Homeಮುಖಪುಟಭ್ರಷ್ಟಾಚಾರವನ್ನು ಶರವೇಗದಲ್ಲಿ ಬೆಳೆಸುತ್ತಿರುವ ಅಮಿತ್ ಶಾ ಮತ್ತು ಬಿಜೆಪಿ...

ಭ್ರಷ್ಟಾಚಾರವನ್ನು ಶರವೇಗದಲ್ಲಿ ಬೆಳೆಸುತ್ತಿರುವ ಅಮಿತ್ ಶಾ ಮತ್ತು ಬಿಜೆಪಿ…

ಸ್ಥಿರ ಸರ್ಕಾರಕ್ಕಾಗಿ ಲೋಕಸಭೆಯಲ್ಲಿ ಜನತೆ ಕೊಟ್ಟ ಭಾರೀ ಬಹುಮತವನ್ನು ಬಿಜೆಪಿ, ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಮತ್ತು ಭ್ರಷ್ಟಾಚಾರ ಹೆಚ್ಚು ಮಾಡಲು ಬಳಸುತ್ತಿರುವುದು ದುರಂತ

- Advertisement -
- Advertisement -

ಚುನಾವಣಾ ಅಫಿಡವಿಟ್‍ನಲ್ಲಿ ಘೋಷಿಸಿಕೊಂಡಂತೆ ಭಾರತದ ಅತ್ಯಂತ ಶ್ರೀಮಂತ ಎಂ.ಎಲ್.ಎ ಇವರು. ಅದು ಬರೋಬ್ಬರಿ 1015 ಕೋಟಿ ರೂಗಳ ಒಡೆಯ. ಇವರು ಕರ್ನಾಟಕದವರೆಂಬ ಹೆಮ್ಮೆ ಪಡುವ ವಿಷಯವೇನಲ್ಲ… ಅವರೇ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್.. ಹೊಸಕೋಟೆಯ ಶಾಸಕ ಮತ್ತು ಕರ್ನಾಟದ ವಸತಿ ಸಚಿವರಾಗಿದ್ದ ಇವರು ಸದ್ಯಕ್ಕೆ ಅತೃಪ್ತರ ಗ್ಯಾಂಗ್ ನಲ್ಲಿದ್ದಾರೆ.

ಇನ್ನು ಸಚಿವ ಸ್ಥಾನಕ್ಕೆ ಸಮಾನವಾದ ಬಿಡಿಎ ಅಧ್ಯಕ್ಷ ಸ್ಥಾನ ಸೋಮಶೇಖರ್‍ರಿಗೆ ಮತ್ತು ಹೊಸ ಸರ್ಕಾರ ಬಂದರೂ ಕದಲಿಸಲಾಗದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಸುಧಾಕರ್‍ರಿಗೆ ಸಿಕ್ಕಿದೆ.

ಅ (ತೃಪ್ತ) ರಾಜಕಾರಣಿ, ಬಹುದೊಡ್ಡ ಸಿನಿಮಾ ನಿರ್ಮಾಪಕ, ಅಗರ್ಭ ಶ್ರೀಮಂತ, ಹಗರಣಗಳ ಸರದಾರ ಮುನಿರತ್ನ.. ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ. ಇವರಿಗೂ ಯಾವ ರೀತಿಯ ಅತೃಪ್ತಿಯೋ ಗೊತ್ತಿಲ್ಲ, ಕ್ಷೇತ್ರ ಬಿಟ್ಟು ರಾಜಿನಾಮೆ ಕೊಟ್ಟು ಮುಂಬೈ ಸೇರಿಕೊಂಡಿದ್ದಾರೆ. ಇವರಿಬ್ಬರಷ್ಟೇ ಅಲ್ಲ, ಇದೇ ರೀತಿ ಅಗರ್ಭ ಶ್ರೀಮಂತರಾದ ಹೆಬ್ಬಾಳ ಶಾಸಕ ಭೈರತಿ ಸುರೇಶ್, ಯಶವಂತಪುರದ ಶಾಸಕ ಎಸ್.ಟಿ ಸೋಮಶೇಖರ್, ಮಾಜಿ ಸಚಿವ ಬಿಟಿಎಂ ಲೇಔಟ್‍ನ ರಾಮಲಿಂಗಾರೆಡ್ಡಿ ಸಹ ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆ ಮತ್ತು ಬಿಜೆಪಿಯ ಸಂಪೂರ್ಣ ಬೆಂಬಲದಿಂದ ಬದುಕುತ್ತಿದ್ದಾರೆ.

ಇವರೇಕೆ ಹೀಗೆ ಮಾಡಿದರು? ಇವರಿಗೆ ಹಣದ ಕೊರತೆಯಿಲ್ಲ ಹಾಗಾಗಿ ಬಿಜೆಪಿ ಇವರನ್ನು ಹಣದಿಂದ ಕೊಳ್ಳಲು ಸಾಧ್ಯವಿಲ್ಲ. ಇನ್ನು ಅಧಿಕಾರದ ಆಸೆಯ ಸೆಳೆಯುವಿಕೆಯೂ ಸಾಧ್ಯವಿಲ್ಲ. ಆದರೂ ಸಹ ಇವರೆಲ್ಲರೂ ಪಕ್ಷ ಬಿಟ್ಟು ಹೋಗಲಿಕ್ಕೆ ಕಾರಣವೇನು? ಉಳಿದವರು ಬಿಟ್ಟುಬಿಡೋಣ ಎಂಟಿಬಿ ನಾಗರಾಜ್ ರವರಿಗೆ ಸಾವಿರಾರು ಕೋಟಿ ಘೋಷಿತ ಆಸ್ತಿ ಇದೆ. ವಸತಿ ಸಚಿವ ಸ್ಥಾನವೂ ಇದೆ. ಸಿದ್ದರಾಮಯ್ಯನವರ ಆಪ್ತ ಬಳಗದವರು. ಅವರೇಕೆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ? ಅವರಿಗೆ ಬಿಜೆಪಿಯವರು ಏನು ಕೊಡಲಿಕ್ಕೆ ಸಾಧ್ಯ? ಬಿಜೆಪಿ ಇವರಿಗೆ ಯಾವುದೇ ಆಮಿಷ ಒಡ್ಡಿಲ್ಲದಿದ್ದರೂ ಏಕೆ ಹೋದರು?

ಬಿಜೆಪಿ ಮಾಡಿದ್ದು ಇಷ್ಟೆ.

ಬಿಜೆಪಿ ಕೆಲ ಆಯ್ದ ಶಾಸಕರಿಗೆ ಕೊಟ್ಟ ಸೂಚನೆ ಇಷ್ಟೇ. ಕೇವಲ ಒಂದೇ ಮಾತು ಹೇಳದ್ದು. ಅದೇಂದರೆ 4 ದಿನದಲ್ಲಿ ರಾಜೀನಾಮೆ ಕೊಟ್ಟು ಬರಬೇಕು ಅಷ್ಟೇ. ಬಿಜೆಪಿ ಇವರಿಗೆ ಧಮಕಿ ಕೂಡ ಹಾಕಿಲ್ಲ. ಆ ಬಿಜೆಪಿಯವರ ಮಾತನ್ನು ಶಿರಾವಹಿಸಿ ಪಾಲಿಸಿದವರು ಈ ಶಾಸಕರು. ಇಲ್ಲದಿದ್ದರೆ ಈ ಶ್ರೀಮಂತ ಎಮ್ಮೆಲ್ಲೆಗಳಿಗೆ ಇಡಿ ಐಟಿ ಸಿಬಿಐ ರೈಡ್ ನಂತಹ ಅಸ್ತ್ರಗಳು ಕಾದು ಕುಳಿತಿದ್ದವು. ಮೊದಲೇ ಸಾಕಷ್ಟು ಸಂಪತ್ತಿನ ಒಡೆಯರಾದ ಇವರಿಗೆ ತಮ್ಮ ಸಂಪತ್ತನ್ನು ಉಳಿಸಿಕೊಳ್ಳಬೇಕಾದರೆ ಇದ್ದ ಮಾರ್ಗ ಒಂದೇ ಅದು ರಾಜೀನಾಮೆ ಕೊಡುವುದು.

ಇದರ ಕುರಿತು ರಾಮಲಿಂಗರೆಡ್ಡಿ ಸೂಚ್ಯವಾಗಿ ಹೇಳಿದ್ದಾರೆ. ನನ್ನನ್ನು ಸೇರಿದಂತೆ ನಮ್ಮ ಶಾಸಕರ ಮೇಲಿನ ದಾಳಿಗಳನ್ನು ತಡೆಯಲು ಪಕ್ಷ ಏನು ಮಾಡಿದೆ? ನಮಗೆ ಯಾವ ರೀತಿಯ ರಕ್ಷಣೆ ನೀಡಿದೆ ಎಂದು ಕೇಳಿದರು. ಅದಕ್ಕೆ ಕಾಂಗ್ರೆಸ್ಸಿನ ಯಾವ ನಾಯಕನ ಬಳಿಯೂ ಉತ್ತರವಿರಲಿಲ್ಲ. ಇದರ ಸುಳಿವ ಅರಿತ ಮತ್ತು ಈ ದಾಳಿಗಳನ್ನು ಮೂರು ವರ್ಷಗಳಿಂದಲೂ ಎದುರಿಸುತ್ತಿರುವ ಡಿ.ಕೆ ಶಿವಕುಮಾರ್ ಎಂಟಿಬಿ ನಾಗಾರಾಜ್‍ರನ್ನು ಮನವೊಲಿಸುತ್ತಾ ನನ್ನ ಮೇಲೆಯೂ ಐಟಿ ಇಡಿ ದಾಳಿ ಆಗಿದೆ. ಹಾಗಂತ ಹೆದರೋಕೆ ಆಗುತ್ತಾ ಎಂದು ಹೇಳಿಯೇ ಸ್ವಲ್ಪ ಮಟ್ಟಿಗೆ ಕನ್ವಿನ್ಸ್ ಮಾಡಿದ್ದರು. ಆದರೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರುವುದು, ಕೇಂದ್ರದಲ್ಲಿ ಬಿಜೆಪಿ ಭಾರೀ ಅಂತರದಲ್ಲಿ ಗೆದ್ದಿರುವುದನ್ನು ಕಂಡಿರುವ ಎಂಟಿಬಿ ನಾಗರಾಜ್‍ಗೆ ಧೈರ್ಯ ಸಾಲಲಿಲ್ಲ. ಅವರು ಡಿಕೆಶಿ ಕಣ್ತಪ್ಪಿಸಿ ಮುಂಬೈಗೆ ವಿಮಾನ ಹತ್ತಿದರು.

ಕರ್ನಾಟಕದ ಈ ಎಲ್ಲಾ ನಾಟಕದ ಹಿಂದೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕೈವಾಡವಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಬರೆಯಿತು. ಆನಂತರ ಟೈಮ್ಸ್ ಪತ್ರಿಕೆ ತನ್ನ ಬರವಣಿಗೆಯಿಂದ ಹಿಂದೆ ಸರಿಯಿತು. ಕಾರಣ ಯಾರಾದರೂ ಊಹಿಸಿಕೊಳ್ಳಬಹುದು.

ಅಧಿಕಾರ ದುರುಪಯೋಗ

ಈ ಎಲ್ಲಾ ಬೆಳವಣಿಗೆಗಳ ಹಿಂದಿರುವ ನಿಜವಾದ ಸೂತ್ರದಾರ ಅಮಿತ್ ಶಾ ಎಂದು ಹೇಳಲಾಗುತ್ತಿದೆ. ಅಮಿತವಾದ ಅವಕಾಶವಿರುವಾಗ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದನ್ನು ಬಿಟ್ಟು ಗೊಂದಲ ಸೃಷ್ಟಿಸುತ್ತಾ ಸಾಗಿರುವ ಶಾ ನ ಮುಂದಿನ ನಡೆಯ ಬಗ್ಗೆ ಲೆಕ್ಕಾ ಹಾಕುವುದು ಕಷ್ಟ ಸಾಧ್ಯವಾಗಿದೆ. ಆದರೆ ಲೋಕಸಭೆಯಲ್ಲಿ ಬಿಜೆಪಿಗೆ ಜನತೆ ನೀಡಿರುವ ಬಹುಮತವನ್ನು ದುರುಪಯೋಗಮಾಡಿಕೊಂಡು ಈ ರೀತಿ ಶಾಸಕರನ್ನು ಎದುರಿಸುತ್ತಿದ್ದಾರೆ ಎನ್ನುವುದು ಮಾತ್ರ ಸೂರ್ಯನಷ್ಟೇ ಸ್ಪಷ್ಟವಾಗಿದೆ.

 

ಇದೇ ಸಂದರ್ಭದಲ್ಲಿ ಗೋವಾದಲ್ಲಿಯೂ ಸಹ ಕಾಂಗ್ರೆಸ್ ನ ಹತ್ತು ಶಾಸಕರು ಕಾಂಗ್ರೆಸ್ ತೊರೆದು ಸಾಮೂಹಿಕವಾಗಿ ಬಿಜೆಪಿ ಸೇರಿದ್ದಾಗಿದೆ. ಅದರಲ್ಲಿ ಕೆಲವರಿಗೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಹುದ್ದೆಗಳು ಸಹ ದೊರೆತಿವೆ. ಸಮಸ್ಯೆ ಇರುವುದು ಇಲ್ಲಿಯೇ.. ಶಾಸಕರು ಅಕ್ರಮ/ಬೇನಾಮಿ ಆಸ್ತಿ ಮಾಡಿದ್ದರೆ, ಜನರ ಹಣವನ್ನು ಲೂಟಿ ಮಾಡಿದ್ದರೆ, ತೆರಿಗೆ ವಂಚನೆ ಮಾಡಿದ್ದರೆ ಅವರ ಮೇಲೆ ಖಂಡಿತ ಈಡಿ ಐಟಿ ಸಿಬಿಐ ದಾಳಿ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಅಕ್ರಮ ಸಂಪತ್ತನ್ನು ಸರ್ಕಾರ ಬೊಕ್ಕಸಕ್ಕೆ ಸೇರಿಸಬೇಕು. ಅದು ಸಾಂವಿಧಾನಿಕ ಕ್ರಮ. ಆದರೆ ಬಿಜೆಪಿ ಹಾಗೆ ಮಾಡುತ್ತಿಲ್ಲ. ಬದಲಿಗೆ ಆ ಬೆದರಿಕೆ ಒಡ್ಡಿ ಅವರನ್ನು ತಮ್ಮ ಪಕ್ಷಗಳತ್ತ ಸೆಳೆದುಕೊಂಡು ಅಕ್ರಮ ಮಾರ್ಗದಲ್ಲಿ ಸರ್ಕಾರ ರಚಿಸುತ್ತಿದೆ. ಅವರಿಗೆ ಮಂತ್ರಿ ಪದವಿ ಜೊತೆಗೆ ಮತ್ತಷ್ಟು ಹಣದ ಹೊಳೆ ಹರಿಸುತ್ತಿದೆ. (ಆ ಹಣದ ಮೂಲ ಕೆದಕಿದರೆ ಅದು ಜನಸಾಮಾನ್ಯರ ತೆರಿಗೆ ಎಂಬುದು ಸ್ಪಷ್ಟವಾಗುತ್ತದೆ) ಆ ಮೂಲಕ ಭ್ರಷ್ಟರನ್ನು ಮತ್ತಷ್ಟು ಕೊಬ್ಬಿಸುವುದರ ಜೊತೆಗೆ ಭ್ರಷ್ಟಾಚಾರಕ್ಕೆ ಮತ್ತಷ್ಟು ಪ್ರೋತ್ಸಾಹ ಕೊಡುತ್ತಿದೆ. ಸ್ಥಿರ ಸರ್ಕಾರ ರಚಿಸುವ ಸಲುವಾಗಿ ಜನರು ಕೊಟ್ಟ ಬಹುಮತವನ್ನು ಈ ರೀತಿ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಸ್ಥಾಪನೆಗೆ ಮುಂದಾಗುತ್ತಿದೆ.

ಬಿಜೆಪಿಯ ಆಟ ಇಲ್ಲಿಗೆ ನಿಲ್ಲಲ್ಲಿದೆ ಎಂದು ತಿಳಿಯಬೇಡಿ. ಆ ಪಕ್ಷದ ಮುಖುಲ್ ರಾಯ್ ಎಂಬುವವರು ಈಗಾಗಲೇ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ಪಕ್ಷಗಳಿಂದ ಸುಮಾರು 107 ಜನ ಶಾಸಕರ ತಮ್ಮ ಪಕ್ಷ ತೊರೆದು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಈ ರೀತಿ ಇವರು ಬಹಿರಂಗವಾಗಿಯೇ ಕುದುರೆ ವ್ಯಾಪಾರಕ್ಕೆ ನಿಂತಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಟಿಎಂಸಿಯ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ, ಅವರೆಲ್ಲಾ ಟಿಎಂಸಿ ತ್ಯಜಿಸಿ ಬಿಜೆಪಿ ಸೇರಲಿದ್ದಾರೆ ಎಂದು ಬಹಿರಂಗ ಬೆದರಿಕೆ ಒಡ್ಡಿದ್ದನ್ನು ನಾವು ಮರೆಯಬಾರದು. ನಿನ್ನೆ ತಾನೇ ಐಎಂಎ ಆರೋಪಿ ರೋಷನ್ ಬೇಗ್ ನನ್ನು ಸಹ ಪಕ್ಷಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದರು. ಕೊನೆ ಕ್ಷಣದಲ್ಲಿ ಎಸ್.ಐ.ಟಿ ದಾಳಿಯಿಂದ ವಿಫಲವಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...