Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

- Advertisement -
- Advertisement -

ಎಚ್.ಆರ್. ರಾಮಕೃಷ್ಣ ರಾವ್ ಬೆಂಗಳೂರಿನ ಮಾವಳ್ಳಿಯಲ್ಲಿ ಹುಟ್ಟಿ, ಹೊಳಲ್ಕೆರೆಯಲ್ಲಿ ಬೆಳೆದು ಬೆಂಗಳೂರಿನ ವೈಜ್ಞಾನಿಕ ಮನೋಭಾವದ ಯುವ ಚೇತನಗಳಿಗೆ ದಾರಿದೀಪವಾದವರು.

ತಂದೆ ಎಚ್.ವಿ. ರಂಗರಾವ್, ತಾಯಿ ರಾಧಮ್ಮ ಅವರಿಂದ ಬಂದ ಜೀವನಶಿಸ್ತು, ಕನ್ನಡ ಮತ್ತು ಆಂಗ್ಲಭಾಷಾ ಪ್ರೌಢಿಮೆ, ಕಷ್ಟಸಹಿಷ್ಣು ಜೀವನ ಶ್ರದ್ಧೆ, ತಾಯಿಯ ಅಂತಃಕರಣ ಅರಿತ ಮಾತೃಸೇವಾ ನಿಷ್ಠತೆ, ತನ್ನ ಅರಿವನ್ನು ವಿಕಸಿಸಿಕೊಳ್ಳುವ ಜಾಗೃತ ಮನಸ್ಸಿನಿಂದ ರೂಪುಗೊಂಡವರು ಎಚ್.ಆರ್.ಆರ್. ಅವರು ಹೊಳಲ್ಕೆರೆಯಲ್ಲಿ ಬಾಲ್ಯಕಳೆದು, ಚಿತ್ರದುರ್ಗದಲ್ಲಿ ವಾರಾನ್ನದ ಹುಡುಗನಾಗಿ ಓದುವಾಗಲೇ ಗಣಿತ, ವಿಜ್ಞಾನ ಶಿಕ್ಷಕರಾದವರು. ಅವರ ವಿದ್ಯಾ ಶ್ರದ್ಧೆಯ ಮನೋಸ್ಥೈರ್ಯ ವಿದ್ಯಾರ್ಥಿಗಳಿಗೆ ಒಂದು ಆದರ್ಶ.

ಇಂಟರ್ ಮೀಡಿಯಟ್ ವಿದ್ಯಾಭ್ಯಾಸಕ್ಕೆ ನ್ಯಾಷನಲ್ ಕಾಲೇಜು ಸೇರಲು ಕಾರಣವಾಗಿ, ಭೌತಶಾಸ್ತ್ರದ ಬಗ್ಗೆ ಆಸಕ್ತಿಯನ್ನುಂಟು ಮಾಡಿದವರು ಹೆಚ್. ನರಸಿಂಹಯ್ಯ. ಅವರ ಬಗ್ಗೆ ಎಚ್.ಆರ್.ಆರ್‌ಗೆ ಅಪಾರ ಗೌರವ. ಬೇಂದ್ರೆಯವರು ಹೇಳುವ ’ಶುದ್ಧನಿದ್ದವ ಗೆದ್ದ’ ಎಂಬ ನುಡಿಯಂತೆ ಸತ್ಯ, ಧರ್ಮ, ನೈತಿಕ ನಿಲುವುಗಳಿಂದ ಜೀವನ ಪಯಣದಲ್ಲಿ ಗೆದ್ದ ಎಚ್.ಆರ್.ಆರ್. ಜನಸಾಮಾನ್ಯರಿಗೆ ಒಂದು ಮಾದರಿ.

ಅವರು ಬಿ.ಎಸ್.ಸಿ ಓದುವಾಗ ಸ್ಕೌಟ್ಸ್‌ಗೆ ಸೇರಿಕೊಂಡರು. ಅಲ್ಲಿ ನೀಡಿದ ಹ್ಯಾಮ್‌ರೇಡಿಯೊ ಪ್ರಾತ್ಯಕ್ಷಿಕೆಯನ್ನು ಆಸಕ್ತಿಯಿಂದ ತಿಳಿದುಕೊಂಡರು. ಸಂಪರ್ಕ ಮಾಧ್ಯಮಕ್ಕೆ ಮೋರ್‍ಸ್‌ಕೋಡ್ ಬಳಸುವುದರಲ್ಲಿ ಆಸಕ್ತಿ ಹೊಂದಿದರು. ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಪರಿಚಯ ಮಾಡಿಕೊಂಡು ಮೋರ್‍ಸ್‌ಕೋಡ್ ಬಳಸಿ ಸಂದೇಶ ಕಳುಹಿಸುವುದನ್ನು ಹಾಗೂ ಸ್ವೀಕರಿಸುವುದನ್ನು ಕಲಿತುಕೊಂಡರು. ಬೇಸಿಗೆ ರಜೆಯಲ್ಲಿ ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಅಲ್ಲಿ ಸಂದೇಶ ಸ್ವೀಕರಿಸುವ ಕೆಲಸ ಮಾಡಿ ವಾರಕ್ಕೆ ಹತ್ತು ರೂಪಾಯಿ ಸಂಪಾದಿಸುತ್ತಿದ್ದರು. ವಿದ್ಯಾರ್ಥಿದೆಸೆಯಲ್ಲಿ ತನ್ನ ಬೌದ್ಧಿಕ ಪರಿಣತಿಯಿಂದ ಹಣ ಸಂಪಾದಿಸುತ್ತಿದ್ದ ಅವರ ಕ್ರಿಯಾಶೀಲ ಬೌದ್ಧಿಕ ಚತುರತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಬೆಳಕು.

ತಂದೆಯ ಮರಣದ ನಂತರ ಓದು ಮುಂದುವರಿಸಲಾಗಲಿಲ್ಲ. ಆಗ ಪೋಸ್ಟ್‌ಮಾಸ್ಟರ್ ಜನರಲ್‌ಗೆ ಪತ್ರ ಬರೆದು, ತನ್ನ ಟೆಲಿಗ್ರಾಫ್ ಅನುಭವ ತಿಳಿಸಿ ಪೋಸ್ಟ್‌ಮ್ಯಾನ್ ಕೆಲಸ ಪಡೆದರು. ಅದು ನಿರುದ್ಯೋಗಿ ಯುವಕರಿಗೆ ಅವರಿಂದ ದೊರೆಯುವ ಅನುಕರಣೀಯ ಸಾಹಸ. ಅದು ಚೆನ್ನಾಗಿ ಗ್ರಂಥದಲ್ಲಿ ನಿರೂಪಿತವಾಗಿದೆ.

ಎಚ್.ಆರ್.ಆರ್. ಅವರು ತಾನು ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬೇಕೆಂಬ ಹಿರಿಯ ಬಯಕೆ ಹೊಂದಿದ್ದರು. ಕೆಲಸ ಮಾಡುತ್ತ ಭೌತವಿಜ್ಞಾನದ ಅತ್ಯುತ್ತಮ ಸಂಶೋಧನಾ ಪುಸ್ತಕಗಳನ್ನು ಕೊಂಡು ಅಧ್ಯಯನ ಮಾಡುತ್ತ ತಮ್ಮ ಮನದ ಗುರಿಯತ್ತ ದಾಪುಗಾಲು ಹಾಕುತ್ತಿದ್ದರು. ಅವರಿಗೆ ಮದುವೆ ಆಗಿ ಮಕ್ಕಳಿದ್ದರೂ ವಿದ್ಯಾದಾಹದಿಂದ ಖಾಯಂ ಸರ್ಕಾರಿ ಪೋಸ್ಟ್‌ಮ್ಯಾನ್ ಕೆಲಸ ಬಿಟ್ಟರು. ತಮಗೆ ಪ್ರೋತ್ಸಾಹ, ಪತ್ನಿಯ ಸಹಕಾರದಿಂದ ಎಂ.ಎಸ್ಸಿ ವಿದ್ಯಾರ್ಥಿಯಾದರು. ತನ್ನ ಭೌತವಿಜ್ಞಾನದ ಪರಿಣತ ಜ್ಞಾನವನ್ನು ಪ್ರಾಧ್ಯಾಪಕರ ಸಮಿತಿ ಮುಂದೆ ಸಮರ್ಥವಾಗಿ ಮಂಡಿಸಿ ಸೀಟ್ ಪಡೆದರು.

ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ಸಂತ ಜೋಸೆಫ್‌ರ ಕಾಲೇಜಿನಲ್ಲಿ, ಆಚಾರ್ಯ ಪಾಠಶಾಲೆಯಲ್ಲಿ ಕೆಲಸ ಮಾಡಿ ಆತ್ಮಾನಂದದ ಸಾರ್ಥಕ ಶಿಕ್ಷಕರಾದರು. ಅನಂತರ ಕ್ರೈಸ್ಟ್ ಕಾಲೇಜಿಗೆ ಸೇರಿ, ಆ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಹಾಯ ಮಾಡಿದರು. ಅಲ್ಲಿ ಚಿ. ಶ್ರೀನಿವಾಸರಾಜು ಅವರ ಜೊತೆಗೂಡಿ ’ಕನ್ನಡ ಸಂಘ’ದ ಮುಖಾಂತರ ಕನ್ನಡ ವಾತಾವರಣ ಸೃಷ್ಟಿಸಿದರು. ಆ ಕಾಲೇಜಿನ ರೆಕ್ಟರ್ ಅವರಿಗೆ ಕಾಲೇಜಿನ ಲೋಗೋದಲ್ಲಿ ಕನ್ನಡದಲ್ಲಿ ’ಕ್ರೈಸ್ಟ್’ ಕಾಲೇಜ್ ಎಂದು ಸೇರಿಸಲು ಧೈರ್ಯವಾಗಿ ಹೇಳಿ, ಅದು ಆಗುವಂತೆ ಮಾಡಿದರು. ಅದು ಅವರಲ್ಲಿಯ ಕನ್ನಡ ಉಳಿಸಿ ಬೆಳೆಸುವ ಕ್ರಿಯಾಶೀಲ ನಡೆಯ ಕನ್ನಡತನದ ಪ್ರತೀಕ.

ಅವರು ಸಂಚಾರಿ ಟೆಲಿಸ್ಕೋಪ್‌ನಿಂದ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಆಕಾಶದ ವೀಕ್ಷಣೆಯ ಅದ್ಭುತ ನೋಟ ಮನಗಾಣಿಸಿದರು. ಎಚ್.ಆರ್.ಆರ್. ಅವರು ಕ್ರೈಸ್ಟ್ ಕಾಲೇಜಿನಿಂದ ನಿವೃತ್ತರಾದ ಮೇಲೆ ಇಂಟರ್ ಮೀಡಿಯಟ್ ಕಾಲೇಜ್ ಸಹಪಾಟಿ ಪಾಂಡು ಕೋರಿಕೆಯಂತೆ, ಅವರು ನಡೆಸುತ್ತಿದ್ದ ಆರ್.ವಿ. ಕಾಲೇಜಿನ ಹದಗೆಟ್ಟ ಪಾಠ ಪ್ರವಚನ, ವಿದ್ಯಾರ್ಥಿ ಶಿಕ್ಷಕರ ನಡೆಯನ್ನು ಶಿಸ್ತಿಗೆ ಒಳಪಡಿಸಿದರು. ಆ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿ ಆ ಕಾಲೇಜು ನಿಜ ಶಿಕ್ಷಣ ನೆಲೆಯಾಗುವಂತೆ ಮಾಡಿದರು. ಆ ಜ್ಞಾನದಾಹ, ವಿದ್ಯಾರ್ಥಿ ಮತ್ತು ಶಿಕ್ಷಕರ ಬಗೆಗಿನ ವಿಶ್ವಾಸ, ಆತ್ಮೀಯ ಕ್ರಿಯಾಶೀಲ ನಡೆ ವಿವರಿಸಿದರೆ ಅದರ ರುಚಿ ಕೆಡುತ್ತದೆ. ಅದನ್ನು ಕಲ್ಗುಂಡಿ ನವೀನ್ ಅವರ ನಿರೂಪಣೆಯಲ್ಲಿಯೇ ಓದಿ ಸವಿಯಬೇಕು. ಅದು ಇಂದಿನ ಹಾಗೂ ಮುಂದಿನ ವಿದ್ಯಾಸಂಸ್ಥೆಗಳು, ಎಲ್ಲ ಶಿಕ್ಷಕರು ಅನುಸರಿಸಬೇಕಾದ ನಡೆಯಾಗಿದೆ. ಹಾಗಾಗಿ ಈ ಆತ್ಮಕಥೆ ಸತ್ಯದ ದಾಖಲೆಯಾಗಿ ’ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ,’ ಎಂಬ ಬಸವಣ್ಣನ ನುಡಿಯಂತೆ, ಎಚ್ಚರದಿಂದ ಅಲುಗಿನ ಮೇಲೆ ನಡೆದು ಸಾಗಿದಂತಿದೆ. ಇಂತಹ ಜೀವನ ಪಥ ಅನುಕರಣೀಯ. ಇಂತಹ ಆತ್ಮಕತೆಗಳು ಕನ್ನಡದಲ್ಲಿ ಅಪರೂಪ.

ರಾಮಕೃಷ್ಣರಾವ್ ಅವರ ’ರಾಮನ್, ದ ನ್ಯಾಚುರಲ್ ಫಿಲಾಸಪರ್’ ಸಾಕ್ಷಚಿತ್ರ., ಸರ್ ಸಿ.ವಿ.ರಾಮನ್‌ರನ್ನು ಕಂಡು ಅನುಭವಿಸಿದ ಸುಖ, ಅವರ ಪ್ರಯೋಗಾಲಯದ ಅನುಭವಗಳು ಭೌತಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅವರ ರನ್ನಿಂಗ್ ಥ್ರೂ ದ ಸಿಸ್ಟಮ್ – ಪಠ್ಯೇತರ ಇಂಗ್ಲೀಷ್ ಪುಸ್ತಕ, ’ಕಲಾಂ ಮೇಷ್ಟು’ ಕನ್ನಡ ಪುಸ್ತಕ ಹಾಗೂ ಎಚ್.ಆರ್.ಆರ್.ಆರ್. ಅವರ ವಂಶಸ್ಥರಾದ ರಾಮಣ್ಣಯ್ಯ ತಾಳೆ ಲಿಪಿ ಮಾಡಿದ್ದ ’ಕರ್ಣಾಟಕ ಭಾಗವತ’, ಕೃತಿಗಳು ಉತ್ತಮ ಸಾಹಿತ್ಯ ಕೊಡುಗೆಗಳಾಗಿವೆ.

ಈ ಆತ್ಮಕತೆಯಲ್ಲಿ ಅವರ ಸಂದರ್ಶನ, ಅಪರೂಪದ ಪೋಟೋಗಳು ಇದ್ದು ಅವರ ನಡೆಯ ಖಚಿತತೆಗೆ ಸಾಕ್ಷಿಯಾತಿಗಿವೆ. ಕನ್ನಡ ಜನರ ಮನಸ್ಸಿನಿಂದ ಸುಲಭವಾಗಿ ಮರೆತು ಹೋಗಬಹುದಾಗಿದ್ದ ಎಚ್.ಆರ್.ಆರ್. ಎಂಬ ಓರ್ವ ಬೌದ್ಧಿಕ ಪರಿಣತನ, ಸಾಹಸಿಯುವಕನ, ಮಾಗಿದ ಪ್ರಾಧ್ಯಾಪಕನ ಜೀವನಾನುಭವ ಸಾರವನ್ನು ಪ್ರಕಟಿಸಿ ಉದಯಭಾನು ಕಲಾಸಂಘ ತುಂಬಾ ಉಪಯುಕ್ತ ಕೆಲಸ ಮಾಡಿದೆ.

ಈ ಆತ್ಮಕಥೆಯನ್ನು ತುಂಬಾ ನವಿರಾದ ಭಾಷೆಯಲ್ಲಿ ನಿರೂಪಿಸಿರುವ ಕಲ್ಗುಂಡಿ ನವೀನ್ ಕೂಡ ಅಭಿನಂದನೀಯ.

ಕೃತಿ : ಅಂಬಿಗಾ! ದಡ ಹಾಯಿಸು….
(ಭೌತ ವಿಜ್ಞಾನದ ಪಾಧ್ಯಾಪಕರಾದ ಎಚ್.ಆರ್. ರಾಮಕೃಷ್ಣ ರಾವ್ ಅವರ ಆತ್ಮಕಥೆ)
ನಿರೂಪಣೆ : ಕಲ್ಗುಂಡಿ ನವೀನ್
ಪುಟಗಳು : 216
ಬೆಲೆ : ರೂ.200/-
ಪ್ರಕಟಣೆ : ಉದಯಭಾನು ಕಲಾಸಂಘ, ಬೆಂಗಳೂರು.

ಡಾ. ಜಿ. ಕೃಷ್ಣಪ್ಪ

ಡಾ. ಜಿ. ಕೃಷ್ಣಪ್ಪ
’ಬೇಂದ್ರೆ’ ಕೃಷ್ಣಪ್ಪ ಎಂದೇ ಜನಪ್ರಿಯರಾಗಿ, ಬೇಂದ್ರೆ ಮತ್ತು ಕುವೆಂಪು ಸಾಹಿತ್ಯದ ಪರಿಚಾರಕಾರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ’ಹಾಡು ಹಕ್ಕಿ ಅಂಬಿಕಾತನಯದತ್ತ’, ’ನಾಕುತಂತಿ-ಒಂದು ಟಿಪ್ಪಣಿ’, ’ಹಸಿರು ಹಚ್ಚಿ ಚುಚ್ಚಿ’, ’ಶ್ರೀ ರಾಮಾಯಣದರ್ಶನಂ ಪಾತ್ರಗಳ ಕಥಾವಳಿ’, ’ಬೇಂದ್ರೆ ಕಾವ್ಯ: ಪದನಿರುಕ್ತ’ ಕೃಷ್ಣಪ್ಪನವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...