Homeಕರ್ನಾಟಕ189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ

189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು ಬಿಜೆಪಿ ತನ್ನ ಮೊದಲ ಪಟ್ಟಿ ಪ್ರಕಟಿಸಿದೆ. 189 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿ, ವರುಣ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯನವರ ಎದುರು ಸೋಮಣ್ಣನವರನ್ನು ಕಣಕ್ಕೆ ಇಳಿಸುತ್ತಿದೆ. ಜೊತೆಗೆ ಚಾಮರಾಜನಗರ ಕ್ಷೇತ್ರದಿಂದಲೂ ಲಿಂಗಾಯತ ಸಮುದಾಯದ ಸೋಮಣ್ಣನವರನ್ನು ಹುರಿಯಾಳು ಮಾಡಲಾಗಿದೆ.

ಒಕ್ಕಲಿಗ ಸಮುದಾಯದ ಆರ್‌.ಅಶೋಕ್ ಅವರನ್ನೂ ಎರಡು ಕಡೆಯಲ್ಲಿ ಕಣಕ್ಕೆ ಇಳಿಸಲಾಗುತ್ತಿದೆ. ಅಶೋಕ್ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಪದ್ಮನಾಭನಗರ ಸೇರಿದಂತೆ ಕನಕಪುರದಿಂದ ಸ್ಪರ್ಧಿಸಲಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಅಶೋಕ್ ಅವರನ್ನು ನಿಲ್ಲಿಸಲಾಗುತ್ತಿದೆ.

ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್‌ಸಿ –30, ಎಸ್‌ಟಿ– 16 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.

ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಮೇ 10ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಈಗಾಗಲೇ 166 ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇತ್ತ ಜೆಡಿಎಸ್‌ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕೆಲವು ತಿಂಗಳ ಹಿಂದೆಯೇ ಘೋಷಿಸಿದೆ.

ಬಿಜೆಪಿ ಅಭ್ಯರ್ಥಿಗಳು:

ಶಿಗ್ಗಾವಿ– ಬಸವರಾಜ ಬೊಮ್ಮಾಯಿ

ನಿಪ್ಪಾಣಿ– ಶಶಿಕಲಾ ಜೊಲ್ಲೆ

ಚಿಕ್ಕೋಡಿ–ಸದಲಗ– ರಮೇಶ್‌ ಕತ್ತಿ

ಅಥಣಿ– ಮಹೇಶ ಕುಮಠಳ್ಳಿ

ಕಾಗವಾಡ– ಶ್ರೀಮಂತ ಪಾಟೀಲ

ಕುಡಚಿ(ಎಸ್‌ಸಿ) – ಪಿ. ರಾಜೀವ್‌

ರಾಯಭಾಗ (ಎಸ್‌ಸಿ)– ದುರ್ಯೋಧನ ಐಹೊಳೆ

ಹುಕ್ಕೇರಿ– ನಿಖಿಲ್‌ ಕತ್ತಿ

ಅರಭಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ– ರಮೇಶ ಜಾರಕಿಹೊಳಿ

ಯಮಕನಮರಡಿ(ಎಸ್‌ಟಿ) – ಬಸವರಾಜ ಹುಂದ್ರಿ

ಬೆಳಗಾವಿ ಉತ್ತರ– ಡಾ. ರವಿ ‍ಪಾಟೀಲ

ಬೆಳಗಾವಿ ದಕ್ಷಿಣ– ಅಭಯ ಪಾಟೀಲ

ಬೆಳಗಾವಿ ಗ್ರಾಮಾಂತರ– ನಾಗೇಶ್‌ ಮನ್ನೋಳ್ಕರ್‌

ಖಾನಾಪುರ– ವಿಠಲ ಹಲಗೇಕರ್‌

ಕಿತ್ತೂರು– ಮಹಾಂತೇಶ್‌ ದೊಡ್ಡಗೌಡರ

ಬೈಲಹೊಂಗಲ– ಜಗದೀಶ್‌ ಚನ್ನಪ್ಪ ಮೆಟಗುಡ್ಡ

ಸವದತ್ತಿ– ಯಲ್ಲಮ್ಮ– ರತ್ನಾ ವಿಶ್ವನಾಥ್‌ ಮಾಮನಿ

ರಾಮದುರ್ಗ– ಚಿಕ್ಕರೇವಣ್ಣ

ಮುಧೋಳ(ಎಸ್‌ಸಿ) – ಗೋವಿಂದ ಕಾರಜೋಳ

ತೇರದಾಳ– ಸಿದ್ದು ಸವದಿ

ಜಮಖಂಡಿ– ಜಗದೀಶ್‌ ಗುಡಗುಂಟಿ

ಬೀಳಗಿ– ಮುರುಗೇಶ ನಿರಾಣಿ

ಬಾದಾಮಿ– ಶಾಂತಾ ಗೌಡ ಪಾಟೀಲ

ಬಾಗಲಕೋಟೆ– ವೀರಭದ್ರಯ್ಯ ಚರಂತಿಮಠ

ಹುನಗುಂದ– ದೊಡ್ಡನಗೌಡ ಜಿ. ಪಾಟೀಲ

ಮುದ್ದೇಬಿಹಾಳ– ಎ.ಎಸ್‌. ಪಾಟೀಲ ನಡಹಳ್ಳಿ

ಬಬಲೇಶ್ವರ– ವಿಜು ಗೌಡ ಎಸ್‌. ಪಾಟೀಲ

ವಿಜಯಪುರ ನಗರ– ಬಸನಗೌಡ ಪಾಟೀಲ ಯತ್ನಾಳ

ಸಿಂದಗಿ– ರಮೇಶ ಭೂಸನೂರ

ಫಜಲಪುರ– ಮಾಲೀಕಯ್ಯ ಗುತ್ತೇದಾರ

ಜೇವರ್ಗಿ– ಶಿವನಗೌಡ ಪಾಟೀಲ ರಡ್ಡೇವಾಡಗಿ

ಸುರಪುರ (ಎಸ್‌ಟಿ)– ನರಸಿಂಹ ನಾಯಕ (ರಾಜೂ ಗೌಡ)

ಶಹಾ‍ಪುರ– ಅಮೀನ್‌ರೆಡ್ಡಿ ಯಾಲಗಿ

ಯಾದಗಿರಿ– ವೆಂಕಟರೆಡ್ಡಿ ಮುದ್ನಾಳ

ಚಿತ್ತಾಪುರ (ಎಸ್‌ಸಿ)– ಮಣಿಕಂಠ ರಾಠೋಡ್‌

ಚಿಂಚೋಳಿ (ಎಸ್‌ಸಿ)– ಡಾ.ಅವಿನಾಶ್ ಜಾಧವ್‌

ಕಲಬುರಗಿ ಗ್ರಾಮಾಂತರ (ಎಸ್‌ಸಿ)– ಬಸವರಾಜ ಮತ್ತಿಮೂಡ

ಕಲಬುರಗಿ ದಕ್ಷಿಣ– ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ ಉತ್ತರ– ಚಂದ್ರಕಾಂತ್ ಪಾಟೀಲ

ಆಳಂದ– ಸುಭಾಷ್‌ ಗುತ್ತೇದಾರ

ಬಸವಕಲ್ಯಾಣ– ಶರಣು ಸಲಗರ

ಹುಮ್ನಾಬಾದ್‌– ಸಿದ್ದು ಪಾಟೀಲ

ಬೀದರ್‌ ದಕ್ಷಿಣ– ಡಾ. ಶೈಲೇಂದ್ರ ಬೆಲ್ದಾಳೆ

ಔರಾದ್‌ (ಎಸ್‌ಸಿ)– ಪ್ರಭು ಚವ್ಹಾಣ್‌

ರಾಯಚೂರು ಗ್ರಾಮಾಂತರ (ಎಸ್‌ಟಿ)– ತಿಪ್ಪರಾಜು ಹವಾಲ್ದಾರ್‌

ರಾಯಚೂರು– ಡಾ. ಶಿವರಾಜ ಪಾಟೀಲ

ದೇವದುರ್ಗ (ಎಸ್‌ಟಿ)– ಕೆ. ಶಿವನಗೌಡ ನಾಯಕ

ಲಿಂಗಸುಗೂರು (ಎಸ್‌ಸಿ)– ಮಾನಪ್ಪ ಡಿ. ವಜ್ಜಲ್‌

ಸಿಂಧನೂರು– ಕೆ. ಕರಿಯಪ್ಪ

ಮಸ್ಕಿ (ಎಸ್‌ಟಿ)– ಪ್ರತಾಪಗೌಡ ಪಾಟೀಲ

ಕುಷ್ಟಗಿ– ದೊಡ್ಡನಗೌಡ ಪಾಟೀಲ

ಕನಕಗಿರಿ (ಎಸ್‌ಸಿ)– ಬಸವರಾಜ ದಢೇಸಗೂರು

ಯಲಬುರ್ಗಾ– ಹಾಲಪ್ಪ ಬಸಪ್ಪ ಆಚಾರ್

ಶಿರಹಟ್ಟಿ (ಎಸ್‌ಸಿ)– ಡಾ. ಚಂದ್ರು ಲಮಾಣಿ

ಗದಗ– ಅನಿಲ್‌ ಮೆಣಸಿನಕಾಯಿ

ನರಗುಂದ– ಸಿ.ಸಿ. ಪಾಟೀಲ

ನವಲಗುಂದ– ಶಂಕರ ಪಾಟೀಲ ಮುನೇನಕೊಪ್ಪ

ಕುಂದಗೋಳ– ಎಂ.ಆರ್‌. ಪಾಟೀಲ

ಧಾರವಾಡ– ಅಮೃತ ಅಯ್ಯಪ್ಪ ದೇಸಾಯಿ

ಹುಬ್ಬಳ್ಳಿ– ಧಾರವಾಡ ಪೂರ್ವ (ಎಸ್‌ಸಿ)– ಡಾ. ಕ್ರಾಂತಿ ಕಿರಣ್‌

ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಅರವಿಂದ ಬೆಲ್ಲದ

ಹಳಿಯಾಳ– ಸುನೀಲ್‌ ಹೆಗ್ಡೆ

ಕಾರವಾರ– ರೂಪಾಲಿ ನಾಯ್ಕ

ಕುಮಟಾ– ದಿನಕರ ಶೆಟ್ಟಿ

ಭಟ್ಕಳ– ಸುನೀಲ್‌ ನಾಯ್ಕ

ಶಿರಸಿ– ವಿಶ್ವೇಶ್ವರ ಹಗಡೆ ಕಾಗೇರಿ

ಯಲ್ಲಾಪುರ– ಶಿವರಾಂ ಹೆಬ್ಬಾರ್‌

ಬ್ಯಾಡಗಿ– ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು– ಬಿ.ಸಿ. ಪಾಟೀಲ

ರಾಣೆಬೆನ್ನೂರು– ಅರುಣ್‌ ಕುಮಾರ್‌ ಪೂಜಾರ

ಹಡಗಲಿ (ಎಸ್‌ಸಿ)– ಕೃಷ್ಣಾ ನಾಯ್ಕ್‌

ಕಂಪ್ಲಿ (ಎಸ್‌ಟಿ)– ಟಿ.ಎಚ್‌. ಸುರೇಶ್‌ ಬಾಬು

ಸಿರಗುಪ್ಪ (ಎಸ್‌ಟಿ)– ಎಂ.ಎಸ್‌. ಸೋಮಲಿಂಗಪ್ಪ

ಬಳ್ಳಾರಿ (ಎಸ್‌ಟಿ)– ಬಿ. ಶ್ರೀರಾಮುಲು

ಬಳ್ಳಾರಿ ನಗರ– ಗಾಲಿ ಸೋಮಶೇಖರ ರೆಡ್ಡಿ

ಸಂಡೂರು (ಎಸ್‌ಟಿ)– ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ (ಎಸ್‌ಟಿ)– ಲೋಕೇಶ್‌ ವಿ. ನಾಯಕ್‌

ಮೊಳಕಾಲ್ಮುರು (ಎಸ್‌ಟಿ)– ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ (ಎಸ್‌ಟಿ)– ಅನಿಲ್‌ ಕುಮಾರ್‌

ಚಿತ್ರದುರ್ಗ– ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು– ಪೂರ್ಣಿಮಾ ಶ್ರೀನಿವಾಸ್‌

ಹೊಳಲ್ಕೆರೆ (ಎಸ್‌ಸಿ)– ಎಂ. ಚಂದ್ರಪ್ಪ

ಜಗಳೂರು (ಎಸ್‌ಟಿ)– ಎಸ್‌.ವಿ. ರಾಮಚಂದ್ರ

ಹರಿಹರ– ಬಿ.ಪಿ. ಹರೀಶ್‌

ಹೊನ್ನಾಳಿ– ಎಂ.‍ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ)– ಅಶೋಕ್‌ ನಾಯ್ಕ್‌

ಭದ್ರಾವತಿ– ಮಂಗೋಟಿ ರುದ್ರೇಶ್‌

ತೀರ್ಥಹಳ್ಳಿ– ಆರಗ ಜ್ಞಾನೇಂದ್ರ

ಶಿಕಾರಿಪುರ– ಬಿ.ವೈ. ವಿಜಯೇಂದ್ರ

ಸೊರಬ– ಕುಮಾರ್‌ ಬಂಗಾರಪ್ಪ

ಸಾಗರ– ಹರತಾಳು ಎಚ್‌. ಹಾಲಪ್ಪ

ಕುಂದಾಪುರ– ಕಿರಣ್‌ ಕುಮಾರ್‌ ಕೊಡ್ಗಿ’

ಉಡುಪಿ– ಯಶ್ಪಾಲ್‌ ಸುವರ್ಣ

ಕಾಪು– ಗುರ್ಮೆ ಸುರೇಶ್‌ ಶೆಟ್ಟಿ

ಕಾರ್ಕಳ– ವಿ. ಸುನಿಲ್‌ ಕುಮಾರ್‌

ಶೃಂಗೇರಿ– ಡಿ.ಎನ್‌. ಜೀವರಾಜ್‌

ಚಿಕ್ಕಮಗಳೂರು– ಸಿ.ಟಿ. ರವಿ

ತರೀಕೆರೆ–ಡಿ.ಎಸ್. ಸುರೇಶ್

ಕಡೂರು– ಬೆಳ್ಳಿ ಪ್ರಕಾಶ್

ಚಿಕ್ಕನಾಯಕನಹಳ್ಳಿ–ಜೆ.ಸಿ. ಮಾಧುಸ್ವಾಮಿ

ತಿಪಟೂರು–ಬಿ.ಸಿ. ನಾಗೇಶ್

ತುರುವೇಕೆರೆ– ಮಸಾಲಾ ಜಯರಾಂ

ಕುಣಿಗಲ್–ಡಿ.ಕೃಷ್ಣಕುಮಾರ್

ತುಮಕೂರು ನಗರ–ಜಿ.ಬಿ. ಜ್ಯೋತಿಗಣೇಶ್

ತುಮಕೂರು ಗ್ರಾಮಾಂತರ–ಬಿ. ಸುರೇಶ್ ಗೌಡ ‌

ಕೊರಟಗೆರೆ–ಬಿ.ಎಚ್. ಅನಿಲ್‌ ಕುಮಾರ್

ಶಿರಾ–ರಾಜೇಶಗೌಡ

ಪಾವಗಡ–ಕೃಷ್ಣ ನಾಯಕ್

ಮಧುಗಿರಿ–ಎಲ್.ಸಿ. ನಾಗರಾಜ್

ಗೌರಿಬಿದನೂರು–ಶಶಿಧರ್

ಬಾಗೇಪಲ್ಲಿ–ಸಿ. ಮುನಿರಾಜು

ಚಿಕ್ಕಬಳ್ಳಾಪುರ–ಕೆ. ಸುಧಾಕರ್

ಚಿಂತಾಮಣಿ–ವೇಣುಗೋಪಾಲ್ ‌

ಶ್ರೀನಿವಾಸಪುರ–ಗುಂಜೂರು ಶ್ರೀನಿವಾಸರೆಡ್ಡಿ

ಮುಳಬಾಗಿಲು–ಶೀಗೇಹಳ್ಳಿ ಸುಂದರ್

ಬಂಗಾರಪೇಟೆ–ಎಂ. ನಾರಾಯಣಸ್ವಾಮಿ

ಕೋಲಾರ–ವರ್ತೂರು ಪ್ರಕಾಶ್

ಮಾಲೂರು–ಕೆ.ಎಸ್. ಮಂಜುನಾಥ ಗೌಡ

ಯಲಹಂಕ–ಎಸ್.ಆರ್. ವಿಶ್ವನಾಥ್

ಕೆ.ಆರ್.ಪುರ–ಬೈರತಿ ಬಸವರಾಜ್

ಬ್ಯಾಟರಾಯನಪುರ–ತಮ್ಮೇಶ್ ಗೌಡ

ಯಶವಂತಪುರ–ಎಸ್.ಟಿ. ಸೋಮಶೇಖರ್

ಆರ್.ಆರ್. ನಗರ–ಮುನಿರತ್ನ ನಾಯ್ಡು

ದಾಸರಹಳ್ಳಿ–ಎಸ್. ಮುನಿರಾಜು

ಮಹಾಲಕ್ಷ್ಮೀ ಲೇ ಔಟ್–ಕೆ.ಗೋಪಾಲಯ್ಯ

ಮಲ್ಲೇಶ್ವರ– ಸಿ.ಎನ್. ಅಶ್ವತ್ಥನಾರಾಯಣ

ಪುಲಕೇಶಿ ನಗರ– ಮುರಳಿ

ಸರ್ವಜ್ಞನಗರ–ಪದ್ಮನಾಭ ರೆಡ್ಡಿ

ಸಿ.ವಿ.ರಾಮನ್ ನಗರ–ಎಸ್.ರಘು

ಶಿವಾಜಿನಗರ–ಎನ್. ಚಂದ್ರ

ಶಾಂತಿನಗರ–ಶಿವಕುಮಾರ್

ಗಾಂಧಿನಗರ– ಎ.ಆರ್. ಸಪ್ತಗಿರಿಗೌಡ

ರಾಜಾಜಿನಗರ–ಎಸ್.ಸುರೇಶ್‌ಕುಮಾರ್

ವಿಜಯನಗರ–ಎಚ್‌.ರವೀಂದ್ರ

ಚಾಮರಾಜಪೇಟೆ–ಭಾಸ್ಕರರಾವ್

ಚಿಕ್ಕಪೇಟೆ–ಉದಯ ಗರುಡಾಚಾರ್

ಬಸವನಗುಡಿ–ಎಲ್.ಎ. ರವಿಸುಬ್ರಹ್ಮಣ್ಯ

ಪದ್ಮನಾಭಗರ–ಆರ್.ಅಶೋಕ

ಬಿ.ಟಿ.ಎಂ. ಲೇ ಔಟ್–ಶ್ರೀಧರ ರೆಡ್ಡಿ

ಜಯನಗರ–ಸಿ.ಕೆ. ರಾಮಮೂರ್ತಿ

ಬೊಮ್ಮನಹಳ್ಳಿ–ಸತೀಶ ರೆಡ್ಡಿ

ಬೆಂಗಳೂರು ದಕ್ಷಿಣ–ಎಂ.ಕೃಷ್ಣಪ್ಪ

ಆನೇಕಲ್–ಹುಲ್ಲಳ್ಳಿ ಶ್ರೀನಿವಾಸ್‌

ಹೊಸಕೋಟೆ–ಎಂ.ಟಿ.ಬಿ. ನಾಗರಾಜ್

ದೇವನಹಳ್ಳಿ–ಪಿಳ್ಳ ಮುನಿಶ್ಯಾಮಪ್ಪ

ದೊಡ್ಡಬಳ್ಳಾಪುರ–ಧೀರಜ್ ಮುನಿರಾಜು

ನೆಲಮಂಗಲ–ಸಪ್ತಗಿರಿ ನಾಯ್ಕ್

ಮಾಗಡಿ–ಪ್ರಸಾದ್ ಗೌಡ

ರಾಮನಗರ–ಗೌತಮಗೌಡ

ಕನಕಪುರ–ಆರ್. ಅಶೋಕ ‌

ಚನ್ನಪಟ್ಟಣ–ಸಿ.ಪಿ. ಯೋಗೇಶ್ವರ್

ಮಳವಳ್ಳಿ–ಮುನಿರಾಜು

ಮದ್ದೂರು–ಎಸ್.ಪಿ. ಸ್ವಾಮಿ

ಮೇಲುಕೋಟೆ–ಇಂದ್ರೇಶ್ ಕುಮಾರ್

ಮಂಡ್ಯ–ಅಶೋಕ ಜಯರಾಂ

ಶ್ರೀರಂಗಪಟ್ಟಣ–ಇಂಡವಾಳು ಸಚ್ಚಿದಾನಂದ

ನಾಗಮಂಗಲ–ಸುಧಾ ಶಿವರಾಂ

ಕೆ.ಆರ್. ಪೇಟೆ–ಕೆ.ಸಿ. ನಾರಾಯಣಗೌಡ

ಬೇಲೂರು–ಉಳ್ಳಳ್ಳಿ ಸುರೇಶ್

ಹಾಸನ–ಜೆ. ಪ್ರೀತಂಗೌಡ ‌

ಹೊಳೆನರಸೀಪುರ–ದೇವರಾಜೇಗೌಡ

ಅರಕಲಗೂಡು–ಯೋಗಾ ರಮೇಶ್

ಸಕಲೇಶ ‍ಪುರ–ಸಿಮೆಂಟ್ ಮಂಜು

ಬೆಳ್ತಂಗಡಿ–ಹರೀಶ್ ಪೂಂಜ

ಮೂಡಬಿದರೆ–ಉಮಾನಾಥ ಕೋಟ್ಯಾನ್

ಮಂಗಳೂರು ಉತ್ತರ–ಭರತ್ ಶೆಟ್ಟಿ

ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್ ‌

ಮಂಗಳೂರು–ಸತೀಶ್ ಕುಂಪಲ

ಬಂಟ್ವಾಳ–ರಾಜೇಶ ನಾಯಕ ‌

ಪುತ್ತೂರು–ಆಶಾ ತಿಮ್ಮಪ್ಪ

ಸುಳ್ಯ–ಭಾಗೀರಥಿ ಮುರುಲ್ಯ

ಮಡಿಕೇರಿ–ಅಪ್ಚಚ್ಚು ರಂಜನ್

ವಿರಾಜಪೇಟೆ–ಕೆ.ಜಿ. ಬೋಪಯ್ಯ

ಪಿರಿಯಾಪಟ್ಟಣ–ಸಿ.ಎಚ್. ವಿಜಯಶಂಕರ್

ಕೆ.ಆರ್. ನಗರ–ವೆಂಕಟೇಶ್ ಹೊಸಳ್ಳಿ ‌

ಹುಣಸೂರು–ದೇವರಹಳ್ಳಿ ಸೋಮಶೇಖರ್

ನಂಜನಗೂಡು–ಬಿ. ಹರ್ಷವರ್ಧನ

ಚಾಮುಂಡೇಶ್ವರಿ–ಕವೀಶ್ ಗೌಡ

ಚಾಮರಾಜ–ಎಲ್. ನಾಗೇಂದ್ರ

ನರಸಿಂಹರಾಜ–ಸಂದೇಶ ಸ್ವಾಮಿ

ವರುಣ–ವಿ. ಸೋಮಣ್ಣ ಟಿ.

ನರಸೀಪುರ–ರೇವಣ್ಣ

ಹನೂರು–ಪ್ರೀತಂ ನಾಗಪ್ಪ

ಕೊಳ್ಳೇಗಾಲ–ಎನ್. ಮಹೇಶ್

ಚಾಮರಾಜನಗರ–ವಿ.ಸೋಮಣ್ಣ

ಗುಂಡ್ಲುಪೇಟೆ–ಸಿ.ಎಸ್. ನಿರಂಜನಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...