Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

- Advertisement -
- Advertisement -

ಎಚ್.ಆರ್. ರಾಮಕೃಷ್ಣ ರಾವ್ ಬೆಂಗಳೂರಿನ ಮಾವಳ್ಳಿಯಲ್ಲಿ ಹುಟ್ಟಿ, ಹೊಳಲ್ಕೆರೆಯಲ್ಲಿ ಬೆಳೆದು ಬೆಂಗಳೂರಿನ ವೈಜ್ಞಾನಿಕ ಮನೋಭಾವದ ಯುವ ಚೇತನಗಳಿಗೆ ದಾರಿದೀಪವಾದವರು.

ತಂದೆ ಎಚ್.ವಿ. ರಂಗರಾವ್, ತಾಯಿ ರಾಧಮ್ಮ ಅವರಿಂದ ಬಂದ ಜೀವನಶಿಸ್ತು, ಕನ್ನಡ ಮತ್ತು ಆಂಗ್ಲಭಾಷಾ ಪ್ರೌಢಿಮೆ, ಕಷ್ಟಸಹಿಷ್ಣು ಜೀವನ ಶ್ರದ್ಧೆ, ತಾಯಿಯ ಅಂತಃಕರಣ ಅರಿತ ಮಾತೃಸೇವಾ ನಿಷ್ಠತೆ, ತನ್ನ ಅರಿವನ್ನು ವಿಕಸಿಸಿಕೊಳ್ಳುವ ಜಾಗೃತ ಮನಸ್ಸಿನಿಂದ ರೂಪುಗೊಂಡವರು ಎಚ್.ಆರ್.ಆರ್. ಅವರು ಹೊಳಲ್ಕೆರೆಯಲ್ಲಿ ಬಾಲ್ಯಕಳೆದು, ಚಿತ್ರದುರ್ಗದಲ್ಲಿ ವಾರಾನ್ನದ ಹುಡುಗನಾಗಿ ಓದುವಾಗಲೇ ಗಣಿತ, ವಿಜ್ಞಾನ ಶಿಕ್ಷಕರಾದವರು. ಅವರ ವಿದ್ಯಾ ಶ್ರದ್ಧೆಯ ಮನೋಸ್ಥೈರ್ಯ ವಿದ್ಯಾರ್ಥಿಗಳಿಗೆ ಒಂದು ಆದರ್ಶ.

ಇಂಟರ್ ಮೀಡಿಯಟ್ ವಿದ್ಯಾಭ್ಯಾಸಕ್ಕೆ ನ್ಯಾಷನಲ್ ಕಾಲೇಜು ಸೇರಲು ಕಾರಣವಾಗಿ, ಭೌತಶಾಸ್ತ್ರದ ಬಗ್ಗೆ ಆಸಕ್ತಿಯನ್ನುಂಟು ಮಾಡಿದವರು ಹೆಚ್. ನರಸಿಂಹಯ್ಯ. ಅವರ ಬಗ್ಗೆ ಎಚ್.ಆರ್.ಆರ್‌ಗೆ ಅಪಾರ ಗೌರವ. ಬೇಂದ್ರೆಯವರು ಹೇಳುವ ’ಶುದ್ಧನಿದ್ದವ ಗೆದ್ದ’ ಎಂಬ ನುಡಿಯಂತೆ ಸತ್ಯ, ಧರ್ಮ, ನೈತಿಕ ನಿಲುವುಗಳಿಂದ ಜೀವನ ಪಯಣದಲ್ಲಿ ಗೆದ್ದ ಎಚ್.ಆರ್.ಆರ್. ಜನಸಾಮಾನ್ಯರಿಗೆ ಒಂದು ಮಾದರಿ.

ಅವರು ಬಿ.ಎಸ್.ಸಿ ಓದುವಾಗ ಸ್ಕೌಟ್ಸ್‌ಗೆ ಸೇರಿಕೊಂಡರು. ಅಲ್ಲಿ ನೀಡಿದ ಹ್ಯಾಮ್‌ರೇಡಿಯೊ ಪ್ರಾತ್ಯಕ್ಷಿಕೆಯನ್ನು ಆಸಕ್ತಿಯಿಂದ ತಿಳಿದುಕೊಂಡರು. ಸಂಪರ್ಕ ಮಾಧ್ಯಮಕ್ಕೆ ಮೋರ್‍ಸ್‌ಕೋಡ್ ಬಳಸುವುದರಲ್ಲಿ ಆಸಕ್ತಿ ಹೊಂದಿದರು. ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಪರಿಚಯ ಮಾಡಿಕೊಂಡು ಮೋರ್‍ಸ್‌ಕೋಡ್ ಬಳಸಿ ಸಂದೇಶ ಕಳುಹಿಸುವುದನ್ನು ಹಾಗೂ ಸ್ವೀಕರಿಸುವುದನ್ನು ಕಲಿತುಕೊಂಡರು. ಬೇಸಿಗೆ ರಜೆಯಲ್ಲಿ ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಅಲ್ಲಿ ಸಂದೇಶ ಸ್ವೀಕರಿಸುವ ಕೆಲಸ ಮಾಡಿ ವಾರಕ್ಕೆ ಹತ್ತು ರೂಪಾಯಿ ಸಂಪಾದಿಸುತ್ತಿದ್ದರು. ವಿದ್ಯಾರ್ಥಿದೆಸೆಯಲ್ಲಿ ತನ್ನ ಬೌದ್ಧಿಕ ಪರಿಣತಿಯಿಂದ ಹಣ ಸಂಪಾದಿಸುತ್ತಿದ್ದ ಅವರ ಕ್ರಿಯಾಶೀಲ ಬೌದ್ಧಿಕ ಚತುರತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಬೆಳಕು.

ತಂದೆಯ ಮರಣದ ನಂತರ ಓದು ಮುಂದುವರಿಸಲಾಗಲಿಲ್ಲ. ಆಗ ಪೋಸ್ಟ್‌ಮಾಸ್ಟರ್ ಜನರಲ್‌ಗೆ ಪತ್ರ ಬರೆದು, ತನ್ನ ಟೆಲಿಗ್ರಾಫ್ ಅನುಭವ ತಿಳಿಸಿ ಪೋಸ್ಟ್‌ಮ್ಯಾನ್ ಕೆಲಸ ಪಡೆದರು. ಅದು ನಿರುದ್ಯೋಗಿ ಯುವಕರಿಗೆ ಅವರಿಂದ ದೊರೆಯುವ ಅನುಕರಣೀಯ ಸಾಹಸ. ಅದು ಚೆನ್ನಾಗಿ ಗ್ರಂಥದಲ್ಲಿ ನಿರೂಪಿತವಾಗಿದೆ.

ಎಚ್.ಆರ್.ಆರ್. ಅವರು ತಾನು ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬೇಕೆಂಬ ಹಿರಿಯ ಬಯಕೆ ಹೊಂದಿದ್ದರು. ಕೆಲಸ ಮಾಡುತ್ತ ಭೌತವಿಜ್ಞಾನದ ಅತ್ಯುತ್ತಮ ಸಂಶೋಧನಾ ಪುಸ್ತಕಗಳನ್ನು ಕೊಂಡು ಅಧ್ಯಯನ ಮಾಡುತ್ತ ತಮ್ಮ ಮನದ ಗುರಿಯತ್ತ ದಾಪುಗಾಲು ಹಾಕುತ್ತಿದ್ದರು. ಅವರಿಗೆ ಮದುವೆ ಆಗಿ ಮಕ್ಕಳಿದ್ದರೂ ವಿದ್ಯಾದಾಹದಿಂದ ಖಾಯಂ ಸರ್ಕಾರಿ ಪೋಸ್ಟ್‌ಮ್ಯಾನ್ ಕೆಲಸ ಬಿಟ್ಟರು. ತಮಗೆ ಪ್ರೋತ್ಸಾಹ, ಪತ್ನಿಯ ಸಹಕಾರದಿಂದ ಎಂ.ಎಸ್ಸಿ ವಿದ್ಯಾರ್ಥಿಯಾದರು. ತನ್ನ ಭೌತವಿಜ್ಞಾನದ ಪರಿಣತ ಜ್ಞಾನವನ್ನು ಪ್ರಾಧ್ಯಾಪಕರ ಸಮಿತಿ ಮುಂದೆ ಸಮರ್ಥವಾಗಿ ಮಂಡಿಸಿ ಸೀಟ್ ಪಡೆದರು.

ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ಸಂತ ಜೋಸೆಫ್‌ರ ಕಾಲೇಜಿನಲ್ಲಿ, ಆಚಾರ್ಯ ಪಾಠಶಾಲೆಯಲ್ಲಿ ಕೆಲಸ ಮಾಡಿ ಆತ್ಮಾನಂದದ ಸಾರ್ಥಕ ಶಿಕ್ಷಕರಾದರು. ಅನಂತರ ಕ್ರೈಸ್ಟ್ ಕಾಲೇಜಿಗೆ ಸೇರಿ, ಆ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಹಾಯ ಮಾಡಿದರು. ಅಲ್ಲಿ ಚಿ. ಶ್ರೀನಿವಾಸರಾಜು ಅವರ ಜೊತೆಗೂಡಿ ’ಕನ್ನಡ ಸಂಘ’ದ ಮುಖಾಂತರ ಕನ್ನಡ ವಾತಾವರಣ ಸೃಷ್ಟಿಸಿದರು. ಆ ಕಾಲೇಜಿನ ರೆಕ್ಟರ್ ಅವರಿಗೆ ಕಾಲೇಜಿನ ಲೋಗೋದಲ್ಲಿ ಕನ್ನಡದಲ್ಲಿ ’ಕ್ರೈಸ್ಟ್’ ಕಾಲೇಜ್ ಎಂದು ಸೇರಿಸಲು ಧೈರ್ಯವಾಗಿ ಹೇಳಿ, ಅದು ಆಗುವಂತೆ ಮಾಡಿದರು. ಅದು ಅವರಲ್ಲಿಯ ಕನ್ನಡ ಉಳಿಸಿ ಬೆಳೆಸುವ ಕ್ರಿಯಾಶೀಲ ನಡೆಯ ಕನ್ನಡತನದ ಪ್ರತೀಕ.

ಅವರು ಸಂಚಾರಿ ಟೆಲಿಸ್ಕೋಪ್‌ನಿಂದ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಆಕಾಶದ ವೀಕ್ಷಣೆಯ ಅದ್ಭುತ ನೋಟ ಮನಗಾಣಿಸಿದರು. ಎಚ್.ಆರ್.ಆರ್. ಅವರು ಕ್ರೈಸ್ಟ್ ಕಾಲೇಜಿನಿಂದ ನಿವೃತ್ತರಾದ ಮೇಲೆ ಇಂಟರ್ ಮೀಡಿಯಟ್ ಕಾಲೇಜ್ ಸಹಪಾಟಿ ಪಾಂಡು ಕೋರಿಕೆಯಂತೆ, ಅವರು ನಡೆಸುತ್ತಿದ್ದ ಆರ್.ವಿ. ಕಾಲೇಜಿನ ಹದಗೆಟ್ಟ ಪಾಠ ಪ್ರವಚನ, ವಿದ್ಯಾರ್ಥಿ ಶಿಕ್ಷಕರ ನಡೆಯನ್ನು ಶಿಸ್ತಿಗೆ ಒಳಪಡಿಸಿದರು. ಆ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿ ಆ ಕಾಲೇಜು ನಿಜ ಶಿಕ್ಷಣ ನೆಲೆಯಾಗುವಂತೆ ಮಾಡಿದರು. ಆ ಜ್ಞಾನದಾಹ, ವಿದ್ಯಾರ್ಥಿ ಮತ್ತು ಶಿಕ್ಷಕರ ಬಗೆಗಿನ ವಿಶ್ವಾಸ, ಆತ್ಮೀಯ ಕ್ರಿಯಾಶೀಲ ನಡೆ ವಿವರಿಸಿದರೆ ಅದರ ರುಚಿ ಕೆಡುತ್ತದೆ. ಅದನ್ನು ಕಲ್ಗುಂಡಿ ನವೀನ್ ಅವರ ನಿರೂಪಣೆಯಲ್ಲಿಯೇ ಓದಿ ಸವಿಯಬೇಕು. ಅದು ಇಂದಿನ ಹಾಗೂ ಮುಂದಿನ ವಿದ್ಯಾಸಂಸ್ಥೆಗಳು, ಎಲ್ಲ ಶಿಕ್ಷಕರು ಅನುಸರಿಸಬೇಕಾದ ನಡೆಯಾಗಿದೆ. ಹಾಗಾಗಿ ಈ ಆತ್ಮಕಥೆ ಸತ್ಯದ ದಾಖಲೆಯಾಗಿ ’ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ,’ ಎಂಬ ಬಸವಣ್ಣನ ನುಡಿಯಂತೆ, ಎಚ್ಚರದಿಂದ ಅಲುಗಿನ ಮೇಲೆ ನಡೆದು ಸಾಗಿದಂತಿದೆ. ಇಂತಹ ಜೀವನ ಪಥ ಅನುಕರಣೀಯ. ಇಂತಹ ಆತ್ಮಕತೆಗಳು ಕನ್ನಡದಲ್ಲಿ ಅಪರೂಪ.

ರಾಮಕೃಷ್ಣರಾವ್ ಅವರ ’ರಾಮನ್, ದ ನ್ಯಾಚುರಲ್ ಫಿಲಾಸಪರ್’ ಸಾಕ್ಷಚಿತ್ರ., ಸರ್ ಸಿ.ವಿ.ರಾಮನ್‌ರನ್ನು ಕಂಡು ಅನುಭವಿಸಿದ ಸುಖ, ಅವರ ಪ್ರಯೋಗಾಲಯದ ಅನುಭವಗಳು ಭೌತಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅವರ ರನ್ನಿಂಗ್ ಥ್ರೂ ದ ಸಿಸ್ಟಮ್ – ಪಠ್ಯೇತರ ಇಂಗ್ಲೀಷ್ ಪುಸ್ತಕ, ’ಕಲಾಂ ಮೇಷ್ಟು’ ಕನ್ನಡ ಪುಸ್ತಕ ಹಾಗೂ ಎಚ್.ಆರ್.ಆರ್.ಆರ್. ಅವರ ವಂಶಸ್ಥರಾದ ರಾಮಣ್ಣಯ್ಯ ತಾಳೆ ಲಿಪಿ ಮಾಡಿದ್ದ ’ಕರ್ಣಾಟಕ ಭಾಗವತ’, ಕೃತಿಗಳು ಉತ್ತಮ ಸಾಹಿತ್ಯ ಕೊಡುಗೆಗಳಾಗಿವೆ.

ಈ ಆತ್ಮಕತೆಯಲ್ಲಿ ಅವರ ಸಂದರ್ಶನ, ಅಪರೂಪದ ಪೋಟೋಗಳು ಇದ್ದು ಅವರ ನಡೆಯ ಖಚಿತತೆಗೆ ಸಾಕ್ಷಿಯಾತಿಗಿವೆ. ಕನ್ನಡ ಜನರ ಮನಸ್ಸಿನಿಂದ ಸುಲಭವಾಗಿ ಮರೆತು ಹೋಗಬಹುದಾಗಿದ್ದ ಎಚ್.ಆರ್.ಆರ್. ಎಂಬ ಓರ್ವ ಬೌದ್ಧಿಕ ಪರಿಣತನ, ಸಾಹಸಿಯುವಕನ, ಮಾಗಿದ ಪ್ರಾಧ್ಯಾಪಕನ ಜೀವನಾನುಭವ ಸಾರವನ್ನು ಪ್ರಕಟಿಸಿ ಉದಯಭಾನು ಕಲಾಸಂಘ ತುಂಬಾ ಉಪಯುಕ್ತ ಕೆಲಸ ಮಾಡಿದೆ.

ಈ ಆತ್ಮಕಥೆಯನ್ನು ತುಂಬಾ ನವಿರಾದ ಭಾಷೆಯಲ್ಲಿ ನಿರೂಪಿಸಿರುವ ಕಲ್ಗುಂಡಿ ನವೀನ್ ಕೂಡ ಅಭಿನಂದನೀಯ.

ಕೃತಿ : ಅಂಬಿಗಾ! ದಡ ಹಾಯಿಸು….
(ಭೌತ ವಿಜ್ಞಾನದ ಪಾಧ್ಯಾಪಕರಾದ ಎಚ್.ಆರ್. ರಾಮಕೃಷ್ಣ ರಾವ್ ಅವರ ಆತ್ಮಕಥೆ)
ನಿರೂಪಣೆ : ಕಲ್ಗುಂಡಿ ನವೀನ್
ಪುಟಗಳು : 216
ಬೆಲೆ : ರೂ.200/-
ಪ್ರಕಟಣೆ : ಉದಯಭಾನು ಕಲಾಸಂಘ, ಬೆಂಗಳೂರು.

ಡಾ. ಜಿ. ಕೃಷ್ಣಪ್ಪ

ಡಾ. ಜಿ. ಕೃಷ್ಣಪ್ಪ
’ಬೇಂದ್ರೆ’ ಕೃಷ್ಣಪ್ಪ ಎಂದೇ ಜನಪ್ರಿಯರಾಗಿ, ಬೇಂದ್ರೆ ಮತ್ತು ಕುವೆಂಪು ಸಾಹಿತ್ಯದ ಪರಿಚಾರಕಾರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ’ಹಾಡು ಹಕ್ಕಿ ಅಂಬಿಕಾತನಯದತ್ತ’, ’ನಾಕುತಂತಿ-ಒಂದು ಟಿಪ್ಪಣಿ’, ’ಹಸಿರು ಹಚ್ಚಿ ಚುಚ್ಚಿ’, ’ಶ್ರೀ ರಾಮಾಯಣದರ್ಶನಂ ಪಾತ್ರಗಳ ಕಥಾವಳಿ’, ’ಬೇಂದ್ರೆ ಕಾವ್ಯ: ಪದನಿರುಕ್ತ’ ಕೃಷ್ಣಪ್ಪನವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...