Homeಮುಖಪುಟದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

ದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

- Advertisement -
- Advertisement -

“Time never dies, circle is not round”
ಸಿನೆಮಾ ರಚಿಸುವಲ್ಲಿ ಜಕ್ಸ್ಟಾಪೊಜಿಷನ್ (juxtaposition) ಎನ್ನುವ ಪದಕ್ಕೆ ತುಂಬಾ ಮಹತ್ವವಿದೆ. ಒಂದು ದೃಶ್ಯದ ನಂತರ ಇನ್ನೊಂದು ದೃಶ್ಯ, ಒಂದು ಶಾಟ್ ನಂತರ ಇನ್ನೊಂದು ದೃಶ್ಯ; ಈ ದೃಶ್ಯಗಳ ಸರಣಿಗಳೇ ಒಂದು ಕಥೆಯನ್ನು ಹೇಳುತ್ತವೆ. ಮೊದಲು ಬರುವ ದೃಶ್ಯ/ಶಾಟ್ ಮುಂದೆ ಬರುವ ದೃಶ್ಯ/ಶಾಟ್‍ಗೆ ಯಾವ ರೀತಿಯ ಸಂಬಂಧ ಹೊಂದಿರಬೇಕು? ಮುಂದಿನ ಶಾಟ್ ಕಥೆಯನ್ನು ಮುಂದುವರೆಸಲೇಬೇಕೆ? ನೇರಾನೇರ ಸಂಬಂಧ ಹೊಂದಿರಲೇಬೇಕೆ? ಇಲ್ಲಿ ನಾನು ಐಸೆನ್‍ಸ್ಟೇನ್ ಅವರ ಮೊಂಟಾಜ್ ಥಿಯರಿಯ ಬಗ್ಗೆ ಹೇಳುತ್ತಿಲ್ಲ. (ಮೋಂಟಾಜ್ ಥಿಯರಿಯ ಬಗ್ಗೆ ಇನ್ನೊಂದು ಕಡೆ ಬರೆದಿದ್ದೇನೆ.) ಕಥೆಯೊಂದು ಹಿಂದಿನಿಂದ ಮುಂದಕ್ಕೆ ಹೋಗಲೇಬೇಕೆ?

ನಮ್ಮ ಜೀವನದ ಕಥೆಯನ್ನು ನೆನಪಿಸಿಕೊಳ್ಳುವ. ಮೊದಲು ಯಾವ ಚಿತ್ರಗಳು ಕಣ್ಣುಮುಂದೆ ಮೂಡುತ್ತವೆ? ತುಂಬಾ ಮಹತ್ವದ ಸಂಗತಿಗಳೇ? ಮಹತ್ವವಲ್ಲದ ಸಂಗತಿಗಳೇ? ನಮ್ಮ ಜೀವನದಲ್ಲಿ ಏನೂ ಪರಿಣಾಮ ಬೀರದ ಒಂದು ಯಾವುದೋ ಚಿತ್ರವು ಮೂಡಿಬರುವುದೇ? ಯಾವ ಶಬ್ದಗಳು ನೆನಪಿನಲ್ಲಿಳಿದಿವೆ? ಯಾವ ಪದಗಳು? ಯಾವೆಲ್ಲ ವಾಸನೆಗಳು? ಎಲ್ಲದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವಿದೆಯೇ? ಸಂಬಂಧ ಕಾಣಿಸಿಕೊಳ್ಳದಿದ್ದರೂ ಯಾವುದೋ ಒಂದು ಸಂಬಂಧ ಇರಲೇಬೇಕಲ್ಲವೇ? ಯಾವುದೀ ಸಂಬಂಧ? ಯಾವುದೀ ಕಥೆ?

ಇನ್ನು ನಮ್ಮ ಸಮಾಜದ ಕಥೆಯನ್ನು ಅದೇ ರೀತಿ ಪರಿಶೀಲಿಸುವ. ಹೇಗೆ ರೂಪುಗೊಂಡಿತು ಈ ಸಮಾಜ, ಈ ದೇಶ? ಯುದ್ಧದಿಂದಲೋ, ಶಾಂತಿಯಿಂದಲೋ? ಬಲಿದಾನದಿಂದಲೋ? ಸ್ವಾರ್ಥದಿಂದಲೋ? ಇಂದು ಆಗುವ ಘಟನೆಗೂ ಮೊನ್ನೆ ಆದ ಘಟನೆಗೂ ನೂರಾರು ವರ್ಷ ಹಿಂದೆ ಎಲ್ಲೋ ಆದ ಘಟನೆಗೂ ಯಾವುದೇ ಸಂಬಂಧವಿದೆಯೇ? ಆ ಘಟನೆ ಇಂದು ಆದ ಘಟನೆಗೆ ಕಾರಣವಾಗಿದೆಯೇ? ಏನೆಲ್ಲ ಮಾಡಿದರೂ ಇತಿಹಾಸ ಮರುಕಳಿಸುತ್ತೆ ಎನ್ನುತ್ತಾರೆ, ಅದು ನಿಜವೇ? ಸಮಾಜದ ಆಗುಹೋಗುಗಳಲ್ಲಿ ಒಬ್ಬ ವ್ಯಕ್ತಿ ಎಂತಹ ಪಾತ್ರ ವಹಿಸುತ್ತಾನೆ? ಅವಳು ಅಥವಾ ಅವಳು ಪರಿಣಾಮಕಾರಿಯಾದ ಪಾತ್ರ ವಹಿಸಬಲ್ಲಳೇ? ಒಂದು ಪಾತ್ರ ವಹಿಸಬಲ್ಲಳು ಎನ್ನುವ ನಂಬಿಕೆ ಹುಸಿಯಾದರೆ?

ಇನ್ನು ದ್ವೇಷ ಮತ್ತು ಅದರೊಂದಿಗೆ ಬರುವ ಕಲಹ, ಯುದ್ಧಗಳಿಗೆ ಅರ್ಥವಿದೆಯೇ? ಇತಿಹಾಸದಿಂದ ನಾವು ಏನನ್ನೂ ಕಲಿಯುವುದೇ ಇಲ್ಲವೇ?
1994 ರಲ್ಲಿ ಬಿಡುಗಡೆಯಾದ ಚಿತ್ರ ಬಿಫೋರ್ ದ ರೇನ್ ಎನ್ನುವ ಚಿತ್ರ ಈ ಎಲ್ಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಇಂತಹ ಅನೇಕ ಪ್ರಶ್ನೆಗಳು ಮೂಡುವುದಂತೂ ನಿಜ.

ಈ ಚಿತ್ರವನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ; ಪದಗಳು (words), ಚಿತ್ರಗಳು (pictures) ಮತ್ತು ಚಹರೆಗಳು (faces). ಕೆಲವು ಮಕ್ಕಳು ಆಟವಾಡುತ್ತ ಒಂದು ಆಮೆಯನ್ನು ಒಂದು ಕಡೆ ಇರಿಸಿ, ಅದರ ಸುತ್ತಲೂ ಕಟ್ಟಿಗೆಗಳನ್ನಿಟ್ಟು, ಆ ಕಟ್ಟಿಗೆಗಳಿಗೆ ಬೆಂಕಿ ಹಚ್ಚುತ್ತಾರೆ. ಆಗ ಒಬ್ಬ ಬಾಲಕ ತನ್ನಲ್ಲಿದ್ದು ಜೀವಂತ ಗುಂಡುಗಳನ್ನು ಆ ಬೆಂಕಿಯಲ್ಲಿ ಹಾಕುತ್ತಾನೆ. ಆಮೆ ಸುಟ್ಟುಕರಕಲಾಗುತ್ತದೆ. ಈ ಮಕ್ಕಳ ಆಟದೊಂದಿಗೆ ಎರಡು ವರ್ಷಗಳಿಂದ ಮೌನವ್ರತ ಪಾಲಿಸುತ್ತಿರುವ ಒಬ್ಬ ಯುವ ಪಾದ್ರಿಯ ಕಥೆ ತೋರಿಸಲಾಗುತ್ತದೆ. ಒಬ್ಬ ಹದಿವಯಸ್ಸಿನ ಬಾಲಕಿ ಈ ಪಾದ್ರಿಯ ಕೊಠಡಿಯನ್ನು ಸೇರಿಕೊಳ್ಳುತ್ತಾಳೆ. ಅವಳನ್ನು ಹುಡುಕುತ್ತ ಗನ್‍ಗಳನ್ನು ಹಿಡಿದುಕೊಂಡು ಕೆಲವರು ಬರುವರು. ಅವಳು ಯಾರು, ಅವಳನ್ನು ಇವರೇಕೆ ಹುಡುಕುತ್ತಿದ್ದಾರೆ ಎನ್ನುವುದು ನಂತರ ತಿಳಿಯುತ್ತೆ.

ಎರಡನೇ ಭಾಗದಲ್ಲಿ ಅಲೆಕ್ಸಾಂಡರ್ ಕಿರ್ಕೊವ್ ಎನ್ನುವ ಯುದ್ಧಗಳನ್ನು ಕವರ್ ಮಾಡುವ ಛಾಯಾಚಿತ್ರಗ್ರಾಹಕ ಮತ್ತು ಅವನ ಗೆಳತಿ ಆ್ಯನ್‍ನ ಕಥೆಗೆ ಬರುತ್ತೇವೆ. ಆ್ಯನ್ ತನ್ನ ಗಂಡನನ್ನು ಬಿಟ್ಟು ಅಲೆಕ್ಸಾಂಡರ್ ಜೊತೆಗೆ ಹೋಗಬೇಕೆನ್ನುವ ಬಯಕೆ, ಗೊಂದಲದಲ್ಲಿದ್ದಾಳೆ. ಅಲೆಕ್ಸಾಂಡರ್ ಯಾವುದೋ ದ್ವಂದ್ವದಲ್ಲಿದ್ದಾನೆ. ತನ್ನ ತವರು ದೇಶ, ಮತ್ತು ಇತರ ಕಡೆ ನಡೆಯುತ್ತಿರುವ ಯುದ್ಧ, ತನ್ನ ಕಾರಣದಿಂದಾದ ಸಾವಿನಿಂದ ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿದ್ದಾನೆ. ಈ ಕಥೆಯೂ ಕೊನೆಗೊಳ್ಳುವುದು ಒಂದು ದುರಂತದಿಂದಲೇ.

ಮೂರನೇ ಭಾಗದಲ್ಲಿ ಅಲೆಕ್ಸಾಂಡರ್‍ನೊಂದಿಗೆ ಮತ್ತೇ ಮೆಸಿಡೋನಿಯಾ ದೇಶದ ಅಂತಃಕಲಹಕ್ಕೆ ಮರಳುತ್ತೇವೆ. ಅಲೆಕ್ಸಾಂಡರ್ ತನ್ನ ಹುಟ್ಟೂರಿಗೆ ಯಾವ ಕಾರಣಕ್ಕೆ ಬಂದನು ಎನ್ನುವುದು ತಿಳಿಯುವುದಿಲ್ಲ. ಅಲ್ಲಿ ತನ್ನ ಸಂಬಂಧಿಕರು, ತನ್ನ ಸಂಬಂಧಿಕರೊಂದಿಗೆ ದ್ವೇಷ ಸಾಧಿಸುತ್ತಿರುವ ಇನ್ನೊಂದು ಧರ್ಮದವರು ಇರುವ ಇನ್ನೊಂದೂರಿನಲ್ಲಿ ತನ್ನ ಗೆಳತಿ ಮತ್ತು ಅವರ ಕುಟುಂಬದವರನ್ನು ಭೇಟಿ ಆಗಬೇಕಿದೆ. ಅಂತರ್ ಯುದ್ಧದಿಂದ ಬಳಲುತ್ತಿರುವ ಈ ಪ್ರದೇಶದಲ್ಲಿ ಪ್ರೀತಿ, ಕರಳು ಸಂಬಂಧಕ್ಕಿಂತ ದ್ವೇಷವೇ ಮೇಲುಗೈ ಸಾಧಿಸಿದೆ. ಅಲ್ಲಿ ಇವನು ಸಾಧಿಸುವುದಾದರೂ ಏನು? ಸಾಧಿಸುವುದಕ್ಕಾಗಿ ಬಂದಿದ್ದಾನೆಯೇ? ಮರಳಿ ಮೌನವ್ರತ ಆಚರಿಸುತ್ತಿದ್ದ ಪಾದ್ರಿಗೆ ಆ ಬಾಲಕಿ ಭೇಟಿಯಾಗುವುದಕ್ಕೂ ಮುಂಚಿನ ಕಥೆಯನ್ನು ಹೇಳಲಾಗುತ್ತದೆ. ಆಗ ಸರ್ಕಲ್ ಈಸ್ ನಾಟ್ ರೌಂಡ್ ಎನ್ನುವ ವಾಕ್ಯಕ್ಕೆ ಅರ್ಥಬರುತ್ತೆ.

ದ್ವೇಷಕ್ಕಾಗಿ ತಮ್ಮ ಪ್ರೀತಪಾತ್ರರನ್ನೇ ಕೊಲ್ಲುವ ಪ್ರವೃತ್ತಿಗೆ ಕಾರಣಗಳನ್ನು ಈ ಚಿತ್ರ ಹುಡುಕುವುದಿಲ್ಲ. ಹದಗೆಟ್ಟಿರುವ ಪರಿಸ್ಥಿತಿಯ ಭಾಗಶಃ ಚಿತ್ರಣವನ್ನು ಮಾತ್ರ ನೀಡಲಾಗುತ್ತದೆ. ಇಂತಹ ಒಂದು ಪರಿಸ್ಥಿತಿಯಲ್ಲೂ ಪ್ರೀತಿ ಹುಟ್ಟಬಲ್ಲದೇ, ಇರುವ ಪ್ರೀತಿ ಮುಂದುವರೆಯುವುದೇ? ಆಳವಾದ ಪ್ರೀತಿ, ಉತ್ಕಟವಾದ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಇರಬಹುದು, ಆದರೆ ಪ್ರೀತಿಸುವವರನ್ನೇ ಹತ್ತಿಕ್ಕಿದರೆ ಪ್ರೀತಿಯನ್ನೂ ಕೊಂದಂತೆಯೇ?

ಎಷ್ಟಾದರೂ ಇದೊಂದು ಸಿನೆಮಾ, ಒಂದು ಚಿತ್ರಕ್ಕೆ ಇರಬೇಕಾದ ಸ್ಟ್ರಕ್ಚರ್‍ ಅನ್ನು ಪಾಲಿಸದೇ, ಸ್ವಾತಂತ್ರವನ್ನು ಬಳಸಿ ಯುದ್ಧ ಮತ್ತು ಪ್ರೀತಿಯ ಕಥೆಯನ್ನು ಹೆಣೆದಿರುವ ಈ ಚಿತ್ರ ಒಂದು ಅದ್ಭುತ ಕಲಾಕೃತಿ. ಈ ಚಿತ್ರದ ಹಿನ್ನೆಲೆ ಸಂಗೀತ (ಅತ್ಯಂತ ಮಿತವಾಗಿ ಬಳಸಿದ), ಕೇಳಿಬರುವ ನೈಜ ಶಬ್ದಗಳು ಚಿತ್ರದ ಆಳವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದು ಮೆಸೆಡೋನಿಯಾದ ನಿರ್ದೇಶಕ ಮ್ಯೂಚೊ ಮಾಂಚೆಸ್ಕಿಯ (Milcho Manchevski) ಮೊದಲ ಚಿತ್ರ. ತನ್ನ ಮೊದಲ ಚಿತ್ರದಲ್ಲೇ ಕಥನಗಾರಿಕೆಯಲ್ಲಿ ಆಟವಾಡಿ ಯಶಸ್ವಿಯಾಗಿದ್ದಾರೆ. ಕಥೆಗಾರಿಕೆಯಲ್ಲಿ ಈ ಚಿತ್ರವನ್ನು ಅನೇಕರು ಅಮೆರಿಕ ಕ್ವೆಂಟಿನ್ ಟ್ಯಾರಂಟಿನೋ ಅವರ ಪಲ್ಪ್ ಫಿಕ್ಷನ್ ಜೊತೆಗೆ ಹೋಲಿಸಿದ್ದಾರೆ. ಆದರೆ ಈ ಇಬ್ಬರೂ ದಿಗ್ಗಜರೂ ಪರಸ್ಪರ ಪ್ರಭಾವಿತರಾಗಿಲ್ಲ ಎನ್ನುವುದು ಸ್ಪಷ್ಟ. ಹಾಲಿವುಡ್‍ನ ಟ್ಯಾರಂಟಿನೊ ಕಥೆಗಾರಿಕೆಯಲ್ಲಿ ಆಟವಾಡುವುದಕ್ಕಾಗಿಯೇ ಆಟವಾಡಿದ್ದಾರೆ ಎನ್ನುವುದಾದರೆ, ಬಿಫೋರ್ ದ ರೇನ್ ಚಿತ್ರದಲ್ಲಿ ಮ್ಯಾಂಚೆಸ್ಕಿ, ಕಥೆಯ ಆಳವನ್ನು, ಆಯಾ ಪಾತ್ರಗಳ ಪಯಣದ ಆಳವನ್ನೂ, ದೇಶಕಾಲದ ಪಯಣ, ಯುದ್ಧ ದ್ವೇಷದ ಪರಿಣಾಮಗಳನ್ನು ಗಟ್ಟಿಯಾಗಿ ಅನುಭವಿಸಲು ತಮ್ಮ ಕಥನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ, ಏನೆಲ್ಲ ಆದರೂ ಎಲ್ಲರೂ ಇಂದೋ ನಾಳೆಯೋ ಬರಲಿರುವ ಮಳೆಯನ್ನೇ ಎದುರುನೋಡುತ್ತಿದ್ದಾರೆ. ಹಿಂಸೆ, ಪ್ರೀತಿ, ಹುಟ್ಟು, ಸಾವುಗಳೆಲ್ಲವೂ ಮಳೆಯಲ್ಲಿ ತೊಯ್ದುಹೋಗುವುದರ ಮೂಲಕ ಚಿತ್ರ ಕೊನೆಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...