Homeನ್ಯಾಯ ಪಥಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

ಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

- Advertisement -
- Advertisement -

ಕೊರೊನಾ ಕಾಲದ ದೊಡ್ಡ ಸಮಸ್ಯೆ ಏನೆಂದರೆ ರಾಜಕಾರಣಿಗಳು ತಜ್ಞರ ಮಾತನ್ನು ಉಪೇಕ್ಷಿಸಿ ತೀರ್ಮಾನ ಕೈಗೊಳ್ಳುವುದು; ಟಿವಿ ಆಂಕರ್‌ಗಳು ಲಾಕ್‌ಡೌನ್ ಯಾವಾಗ, ಹೇಗೆ ಹೇರಬೇಕು ಎಂಬುದನ್ನೂ, ಯಾವ ಸಮಸ್ಯೆ ಎಷ್ಟು ರಣಭೀಕರ ಎಂದು ತೀರ್ಮಾನಿಸುವುದು; ಹೃದಯ ತಜ್ಞರು ಸಾಂಕ್ರಾಮಿಕ ರೋಗದ ಉಸ್ತುವಾರಿ ವಹಿಸುವುದು ಮತ್ತು ಅಂತಿಮವಾಗಿ ವಾಟ್ಸಾಪ್‌ನಲ್ಲಿ ಹರಿದುಬರುವ ಸುಳ್ಳುಗಳು ರೋಗಿಗಳ ಚಿಕಿತ್ಸೆ ನಿರ್ಧರಿಸುವುದು. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಎಂಬ ರೋಗವು ಎಲ್ಲೆಡೆ ಹಬ್ಬುತ್ತಿರುವಾಗ ಮತ್ತೊಮ್ಮೆ ಇದನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಈ ಲೇಖನ ಬರೆಯುವಾಗಲೂ, ತಜ್ಞ ವೈದ್ಯರುಗಳು ಹಾಗೂ ಸಂಶೋಧಕರು ಏನು ಹೇಳಿದ್ದಾರೆಂಬುದನ್ನು ಮಾತ್ರವೇ ಹೇಳಬೇಕೆಂಬ ಎಚ್ಚರವನ್ನಿಟ್ಟುಕೊಳ್ಳಲಾಗಿದೆ.
ಕಪ್ಪು ಫಂಗಸ್ ಕುರಿತಂತೆ ವೈದ್ಯಲೋಕದ ಆಚೆಗೆ ಎಲ್ಲರೂ ಕೇಳಲಾರಂಭಿಸಿದ್ದು ಕೊರೊನಾದ ಭಾರತದ ಎರಡನೇ ಅಲೆಯ ತುತ್ತತುದಿಯಲ್ಲಿ. ಮ್ಯುಕೊರ್ ಮೈಸಿಟಿಸ್ ಎಂಬ ಫಂಗಸ್‌ನಿಂದ ಬರುವ ಈ ಕಾಯಿಲೆಯು ಕೊರೊನಾದಿಂದ ಶುರುವಾದದ್ದಲ್ಲ. ಇದು ಮುಂಚಿನಿಂದಲೂ ಇರುವ ಕಾಯಿಲೆಯೇ. ಹಾಗೆ ನೋಡಿದರೆ ಮುಂಚಿನಿಂದಲೂ ಭಾರತವೇ ಅದರ ರಾಜಧಾನಿ. ಬೇರೆ ದೇಶಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಕೇಸುಗಳು ಇಲ್ಲಿ ಸಂಭವಿಸುತ್ತವೆ. ಆದರೂ ಅವು ಬಹಳಷ್ಟು ಇರುತ್ತಿರಲಿಲ್ಲ. ಕೇವಲ ಕಳೆದೆರಡು ತಿಂಗಳಲ್ಲೇ ೮,೦೦೦ ಪ್ರಕರಣಗಳು ಪತ್ತೆಯಾಗಿವೆ. ಫಂಗಸ್‌ನಿಂದ ಉಂಟಾಗುವ ಸೋಂಕು ದೊಡ್ಡದೇನಲ್ಲ. ಎಲ್ಲರಿಗೂ ಜೀವನದ ಒಂದಲ್ಲಾ ಒಂದು ಸಂದರ್ಭದಲ್ಲಿ ಫಂಗಸ್ ಸೋಂಕು ಇದ್ದೇ ಇರುತ್ತದೆ. ಆದರೆ ಮ್ಯುಕೊರ್ ಮೈಕೋಸಿಸ್ ಒಂದು ಅಪಾಯಕಾರಿ ಕಾಯಿಲೆ. ಈಗಲೂ ಶೇ.೫೦ರಷ್ಟು ಜನರನ್ನು ಅದು ಬಲಿತೆಗೆದುಕೊಳ್ಳುತ್ತಿದೆ. ಅಂದರೆ ಕೊರೊನಾಗಿಂತಲೂ ಹೆಚ್ಚು ಅಪಾಯಕಾರಿ.

ಆದರೆ ಹಾಗೆಂದು ಅದು ವ್ಯಕ್ತಿಯಿಂದ ವ್ಯಕ್ತಿಗೆ (ಕೊರೊನಾದಂತೆ) ಹರಡುವುದಿಲ್ಲ. ಮ್ಯುಕೊರ್ ಮೈಸಿಟಿಸ್‌ನ ಸ್ಪೋರ್‌ಗಳು (ಬೀಜ ಎಂದಿಟ್ಟುಕೊಳ್ಳೋಣ) ವಾತಾವರಣದಲ್ಲಿ, ಮಣ್ಣಿನಲ್ಲೂ ಸೇರಿದಂತೆ, ಎಲ್ಲೆಡೆ ಇರುತ್ತವೆ. ಹಾಗಾಗಿ ಅದು ಒಬ್ಬರಿಂದ ಇನ್ನೊಬ್ಬರಿಗೆ ಬರಬೇಕಾದ ಅಗತ್ಯವಿಲ್ಲ. ಯಾರಲ್ಲಿ ರೋಗನಿರೋಧಕ ಶಕ್ತಿ ಅತೀ ಕಡಿಮೆಯಾಗುತ್ತದೋ ಅಂಥವರಿಗೆ ಅದು ಹರಡುತ್ತದೆ. ಬಹುತೇಕ ಮೂಗಿನಿಂದ ಒಳಹೊಕ್ಕು, ಮೂಗಿನ ಎರಡೂ ಬದಿಯಲ್ಲಿ ಇರುವ ಸೈನಸ್ ಒಳಗೂ ವೃದ್ಧಿಯಾಗುತ್ತದೆ ಮತ್ತು ಪಕ್ಕದಲ್ಲೇ ಇರುವ ಕಣ್ಣಿನ ಕುಳಿಗೆ ಪ್ರವೇಶಿಸುತ್ತದೆ; ತಲೆಬುರುಡೆಯೊಳಕ್ಕೂ ಹೋಗಿ ಮೆದುಳಿಗೂ ಹಾನಿಯುಂಟು ಮಾಡುವ ಶಕ್ತಿ ಅದಕ್ಕಿದೆ. ಸಣ್ಣಪುಟ್ಟ ಔಷಧಿಗಳ ಬಡಪೆಟ್ಟಿಗೆ ಅದು ಬಗ್ಗುವುದಿಲ್ಲ. ಯಾವ ಭಾಗದಲ್ಲಿ ಅದು ಬೆಳೆದಿರುತ್ತದೋ, ಅದನ್ನೇ ಕೆರೆದು ಅಥವಾ ಕತ್ತರಿಸಿ ತೆಗೆಯಬೇಕಾಗುತ್ತದೆ. ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ತಜ್ಞರು ಹಾಗೂ ಕಣ್ಣಿನ ತಜ್ಞರು ಅದನ್ನು ನಿಭಾಯಿಸುತ್ತಾರೆ. ಈ ಸದ್ಯ ಅದಕ್ಕೆ ಲಭ್ಯವಿರುವ ಔಷಧಿಗಳು ವಿಪರೀತ ದುಬಾರಿಯಾಗಿವೆ. ಅದರಲ್ಲೂ ಆಂಫೋಟೆರಿಸಿನ್ ಬಿ ಎಂಬ ಔಷಧಿಯು ದುಬಾರಿಯೂ ಹೌದು; ದುರ್ಲಭವೂ ಹೌದು.

ಈಗ ಅದು ಏಕೆ ಇಷ್ಟೊಂದು ಹೆಚ್ಚಾಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ಈ ಒಂದು ತಿಂಗಳಲ್ಲಿ ನಡೆದಿದೆ. ಕೊರೊನಾ ಬಂದವರಲ್ಲೇ ಅದು ಅತಿ ಹೆಚ್ಚು ಕಾಣಿಸಿಕೊಂಡಿದ್ದು, ಈ ಹಿಂದಿನಂತೆ ಕ್ಯಾನ್ಸರ್‌ಗೆ ಕೀಮೋಥೆರಪಿ ತೆಗೆದುಕೊಂಡವರು, ಕಿಡ್ನಿ ಕಸಿ ಮಾಡಿಸಿಕೊಂಡವರು ಮುಂತಾದವರಲ್ಲೂ ಇದೆ. ಅತೀ ಹೆಚ್ಚು ಡಯಾಬಿಟಿಸ್ ಇರುವವರನ್ನು ಬಾಧಿಸಿದೆಯಾದರೂ ಡಯಾಬಿಟಿಸ್ ಇಲ್ಲದವರಿಗೂ ಬಂದಿದೆ. ಕೊರೊನಾ ಬಂದು ಆಸ್ಪತ್ರೆ ಸೇರಿ ಆಕ್ಸಿಜನ್ ಕೊಟ್ಟವರಲ್ಲಿ ಸಾಕಷ್ಟು ಜನರಲ್ಲಿ ಬಂದಿದೆಯಾದರೂ, ಆಸ್ಪತ್ರೆಗೇ ಹೋಗದೇ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡವರಿಗೂ ಬಂದಿದೆ. ಸ್ಟಿರಾಯ್ಡ್ ಔಷಧಿ (ಮಧ್ಯಮದಿಂದ ತೀವ್ರ ಪ್ರಮಾಣದ ಕೊರೊನಾ ಬಂದವರೆಲ್ಲರಿಗೂ ನೀಡಲಾಗುತ್ತಿದೆ) ತೆಗೆದುಕೊಂಡವರನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಿದೆಯಾದರೂ, ಸ್ಟಿರಾಯ್ಡ್ ಮಾತ್ರೆಯನ್ನೂ ತೆಗೆದುಕೊಂಡಿಲ್ಲದವರಿಗೂ ಬಂದಿದೆ.

ಹೀಗಾಗಿ ಮೊದಲು ಹೇಳುತ್ತಿದ್ದಂತೆ ಕೈಗಾರಿಕಾ ಆಕ್ಸಿಜನ್ ಬಳಸಿದ್ದರಿಂದ ಬಂದಿದೆ; ಆಕ್ಸಿಜನ್ ನೀಡುವಾಗ ಬಳಸುವ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರು ಬಳಸದ್ದರಿಂದ ಹೀಗಾಗಿದೆ ಎಂಬ ಮಾತುಗಳಿಗೆ ಈಗ ಹೆಚ್ಚು ಅರ್ಥವಿಲ್ಲ. ಹಾಗೆ ನೋಡಿದರೆ ಮೊದಲ ಅಲೆಯಲ್ಲೂ ಆಕ್ಸಿಜನ್ ನೀಡಲಾಗಿತ್ತು; ಡಯಾಬಿಟಿಸ್ ಇದ್ದವರಿಗೂ ಸ್ಟಿರಾಯ್ಡ್ ನೀಡಲಾಗಿತ್ತು. ಆದರೆ ಆಗ ಈ ರೀತಿ ಈ ಪ್ರಮಾಣದಲ್ಲಿ ಕಪ್ಪು ಫಂಗಸ್ ಇರಲಿಲ್ಲ.

ಮೊದಲ ಅಲೆಯ ಹೊತ್ತಿನಲ್ಲಿ ನಡೆದ ಅಧ್ಯಯನಗಳೂ ಇವನ್ನು ದೃಢಪಡಿಸುತ್ತವೆ. 2020ರ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕೊರೊನಾದಿಂದ ತೊಂದರೆಗೀಡಾಗಿದ್ದ 17,534 ರೋಗಿಗಳಲ್ಲಿ ಉಂಟಾದ ಸೆಕೆಂಡರಿ ಸೋಂಕನ್ನು ಅಧ್ಯಯನ ಮಾಡಲಾಗಿತ್ತು. ಅವುಗಳಲ್ಲಿ ಮ್ಯುಕೊರ್ ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಕಂಡುಬಂದಿದ್ದು ಕೆಲವೇ ಕೆಲವು ಪ್ರಕರಣಗಳಲ್ಲಿ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಇನ್ನೆಲ್ಲೂ ಕಾಣದ ಪ್ರಮಾಣದಲ್ಲಿ ಭಾರತದಲ್ಲಿ ಕಪ್ಪು ಫಂಗಸ್ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಇಲ್ಲಿನ ತಜ್ಞರೇ ಹೆಚ್ಚು ತಿಳಿದವರೂ ಆಗಿದ್ದಾರೆ. ಇದುವರೆಗೆ ಈ ತಜ್ಞರು ಮೇಲೆ ಹೇಳಲಾದ ಸಂಗತಿಗಳನ್ನು ಗುರುತಿಸಿದ್ದರೂ, ಡಯಾಬಿಟಿಸ್, ಸ್ಟಿರಾಯ್ಡ್ ಹಾಗೂ ರೋಗನಿರೋಧಕತೆಯನ್ನು ಕಡಿಮೆ ಮಾಡುವ ಇತರ ಸಂಗತಿಗಳನ್ನು ಈಗಲೇ ತಳ್ಳಿ ಹಾಕಲಾಗದು. ಏಕೆಂದರೆ ಜಗತ್ತಿನಲ್ಲಿ ಡಯಾಬಿಟಿಸ್ ಅತೀ ಹೆಚ್ಚು ಇರುವ ದೇಶಗಳಲ್ಲಿ ಭಾರತ ಅಗ್ರಗಣ್ಯ ದೇಶವಾಗಿದೆ. ಇಲ್ಲಿ ಸ್ಟಿರಾಯ್ಡ್ ವಿಪರೀತ ಬಳಸಲಾಗುತ್ತದೆ. ಜೊತೆಗೆ ಟೊಸಿಲಿಜುಮಾಬ್‌ನಂತಹ ರೋಗ ನಿರೋಧಕತೆಯನ್ನು ಏರುಪೇರು ಮಾಡುವ ಔಷಧಗಳನ್ನೂ ಬಳಸಲಾಗುತ್ತಿದೆ.

ಇವೆಲ್ಲದರ ಜೊತೆಗೆ ಗಮನಿಸಬೇಕಾದ ಇನ್ನೂ ಕೆಲವು ಸಂಗತಿಗಳಿವೆ. ಕೊರೊನಾ ವೈರಸ್‌ನಿಂದ ಬಂದ ರೋಗವನ್ನು ನಿರ್ವಹಿಸುವಾಗ ವಿಪರೀತ ಆಂಟಿಬಯಾಟಿಕ್‌ಗಳನ್ನೂ ನೀಡಲಾಗಿದೆ. ಇದರ ಪರಿಣಾಮವಾಗಿ ಫಂಗಸ್ ರೋಗ ಹೆಚ್ಚಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಒರೆಗೆ ಹಚ್ಚಲಾಗುತ್ತಿದೆ. ಅದೇನೇ ಇದ್ದರೂ, ಬಿ.1.217 (ಭಾರತೀಯ) ಕೊರೊನಾ ವೈರಸ್ ರೋಗನಿರೋಧಕತೆಯನ್ನು ಕಡಿಮೆ ಮಾಡುತ್ತಿದೆ. ಇದು ಎರಡನೆಯ ಅಲೆಯ ಸಂದರ್ಭದಲ್ಲಿ ಮಾತ್ರ ಹೆಚ್ಚಾಗಿರುವ ರೋಗ ಪ್ರಮಾಣಕ್ಕೆ ಒಂದು ಸಮರ್ಥ
ವಿವರಣೆಯನ್ನು ಒದಗಿಸುತ್ತದೆ. ಅದರ ಜೊತೆಗೆ ಚರ್ಚೆ ನಡೆಯುತ್ತಿರುವುದು ಇನ್ನೂ ಮೂರು ಸಂಗತಿಗಳ ಮೇಲೆ. ಒಂದು, ಅನಗತ್ಯವಾಗಿ ಪ್ರತಿಯೊಬ್ಬ ಕೊರೊನಾ ರೋಗಿಗೂ ಜಿಂಕ್ ಸಲ್ಫೇಟ್ ಕೊಡಲಾಗಿದೆ. ಜಿಂಕ್ ಲವಣವು ಈ ಮ್ಯುಕೊರ್ ಮೈಸಿಟಿಸ್ ಫಂಗಸ್ ಬೆಳೆಯಲು ಅತ್ಯಗತ್ಯ. ಹಾಗಾಗಿ ಅದು ಬೆಳೆಯಲು ಜಿಂಕ್ ಪ್ರಶಸ್ತ ವಾತಾವರಣ ಕಲ್ಪಿಸಿತೇ? ಎರಡು, ಎರಡೂ ವ್ಯಾಕ್ಸೀನ್ ತೆಗೆದುಕೊಂಡವರಲ್ಲಿ ಮ್ಯುಕೋರ್ ಬಂದಿರುವುದು ಕಡಿಮೆ. ಇದು ನಮಗೇನು ಸೂಚಿಸುತ್ತದೆ? ಮೂರು, ವಿಪರೀತ ಬಿಸಿನೀರಿನ ಹವೆ ತೆಗೆದುಕೊಳ್ಳುವುದರಿಂದ ಮೂಗು, ಗಂಟಲಿನ ತೆಳುವಾದ ಪದರಕ್ಕೆ ಹಾನಿಯಾಗಿ ಅದರ ರೋಗನಿರೋಧಕತೆ ಕಡಿಮೆಯಾಗಿದೆ. ಬೆಂಗಳೂರಿನ ಪ್ರಸಿದ್ಧ ಇಎನ್‌ಟಿ ತಜ್ಞ ಡಾ.ದೀಪಕ್ ಹಲ್ದಿಪುರ ಅವರ ಪ್ರಕಾರ ವಾಟ್ಸಾಪ್‌ನಲ್ಲಿ ಹರಿಯಬಿಟ್ಟ ಇಂತಹ ಚಿಕಿತ್ಸೆಗಳಿಂದಲೂ ಈ ಸಮಸ್ಯೆ ಉದ್ಭವಿಸಿದೆ.

ಹೀಗಾಗಿ ಕೊರೊನಾ ಬಂದವರೆಲ್ಲರೂ ಎಚ್ಚರ ವಹಿಸಬೇಕಾದ ಕೆಲವು ಸಂಗತಿಗಳಿವೆ. ಡಯಾಬಿಟಿಸ್ ಇದ್ದರೆ ಅವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು; ಸ್ಟಿರಾಯ್ಡ್ ಮಾತ್ರೆ/ಇಂಜೆಕ್ಷನ್ ಪಡೆದವರೆಲ್ಲರೂ ರಕ್ತದ ಸಕ್ಕರೆ ಪರೀಕ್ಷಿಸಿಕೊಂಡು ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯವಾಗಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಜೊತೆಗೆ ಕಪ್ಪು ಫಂಗಸ್‌ನ ಲಕ್ಷಣಗಳು ಕಂಡರೆ ಕೂಡಲೇ ತಜ್ಞ ವೈದ್ಯರನ್ನು (ಇಎನ್‌ಟಿ ವೈದ್ಯರನ್ನು) ಸಂಪರ್ಕ ಮಾಡಬೇಕು.

ಕಪ್ಪು ಫಂಗಸ್‌ನ ಲಕ್ಷಣಗಳು ಈ ಕೆಳಕಂಡಂತಿವೆ.
ತಲೆಯ ಒಂದು ಬದಿ ಮಾತ್ರ ಬರುವ ತಲೆನೋವು, ಅಂದರೆ ನಿದ್ದೆ ಮಾಡಲೇ ಬಿಡದಂತಹ ವಿಪರೀತ ತಲೆನೋವು (ಸ್ವಲ್ಪ ತಲೆ ನೋವಲ್ಲ), ಎದ್ದು ಕಾಣುವಂತಹ ಮುಖದ ಊತ, ಒಂದು ಕಣ್ಣು ಗುಡ್ಡೆ ಸ್ವಲ್ಪ ಹೊರಬರುವುದು, ಮೂಗಿನ ಒಳಗೆ ಹಾಗೂ ಹೊರಗೆ ಕಾಣುವಂತಹ ಕಪ್ಪು ಗಾಯ, ಕಣ್ಣಿನ ದೃಷ್ಟಿ ಏರುಪೇರಾಗುವುದು. ಮೂಗು, ಸೈನಸ್‌ನಲ್ಲಿ ಕಫ ದಟ್ಟಣೆ. ಮೂಗಿನ ಮೇಲೆ ಅಥವಾ ಬಾಯಿಯ ಒಳಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಹಲ್ಲು ನೋವು ಹಾಗೂ ಹಲ್ಲುಗಳು ಒಸಡಿನಿಂದ ಸಡಿಲವಾಗುವುದು, ಎದೆ ನೋವು ಹಾಗೂ ಉಸಿರಾಟದ ತೊಂದರೆ, ಕೆಮ್ಮಿದಾಗ ಅಥವಾ ಮೂಗಿನಿಂದ ರಕ್ತ ಸೋರುವುದು.

– ಡಾ.ವಾಸು ಎಚ್.ವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...