Homeಮುಖಪುಟಎರಡು ಆಸ್ಕರ್ ಕಥೆಗಳು!

ಎರಡು ಆಸ್ಕರ್ ಕಥೆಗಳು!

- Advertisement -
- Advertisement -

ಫೆಬ್ರವರಿ 13ರಂದು ಭಾರತೀಯ ಮಾಧ್ಯಮಗಳು, ಭಾರತ ಮೂಲದ ಎರಡು ಸಿನಿಮಾಗಳು ಎರಡು ವಿಭಾಗಗಳಲ್ಲಿ ಪಡೆದ ಆಸ್ಕರ್ ಪ್ರಶಸ್ತಿಯ ಸಲುವಾಗಿ ಇನ್ನಿಲ್ಲದಂತೆ ಸಂಭ್ರಮಾಚರಣೆಯಲ್ಲಿದ್ದವು. ಅಮೆರಿಕ ಮೂಲದ ಈ ಪ್ರಶಸ್ತಿ ಅಷ್ಟು ಜನಪ್ರಿಯತೆ ಪಡೆದುಕೊಂಡಿರುವುದು ನಿಜವೇ! ಹಾಲಿವುಡ್‌ನ ಸಾಧಾರಣ ಸಿನಿಮಾವನ್ನು ಜತ್ತಿನಾದ್ಯಂತ ’ಶ್ರೇಷ್ಠ’ ಎಂಬಂತೆ ಬಿಂಬಿಸುವ ಅಮೆರಿಕದ ಪ್ರಚಾರ ಯಂತ್ರಾಂಗ ಆಸ್ಕರ್ ಪ್ರಶಸ್ತಿಗಳನ್ನೂ ಜಾಗತಿಕವಾಗಿ ಜನಪ್ರಿಯಗೊಳಿಸಿದೆ. ಜೊತೆಗೆ, ಹಲವು ಅತ್ಯುತ್ತಮ ಸಿನಿಮಾಗಳಿಗೂ ಪ್ರಶಸ್ತಿ ನೀಡಿ ಒಂದು ಮಟ್ಟದ ’ಹೆಸರು’ ಉಳಿಸಿಕೊಂಡಿರುವ ’ಆಸ್ಕರ್’ ಅಮೆರಿಕದ ಶ್ರೇಷ್ಠತೆಯನ್ನು ಪ್ರಚಾರ ಮಾಡುವ ಸಿನಿಮಾಗಳಿಗೂ (ಉದಾಹರಣೆಗೆ ಯುದ್ಧೋನ್ಮಾದದ) ಪ್ರಶಸ್ತಿ ನೀಡಿ ಟೀಕೆಗೂ ಗುರಿಯಾಗಿದೆ. ಆದರೂ, ಅತ್ಯುತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಹಲವು ದೇಶಗಳು ಒಂದು ಸಿನಿಮಾವನ್ನು ನಾಮಾಂಕಿತ ಮಾಡುವ ಪರಿಪಾಠವನ್ನು ಉಳಿಸಿಕೊಂಡಿವೆ. ಆಲ್ಟರ್‌ನೇಟಿವ್ ಎನ್ನಬಹುದಾದ (ಕಥೆ, ನಿರೂಪಣೆ ಮುಂತಾದವುಗಳಲ್ಲಿ), ಕೇವಲ ಜನಪ್ರಿಯತೆಯನ್ನೇ ಮಾನದಂಡವನ್ನಾಗಿಟ್ಟುಕೊಳ್ಳದ, ಸಿನಿಮಾದ ವಿವಿಧ ವಿಭಾಗಗಳಲ್ಲಿ ಗಂಭೀರತೆಯನ್ನು ತೊಡಗಿಸಿಕೊಂಡ, ಸಮಕಾಲೀನ ಸಂದರ್ಭವನ್ನು ವಿಮರ್ಶಾತ್ಮಕವಾಗಿ ಚಿತ್ರಿಸುವ ಸಿನಿಮಾಗಳು ಈ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿ ಪಡೆಯುವುದರಿಂದ, ಭಾರತದಲ್ಲಿ ಕೂಡ ’ಕಲಾತ್ಮಕ’ ಚಿತ್ರಗಳು ಎಂದು ಪರಿಗಣಿಸಲಾಗುವ ಚಿತ್ರಗಳನ್ನು ಈ ವಿಭಾಗಕ್ಕೆ ಕಳುಹಿಸುವುದು ವಾಡಿಕೆ. ಅದರಂತೆಯೇ ಈ ಬಾರಿ ’ಚ್ಚೆಲ್ಲೋ ಶೋ’ ಎಂಬ ಗುಜರಾತಿ ಭಾಷೆಯ ಸಿನಿಮಾವನ್ನು ಆಸ್ಕರ್‌ನ ’ವಿದೇಶಿ ಅತ್ಯುತ್ತಮ ಸಿನಿಮಾ’ ವಿಭಾಗದ ಸ್ಪರ್ಧೆಗೆ ಕಳುಹಿಸಲಾಗಿತ್ತು.

ಆದರೆ ಇದರ ಕೆಲವು ದಿನಗಳ ನಂತರ ಶುರುವಾಯಿತು ನೋಡಿ; ತೀವ್ರ ಪ್ರತಿಗಾಮಿ ಸಿನಿಮಾವಾದ ’ದ ಕಾಶ್ಮೀರ್ ಫೈಲ್ಸ್’, ಅತಿ ಸಾಧಾರಣ ಮತ್ತು ಸನಾತನ ನಂಬಿಕೆಗಳನ್ನು ಪ್ರತಿಪಾದಿಸುವ ’ಆರ್‌ಆರ್‌ಆರ್’ ಸಿನಿಮಾಗಳನ್ನು ಆಸ್ಕರ್‌ಗೆ ಕಳುಹಿಸಬೇಕಿತ್ತೆಂಬ ಗುಲ್ಲನ್ನು ಎಬ್ಬಿಸಲಾಯಿತು. ನಂತರ ಈ ಚಿತ್ರಗಳನ್ನು ಅದರ ನಿರ್ಮಾಪಕರೇ ಖಾಸಗಿಯಾಗಿ ಅರ್ಜಿ ತುಂಬಿ ಆಸ್ಕರ್ ಪ್ರಶಸ್ತಿಗಳಿಗೆ ಕಳುಹಿಸಿದರು. ’ಆರ್‌ಆರ್‌ಆರ್’ ಅಂತೂ ಅಮೆರಿಕದಲ್ಲಿ ಸಿನಿಮಾ ಪ್ರಮೋಟರ್ ಸಂಸ್ಥೆಯೊಂದನ್ನು ತೊಡಗಿಸಿಕೊಂಡು ಬಹುಶಃ ಹಿಂದೆಂದೂ ಕಾಣದಷ್ಟು ಹಣ ವಿನಿಯೋಗಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿತು. ಹಲವು ವಿಭಾಗಗಳಲ್ಲಿ ಈ ಸಿನಿಮಾ ನಾಮನಿರ್ದೇಶನಗೊಂಡರೂ, ’ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಮಾತ್ರ ’ಆರ್‌ಆರ್‌ಆರ್‌’ ’ನಾಟುನಾಟು’ ಹಾಡು ಕೊನೆ ಹಂತದವರೆಗೂ ಉಳಿದುಕೊಂಡಿತ್ತು ಮತ್ತು ಅದರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಮೆರಿಕದಲ್ಲಿ ಈ ಪ್ರಚಾರಕ್ಕಾಗಿ ಮಾಡಿದ ಖರ್ಚಿನಲ್ಲಿ ಬಹುಶಃ ಸುಮಾರು ಹತ್ತು ಅತ್ಯುತ್ತಮ ಸಿನಿಮಾಗಳನ್ನು ತೆಗೆಯಬಹುದಿತ್ತು ಎಂಬ ನಗೆ ಚಟಾಕಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿಹೋದವು. ಒಟ್ಟಿನಲ್ಲಿ ಈಗ ಆರ್‌ಎಸ್‌ಎಸ್ ಬಗೆಗೆ ಸಿನಿಮಾ ಮಾಡುವುದಕ್ಕೆ ಸನ್ನದ್ಧರಾಗುತ್ತಿರುವ ’ಆರ್‌ಆರ್‌ಆರ್’ ಸಿನಿಮಾದ ನಿರ್ದೇಶಕ ರಾಜಮೌಳಿ ಈ ಪ್ರಶಸ್ತಿಯನ್ನು ಮತ್ತಷ್ಟು ಪ್ರದರ್ಶನ ಮಾಡಿಕೊಳ್ಳುವುದಂತೂ ನಿಜ. ಈ ಸಿನಿಮಾಗೆ ಸಂಗೀತ ನೀಡಿದ ಕೀರವಾಣಿಯವರು ಹಿಂದೆ ಬಸವಣ್ಣನ ವಚನಗಳಿಗೆ ಸಂಗೀತ ನೀಡಿ ಹಾಡಿದ ಆಲ್ಬಂ ಕೂಡ ಈ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದ್ದು ವಿಶೇಷ.

ಇನ್ನು ಅಷ್ಟು ಅಬ್ಬರವಿಲ್ಲದೆ ಭಾರತದಲ್ಲಿ ತಯಾರಾದ ಕಿರು ಸಾಕ್ಷ್ಯಚಿತ್ರವೊಂದು ಆಸ್ಕರ್ ಪ್ರಶಸ್ತಿ ಪಡೆದು ದೇಶದ ಸಿನಿಮಾ ರಸಿಕರ ಗಮನ ಸೆಳೆಯಿತು. ’ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ಪ್ರಶಸ್ತಿ ಪಡೆದ ’ದ ಎಲಿಫೆಂಟ್ ವಿಸ್ಪರರ್ಸ್’ನ ನಿರ್ದೇಶಕಿ ಕಾರ್ತಿಕಿ ಗೋನ್ಸೇವ್ಸ್. ತಮಿಳುನಾಡಿದ ಮಧುಮಲೈ ಹುಲಿ ಸಂರಕ್ಷಣಾ ಅಭಯಾರಣ್ಯದ ತೆಪ್ಪಕಾಡು ಎಂಬ ಬೆಟ್ಟಗಾಡು ಪ್ರದೇಶದಲ್ಲಿ ಹಿಂಡಿನಿಂದ ತಪ್ಪಿಸಿಕೊಂಡ ಆನೆ ಮರಿಗಳನ್ನು ರಕ್ಷಿಸಿ ಸಾಕುವ ಬೊಮ್ಮನ್ ಮತ್ತು ಬೆಳ್ಳಿ ಅಮ್ಮ ಅವರ ಮತ್ತು ಅವರು ಸಾಕುವ ಎರಡು ಆನೆಗಳ ಒಡನಾಟದ ಭಾವನಾತ್ಮಕ ಕಥೆ ಇದು. ತಮಿಳಿನಲ್ಲಿ ಈ ಸಾಕ್ಷ್ಯಚಿತ್ರ ನಿರೂಪಿತವಾಗಿದ್ದರೂ, ನಡುನಡುವೆ ಬೊಮ್ಮನ್ ಮತ್ತು ಬೆಳ್ಳಿ ಅಮ್ಮ ಮಾತನಾಡುವ ಆ ಭಾಗದ ಕನ್ನಡ ಮಿಶ್ರಿತ ಭಾಷೆ ವಿಶೇಷವೆನಿಸುತ್ತದೆ. ಮರಿಯಾನೆಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕಿ ಕಾಪಾಡುವ ಈ ಭಾವನಾತ್ಮಕ ಕಥೆ ’ಫೀಲ್ ಗುಡ್’ ಸಿನಿಮಾವೆನ್ನಬಹುದು. ಸಾಮಾನ್ಯವಾಗಿ ಇಂತಹ ಫೀಲ್ ಗುಡ್ ಸಿನಿಮಾಗಳನ್ನು ಹೆಚ್ಚು ಆಸ್ಕರ್ ಪ್ರಶಸ್ತಿಗಳಿಗೆ ಆಯ್ಕೆ ಮಾಡಿದ್ದಿದೆ. ರಘು ಮತ್ತು ಅಮ್ಮು ಎಂಬ ಎರಡು ಆನೆಗಳ ಜೊತೆಗಿನ ಒಡನಾಟದ ದೃಶ್ಯಗಳು ಆ ಬೆಟ್ಟಗಾಡಿನ ಪರಿಸರದಲ್ಲಿ ಮನಮೋಹಕವಾಗಿ ಚಿತ್ರಿಸಲ್ಪಟ್ಟಿವೆ. ಕಾಡು ಪರಿಸರದ ಜೊತೆಗೆ ಮನುಷ್ಯ ಹೊಂದಿರಬೇಕಾದ ಸಂಬಂಧದ ಬಗ್ಗೆ ಈ ಸಿನಿಮಾ ಪರೋಕ್ಷವಾಗಿ ನುಡಿಯುತ್ತದೆ. ಆದರೆ, ಮನುಷ್ಯನ ಅಭಿವೃದ್ಧಿ ಕಲ್ಪನೆಗಳಿಂದ ಪರಿಸರದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ, ಅದರಿಂದ ಹುಟ್ಟುತ್ತಿರುವ ಕಾಡುಪ್ರಾಣಿಗಳ ಜೊತೆಗಿನ ಸಂಘರ್ಷದ ಬಗ್ಗೆ ಇನ್ನೂ ಪರಿಣಾಮಕಾರಿಯಾಗಿ ಮಾತನಾಡುವ ಅವಕಾಶವನ್ನು ಸಿನಿಮಾ ಕೈಚೆಲ್ಲಿದೆ. ಆದರೂ, ಕೋಟ್ಯಾನುಗಟ್ಟಲೆ ಪ್ರಚಾರಕ್ಕಾಗಿ ಸುರಿದ ’ಆರ್‌ಆರ್‌ಆರ್’ ಸಿನಿಮಾಗಿಂತಲೂ ಹತ್ತಾರು ಪಟ್ಟು ಉತ್ತಮ ಸಿನಿಮಾ ಇದು ಎನ್ನಲಡ್ಡಿಯಿಲ್ಲ. ಮಕ್ಕಳ ಜೊತೆಗೆ ಕೂತು ’ದ ಎಲಿಫೆಂಟ್ ವಿಸ್ಪರರ್ಸ್’ ನೋಡುವುದು ಒಂದು ಒಳ್ಳೆಯ ಅನುಭವವಾದೀತು. ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಇದು ವೀಕ್ಷಣೆಗೆ ಲಭ್ಯವಿದೆ.


ಇದನ್ನೂ ಓದಿ: ಭಾರತಕ್ಕೆ ಎರಡು ಆಸ್ಕರ್: ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ, RRR ಚಿತ್ರದ ನಾಟು ನಾಟು ಹಾಡಿಗೆ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಟಿಎಂಸಿ ಬೆಂಬಲ

ಮಾರ್ಚ್ 9 ರ ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾದಾಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಮಂಡಿಸಲಾಗುವ ಅವಿಶ್ವಾಸ ನಿರ್ಣಯಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲ ನೀಡಲಿದೆ ಎಂದು ಪಕ್ಷದ ನಾಯಕರು...

ಹೊಸ ರಾಜ್ಯಪಾಲ ರವಿ ಬಿಜೆಪಿ ಕೇಡರ್, ಆದರೆ ಬಂಗಾಳ ಟಫ್ ಟರ್ಫ್ : ಮಮತಾ ಬ್ಯಾನರ್ಜಿ

ನೂತನ ರಾಜ್ಯಪಾಲ ಆರ್.ಎನ್ ರವಿ ಅವರನ್ನು 'ಬಿಜೆಪಿ ಕೇಡರ್' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಲೇವಡಿ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸಚಿವಾಲಯ 'ನಬನ್ನಾ' ಮತ್ತು ರಾಜ್ಯಪಾಲರ ನಿವಾಸ...

ಕರ್ನಾಟಕ ಬಜೆಟ್ 2026| ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹಂಚಿಕೆ ನಿರಾಶದಾಯಕ

ಶಿಕ್ಷಣಕ್ಕೆ 47,224 ಕೋಟಿ (ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು...

ಕೇರಳ : ಪ್ರಧಾನಿ ಮೋದಿ ‘ದೇಶದ್ರೋಹಿ’ ಎಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಪ್ರಧಾನಿ ನರೇಂದ್ರ ಮೋದಿ 'ದೇಶದ್ರೋಹಿ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಹಾಕಿದ ಆರೋಪದ ಮೇಲೆ ಕೇರಳದ ಕಣ್ಣೂರಿನ ಶ್ರೀಕಂಡಪುರಂ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಶನಿವಾರ (ಮಾ.7) ವರದಿ...

ಕೋಲ್ಕತ್ತಾ| ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೇ ದಿನವಾದ ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಅವರು ಅಹೋರಾತ್ರಿ ಧರಣಿ ಸ್ಥಳದಲ್ಲಿ ರಾತ್ರಿ ಕಳೆದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ "ಬಂಗಾಳದ ಮತದಾರರ...

ಇಂಡೋನೇಷ್ಯಾ | ನಾಲ್ವರು ಪ್ರಮುಖ ಹೋರಾಟಗಾರರು ಖುಲಾಸೆ : ಪ್ರತಿಭಟನೆಯ ಹಕ್ಕಿಗೆ ಹೊಸ ಭರವಸೆ ಎಂದ ಆಮ್ನೆಸ್ಟಿ

2025ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಪ್ರಮುಖ ಹೋರಾಟಗಾರರನ್ನು ಇಂಡೋನೇಷ್ಯಾದ ಕೇಂದ್ರ ಜಕಾರ್ತಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಮಾ.6) ಖುಲಾಸೆಗೊಳಿಸಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ...

‘ಆಕ್ರಮಣ ಮಾಡುವ ಉದ್ದೇಶವಿಲ್ಲ..’; ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷರು

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಶನಿವಾರ ಕ್ಷಮೆಯಾಚಿಸಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ದಾಳಿಗಳಿಗೆ ಟೆಹ್ರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸಾರ್ವಜನಿಕರನ್ನು...

ತೈಲ ಆಮದು ವಿಚಾರದಲ್ಲಿ ಅಮೆರಿಕದ ಒಪ್ಪಿಗೆ ಪಡೆಯುವುದು ‘ಅತಿರೇಕದ’ ಸಂಗತಿ: ಪಿಣರಾಯಿ ವಿಜಯನ್

ತೈಲ ಆಮದುಗಳಂತಹ ನಿರ್ಧಾರಗಳಿಗೆ ಭಾರತವು ಅಮೆರಿಕದ ಅನುಮೋದನೆಯನ್ನು ಪಡೆಯುವಂತೆ ಬಿಂಬಿತವಾಗುತ್ತಿರುವುದು 'ಅತಿರೇಕದ' ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವವು ವಿದೇಶಿ ಅನುಮತಿಗೆ ಒಳಪಡುವುದಿಲ್ಲ ಎಂದು ವಿಜಯನ್ ಸಾಮಾಜಿಕ...

ಪತ್ರಕರ್ತನ ಹತ್ಯೆ ಪ್ರಕರಣ : ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಖುಲಾಸೆ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ...

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...