Homeಚಳವಳಿಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

ಬೇಗುಸರಾಯ್‍ನಲ್ಲಿ ಸಿಪಿಐನ ಕನ್ನಯ್ಯ ಕುಮಾರ್‍ಗೆ ಅಡ್ವಾಂಟೇಜು. ಏಕೆಂದರೆ..

- Advertisement -
- Advertisement -

| ರಾಹುಲ್ ವತ್ಸ್ |
ಅನುವಾದ: ಮಲ್ಲನಗೌಡರ್ ಪಿ.ಕೆ
ಇವತ್ತು ಏಪ್ರಿಲ್ 29, ವಿಶಿಷ್ಟ ಕಾರಣಗಳಿಗಾಗಿ ದೇಶದ ಗಮನ ಸೆಳೆದ ಬಿಹಾರಿನ ಬೇಗುಸ್‍ರಾಯ್ ಕ್ಷೇತ್ರದಲ್ಲಿ ಇಂದು ಮತದಾನ ಮುಗಿದಿದೆ. ಕೇವಲ ಜಾತಿ ಮತ್ತು ಧರ್ಮದ ದೃಷ್ಟಿಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ನೋಡಿದವರಿಗೆ ನಿಜ ವಾಸ್ತವ ಅರ್ಥವಾಗಲಿಕ್ಕಿಲ್ಲ. ಇಲ್ಲಿ ಮೊದಲಿಂದಲೂ ಸಿದ್ದಾಂತ-ಐಡಿಯಾಲಜಿ ಒಂದು ಪ್ರಮುಖ ಅಂಶವಾಗಿದ್ದು, ಅದರ ಫ್ಯಾಕ್ಟರ್ ಈಗಲೂ ಹಾಗೇ ಇದೆ….

ಬೇಗುಸರಾಯ್ ಎಂಪಿ ಕ್ಷೇತ್ರಕ್ಕೆ ಬಿಹಾರ್ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ಇಲ್ಲಿ ಬಹುಪಾಲು ಸಲ ಐಡೆಂಟಿಟಿ ಬದಲು ಸಿದ್ದಾಂತದ ಮೇಲೆಯೇ ಆರೋಗ್ಯಕರ ಚುನಾವಣೆಗಳು ನಡೆದಿವೆ. ಸ್ವಾತಂತ್ರ್ಯಾ ನಂತರ ಈ ಕ್ಷೇತ್ರದಲ್ಲಿ ಕಮ್ಯುನಿಸಂ ಮತ್ತು ರಾಷ್ಟ್ರೀಯತೆ-ಈ ಎರಡೂ ಸಿದ್ದಾಂತಗಳಿಗೂ ಎಲ್ಲ ಜಾತಿ, ಧರ್ಮ ಮತ್ತು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಪೋರ್ಟ್ ಬೇಸ್ ಇದೆ. ಕಮ್ಯುನಿಸಂ ಅನ್ನು ಆರಂಭದಲ್ಲಿ ಸಿಪಿಐ, ನಂತರ ಸಿಪಿಎಂ, ಮತ್ತೆ ಸಿಪಿಐ ಪ್ರತಿನಿಧಿಸುತ್ತಿದ್ದರೆ, ಕಾಂಗ್ರೆಸ್ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತಿತ್ತು. 1999ರಲ್ಲಿ ಬಿಹಾರದಲ್ಲಿ ಕಾಂಗ್ರೆಸ್ ಮಹತ್ವ ಕಳೆದುಕೊಂಡ ಮೇಲೆ, ಆ ಜಾಗವನ್ನು ಬಿಜೆಪಿ ಆಕ್ರಮಿಸಿತು.

ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸುತ್ತಿದ್ದ, ಸಿಪಿಐ ಅಥವಾ ಬಿಜೆಪಿ ಜೊತೆ ನಿಲ್ಲಲೂ ಒಲ್ಲದ ಮುಸ್ಲಿಮರು ಆರ್‍ಜೆಡಿ, ಜೆಡಿಯು, ಎಲ್‍ಜೆಪಿ ಪಕ್ಷಗಳು ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ದಾರಿ ಮಾಡಿದರು. ನಂತರ ಈ ಕ್ಷೇತ್ರದಲ್ಲೂ ಜಾತಿ, ಧರ್ಮದ ರಾಜಕೀಯ ಬಂದರೂ, ಚುನಾವಣೆಯಲ್ಲಿ ಎಂದಿನಂತೆ ಕಮ್ಯುನಿಸಂ ಮತ್ತು ರಾಷ್ಟ್ರೀಯತೆಗಳೇ ಪ್ರಮುಖ ನಿರ್ಧಾರಕ ಅಂಶಗಳಾಗಿವೆ.

ಜಾತಿ ಸಂಖ್ಯೆಗೆ ಬಂದರೆ ಮೇಲ್ಜಾತಿಯ ಭೂಮಿಹಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ದೂರದ ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ನಂತರದಲ್ಲಿ ಯಾದವರು, ಕುರ್ಮಿಗಳು, ಕುಶ್ವಾಹಾ, ಮಲ್ಲಹಾಗಳು, ಬ್ರಾಹ್ಮಣರು, ಎಸ್‍ಸಿ ಜಾತಿಯವರಿದ್ದಾರೆ. ಭೂಮಿಹಾರರು ರಾಜಕೀಯವಾಗಿ ಪ್ರಬಲರಾಗಿದ್ದು, ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇಲ್ಲಿಂದ ಎಂಪಿಯಾದವರೆಲ್ಲ ಭೂಮಿಹಾರರೇ.

ಬಲಿಯಾ ಕ್ಷೇತ್ರ, ಪುನರ್ವಿಂಗಡಣೆ…..
ಈ ಕ್ಷೇತ್ರದ ಬಗ್ಗೆ ಅರ್ಥ ಮಾಡಿಕೊಳ್ಳಲು ಮೊದಲಿಗೆ ಇದ್ದ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳನ್ನು ಅಧ್ಯಯನ ಮಾಡಬೇಕು. 2008ರಲ್ಲಿ ಪುನರ್ವಿಂಡಣೆ ನಂತರವಷ್ಟೇ ಬಲಿಯಾದ ಹಲವು ವಿಧಾನಸಭಾ ಕ್ಷೇತ್ರಗಳನ್ನು ಬೇಗುಸರಾಯ್ ಜಿಲ್ಲೆಗೆ ಸೇರಿಸಿ ಬೇಗುಸರಾಯ್ ಕ್ಷೇತ್ರಕ್ಕೆ ಹೊಸ ಸ್ವರೂಪ ನೀಡಲಾಗಿತು. ಹಾಗಾಗಿ ಹಿಂದಿನ ಬಲಿಯಾ ಕ್ಷೇತ್ರದ ಚುನಾವಣಾ ಫಲಿತಾಂಶಗಳತ್ತ ಗಮನ ಹರಿಸೋಣ. 1977ರಲ್ಲಿ ಸೃಷ್ಟಿಯಾದ ಬಲಿಯಾ ಸಂಸತ್ ಕ್ಷೇತ್ರದಲ್ಲಿ 2008ರವೆರೆಗೆ ಒಟ್ಟು 9 ಚುನಾವಣೆ ನಡೆದಿದ್ದು ಅದರಲ್ಲಿ ಸಿಪಿಐ ನಾಲ್ಕು ಸಲ ಗೆದ್ದಿದೆ. ಉಳಿದ ಐದರಲ್ಲಿ ಪ್ರತಿ ಸಲ ಬೇರೆ ಪಕ್ಷ ಗೆದ್ದಿದ್ದು, ಹೆಚ್ಚೂ ಕಡಿಮೆ ಈ ಐದರಲ್ಲಿ ಸಿಪಿಐ ಎರಡನೇ ಸ್ಥಾನದಲ್ಲಿದೆ.

ಹಿಂದಿನ ಬೇಗುಸರಾಯ್ ಕ್ಷೇತ್ರ (2008ರ ಪುನರ್ವಿಗಡಣೆಗೂ ಮೊದಲು)ದಲ್ಲಿ 1998ರವರೆಗೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. ಅಲ್ಲಿವರೆಗಿನ 12 ಚುನಾವಣೆಗಳಲ್ಲಿ ಅದು 8 ಸಲ ಗೆದ್ದಿತ್ತು. ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗ ಮಾತ್ರ ಅದು ಅಲ್ಲಿ ಸೋತಿತ್ತು. ಹಿಂದೆ ಕಾಂಗ್ರೆಸ್‍ಗೆ ಭರ್ಜರಿ ಲೀಡ್ ಕೊಡುತ್ತಿದ್ದ ಅಸೆಂಬ್ಲಿ ಕ್ಷೇತ್ರಗಳು ಈಗಿನ ( 2008ರ ನಂತರದ) ಬೇಗುಸರಾಯ್ ಕ್ಷೇತ್ರದಲ್ಲಿ ಇಲ್ಲ.
ಹೀಗಾಗಿ, ಈಗಿನ ಬೇಗುಸ್‍ರಾಯ್ ಸಂಸತ್ ಕ್ಷೇತ್ರದಲ್ಲಿ ಬಲಾಢ್ಯ ಕೇಡರ್ ಬೇಸ್ ಇರುವುದು ಸಿಪಿಐಗೆ. ಅದಕ್ಕಾಗೇ ಇದನ್ನು ಲೆನಿನ್‍ಗಾರ್ಡ್ ಎನ್ನಲಾಗುತ್ತದೆ.

2009, 2014 ರಲ್ಲಿ ಏನಾಯ್ತು?
ಪುನರ್ವಿಂಗಡಣೆ ನಂತರ ಬೇಗುಸರಾಯ್‍ನಲ್ಲಿ ಎರಡು ಸಂಸತ್ ಚುನಾವಣೆಗಳು ನಡೆದಿವೆ. 2009ರಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿದ್ದ ಜೆಡಿಯುನ ಮೊನಜೀರ್ ಹಸನ್ 45 ಸಾವಿರ ಮತಗಳ ಅಂತರದಿಂದ ಗೆದ್ದರು. ಮತದಾನ ಪ್ರಮಾಣವೂ ಕಡಿಮೆ (ಶೇ. 48)ಆಗಿತ್ತು. ಎರಡನೇ ಸ್ಥಾನದಲ್ಲಿ ಸಿಪಿಐ ಇತ್ತು. ವಿಜೇತ ಹಸನ್ ಬಿಟ್ಟು ಉಳಿದೆಲ್ಲ ಪಕ್ಷಗಳ ಅಭ್ಯರ್ಥಿಗಳು ಭೂಮಿಹಾರರೇ ಆಗಿದ್ದರು.
2014ರಲ್ಲಿ ಜೆಡಿಯು ಎನ್‍ಡಿಎ ಭಾಗವಾಗಿರಲಿಲ್ಲ. ಅದು ಸಿಪಿಐಗೆ ಬೆಂಬಲಿಸಿತ್ತು. ಯುಪಿಎ ವಿರುದ್ಧ ಆಡಳಿತ ವಿರೋಧಿ ಅಲೆಯಿತ್ತು. ಬಿಜೆಪಿ ಹಿಂದೂ ಮತಗಳನ್ನು ಒಟ್ಟಾಗಿಸುವಲ್ಲಿ ಒಂದಿಷ್ಟು ಯಶ ಕಂಡು ಗೆದ್ದಿತ್ತು. ಸಿಪಿಐ ಮೂರನೇ ಸ್ಥಾನಕ್ಕೆ, ಆರ್‍ಜೆಡಿಯ ತನ್ವೀರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

2019- ಪ್ರಮುಖ ನಿರ್ಣಾಯಕ ಅಂಶಗಳೇನು?
ಈಗ ಇಲ್ಲಿ ದೇಶದ ಯೂಥ್ ಐಕಾನ್ ಕನ್ನಯ್ಯಕುಮಾರ್ ಸಿಪಿಐ ಅಭ್ಯರ್ಥಿಯಾಗಿದ್ದು ಅವರು ಕೇಡರ್‍ಗಳಲ್ಲಿ ಹೊಸ ಉತ್ಸಾಹ ತುಂಬಿ, ಕ್ಷೇತ್ರದಾದ್ಯಂತ ಪರಿಣಾಮಕಾರಿ ಪ್ರಚಾರ ನಡೆಸಿದ್ದಾರೆ. ಗುಜರಾತ್ ನ ಯುವ ಶಾಸಕ ಜಿಗ್ನೇಶ್ ಮೇವಾನಿ, ಯುವ ತಾರೆ ಶೆಹ್ಲಾ ರಶೀದ್, ಜನಪರ ಚಿತ್ರನಟ ಮತ್ತು ಬೆಂಗಳೂರು ಕೇಂದ್ರ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಮುತಾಂದವರು ಕನ್ನಯ್ಯ ಪರ ಸತತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ ಮತ್ತು ಆರ್‍ಜೆಡಿಗಳು 2009, 2014ರ ತಂತ್ರಕ್ಕೇ ಮೊರೆ ಹೋದವು. ಗಿರಿರಾಜ್ ಸಿಂಗ್‍ರನ್ನು ಕಣಕ್ಕಿಳಿಸಿದ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಭೂಮಿಹಾರರು, ಕುರ್ಮಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ಎಸ್‍ಸಿ ಸಮುದಾಯದವರನ್ನು ‘ರಾಷ್ಟ್ರೀಯತೆ’ಯ ಆಧಾರದಲ್ಲಿ ತನ್ನ ಕಡೆ ವಾಲಿಸಿಕೊಳ್ಳಲು ಯತ್ನಿಸಿತು. ಜೊತೆಗೆ ಮೋದಿ, ನಿತೀಶ್, ಪಾಸ್ವಾನರವರ ಹೆಸರಲ್ಲೂ ಮತ ಯಾಚಿಸಿತು.

ಕಳೆದ ಸಲದಂತೆ ಈ ಸಲವೂ ಆರ್‍ಜೆಡಿ ಮತ್ತೆ ತನ್ವೀರ್ ಹಸನ್ ಅವರನ್ನು ಅಭ್ಯರ್ಥಿ ಮಾಡಿ, ಯಾದವ-ಮುಸ್ಲಿಂ ಮತಗಳ ಜೊತೆಗೆ ಇತರ ಸಣ್ಣ ಸಮುದಾಯಗಳ ಓಟು ಪಡೆಯಲು ಯತ್ನಿಸಿತು. ಕನ್ನಯ್ಯ ಮತ್ತು ಗಿರಿರಾಜ್ ಸಿಂಗ್ ಇಬ್ಬರೂ ಭೂಮಿಹಾರ್ ಆಗಿರುವುದರಿಂದ ಭೂಮಿಹಾರ್ ಮತಗಳ ವಿಭಜನೆಯಾಗಿ ತನಗೆ ಲಾಭ ಆಗಲಿದೆ ಎಂಬುದು ಆರ್‍ಜೆಡಿ ಲೆಕ್ಕಾಚಾರ.

ಆದರೆ, ತಳಮಟ್ಟದಲ್ಲಿ 2009, 2014ರ ವಾತಾವರಣವಿಲ್ಲ. 2009ರಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಹಾರ್ ಮತಗಳು ವಿಭಜನೆಯಾಗಿದ್ದವು. ಈ ಸಲ ಅಷ್ಟಾಗುವುದಿಲ್ಲ. ಬಿಜೆಪಿಗೆ ಮೇಲ್ಜಾತಿ ಸಮುದಾಯಗಳಲ್ಲಿ ಗಟ್ಟಿ ಬೇಸ್ ಇದ್ದು, ಅದು ಜಡಿಯು ಮತ್ತು ಎಲ್‍ಜೆಪಿ ನೆರವಿನಿಂದ ಭೂಮಿಹಾರರ ಗರಿಷ್ಠ ಮತಗಳನ್ನು ಪಡೆಯುವ ಉಮೇದಿನಲ್ಲಿದೆ.

2009, 2014ಕ್ಕೆ ಹೋಲಿಸಿದಾಗ ಭೂಮಿಹಾರ್ ಸಮುದಾಯದಲ್ಲಿ ಸಿಪಿಐ ತನ್ನ ಬೇಸ್ ಅನ್ನು ಗಟ್ಟಿಗೊಳಿಸಿದೆ. 2014ರಲ್ಲಂತೆ ಮುಸ್ಲಿಮರು ಆರ್‍ಜೆಡಿ ಪರ ಗಟ್ಟಿಯಾಗೇನೂ ನಿಂತಿಲ್ಲ. ಬಿಜೆಪಿ ಸೋಲಿಸಬಲ್ಲ ಕನ್ನಯ್ಯನ ಕಡೆ ಮುಸ್ಲಿಮ್ ಯುವಕರು ನಿಂತಿದ್ದಾರೆ. 2014ರಲ್ಲಿ ಕೋಮು ಆಧಾರದಲ್ಲಿ ಬಿಜೆಪಿ ಮತ್ತು ಆರ್‍ಜೆಡಿ ನಡುವೆ ಹಂಚಿದ್ದ ಮತಗಳನ್ನು ಕೇಂದ್ರಿಕರಿಸಿ ಅವನ್ನು ಸಿಪಿಐ ಕಡೆ ತಿರುಗಿಸುವಲ್ಲೂ ಕನ್ನಯ್ಯ ಯಶಸ್ವಿಯಾಗಿದ್ದಾರೆ.

ಕನ್ನಯ್ಯ ಸ್ಪರ್ಧೆಯಲ್ಲೇ ಇಲ್ಲ ಎಂದು ಬಹಿರಂಗವಾಗಿ ಹೇಳುತ್ತ ಬಂದ ಗಿರಿರಾಜ್ ಮತ್ತು ತನ್ವೀರ್ ತಮ್ಮ ತಮ್ಮ ಸಮುದಾಯಗಳ ಜೊತೆಗೆ ಮಾತಾಡುವಾಗ ಕನ್ನಯ್ಯನ ವಿರುದ್ಧವೇ ಸ್ಪರ್ಧೆ ಎಂಬಂತೆ ಕನ್ನಯ್ಯರನ್ನೇ ಹೆಚ್ಚು ಟೀಕಿಸಿದರು. ಕನ್ನಯ್ಯನಿಗೆ ಮತ ಹಾಕಿದರೆ ತನ್ವೀರ್‍ಗೆ ಲಾಭ ಎಂದು ಭೂಮಿಹಾರರಿಗೆ ಗಿರಿರಾಜ್ ಹೇಳಿದರೆ, ಕನ್ನಯ್ಯನಿಗೆ ಮತ ಹಾಕಿದರೆ ಬಿಜೆಪಿಗೆ ಲಾಭ ಎಂದು ಮುಸ್ಲಿಮರಿಗೆ ತನ್ವೀರ್ ಹೇಳುತ್ತಾ ಬಂದರು.

ತನ್ನ ಪ್ರಾಮಾಣಿಕತೆ ಮತ್ತು ಬಡತನದ ಹಿನ್ನೆಲೆಯ ಕಾರಣದಿಂದ ಕನ್ನಯ್ಯ ಜನರೊಂದಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಯಿತು. ಎಲ್ಲರೂ ಹೇಳುವಂತೆ ಇಲ್ಲಿ ತ್ರಿಕೋನ ಸ್ಪರ್ಧೆಯಿದೆ, ಅಂದರೆ ಈ ಸ್ಪರ್ಧೆ ಜಾತಿ, ಧರ್ಮಗಳನ್ನು ಮೀರಿದ್ದಾಗಲಿದೆ.
ಕೇವಲ ಜಾತಿ, ಧರ್ಮಗಳ ಲೆಕ್ಕದಲ್ಲಿ ನೋಡಿ ಕನ್ನಯ್ಯನಿಗೆ ಕಷ್ಟ ಎನ್ನಲು ಬರುವುದಿಲ್ಲ. ಇಲ್ಲಿ ಜಾತಿ, ಧರ್ಮಗಳನ್ನು ಮೀರಿ, ಸಿದ್ದಾಂತವು ಒಂದು ದೊಡ್ಡ ಫ್ಯಾಕ್ಟರ್ ಆಗಿದೆ. ಈ ಅಂಶವೇ ಕನ್ನಯ್ಯನ ನೆರವಿಗೆ ಬರಬಹುದು. ಈ ದೃಷ್ಟಿಯಲ್ಲಿ ಯಾರೇ ಸೋಲಲಿ, ಗೆಲ್ಲಲಿ, ಅದು ಡೆಮಾಕ್ರಸಿಯ ಗೆಲುವಂತೂ ಆಗಿರಲಿದೆ…

(ಕೃಪೆ: ದಿ ವೈರ್, ಲೇಖಕರು ಬಿಹಾರದ ಐಟಿ ವೃತ್ತಿಪರ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...