Homeಕರೋನಾ ತಲ್ಲಣಕೊರೊನಾ ವಿರುದ್ಧ ಬೆಂಗಳೂರು ಬೆಂಕಿ ಹತ್ತಿ ಉರಿಯುವಾಗ ಬಾವಿ ತೋಡಿದರಂತೆ

ಕೊರೊನಾ ವಿರುದ್ಧ ಬೆಂಗಳೂರು ಬೆಂಕಿ ಹತ್ತಿ ಉರಿಯುವಾಗ ಬಾವಿ ತೋಡಿದರಂತೆ

- Advertisement -
- Advertisement -

ಕೋವಿಡ್ ಬಿಕ್ಕಟ್ಟನ್ನು ‘ಆ ಭಗವಂತ’ನ ಮೇಲೆ ಬಿಟ್ಟು ಕರ್ನಾಟಕದ ಆರೋಗ್ಯ ಸಚಿವರು ತಮ್ಮ ನಿಶ್ಕ್ರಿಯತೆಯನ್ನು ತಾವೆ ಒಪ್ಪಿಕೊಂಡಂತಾಗಿದೆ. ದೇಶದಲ್ಲಿ ಕೋವಿಡ್‍ನ ಮೊದಲನೆ ಪ್ರಕರಣ ಕಂಡು ಹೆಚ್ಚು ಕಡಿಮೆ ನಾಲ್ಕು ತಿಂಗಳುಗಳು ಕಳೆದರೂ, ರಾಜ್ಯ ಸರ್ಕಾರ ಯಾವ ತಯಾರಿಯನ್ನೂ ಮಾಡಿಕೊಂಡಂತಿಲ್ಲ.

ಏಪ್ರಿಲ್ ಮತ್ತು ಮೇ ಎರಡು ತಿಂಗಳುಗಳ ಲಾಕ್‍ಡೌನಿನ ಸಮಯವಕಾಶವಿದ್ದರೂ ಸಹ, ಬರುವ ಆಪತ್ತಿಗೆ ಸರ್ಕಾರ ಯಾವ ವ್ಯವಸ್ಥೆಯನ್ನೂ ಮಾಡಲಿಲ್ಲ. ಲಾಕ್‍ಡೌನ್, ಸೀಲ್‍ಡೌನ್ ಬಿಟ್ಟು ಸರ್ಕಾರಕ್ಕೆ ಬೇರೆ ಯಾವ ಕಾರ್ಯತಂತ್ರ ತೋಚುತ್ತಿಲ್ಲವೆನಿಸುತ್ತದೆ. ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಏರಿ 40,000ಕ್ಕು ಹೆಚ್ಚು ತಲುಪಿದೆ. ಇಂತಹ ಸಂದರ್ಭದಲ್ಲಿ ಎಲ್ಲವೂ ಎಡವಟ್ಟಾಗಿ ನಡೆಡಿದೆ.

ಪರೀಕ್ಷೆಗಳಲ್ಲಿ ಬಹಳಷ್ಟು ಬ್ಯಾಕ್‍ಲಾಗ್ ಇದ್ದು ಪರೀಕ್ಷೆಯ ಫಲಿತಾಂಶ ಪಡೆಯಲು 7 ದಿನ ಕಾಯಬೇಕಾಗಿದೆ. ಆಸ್ಪತ್ರೆಗಳಲ್ಲಿನ ಬೆಡ್‍ಗಳ ನಿರ್ವಹಣೆಗಾಗಿ ಇರುವ ಬಿಬಿಎಂಪಿಯ ಸಾಫ್ಟ್‍ವೇರ್ ಅಪ್ಲಿಕೇಶನ್‍ನಿಂದ ಯಾವ ಪ್ರಯೊಜನವೂ ಕಾಣಿಸುತ್ತಿಲ್ಲ. ಗಂಭೀರ ಸ್ಥಿತಿಯಲ್ಲಿರುವ ಒಬ್ಬ ರೋಗಿಯ ಪರವಾಗಿ ಬೆಡ್ ಲಭ್ಯತೆಯಿರುವ ಆಸ್ಪತ್ರೆಗೆ ಕರೆ ಮಾಡಿದಾಗ, ನಮ್ಮಲ್ಲಿ ಬೆಡ್‍ಗಳಿವೆ ಆದರೆ ಸಿಬ್ಬಂದಿಗಳ ತೀವ್ರ ಕೊರತೆಯಿಂದಾಗಿ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿಲ್ಲವೆಂದು ಪ್ರತಿಕ್ರಿಯೆ ಬಂತು.

ಮತ್ತೊಂದು ಆಸ್ಪತ್ರೆಗೆ ಕರೆ ಮಾಡಿದಾಗ ನಮ್ಮಲ್ಲಿ ಬೆಡ್‍ಗಳಿಲ್ಲವೆಂದು ಹೇಳಿದರು. ‘ಬಿಬಿಎಂಪಿಯ ಸಾಫ್ಟ್‍ವೇರ್ ಅಪ್ಲಿಕೇಶನ್‍ನಲ್ಲಿ ನಿಮ್ಮ ಆಸ್ಪತ್ರೆಯಲ್ಲಿ 250 ಬೆಡ್‍ಗಳಿವೆಯೆಂದು ತೋರುಸಿತ್ತಿದೆಯಲ್ಲ’ ಎಂದು ಕೇಳಿದಾಗ, ಪ್ರತಿಕ್ರಿಯೆ ನೀಡುತ್ತಿದ್ದ ಸಿಬ್ಬಂದಿ ಹೌದಾ, ಅಂತಹದ್ದೊಂದು ಅಪ್ಲಿಕೇಶನ್ ಇದೆಯೆಂದೇ ನನಗೆ ಗೊತ್ತಿಲ್ಲ, ದಯವಿಟ್ಟು ಅದರ ಲಿಂಕ್ ಕಳುಹಿಸಿಯೆಂದರು.

ಈ ರೀತಿ ಬೆಡ್‍ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪಿಲ್ಲ. ಖಾಸಗಿ ಆಸ್ಪತ್ರೆಗಳೊಂದಿಗೆ ಮತ್ತೊಮ್ಮೆ ಚರ್ಚೆ ಮಾಡುವುದಿಲ್ಲ, ಇನ್ನೇನಿದ್ದರೂ ಕಠಿಣ ಕ್ರಮಕ್ಕೆ ಇಳಿಯುತ್ತೇವೆಯೆಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದರೂ, ಖಾಸಗಿ ಆಸ್ಪತ್ರೆಗಳಿಗೆ ಅದರ ಬಿಸಿ ತಟ್ಟಿದಂತಿಲ್ಲ. ಬದಲಿಗೆ ತಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಮತ್ತಷ್ಟು ಬಲವಾಗಿ ಪಟ್ಟುಹಿಡಿದಂತಿದೆ. ನಮಗೆ ಸರಕಾರದಿಂದ ಬಾಕಿಯಿರುವ ಹಣವನ್ನು ಪಾವಿತಿಸುವವರೆಗು ನಾವು 50% ಬೆಡ್‍ಗಳನ್ನು ಸರಕಾರದಿಂದ ರೆಫರ್ ಮಾಡಿದ ರೋಗಿಗಳಿಗೆ ಮೀಸಲಿಡುವುದಿಲ್ಲವೆಂದು ಖಾಸಗಿ ಆಸ್ಪತ್ರೆಗಳು ತಿಳಿಸಿವೆ.

ಕಳೆದ 20 ವರ್ಷಗಳಿಂದ ಖಾಸಗಿ ಆಸ್ಪತ್ರೆಗಳನ್ನು ಪೋಷಿಸಿ ಸರ್ಕಾರಗಳು ತಮ್ಮ ಜುಟ್ಟನ್ನು ಅವರ ಕೈಯಿಗೆ ಕೊಟ್ಟ ಪರಿಣಾಮವು ಈಗ ಸ್ಪಷ್ಟವಾಗಿ ಕಾಣುತ್ತಿದೆ. ಈ ಸಂದಿಗ್ಧ ಪರಿಸ್ಥಿತಿ ಮುಂದಕ್ಕೆ ಏನಾಗಬಹುದೆಂದು ಬಹುಶಃ ‘ಆ ಭಗವಂತನನ್ನೇ’ ಕೇಳಬೇಕು.

ಖಾಸಗಿ ವ್ಯವಸ್ಥೆಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದಿರಲಿ, ತನ್ನದೇ ಸಾರ್ವಜನಿಕ ವ್ಯವಸ್ಥೆಯನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಿಬ್ಬಂದಿಗಳ ಕೊರತೆಯಿರುವ ಕಾರಣ ಇತರ ಇಲಾಖೆಗಳಿಂದ ಸಿಬ್ಬಂದಿಗಳನ್ನು ಆರೋಗ್ಯ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಆದರೆ, ಎಷ್ಟೋ ಕೇಂದ್ರಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಗಳು ಹಾಜರಾಗಿಲ್ಲ. ಈಗ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ತಕ್ಕ ಬೆಂಬಲ ವ್ಯವಸ್ಥೆಯೂ ಇಲ್ಲ. ಉದಾಹರಣೆಗೆ, ದಿನನಿತ್ಯ ಅಪಾಯವನ್ನು ಎದುರಿಸಿ ಇಡೀ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿರುವ ಆಶಾ ಕಾರ್ಯಕರ್ತರಿಗೆ ವಿಶೇಷ ಬೆಂಬಲ ನೀಡಿ ಅವರನ್ನು ರಕ್ಷಿಸಿ ಪ್ರೋತ್ಸಾಹಿಸುವ ಬದಲು ಅವರಿಗೆ ಕಳೆದ ಮೂರು ತಿಂಗಳುಗಳಿಂದ ‘ಗೌರವ’ ಧನವೂ ನೀಡಿಲ್ಲ. ಅದೇ ರೀತಿ ಯಾವುದೇ ರಕ್ಷಣಾ ಕವಚಗಳನ್ನು ನೀಡದೇ, ಕ್ರಮಬದ್ದವಾಗಿ ಅವರನ್ನು ಕೋವಿಡ್ ಪರಿಕ್ಷಿಗೆ ಒಳಪಡಿಸದೇ, ಚಿಕಿತ್ಸೆಗಾಗಿ ವಿಮೆ ಸೌಲಭ್ಯ ಮತ್ತು ಇತರ ಭದ್ರತೆಗಳನ್ನು ನೀಡದೇ ಸರ್ಕಾರ ಪೌರಕಾರ್ಮಿಕರನ್ನು ಅಪಾಯದ ಅಂಚಿಗೆ ತಲ್ಲಿದೆ. ಈ ರೀತಿ ಕೋವಿಡ್ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ ವರ್ಗದೊಂದಿಗೆ ರಾಜ್ಯ ಸರ್ಕಾರ ತುಚ್ಛವಾಗಿ ನಡೆದುಕೊಂಡಿದೆ.

ಸಮುದಾಯಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕೇಂದ್ರಬಿಂದು ಎಂಬುದು ಎಲ್ಲಾ ತಜ್ಞರಿಗೆ ತಿಳಿದಿರುವ ವಿಷಯ. ಆದರೂ ಕಳೆದ ನಾಲ್ಕು ತಿಂಗಳುಗಳಿಂದ ಈ ದಿಕ್ಕಿನಲ್ಲಿ ಯಾವ ವಿಧದ ತಯಾರಿಯೂ ಮಾಡಲಾಗಿಲ್ಲ. ಬೆಂಕಿ ಹೊತ್ತಿ ಉರಿಯುವಾಗ ಬಾವಿ ತೋಡಿದಂತೆ, ಬಿಬಿಎಂಪಿ ಈಗ ಬೆಂಗಳೂರಿನ ಎಲ್ಲಾ ವಾರ್ಡ್ ಸಮಿತಿಗಳನ್ನು ಪುನರ್ಚೇತನಗೊಳಿಸಲು ಹೊರಟಿದೆ. ತಡವಾಗಿಯಾದರೂ ಈ ಕ್ರಮ ಕೈಗೊಂಡಿರುವುದು ಬಹಳ ಉತ್ತಮ ಬೆಳವಣಿಗೆ.

ವಾರ್ಡ್ ಸಮಿತಿಗಳು ಕೇವಲ ಕೋವಿಡ್ ರೋಗ ನಿಯಂತ್ರಣ ಮಾತ್ರವಲ್ಲದೇ, ಕೋವಿಡ್ ಸಂಬಂಧಿತ ಕಳಂಕ, ತಾರತಮ್ಯ, ಭಯ, ಆತಂಕವನ್ನು ಕಡಿಮೆ ಮಾಡಲು ವಿಶೇಷ ಕಾಳಜಿವಹಿಸಬೇಕಿದೆ. ಹಾಗೆಯೇ ಸುಳ್ಳು ಮಾಹಿತಿ, ಭಯ ಹುಟ್ಟಿಸುವ ವದಂತಿಗಳನ್ನು ತಡೆಗಟ್ಟುವಲ್ಲಿಯೂ ವಾರ್ಡ್ ಸಮಿತಿಗಳು ಮುಖ್ಯ ಪಾತ್ರ ವಹಿಸಬೇಕಿವೆ. ಕೋವಿಡ್ ರೋಗಿಗಳು ಮಾತ್ರವಲ್ಲದೇ, ಇತರ ರೋಗಗಳಿಂದ ಬಳಲುತ್ತಿರುವವರಿಗು ಆರೋಗ್ಯ ಸೇವೆಗಳು ಕೈಗೆಟುವಂತೆ ಮಾಡುವುದು, ನೀರು, ಚರಂಡಿ ಮುಂತಾದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಬಿಬಿಎಂಪಿಯ ಗಮನ ಸೆಳೆಯುವುದು, ಸ್ಥಳೀಯ ನಾಯಕರನ್ನು, ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸಿ ಅವರ ಬೆಂಬಲ ಪಡೆಯುವುದು ಮುಂತಾದ ಜವಾಬ್ದಾರಿಗಳನ್ನು ವಾರ್ಡ್ ಸಮಿತಿಗಳು ನಿರ್ವಹಿಸಬೇಕಿದೆ.

ಈವರೆಗೆ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಲು ಭಗವಂತ ಏನು ಮಾಡಿದನೋ ಗೊತ್ತಿಲ್ಲ. ಆದರೇ ಈ ನಾಡಿನ ಜನಸಾಮಾನ್ಯರು ತಮ್ಮವರಿಗಾಗಿ ಬಹಳ ಶ್ರಮಿಸುತ್ತಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ರೇಶನ್ ಕಿಟ್‍ಗಳನ್ನು ಹೊಂದಿಸಿಕೊಂಡು ವಿತರಿಸುವುದು, ವಲಸೆ ಕಾರ್ಮಿಕರಿಗಾಗಿ ಊಟದ ವ್ಯವಸ್ಥೆ, ಅವರು ಮನೆಗೆ ತೆರೆಳಲು ಸಹಾಯ ಇವೆಲ್ಲವನ್ನು ಜನಸಾಮಾನ್ಯರೇ ನಿಭಾಯಿಸಿದ್ದಾರೆ.

ಜನಸಾಮಾನ್ಯರು ಕೇವಲ ಶ್ರಮಿಸುವುದಲ್ಲದೇ ಸರ್ಕಾರದಲ್ಲಿ ಉತ್ತರದಾಯಿತ್ವ, ಪಾರದರ್ಶಕತೆಗಾಗಿ ಒತ್ತಾಯಿಸಬೇಕಿದೆ. ಸರ್ಕಾರದ ಕ್ರಮಗಳು ಸೂಕ್ತವಿಲ್ಲದಿದ್ದಲ್ಲಿ, ಅವುಗಳನ್ನು ಪ್ರಶ್ನಿಸಬೇಕಿದೆ. ಮುಂಬೈಯಿನ ಧಾರಾವಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಇವತ್ತು ನಿಯಂತ್ರಣದಲ್ಲಿರುವುದು ಯಾವುದೋ ದೊಡ್ಡ ಮಟ್ಟದ ತಾಂತ್ರಿಕ ಶಕ್ತಿಯಿಂದಲ್ಲ. ಅಲ್ಲಿನ ಸಮುದಾಯ ಕೋವಿಡ್ ನಿಯಂತ್ರಣದಲ್ಲಿ ಪಾಲ್ಗೊಂಡು ಜನರಿಗೆ ಮಾಹಿತಿ ನೀಡಿ, ಅವರಲ್ಲಿ ಭಯ ಆತಂಕವನ್ನು ತಡೆಗಟ್ಟಿ, ಅಗತ್ಯ ಆರೋಗ್ಯ ಸೇವೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೆಟುಕುವಂತೆ ಮಾಡಿದ ಪರಿಣಾಮ ಇಂದು ಧಾರಾವಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಸಮಸ್ಯೆ ನಿಯಂತ್ರಣದಲ್ಲಿದೆ. “ಭಗವಂತನ” ಮೇಲೆ ಈ ಬಿಕ್ಕಟ್ಟಿನ ಹೊರೆ ಹಾಕುವ ಬದಲು, ಸಂವಿಧಾನಬದ್ಧವಾಗಿ ಪ್ರಜಾಸತಾತ್ಮಕವಾದ ನಮ್ಮ ನಾಗರಿಕತ್ವದ ಹಕ್ಕುಗಳನುಸಾರವಾಗಿ ಈ ಬಿಕಟ್ಟಿನಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ.

-ಡಾ.ಅಖಿಲಾ ವಾಸನ್


ಇದನ್ನು ಓದಿ: ದುಬೆ ಹತ್ಯೆ ಪ್ರಕರಣದ ತನಿಖಾ ತಂಡವನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...