Homeಕವನಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ .......

ಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ …….

- Advertisement -
- Advertisement -

ಕತ್ತಲಾಗಿದೆ ಜಗವು
ಜ್ಞಾನದ ದೀವಿಗೆ ಹಿಡಿದು
ಮತ್ತೆ ಹುಟ್ಟಿ ಬಾ
ಅಣ್ಷ ಬಸವಣ್ಣ

ಅಕ್ಷಯ ತೃತೀಯ ಗಳಿಗೆ,
ಒಳ್ಳೆಯ ಗಳಿಗೆಯಾದುದೇ
ನಿನ್ನ ಜನನದಿಂದ,
ಈ ಮಿತಿಗೆ ಮಾಡುವ
ಕಾರ್ಯ ಶುಭವೆಂದು
ಬಡಿದಾಡುವ ಜನ,
ನಿನ್ನ ತತ್ವಗಳನೆಲ್ಲಾ
ಗಾಳಿಗೆ ತೂರಿಹರು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಇಂದೊಂದು ದಿನ
ಸರಕಾರಿ ರಜೆ ಘೋಷಿಸಿ,
ನಿನ್ನ ಪಟಕೊಂದು
ಹೂವಿನ ಹಾರ ಹಾಕಿ,
ತರಾತುರಿಯ ಮೆರವಣಿಗೆಯಲಿ
ನಿನ್ನ ನೆಡೆದಾಡಿಸಿ,
ಬಾಯ್ತುಂಬಾ
ನಿನ್ನ ಹೊಗಳಿ ಉಂಡು
ಮಲಗುವವರಿಗೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಸಭೆ-ಸಮಾರಂಭಗಳ
ವೇದಿಕೆಯಲಿ,
ಸಹಸ್ರಾರು ಜನರೆದುರಿಗೆ,
ಕಂಠಪಾಠ ಮಾಡಿದ
ನಾಲ್ಕು ವಚನಗಳ ವಾಚಿಸಿ,
ಮರಳಿ ಮಣ್ಣು ತಿನ್ನುವ
ಕೆಲಸ ಮಾಡುವವರ
ಕೆಲ ಜನರಿಗೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ನೀನೇ ಒಂದು ಧರ್ಮ
ನಿನ್ನ ಹೆಸರಿನಾ
ಧರ್ಮದಾ ನೆರಳಿನಲಿ,
ಅಧರ್ಮ ಮಾಡುವಾ
ಕೆಲವು ಕದನಗಳು
ಹಗಲಿರುಳು ನೆಡೆಯುತ್ತಿವೆ,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಆಚರಣೆ ಯಾವುದಾದರೇನು,
ವಿಚಾರ ವಿಲ್ಲದೇ ಫಲವೇನು,
ಮೌಢ್ಯಗಳ ದಿಕ್ಕರಿಸಿದ
ಎಲ್ಲರ ಭಾವಗಳ ಭಕುತಿಗೆ
ಮುಕುಟವಿಟ್ಟ ,
ನಿನ್ಮ ಭಾವಕೆ ಬೆಂಕಿ ಹಚ್ಚುವ
ಜನರಿಹರು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ನುಡಿ-ನೆಡೆಯ ಹೆಜ್ಜೆಗಳಾ
ಗುರುತು,
ನಿನ್ನ ವಚನದಾ ಗುಟ್ಟು,
ವಚನ ವಾಚನವ
ಮಾಡುವವರೆಲ್ಲರೂ,
ಪಾಲಿಸುವರಾ ಎಂದು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಮಾಧ್ಯಮಗಳ ಬರಾಟೆಯಿಲ್ಲ,
ಸಾಮಾಜಿಕ ಜಾಲತಾಣದಾ
ಅಬ್ಬರವಿಲ್ಲ,
ಮೈಕು- ಮೋಟಾರು ಗಾಡಿಗಳ
ಗಲಾಟೆಯಿಲ್ಲದೇ,
ಹೇಗೆ ಸೇರಿಸಿದೆ ಎಣಕೆಯಿಲ್ಲದಾ
ಶರಣ ಗಣಗಳನು,
ಅದರ ಗುಟ್ಟು,

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

ಜಾತಿ-ಧರ್ಮಗಳ ದೊಂಬಿಯಲಿ
ನಿತ್ಯವೂ ಮಾರಣ ಹೋಮ,
ಅಧಿಕಾರದಾ ಹಪಹಪಿಗೆ
ಅಂಧಕಾರ ಮಾಡಿಹರು ನಾಡನ್ನು,
ಅರಿವಿನಾ ದೀವಿಗೆ ಹಿಡಿದು
ನಮ್ಮನ್ನು ರಕ್ಷಿಸಿ,
ಫಾತುಕರ ಮನಕೆ

ತಿಳಿಹೇಳಲು
ಮತ್ತೆ ಹುಟ್ಟಿ ಬಾ
ಅಣ್ಣ ಬಸವಣ್ಣ……

  • ಶೈಲಜಾ ಹಿರೇಮಠ, ಗಂಗಾವತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...