ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ಎಂಎಲ್ಸಿ ಕೆ ಕವಿತಾ ಅವರ ಇಡಿ ವಿಚಾರಣೆಗೆ ಗುರುವಾರ ಹಾಜರಾಗಲಿದ್ದಾರೆ. ಈ ಬೆನ್ನಲ್ಲೇ ತೆಲಂಗಾಣದ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯು (ಬಿಆರ್ಎಸ್) ಬಿಜೆಪಿ ವಿರುದ್ಧ ಪೋಸ್ಟರ್ ವಾರ್ ಆರಂಭಿಸಿದೆ.
ಹೈದರಾಬಾದ್ನ ಎರಡು ಸ್ಥಳಗಳಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಫೋಟೋದ ಮೇಲೆ ‘ವಾಂಟೆಡ್’ ಎಂದು ಬರೆದಿರುವ ಪೋಸ್ಟರ್ಗಳನ್ನು ಹಾಕಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಆ ಪೋಸ್ಟರ್ನಲ್ಲಿ ”ಸಂತೋಷ್ಗೆ ‘ಎಂಎಲ್ಎಗಳ ಬೇಟೆಗಾರ’ ಎಂದು ಹೇಳಲಾಗಿದೆ. ಸಂತೋಷ್ ಅವರನ್ನು ಹುಡುಕಿಕೊಟ್ಟರೆ ಬಹುಮಾನವಾಗಿ ‘ಮೋದಿಯವರ ₹ 15,00,000 ಭರವಸೆಯ ಮಂಜೂರಾತಿ’ಯ ಹಣವನ್ನು ನೀಡಲಾಗುತ್ತದೆ” ಎಂದು ಪೋಸ್ಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗೇಲಿ ಮಾಡಲಾಗಿದೆ.
Hyderabad,Telangana | BRS-BJP poster war: Ahead of ED questioning MLC K Kavitha now posters have come up in Hyderabad. In the posters BL Santosh, BJP National General Secretary has been shown as a criminal & 'Wanted'. Posters were seen at two different places in Hyderabad (14.3) pic.twitter.com/xxY7rZKlaL
— ANI (@ANI) March 15, 2023
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕವಿತಾ ಅವರನ್ನು ED ವಿಚಾರಣೆಗೆ ಕರೆದ ಬಳಿಕ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯ ಆರೋಪದ ಮೇಲೆ ಕೇಂದ್ರವನ್ನು ಟೀಕಿಸಲು ಬಿಆರ್ಎಸ್ ಜೊತೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ಕೂಡ ಪೋಸ್ಟರ್ ವಾರ್ನಲ್ಲಿ ಭಾಗವಹಿಸಿತ್ತು.
ಮೋದಿ ಪ್ರಜಾಪ್ರಭುತ್ವದ ಧ್ವಂಸಕ, ಬೂಟಾಟಿಕೆಯ ಪಿತಾಮಹ ಪೋಸ್ಟರ್:
ಇತ್ತೀಚೆಗೆ ನಗರದಲ್ಲಿ ಬಿಆರ್ಎಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿ ಪ್ರತಿಭಟನೆ ಮಾಡಿದ್ದರು. ಇಲ್ಲಿನ ಗೋಡೆಗಳ ಮೇಲೆ ‘ನರೇಂದ್ರ ಮೋದಿ ಪ್ರಜಾಪ್ರಭುತ್ವದ ಧ್ವಂಸಕ, ಬೂಟಾಟಿಕೆಯ ಪಿತಾಮಹ’ ಎಂಬ ಪೋಸ್ಟರ್ ಅಂಟಿಸಿ ವಿರೋಧಿಸಿದರು. ಇದರೊಂದಿಗೆ ಮೋದಿ ಸರ್ಕಾರ ಅವರ ವಿರೋಧಿಗಳ ವಿರುದ್ಧ ಇಂತಹ ಕೇಂದ್ರದ ತನಿಖಾ ಸಂಸ್ಥೆಗಳನ್ನು ಶಸ್ತ್ರವಾಗಿ ಬಳಸುತ್ತಿದೆ ಎಂದು ಪೋಸ್ಟರ್ ಮೂಲಕ ಆರೋಪ ಮಾಡಿದ್ದರು.
ಡಿಟರ್ಜೆಂಟ್ ಪೌಡರ್ ಬ್ರಾಂಡ್ ನಿರ್ಮಾ ಜೊತೆ ಬಿಜೆಪಿ ಹೋಲಿಕೆ ಪೋಸ್ಟರ್:
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ರೈಸಿಂಗ್ ಡೇಗೆ ಹಾಜರಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್ಗೆ ಭೇಟಿ ನೀಡುವ ಮೊದಲು, ಬಿಆರ್ಎಸ್ ಅವರನ್ನು ವ್ಯಂಗ್ಯದೊಂದಿಗೆ ಸ್ವಾಗತಿಸಿತು. ಬೇರೆ ಬೇರೆ ಪಕ್ಷಗಳಿಂದ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ನಾಯಕರನ್ನು ಒಳಗೊಂಡ ಪೋಸ್ಟರ್ ಅನ್ನು ಹಾಕಲಾಗಿತ್ತು. ಅದರ ಜೊತೆಗೆ ಅವರು ವಿವಿಧ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಬಿಜೆಪಿಯನ್ನು ಡಿಟರ್ಜೆಂಟ್ ಪೌಡರ್ ಬ್ರಾಂಡ್ ನಿರ್ಮಾ ಜೊತೆ ಹೋಲಿಸಿ ಬಿಆರ್ಎಸ್ ಪೋಸ್ಟರ್ ಹಾಕಿತ್ತು. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು.
ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ನಿಂದ ಬಿಜೆಪಿಗೆ ತೆರಳಿದ್ದಾರೆ ಎಂದು ಹೇಳಲಾದ ‘ರೇಡ್ ಡಿಟರ್ಜೆಂಟ್’ಗಳನ್ನು ಉಲ್ಲೇಖಿಸುವ ಪೋಸ್ಟರ್ಗಳನ್ನು ಹೈದರಾಬಾದ್ನಾದ್ಯಂತ ಹಾಕಲಾಗಿತ್ತು. ಡಿಟರ್ಜೆಂಟ್ ಬಳಸಿದ ನಂತರ ನಾಯಕರ ಕೊಳಕು ಬಿಳಿ ಟಿ-ಶರ್ಟ್ಗಳಿಗೆ ಕೇಸರಿ ಬಣ್ಣ ಹಾಕಲಾಗಿದೆ ಎಂದು ಪೋಸ್ಟರ್ ತೋರಿಸಿತ್ತು. ಇದು ಭ್ರಷ್ಟಾಚಾರ ಆರೋಪ ಹೊತ್ತಿರುವ ನಾಯಕರು ಬಿಜೆಪಿಗೆ ಸೇರಿದ ಕೆಲವೇ ದಿನಗಳಲ್ಲಿ ಆರೋಪ ಮುಕ್ತರಾಗಿ ಶುಭ್ರವಾಗುತ್ತಾರೆ ಎನ್ನುವುದನ್ನು ತೋರಿಸುತ್ತದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಬಿಜೆಪಿ ನಾಯಕರಿಗೆ ಖರ್ಗೆ ಖಡಕ್ ಉತ್ತರ
ಬೊಮ್ಮಾಯಿಗೆ 40% ಸಿಎಂ ಎಂದು ಸ್ವಾಗತದ ಪೋಸ್ಟರ್:
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು 40% ಸಿಎಂ ಎಂದು ಬಿಆರ್ಎಸ್ ಪಕ್ಷ ವ್ಯಂಗ್ಯವಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ”40% ಸಿಎಂಗೆ ಸ್ವಾಗತ” ಎಂದು ದೊಡ್ಡ ಅಕ್ಷರಗಳಲ್ಲಿ ಬರೆದ ಬ್ಯಾನರ್ ಅನ್ನು ನಿಲ್ಲಿಸಲಾಗಿತ್ತು. ಇದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿ ಮಾಡಿರುವ ಟೀಕೆ ಎನ್ನುವುದು ಸ್ಪಷ್ಟವಾಗಿದೆ. ಇದರ ವಿಡಿಯೋ ಮತ್ತು ಫೋಟೋ ವೈರಲ್ ಆಗಿತ್ತು.
ಈ ಹಿಂದೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕವಿತಾ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಯಾವುದೇ ಎಫ್ಐಆರ್ನಲ್ಲಿ ತನ್ನ ಹೆಸರು ಇಲ್ಲ. ಆದರೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲವು ವ್ಯಕ್ತಿಗಳ ಕೆಲವು ಹೇಳಿಕೆಗಳ ಆಧಾರದ ಮೇಲೆ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಅವರು ಹೇಳಿದ್ದರು. ನಂತರ ಅವರು ಇಡಿ ನೀಡಿದ ಸಮನ್ಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು, ನಂತರ ಅದನ್ನು ತಿರಸ್ಕರಿಸಲಾಯಿತು.
ತಮ್ಮ ನಿವಾಸದಲ್ಲಿಯೇ ಇಡಿ ಅಧಿಕಾರಿಗಳು ವಿಚಾರಣೆ ನಡೆಸಬೇಕು, ಈ ಸಂದಭಧದಲ್ಲಿ ಇತರ ಆರೋಪಿಗಳೊಂದಿಗೆ ತನ್ನ ವಿಚಾರಣೆಯ ವೀಡಿಯೊಗ್ರಫಿಗೆ ಅವಕಾಶ ನೀಡಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಕವಿತಾ ಅವರು ಮನವಿ ಮಾಡಿದರು.
Absolutely correct.