Homeಕರೋನಾ ತಲ್ಲಣಕೊರೊನಾ ವಿರುದ್ಧ ಬೆಂಗಳೂರು ಬೆಂಕಿ ಹತ್ತಿ ಉರಿಯುವಾಗ ಬಾವಿ ತೋಡಿದರಂತೆ

ಕೊರೊನಾ ವಿರುದ್ಧ ಬೆಂಗಳೂರು ಬೆಂಕಿ ಹತ್ತಿ ಉರಿಯುವಾಗ ಬಾವಿ ತೋಡಿದರಂತೆ

- Advertisement -
- Advertisement -

ಕೋವಿಡ್ ಬಿಕ್ಕಟ್ಟನ್ನು ‘ಆ ಭಗವಂತ’ನ ಮೇಲೆ ಬಿಟ್ಟು ಕರ್ನಾಟಕದ ಆರೋಗ್ಯ ಸಚಿವರು ತಮ್ಮ ನಿಶ್ಕ್ರಿಯತೆಯನ್ನು ತಾವೆ ಒಪ್ಪಿಕೊಂಡಂತಾಗಿದೆ. ದೇಶದಲ್ಲಿ ಕೋವಿಡ್‍ನ ಮೊದಲನೆ ಪ್ರಕರಣ ಕಂಡು ಹೆಚ್ಚು ಕಡಿಮೆ ನಾಲ್ಕು ತಿಂಗಳುಗಳು ಕಳೆದರೂ, ರಾಜ್ಯ ಸರ್ಕಾರ ಯಾವ ತಯಾರಿಯನ್ನೂ ಮಾಡಿಕೊಂಡಂತಿಲ್ಲ.

ಏಪ್ರಿಲ್ ಮತ್ತು ಮೇ ಎರಡು ತಿಂಗಳುಗಳ ಲಾಕ್‍ಡೌನಿನ ಸಮಯವಕಾಶವಿದ್ದರೂ ಸಹ, ಬರುವ ಆಪತ್ತಿಗೆ ಸರ್ಕಾರ ಯಾವ ವ್ಯವಸ್ಥೆಯನ್ನೂ ಮಾಡಲಿಲ್ಲ. ಲಾಕ್‍ಡೌನ್, ಸೀಲ್‍ಡೌನ್ ಬಿಟ್ಟು ಸರ್ಕಾರಕ್ಕೆ ಬೇರೆ ಯಾವ ಕಾರ್ಯತಂತ್ರ ತೋಚುತ್ತಿಲ್ಲವೆನಿಸುತ್ತದೆ. ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಏರಿ 40,000ಕ್ಕು ಹೆಚ್ಚು ತಲುಪಿದೆ. ಇಂತಹ ಸಂದರ್ಭದಲ್ಲಿ ಎಲ್ಲವೂ ಎಡವಟ್ಟಾಗಿ ನಡೆಡಿದೆ.

ಪರೀಕ್ಷೆಗಳಲ್ಲಿ ಬಹಳಷ್ಟು ಬ್ಯಾಕ್‍ಲಾಗ್ ಇದ್ದು ಪರೀಕ್ಷೆಯ ಫಲಿತಾಂಶ ಪಡೆಯಲು 7 ದಿನ ಕಾಯಬೇಕಾಗಿದೆ. ಆಸ್ಪತ್ರೆಗಳಲ್ಲಿನ ಬೆಡ್‍ಗಳ ನಿರ್ವಹಣೆಗಾಗಿ ಇರುವ ಬಿಬಿಎಂಪಿಯ ಸಾಫ್ಟ್‍ವೇರ್ ಅಪ್ಲಿಕೇಶನ್‍ನಿಂದ ಯಾವ ಪ್ರಯೊಜನವೂ ಕಾಣಿಸುತ್ತಿಲ್ಲ. ಗಂಭೀರ ಸ್ಥಿತಿಯಲ್ಲಿರುವ ಒಬ್ಬ ರೋಗಿಯ ಪರವಾಗಿ ಬೆಡ್ ಲಭ್ಯತೆಯಿರುವ ಆಸ್ಪತ್ರೆಗೆ ಕರೆ ಮಾಡಿದಾಗ, ನಮ್ಮಲ್ಲಿ ಬೆಡ್‍ಗಳಿವೆ ಆದರೆ ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿಲ್ಲವೆಂದು ಪ್ರತಿಕ್ರಿಯೆ ಬಂತು.

ಮತ್ತೊಂದು ಆಸ್ಪತ್ರೆಗೆ ಕರೆ ಮಾಡಿದಾಗ ನಮ್ಮಲ್ಲಿ ಬೆಡ್‍ಗಳಿಲ್ಲವೆಂದು ಹೇಳಿದರು. ‘ಬಿಬಿಎಂಪಿಯ ಸಾಫ್ಟ್‍ವೇರ್ ಅಪ್ಲಿಕೇಶನ್‍ನಲ್ಲಿ ನಿಮ್ಮ ಆಸ್ಪತ್ರೆಯಲ್ಲಿ 250 ಬೆಡ್‍ಗಳಿವೆಯೆಂದು ತೋರುಸಿತ್ತಿದೆಯಲ್ಲ’ ಎಂದು ಕೇಳಿದಾಗ, ಪ್ರತಿಕ್ರಿಯೆ ನೀಡುತ್ತಿದ್ದ ಸಿಬ್ಬಂದಿ ಹೌದಾ, ಅಂತಹದ್ದೊಂದು ಅಪ್ಲಿಕೇಶನ್ ಇದೆಯೆಂದೇ ನನಗೆ ಗೊತ್ತಿಲ್ಲ, ದಯವಿಟ್ಟು ಅದರ ಲಿಂಕ್ ಕಳುಹಿಸಿಯೆಂದರು.

ಈ ರೀತಿ ಬೆಡ್‍ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪಿಲ್ಲ. ಖಾಸಗಿ ಆಸ್ಪತ್ರೆಗಳೊಂದಿಗೆ ಮತ್ತೊಮ್ಮೆ ಚರ್ಚೆ ಮಾಡುವುದಿಲ್ಲ, ಇನ್ನೇನಿದ್ದರೂ ಕಠಿಣ ಕ್ರಮಕ್ಕೆ ಇಳಿಯುತ್ತೇವೆಯೆಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದರೂ, ಖಾಸಗಿ ಆಸ್ಪತ್ರೆಗಳಿಗೆ ಅದರ ಬಿಸಿ ತಟ್ಟಿದಂತಿಲ್ಲ. ಬದಲಿಗೆ ತಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮತ್ತಷ್ಟು ಬಲವಾಗಿ ಪಟ್ಟುಹಿಡಿದಂತಿದೆ. ನಮಗೆ ಸರಕಾರದಿಂದ ಬಾಕಿಯಿರುವ ಹಣವನ್ನು ಪಾವಿತಿಸುವವರೆಗು ನಾವು 50% ಬೆಡ್‍ಗಳನ್ನು ಸರಕಾರದಿಂದ ರೆಫರ್ ಮಾಡಿದ ರೋಗಿಗಳಿಗೆ ಮೀಸಲಿಡುವುದಿಲ್ಲವೆಂದು ಖಾಸಗಿ ಆಸ್ಪತ್ರೆಗಳು ತಿಳಿಸಿವೆ.

ಕಳೆದ 20 ವರ್ಷಗಳಿಂದ ಖಾಸಗಿ ಆಸ್ಪತ್ರೆಗಳನ್ನು ಪೋಷಿಸಿ ಸರ್ಕಾರಗಳು ತಮ್ಮ ಜುಟ್ಟನ್ನು ಅವರ ಕೈಯಿಗೆ ಕೊಟ್ಟ ಪರಿಣಾಮವು ಈಗ ಸ್ಪಷ್ಟವಾಗಿ ಕಾಣುತ್ತಿದೆ. ಈ ಸಂದಿಗ್ಧ ಪರಿಸ್ಥಿತಿ ಮುಂದಕ್ಕೆ ಏನಾಗಬಹುದೆಂದು ಬಹುಶಃ ‘ಆ ಭಗವಂತನನ್ನೇ’ ಕೇಳಬೇಕು.

ಖಾಸಗಿ ವ್ಯವಸ್ಥೆಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದಿರಲಿ, ತನ್ನದೇ ಸಾರ್ವಜನಿಕ ವ್ಯವಸ್ಥೆಯನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಿಬ್ಬಂದಿಗಳ ಕೊರತೆಯಿರುವ ಕಾರಣ ಇತರ ಇಲಾಖೆಗಳಿಂದ ಸಿಬ್ಬಂದಿಗಳನ್ನು ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಆದರೆ, ಎಷ್ಟೋ ಕೇಂದ್ರಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗಳು ಹಾಜರಾಗಿಲ್ಲ. ಈಗ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ತಕ್ಕ ಬೆಂಬಲ ವ್ಯವಸ್ಥೆಯೂ ಇಲ್ಲ. ಉದಾಹರಣೆಗೆ, ದಿನನಿತ್ಯ ಅಪಾಯವನ್ನು ಎದುರಿಸಿ ಇಡೀ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿರುವ ಆಶಾ ಕಾರ್ಯಕರ್ತರಿಗೆ ವಿಶೇಷ ಬೆಂಬಲ ನೀಡಿ ಅವರನ್ನು ರಕ್ಷಿಸಿ ಪ್ರೋತ್ಸಾಹಿಸುವ ಬದಲು ಅವರಿಗೆ ಕಳೆದ ಮೂರು ತಿಂಗಳುಗಳಿಂದ ‘ಗೌರವ’ ಧನವೂ ನೀಡಿಲ್ಲ. ಅದೇ ರೀತಿ ಯಾವುದೇ ರಕ್ಷಣಾ ಕವಚಗಳನ್ನು ನೀಡದೇ, ಕ್ರಮಬದ್ದವಾಗಿ ಅವರನ್ನು ಕೋವಿಡ್ ಪರಿಕ್ಷಿಗೆ ಒಳಪಡಿಸದೇ, ಚಿಕಿತ್ಸೆಗಾಗಿ ವಿಮೆ ಸೌಲಭ್ಯ ಮತ್ತು ಇತರ ಭದ್ರತೆಗಳನ್ನು ನೀಡದೇ ಸರ್ಕಾರ ಪೌರಕಾರ್ಮಿಕರನ್ನು ಅಪಾಯದ ಅಂಚಿಗೆ ತಲ್ಲಿದೆ. ಈ ರೀತಿ ಕೋವಿಡ್ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ ವರ್ಗದೊಂದಿಗೆ ರಾಜ್ಯ ಸರ್ಕಾರ ತುಚ್ಛವಾಗಿ ನಡೆದುಕೊಂಡಿದೆ.

ಸಮುದಾಯಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕೇಂದ್ರಬಿಂದು ಎಂಬುದು ಎಲ್ಲಾ ತಜ್ಞರಿಗೆ ತಿಳಿದಿರುವ ವಿಷಯ. ಆದರೂ ಕಳೆದ ನಾಲ್ಕು ತಿಂಗಳುಗಳಿಂದ ಈ ದಿಕ್ಕಿನಲ್ಲಿ ಯಾವ ವಿಧದ ತಯಾರಿಯೂ ಮಾಡಲಾಗಿಲ್ಲ. ಬೆಂಕಿ ಹೊತ್ತಿ ಉರಿಯುವಾಗ ಬಾವಿ ತೋಡಿದಂತೆ, ಬಿಬಿಎಂಪಿ ಈಗ ಬೆಂಗಳೂರಿನ ಎಲ್ಲಾ ವಾರ್ಡ್ ಸಮಿತಿಗಳನ್ನು ಪುನರ್ಚೇತನಗೊಳಿಸಲು ಹೊರಟಿದೆ. ತಡವಾಗಿಯಾದರೂ ಈ ಕ್ರಮ ಕೈಗೊಂಡಿರುವುದು ಬಹಳ ಉತ್ತಮ ಬೆಳವಣಿಗೆ.

ವಾರ್ಡ್ ಸಮಿತಿಗಳು ಕೇವಲ ಕೋವಿಡ್ ರೋಗ ನಿಯಂತ್ರಣ ಮಾತ್ರವಲ್ಲದೇ, ಕೋವಿಡ್ ಸಂಬಂಧಿತ ಕಳಂಕ, ತಾರತಮ್ಯ, ಭಯ, ಆತಂಕವನ್ನು ಕಡಿಮೆ ಮಾಡಲು ವಿಶೇಷ ಕಾಳಜಿವಹಿಸಬೇಕಿದೆ. ಹಾಗೆಯೇ ಸುಳ್ಳು ಮಾಹಿತಿ, ಭಯ ಹುಟ್ಟಿಸುವ ವದಂತಿಗಳನ್ನು ತಡೆಗಟ್ಟುವಲ್ಲಿಯೂ ವಾರ್ಡ್ ಸಮಿತಿಗಳು ಮುಖ್ಯ ಪಾತ್ರ ವಹಿಸಬೇಕಿವೆ. ಕೋವಿಡ್ ರೋಗಿಗಳು ಮಾತ್ರವಲ್ಲದೇ, ಇತರ ರೋಗಗಳಿಂದ ಬಳಲುತ್ತಿರುವವರಿಗು ಆರೋಗ್ಯ ಸೇವೆಗಳು ಕೈಗೆಟುವಂತೆ ಮಾಡುವುದು, ನೀರು, ಚರಂಡಿ ಮುಂತಾದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಬಿಬಿಎಂಪಿಯ ಗಮನ ಸೆಳೆಯುವುದು, ಸ್ಥಳೀಯ ನಾಯಕರನ್ನು, ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸಿ ಅವರ ಬೆಂಬಲ ಪಡೆಯುವುದು ಮುಂತಾದ ಜವಾಬ್ದಾರಿಗಳನ್ನು ವಾರ್ಡ್ ಸಮಿತಿಗಳು ನಿರ್ವಹಿಸಬೇಕಿದೆ.

ಈವರೆಗೆ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಲು ಭಗವಂತ ಏನು ಮಾಡಿದನೋ ಗೊತ್ತಿಲ್ಲ. ಆದರೇ ಈ ನಾಡಿನ ಜನಸಾಮಾನ್ಯರು ತಮ್ಮವರಿಗಾಗಿ ಬಹಳ ಶ್ರಮಿಸುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ರೇಶನ್ ಕಿಟ್‍ಗಳನ್ನು ಹೊಂದಿಸಿಕೊಂಡು ವಿತರಿಸುವುದು, ವಲಸೆ ಕಾರ್ಮಿಕರಿಗಾಗಿ ಊಟದ ವ್ಯವಸ್ಥೆ, ಅವರು ಮನೆಗೆ ತೆರೆಳಲು ಸಹಾಯ ಇವೆಲ್ಲವನ್ನು ಜನಸಾಮಾನ್ಯರೇ ನಿಭಾಯಿಸಿದ್ದಾರೆ.

ಜನಸಾಮಾನ್ಯರು ಕೇವಲ ಶ್ರಮಿಸುವುದಲ್ಲದೇ ಸರ್ಕಾರದಲ್ಲಿ ಉತ್ತರದಾಯಿತ್ವ, ಪಾರದರ್ಶಕತೆಗಾಗಿ ಒತ್ತಾಯಿಸಬೇಕಿದೆ. ಸರ್ಕಾರದ ಕ್ರಮಗಳು ಸೂಕ್ತವಿಲ್ಲದಿದ್ದಲ್ಲಿ, ಅವುಗಳನ್ನು ಪ್ರಶ್ನಿಸಬೇಕಿದೆ. ಮುಂಬೈಯಿನ ಧಾರಾವಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಇವತ್ತು ನಿಯಂತ್ರಣದಲ್ಲಿರುವುದು ಯಾವುದೋ ದೊಡ್ಡ ಮಟ್ಟದ ತಾಂತ್ರಿಕ ಶಕ್ತಿಯಿಂದಲ್ಲ. ಅಲ್ಲಿನ ಸಮುದಾಯ ಕೋವಿಡ್ ನಿಯಂತ್ರಣದಲ್ಲಿ ಪಾಲ್ಗೊಂಡು ಜನರಿಗೆ ಮಾಹಿತಿ ನೀಡಿ, ಅವರಲ್ಲಿ ಭಯ ಆತಂಕವನ್ನು ತಡೆಗಟ್ಟಿ, ಅಗತ್ಯ ಆರೋಗ್ಯ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೆಟುಕುವಂತೆ ಮಾಡಿದ ಪರಿಣಾಮ ಇಂದು ಧಾರಾವಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಸಮಸ್ಯೆ ನಿಯಂತ್ರಣದಲ್ಲಿದೆ. “ಭಗವಂತನ” ಮೇಲೆ ಈ ಬಿಕ್ಕಟ್ಟಿನ ಹೊರೆ ಹಾಕುವ ಬದಲು, ಸಂವಿಧಾನಬದ್ಧವಾಗಿ ಪ್ರಜಾಸತಾತ್ಮಕವಾದ ನಮ್ಮ ನಾಗರಿಕತ್ವದ ಹಕ್ಕುಗಳನುಸಾರವಾಗಿ ಈ ಬಿಕಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ.

-ಡಾ.ಅಖಿಲಾ ವಾಸನ್


ಇದನ್ನು ಓದಿ: ದುಬೆ ಹತ್ಯೆ ಪ್ರಕರಣದ ತನಿಖಾ ತಂಡವನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...