Homeಚಳವಳಿಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

ಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

- Advertisement -
- Advertisement -

| ರಾಹುಲ್ ವತ್ಸ್ |
ಅನುವಾದ: ಮಲ್ಲನಗೌಡರ್ ಪಿ.ಕೆ
ಇವತ್ತು ಏಪ್ರಿಲ್ 29, ವಿಶಿಷ್ಟ ಕಾರಣಗಳಿಗಾಗಿ ದೇಶದ ಗಮನ ಸೆಳೆದ ಬಿಹಾರಿನ ಬೇಗುಸ್‍ರಾಯ್ ಕ್ಷೇತ್ರದಲ್ಲಿ ಇಂದು ಮತದಾನ ಮುಗಿದಿದೆ. ಕೇವಲ ಜಾತಿ ಮತ್ತು ಧರ್ಮದ ದೃಷ್ಟಿಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ನೋಡಿದವರಿಗೆ ನಿಜ ವಾಸ್ತವ ಅರ್ಥವಾಗಲಿಕ್ಕಿಲ್ಲ. ಇಲ್ಲಿ ಮೊದಲಿಂದಲೂ ಸಿದ್ದಾಂತ-ಐಡಿಯಾಲಜಿ ಒಂದು ಪ್ರಮುಖ ಅಂಶವಾಗಿದ್ದು, ಅದರ ಫ್ಯಾಕ್ಟರ್ ಈಗಲೂ ಹಾಗೇ ಇದೆ….

ಬೇಗುಸರಾಯ್ ಎಂಪಿ ಕ್ಷೇತ್ರಕ್ಕೆ ಬಿಹಾರ್ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಇಲ್ಲಿ ಬಹುಪಾಲು ಸಲ ಐಡೆಂಟಿಟಿ ಬದಲು ಸಿದ್ದಾಂತದ ಮೇಲೆಯೇ ಆರೋಗ್ಯಕರ ಚುನಾವಣೆಗಳು ನಡೆದಿವೆ. ಸ್ವಾತಂತ್ರ್ಯಾ ನಂತರ ಈ ಕ್ಷೇತ್ರದಲ್ಲಿ ಕಮ್ಯುನಿಸಂ ಮತ್ತು ರಾಷ್ಟ್ರೀಯತೆ-ಈ ಎರಡೂ ಸಿದ್ದಾಂತಗಳಿಗೂ ಎಲ್ಲ ಜಾತಿ, ಧರ್ಮ ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಪೋರ್ಟ್ ಬೇಸ್ ಇದೆ. ಕಮ್ಯುನಿಸಂ ಅನ್ನು ಆರಂಭದಲ್ಲಿ ಸಿಪಿಐ, ನಂತರ ಸಿಪಿಎಂ, ಮತ್ತೆ ಸಿಪಿಐ ಪ್ರತಿನಿಧಿಸುತ್ತಿದ್ದರೆ, ಕಾಂಗ್ರೆಸ್ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತಿತ್ತು. 1999ರಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಮಹತ್ವ ಕಳೆದುಕೊಂಡ ಮೇಲೆ, ಆ ಜಾಗವನ್ನು ಬಿಜೆಪಿ ಆಕ್ರಮಿಸಿತು.

ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದ, ಸಿಪಿಐ ಅಥವಾ ಬಿಜೆಪಿ ಜೊತೆ ನಿಲ್ಲಲೂ ಒಲ್ಲದ ಮುಸ್ಲಿಮರು ಆರ್‍ಜೆಡಿ, ಜೆಡಿಯು, ಎಲ್‍ಜೆಪಿ ಪಕ್ಷಗಳು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ದಾರಿ ಮಾಡಿದರು. ನಂತರ ಈ ಕ್ಷೇತ್ರದಲ್ಲೂ ಜಾತಿ, ಧರ್ಮದ ರಾಜಕೀಯ ಬಂದರೂ, ಚುನಾವಣೆಯಲ್ಲಿ ಎಂದಿನಂತೆ ಕಮ್ಯುನಿಸಂ ಮತ್ತು ರಾಷ್ಟ್ರೀಯತೆಗಳೇ ಪ್ರಮುಖ ನಿರ್ಧಾರಕ ಅಂಶಗಳಾಗಿವೆ.

ಜಾತಿ ಸಂಖ್ಯೆಗೆ ಬಂದರೆ ಮೇಲ್ಜಾತಿಯ ಭೂಮಿಹಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ದೂರದ ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ನಂತರದಲ್ಲಿ ಯಾದವರು, ಕುರ್ಮಿಗಳು, ಕುಶ್ವಾಹಾ, ಮಲ್ಲಹಾಗಳು, ಬ್ರಾಹ್ಮಣರು, ಎಸ್‍ಸಿ ಜಾತಿಯವರಿದ್ದಾರೆ. ಭೂಮಿಹಾರರು ರಾಜಕೀಯವಾಗಿ ಪ್ರಬಲರಾಗಿದ್ದು, ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇಲ್ಲಿಂದ ಎಂಪಿಯಾದವರೆಲ್ಲ ಭೂಮಿಹಾರರೇ.

ಬಲಿಯಾ ಕ್ಷೇತ್ರ, ಪುನರ್ವಿಂಗಡಣೆ…..
ಈ ಕ್ಷೇತ್ರದ ಬಗ್ಗೆ ಅರ್ಥ ಮಾಡಿಕೊಳ್ಳಲು ಮೊದಲಿಗೆ ಇದ್ದ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳನ್ನು ಅಧ್ಯಯನ ಮಾಡಬೇಕು. 2008ರಲ್ಲಿ ಪುನರ್ವಿಂಡಣೆ ನಂತರವಷ್ಟೇ ಬಲಿಯಾದ ಹಲವು ವಿಧಾನಸಭಾ ಕ್ಷೇತ್ರಗಳನ್ನು ಬೇಗುಸರಾಯ್ ಜಿಲ್ಲೆಗೆ ಸೇರಿಸಿ ಬೇಗುಸರಾಯ್ ಕ್ಷೇತ್ರಕ್ಕೆ ಹೊಸ ಸ್ವರೂಪ ನೀಡಲಾಗಿತು. ಹಾಗಾಗಿ ಹಿಂದಿನ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳತ್ತ ಗಮನ ಹರಿಸೋಣ. 1977ರಲ್ಲಿ ಸೃಷ್ಟಿಯಾದ ಬಲಿಯಾ ಸಂಸತ್ ಕ್ಷೇತ್ರದಲ್ಲಿ 2008ರವೆರೆಗೆ ಒಟ್ಟು 9 ಚುನಾವಣೆ ನಡೆದಿದ್ದು ಅದರಲ್ಲಿ ಸಿಪಿಐ ನಾಲ್ಕು ಸಲ ಗೆದ್ದಿದೆ. ಉಳಿದ ಐದರಲ್ಲಿ ಪ್ರತಿ ಸಲ ಬೇರೆ ಪಕ್ಷ ಗೆದ್ದಿದ್ದು, ಹೆಚ್ಚೂ ಕಡಿಮೆ ಈ ಐದರಲ್ಲಿ ಸಿಪಿಐ ಎರಡನೇ ಸ್ಥಾನದಲ್ಲಿದೆ.

ಹಿಂದಿನ ಬೇಗುಸರಾಯ್ ಕ್ಷೇತ್ರ (2008ರ ಪುನರ್ವಿಗಡಣೆಗೂ ಮೊದಲು)ದಲ್ಲಿ 1998ರವರೆಗೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. ಅಲ್ಲಿವರೆಗಿನ 12 ಚುನಾವಣೆಗಳಲ್ಲಿ ಅದು 8 ಸಲ ಗೆದ್ದಿತ್ತು. ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗ ಮಾತ್ರ ಅದು ಅಲ್ಲಿ ಸೋತಿತ್ತು. ಹಿಂದೆ ಕಾಂಗ್ರೆಸ್‍ಗೆ ಭರ್ಜರಿ ಲೀಡ್ ಕೊಡುತ್ತಿದ್ದ ಅಸೆಂಬ್ಲಿ ಕ್ಷೇತ್ರಗಳು ಈಗಿನ ( 2008ರ ನಂತರದ) ಬೇಗುಸರಾಯ್ ಕ್ಷೇತ್ರದಲ್ಲಿ ಇಲ್ಲ.
ಹೀಗಾಗಿ, ಈಗಿನ ಬೇಗುಸ್‍ರಾಯ್ ಸಂಸತ್ ಕ್ಷೇತ್ರದಲ್ಲಿ ಬಲಾಢ್ಯ ಕೇಡರ್ ಬೇಸ್ ಇರುವುದು ಸಿಪಿಐಗೆ. ಅದಕ್ಕಾಗೇ ಇದನ್ನು ಲೆನಿನ್‍ಗಾರ್ಡ್ ಎನ್ನಲಾಗುತ್ತದೆ.

2009, 2014 ರಲ್ಲಿ ಏನಾಯ್ತು?
ಪುನರ್ವಿಂಗಡಣೆ ನಂತರ ಬೇಗುಸರಾಯ್‍ನಲ್ಲಿ ಎರಡು ಸಂಸತ್ ಚುನಾವಣೆಗಳು ನಡೆದಿವೆ. 2009ರಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿದ್ದ ಜೆಡಿಯುನ ಮೊನಜೀರ್ ಹಸನ್ 45 ಸಾವಿರ ಮತಗಳ ಅಂತರದಿಂದ ಗೆದ್ದರು. ಮತದಾನ ಪ್ರಮಾಣವೂ ಕಡಿಮೆ (ಶೇ. 48)ಆಗಿತ್ತು. ಎರಡನೇ ಸ್ಥಾನದಲ್ಲಿ ಸಿಪಿಐ ಇತ್ತು. ವಿಜೇತ ಹಸನ್ ಬಿಟ್ಟು ಉಳಿದೆಲ್ಲ ಪಕ್ಷಗಳ ಅಭ್ಯರ್ಥಿಗಳು ಭೂಮಿಹಾರರೇ ಆಗಿದ್ದರು.
2014ರಲ್ಲಿ ಜೆಡಿಯು ಎನ್‍ಡಿಎ ಭಾಗವಾಗಿರಲಿಲ್ಲ. ಅದು ಸಿಪಿಐಗೆ ಬೆಂಬಲಿಸಿತ್ತು. ಯುಪಿಎ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು. ಬಿಜೆಪಿ ಹಿಂದೂ ಮತಗಳನ್ನು ಒಟ್ಟಾಗಿಸುವಲ್ಲಿ ಒಂದಿಷ್ಟು ಯಶ ಕಂಡು ಗೆದ್ದಿತ್ತು. ಸಿಪಿಐ ಮೂರನೇ ಸ್ಥಾನಕ್ಕೆ, ಆರ್‍ಜೆಡಿಯ ತನ್ವೀರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2019- ಪ್ರಮುಖ ನಿರ್ಣಾಯಕ ಅಂಶಗಳೇನು?
ಈಗ ಇಲ್ಲಿ ದೇಶದ ಯೂಥ್ ಐಕಾನ್ ಕನ್ನಯ್ಯಕುಮಾರ್ ಸಿಪಿಐ ಅಭ್ಯರ್ಥಿಯಾಗಿದ್ದು ಅವರು ಕೇಡರ್‍ಗಳಲ್ಲಿ ಹೊಸ ಉತ್ಸಾಹ ತುಂಬಿ, ಕ್ಷೇತ್ರದಾದ್ಯಂತ ಪರಿಣಾಮಕಾರಿ ಪ್ರಚಾರ ನಡೆಸಿದ್ದಾರೆ. ಗುಜರಾತ್ ನ ಯುವ ಶಾಸಕ ಜಿಗ್ನೇಶ್ ಮೇವಾನಿ, ಯುವ ತಾರೆ ಶೆಹ್ಲಾ ರಶೀದ್, ಜನಪರ ಚಿತ್ರನಟ ಮತ್ತು ಬೆಂಗಳೂರು ಕೇಂದ್ರ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಮುತಾಂದವರು ಕನ್ನಯ್ಯ ಪರ ಸತತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ ಮತ್ತು ಆರ್‍ಜೆಡಿಗಳು 2009, 2014ರ ತಂತ್ರಕ್ಕೇ ಮೊರೆ ಹೋದವು. ಗಿರಿರಾಜ್ ಸಿಂಗ್‍ರನ್ನು ಕಣಕ್ಕಿಳಿಸಿದ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಭೂಮಿಹಾರರು, ಕುರ್ಮಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ಎಸ್‍ಸಿ ಸಮುದಾಯದವರನ್ನು ‘ರಾಷ್ಟ್ರೀಯತೆ’ಯ ಆಧಾರದಲ್ಲಿ ತನ್ನ ಕಡೆ ವಾಲಿಸಿಕೊಳ್ಳಲು ಯತ್ನಿಸಿತು. ಜೊತೆಗೆ ಮೋದಿ, ನಿತೀಶ್, ಪಾಸ್ವಾನರವರ ಹೆಸರಲ್ಲೂ ಮತ ಯಾಚಿಸಿತು.

ಕಳೆದ ಸಲದಂತೆ ಈ ಸಲವೂ ಆರ್‍ಜೆಡಿ ಮತ್ತೆ ತನ್ವೀರ್ ಹಸನ್ ಅವರನ್ನು ಅಭ್ಯರ್ಥಿ ಮಾಡಿ, ಯಾದವ-ಮುಸ್ಲಿಂ ಮತಗಳ ಜೊತೆಗೆ ಇತರ ಸಣ್ಣ ಸಮುದಾಯಗಳ ಓಟು ಪಡೆಯಲು ಯತ್ನಿಸಿತು. ಕನ್ನಯ್ಯ ಮತ್ತು ಗಿರಿರಾಜ್ ಸಿಂಗ್ ಇಬ್ಬರೂ ಭೂಮಿಹಾರ್ ಆಗಿರುವುದರಿಂದ ಭೂಮಿಹಾರ್ ಮತಗಳ ವಿಭಜನೆಯಾಗಿ ತನಗೆ ಲಾಭ ಆಗಲಿದೆ ಎಂಬುದು ಆರ್‍ಜೆಡಿ ಲೆಕ್ಕಾಚಾರ.

ಆದರೆ, ತಳಮಟ್ಟದಲ್ಲಿ 2009, 2014ರ ವಾತಾವರಣವಿಲ್ಲ. 2009ರಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಹಾರ್ ಮತಗಳು ವಿಭಜನೆಯಾಗಿದ್ದವು. ಈ ಸಲ ಅಷ್ಟಾಗುವುದಿಲ್ಲ. ಬಿಜೆಪಿಗೆ ಮೇಲ್ಜಾತಿ ಸಮುದಾಯಗಳಲ್ಲಿ ಗಟ್ಟಿ ಬೇಸ್ ಇದ್ದು, ಅದು ಜಡಿಯು ಮತ್ತು ಎಲ್‍ಜೆಪಿ ನೆರವಿನಿಂದ ಭೂಮಿಹಾರರ ಗರಿಷ್ಠ ಮತಗಳನ್ನು ಪಡೆಯುವ ಉಮೇದಿನಲ್ಲಿದೆ.

2009, 2014ಕ್ಕೆ ಹೋಲಿಸಿದಾಗ ಭೂಮಿಹಾರ್ ಸಮುದಾಯದಲ್ಲಿ ಸಿಪಿಐ ತನ್ನ ಬೇಸ್ ಅನ್ನು ಗಟ್ಟಿಗೊಳಿಸಿದೆ. 2014ರಲ್ಲಂತೆ ಮುಸ್ಲಿಮರು ಆರ್‍ಜೆಡಿ ಪರ ಗಟ್ಟಿಯಾಗೇನೂ ನಿಂತಿಲ್ಲ. ಬಿಜೆಪಿ ಸೋಲಿಸಬಲ್ಲ ಕನ್ನಯ್ಯನ ಕಡೆ ಮುಸ್ಲಿಮ್ ಯುವಕರು ನಿಂತಿದ್ದಾರೆ. 2014ರಲ್ಲಿ ಕೋಮು ಆಧಾರದಲ್ಲಿ ಬಿಜೆಪಿ ಮತ್ತು ಆರ್‍ಜೆಡಿ ನಡುವೆ ಹಂಚಿದ್ದ ಮತಗಳನ್ನು ಕೇಂದ್ರಿಕರಿಸಿ ಅವನ್ನು ಸಿಪಿಐ ಕಡೆ ತಿರುಗಿಸುವಲ್ಲೂ ಕನ್ನಯ್ಯ ಯಶಸ್ವಿಯಾಗಿದ್ದಾರೆ.

ಕನ್ನಯ್ಯ ಸ್ಪರ್ಧೆಯಲ್ಲೇ ಇಲ್ಲ ಎಂದು ಬಹಿರಂಗವಾಗಿ ಹೇಳುತ್ತ ಬಂದ ಗಿರಿರಾಜ್ ಮತ್ತು ತನ್ವೀರ್ ತಮ್ಮ ತಮ್ಮ ಸಮುದಾಯಗಳ ಜೊತೆಗೆ ಮಾತಾಡುವಾಗ ಕನ್ನಯ್ಯನ ವಿರುದ್ಧವೇ ಸ್ಪರ್ಧೆ ಎಂಬಂತೆ ಕನ್ನಯ್ಯರನ್ನೇ ಹೆಚ್ಚು ಟೀಕಿಸಿದರು. ಕನ್ನಯ್ಯನಿಗೆ ಮತ ಹಾಕಿದರೆ ತನ್ವೀರ್‍ಗೆ ಲಾಭ ಎಂದು ಭೂಮಿಹಾರರಿಗೆ ಗಿರಿರಾಜ್ ಹೇಳಿದರೆ, ಕನ್ನಯ್ಯನಿಗೆ ಮತ ಹಾಕಿದರೆ ಬಿಜೆಪಿಗೆ ಲಾಭ ಎಂದು ಮುಸ್ಲಿಮರಿಗೆ ತನ್ವೀರ್ ಹೇಳುತ್ತಾ ಬಂದರು.

ತನ್ನ ಪ್ರಾಮಾಣಿಕತೆ ಮತ್ತು ಬಡತನದ ಹಿನ್ನೆಲೆಯ ಕಾರಣದಿಂದ ಕನ್ನಯ್ಯ ಜನರೊಂದಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಯಿತು. ಎಲ್ಲರೂ ಹೇಳುವಂತೆ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ, ಅಂದರೆ ಈ ಸ್ಪರ್ಧೆ ಜಾತಿ, ಧರ್ಮಗಳನ್ನು ಮೀರಿದ್ದಾಗಲಿದೆ.
ಕೇವಲ ಜಾತಿ, ಧರ್ಮಗಳ ಲೆಕ್ಕದಲ್ಲಿ ನೋಡಿ ಕನ್ನಯ್ಯನಿಗೆ ಕಷ್ಟ ಎನ್ನಲು ಬರುವುದಿಲ್ಲ. ಇಲ್ಲಿ ಜಾತಿ, ಧರ್ಮಗಳನ್ನು ಮೀರಿ, ಸಿದ್ದಾಂತವು ಒಂದು ದೊಡ್ಡ ಫ್ಯಾಕ್ಟರ್ ಆಗಿದೆ. ಈ ಅಂಶವೇ ಕನ್ನಯ್ಯನ ನೆರವಿಗೆ ಬರಬಹುದು. ಈ ದೃಷ್ಟಿಯಲ್ಲಿ ಯಾರೇ ಸೋಲಲಿ, ಗೆಲ್ಲಲಿ, ಅದು ಡೆಮಾಕ್ರಸಿಯ ಗೆಲುವಂತೂ ಆಗಿರಲಿದೆ…

(ಕೃಪೆ: ದಿ ವೈರ್, ಲೇಖಕರು ಬಿಹಾರದ ಐಟಿ ವೃತ್ತಿಪರ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...