Homeಕರ್ನಾಟಕ189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ

189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು ಬಿಜೆಪಿ ತನ್ನ ಮೊದಲ ಪಟ್ಟಿ ಪ್ರಕಟಿಸಿದೆ. 189 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿ, ವರುಣ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯನವರ ಎದುರು ಸೋಮಣ್ಣನವರನ್ನು ಕಣಕ್ಕೆ ಇಳಿಸುತ್ತಿದೆ. ಜೊತೆಗೆ ಚಾಮರಾಜನಗರ ಕ್ಷೇತ್ರದಿಂದಲೂ ಲಿಂಗಾಯತ ಸಮುದಾಯದ ಸೋಮಣ್ಣನವರನ್ನು ಹುರಿಯಾಳು ಮಾಡಲಾಗಿದೆ.

ಒಕ್ಕಲಿಗ ಸಮುದಾಯದ ಆರ್‌.ಅಶೋಕ್ ಅವರನ್ನೂ ಎರಡು ಕಡೆಯಲ್ಲಿ ಕಣಕ್ಕೆ ಇಳಿಸಲಾಗುತ್ತಿದೆ. ಅಶೋಕ್ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಪದ್ಮನಾಭನಗರ ಸೇರಿದಂತೆ ಕನಕಪುರದಿಂದ ಸ್ಪರ್ಧಿಸಲಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಅಶೋಕ್ ಅವರನ್ನು ನಿಲ್ಲಿಸಲಾಗುತ್ತಿದೆ.

ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್‌ಸಿ –30, ಎಸ್‌ಟಿ– 16 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.

ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಈಗಾಗಲೇ 166 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇತ್ತ ಜೆಡಿಎಸ್‌ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕೆಲವು ತಿಂಗಳ ಹಿಂದೆಯೇ ಘೋಷಿಸಿದೆ.

ಬಿಜೆಪಿ ಅಭ್ಯರ್ಥಿಗಳು:

ಶಿಗ್ಗಾವಿ– ಬಸವರಾಜ ಬೊಮ್ಮಾಯಿ

ನಿಪ್ಪಾಣಿ– ಶಶಿಕಲಾ ಜೊಲ್ಲೆ

ಚಿಕ್ಕೋಡಿ–ಸದಲಗ– ರಮೇಶ್‌ ಕತ್ತಿ

ಅಥಣಿ– ಮಹೇಶ ಕುಮಠಳ್ಳಿ

ಕಾಗವಾಡ– ಶ್ರೀಮಂತ ಪಾಟೀಲ

ಕುಡಚಿ(ಎಸ್‌ಸಿ) – ಪಿ. ರಾಜೀವ್‌

ರಾಯಭಾಗ (ಎಸ್‌ಸಿ)– ದುರ್ಯೋಧನ ಐಹೊಳೆ

ಹುಕ್ಕೇರಿ– ನಿಖಿಲ್‌ ಕತ್ತಿ

ಅರಭಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ– ರಮೇಶ ಜಾರಕಿಹೊಳಿ

ಯಮಕನಮರಡಿ(ಎಸ್‌ಟಿ) – ಬಸವರಾಜ ಹುಂದ್ರಿ

ಬೆಳಗಾವಿ ಉತ್ತರ– ಡಾ. ರವಿ ‍ಪಾಟೀಲ

ಬೆಳಗಾವಿ ದಕ್ಷಿಣ– ಅಭಯ ಪಾಟೀಲ

ಬೆಳಗಾವಿ ಗ್ರಾಮಾಂತರ– ನಾಗೇಶ್‌ ಮನ್ನೋಳ್ಕರ್‌

ಖಾನಾಪುರ– ವಿಠಲ ಹಲಗೇಕರ್‌

ಕಿತ್ತೂರು– ಮಹಾಂತೇಶ್‌ ದೊಡ್ಡಗೌಡರ

ಬೈಲಹೊಂಗಲ– ಜಗದೀಶ್‌ ಚನ್ನಪ್ಪ ಮೆಟಗುಡ್ಡ

ಸವದತ್ತಿ– ಯಲ್ಲಮ್ಮ– ರತ್ನಾ ವಿಶ್ವನಾಥ್‌ ಮಾಮನಿ

ರಾಮದುರ್ಗ– ಚಿಕ್ಕರೇವಣ್ಣ

ಮುಧೋಳ(ಎಸ್‌ಸಿ) – ಗೋವಿಂದ ಕಾರಜೋಳ

ತೇರದಾಳ– ಸಿದ್ದು ಸವದಿ

ಜಮಖಂಡಿ– ಜಗದೀಶ್‌ ಗುಡಗುಂಟಿ

ಬೀಳಗಿ– ಮುರುಗೇಶ ನಿರಾಣಿ

ಬಾದಾಮಿ– ಶಾಂತಾ ಗೌಡ ಪಾಟೀಲ

ಬಾಗಲಕೋಟೆ– ವೀರಭದ್ರಯ್ಯ ಚರಂತಿಮಠ

ಹುನಗುಂದ– ದೊಡ್ಡನಗೌಡ ಜಿ. ಪಾಟೀಲ

ಮುದ್ದೇಬಿಹಾಳ– ಎ.ಎಸ್‌. ಪಾಟೀಲ ನಡಹಳ್ಳಿ

ಬಬಲೇಶ್ವರ– ವಿಜು ಗೌಡ ಎಸ್‌. ಪಾಟೀಲ

ವಿಜಯಪುರ ನಗರ– ಬಸನಗೌಡ ಪಾಟೀಲ ಯತ್ನಾಳ

ಸಿಂದಗಿ– ರಮೇಶ ಭೂಸನೂರ

ಫಜಲಪುರ– ಮಾಲೀಕಯ್ಯ ಗುತ್ತೇದಾರ

ಜೇವರ್ಗಿ– ಶಿವನಗೌಡ ಪಾಟೀಲ ರಡ್ಡೇವಾಡಗಿ

ಸುರಪುರ (ಎಸ್‌ಟಿ)– ನರಸಿಂಹ ನಾಯಕ (ರಾಜೂ ಗೌಡ)

ಶಹಾ‍ಪುರ– ಅಮೀನ್‌ರೆಡ್ಡಿ ಯಾಲಗಿ

ಯಾದಗಿರಿ– ವೆಂಕಟರೆಡ್ಡಿ ಮುದ್ನಾಳ

ಚಿತ್ತಾಪುರ (ಎಸ್‌ಸಿ)– ಮಣಿಕಂಠ ರಾಠೋಡ್‌

ಚಿಂಚೋಳಿ (ಎಸ್‌ಸಿ)– ಡಾ.ಅವಿನಾಶ್ ಜಾಧವ್‌

ಕಲಬುರಗಿ ಗ್ರಾಮಾಂತರ (ಎಸ್‌ಸಿ)– ಬಸವರಾಜ ಮತ್ತಿಮೂಡ

ಕಲಬುರಗಿ ದಕ್ಷಿಣ– ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ ಉತ್ತರ– ಚಂದ್ರಕಾಂತ್ ಪಾಟೀಲ

ಆಳಂದ– ಸುಭಾಷ್‌ ಗುತ್ತೇದಾರ

ಬಸವಕಲ್ಯಾಣ– ಶರಣು ಸಲಗರ

ಹುಮ್ನಾಬಾದ್‌– ಸಿದ್ದು ಪಾಟೀಲ

ಬೀದರ್‌ ದಕ್ಷಿಣ– ಡಾ. ಶೈಲೇಂದ್ರ ಬೆಲ್ದಾಳೆ

ಔರಾದ್‌ (ಎಸ್‌ಸಿ)– ಪ್ರಭು ಚವ್ಹಾಣ್‌

ರಾಯಚೂರು ಗ್ರಾಮಾಂತರ (ಎಸ್‌ಟಿ)– ತಿಪ್ಪರಾಜು ಹವಾಲ್ದಾರ್‌

ರಾಯಚೂರು– ಡಾ. ಶಿವರಾಜ ಪಾಟೀಲ

ದೇವದುರ್ಗ (ಎಸ್‌ಟಿ)– ಕೆ. ಶಿವನಗೌಡ ನಾಯಕ

ಲಿಂಗಸುಗೂರು (ಎಸ್‌ಸಿ)– ಮಾನಪ್ಪ ಡಿ. ವಜ್ಜಲ್‌

ಸಿಂಧನೂರು– ಕೆ. ಕರಿಯಪ್ಪ

ಮಸ್ಕಿ (ಎಸ್‌ಟಿ)– ಪ್ರತಾಪಗೌಡ ಪಾಟೀಲ

ಕುಷ್ಟಗಿ– ದೊಡ್ಡನಗೌಡ ಪಾಟೀಲ

ಕನಕಗಿರಿ (ಎಸ್‌ಸಿ)– ಬಸವರಾಜ ದಢೇಸಗೂರು

ಯಲಬುರ್ಗಾ– ಹಾಲಪ್ಪ ಬಸಪ್ಪ ಆಚಾರ್

ಶಿರಹಟ್ಟಿ (ಎಸ್‌ಸಿ)– ಡಾ. ಚಂದ್ರು ಲಮಾಣಿ

ಗದಗ– ಅನಿಲ್‌ ಮೆಣಸಿನಕಾಯಿ

ನರಗುಂದ– ಸಿ.ಸಿ. ಪಾಟೀಲ

ನವಲಗುಂದ– ಶಂಕರ ಪಾಟೀಲ ಮುನೇನಕೊಪ್ಪ

ಕುಂದಗೋಳ– ಎಂ.ಆರ್‌. ಪಾಟೀಲ

ಧಾರವಾಡ– ಅಮೃತ ಅಯ್ಯಪ್ಪ ದೇಸಾಯಿ

ಹುಬ್ಬಳ್ಳಿ– ಧಾರವಾಡ ಪೂರ್ವ (ಎಸ್‌ಸಿ)– ಡಾ. ಕ್ರಾಂತಿ ಕಿರಣ್‌

ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಅರವಿಂದ ಬೆಲ್ಲದ

ಹಳಿಯಾಳ– ಸುನೀಲ್‌ ಹೆಗ್ಡೆ

ಕಾರವಾರ– ರೂಪಾಲಿ ನಾಯ್ಕ

ಕುಮಟಾ– ದಿನಕರ ಶೆಟ್ಟಿ

ಭಟ್ಕಳ– ಸುನೀಲ್‌ ನಾಯ್ಕ

ಶಿರಸಿ– ವಿಶ್ವೇಶ್ವರ ಹಗಡೆ ಕಾಗೇರಿ

ಯಲ್ಲಾಪುರ– ಶಿವರಾಂ ಹೆಬ್ಬಾರ್‌

ಬ್ಯಾಡಗಿ– ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು– ಬಿ.ಸಿ. ಪಾಟೀಲ

ರಾಣೆಬೆನ್ನೂರು– ಅರುಣ್‌ ಕುಮಾರ್‌ ಪೂಜಾರ

ಹಡಗಲಿ (ಎಸ್‌ಸಿ)– ಕೃಷ್ಣಾ ನಾಯ್ಕ್‌

ಕಂಪ್ಲಿ (ಎಸ್‌ಟಿ)– ಟಿ.ಎಚ್‌. ಸುರೇಶ್‌ ಬಾಬು

ಸಿರಗುಪ್ಪ (ಎಸ್‌ಟಿ)– ಎಂ.ಎಸ್‌. ಸೋಮಲಿಂಗಪ್ಪ

ಬಳ್ಳಾರಿ (ಎಸ್‌ಟಿ)– ಬಿ. ಶ್ರೀರಾಮುಲು

ಬಳ್ಳಾರಿ ನಗರ– ಗಾಲಿ ಸೋಮಶೇಖರ ರೆಡ್ಡಿ

ಸಂಡೂರು (ಎಸ್‌ಟಿ)– ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ (ಎಸ್‌ಟಿ)– ಲೋಕೇಶ್‌ ವಿ. ನಾಯಕ್‌

ಮೊಳಕಾಲ್ಮುರು (ಎಸ್‌ಟಿ)– ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ (ಎಸ್‌ಟಿ)– ಅನಿಲ್‌ ಕುಮಾರ್‌

ಚಿತ್ರದುರ್ಗ– ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು– ಪೂರ್ಣಿಮಾ ಶ್ರೀನಿವಾಸ್‌

ಹೊಳಲ್ಕೆರೆ (ಎಸ್‌ಸಿ)– ಎಂ. ಚಂದ್ರಪ್ಪ

ಜಗಳೂರು (ಎಸ್‌ಟಿ)– ಎಸ್‌.ವಿ. ರಾಮಚಂದ್ರ

ಹರಿಹರ– ಬಿ.ಪಿ. ಹರೀಶ್‌

ಹೊನ್ನಾಳಿ– ಎಂ.‍ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ)– ಅಶೋಕ್‌ ನಾಯ್ಕ್‌

ಭದ್ರಾವತಿ– ಮಂಗೋಟಿ ರುದ್ರೇಶ್‌

ತೀರ್ಥಹಳ್ಳಿ– ಆರಗ ಜ್ಞಾನೇಂದ್ರ

ಶಿಕಾರಿಪುರ– ಬಿ.ವೈ. ವಿಜಯೇಂದ್ರ

ಸೊರಬ– ಕುಮಾರ್‌ ಬಂಗಾರಪ್ಪ

ಸಾಗರ– ಹರತಾಳು ಎಚ್‌. ಹಾಲಪ್ಪ

ಕುಂದಾಪುರ– ಕಿರಣ್‌ ಕುಮಾರ್‌ ಕೊಡ್ಗಿ’

ಉಡುಪಿ– ಯಶ್ಪಾಲ್‌ ಸುವರ್ಣ

ಕಾಪು– ಗುರ್ಮೆ ಸುರೇಶ್‌ ಶೆಟ್ಟಿ

ಕಾರ್ಕಳ– ವಿ. ಸುನಿಲ್‌ ಕುಮಾರ್‌

ಶೃಂಗೇರಿ– ಡಿ.ಎನ್‌. ಜೀವರಾಜ್‌

ಚಿಕ್ಕಮಗಳೂರು– ಸಿ.ಟಿ. ರವಿ

ತರೀಕೆರೆ–ಡಿ.ಎಸ್. ಸುರೇಶ್

ಕಡೂರು– ಬೆಳ್ಳಿ ಪ್ರಕಾಶ್

ಚಿಕ್ಕನಾಯಕನಹಳ್ಳಿ–ಜೆ.ಸಿ. ಮಾಧುಸ್ವಾಮಿ

ತಿಪಟೂರು–ಬಿ.ಸಿ. ನಾಗೇಶ್

ತುರುವೇಕೆರೆ– ಮಸಾಲಾ ಜಯರಾಂ

ಕುಣಿಗಲ್–ಡಿ.ಕೃಷ್ಣಕುಮಾರ್

ತುಮಕೂರು ನಗರ–ಜಿ.ಬಿ. ಜ್ಯೋತಿಗಣೇಶ್

ತುಮಕೂರು ಗ್ರಾಮಾಂತರ–ಬಿ. ಸುರೇಶ್ ಗೌಡ ‌

ಕೊರಟಗೆರೆ–ಬಿ.ಎಚ್. ಅನಿಲ್‌ ಕುಮಾರ್

ಶಿರಾ–ರಾಜೇಶಗೌಡ

ಪಾವಗಡ–ಕೃಷ್ಣ ನಾಯಕ್

ಮಧುಗಿರಿ–ಎಲ್.ಸಿ. ನಾಗರಾಜ್

ಗೌರಿಬಿದನೂರು–ಶಶಿಧರ್

ಬಾಗೇಪಲ್ಲಿ–ಸಿ. ಮುನಿರಾಜು

ಚಿಕ್ಕಬಳ್ಳಾಪುರ–ಕೆ. ಸುಧಾಕರ್

ಚಿಂತಾಮಣಿ–ವೇಣುಗೋಪಾಲ್ ‌

ಶ್ರೀನಿವಾಸಪುರ–ಗುಂಜೂರು ಶ್ರೀನಿವಾಸರೆಡ್ಡಿ

ಮುಳಬಾಗಿಲು–ಶೀಗೇಹಳ್ಳಿ ಸುಂದರ್

ಬಂಗಾರಪೇಟೆ–ಎಂ. ನಾರಾಯಣಸ್ವಾಮಿ

ಕೋಲಾರ–ವರ್ತೂರು ಪ್ರಕಾಶ್

ಮಾಲೂರು–ಕೆ.ಎಸ್. ಮಂಜುನಾಥ ಗೌಡ

ಯಲಹಂಕ–ಎಸ್.ಆರ್. ವಿಶ್ವನಾಥ್

ಕೆ.ಆರ್.ಪುರ–ಬೈರತಿ ಬಸವರಾಜ್

ಬ್ಯಾಟರಾಯನಪುರ–ತಮ್ಮೇಶ್ ಗೌಡ

ಯಶವಂತಪುರ–ಎಸ್.ಟಿ. ಸೋಮಶೇಖರ್

ಆರ್.ಆರ್. ನಗರ–ಮುನಿರತ್ನ ನಾಯ್ಡು

ದಾಸರಹಳ್ಳಿ–ಎಸ್. ಮುನಿರಾಜು

ಮಹಾಲಕ್ಷ್ಮೀ ಲೇ ಔಟ್–ಕೆ.ಗೋಪಾಲಯ್ಯ

ಮಲ್ಲೇಶ್ವರ– ಸಿ.ಎನ್. ಅಶ್ವತ್ಥನಾರಾಯಣ

ಪುಲಕೇಶಿ ನಗರ– ಮುರಳಿ

ಸರ್ವಜ್ಞನಗರ–ಪದ್ಮನಾಭ ರೆಡ್ಡಿ

ಸಿ.ವಿ.ರಾಮನ್ ನಗರ–ಎಸ್.ರಘು

ಶಿವಾಜಿನಗರ–ಎನ್. ಚಂದ್ರ

ಶಾಂತಿನಗರ–ಶಿವಕುಮಾರ್

ಗಾಂಧಿನಗರ– ಎ.ಆರ್. ಸಪ್ತಗಿರಿಗೌಡ

ರಾಜಾಜಿನಗರ–ಎಸ್.ಸುರೇಶ್‌ಕುಮಾರ್

ವಿಜಯನಗರ–ಎಚ್‌.ರವೀಂದ್ರ

ಚಾಮರಾಜಪೇಟೆ–ಭಾಸ್ಕರರಾವ್

ಚಿಕ್ಕಪೇಟೆ–ಉದಯ ಗರುಡಾಚಾರ್

ಬಸವನಗುಡಿ–ಎಲ್.ಎ. ರವಿಸುಬ್ರಹ್ಮಣ್ಯ

ಪದ್ಮನಾಭಗರ–ಆರ್.ಅಶೋಕ

ಬಿ.ಟಿ.ಎಂ. ಲೇ ಔಟ್–ಶ್ರೀಧರ ರೆಡ್ಡಿ

ಜಯನಗರ–ಸಿ.ಕೆ. ರಾಮಮೂರ್ತಿ

ಬೊಮ್ಮನಹಳ್ಳಿ–ಸತೀಶ ರೆಡ್ಡಿ

ಬೆಂಗಳೂರು ದಕ್ಷಿಣ–ಎಂ.ಕೃಷ್ಣಪ್ಪ

ಆನೇಕಲ್–ಹುಲ್ಲಳ್ಳಿ ಶ್ರೀನಿವಾಸ್‌

ಹೊಸಕೋಟೆ–ಎಂ.ಟಿ.ಬಿ. ನಾಗರಾಜ್

ದೇವನಹಳ್ಳಿ–ಪಿಳ್ಳ ಮುನಿಶ್ಯಾಮಪ್ಪ

ದೊಡ್ಡಬಳ್ಳಾಪುರ–ಧೀರಜ್ ಮುನಿರಾಜು

ನೆಲಮಂಗಲ–ಸಪ್ತಗಿರಿ ನಾಯ್ಕ್

ಮಾಗಡಿ–ಪ್ರಸಾದ್ ಗೌಡ

ರಾಮನಗರ–ಗೌತಮಗೌಡ

ಕನಕಪುರ–ಆರ್. ಅಶೋಕ ‌

ಚನ್ನಪಟ್ಟಣ–ಸಿ.ಪಿ. ಯೋಗೇಶ್ವರ್

ಮಳವಳ್ಳಿ–ಮುನಿರಾಜು

ಮದ್ದೂರು–ಎಸ್.ಪಿ. ಸ್ವಾಮಿ

ಮೇಲುಕೋಟೆ–ಇಂದ್ರೇಶ್ ಕುಮಾರ್

ಮಂಡ್ಯ–ಅಶೋಕ ಜಯರಾಂ

ಶ್ರೀರಂಗಪಟ್ಟಣ–ಇಂಡವಾಳು ಸಚ್ಚಿದಾನಂದ

ನಾಗಮಂಗಲ–ಸುಧಾ ಶಿವರಾಂ

ಕೆ.ಆರ್. ಪೇಟೆ–ಕೆ.ಸಿ. ನಾರಾಯಣಗೌಡ

ಬೇಲೂರು–ಉಳ್ಳಳ್ಳಿ ಸುರೇಶ್

ಹಾಸನ–ಜೆ. ಪ್ರೀತಂಗೌಡ ‌

ಹೊಳೆನರಸೀಪುರ–ದೇವರಾಜೇಗೌಡ

ಅರಕಲಗೂಡು–ಯೋಗಾ ರಮೇಶ್

ಸಕಲೇಶ ‍ಪುರ–ಸಿಮೆಂಟ್ ಮಂಜು

ಬೆಳ್ತಂಗಡಿ–ಹರೀಶ್ ಪೂಂಜ

ಮೂಡಬಿದರೆ–ಉಮಾನಾಥ ಕೋಟ್ಯಾನ್

ಮಂಗಳೂರು ಉತ್ತರ–ಭರತ್ ಶೆಟ್ಟಿ

ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್ ‌

ಮಂಗಳೂರು–ಸತೀಶ್ ಕುಂಪಲ

ಬಂಟ್ವಾಳ–ರಾಜೇಶ ನಾಯಕ ‌

ಪುತ್ತೂರು–ಆಶಾ ತಿಮ್ಮಪ್ಪ

ಸುಳ್ಯ–ಭಾಗೀರಥಿ ಮುರುಲ್ಯ

ಮಡಿಕೇರಿ–ಅಪ್ಚಚ್ಚು ರಂಜನ್

ವಿರಾಜಪೇಟೆ–ಕೆ.ಜಿ. ಬೋಪಯ್ಯ

ಪಿರಿಯಾಪಟ್ಟಣ–ಸಿ.ಎಚ್. ವಿಜಯಶಂಕರ್

ಕೆ.ಆರ್. ನಗರ–ವೆಂಕಟೇಶ್ ಹೊಸಳ್ಳಿ ‌

ಹುಣಸೂರು–ದೇವರಹಳ್ಳಿ ಸೋಮಶೇಖರ್

ನಂಜನಗೂಡು–ಬಿ. ಹರ್ಷವರ್ಧನ

ಚಾಮುಂಡೇಶ್ವರಿ–ಕವೀಶ್ ಗೌಡ

ಚಾಮರಾಜ–ಎಲ್. ನಾಗೇಂದ್ರ

ನರಸಿಂಹರಾಜ–ಸಂದೇಶ ಸ್ವಾಮಿ

ವರುಣ–ವಿ. ಸೋಮಣ್ಣ ಟಿ.

ನರಸೀಪುರ–ರೇವಣ್ಣ

ಹನೂರು–ಪ್ರೀತಂ ನಾಗಪ್ಪ

ಕೊಳ್ಳೇಗಾಲ–ಎನ್. ಮಹೇಶ್

ಚಾಮರಾಜನಗರ–ವಿ.ಸೋಮಣ್ಣ

ಗುಂಡ್ಲುಪೇಟೆ–ಸಿ.ಎಸ್. ನಿರಂಜನಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...