Homeಚಳವಳಿಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

ಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

- Advertisement -
- Advertisement -

| ರಾಹುಲ್ ವತ್ಸ್ |
ಅನುವಾದ: ಮಲ್ಲನಗೌಡರ್ ಪಿ.ಕೆ
ಇವತ್ತು ಏಪ್ರಿಲ್ 29, ವಿಶಿಷ್ಟ ಕಾರಣಗಳಿಗಾಗಿ ದೇಶದ ಗಮನ ಸೆಳೆದ ಬಿಹಾರಿನ ಬೇಗುಸ್‍ರಾಯ್ ಕ್ಷೇತ್ರದಲ್ಲಿ ಇಂದು ಮತದಾನ ಮುಗಿದಿದೆ. ಕೇವಲ ಜಾತಿ ಮತ್ತು ಧರ್ಮದ ದೃಷ್ಟಿಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ನೋಡಿದವರಿಗೆ ನಿಜ ವಾಸ್ತವ ಅರ್ಥವಾಗಲಿಕ್ಕಿಲ್ಲ. ಇಲ್ಲಿ ಮೊದಲಿಂದಲೂ ಸಿದ್ದಾಂತ-ಐಡಿಯಾಲಜಿ ಒಂದು ಪ್ರಮುಖ ಅಂಶವಾಗಿದ್ದು, ಅದರ ಫ್ಯಾಕ್ಟರ್ ಈಗಲೂ ಹಾಗೇ ಇದೆ….

ಬೇಗುಸರಾಯ್ ಎಂಪಿ ಕ್ಷೇತ್ರಕ್ಕೆ ಬಿಹಾರ್ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಇಲ್ಲಿ ಬಹುಪಾಲು ಸಲ ಐಡೆಂಟಿಟಿ ಬದಲು ಸಿದ್ದಾಂತದ ಮೇಲೆಯೇ ಆರೋಗ್ಯಕರ ಚುನಾವಣೆಗಳು ನಡೆದಿವೆ. ಸ್ವಾತಂತ್ರ್ಯಾ ನಂತರ ಈ ಕ್ಷೇತ್ರದಲ್ಲಿ ಕಮ್ಯುನಿಸಂ ಮತ್ತು ರಾಷ್ಟ್ರೀಯತೆ-ಈ ಎರಡೂ ಸಿದ್ದಾಂತಗಳಿಗೂ ಎಲ್ಲ ಜಾತಿ, ಧರ್ಮ ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಪೋರ್ಟ್ ಬೇಸ್ ಇದೆ. ಕಮ್ಯುನಿಸಂ ಅನ್ನು ಆರಂಭದಲ್ಲಿ ಸಿಪಿಐ, ನಂತರ ಸಿಪಿಎಂ, ಮತ್ತೆ ಸಿಪಿಐ ಪ್ರತಿನಿಧಿಸುತ್ತಿದ್ದರೆ, ಕಾಂಗ್ರೆಸ್ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತಿತ್ತು. 1999ರಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಮಹತ್ವ ಕಳೆದುಕೊಂಡ ಮೇಲೆ, ಆ ಜಾಗವನ್ನು ಬಿಜೆಪಿ ಆಕ್ರಮಿಸಿತು.

ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದ, ಸಿಪಿಐ ಅಥವಾ ಬಿಜೆಪಿ ಜೊತೆ ನಿಲ್ಲಲೂ ಒಲ್ಲದ ಮುಸ್ಲಿಮರು ಆರ್‍ಜೆಡಿ, ಜೆಡಿಯು, ಎಲ್‍ಜೆಪಿ ಪಕ್ಷಗಳು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ದಾರಿ ಮಾಡಿದರು. ನಂತರ ಈ ಕ್ಷೇತ್ರದಲ್ಲೂ ಜಾತಿ, ಧರ್ಮದ ರಾಜಕೀಯ ಬಂದರೂ, ಚುನಾವಣೆಯಲ್ಲಿ ಎಂದಿನಂತೆ ಕಮ್ಯುನಿಸಂ ಮತ್ತು ರಾಷ್ಟ್ರೀಯತೆಗಳೇ ಪ್ರಮುಖ ನಿರ್ಧಾರಕ ಅಂಶಗಳಾಗಿವೆ.

ಜಾತಿ ಸಂಖ್ಯೆಗೆ ಬಂದರೆ ಮೇಲ್ಜಾತಿಯ ಭೂಮಿಹಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ದೂರದ ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ನಂತರದಲ್ಲಿ ಯಾದವರು, ಕುರ್ಮಿಗಳು, ಕುಶ್ವಾಹಾ, ಮಲ್ಲಹಾಗಳು, ಬ್ರಾಹ್ಮಣರು, ಎಸ್‍ಸಿ ಜಾತಿಯವರಿದ್ದಾರೆ. ಭೂಮಿಹಾರರು ರಾಜಕೀಯವಾಗಿ ಪ್ರಬಲರಾಗಿದ್ದು, ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇಲ್ಲಿಂದ ಎಂಪಿಯಾದವರೆಲ್ಲ ಭೂಮಿಹಾರರೇ.

ಬಲಿಯಾ ಕ್ಷೇತ್ರ, ಪುನರ್ವಿಂಗಡಣೆ…..
ಈ ಕ್ಷೇತ್ರದ ಬಗ್ಗೆ ಅರ್ಥ ಮಾಡಿಕೊಳ್ಳಲು ಮೊದಲಿಗೆ ಇದ್ದ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳನ್ನು ಅಧ್ಯಯನ ಮಾಡಬೇಕು. 2008ರಲ್ಲಿ ಪುನರ್ವಿಂಡಣೆ ನಂತರವಷ್ಟೇ ಬಲಿಯಾದ ಹಲವು ವಿಧಾನಸಭಾ ಕ್ಷೇತ್ರಗಳನ್ನು ಬೇಗುಸರಾಯ್ ಜಿಲ್ಲೆಗೆ ಸೇರಿಸಿ ಬೇಗುಸರಾಯ್ ಕ್ಷೇತ್ರಕ್ಕೆ ಹೊಸ ಸ್ವರೂಪ ನೀಡಲಾಗಿತು. ಹಾಗಾಗಿ ಹಿಂದಿನ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳತ್ತ ಗಮನ ಹರಿಸೋಣ. 1977ರಲ್ಲಿ ಸೃಷ್ಟಿಯಾದ ಬಲಿಯಾ ಸಂಸತ್ ಕ್ಷೇತ್ರದಲ್ಲಿ 2008ರವೆರೆಗೆ ಒಟ್ಟು 9 ಚುನಾವಣೆ ನಡೆದಿದ್ದು ಅದರಲ್ಲಿ ಸಿಪಿಐ ನಾಲ್ಕು ಸಲ ಗೆದ್ದಿದೆ. ಉಳಿದ ಐದರಲ್ಲಿ ಪ್ರತಿ ಸಲ ಬೇರೆ ಪಕ್ಷ ಗೆದ್ದಿದ್ದು, ಹೆಚ್ಚೂ ಕಡಿಮೆ ಈ ಐದರಲ್ಲಿ ಸಿಪಿಐ ಎರಡನೇ ಸ್ಥಾನದಲ್ಲಿದೆ.

ಹಿಂದಿನ ಬೇಗುಸರಾಯ್ ಕ್ಷೇತ್ರ (2008ರ ಪುನರ್ವಿಗಡಣೆಗೂ ಮೊದಲು)ದಲ್ಲಿ 1998ರವರೆಗೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. ಅಲ್ಲಿವರೆಗಿನ 12 ಚುನಾವಣೆಗಳಲ್ಲಿ ಅದು 8 ಸಲ ಗೆದ್ದಿತ್ತು. ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗ ಮಾತ್ರ ಅದು ಅಲ್ಲಿ ಸೋತಿತ್ತು. ಹಿಂದೆ ಕಾಂಗ್ರೆಸ್‍ಗೆ ಭರ್ಜರಿ ಲೀಡ್ ಕೊಡುತ್ತಿದ್ದ ಅಸೆಂಬ್ಲಿ ಕ್ಷೇತ್ರಗಳು ಈಗಿನ ( 2008ರ ನಂತರದ) ಬೇಗುಸರಾಯ್ ಕ್ಷೇತ್ರದಲ್ಲಿ ಇಲ್ಲ.
ಹೀಗಾಗಿ, ಈಗಿನ ಬೇಗುಸ್‍ರಾಯ್ ಸಂಸತ್ ಕ್ಷೇತ್ರದಲ್ಲಿ ಬಲಾಢ್ಯ ಕೇಡರ್ ಬೇಸ್ ಇರುವುದು ಸಿಪಿಐಗೆ. ಅದಕ್ಕಾಗೇ ಇದನ್ನು ಲೆನಿನ್‍ಗಾರ್ಡ್ ಎನ್ನಲಾಗುತ್ತದೆ.

2009, 2014 ರಲ್ಲಿ ಏನಾಯ್ತು?
ಪುನರ್ವಿಂಗಡಣೆ ನಂತರ ಬೇಗುಸರಾಯ್‍ನಲ್ಲಿ ಎರಡು ಸಂಸತ್ ಚುನಾವಣೆಗಳು ನಡೆದಿವೆ. 2009ರಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿದ್ದ ಜೆಡಿಯುನ ಮೊನಜೀರ್ ಹಸನ್ 45 ಸಾವಿರ ಮತಗಳ ಅಂತರದಿಂದ ಗೆದ್ದರು. ಮತದಾನ ಪ್ರಮಾಣವೂ ಕಡಿಮೆ (ಶೇ. 48)ಆಗಿತ್ತು. ಎರಡನೇ ಸ್ಥಾನದಲ್ಲಿ ಸಿಪಿಐ ಇತ್ತು. ವಿಜೇತ ಹಸನ್ ಬಿಟ್ಟು ಉಳಿದೆಲ್ಲ ಪಕ್ಷಗಳ ಅಭ್ಯರ್ಥಿಗಳು ಭೂಮಿಹಾರರೇ ಆಗಿದ್ದರು.
2014ರಲ್ಲಿ ಜೆಡಿಯು ಎನ್‍ಡಿಎ ಭಾಗವಾಗಿರಲಿಲ್ಲ. ಅದು ಸಿಪಿಐಗೆ ಬೆಂಬಲಿಸಿತ್ತು. ಯುಪಿಎ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು. ಬಿಜೆಪಿ ಹಿಂದೂ ಮತಗಳನ್ನು ಒಟ್ಟಾಗಿಸುವಲ್ಲಿ ಒಂದಿಷ್ಟು ಯಶ ಕಂಡು ಗೆದ್ದಿತ್ತು. ಸಿಪಿಐ ಮೂರನೇ ಸ್ಥಾನಕ್ಕೆ, ಆರ್‍ಜೆಡಿಯ ತನ್ವೀರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2019- ಪ್ರಮುಖ ನಿರ್ಣಾಯಕ ಅಂಶಗಳೇನು?
ಈಗ ಇಲ್ಲಿ ದೇಶದ ಯೂಥ್ ಐಕಾನ್ ಕನ್ನಯ್ಯಕುಮಾರ್ ಸಿಪಿಐ ಅಭ್ಯರ್ಥಿಯಾಗಿದ್ದು ಅವರು ಕೇಡರ್‍ಗಳಲ್ಲಿ ಹೊಸ ಉತ್ಸಾಹ ತುಂಬಿ, ಕ್ಷೇತ್ರದಾದ್ಯಂತ ಪರಿಣಾಮಕಾರಿ ಪ್ರಚಾರ ನಡೆಸಿದ್ದಾರೆ. ಗುಜರಾತ್ ನ ಯುವ ಶಾಸಕ ಜಿಗ್ನೇಶ್ ಮೇವಾನಿ, ಯುವ ತಾರೆ ಶೆಹ್ಲಾ ರಶೀದ್, ಜನಪರ ಚಿತ್ರನಟ ಮತ್ತು ಬೆಂಗಳೂರು ಕೇಂದ್ರ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಮುತಾಂದವರು ಕನ್ನಯ್ಯ ಪರ ಸತತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ ಮತ್ತು ಆರ್‍ಜೆಡಿಗಳು 2009, 2014ರ ತಂತ್ರಕ್ಕೇ ಮೊರೆ ಹೋದವು. ಗಿರಿರಾಜ್ ಸಿಂಗ್‍ರನ್ನು ಕಣಕ್ಕಿಳಿಸಿದ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಭೂಮಿಹಾರರು, ಕುರ್ಮಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ಎಸ್‍ಸಿ ಸಮುದಾಯದವರನ್ನು ‘ರಾಷ್ಟ್ರೀಯತೆ’ಯ ಆಧಾರದಲ್ಲಿ ತನ್ನ ಕಡೆ ವಾಲಿಸಿಕೊಳ್ಳಲು ಯತ್ನಿಸಿತು. ಜೊತೆಗೆ ಮೋದಿ, ನಿತೀಶ್, ಪಾಸ್ವಾನರವರ ಹೆಸರಲ್ಲೂ ಮತ ಯಾಚಿಸಿತು.

ಕಳೆದ ಸಲದಂತೆ ಈ ಸಲವೂ ಆರ್‍ಜೆಡಿ ಮತ್ತೆ ತನ್ವೀರ್ ಹಸನ್ ಅವರನ್ನು ಅಭ್ಯರ್ಥಿ ಮಾಡಿ, ಯಾದವ-ಮುಸ್ಲಿಂ ಮತಗಳ ಜೊತೆಗೆ ಇತರ ಸಣ್ಣ ಸಮುದಾಯಗಳ ಓಟು ಪಡೆಯಲು ಯತ್ನಿಸಿತು. ಕನ್ನಯ್ಯ ಮತ್ತು ಗಿರಿರಾಜ್ ಸಿಂಗ್ ಇಬ್ಬರೂ ಭೂಮಿಹಾರ್ ಆಗಿರುವುದರಿಂದ ಭೂಮಿಹಾರ್ ಮತಗಳ ವಿಭಜನೆಯಾಗಿ ತನಗೆ ಲಾಭ ಆಗಲಿದೆ ಎಂಬುದು ಆರ್‍ಜೆಡಿ ಲೆಕ್ಕಾಚಾರ.

ಆದರೆ, ತಳಮಟ್ಟದಲ್ಲಿ 2009, 2014ರ ವಾತಾವರಣವಿಲ್ಲ. 2009ರಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಹಾರ್ ಮತಗಳು ವಿಭಜನೆಯಾಗಿದ್ದವು. ಈ ಸಲ ಅಷ್ಟಾಗುವುದಿಲ್ಲ. ಬಿಜೆಪಿಗೆ ಮೇಲ್ಜಾತಿ ಸಮುದಾಯಗಳಲ್ಲಿ ಗಟ್ಟಿ ಬೇಸ್ ಇದ್ದು, ಅದು ಜಡಿಯು ಮತ್ತು ಎಲ್‍ಜೆಪಿ ನೆರವಿನಿಂದ ಭೂಮಿಹಾರರ ಗರಿಷ್ಠ ಮತಗಳನ್ನು ಪಡೆಯುವ ಉಮೇದಿನಲ್ಲಿದೆ.

2009, 2014ಕ್ಕೆ ಹೋಲಿಸಿದಾಗ ಭೂಮಿಹಾರ್ ಸಮುದಾಯದಲ್ಲಿ ಸಿಪಿಐ ತನ್ನ ಬೇಸ್ ಅನ್ನು ಗಟ್ಟಿಗೊಳಿಸಿದೆ. 2014ರಲ್ಲಂತೆ ಮುಸ್ಲಿಮರು ಆರ್‍ಜೆಡಿ ಪರ ಗಟ್ಟಿಯಾಗೇನೂ ನಿಂತಿಲ್ಲ. ಬಿಜೆಪಿ ಸೋಲಿಸಬಲ್ಲ ಕನ್ನಯ್ಯನ ಕಡೆ ಮುಸ್ಲಿಮ್ ಯುವಕರು ನಿಂತಿದ್ದಾರೆ. 2014ರಲ್ಲಿ ಕೋಮು ಆಧಾರದಲ್ಲಿ ಬಿಜೆಪಿ ಮತ್ತು ಆರ್‍ಜೆಡಿ ನಡುವೆ ಹಂಚಿದ್ದ ಮತಗಳನ್ನು ಕೇಂದ್ರಿಕರಿಸಿ ಅವನ್ನು ಸಿಪಿಐ ಕಡೆ ತಿರುಗಿಸುವಲ್ಲೂ ಕನ್ನಯ್ಯ ಯಶಸ್ವಿಯಾಗಿದ್ದಾರೆ.

ಕನ್ನಯ್ಯ ಸ್ಪರ್ಧೆಯಲ್ಲೇ ಇಲ್ಲ ಎಂದು ಬಹಿರಂಗವಾಗಿ ಹೇಳುತ್ತ ಬಂದ ಗಿರಿರಾಜ್ ಮತ್ತು ತನ್ವೀರ್ ತಮ್ಮ ತಮ್ಮ ಸಮುದಾಯಗಳ ಜೊತೆಗೆ ಮಾತಾಡುವಾಗ ಕನ್ನಯ್ಯನ ವಿರುದ್ಧವೇ ಸ್ಪರ್ಧೆ ಎಂಬಂತೆ ಕನ್ನಯ್ಯರನ್ನೇ ಹೆಚ್ಚು ಟೀಕಿಸಿದರು. ಕನ್ನಯ್ಯನಿಗೆ ಮತ ಹಾಕಿದರೆ ತನ್ವೀರ್‍ಗೆ ಲಾಭ ಎಂದು ಭೂಮಿಹಾರರಿಗೆ ಗಿರಿರಾಜ್ ಹೇಳಿದರೆ, ಕನ್ನಯ್ಯನಿಗೆ ಮತ ಹಾಕಿದರೆ ಬಿಜೆಪಿಗೆ ಲಾಭ ಎಂದು ಮುಸ್ಲಿಮರಿಗೆ ತನ್ವೀರ್ ಹೇಳುತ್ತಾ ಬಂದರು.

ತನ್ನ ಪ್ರಾಮಾಣಿಕತೆ ಮತ್ತು ಬಡತನದ ಹಿನ್ನೆಲೆಯ ಕಾರಣದಿಂದ ಕನ್ನಯ್ಯ ಜನರೊಂದಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಯಿತು. ಎಲ್ಲರೂ ಹೇಳುವಂತೆ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ, ಅಂದರೆ ಈ ಸ್ಪರ್ಧೆ ಜಾತಿ, ಧರ್ಮಗಳನ್ನು ಮೀರಿದ್ದಾಗಲಿದೆ.
ಕೇವಲ ಜಾತಿ, ಧರ್ಮಗಳ ಲೆಕ್ಕದಲ್ಲಿ ನೋಡಿ ಕನ್ನಯ್ಯನಿಗೆ ಕಷ್ಟ ಎನ್ನಲು ಬರುವುದಿಲ್ಲ. ಇಲ್ಲಿ ಜಾತಿ, ಧರ್ಮಗಳನ್ನು ಮೀರಿ, ಸಿದ್ದಾಂತವು ಒಂದು ದೊಡ್ಡ ಫ್ಯಾಕ್ಟರ್ ಆಗಿದೆ. ಈ ಅಂಶವೇ ಕನ್ನಯ್ಯನ ನೆರವಿಗೆ ಬರಬಹುದು. ಈ ದೃಷ್ಟಿಯಲ್ಲಿ ಯಾರೇ ಸೋಲಲಿ, ಗೆಲ್ಲಲಿ, ಅದು ಡೆಮಾಕ್ರಸಿಯ ಗೆಲುವಂತೂ ಆಗಿರಲಿದೆ…

(ಕೃಪೆ: ದಿ ವೈರ್, ಲೇಖಕರು ಬಿಹಾರದ ಐಟಿ ವೃತ್ತಿಪರ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...