Homeನ್ಯಾಯ ಪಥಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

ಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

- Advertisement -
- Advertisement -

ಕೊರೊನಾ ಕಾಲದ ದೊಡ್ಡ ಸಮಸ್ಯೆ ಏನೆಂದರೆ ರಾಜಕಾರಣಿಗಳು ತಜ್ಞರ ಮಾತನ್ನು ಉಪೇಕ್ಷಿಸಿ ತೀರ್ಮಾನ ಕೈಗೊಳ್ಳುವುದು; ಟಿವಿ ಆಂಕರ್‌ಗಳು ಲಾಕ್‌ಡೌನ್ ಯಾವಾಗ, ಹೇಗೆ ಹೇರಬೇಕು ಎಂಬುದನ್ನೂ, ಯಾವ ಸಮಸ್ಯೆ ಎಷ್ಟು ರಣಭೀಕರ ಎಂದು ತೀರ್ಮಾನಿಸುವುದು; ಹೃದಯ ತಜ್ಞರು ಸಾಂಕ್ರಾಮಿಕ ರೋಗದ ಉಸ್ತುವಾರಿ ವಹಿಸುವುದು ಮತ್ತು ಅಂತಿಮವಾಗಿ ವಾಟ್ಸಾಪ್‌ನಲ್ಲಿ ಹರಿದುಬರುವ ಸುಳ್ಳುಗಳು ರೋಗಿಗಳ ಚಿಕಿತ್ಸೆ ನಿರ್ಧರಿಸುವುದು. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಎಂಬ ರೋಗವು ಎಲ್ಲೆಡೆ ಹಬ್ಬುತ್ತಿರುವಾಗ ಮತ್ತೊಮ್ಮೆ ಇದನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಈ ಲೇಖನ ಬರೆಯುವಾಗಲೂ, ತಜ್ಞ ವೈದ್ಯರುಗಳು ಹಾಗೂ ಸಂಶೋಧಕರು ಏನು ಹೇಳಿದ್ದಾರೆಂಬುದನ್ನು ಮಾತ್ರವೇ ಹೇಳಬೇಕೆಂಬ ಎಚ್ಚರವನ್ನಿಟ್ಟುಕೊಳ್ಳಲಾಗಿದೆ.
ಕಪ್ಪು ಫಂಗಸ್ ಕುರಿತಂತೆ ವೈದ್ಯಲೋಕದ ಆಚೆಗೆ ಎಲ್ಲರೂ ಕೇಳಲಾರಂಭಿಸಿದ್ದು ಕೊರೊನಾದ ಭಾರತದ ಎರಡನೇ ಅಲೆಯ ತುತ್ತತುದಿಯಲ್ಲಿ. ಮ್ಯುಕೊರ್ ಮೈಸಿಟಿಸ್ ಎಂಬ ಫಂಗಸ್‌ನಿಂದ ಬರುವ ಈ ಕಾಯಿಲೆಯು ಕೊರೊನಾದಿಂದ ಶುರುವಾದದ್ದಲ್ಲ. ಇದು ಮುಂಚಿನಿಂದಲೂ ಇರುವ ಕಾಯಿಲೆಯೇ. ಹಾಗೆ ನೋಡಿದರೆ ಮುಂಚಿನಿಂದಲೂ ಭಾರತವೇ ಅದರ ರಾಜಧಾನಿ. ಬೇರೆ ದೇಶಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಕೇಸುಗಳು ಇಲ್ಲಿ ಸಂಭವಿಸುತ್ತವೆ. ಆದರೂ ಅವು ಬಹಳಷ್ಟು ಇರುತ್ತಿರಲಿಲ್ಲ. ಕೇವಲ ಕಳೆದೆರಡು ತಿಂಗಳಲ್ಲೇ ೮,೦೦೦ ಪ್ರಕರಣಗಳು ಪತ್ತೆಯಾಗಿವೆ. ಫಂಗಸ್‌ನಿಂದ ಉಂಟಾಗುವ ಸೋಂಕು ದೊಡ್ಡದೇನಲ್ಲ. ಎಲ್ಲರಿಗೂ ಜೀವನದ ಒಂದಲ್ಲಾ ಒಂದು ಸಂದರ್ಭದಲ್ಲಿ ಫಂಗಸ್ ಸೋಂಕು ಇದ್ದೇ ಇರುತ್ತದೆ. ಆದರೆ ಮ್ಯುಕೊರ್ ಮೈಕೋಸಿಸ್ ಒಂದು ಅಪಾಯಕಾರಿ ಕಾಯಿಲೆ. ಈಗಲೂ ಶೇ.೫೦ರಷ್ಟು ಜನರನ್ನು ಅದು ಬಲಿತೆಗೆದುಕೊಳ್ಳುತ್ತಿದೆ. ಅಂದರೆ ಕೊರೊನಾಗಿಂತಲೂ ಹೆಚ್ಚು ಅಪಾಯಕಾರಿ.

ಆದರೆ ಹಾಗೆಂದು ಅದು ವ್ಯಕ್ತಿಯಿಂದ ವ್ಯಕ್ತಿಗೆ (ಕೊರೊನಾದಂತೆ) ಹರಡುವುದಿಲ್ಲ. ಮ್ಯುಕೊರ್ ಮೈಸಿಟಿಸ್‌ನ ಸ್ಪೋರ್‌ಗಳು (ಬೀಜ ಎಂದಿಟ್ಟುಕೊಳ್ಳೋಣ) ವಾತಾವರಣದಲ್ಲಿ, ಮಣ್ಣಿನಲ್ಲೂ ಸೇರಿದಂತೆ, ಎಲ್ಲೆಡೆ ಇರುತ್ತವೆ. ಹಾಗಾಗಿ ಅದು ಒಬ್ಬರಿಂದ ಇನ್ನೊಬ್ಬರಿಗೆ ಬರಬೇಕಾದ ಅಗತ್ಯವಿಲ್ಲ. ಯಾರಲ್ಲಿ ರೋಗನಿರೋಧಕ ಶಕ್ತಿ ಅತೀ ಕಡಿಮೆಯಾಗುತ್ತದೋ ಅಂಥವರಿಗೆ ಅದು ಹರಡುತ್ತದೆ. ಬಹುತೇಕ ಮೂಗಿನಿಂದ ಒಳಹೊಕ್ಕು, ಮೂಗಿನ ಎರಡೂ ಬದಿಯಲ್ಲಿ ಇರುವ ಸೈನಸ್ ಒಳಗೂ ವೃದ್ಧಿಯಾಗುತ್ತದೆ ಮತ್ತು ಪಕ್ಕದಲ್ಲೇ ಇರುವ ಕಣ್ಣಿನ ಕುಳಿಗೆ ಪ್ರವೇಶಿಸುತ್ತದೆ; ತಲೆಬುರುಡೆಯೊಳಕ್ಕೂ ಹೋಗಿ ಮೆದುಳಿಗೂ ಹಾನಿಯುಂಟು ಮಾಡುವ ಶಕ್ತಿ ಅದಕ್ಕಿದೆ. ಸಣ್ಣಪುಟ್ಟ ಔಷಧಿಗಳ ಬಡಪೆಟ್ಟಿಗೆ ಅದು ಬಗ್ಗುವುದಿಲ್ಲ. ಯಾವ ಭಾಗದಲ್ಲಿ ಅದು ಬೆಳೆದಿರುತ್ತದೋ, ಅದನ್ನೇ ಕೆರೆದು ಅಥವಾ ಕತ್ತರಿಸಿ ತೆಗೆಯಬೇಕಾಗುತ್ತದೆ. ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ತಜ್ಞರು ಹಾಗೂ ಕಣ್ಣಿನ ತಜ್ಞರು ಅದನ್ನು ನಿಭಾಯಿಸುತ್ತಾರೆ. ಈ ಸದ್ಯ ಅದಕ್ಕೆ ಲಭ್ಯವಿರುವ ಔಷಧಿಗಳು ವಿಪರೀತ ದುಬಾರಿಯಾಗಿವೆ. ಅದರಲ್ಲೂ ಆಂಫೋಟೆರಿಸಿನ್ ಬಿ ಎಂಬ ಔಷಧಿಯು ದುಬಾರಿಯೂ ಹೌದು; ದುರ್ಲಭವೂ ಹೌದು.

ಈಗ ಅದು ಏಕೆ ಇಷ್ಟೊಂದು ಹೆಚ್ಚಾಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ಈ ಒಂದು ತಿಂಗಳಲ್ಲಿ ನಡೆದಿದೆ. ಕೊರೊನಾ ಬಂದವರಲ್ಲೇ ಅದು ಅತಿ ಹೆಚ್ಚು ಕಾಣಿಸಿಕೊಂಡಿದ್ದು, ಈ ಹಿಂದಿನಂತೆ ಕ್ಯಾನ್ಸರ್‌ಗೆ ಕೀಮೋಥೆರಪಿ ತೆಗೆದುಕೊಂಡವರು, ಕಿಡ್ನಿ ಕಸಿ ಮಾಡಿಸಿಕೊಂಡವರು ಮುಂತಾದವರಲ್ಲೂ ಇದೆ. ಅತೀ ಹೆಚ್ಚು ಡಯಾಬಿಟಿಸ್ ಇರುವವರನ್ನು ಬಾಧಿಸಿದೆಯಾದರೂ ಡಯಾಬಿಟಿಸ್ ಇಲ್ಲದವರಿಗೂ ಬಂದಿದೆ. ಕೊರೊನಾ ಬಂದು ಆಸ್ಪತ್ರೆ ಸೇರಿ ಆಕ್ಸಿಜನ್ ಕೊಟ್ಟವರಲ್ಲಿ ಸಾಕಷ್ಟು ಜನರಲ್ಲಿ ಬಂದಿದೆಯಾದರೂ, ಆಸ್ಪತ್ರೆಗೇ ಹೋಗದೇ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡವರಿಗೂ ಬಂದಿದೆ. ಸ್ಟಿರಾಯ್ಡ್ ಔಷಧಿ (ಮಧ್ಯಮದಿಂದ ತೀವ್ರ ಪ್ರಮಾಣದ ಕೊರೊನಾ ಬಂದವರೆಲ್ಲರಿಗೂ ನೀಡಲಾಗುತ್ತಿದೆ) ತೆಗೆದುಕೊಂಡವರನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಿದೆಯಾದರೂ, ಸ್ಟಿರಾಯ್ಡ್ ಮಾತ್ರೆಯನ್ನೂ ತೆಗೆದುಕೊಂಡಿಲ್ಲದವರಿಗೂ ಬಂದಿದೆ.

ಹೀಗಾಗಿ ಮೊದಲು ಹೇಳುತ್ತಿದ್ದಂತೆ ಕೈಗಾರಿಕಾ ಆಕ್ಸಿಜನ್ ಬಳಸಿದ್ದರಿಂದ ಬಂದಿದೆ; ಆಕ್ಸಿಜನ್ ನೀಡುವಾಗ ಬಳಸುವ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರು ಬಳಸದ್ದರಿಂದ ಹೀಗಾಗಿದೆ ಎಂಬ ಮಾತುಗಳಿಗೆ ಈಗ ಹೆಚ್ಚು ಅರ್ಥವಿಲ್ಲ. ಹಾಗೆ ನೋಡಿದರೆ ಮೊದಲ ಅಲೆಯಲ್ಲೂ ಆಕ್ಸಿಜನ್ ನೀಡಲಾಗಿತ್ತು; ಡಯಾಬಿಟಿಸ್ ಇದ್ದವರಿಗೂ ಸ್ಟಿರಾಯ್ಡ್ ನೀಡಲಾಗಿತ್ತು. ಆದರೆ ಆಗ ಈ ರೀತಿ ಈ ಪ್ರಮಾಣದಲ್ಲಿ ಕಪ್ಪು ಫಂಗಸ್ ಇರಲಿಲ್ಲ.

ಮೊದಲ ಅಲೆಯ ಹೊತ್ತಿನಲ್ಲಿ ನಡೆದ ಅಧ್ಯಯನಗಳೂ ಇವನ್ನು ದೃಢಪಡಿಸುತ್ತವೆ. 2020ರ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕೊರೊನಾದಿಂದ ತೊಂದರೆಗೀಡಾಗಿದ್ದ 17,534 ರೋಗಿಗಳಲ್ಲಿ ಉಂಟಾದ ಸೆಕೆಂಡರಿ ಸೋಂಕನ್ನು ಅಧ್ಯಯನ ಮಾಡಲಾಗಿತ್ತು. ಅವುಗಳಲ್ಲಿ ಮ್ಯುಕೊರ್ ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಕಂಡುಬಂದಿದ್ದು ಕೆಲವೇ ಕೆಲವು ಪ್ರಕರಣಗಳಲ್ಲಿ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಇನ್ನೆಲ್ಲೂ ಕಾಣದ ಪ್ರಮಾಣದಲ್ಲಿ ಭಾರತದಲ್ಲಿ ಕಪ್ಪು ಫಂಗಸ್ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಇಲ್ಲಿನ ತಜ್ಞರೇ ಹೆಚ್ಚು ತಿಳಿದವರೂ ಆಗಿದ್ದಾರೆ. ಇದುವರೆಗೆ ಈ ತಜ್ಞರು ಮೇಲೆ ಹೇಳಲಾದ ಸಂಗತಿಗಳನ್ನು ಗುರುತಿಸಿದ್ದರೂ, ಡಯಾಬಿಟಿಸ್, ಸ್ಟಿರಾಯ್ಡ್ ಹಾಗೂ ರೋಗನಿರೋಧಕತೆಯನ್ನು ಕಡಿಮೆ ಮಾಡುವ ಇತರ ಸಂಗತಿಗಳನ್ನು ಈಗಲೇ ತಳ್ಳಿ ಹಾಕಲಾಗದು. ಏಕೆಂದರೆ ಜಗತ್ತಿನಲ್ಲಿ ಡಯಾಬಿಟಿಸ್ ಅತೀ ಹೆಚ್ಚು ಇರುವ ದೇಶಗಳಲ್ಲಿ ಭಾರತ ಅಗ್ರಗಣ್ಯ ದೇಶವಾಗಿದೆ. ಇಲ್ಲಿ ಸ್ಟಿರಾಯ್ಡ್ ವಿಪರೀತ ಬಳಸಲಾಗುತ್ತದೆ. ಜೊತೆಗೆ ಟೊಸಿಲಿಜುಮಾಬ್‌ನಂತಹ ರೋಗ ನಿರೋಧಕತೆಯನ್ನು ಏರುಪೇರು ಮಾಡುವ ಔಷಧಗಳನ್ನೂ ಬಳಸಲಾಗುತ್ತಿದೆ.

ಇವೆಲ್ಲದರ ಜೊತೆಗೆ ಗಮನಿಸಬೇಕಾದ ಇನ್ನೂ ಕೆಲವು ಸಂಗತಿಗಳಿವೆ. ಕೊರೊನಾ ವೈರಸ್‌ನಿಂದ ಬಂದ ರೋಗವನ್ನು ನಿರ್ವಹಿಸುವಾಗ ವಿಪರೀತ ಆಂಟಿಬಯಾಟಿಕ್‌ಗಳನ್ನೂ ನೀಡಲಾಗಿದೆ. ಇದರ ಪರಿಣಾಮವಾಗಿ ಫಂಗಸ್ ರೋಗ ಹೆಚ್ಚಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಒರೆಗೆ ಹಚ್ಚಲಾಗುತ್ತಿದೆ. ಅದೇನೇ ಇದ್ದರೂ, ಬಿ.1.217 (ಭಾರತೀಯ) ಕೊರೊನಾ ವೈರಸ್ ರೋಗನಿರೋಧಕತೆಯನ್ನು ಕಡಿಮೆ ಮಾಡುತ್ತಿದೆ. ಇದು ಎರಡನೆಯ ಅಲೆಯ ಸಂದರ್ಭದಲ್ಲಿ ಮಾತ್ರ ಹೆಚ್ಚಾಗಿರುವ ರೋಗ ಪ್ರಮಾಣಕ್ಕೆ ಒಂದು ಸಮರ್ಥ
ವಿವರಣೆಯನ್ನು ಒದಗಿಸುತ್ತದೆ. ಅದರ ಜೊತೆಗೆ ಚರ್ಚೆ ನಡೆಯುತ್ತಿರುವುದು ಇನ್ನೂ ಮೂರು ಸಂಗತಿಗಳ ಮೇಲೆ. ಒಂದು, ಅನಗತ್ಯವಾಗಿ ಪ್ರತಿಯೊಬ್ಬ ಕೊರೊನಾ ರೋಗಿಗೂ ಜಿಂಕ್ ಸಲ್ಫೇಟ್ ಕೊಡಲಾಗಿದೆ. ಜಿಂಕ್ ಲವಣವು ಈ ಮ್ಯುಕೊರ್ ಮೈಸಿಟಿಸ್ ಫಂಗಸ್ ಬೆಳೆಯಲು ಅತ್ಯಗತ್ಯ. ಹಾಗಾಗಿ ಅದು ಬೆಳೆಯಲು ಜಿಂಕ್ ಪ್ರಶಸ್ತ ವಾತಾವರಣ ಕಲ್ಪಿಸಿತೇ? ಎರಡು, ಎರಡೂ ವ್ಯಾಕ್ಸೀನ್ ತೆಗೆದುಕೊಂಡವರಲ್ಲಿ ಮ್ಯುಕೋರ್ ಬಂದಿರುವುದು ಕಡಿಮೆ. ಇದು ನಮಗೇನು ಸೂಚಿಸುತ್ತದೆ? ಮೂರು, ವಿಪರೀತ ಬಿಸಿನೀರಿನ ಹವೆ ತೆಗೆದುಕೊಳ್ಳುವುದರಿಂದ ಮೂಗು, ಗಂಟಲಿನ ತೆಳುವಾದ ಪದರಕ್ಕೆ ಹಾನಿಯಾಗಿ ಅದರ ರೋಗನಿರೋಧಕತೆ ಕಡಿಮೆಯಾಗಿದೆ. ಬೆಂಗಳೂರಿನ ಪ್ರಸಿದ್ಧ ಇಎನ್‌ಟಿ ತಜ್ಞ ಡಾ.ದೀಪಕ್ ಹಲ್ದಿಪುರ ಅವರ ಪ್ರಕಾರ ವಾಟ್ಸಾಪ್‌ನಲ್ಲಿ ಹರಿಯಬಿಟ್ಟ ಇಂತಹ ಚಿಕಿತ್ಸೆಗಳಿಂದಲೂ ಈ ಸಮಸ್ಯೆ ಉದ್ಭವಿಸಿದೆ.

ಹೀಗಾಗಿ ಕೊರೊನಾ ಬಂದವರೆಲ್ಲರೂ ಎಚ್ಚರ ವಹಿಸಬೇಕಾದ ಕೆಲವು ಸಂಗತಿಗಳಿವೆ. ಡಯಾಬಿಟಿಸ್ ಇದ್ದರೆ ಅವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು; ಸ್ಟಿರಾಯ್ಡ್ ಮಾತ್ರೆ/ಇಂಜೆಕ್ಷನ್ ಪಡೆದವರೆಲ್ಲರೂ ರಕ್ತದ ಸಕ್ಕರೆ ಪರೀಕ್ಷಿಸಿಕೊಂಡು ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯವಾಗಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಜೊತೆಗೆ ಕಪ್ಪು ಫಂಗಸ್‌ನ ಲಕ್ಷಣಗಳು ಕಂಡರೆ ಕೂಡಲೇ ತಜ್ಞ ವೈದ್ಯರನ್ನು (ಇಎನ್‌ಟಿ ವೈದ್ಯರನ್ನು) ಸಂಪರ್ಕ ಮಾಡಬೇಕು.

ಕಪ್ಪು ಫಂಗಸ್‌ನ ಲಕ್ಷಣಗಳು ಈ ಕೆಳಕಂಡಂತಿವೆ.
ತಲೆಯ ಒಂದು ಬದಿ ಮಾತ್ರ ಬರುವ ತಲೆನೋವು, ಅಂದರೆ ನಿದ್ದೆ ಮಾಡಲೇ ಬಿಡದಂತಹ ವಿಪರೀತ ತಲೆನೋವು (ಸ್ವಲ್ಪ ತಲೆ ನೋವಲ್ಲ), ಎದ್ದು ಕಾಣುವಂತಹ ಮುಖದ ಊತ, ಒಂದು ಕಣ್ಣು ಗುಡ್ಡೆ ಸ್ವಲ್ಪ ಹೊರಬರುವುದು, ಮೂಗಿನ ಒಳಗೆ ಹಾಗೂ ಹೊರಗೆ ಕಾಣುವಂತಹ ಕಪ್ಪು ಗಾಯ, ಕಣ್ಣಿನ ದೃಷ್ಟಿ ಏರುಪೇರಾಗುವುದು. ಮೂಗು, ಸೈನಸ್‌ನಲ್ಲಿ ಕಫ ದಟ್ಟಣೆ. ಮೂಗಿನ ಮೇಲೆ ಅಥವಾ ಬಾಯಿಯ ಒಳಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಹಲ್ಲು ನೋವು ಹಾಗೂ ಹಲ್ಲುಗಳು ಒಸಡಿನಿಂದ ಸಡಿಲವಾಗುವುದು, ಎದೆ ನೋವು ಹಾಗೂ ಉಸಿರಾಟದ ತೊಂದರೆ, ಕೆಮ್ಮಿದಾಗ ಅಥವಾ ಮೂಗಿನಿಂದ ರಕ್ತ ಸೋರುವುದು.

– ಡಾ.ವಾಸು ಎಚ್.ವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...