Homeಕರ್ನಾಟಕಮಳೆಗೆ ಬೆಚ್ಚಿಬೀಳುತ್ತಿರುವ ಬೆಂಗಳೂರಿಗರು; ಪುನರಾವರ್ತಿತ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸರ್ಕಾರ ವಿಫಲ

ಮಳೆಗೆ ಬೆಚ್ಚಿಬೀಳುತ್ತಿರುವ ಬೆಂಗಳೂರಿಗರು; ಪುನರಾವರ್ತಿತ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸರ್ಕಾರ ವಿಫಲ

- Advertisement -
- Advertisement -

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಬೆಂಗಳೂರಿನ ಜನರಿಗೆ ಕಳೆದ ತಿಂಗಳ ಮಧ್ಯಂತರದಲ್ಲಿ ಸುರಿದ ಮಳೆ ಸಂತಸ ತಂದಿತ್ತು. ಆ ಬಳಿಕ, ನಿರಂತವಾಗಿ ಸುರಿಯುತ್ತಿರುವ ‘ವರ್ಷಧಾರೆ’ಯಿಂದ ಜನ ಬಸವಳಿದಿದ್ದಾರೆ. ಮಳೆ ಎಂದರೆ ಬೆಂಗಳೂರಿಗರು ಬೆಚ್ಚಿಬೀಳುತ್ತಿದ್ದು, ಹಲವು ವರ್ಷಗಳ ಪುನರಾವರ್ತಿತ ಪ್ರವಾಹಕ್ಕೆ ಪರಿಹಾರ ಹುಡುಕುವಲ್ಲಿ ಎಲ್ಲ ಸರ್ಕಾರಗಳೂ ಸಂಪೂರ್ಣವಾಗಿ ವಿಫಲವಾಗಿವೆ.

ಅಸಮರ್ಪಕ ವಾಹನ ದಟ್ಟಣೆ (ಟ್ರಾಫಿಕ್‌ ಜಾಮ್) ಕಾರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ಬೆಂಗಳೂರು ನಗರ, ಇತ್ತೀಚಿನ ವರ್ಷಗಳಲ್ಲಿ ಮಳೆ ಕಾರಣಕ್ಕೂ ಸುದ್ದಿಯಾಗುತ್ತಿದೆ. ಅನಿರೀಕ್ಷಿತ ಹಾಗೂ ನಿರೀಕ್ಷೆಗೂ ಮೀರಿ ಮಳೆ ಸುರಿಯುತ್ತಿರುವುದು, ಕಳಪೆ ಕಾಮಗಾರಿ, ಕೆರೆ-ರಾಜಕಾಲುವೆ ಒತ್ತುವರಿ ಕಾರಣದಿಂದಾಗಿ ಸಣ್ಣ ಮಳೆಗೆಲ್ಲಾ ಬೆಂಗಳೂರಿನ ರಸ್ತೆಗಳು ಕೆರೆಗಳಾಗಿ ಬದಲಾಗುತ್ತಿವೆ. ಮುಂಗಾರು ಪೂರ್ವ ಮಳೆಗೆ ಬೆಂಗಳೂರಿನ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಅದರಲ್ಲೂ, ಸೆಂಟ್ರಲ್ ಸಿಲ್ಕ್ ಬೋರ್ಡ್‌, ಹೊಸೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ), ಹೆಬ್ಬಾಳ, ಯಲಹಂಕ, ಮಾನ್ಯತಾ ಟೆಕ್‌ ಪಾರ್ಕ್‌, ವೃಷಭಾವತಿ ನದಿ ವ್ಯಾಪ್ತಿಯ (ಮೈಸೂರು ರಸ್ತೆ) ನಾಯಂಡಹಳ್ಳಿ, ಗಾಳಿ ಆಂಜನೇಯಸ್ವಾಮಿ ದೇವಾಲಯ ಪ್ರದೇಶಗಳು ಪದೇಪದೆ ಮಳೆ ಬಂದಾಗ ಪ್ರವಾಹಕ್ಕೆ ಸಿಲುಕುತ್ತಿವೆ.

ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿರುವದೇ ಈ ಅವಘಡಗಳಿಗೆ ಪ್ರಮುಖ ಕಾರಣವಾದರೂ, ಅದನ್ನು ತೆರವುಗೊಳಿಸುವಲ್ಲಿ ಸರ್ಕಾರಗಳು ತೋರುತ್ತಿರುವ ಅಸಡ್ಡೆ, ಮಳೆ ಹಾನಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವದಕ್ಕೆ ಬಿಬಿಎಂಪಿಯ ನಿರ್ಲಕ್ಷ್ಯ ಧೋರಣೆಯಿಂದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಉಲ್ಭಣಿಸುತ್ತಲೇ ಇದೆ.

ಕಳೆದ ವರ್ಷದ ಮಾಹಿತಿ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಎಂಟು ವಲಯಗಳ ಸುಮಾರು 3,160 ಜಾಗದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ತೆರವಿಗೆ ಮುಂದಾದಾಗ ಬಹುತೇಕ ಒತ್ತುವರಿದಾರರು ಹೈಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಿದ್ದಾರೆ. ಬಹುತೇಕ ಒತ್ತುವರಿದಾರರು, ನಗರದ ಪ್ರಭಾವಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ರಾಜಕಾರಣಿಗಳು ಹಾಗೂ ಅವರ ಅತ್ಯಾಪ್ತರಾಗಿದ್ದಾರೆ.

ನಗರದ ಕೆಲ ದೊಡ್ಡದೊಡ್ಡ ಶಾಪಿಂಗ್ ಮಾಲ್‌ಗಳು, ಅಪಾರ್ಟ್‌ಮೆಂಟ್ ಮಾಲೀಕರು ಹಾಗೂ ವಿಲ್ಲಾ ನಿರ್ಮಾಣ ಮಾಡುವವರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ. ಬಿಬಿಎಂಪಿ ಅಂಕಿ- ಅಂಶಗಳ ಪ್ರಕಾರ, ಕಳೆದ ವರ್ಷ ಎಂಟು ವಲಯಗಳಲ್ಲಿ ಒಟ್ಟು 3158 ಜಾಗದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗುರುತಿಸಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಮಳೆ ಸುರಿಯುತ್ತಿದ್ದು, ರಾಜಕಾಲುವೆಗಳ ಒತ್ತುವರಿಯಿಂದದಾಗಿ ರಸ್ತೆ ಮತ್ತು ವಸತಿ ಪ್ರದೇಶಗಳು ಜಲಾವೃತವಾಗುತ್ತಿವೆ. ಕಳೆದ ನಾಲ್ಕೈದು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಇಲ್ಬಣಿಸುತ್ತಿದ್ದು, ಮಳೆಗಾಲ ಬಂದರೆ ಸಾಕು ಬೆಂಗಳೂರಿನ ತಗ್ಗು ಹಾಗೂ ಕೆರೆ ಸಮೀಪದ ವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಮಳೆ ಬಂದಾಗ ರಸ್ತೆಗಳಲ್ಲಿ ನೀರು ನಿಲ್ಲುವುದು ಸಮಾನ್ಯ ದೃಶ್ಯವಾಗಿಬಿಟ್ಟಿದೆ. ಇದಕ್ಕೆ ಪ್ರಮುಖ ಕಾರಣವೇ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದು. ರಾಜಕಾಲುವೆಗಳು ಒತ್ತುವರಿ ಮಾಡಿಕೊಳ್ಳದೇ ಇದ್ದಿದ್ದರೆ, ನಿರೀಕ್ಷೆಗಿಂತ ಹೆಚ್ಚಿನ ಮಳೆ ಬಂದರೂ, ಹಾನಿ ಪ್ರಮಾಣ ಕಡಿಮೆ ಇರುತ್ತದ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

 ಬಿಬಿಎಂಪಿ ವಲಯ ಒತ್ತುವರಿ (2024ರ ಮಾಹಿತಿ)

ಪೂರ್ವ 237, ಪಶ್ಚಿಮ 48, ದಕ್ಷಿಣ 5, ಕೋರಮಂಗಲ ವ್ಯಾಲಿ 10, ಯಲಹಂಕ 588, ಮಹದೇವಪುರ 1,651, ಬೊಮ್ಮನಹಳ್ಳಿ 368, ಆರ್.ಆರ್ ನಗರ 75, ದಾಸರಹಳ್ಳಿ 176, ಒಟ್ಟು 3,158 ಗಳಲ್ಲಿ ಒತ್ತುವರಿಯಾಗಿದೆ. ಕಳೆದ ವರ್ಷದ ಮುಂಗಾರು ಹಾಗೂ ಈ ವರ್ಷದ ಮುಂಗಾರು ಪೂರ್ವ ಮಳೆಗೆ ಬೆಂಗಳುರು ದಕ್ಷಿಣ, ಬೊಮ್ಮನಹಳ್ಳಿ, ಯಲಹಂಕ ವಲಯಗಳಲ್ಲಿ ಪ್ರವಾಹದಿಂದ ಹೆಚ್ಚಿನ ಹಾನಿಯಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ಮಳೆ ಅವಾಂತರ ಕಂಡುಬಂದಿದೆ.

ಪರಿಣಾಮಕಾರಿಯಾಗಿ ತೆರವು ಮಾಡುತ್ತಿಲ್ಲ ಯಾಕೆ?

ಸಿದ್ದರಾಮಯ್ಯ ಮೊದಲ ಭಾರಿಗೆ ಮುಖ್ಯಮಂತ್ರಿ ಆಗಿದ್ದಾಗಲೇ ಒತ್ತುವರಿ ತೆರವು ಕಾರ್ಯಾಚರಣೆ ಜೋರಾಗಿ ಸದ್ದು ಮಾಡಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ವ್ಯಾಪ್ತಿಯಲ್ಲಿ ನಟ ದರ್ಶನ್ ಅವರ ಮನೆ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಸೇರಿದ್ದು ಎನ್ನಲಾದ ಆಸ್ಪತ್ರೆ ರಾಜಕಾಲುವೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ 2016ರಲ್ಲೇ ಕೇಳಿಬಂದಿತ್ತು. ಅಧಿಕಾರಿಗಳು ತೆರವಿಗೂ ಮುಂದಾಗಿದ್ದರು. ಆದರೆ, ರಾಜಕಾಲುವೆ ಒತ್ತುವರಿ ತೆರವಿಗೆ ನಟ ದರ್ಶನ್ ಸೇರಿದಂತೆ ಹಲವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದರು.

ಬೆಂಗಳೂರಿನ ಬಹುತೇಕ ಎಲ್ಲ ವಲಯಗಳಲ್ಲೂ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಆದರೆ, ಮಹದೇವಪುರ ವಲಯದಲ್ಲಿ ಉಳಿದೆಲ್ಲ ವಲಯಗಳಿಗಿಂತ ಹೆಚ್ಚು ರಾಜಕಾಲುವೆ ಒತ್ತುವರಿಯಾಗಿದೆ. ಈ ವಲಯದಲ್ಲಿ ಒಟ್ಟು 1,651 ಜಾಗದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ. ಯಲಹಂಕದಲ್ಲಿ 588 ಜಾಗದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.

ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆ

2022ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಹದೇವಪುರ ವಲಯದ ವಿಲ್ಲಾಗಳು ಮತ್ತು ಪ್ರಮುಖ ಐಟಿ ಪ್ರದೇಶವಾದ ಆರ್‌ಎಂಝಡ್‌ ಇಕೋ ಸ್ಪೇಸ್, ಬೆಳ್ಳಂದೂರು ಕೆರೆ ಮತ್ತು ಸರ್ಜಾರಪುರ ಮುಖ್ಯರಸ್ತೆಯಲ್ಲಿ 2022ರ ಆಗಸ್ಟ್‌ ತಿಂಗಳಾಂತ್ಯದಲ್ಲಿ ಸುರಿದ ಭಾರೀ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇದೇ ವಲಯದ ಕೆಆರ್‌ಪುರಂನ ಸಾಯಿ ಲೇಔಟ್‌ ಸಂಪೂರ್ಣ ಜಲದಿಗ್ಬಂಧನಕ್ಕೆ ಒಳಗಾಗಿದೆ.

ಮಳೆ ಅವಾಂತರಕ್ಕೆ ಕಾರಣಗಳೇನು?

ಗೊತ್ತು ಗುರಿಯಿಲ್ಲದ ನಗರೀಕರಣದಿಂದ 1973 ರಿಂದ 2017 ರವರೆಗೆ ಬೆಂಗಳೂರಿನಲ್ಲಿ ನಗರ ಪ್ರದೇಶ ಬೆಳವಣಿಗೆ 1028% ಹೆಚ್ಚಳ ಕಂಡುಬಂದಿದ್ದು, ಸಸ್ಯವರ್ಗದಲ್ಲಿ 88% ಕುಸಿತ ಕಂಡರೆ, ಜಲಮೂಲಗಳಲ್ಲಿ (ಜೌಗು ಪ್ರದೇಶಗಳು) 79% ಕಡಿತವಾಗಿದೆ. ಈ ವೇಗದ ಕಾಂಕ್ರೀಟೀಕರಣವು ನೀರು ಹಿಂಗದ ಮೇಲ್ಮೈಗಳನ್ನು ಹೆಚ್ಚಿಸುತ್ತದೆ, ಮಳೆನೀರು ಹೀರಿಕೊಳ್ಳುವಿಕೆಯನ್ನು ತಡೆಯುವ ಮೂಲಕ ಮೇಲ್ಮೈ ಹರಿವನ್ನು ಹೆಚ್ಚಿಸುತ್ತದೆ.

ಕೆರೆ, ರಾಜಕಾಲುವೆ ಮತ್ತು ಚರಂಡಿಗಳ ಅತಿಕ್ರಮಣ:

ಐತಿಹಾಸಿಕವಾಗಿ ‘ಕೆರೆಗಳ ನಗರ’ ಎಂದು ಕರೆಯಲ್ಪಡುವ ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ಸುಮಾರು 1452 ಜಲಮೂಲಗಳಿದ್ದವು, ಈಗ ಅತಿಕ್ರಮಣ ಮತ್ತು ನಗರಾಭಿವೃದ್ಧಿಯಿಂದಾಗಿ ಸುಮಾರು 193 ಕ್ಕೆ ಇಳಿದಿದೆ. ಕೆರೆಗಳು ಮತ್ತು ರಾಜಕಾಲುವೆಗಳು ಹೆಚ್ಚಾಗಿ ಮೇಲೆ ನಿರ್ಮಿಸಲ್ಪಡುತ್ತವೆ ಅಥವಾ ಕಿರಿದಾಗುತ್ತವೆ, ಇದು ನೈಸರ್ಗಿಕ ನೀರಿನ ಹರಿವನ್ನು ಅಡ್ಡಿಪಡಿಸುವ ಮೂಲಕ ಮಳೆಯ ಸಮಯದಲ್ಲಿ ಉಕ್ಕಿ ಹರಿಯುತ್ತವೆ.

ಅಸಮರ್ಪಕ ಒಳಚರಂಡಿ ವ್ಯವಸ್ಥೆಗಳು

ನಗರದ ಹಳೆಯ ಒಳಚರಂಡಿ ಮತ್ತು ಮಳೆನೀರಿನ ಒಳಚರಂಡಿ ಜಾಲಗಳು ಹಳೆಯದಾಗಿವೆ, ಮಳೆ ಮತ್ತು ಕಡಿಮೆ ಜನಸಂಖ್ಯೆಗಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಚರಂಡಿಗಳು ಹೆಚ್ಚಾಗಿ ಕಸ, ನಿರ್ಮಾಣ ಅವಶೇಷಗಳು ಮತ್ತು ಹೂಳುಗಳಿಂದ ಮುಚ್ಚಿಹೋಗಿರುತ್ತವೆ; ಇದರಿಂದಾಗಿ ಅವುಗಳ ನೀರಿನ ಹರಿವಿನ ಸಾಮರ್ಥ್ಯ ಕಡಿಮೆಯಾಗುತ್ತದೆ. ಉದಾಹರಣೆಗೆ, ಅತಿಕ್ರಮಣದಿಂದಾಗಿ ಕೆಲವು ಚರಂಡಿಗಳು 30 ಅಡಿಗಳಿಂದ 4 ಅಡಿಗಳಿಗೆ ಕುಗ್ಗಿವೆ ಎನ್ನುತ್ತವೆ ವರದಿಗಳು.

ಬೆಂಗಳೂರು ಮೂರು ಪ್ರಮುಖ ಜಲಾನಯನ ಪ್ರದೇಶಗಳನ್ನು (ವೃಷಭಾವತಿ, ಕೋರಮಂಗಲ-ಚಲ್ಲಘಟ್ಟ ಮತ್ತು ಹೆಬ್ಬಾಳ) ಹೊಂದಿರುವ ಕಣಿವೆಯಲ್ಲಿದೆ. ಇದು ತಗ್ಗು ಪ್ರದೇಶಗಳನ್ನು ಪ್ರವಾಹಕ್ಕೆ ಗುರಿಯಾಗಿಸುತ್ತದೆ. ನಿರ್ಮಾಣ ಕಾರ್ಯದಿಂದ ಬದಲಾದ ಪರಿಸರದಿಂದ ರೇನ್‌ಬೋ ಡ್ರೈವ್ ಲೇಔಟ್ ಮತ್ತು ಹೊರ ವರ್ತುಲ ರಸ್ತೆಯಂತಹ ಪ್ರದೇಶಗಳಲ್ಲಿ ಪ್ರವಾಹ ಉಲ್ಬಣಗೊಳಿಸುತ್ತದೆ.

ಭಾರೀ ಮಳೆ ಮತ್ತು ಹವಾಮಾನ ಬದಲಾವಣೆ:

ಬೆಂಗಳೂರಿಗೆ ಹಲವಾಮಾನ ಬದಲಾವಣೆಯೂ ಶಾಪವಾಗಿದ್ದು, ಅನಿರೀಕ್ಷಿತ ಹಾಗೂ ಭಾರೀ ಮಳೆಯನ್ನು ಬೆಂಗಳೂರು ಸಹಿಸುತ್ತಿಲ್ಲ. ನಗರದಲ್ಲಿ 2022 ರಲ್ಲಿ 1706 ಮಿಮೀ ನಂತಹ ದಾಖಲೆಯ ಮಳೆಯಾಗಿದೆ, ಇದು ಹವಾಮಾನ ಬದಲಾವಣೆ ಮತ್ತು ಎಲ್‌ ನಿನೋದಂತಹ ಹವಾಮಾನ ಮಾದರಿಗಳಿಂದ ತೀವ್ರಗೊಂಡಿದೆ. ಕಳಪೆ ಮೂಲಸೌಕರ್ಯದಿಂದಾಗಿ ಮಧ್ಯಮ ಮಳೆ (1-5 ಸೆಂ.ಮೀ) ಸಹ ದುರ್ಬಲ ಪ್ರದೇಶಗಳಿಗೆ ಪ್ರವಾಹವನ್ನುಂಟುಮಾಡಬಹುದು.

ಕಳಪೆ ನಗರ ಯೋಜನೆ ಮತ್ತು ಆಡಳಿತ:

ಮುಖ್ಯವಾಗಿ, ಯೋಜಿತವಲ್ಲದ ಅಭಿವೃದ್ಧಿ, ಬಿಬಿಎಂಪಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳಲ್ಲಿ ಸಮನ್ವಯದ ಕೊರತೆ. ಚರಂಡಿಗಳ ಅಸಮರ್ಪಕ ನಿರ್ವಹಣೆ (842 ಕಿ.ಮೀ.ಗಳಲ್ಲಿ ಕೇವಲ 45% ಮಾತ್ರ ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತದೆ) ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಭ್ರಷ್ಟಾಚಾರ ಮತ್ತು ಅಕ್ರಮ ನಿರ್ಮಾಣಗಳು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ.

ಐತಿಹಾಸಿಕವಾಗಿ, ನೀರಿನ ನಿರ್ವಹಣೆಗಾಗಿ ಕೆರೆ-ಕಾಲುವೆಗಳ ಮೂಲಕ ಪರಸ್ಪರ ಸಂಪರ್ಕಿಸಲಾಗಿತ್ತು. ಅತಿಕ್ರಮಣ, ತ್ಯಾಜ್ಯ ಸುರಿಯುವಿಕೆಯು ಈ ವ್ಯವಸ್ಥೆಯನ್ನು ಅಡ್ಡಿಪಡಿಸಿದೆ, ನೈಸರ್ಗಿಕ ಪ್ರವಾಹ ಸಂಗ್ರಹಣೆ ಮತ್ತು ಅಂತರ್ಜಲ ಮರುಪೂರಣವನ್ನು ಕಡಿಮೆ ಮಾಡಿದೆ.

ಶಾಂತಿನಗರ ಬಸ್‌ ಡಿಪೋ

ಪರಿಹಾರ ಕ್ರಮಗಳು:

ಕೆರೆಗಳು ಮತ್ತು ಚರಂಡಿಗಳಿಂದ ಅತಿಕ್ರಮಣಗಳನ್ನು ತೆರವುಗೊಳಿಸಿ. ಹೆಚ್ಚಿನ ಮಳೆಯನ್ನು ನಿರ್ವಹಿಸಲು ಒಳಚರಂಡಿ ವ್ಯವಸ್ಥೆಗಳನ್ನು ನವೀಕರಿಸುವ ಜೊತೆಗೆ ವಿಸ್ತರಿಸಬೇಕು. ಕೆರೆಗಳ ಅಂತರಸಂಪರ್ಕವನ್ನು ಪುನಃಸ್ಥಾಪಿಸಿ, ಜೌಗು ಪ್ರದೇಶಗಳನ್ನು ಸಂರಕ್ಷಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಜೊತೆಗೆ, ಕಠಿಣ ನಗರ ಯೋಜನೆಯನ್ನು ಜಾರಿಗೊಳಿಸಿ, ಪ್ರವಾಹ ಪ್ರದೇಶಗಳಲ್ಲಿ ನಿರ್ಮಾಣವನ್ನು ನಿಷೇಧಿಸಬೇಕು. ಮನೆಗಳಲ್ಲಿ ಮಳೆನೀರು ಕೊಯ್ಲು ಉತ್ತೇಜಿಸಬೇಕು. ಚರಂಡಿ ಅಡಚಣೆಯನ್ನು ತಡೆಗಟ್ಟಲು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು ಬಹುಮುಖ್ಯವಾಗಿದೆ.

ಮೇಲಿನ ಸಮಸ್ಯೆಗಳನ್ನು ಪರಿಹರಿಸದೆ ಇದ್ದರೆ, ಬೆಂಗಳೂರಿನ ಪ್ರವಾಹವು ಮುಂದುವರಿಯುತ್ತದೆ. ಏಕೆಂದರೆ, ಮೂಲಸೌಕರ್ಯವು ನಗರ ಬೆಳವಣಿಗೆ ಮತ್ತು ಹವಾಮಾನ ಸವಾಲುಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಹೆಣಗಾಡುತ್ತದೆ.

ಹವಾಮಾನ ಬದಲಾವಣೆ ಪರಿಣಾಮ

ಹವಾಮಾನ ಬದಲಾವಣೆಯು ಬೆಂಗಳೂರಿನ ವಾರ್ಷಿಕ ಪ್ರವಾಹದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಈ ಕೆಳಗಿನಂತೆ ಇದರ ಪ್ರಮುಖ ಪರಿಣಾಮಗಳನ್ನು ಕನ್ನಡದಲ್ಲಿ ವಿವರಿಸಲಾಗಿದೆ:

ತೀವ್ರ ಮತ್ತು ಅನಿಯಮಿತ ಮಳೆ:

ಹವಾಮಾನ ಬದಲಾವಣೆಯಿಂದಾಗಿ ಬೆಂಗಳೂರಿನಲ್ಲಿ ಮಳೆಯ ಮಾದರಿಗಳು ಬದಲಾಗಿವೆ. ಎನ್‌ ನೀನೊ ಮತ್ತು ಇತರ ಹವಾಮಾನ ವಿದ್ಯಮಾನಗಳಿಂದ ತೀವ್ರ ಮಳೆಯ ಪ್ರಮಾಣ ಹೆಚ್ಚಾಗಿದೆ. ಉದಾಹರಣೆಗೆ, 2022ರಲ್ಲಿ ಬೆಂಗಳೂರು 1706 ಮಿಮೀ ಮಳೆಯನ್ನು ಕಂಡಿತು, ಇದು ಐತಿಹಾಸಿಕ ದಾಖಲೆಯಾಗಿದೆ. ಕಡಿಮೆ ಸಮಯದಲ್ಲಿ ಭಾರೀ ಮಳೆ (1-5 ಸೆಮೀ ಒಂದೇ ಗಂಟೆಯಲ್ಲಿ) ಸಂಭವಿಸುತ್ತದೆ, ಇದು ನಗರದ ಒಳಚರಂಡಿ ವ್ಯವಸ್ಥೆಯ ಸಾಮರ್ಥ್ಯವನ್ನು ಮೀರಿ ಪ್ರವಾಹಕ್ಕೆ ಕಾರಣವಾಗುತ್ತದೆ.

ತಾಪಮಾನ ಏರಿಕೆಯಿಂದ ಭೂಮಿಯ ತೇವಾಂಶ ಕಡಿಮೆಯಾಗುತ್ತದೆ, ಇದರಿಂದ ಮಣ್ಣು ಮಳೆನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಇದು ನಗರದ ಕಾಂಕ್ರೀಟ್‌ನಿಂದ ಆಗಿರುವ ಭೂಮಿಯೊಂದಿಗೆ ಸೇರಿಕೊಂಡು ನೀರಿನ ಹರಿವನ್ನು ತೀವ್ರಗೊಳಿಸುತ್ತದೆ.

ಹವಾಮಾನ ಬದಲಾವಣೆಯಿಂದ ಕೆರೆಗಳು ಮತ್ತು ಜೌಗು ಪ್ರದೇಶಗಳ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಒತ್ತುವರಿಯಿಂದಾಗಿ ಈಗಾಗಲೇ ಕಡಿಮೆಯಾಗಿರುವ ಕೆರೆಗಳು, ತೀವ್ರ ಮಳೆಯನ್ನು ನಿಯಂತ್ರಿಸಲು ಸಾಧ್ಯವಾಗದೆ, ಪ್ರವಾಹದ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಹವಾಮಾನ ಬದಲಾವಣೆಯಿಂದ ಗಾಳಿಯ ಚಂಡಮಾರುತಗಳು ಮತ್ತು ಇತರ ವಿಪರೀತ ಹವಾಮಾನ ಘಟನೆಗಳು ಹೆಚ್ಚಾಗುತ್ತಿವೆ, ಇವು ಕಾಲುವೆಗಳಿಗೆ ಕಸ ಮತ್ತು ತ್ಯಾಜ್ಯವನ್ನು ಒಡ್ಡಿ, ಪ್ರವಾಹದ ಸಾಧ್ಯತೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ.

ಬೆಂಗಳೂರಿಗೆ ಆರೆಂಜ್, ರಾಜ್ಯದ ವಿವಿಧೆಡೆ ಎಲ್ಲೋ ಅಲರ್ಟ್‌ ನೀಡಿದ ಹವಾಮಾನ ಇಲಾಖೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...