Homeಕರ್ನಾಟಕಮೋದಿ ಮಾಮನ ಸುಳ್ಳು ಫಲಕದ ವಿದ್ಯುದಾ‍ಘಾತ..!

ಮೋದಿ ಮಾಮನ ಸುಳ್ಳು ಫಲಕದ ವಿದ್ಯುದಾ‍ಘಾತ..!

- Advertisement -
- Advertisement -
  • ಶುದ್ಧೋದನ

ಹಸಿ ಹಸಿ ಸುಳ್ಳುಗಳನ್ನು ಅದ್ಭುತವಾಗಿ ಮಾರ್ಕೆಟಿಂಗ್ ಮಾಡಿ, ಪಾಲಿಟಿಕಲ್ ಬಿಸಿನೆಸ್‌ನ್ನು ಲಾಭದಾಯಕವಾಗಿ ನಡೆಸುವ ಕಲೆ ಕರಗತ ಮಾಡಿಕೊಂಡಿರುವ ಮೋದಿ ಮಾಮನ ಕೇಸರಿ ಸರ್ಕಾರದ ಪ್ರಚಾರದ ತೆವಲಿಗೆ ದೇಶದ ಬೊಕ್ಕಸವೇ ಬರಿದಾಗುತ್ತಿದೆ. ವಿರೋಧಾಭಾಸ, ದ್ವಂದ್ವ ವ್ಯಕ್ತಿತ್ವ. ಮೋದಿ ಹೇಳೋದೇ ಒಂದು; ಮಾಡೋದು ಮತ್ತೊಂದು. ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡ್ತೇನೆಂದು ಹೇಳಿದ್ದ ಈ ಅಭಿನವ ರಾಷ್ಟ್ರಪಿತ, ನಿರುದ್ಯೋಗಿಗಳಿಗೆ ಬಜ್ಜಿ ಮಾರಾಟ ಮಾಡಿ ಎಂದು ಮುಲಾಜಿಲ್ಲದೆ ಛೇಡಿಸುತ್ತಾರೆ. “ಆಧಾರ” ಟೀಕಿಸಿದ್ದ ಮೋದಿಗೀಗ ಅದೇ ಆಧಾರ.! ಪ್ರಚಾರ ಘಲಕ, ಜಾಹೀರಾತುಗಳಲ್ಲಷ್ಟೇ ಬದುಕಿರುವ ಮೋದಿ ಸರ್ಕಾರ, ದಿಕ್ಕು ದಿವಾಳಿಯಾಗುತ್ತಿರುವ ದೇಶದ ಪ್ರತಿ ಹಳ್ಳಿ, ಪ್ರತಿ ಮನೆಗೆ ವಿದ್ಯುತ್‍ ಒದಗಿಸಿ ಬೆಳಗುತ್ತೇನೆಂದು ಹೇಳುವುದೇ ವಿಪರ್ಯಾಸ..!

ವಿದ್ಯುತ್ ಕಾಣದ ಹಳ್ಳಿ ಇಲ್ಲವೇ, ಕತ್ತಲೆಯ ಮನೆಗೆ ಕೇಂದ್ರ ಸರ್ಕಾರದ ಅನುದಾನದಿಂದ ಕರೆಂಟ್‍ ಸೌಲಭ್ಯ ನೀಡಲು ಒದಗಿಸುವ ಯೋಜನೆಗೆ ಪ್ರಧಾನಮಂತ್ರಿ ಸಹಜ ಬಿಜಲಿ ಹರ್ ಘರ್ ಯೋಜನಾ (ಸೌಭಾಗ್ಯ ಯೋಜನೆ) ಎಂದು ನಾಮಕರಣ ಮಾಡಲಾಗಿದೆ. ರಾಜ್ಯದಾದ್ಯಂತ ಈ ಕಾಮಗಾರಿ ನಡೆಯುತ್ತಿದೆ. ಆದರೆ ನಿರೀಕ್ಷಿಸಿದಂತೆ ಕೆಲಸ ಹಾಗೂ ಉದ್ದೇಶ ಈಡೇರುತ್ತಿಲ್ಲ. ಮೋದಿಯನ್ನು ಸುದ್ದಿಯಲ್ಲಿಡುವ ಹಿಡನ್ ಅಜೆಂಡಾದ ಈ ಸೌಭಾಗ್ಯ ಹಿಕಮತ್ತೀಗ ಜಗಜ್ಜಾಹೀರಾಗಿ ಹೋಗಿದೆ. ಸಾರಾಸಗಾಟಾಗಿ ಹಳ್ಳಿ-ಹಳ್ಳಿಗಳ ಅಗಸೆ ಬಾಗಿಲಿನಲ್ಲಿ ಮೋದಿ ಚಿತ್ರವಿರುವ “ಸೌಭಾಗ್ಯ ಫಲಕ” ನಿಲ್ಲಿಸಲಾಗುತ್ತಿದೆ. ಫಲಕದ ಸಂದೇಶವೆಂದರೆ, ಕತ್ತಲಿಲ್ಲದ್ದ ಈ ಹಳ್ಳಿಯ ಪ್ರತಿ ಮನೆಯೂ ಮೋದಿ ದಯೆಯಿಂದ ವಿದ್ಯುತ್ ಬೆಳಕು ಕಂಡಿದೆ ಎಂಬುದು.

ಇವುಗಳಲ್ಲಿ ಬಹುತೇಕ ಮೋಸ-ವಂಚನೆಯ ಘಾತುಕ ಫಲಕಗಳು. ವಿದ್ಯುತ್‍ ಕಂಡು ಹಲವು ವರ್ಷ ಅಥವಾ ಎರಡ್ಮೂರು ದಶಕವಾಗಿರುವ ಗ್ರಾಮಗಳಲ್ಲಿ ಸೌಭಾಗ್ಯ ಫಲಕ ಹಾಕಲಾಗಿದೆ.! ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಹೊನ್ನಾವರದಂಥ ತಾಲೂಕುಗಳ ದುರ್ಗಮ ಹಳ್ಳಿಗಳಲ್ಲಿನ್ನೂ ಕರೆಂಟ್‍ ಸುಳಿವೇ ಇಲ್ಲ. ಇಂಥ ಹಳ್ಳಿಗಳನ್ನು ಬೇಕಂತಲೇ ಕಡೆಗಣಿಸಿ, ಬೆಳಕಿರುವಲ್ಲಿ ಬೋಗಸ್ ಬೋರ್ಡ್‌ ಹಾಕಿ, ಮೋದಿಯನ್ನು ಬೆಳಕಿನ ಭಾಗ್ಯವಿದಾತ ಎಂದು ಬಿಂಬಿಸಲು ಕೋಟ್ಯಾಂತರ ರೂಪಾಯಿಯನ್ನು ಶಕ್ತಿ ಮಂತ್ರಾಲಯ ಪೋಲು ಮಾಡುತ್ತಿದೆ. ಇದೊಂದು ಸಾವಿರಾರು ಕೋಟಿ ರೂ.ಗಳ ಕರ್ಮಕಾಂಡ. ಮೋದಿಯ ಪ್ರಚಾರದ ದೌರ್ಬಲ್ಯ ಅರ್ಥ ಮಾಡಿಕೊಂಡಿರುವ ವಿದ್ಯುತ್ ಇಲಾಖೆಯ ಪ್ರಬೃತಿಗಳು, ಗುತ್ತಿಗೆದಾರರು ಹಗಲು ದರೋಡೆಗೆ ಇಳಿದಿದ್ದಾರೆ.

ತಮಾಷೆ ನೋಡಿ; ಹಳ್ಳಿಗಳಲ್ಲಿ ತಿಂಗಳಲ್ಲಿ ಹೆಚ್ಚಿನ ದಿನ ಕರೆಂಟೇ ಇರುವುದಿಲ್ಲ. ಮಳೆಗಾಲದಲ್ಲಿ ಸಣ್ಣ ಗಾಳಿ-ಮಳೆ ಬಂದರೂ ಸಾಕು, ಸೀಮೆ ಎಣ್ಣೆಯ ಬುಡ್ಡಿ ದೀಪದಂತೆ ಕರೆಂಟ್ ಹೋಯ್ದಾಡುತ್ತಾ ಕಡೆಗೆ ಹೋದ ವಿದ್ಯುತ್‍ ವಾರವಾದರೂ ಬರುವುದೇ ಇಲ್ಲ.! ಆಗಲೋ, ಈಗಲೋ ಹರಿದು ಬೀಳುವಂಥ ಜೀರ್ಣಗೊಂಡ ತಂತಿಗಳು, ಮುರಿದು ಬೀಳಲು ಸಿದ್ಧವಾಗಿರುವ ಕಂಬಗಳು, ಕಳಪೆ ಟ್ರಾನ್ಸ್‌ಫಾರ್ಮರ್‌ ಮತ್ತಿತರ ಉಪಕರಣಗಳಿಂದ ವಿದ್ಯುತ್‍ ಸಂಪರ್ಕ ಇರುವಲ್ಲೇ ಸಮಾಧಾನಕರ ವಿದ್ಯುತ್ ಪೂರೈಕೆ ಇಲ್ಲ. ಇಂಥದ್ದರಲ್ಲಿ ಮೋದಿಜಿ ಮನೆ-ಮನೆಗೆ ವಿದ್ಯುತ್‍ ಕೊಟ್ಟಿದ್ದೇನೆಂದು ಸ್ಥಾವರವಾಗುವ ತರಾತುರಿಯಲ್ಲಿರುವುದು ಹಾಸ್ಯಾಸ್ಪದವೇ ಸರಿ.

ಬೆಳಗ್ಗೆ ಒಂದು ದೇಶ; ರಾತ್ರಿ ಒಂದು ದೇಶ ಸುತ್ತುವ ಮೋದಿಜಿ ಭಾರತದ ಎಲ್ಲ ಹಳ್ಳಿಗಳು, ವಿದ್ಯುತ್‍ ದೀಪದಿಂದ ಝಗಮಗಿಸುತ್ತಿವೆ ಎಂದು ಒಣ ಪೋಸು ಕೊಡುವ ಉದ್ದೇಶದಿಂದ “ಆಟ” ಆಡುತ್ತಿದ್ದಾರೆಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ದೇಶ ಕತ್ತಲು ಮುಕ್ತವಾಗಿದೆ ಎಂದು ವಿಶ್ವಸಂಸ್ಥೆಗೆ ತೋರಿಸಿಕೊಳ್ಳುವ ಐಡಿಯಾ ಮೋದಿಯದು. ಸುಳ್ಳು ಫಲಕ ಹಾಕಲಾಗಿರುವ ಹಳ್ಳಿಗಳ ಚಿತ್ರ, ಉಪಗ್ರಹದ ಮೂಲಕ ತೆಗೆದು ವಿಶ್ವ ಸಮುದಾಯದ ಮುಂದೆ ಮಿಂಚುವ “ಸೌಭಾಗ್ಯ”ಕ್ಕಾಗಿ ಮೋದಿ ಪಠಾಲಮ್ ಕಾತರಿಸುತ್ತಿದೆಯಷ್ಟೇ.

ಇದೆಂಥ ಬೋಗಸ್ ಯೋಜನೆ ಮತ್ತು ಕೋಟಿ-ಕೋಟಿ ಲೂಟಿ ಪ್ರಾಜೆಕ್ಟ್ ಎಂಬುದಕ್ಕೆ ಸಣ್ಣದೊಂದು ಸ್ಯಾಂಪಲ್ ಇಲ್ಲಿದೆ. ಉತ್ತರ ಕನ್ನಡದ ಶಿರಸಿ ಉಪ ವಿಭಾಗದ 638 ಗ್ರಾಮಗಳಲ್ಲಿ ಬಹುತೇಕ ಹಳ್ಳಿಗಳು ಹಲವು ವರ್ಷದ ಹಿಂದೆಯೇ ವಿದ್ಯುತ್‍ ಸಂಪರ್ಕ ಹೊಂದಿವೆ. ಸೌಭಾಗ್ಯ ಯೋಜನೆಯಲ್ಲಿ ಕೇವಲ 8-10 ಮನೆಗಳಿಗಷ್ಟೇ ಕರೆಂಟ್‌ ಸಿಕ್ಕಿದೆ. ಆದರೆ ಎಲ್ಲ 638 ಹಳ್ಳಿಗಳಲ್ಲೂ “ಪ್ರಧಾನಿ ಸೌಭಾಗ್ಯ ಹಳ್ಳಿ” ಫೇಕ್ ಫಲಕವನ್ನು ವಿದ್ಯುತ್ ಇಲಾಖೆ ಹಾಕುತ್ತಿದೆ. ಈಗಾಗಲೇ ಸುಮಾರು ಐದುನೂರು ಹಳ್ಳಿಗಳಲ್ಲಿ ಸುಳ್ಳು ಬೋರ್ಡ್ ರಾರಾಜಿಸುತ್ತಿವೆ. ಒಂದು ಬೋರ್ಡಿಗೆ ಸರ್ಕಾರದ ಲೆಕ್ಕದಲ್ಲಿ 17,693 ರೂ. ವೆಚ್ಚ ತಗುಲಿದೆ. ಅಂದರೆ ಶಿರಸಿ ಉಪ ವಿಭಾದಲ್ಲೇ ನೂರಾರು ಕೋಟಿ ರೂ. ಟೆಂಡರ್ ಸ್ಕ್ಯಾಂಡಲ್ ಆಗುತ್ತಿದೆಯಾದರೆ, ಕರ್ನಾಟಕದಲ್ಲಿ ಎಷ್ಟು ಕೋಟಿ ಆಗಿರಬಹುದು..? ಇಡೀ ಭಾರತದಲ್ಲಾಗುತ್ತಿರುವ ಲೂಟಿಯ ಮೊತ್ತ ಎಷ್ಟು ಆಗಬಹುದು ಎಂಬುದನ್ನು ನೀವೇ ಊಹಿಸಿ..! ಈಗ ಮೋದಿಯ ಗಿಮಿಕ್‍ಗೆ ಏನೆನ್ನುತ್ತೀರಿ..!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...