Homeಮುಖಪುಟಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಪಾಲಾರ್, ಗಾಂಧಿ ಮತ್ತು ನೋಟು ಸಿನಿಮಾ ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ಪಾಲಾರ್, ಗಾಂಧಿ ಮತ್ತು ನೋಟು ಸಿನಿಮಾ ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ

"ಜ್ಯೂರಿಗಳ ತೀರ್ಮಾನವೆ ಅಂತಿಮ ತೀರ್ಮಾನವಾದ್ದರಿಂದ ಅದನ್ನು ನಾವೆಲ್ಲರೂ ತೆಲೆಬಾಗಿ ಸ್ವೀಕರಿಸಬೇಕು ಎನ್ನುತ್ತಾರೆ" ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ್ ಕಶ್ಯಪ್‌ರವರು.

- Advertisement -
- Advertisement -

14ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 23 ರಿಂದ 30 ರವರೆಗೆ ನಡೆಯಲಿದ್ದು, ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪಾಲಾರ್ ಹಾಗೂ ಗಾಂಧಿ ಮತ್ತು ನೋಟು ಸಿನಿಮಾಗಳನ್ನು ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ವಿಭಾಗದಲ್ಲಿ 19.20.21, ಗಂಧದಗುಡಿ, ಗುರುಶಿಷ್ಯರು, ಹದಿನೇಳೆಂಟು, ಕನಕ ಮಾರ್ಗ, ಕೊರಮ್ಮ (ತುಳು), ಕುಬುಸ, ಮೇಡ್ ಇನ್ ಬೆಂಗಳೂರು, ನಲ್ಕೆ, ನಾನು ಕುಸುಮ, ಆರ್ಕೆಸ್ಟ್ರಾ ಮೈಸೂರು, ಫೋಟೋ, ಸ್ವಚ್ಚ ಕರ್ನಾಟಕ ಮತ್ತು ವಿಜಯಾನಂದ ಸಿನಿಮಾಗಳು ಈ ಬಾರಿಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ.

“ಕನ್ನಡದಲ್ಲೇ ಮೊದಲ ಬಾರಿ ನೇರ ದಲಿತರ ಕಥೆಯ ಪಾಲಾರ್ ಸಿನಿಮಾ ಬಂದಿದೆ. ಸಿನಿಮಾ ನೋಡಿದ ಪ್ರತಿ ಒಬ್ಬರಿಗೂ ಇಷ್ಟ ಆಗಿತ್ತು ಮತ್ತು ಎಲ್ಲಾ ಕಡೆ ಪಾಸಿಟಿವ್ ರಿವ್ಯೂ ಬಂದಿತ್ತು. ಮೀಡಿಯಾ ಮತ್ತು ಕ್ರಿಟಿಕ್ಸ್ ಸಹ ಪಾಲಾರ್ ಸಿನಿಮಾ ಚೆನ್ನಾಗಿದೆ ಅವಾರ್ಡ್ ಬರುತ್ತೆ ಅಂತಿದ್ರು..ಆದರೆ ಇಲ್ಲಿರುವ ಕರ್ನಾಟಕ ಸರ್ಕಾರದ ಕನ್ನಡ ಚಲನಚಿತ್ರ ಅಕಾಡೆಮಿ ಮತ್ತು ಅದರ ಸದಸ್ಯರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಲಿತರ ಬಗ್ಗೆ ಕಥೆ ಇರುವ, ದಲಿತರೇ ಸ್ವಂತವಾಗಿ ಸಿನಿಮಾ ನಿರ್ದೇಶನ ಮಾಡಿರುವ, ದಲಿತರೇ ನಿರ್ಮಾಣ ಮಾಡಿರುವ, ದಲಿತರೇ ಹೆಚ್ಚಾಗಿ ನಟಿಸಿರುವ ಪಾಲಾರ್ ಸಿನಿಮಾ ತಿರಸ್ಕರಿಸುವ ಮೂಲಕ ನಮ್ಮ ಪಾಲಾರ್ ಸಿನಿಮಾಗೆ ಇಲ್ಲಿಯೂ ಅಸ್ಪೃಶ್ಯತೆ ಆಚರಣೆಗೆ ಮುಂದಾಗಿದ್ದಾರೆ” ಎಂದು ಪಾಲಾರ್ ಚಿತ್ರದ ನಿರ್ದೇಶಕ ಜೀವಾ ನವೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸೆಲೆಕ್ಟ್ ಆದ ಸಿನಿಮಾಗಳಲ್ಲಿ ಎಷ್ಟು ಸಿನಿಮಾಗಳ ಹೆಸರು ನಿಮಗೆ ಗೊತ್ತು? Ok ಬಿಡಿ ನಾವು ಇನ್ನೂ ಮುಂದೆ ಕಮಲ, ಕರು, ಹಸು, ದೇವರ ಸಿನಿಮಾ ಮಾಡಿ ಅಂತ ಹೇಳ್ತೀವಿ. ಬಾಬಾ ಸಾಹೇಬರ ಫೋಟೋ ಸಿನಿಮಾಗಳಲ್ಲಿ ತೋರಿಸಿದರೆ ನಿಮಗೆ ಉರಿ ಅಂತ ಗೊತ್ತು. ಇನ್ನು ಮುಂದೆ ದಲಿತರು ಬೇರೆ ಅವರ ಸಿನಿಮಾಗಳು ನೋಡುವುದನ್ನು ನಿಲ್ಲಿಸುತ್ತೇವೆ. ದಲಿತರ ಬಗ್ಗೆ ಅದೆಷ್ಟೋ ವರ್ಷಗಳ ನಂತರ ಬಂದ ಪಾಲಾರ್ ಸಿನಿಮಾ ಸೆಲೆಕ್ಟ್ ಮಾಡುವಷ್ಟು ಯೋಗ್ಯತೆ ನಿಮಗಿಲ್ಲ. ಈ ಸರ್ಕಾರಕ್ಕೆ ಕಾಶ್ಮೀರಿ ಫೈಲ್ಸ್ ಬೇಕು, ನಾಯಿ ಬಗ್ಗೆ ಕಾಲ್ಪನಿಕ ಕಥೆ ಚಾರ್ಲಿ ಬೇಕು. ಅದಕ್ಕೆಲ್ಲಾ ಟಾಕ್ಸ್ ಫ್ರೀ ಬೇರೆ ಮಾಡ್ತಾರೆ. ಜಾತಿ ಭೇದ ಭಾವ ಮಾಡೋದು ಈಗ ನೀವೇ ಅಂತ ಗೊತ್ತಾಯ್ತು ಬಿಡಿ” ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಗಾಂಧಿ ಮತ್ತು ನೋಟು’ ಇದು ಗಾಂಧಿಯ ಆದರ್ಶಗಳ ಬಗ್ಗೆ ಇರುವ ಚಿತ್ರ. ಮೊನ್ನೆ ಮಕ್ಕಳ ಚಲನಚಿತ್ರೋತ್ಸವದಲ್ಲಿ ನಾಲ್ಕು ಅವಾರ್ಡ್‌ಗಳನ್ನು ತೆಗೆದುಕೊಂಡ ಚಿತ್ರ.. ಆದರೆ ಈ #BIffs ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಭಾಗ್ಯವಿಲ್ಲ.. ಕಾರಣವೆಂದರೆ ಅಕಾಡಮಿಯ ಅಧ್ಯಕ್ಷರು, ತಂಡ ಮತ್ತು ಮಹಾನ್ ಜ್ಯೂರಿಗಳು ಹಣದ ಬೇಡಿಕೆಯ ಸದ್ದು ನನ್ನ ಕಿವಿಗೂ ಬಿದ್ದಿದೆ.. ಯಾಕ್ ಕೋಡಬೇಕು? ಎಂದು ಸಿನಿಮಾದ ನಿರ್ದೇಶಕರಾದ ಯೋಗಿ ದಾವಣಗೆರೆಯವರು ಕಿಡಿಕಾರಿದ್ದಾರೆ.

ಈ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ್ ಕಶ್ಯಪ್‌ರವರನ್ನು ಪ್ರಶ್ನಿಸಿದಾಗ “ಒಂದು ಸಿನಿಮಾ ಆಯ್ಕೆಯಾಗಬೇಕಾದರೆ ಉಳಿದ ಸಿನಿಮಾಗಳ ಜೊತೆ ಸ್ಪರ್ಧಿಸಿ ಗೆಲ್ಲಬೇಕು. ಸ್ಪರ್ಧೆಯಲ್ಲಿ ಗೆಲ್ಲದೆ ನಮ್ಮ ಸಿನಿಮಾವನ್ನು ಆಯ್ಕೆ ಮಾಡಿಲ್ಲ ಎಂದು ಕೇಳುವುದು ಯಾವ ನ್ಯಾಯ? ಕಲೆಗೆ ಮೀಸಲಾತಿ ಕೊಡಿ ಎಂದು ಕೇಳುವುದು ಸರಿಯಲ್ಲ. ಜ್ಯೂರಿಗಳಿಗೆ ನಾವು ಮರ್ಯಾದೆ ಕೊಡಬೇಕು. ಅವರ ತೀರ್ಮಾನವೆ ಅಂತಿಮ ತೀರ್ಮಾನವಾದ್ದರಿಂದ, ಜ್ಯೂರಿ ಅಧ್ಯಕ್ಷರು ಸೆಲೆಕ್ಟ್ ಮಾಡಿರುವುದಕ್ಕೆ ನಾವೆಲ್ಲರೂ ತೆಲೆಬಾಗಿ ಸ್ವೀಕರಿಸಬೇಕು” ಎಂದರು.

ಕೆಲ ಕಳಪೆ ಸಿನಿಮಾಗಳನ್ನು ಸಹ ಸೆಲೆಕ್ಟ್ ಮಾಡಲಾಗಿದೆ. ಅದಕ್ಕಿಂತಲೂ ಉತ್ತಮ ಕನ್ನಡ ಚಿತ್ರಗಳು ಇದ್ದವಲ್ಲ ಎಂಬ ಪ್ರಶ್ನೆಗೆ “ನೀವಾಗಲಿ, ಪ್ರೇಕ್ಷಕರಾಗಲಿ ಇಂತಹ ಸಿನಿಮಾ ಇರಲಿ, ಬಿಡಲಿ ಎಂದು ಹೇಳಲು ಬರುವುದಿಲ್ಲ. ಜೇಮ್ಸ್ ಸಿನಿಮಾ ಬರಬೇಕೆಂದು ನಾನು ಬಯಸಿದ್ದೆ. ಆದರೆ ಬಂದಿಲ್ಲ ಏನು ಮಾಡುವುದು? ಹೊರಗಿನವರ ಮಾತಿಗೆ ನಾವು ಕಿವಿಗೊಡುವುದಿಲ್ಲ, ಜ್ಯೂರಿ ಅಧ್ಯಕ್ಷರಾದ ಎಂ.ಎಸ್ ರಮೇಶ್ ರವರೇ ತಮ್ಮ ವಿಟೋ ಪವರ್ ಬಳಸಿ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ ಮತ್ತು ನನಗೂ ಅದಕ್ಕೂ ಸಂಬಂಧವಿಲ್ಲ” ಎಂದರು.

ಬೆಂಗಳೂರು ಅಂತರಾಷ್ಟ್ರೀಯ ಚಲನಚತ್ರೋತ್ಸವಗಳಿಗೆ ಪ್ರತಿ ಬಾರಿಯೂ ಹಾಜರಾಗುವ ಸಿನಿಮಾಸಕ್ತ ವಿ.ಎಲ್ ಬಾಲುರವರು ನಾನುಗೌರಿಯೊಂದಿಗೆ ಮಾತನಾಡಿ, “ಪಾಲಾರ್ ಸಿನಿಮಾ ಇರಲಿ, ಮತ್ತೊಂದು ಸಿನಿಮಾ ಇರಲಿ- ಸಿನಿಮಾದ ಆಶಯದ ಮೇಲೆ ಜ್ಯೂರಿಗಳು ಸಿನಿಮಾಗಳನ್ನು ಆಯ್ಕೆ ಮಾಡಬೇಕು. ಅದು ಬಿಟ್ಟು ಮೆರಿಟ್ ಬಗ್ಗೆ ಮಾತನಾಡುವುದು ಎಲ್ಲಾ ಬೋಗಸ್ ಅಂತ ಸಿನಿಮಾ ಮಾತ್ರವಲ್ಲದೆ ಎಲ್ಲಾ ರಂಗದಲ್ಲಿಯೂ ಏನಾಗುತ್ತಿದೆ ಅಂತ ಎಲ್ಲರಿಗೂ ತಿಳಿದಿದೆ” ಎಂದರು.

Biffes ವಿಚಾರದಲ್ಲಿ ಕನ್ನಡ ಮತ್ತು ಇತರ ಸಿನಿಮಾಗಳ ಆಯ್ಕೆಯ ಮಾನದಂಡಗಳು ಏನು, ಜ್ಯೂರಿಗಳನ್ನು ಯಾರು ಆಯ್ಕೆ ಮಾಡುತ್ತಾರೆ? ಅದರ ಪ್ರಕ್ರಿಯೆಯೇನು ಎಂಬುದರ ಕುರಿತು ಎಲ್ಲಿಯೂ ಸರಿಯಾದ ಮಾಹಿತಿ ಇಲ್ಲ. ಈ ಕುರಿತು Biffes ವೆಬ್‌ಸೈಟ್‌ನಲ್ಲಿ ಪಾರದರ್ಶಕವಾಗಿ ಪ್ರಕಟಿಸಿದರೆ ಸಾಕಷ್ಟು ವಿವಾದಗಳನ್ನು ತಪ್ಪಿಸಬಹುದು. ಇಂತಹ ಕೆಲಸವನ್ನು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಮಾಡಬೇಕು ಎಂದು ಒತ್ತಾಯಿಸಿದರು.

ನಾವು Biffesಗೆ ಬರುವುದು ಪ್ರಪಂಚದ ಅಪರೂಪದ ಬೇರೆ ಬೇರೆ ದೇಶದ ಜನರ – ಸರ್ಕಾರದ ಬಗ್ಗೆ ಹೆಚ್ಚು ಹೇಳುವ ಸಿನಿಮಾಗಳನ್ನು ನೋಡುವುದಕ್ಕಾಗಿ. ಅಂತಹ ಸಿನಿಮಾಗಳು ಆಯ್ಕೆ ಆಗಬೇಕು. ಆದರೆ ಈ ಬಾರಿಯ ಸಿನಿಮಾದ ಪಟ್ಟಿ ನೋಡಿದರೆ ಕೆಲವೊಂದು ಸಿನಿಮಾಗಳನ್ನು ಹೊರತುಪಡಿಸಿ ನಿರಾಶೆ ಅನಿಸುತ್ತದೆ. ಆದರೂ Biffes ನೋಡಿದಮೆಲೆ ಸಿಗುವ ಅನುಭವಕ್ಕಾಗಿ ಕಾಯುತ್ತಿರುವ ಸಿನಿ ಅಭಿಮಾನಿಗಳಲ್ಲಿ ನಾನು ಒಬ್ಬ. ನನ್ನಂಥಹ ಬಹಳಷ್ಟು ಸಿನಿಪ್ರೇಮಿಗಳ ಆಶಯವನ್ನು ಅಧ್ಯಕ್ಷರು ಅರ್ಥಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: ‘ಬಿಫೆಸ್‌’ನಲ್ಲಿ ಸಾವರ್ಕರ್‌ ಪ್ರತ್ಯಕ್ಷ; ಮಾದರಿ ವ್ಯಕ್ತಿಗಳ ಪೈಕಿ ‘ಅಂಬೇಡ್ಕರ್‌’ ನಾಪತ್ತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...