Homeಮುಖಪುಟದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

ದ್ವೇಷ, ಯುದ್ಧ, ಪ್ರೀತಿ ಮತ್ತು ಮಳೆ : ಬಿಫೋರ್ ದ ರೇನ್ ಎಂಬ ಕಲಾಕೃತಿ

- Advertisement -
- Advertisement -

“Time never dies, circle is not round”
ಸಿನೆಮಾ ರಚಿಸುವಲ್ಲಿ ಜಕ್ಸ್ಟಾಪೊಜಿಷನ್ (juxtaposition) ಎನ್ನುವ ಪದಕ್ಕೆ ತುಂಬಾ ಮಹತ್ವವಿದೆ. ಒಂದು ದೃಶ್ಯದ ನಂತರ ಇನ್ನೊಂದು ದೃಶ್ಯ, ಒಂದು ಶಾಟ್ ನಂತರ ಇನ್ನೊಂದು ದೃಶ್ಯ; ಈ ದೃಶ್ಯಗಳ ಸರಣಿಗಳೇ ಒಂದು ಕಥೆಯನ್ನು ಹೇಳುತ್ತವೆ. ಮೊದಲು ಬರುವ ದೃಶ್ಯ/ಶಾಟ್ ಮುಂದೆ ಬರುವ ದೃಶ್ಯ/ಶಾಟ್‍ಗೆ ಯಾವ ರೀತಿಯ ಸಂಬಂಧ ಹೊಂದಿರಬೇಕು? ಮುಂದಿನ ಶಾಟ್ ಕಥೆಯನ್ನು ಮುಂದುವರೆಸಲೇಬೇಕೆ? ನೇರಾನೇರ ಸಂಬಂಧ ಹೊಂದಿರಲೇಬೇಕೆ? ಇಲ್ಲಿ ನಾನು ಐಸೆನ್‍ಸ್ಟೇನ್ ಅವರ ಮೊಂಟಾಜ್ ಥಿಯರಿಯ ಬಗ್ಗೆ ಹೇಳುತ್ತಿಲ್ಲ. (ಮೋಂಟಾಜ್ ಥಿಯರಿಯ ಬಗ್ಗೆ ಇನ್ನೊಂದು ಕಡೆ ಬರೆದಿದ್ದೇನೆ.) ಕಥೆಯೊಂದು ಹಿಂದಿನಿಂದ ಮುಂದಕ್ಕೆ ಹೋಗಲೇಬೇಕೆ?

ನಮ್ಮ ಜೀವನದ ಕಥೆಯನ್ನು ನೆನಪಿಸಿಕೊಳ್ಳುವ. ಮೊದಲು ಯಾವ ಚಿತ್ರಗಳು ಕಣ್ಣುಮುಂದೆ ಮೂಡುತ್ತವೆ? ತುಂಬಾ ಮಹತ್ವದ ಸಂಗತಿಗಳೇ? ಮಹತ್ವವಲ್ಲದ ಸಂಗತಿಗಳೇ? ನಮ್ಮ ಜೀವನದಲ್ಲಿ ಏನೂ ಪರಿಣಾಮ ಬೀರದ ಒಂದು ಯಾವುದೋ ಚಿತ್ರವು ಮೂಡಿಬರುವುದೇ? ಯಾವ ಶಬ್ದಗಳು ನೆನಪಿನಲ್ಲಿಳಿದಿವೆ? ಯಾವ ಪದಗಳು? ಯಾವೆಲ್ಲ ವಾಸನೆಗಳು? ಎಲ್ಲದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧವಿದೆಯೇ? ಸಂಬಂಧ ಕಾಣಿಸಿಕೊಳ್ಳದಿದ್ದರೂ ಯಾವುದೋ ಒಂದು ಸಂಬಂಧ ಇರಲೇಬೇಕಲ್ಲವೇ? ಯಾವುದೀ ಸಂಬಂಧ? ಯಾವುದೀ ಕಥೆ?

ಇನ್ನು ನಮ್ಮ ಸಮಾಜದ ಕಥೆಯನ್ನು ಅದೇ ರೀತಿ ಪರಿಶೀಲಿಸುವ. ಹೇಗೆ ರೂಪುಗೊಂಡಿತು ಈ ಸಮಾಜ, ಈ ದೇಶ? ಯುದ್ಧದಿಂದಲೋ, ಶಾಂತಿಯಿಂದಲೋ? ಬಲಿದಾನದಿಂದಲೋ? ಸ್ವಾರ್ಥದಿಂದಲೋ? ಇಂದು ಆಗುವ ಘಟನೆಗೂ ಮೊನ್ನೆ ಆದ ಘಟನೆಗೂ ನೂರಾರು ವರ್ಷ ಹಿಂದೆ ಎಲ್ಲೋ ಆದ ಘಟನೆಗೂ ಯಾವುದೇ ಸಂಬಂಧವಿದೆಯೇ? ಆ ಘಟನೆ ಇಂದು ಆದ ಘಟನೆಗೆ ಕಾರಣವಾಗಿದೆಯೇ? ಏನೆಲ್ಲ ಮಾಡಿದರೂ ಇತಿಹಾಸ ಮರುಕಳಿಸುತ್ತೆ ಎನ್ನುತ್ತಾರೆ, ಅದು ನಿಜವೇ? ಸಮಾಜದ ಆಗುಹೋಗುಗಳಲ್ಲಿ ಒಬ್ಬ ವ್ಯಕ್ತಿ ಎಂತಹ ಪಾತ್ರ ವಹಿಸುತ್ತಾನೆ? ಅವಳು ಅಥವಾ ಅವಳು ಪರಿಣಾಮಕಾರಿಯಾದ ಪಾತ್ರ ವಹಿಸಬಲ್ಲಳೇ? ಒಂದು ಪಾತ್ರ ವಹಿಸಬಲ್ಲಳು ಎನ್ನುವ ನಂಬಿಕೆ ಹುಸಿಯಾದರೆ?

ಇನ್ನು ದ್ವೇಷ ಮತ್ತು ಅದರೊಂದಿಗೆ ಬರುವ ಕಲಹ, ಯುದ್ಧಗಳಿಗೆ ಅರ್ಥವಿದೆಯೇ? ಇತಿಹಾಸದಿಂದ ನಾವು ಏನನ್ನೂ ಕಲಿಯುವುದೇ ಇಲ್ಲವೇ?
1994 ರಲ್ಲಿ ಬಿಡುಗಡೆಯಾದ ಚಿತ್ರ ಬಿಫೋರ್ ದ ರೇನ್ ಎನ್ನುವ ಚಿತ್ರ ಈ ಎಲ್ಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ ಇಂತಹ ಅನೇಕ ಪ್ರಶ್ನೆಗಳು ಮೂಡುವುದಂತೂ ನಿಜ.

ಈ ಚಿತ್ರವನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ; ಪದಗಳು (words), ಚಿತ್ರಗಳು (pictures) ಮತ್ತು ಚಹರೆಗಳು (faces). ಕೆಲವು ಮಕ್ಕಳು ಆಟವಾಡುತ್ತ ಒಂದು ಆಮೆಯನ್ನು ಒಂದು ಕಡೆ ಇರಿಸಿ, ಅದರ ಸುತ್ತಲೂ ಕಟ್ಟಿಗೆಗಳನ್ನಿಟ್ಟು, ಆ ಕಟ್ಟಿಗೆಗಳಿಗೆ ಬೆಂಕಿ ಹಚ್ಚುತ್ತಾರೆ. ಆಗ ಒಬ್ಬ ಬಾಲಕ ತನ್ನಲ್ಲಿದ್ದು ಜೀವಂತ ಗುಂಡುಗಳನ್ನು ಆ ಬೆಂಕಿಯಲ್ಲಿ ಹಾಕುತ್ತಾನೆ. ಆಮೆ ಸುಟ್ಟುಕರಕಲಾಗುತ್ತದೆ. ಈ ಮಕ್ಕಳ ಆಟದೊಂದಿಗೆ ಎರಡು ವರ್ಷಗಳಿಂದ ಮೌನವ್ರತ ಪಾಲಿಸುತ್ತಿರುವ ಒಬ್ಬ ಯುವ ಪಾದ್ರಿಯ ಕಥೆ ತೋರಿಸಲಾಗುತ್ತದೆ. ಒಬ್ಬ ಹದಿವಯಸ್ಸಿನ ಬಾಲಕಿ ಈ ಪಾದ್ರಿಯ ಕೊಠಡಿಯನ್ನು ಸೇರಿಕೊಳ್ಳುತ್ತಾಳೆ. ಅವಳನ್ನು ಹುಡುಕುತ್ತ ಗನ್‍ಗಳನ್ನು ಹಿಡಿದುಕೊಂಡು ಕೆಲವರು ಬರುವರು. ಅವಳು ಯಾರು, ಅವಳನ್ನು ಇವರೇಕೆ ಹುಡುಕುತ್ತಿದ್ದಾರೆ ಎನ್ನುವುದು ನಂತರ ತಿಳಿಯುತ್ತೆ.

ಎರಡನೇ ಭಾಗದಲ್ಲಿ ಅಲೆಕ್ಸಾಂಡರ್ ಕಿರ್ಕೊವ್ ಎನ್ನುವ ಯುದ್ಧಗಳನ್ನು ಕವರ್ ಮಾಡುವ ಛಾಯಾಚಿತ್ರಗ್ರಾಹಕ ಮತ್ತು ಅವನ ಗೆಳತಿ ಆ್ಯನ್‍ನ ಕಥೆಗೆ ಬರುತ್ತೇವೆ. ಆ್ಯನ್ ತನ್ನ ಗಂಡನನ್ನು ಬಿಟ್ಟು ಅಲೆಕ್ಸಾಂಡರ್ ಜೊತೆಗೆ ಹೋಗಬೇಕೆನ್ನುವ ಬಯಕೆ, ಗೊಂದಲದಲ್ಲಿದ್ದಾಳೆ. ಅಲೆಕ್ಸಾಂಡರ್ ಯಾವುದೋ ದ್ವಂದ್ವದಲ್ಲಿದ್ದಾನೆ. ತನ್ನ ತವರು ದೇಶ, ಮತ್ತು ಇತರ ಕಡೆ ನಡೆಯುತ್ತಿರುವ ಯುದ್ಧ, ತನ್ನ ಕಾರಣದಿಂದಾದ ಸಾವಿನಿಂದ ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿದ್ದಾನೆ. ಈ ಕಥೆಯೂ ಕೊನೆಗೊಳ್ಳುವುದು ಒಂದು ದುರಂತದಿಂದಲೇ.

ಮೂರನೇ ಭಾಗದಲ್ಲಿ ಅಲೆಕ್ಸಾಂಡರ್‍ನೊಂದಿಗೆ ಮತ್ತೇ ಮೆಸಿಡೋನಿಯಾ ದೇಶದ ಅಂತಃಕಲಹಕ್ಕೆ ಮರಳುತ್ತೇವೆ. ಅಲೆಕ್ಸಾಂಡರ್ ತನ್ನ ಹುಟ್ಟೂರಿಗೆ ಯಾವ ಕಾರಣಕ್ಕೆ ಬಂದನು ಎನ್ನುವುದು ತಿಳಿಯುವುದಿಲ್ಲ. ಅಲ್ಲಿ ತನ್ನ ಸಂಬಂಧಿಕರು, ತನ್ನ ಸಂಬಂಧಿಕರೊಂದಿಗೆ ದ್ವೇಷ ಸಾಧಿಸುತ್ತಿರುವ ಇನ್ನೊಂದು ಧರ್ಮದವರು ಇರುವ ಇನ್ನೊಂದೂರಿನಲ್ಲಿ ತನ್ನ ಗೆಳತಿ ಮತ್ತು ಅವರ ಕುಟುಂಬದವರನ್ನು ಭೇಟಿ ಆಗಬೇಕಿದೆ. ಅಂತರ್ ಯುದ್ಧದಿಂದ ಬಳಲುತ್ತಿರುವ ಈ ಪ್ರದೇಶದಲ್ಲಿ ಪ್ರೀತಿ, ಕರಳು ಸಂಬಂಧಕ್ಕಿಂತ ದ್ವೇಷವೇ ಮೇಲುಗೈ ಸಾಧಿಸಿದೆ. ಅಲ್ಲಿ ಇವನು ಸಾಧಿಸುವುದಾದರೂ ಏನು? ಸಾಧಿಸುವುದಕ್ಕಾಗಿ ಬಂದಿದ್ದಾನೆಯೇ? ಮರಳಿ ಮೌನವ್ರತ ಆಚರಿಸುತ್ತಿದ್ದ ಪಾದ್ರಿಗೆ ಆ ಬಾಲಕಿ ಭೇಟಿಯಾಗುವುದಕ್ಕೂ ಮುಂಚಿನ ಕಥೆಯನ್ನು ಹೇಳಲಾಗುತ್ತದೆ. ಆಗ ಸರ್ಕಲ್ ಈಸ್ ನಾಟ್ ರೌಂಡ್ ಎನ್ನುವ ವಾಕ್ಯಕ್ಕೆ ಅರ್ಥಬರುತ್ತೆ.

ದ್ವೇಷಕ್ಕಾಗಿ ತಮ್ಮ ಪ್ರೀತಪಾತ್ರರನ್ನೇ ಕೊಲ್ಲುವ ಪ್ರವೃತ್ತಿಗೆ ಕಾರಣಗಳನ್ನು ಈ ಚಿತ್ರ ಹುಡುಕುವುದಿಲ್ಲ. ಹದಗೆಟ್ಟಿರುವ ಪರಿಸ್ಥಿತಿಯ ಭಾಗಶಃ ಚಿತ್ರಣವನ್ನು ಮಾತ್ರ ನೀಡಲಾಗುತ್ತದೆ. ಇಂತಹ ಒಂದು ಪರಿಸ್ಥಿತಿಯಲ್ಲೂ ಪ್ರೀತಿ ಹುಟ್ಟಬಲ್ಲದೇ, ಇರುವ ಪ್ರೀತಿ ಮುಂದುವರೆಯುವುದೇ? ಆಳವಾದ ಪ್ರೀತಿ, ಉತ್ಕಟವಾದ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಾಗದೇ ಇರಬಹುದು, ಆದರೆ ಪ್ರೀತಿಸುವವರನ್ನೇ ಹತ್ತಿಕ್ಕಿದರೆ ಪ್ರೀತಿಯನ್ನೂ ಕೊಂದಂತೆಯೇ?

ಎಷ್ಟಾದರೂ ಇದೊಂದು ಸಿನೆಮಾ, ಒಂದು ಚಿತ್ರಕ್ಕೆ ಇರಬೇಕಾದ ಸ್ಟ್ರಕ್ಚರ್‍ ಅನ್ನು ಪಾಲಿಸದೇ, ಸ್ವಾತಂತ್ರವನ್ನು ಬಳಸಿ ಯುದ್ಧ ಮತ್ತು ಪ್ರೀತಿಯ ಕಥೆಯನ್ನು ಹೆಣೆದಿರುವ ಈ ಚಿತ್ರ ಒಂದು ಅದ್ಭುತ ಕಲಾಕೃತಿ. ಈ ಚಿತ್ರದ ಹಿನ್ನೆಲೆ ಸಂಗೀತ (ಅತ್ಯಂತ ಮಿತವಾಗಿ ಬಳಸಿದ), ಕೇಳಿಬರುವ ನೈಜ ಶಬ್ದಗಳು ಚಿತ್ರದ ಆಳವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಇದು ಮೆಸೆಡೋನಿಯಾದ ನಿರ್ದೇಶಕ ಮ್ಯೂಚೊ ಮಾಂಚೆಸ್ಕಿಯ (Milcho Manchevski) ಮೊದಲ ಚಿತ್ರ. ತನ್ನ ಮೊದಲ ಚಿತ್ರದಲ್ಲೇ ಕಥನಗಾರಿಕೆಯಲ್ಲಿ ಆಟವಾಡಿ ಯಶಸ್ವಿಯಾಗಿದ್ದಾರೆ. ಕಥೆಗಾರಿಕೆಯಲ್ಲಿ ಈ ಚಿತ್ರವನ್ನು ಅನೇಕರು ಅಮೆರಿಕ ಕ್ವೆಂಟಿನ್ ಟ್ಯಾರಂಟಿನೋ ಅವರ ಪಲ್ಪ್ ಫಿಕ್ಷನ್ ಜೊತೆಗೆ ಹೋಲಿಸಿದ್ದಾರೆ. ಆದರೆ ಈ ಇಬ್ಬರೂ ದಿಗ್ಗಜರೂ ಪರಸ್ಪರ ಪ್ರಭಾವಿತರಾಗಿಲ್ಲ ಎನ್ನುವುದು ಸ್ಪಷ್ಟ. ಹಾಲಿವುಡ್‍ನ ಟ್ಯಾರಂಟಿನೊ ಕಥೆಗಾರಿಕೆಯಲ್ಲಿ ಆಟವಾಡುವುದಕ್ಕಾಗಿಯೇ ಆಟವಾಡಿದ್ದಾರೆ ಎನ್ನುವುದಾದರೆ, ಬಿಫೋರ್ ದ ರೇನ್ ಚಿತ್ರದಲ್ಲಿ ಮ್ಯಾಂಚೆಸ್ಕಿ, ಕಥೆಯ ಆಳವನ್ನು, ಆಯಾ ಪಾತ್ರಗಳ ಪಯಣದ ಆಳವನ್ನೂ, ದೇಶಕಾಲದ ಪಯಣ, ಯುದ್ಧ ದ್ವೇಷದ ಪರಿಣಾಮಗಳನ್ನು ಗಟ್ಟಿಯಾಗಿ ಅನುಭವಿಸಲು ತಮ್ಮ ಕಥನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ.

ಚಿತ್ರದ ಹೆಸರೇ ಹೇಳುವಂತೆ, ಏನೆಲ್ಲ ಆದರೂ ಎಲ್ಲರೂ ಇಂದೋ ನಾಳೆಯೋ ಬರಲಿರುವ ಮಳೆಯನ್ನೇ ಎದುರುನೋಡುತ್ತಿದ್ದಾರೆ. ಹಿಂಸೆ, ಪ್ರೀತಿ, ಹುಟ್ಟು, ಸಾವುಗಳೆಲ್ಲವೂ ಮಳೆಯಲ್ಲಿ ತೊಯ್ದುಹೋಗುವುದರ ಮೂಲಕ ಚಿತ್ರ ಕೊನೆಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...