Homeಮುಖಪುಟಎರಡು ಆಸ್ಕರ್ ಕಥೆಗಳು!

ಎರಡು ಆಸ್ಕರ್ ಕಥೆಗಳು!

- Advertisement -
- Advertisement -

ಫೆಬ್ರವರಿ 13ರಂದು ಭಾರತೀಯ ಮಾಧ್ಯಮಗಳು, ಭಾರತ ಮೂಲದ ಎರಡು ಸಿನಿಮಾಗಳು ಎರಡು ವಿಭಾಗಗಳಲ್ಲಿ ಪಡೆದ ಆಸ್ಕರ್ ಪ್ರಶಸ್ತಿಯ ಸಲುವಾಗಿ ಇನ್ನಿಲ್ಲದಂತೆ ಸಂಭ್ರಮಾಚರಣೆಯಲ್ಲಿದ್ದವು. ಅಮೆರಿಕ ಮೂಲದ ಈ ಪ್ರಶಸ್ತಿ ಅಷ್ಟು ಜನಪ್ರಿಯತೆ ಪಡೆದುಕೊಂಡಿರುವುದು ನಿಜವೇ! ಹಾಲಿವುಡ್‌ನ ಸಾಧಾರಣ ಸಿನಿಮಾವನ್ನು ಜತ್ತಿನಾದ್ಯಂತ ’ಶ್ರೇಷ್ಠ’ ಎಂಬಂತೆ ಬಿಂಬಿಸುವ ಅಮೆರಿಕದ ಪ್ರಚಾರ ಯಂತ್ರಾಂಗ ಆಸ್ಕರ್ ಪ್ರಶಸ್ತಿಗಳನ್ನೂ ಜಾಗತಿಕವಾಗಿ ಜನಪ್ರಿಯಗೊಳಿಸಿದೆ. ಜೊತೆಗೆ, ಹಲವು ಅತ್ಯುತ್ತಮ ಸಿನಿಮಾಗಳಿಗೂ ಪ್ರಶಸ್ತಿ ನೀಡಿ ಒಂದು ಮಟ್ಟದ ’ಹೆಸರು’ ಉಳಿಸಿಕೊಂಡಿರುವ ’ಆಸ್ಕರ್’ ಅಮೆರಿಕದ ಶ್ರೇಷ್ಠತೆಯನ್ನು ಪ್ರಚಾರ ಮಾಡುವ ಸಿನಿಮಾಗಳಿಗೂ (ಉದಾಹರಣೆಗೆ ಯುದ್ಧೋನ್ಮಾದದ) ಪ್ರಶಸ್ತಿ ನೀಡಿ ಟೀಕೆಗೂ ಗುರಿಯಾಗಿದೆ. ಆದರೂ, ಅತ್ಯುತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಹಲವು ದೇಶಗಳು ಒಂದು ಸಿನಿಮಾವನ್ನು ನಾಮಾಂಕಿತ ಮಾಡುವ ಪರಿಪಾಠವನ್ನು ಉಳಿಸಿಕೊಂಡಿವೆ. ಆಲ್ಟರ್‌ನೇಟಿವ್ ಎನ್ನಬಹುದಾದ (ಕಥೆ, ನಿರೂಪಣೆ ಮುಂತಾದವುಗಳಲ್ಲಿ), ಕೇವಲ ಜನಪ್ರಿಯತೆಯನ್ನೇ ಮಾನದಂಡವನ್ನಾಗಿಟ್ಟುಕೊಳ್ಳದ, ಸಿನಿಮಾದ ವಿವಿಧ ವಿಭಾಗಗಳಲ್ಲಿ ಗಂಭೀರತೆಯನ್ನು ತೊಡಗಿಸಿಕೊಂಡ, ಸಮಕಾಲೀನ ಸಂದರ್ಭವನ್ನು ವಿಮರ್ಶಾತ್ಮಕವಾಗಿ ಚಿತ್ರಿಸುವ ಸಿನಿಮಾಗಳು ಈ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿ ಪಡೆಯುವುದರಿಂದ, ಭಾರತದಲ್ಲಿ ಕೂಡ ’ಕಲಾತ್ಮಕ’ ಚಿತ್ರಗಳು ಎಂದು ಪರಿಗಣಿಸಲಾಗುವ ಚಿತ್ರಗಳನ್ನು ಈ ವಿಭಾಗಕ್ಕೆ ಕಳುಹಿಸುವುದು ವಾಡಿಕೆ. ಅದರಂತೆಯೇ ಈ ಬಾರಿ ’ಚ್ಚೆಲ್ಲೋ ಶೋ’ ಎಂಬ ಗುಜರಾತಿ ಭಾಷೆಯ ಸಿನಿಮಾವನ್ನು ಆಸ್ಕರ್‌ನ ’ವಿದೇಶಿ ಅತ್ಯುತ್ತಮ ಸಿನಿಮಾ’ ವಿಭಾಗದ ಸ್ಪರ್ಧೆಗೆ ಕಳುಹಿಸಲಾಗಿತ್ತು.

ಆದರೆ ಇದರ ಕೆಲವು ದಿನಗಳ ನಂತರ ಶುರುವಾಯಿತು ನೋಡಿ; ತೀವ್ರ ಪ್ರತಿಗಾಮಿ ಸಿನಿಮಾವಾದ ’ದ ಕಾಶ್ಮೀರ್ ಫೈಲ್ಸ್’, ಅತಿ ಸಾಧಾರಣ ಮತ್ತು ಸನಾತನ ನಂಬಿಕೆಗಳನ್ನು ಪ್ರತಿಪಾದಿಸುವ ’ಆರ್‌ಆರ್‌ಆರ್’ ಸಿನಿಮಾಗಳನ್ನು ಆಸ್ಕರ್‌ಗೆ ಕಳುಹಿಸಬೇಕಿತ್ತೆಂಬ ಗುಲ್ಲನ್ನು ಎಬ್ಬಿಸಲಾಯಿತು. ನಂತರ ಈ ಚಿತ್ರಗಳನ್ನು ಅದರ ನಿರ್ಮಾಪಕರೇ ಖಾಸಗಿಯಾಗಿ ಅರ್ಜಿ ತುಂಬಿ ಆಸ್ಕರ್ ಪ್ರಶಸ್ತಿಗಳಿಗೆ ಕಳುಹಿಸಿದರು. ’ಆರ್‌ಆರ್‌ಆರ್’ ಅಂತೂ ಅಮೆರಿಕದಲ್ಲಿ ಸಿನಿಮಾ ಪ್ರಮೋಟರ್ ಸಂಸ್ಥೆಯೊಂದನ್ನು ತೊಡಗಿಸಿಕೊಂಡು ಬಹುಶಃ ಹಿಂದೆಂದೂ ಕಾಣದಷ್ಟು ಹಣ ವಿನಿಯೋಗಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿತು. ಹಲವು ವಿಭಾಗಗಳಲ್ಲಿ ಈ ಸಿನಿಮಾ ನಾಮನಿರ್ದೇಶನಗೊಂಡರೂ, ’ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಮಾತ್ರ ’ಆರ್‌ಆರ್‌ಆರ್‌’ ’ನಾಟುನಾಟು’ ಹಾಡು ಕೊನೆ ಹಂತದವರೆಗೂ ಉಳಿದುಕೊಂಡಿತ್ತು ಮತ್ತು ಅದರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಮೆರಿಕದಲ್ಲಿ ಈ ಪ್ರಚಾರಕ್ಕಾಗಿ ಮಾಡಿದ ಖರ್ಚಿನಲ್ಲಿ ಬಹುಶಃ ಸುಮಾರು ಹತ್ತು ಅತ್ಯುತ್ತಮ ಸಿನಿಮಾಗಳನ್ನು ತೆಗೆಯಬಹುದಿತ್ತು ಎಂಬ ನಗೆ ಚಟಾಕಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿಹೋದವು. ಒಟ್ಟಿನಲ್ಲಿ ಈಗ ಆರ್‌ಎಸ್‌ಎಸ್ ಬಗೆಗೆ ಸಿನಿಮಾ ಮಾಡುವುದಕ್ಕೆ ಸನ್ನದ್ಧರಾಗುತ್ತಿರುವ ’ಆರ್‌ಆರ್‌ಆರ್’ ಸಿನಿಮಾದ ನಿರ್ದೇಶಕ ರಾಜಮೌಳಿ ಈ ಪ್ರಶಸ್ತಿಯನ್ನು ಮತ್ತಷ್ಟು ಪ್ರದರ್ಶನ ಮಾಡಿಕೊಳ್ಳುವುದಂತೂ ನಿಜ. ಈ ಸಿನಿಮಾಗೆ ಸಂಗೀತ ನೀಡಿದ ಕೀರವಾಣಿಯವರು ಹಿಂದೆ ಬಸವಣ್ಣನ ವಚನಗಳಿಗೆ ಸಂಗೀತ ನೀಡಿ ಹಾಡಿದ ಆಲ್ಬಂ ಕೂಡ ಈ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದ್ದು ವಿಶೇಷ.

ಇನ್ನು ಅಷ್ಟು ಅಬ್ಬರವಿಲ್ಲದೆ ಭಾರತದಲ್ಲಿ ತಯಾರಾದ ಕಿರು ಸಾಕ್ಷ್ಯಚಿತ್ರವೊಂದು ಆಸ್ಕರ್ ಪ್ರಶಸ್ತಿ ಪಡೆದು ದೇಶದ ಸಿನಿಮಾ ರಸಿಕರ ಗಮನ ಸೆಳೆಯಿತು. ’ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ಪ್ರಶಸ್ತಿ ಪಡೆದ ’ದ ಎಲಿಫೆಂಟ್ ವಿಸ್ಪರರ್ಸ್’ನ ನಿರ್ದೇಶಕಿ ಕಾರ್ತಿಕಿ ಗೋನ್ಸೇವ್ಸ್. ತಮಿಳುನಾಡಿದ ಮಧುಮಲೈ ಹುಲಿ ಸಂರಕ್ಷಣಾ ಅಭಯಾರಣ್ಯದ ತೆಪ್ಪಕಾಡು ಎಂಬ ಬೆಟ್ಟಗಾಡು ಪ್ರದೇಶದಲ್ಲಿ ಹಿಂಡಿನಿಂದ ತಪ್ಪಿಸಿಕೊಂಡ ಆನೆ ಮರಿಗಳನ್ನು ರಕ್ಷಿಸಿ ಸಾಕುವ ಬೊಮ್ಮನ್ ಮತ್ತು ಬೆಳ್ಳಿ ಅಮ್ಮ ಅವರ ಮತ್ತು ಅವರು ಸಾಕುವ ಎರಡು ಆನೆಗಳ ಒಡನಾಟದ ಭಾವನಾತ್ಮಕ ಕಥೆ ಇದು. ತಮಿಳಿನಲ್ಲಿ ಈ ಸಾಕ್ಷ್ಯಚಿತ್ರ ನಿರೂಪಿತವಾಗಿದ್ದರೂ, ನಡುನಡುವೆ ಬೊಮ್ಮನ್ ಮತ್ತು ಬೆಳ್ಳಿ ಅಮ್ಮ ಮಾತನಾಡುವ ಆ ಭಾಗದ ಕನ್ನಡ ಮಿಶ್ರಿತ ಭಾಷೆ ವಿಶೇಷವೆನಿಸುತ್ತದೆ. ಮರಿಯಾನೆಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕಿ ಕಾಪಾಡುವ ಈ ಭಾವನಾತ್ಮಕ ಕಥೆ ’ಫೀಲ್ ಗುಡ್’ ಸಿನಿಮಾವೆನ್ನಬಹುದು. ಸಾಮಾನ್ಯವಾಗಿ ಇಂತಹ ಫೀಲ್ ಗುಡ್ ಸಿನಿಮಾಗಳನ್ನು ಹೆಚ್ಚು ಆಸ್ಕರ್ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದಿದೆ. ರಘು ಮತ್ತು ಅಮ್ಮು ಎಂಬ ಎರಡು ಆನೆಗಳ ಜೊತೆಗಿನ ಒಡನಾಟದ ದೃಶ್ಯಗಳು ಆ ಬೆಟ್ಟಗಾಡಿನ ಪರಿಸರದಲ್ಲಿ ಮನಮೋಹಕವಾಗಿ ಚಿತ್ರಿಸಲ್ಪಟ್ಟಿವೆ. ಕಾಡು ಪರಿಸರದ ಜೊತೆಗೆ ಮನುಷ್ಯ ಹೊಂದಿರಬೇಕಾದ ಸಂಬಂಧದ ಬಗ್ಗೆ ಈ ಸಿನಿಮಾ ಪರೋಕ್ಷವಾಗಿ ನುಡಿಯುತ್ತದೆ. ಆದರೆ, ಮನುಷ್ಯನ ಅಭಿವೃದ್ಧಿ ಕಲ್ಪನೆಗಳಿಂದ ಪರಿಸರದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ, ಅದರಿಂದ ಹುಟ್ಟುತ್ತಿರುವ ಕಾಡುಪ್ರಾಣಿಗಳ ಜೊತೆಗಿನ ಸಂಘರ್ಷದ ಬಗ್ಗೆ ಇನ್ನೂ ಪರಿಣಾಮಕಾರಿಯಾಗಿ ಮಾತನಾಡುವ ಅವಕಾಶವನ್ನು ಸಿನಿಮಾ ಕೈಚೆಲ್ಲಿದೆ. ಆದರೂ, ಕೋಟ್ಯಾನುಗಟ್ಟಲೆ ಪ್ರಚಾರಕ್ಕಾಗಿ ಸುರಿದ ’ಆರ್‌ಆರ್‌ಆರ್’ ಸಿನಿಮಾಗಿಂತಲೂ ಹತ್ತಾರು ಪಟ್ಟು ಉತ್ತಮ ಸಿನಿಮಾ ಇದು ಎನ್ನಲಡ್ಡಿಯಿಲ್ಲ. ಮಕ್ಕಳ ಜೊತೆಗೆ ಕೂತು ’ದ ಎಲಿಫೆಂಟ್ ವಿಸ್ಪರರ್ಸ್’ ನೋಡುವುದು ಒಂದು ಒಳ್ಳೆಯ ಅನುಭವವಾದೀತು. ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ.


ಇದನ್ನೂ ಓದಿ: ಭಾರತಕ್ಕೆ ಎರಡು ಆಸ್ಕರ್: ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ, RRR ಚಿತ್ರದ ನಾಟು ನಾಟು ಹಾಡಿಗೆ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...