯ ಕಥೆ ತೋರಿಸಲಾಗುತ್ತದೆ. ಒಬ್ಬ ಹದಿವಯಸ್ಸಿನ ಬಾಲಕಿ ಈ ಪಾದ್ರಿಯ ಕೊಠಡಿಯನ್ನು ಸೇರಿಕೊಳ್ಳುತ್ತಾಳೆ. ಅವಳನ್ನು ಹುಡುಕುತ್ತ ಗನ್‍ಗಳನ್ನು ಹಿಡಿದುಕೊಂಡು ಕೆಲವರು ಬರುವರು. ಅವಳು ಯಾರು, ಅವಳನ್ನು ಇವರೇಕೆ ಹುಡುಕುತ್ತಿದ್ದಾರೆ ಎನ್ನುವುದು ನಂತರ ತಿಳಿಯುತ್ತೆ.

ಎರಡನೇ ಭಾಗದಲ್ಲಿ ಅಲೆಕ್ಸಾಂಡರ್ ಕಿರ್ಕೊವ್ ಎನ್ನುವ ಯುದ್ಧಗಳನ್ನು ಕವರ್ ಮಾಡುವ ಛಾಯಾಚಿತ್ರಗ್ರಾಹಕ ಮತ್ತು ಅವನ ಗೆಳತಿ ಆ್ಯನ್‍ನ ಕಥೆಗೆ ಬರುತ್ತೇವೆ. ಆ್ಯನ್ ತನ್ನ ಗಂಡನನ್ನು ಬಿಟ್ಟು ಅಲೆಕ್ಸಾಂಡರ್ ಜೊತೆಗೆ ಹೋಗಬೇಕೆನ್ನುವ ಬಯಕೆ, ಗೊಂದಲದಲ್ಲಿದ್ದಾಳೆ. ಅಲೆಕ್ಸಾಂಡರ್ ಯಾವುದೋ ದ್ವಂದ್ವದಲ್ಲಿದ್ದಾನೆ. ತನ್ನ ತವರು ದೇಶ, ಮತ್ತು ಇತರ ಕಡೆ ನಡೆಯುತ್ತಿರುವ ಯುದ್ಧ, ತನ್ನ ಕಾರಣದಿಂದಾದ ಸಾವಿನಿಂದ ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿದ್ದಾನೆ. ಈ ಕಥೆಯೂ ಕೊನೆಗೊಳ್ಳುವುದು ಒಂದು ದುರಂತದಿಂದಲೇ.

ಮೂರನೇ ಭಾಗದಲ್ಲಿ ಅಲೆಕ್ಸಾಂಡರ್‍ನೊಂದಿಗೆ ಮತ್ತೇ ಮೆಸಿಡೋನಿಯಾ ದೇಶದ ಅಂತಃಕಲಹಕ್ಕೆ ಮರಳುತ್ತೇವೆ. ಅಲೆಕ್ಸಾಂಡರ್ ತನ್ನ ಹುಟ್ಟೂರಿಗೆ ಯಾವ ಕಾರಣಕ್ಕೆ ಬಂದನು ಎನ್ನುವುದು ತಿಳಿಯುವುದಿಲ್ಲ. ಅಲ್ಲಿ ತನ್ನ ಸಂಬಂಧಿಕರು, ತನ್ನ ಸಂಬಂಧಿಕರೊಂದಿಗೆ ದ್ವೇಷ ಸಾಧಿಸುತ್ತಿರುವ ಇನ್ನೊಂದು ಧರ್ಮದವರು ಇರುವ ಇನ್ನೊಂದೂರಿನಲ್ಲಿ ತನ್ನ ಗೆಳತಿ ಮತ್ತು ಅವರ ಕುಟುಂಬದವರನ್ನು ಭೇಟಿ ಆಗಬೇಕಿದೆ. ಅಂತರ್ ಯುದ್ಧದಿಂದ ಬಳಲುತ್ತಿರುವ ಈ ಪ್ರದೇಶದಲ್ಲಿ ಪ್ರೀತಿ, ಕರಳು ಸಂಬಂಧಕ್ಕಿಂತ ದ್ವೇಷವೇ ಮೇಲುಗೈ ಸಾಧಿಸಿದೆ. ಅಲ್ಲಿ ಇವನು ಸಾಧಿಸುವುದಾದರೂ ಏನು? ಸಾಧಿಸುವುದಕ್ಕಾಗಿ ಬಂದಿದ್ದಾನೆಯೇ? ಮರಳಿ ಮೌನವ್ರತ ಆಚರಿಸುತ್ತಿದ್ದ ಪಾದ್ರಿಗೆ ಆ ಬಾಲಕಿ ಭೇಟಿಯಾಗುವುದಕ್ಕೂ ಮುಂಚಿನ ಕಥೆಯನ್ನು ಹೇಳಲಾಗುತ್ತದೆ. ಆಗ ಸರ್ಕಲ್ ಈಸ್ ನಾಟ್ ರೌಂಡ್ ಎನ್ನುವ ವಾಕ್ಯಕ್ಕೆ ಅರ್ಥಬರುತ್ತೆ.

ದ್ವೇಷಕ್ಕಾಗಿ ತಮ್ಮ ಪ್ರೀತಪಾತ್ರರನ್ನೇ ಕೊಲ್ಲುವ ಪ್ರವೃತ್ತಿಗೆ ಕಾರಣಗಳನ್ನು ಈ ಚಿತ್ರ ಹುಡುಕುವುದಿಲ್ಲ. ಹದಗೆಟ್ಟಿರುವ ಪರಿಸ್ಥಿತಿಯ ಭಾಗಶಃ ಚಿತ್ರಣವನ್ನು ಮಾತ್ರ ನೀಡಲಾಗುತ್ತದೆ. ಇಂತಹ ಒಂದು ಪರಿಸ್ಥಿತಿಯಲ್ಲೂ ಪ್ರೀತಿ ಹುಟ್ಟಬಲ್ಲದೇ, ಇರುವ ಪ್ರೀತಿ ಮುಂದುವರೆಯುವುದೇ? ಆಳವಾದ ಪ್ರೀತಿ, ಉತ್ಕಟವಾದ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಇರಬಹುದು, ಆದರೆ ಪ್ರೀತಿಸುವವರನ್ನೇ ಹತ್ತಿಕ್ಕಿದರೆ ಪ್ರೀತಿಯನ್ನೂ ಕೊಂದಂತೆಯೇ?

ಎಷ್ಟಾದರೂ ಇದೊಂದು ಸಿನೆಮಾ, ಒಂದು ಚಿತ್ರಕ್ಕೆ ಇರಬೇಕಾದ ಸ್ಟ್ರಕ್ಚರ್‍ ಅನ್ನು ಪಾಲಿಸದೇ, ಸ್ವಾತಂತ್ರವನ್ನು ಬಳಸಿ ಯುದ್ಧ ಮತ್ತು ಪ್ರೀತಿಯ ಕಥೆಯನ್ನು ಹೆಣೆದಿರುವ ಈ ಚಿತ್ರ ಒಂದು ಅದ್ಭುತ ಕಲಾಕೃತಿ. ಈ ಚಿತ್ರದ ಹಿನ್ನೆಲೆ ಸಂಗೀತ (ಅತ್ಯಂತ ಮಿತವಾಗಿ ಬಳಸಿದ), ಕೇಳಿಬರುವ ನೈಜ ಶಬ್ದಗಳು ಚಿತ್ರದ ಆಳವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದು ಮೆಸೆಡೋನಿಯಾದ ನಿರ್ದೇಶಕ ಮ್ಯೂಚೊ ಮಾಂಚೆಸ್ಕಿಯ (Milcho Manchevski) ಮೊದಲ ಚಿತ್ರ. ತನ್ನ ಮೊದಲ ಚಿತ್ರದಲ್ಲೇ ಕಥನಗಾರಿಕೆಯಲ್ಲಿ ಆಟವಾಡಿ ಯಶಸ್ವಿಯಾಗಿದ್ದಾರೆ. ಕಥೆಗಾರಿಕೆಯಲ್ಲಿ ಈ ಚಿತ್ರವನ್ನು ಅನೇಕರು ಅಮೆರಿಕ ಕ್ವೆಂಟಿನ್ ಟ್ಯಾರಂಟಿನೋ ಅವರ ಪಲ್ಪ್ ಫಿಕ್ಷನ್ ಜೊತೆಗೆ ಹೋಲಿಸಿದ್ದಾರೆ. ಆದರೆ ಈ ಇಬ್ಬರೂ ದಿಗ್ಗಜರೂ ಪರಸ್ಪರ ಪ್ರಭಾವಿತರಾಗಿಲ್ಲ ಎನ್ನುವುದು ಸ್ಪಷ್ಟ. ಹಾಲಿವುಡ್‍ನ ಟ್ಯಾರಂಟಿನೊ ಕಥೆಗಾರಿಕೆಯಲ್ಲಿ ಆಟವಾಡುವುದಕ್ಕಾಗಿಯೇ ಆಟವಾಡಿದ್ದಾರೆ ಎನ್ನುವುದಾದರೆ, ಬಿಫೋರ್ ದ ರೇನ್ ಚಿತ್ರದಲ್ಲಿ ಮ್ಯಾಂಚೆಸ್ಕಿ, ಕಥೆಯ ಆಳವನ್ನು, ಆಯಾ ಪಾತ್ರಗಳ ಪಯಣದ ಆಳವನ್ನೂ, ದೇಶಕಾಲದ ಪಯಣ, ಯುದ್ಧ ದ್ವೇಷದ ಪರಿಣಾಮಗಳನ್ನು ಗಟ್ಟಿಯಾಗಿ ಅನುಭವಿಸಲು ತಮ್ಮ ಕಥನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ, ಏನೆಲ್ಲ ಆದರೂ ಎಲ್ಲರೂ ಇಂದೋ ನಾಳೆಯೋ ಬರಲಿರುವ ಮಳೆಯನ್ನೇ ಎದುರುನೋಡುತ್ತಿದ್ದಾರೆ. ಹಿಂಸೆ, ಪ್ರೀತಿ, ಹುಟ್ಟು, ಸಾವುಗಳೆಲ್ಲವೂ ಮಳೆಯಲ್ಲಿ ತೊಯ್ದುಹೋಗುವುದರ ಮೂಲಕ ಚಿತ್ರ ಕೊನೆಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...