Homeಮುಖಪುಟಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

ಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

- Advertisement -
- Advertisement -

ಸಾಮಾನ್ಯ ಭಾರತೀಯನಿಗಿಂತ ಹೆಚ್ಚು ಎತ್ತರದಾಗ ತೇಲಾಡೋ ಹೀರೋ ಅಮಿತಾಬ ಬಚ್ಚನ ಅವರು ʻಹಮ್ʼ (ನಾವು) ಅಂತ ಒಂದು ಪಿಚ್ಚರು ಮಾಡಿದ್ದರು. ಅದರಾಗ ಒಂದು ಡಯಲಾಗು ಇತ್ತು. ʻʻʻದೇಖೋ ಗೊನಸಾಲ್ವಿಸ್. ಇಸ್ ದುನಿಯಾ ಮೆ ದೊ ತರಹ ಕಾ ಕೀಡಾ ಹೋತಾ ಹೈ,ʼʼ ಅಂತ ಶುರು ಆಗುವ ಆ ಮಾತು ಬಹಳ ಜನಪ್ರಿಯವಾಗಿತ್ತು.

ʻʻಎಕ್ ವೊ ಜೊ ಕಚರೇ ಸೆ ಉಠತಾ ಹೈ. ದೂಸರಾ ಪಾಪ ಕಿ ಗಂದಗೀ ಸೆ ಉಠತಾ ಹೈ. ಕಚರೇ ಕಾ ಕೀಡಾ ಇನ್ಸಾನ ಕೋ ಬೀಮಾರ ಕರತಾ ಹೈ. ಲೆಕಿನ್ ಪಾಪ ಕಿ ಗಂದಗೀ ಸೆ ನಿಕಲನೆ ವಾಲಾ ಕೀಡಾ ಪೂರೆ ಸಮಾಜ ಕೊ ಬೀಮಾರ ಕರತಾ ಹೈ. ಕಚರೇ ಕಾ ಕೀಡಾ ಮಾರನೆ ಕೆ ಲಿಯೆ ಫ್ಲಿಟ್ ಬಾಜಾರ್ ಮೆ ಮಿಲತಾ ಹೈ. ಲೆಕಿನ ಪಾಪ ಕಿ ಗಂದಗೀ ಕಾ ಕೀಡಾ ಮಾರನೆ ಕೆ ಲಿಯೆ ಸಾಲಾ ಫ್ಲಿಟ್ ಅಭೀ ತಕ ಬನಾ ನಹೀಂʼʼ ಸಮಾಜದಲ್ಲಿರುವುದು ಎರಡು ರೀತಿಯ ಕ್ರಿಮಿ. ಒಂದು ಕಸದಿಂದ ಬರುವುದು, ಇನ್ನೊಂದು ಪಾಪದಿಂದ ಹುಟ್ಟುವುದು. ಮೊದಲನೆಯದರಿಂದ ಮನುಷ್ಯರಿಗೆ ರೋಗ ಬಂದರೆ ಎರಡನೇಯದರಿಂದ ಇಡೀ ಸಮಾಜಕ್ಕೆ ರೋಗ ಬರತದೆ. ಒಂದನೇಯದಕ್ಕೆ ಔಷಧಿ ಇದೆ. ಇನ್ನೊಂದಕ್ಕಿಲ್ಲ,ʼʼ ಅಂತ.

 

ಇವತ್ತು ನಮ್ಮೆದುರಿಗೆ ಇರುವುದು ಸಹ ಎರಡು – ಕೊರೋನಾ ಕ್ರಿಮಿ ಮತ್ತು ಕೋಮು ಕ್ರಿಮಿ. ಕೊರೋನಾ ರೋಗಿಷ್ಟರ ಕೆಮ್ಮು – ಕಫಾದಾಗ ಇದ್ದರ. ಎರಡನೇದು ಠೀವಿ ಗೂಟಗಳ (ಟೀವಿ ಆಂಕರುಗಳ) ಒದರಿಕೆಯಿಂದ ಬರತೇತಿ. ಕೊರೋನಾ ಬರಾಕ ನೀವು ರೋಗಿ ಎದರಿಗೆ ಇರಬೇಕು. ಎರಡನೇದು ಬರಾಕ ನಿಮ್ಮ ಮನ್ಯಾಗ ಠೀವಿ ಇದ್ದರ ಸಾಕು. ನೀವು ಅದರ ಎದರಿಗೆ ಇರಬೇಕು ಅಂತ ಏನಿಲ್ಲ.


ಇದನ್ನೂ ಓದಿ: ಆನಿ ಬಂದವು ಆನಿ ಎರಡೆರಡು ಆನಿ – ಒಂದು ಅಂಬಾನಿ, ಇನ್ನೊಂದು ಅಡಾನಿ


ಇಂತ ದುರಿತ ಕಾಲದಾಗ ಅವರ ಕೆಲಸ ಏನಪಾ ಅಂದರ ಜನರ ಅಂಜಿಕಿ ಕಮ್ಮಿ ಮಾಡೋದು. ಆದರ ಅವರು ಏನು ಮಾಡಾಕ ಹತ್ಯಾರು ಅಂದರ ಜನರ ಅಂಜಿಕಿ ಜಾಸ್ತಿ ಮಾಡಾಕ ಹತ್ಯಾರು. ಹೆದರಿದವರ ಮ್ಯಾಗ ಹಲ್ಲಿ ಒಗದಿದ್ದರು ಅಂದಂಗ ಇಲ್ಲದ್ದು – ಬಿಟ್ಟದ್ದು ಎಲ್ಲಾ ಹುಡಿಕಿ ಹುಡಿಕಿ ಮಂದೀಗೆ ಹೆದರಸಾಕ ಹತ್ಯಾರು.

ಅವರು ರೋಗದ ಬಗ್ಗೆ- ವೈರಸ್ಸ ಬಗ್ಗೆ ತಪ್ಪು ಮಾಹಿತಿ ಕೊಡತಾರು. ಮತ್ತ ಆ ನೆವದಿಂದ ಜನಾಂಗೀಯ ದ್ವೇಷ ಹುಟ್ಟಸಾಕ- ಹೆಚ್ಚು ಮಾಡಾಕ ಕುಂತಾರು.

ನಮ್ಮ ಒಳಗ ಇದ್ದಿರಬಹುದಾದ ದ್ವೇಷ ಹೊಡದ ಎಬ್ಬಸಾಕ ಹತ್ಯಾರು. ಅವರಿಗೆ ಏನು ಗೊತ್ತಿಲ್ಲಾ ಅಂದರ ಒಂದ ಸಲಾ ಇದು ಸುರು ಆತಂದರ ಅದನ್ನ ನಿಲ್ಲಸಾಕ ಆಗಂಗಿಲ್ಲ. ಅದಕ್ಕ ದಿನಾ ಸಂಜೀಕೆ ನರಬಲಿ ಕೊಡಬೇಕು. ಕಡೀಕೆ ಅದು ಫ್ರಾಂಕೆನ್ ಸ್ಟೈನ್ ರಾಕ್ಷಸನ ಗತೆ, ತಮ್ಮ ಸೃಷ್ಟಿ ಮಾಡಿದವರನ್ನ ತಿಂದು ಬಿಡತೇತಿ.

ಹದಿನೈದನೇ ಶತಮಾನದ ಸಂತ ನಾರ್ಸಿ ಮೆಹತಾ ಅವರ ಭಜನೆಯ ಆಶಯದಂತೆ ಆ ಭಗವಂತ ನಮಗೂ ಅವರಿಗೂ, ಸಬಕೋ ಸನ್ಮತಿ ಕೊಡಲಿ.

ಈ ಕೀಲಿ ಕಿಟಕ್ಕಿನ್ಯಾಗ ಎಲ್ಲಾರೂ ಪಿಚ್ಚರು ನೋಡಾಕ ಹತ್ಯಾರು. ನೀವು ಸಹಿತ ʻಇಂಗೋಮಾನ್ಷಯಾʼ (ಸಿಹಿ ಕನಸು) ಅನ್ನುವ ಒಂದು ಸಾಕ್ಷ ಚಿತ್ರ ಸಿಕ್ಕರೆ ನೋಡ್ರಿ. ಅದು ರುವಾಂಡ ದೇಶದಲ್ಲಿ 1994 ರಾಗ ನಡೆದ ನರಮೇಧದ ನಂತರ ಹುಟು ಮತ್ತು ಟುಟ್ಸಿ ಎಂಬ ವಿರೋಧಿ ಜನಾಂಗೀಯ ಗುಂಪುಗಳ ಹೆಣ್ಣು ಮಕ್ಕಳು ಕೂಡಿ ಒಂದು ಡೊಳ್ಳು ಕುಣಿತದ ತಂಡ ಹಾಗೂ ಒಂದು ಐಸ್ ಕ್ರೀಮು ಅಂಗಡಿ ಹಾಕಿ ಒಗ್ಗಟ್ಟು ಸಾರಿದ್ದರ ಬಗ್ಗೆ ಐತಿ. ಅದನ್ನ ಮಾಡಾಕ ಕೀಕೀ ಅನ್ನೋ ಪಾಪ್ ಹಾಡುಗಾರ್ತಿ ಅವರಿಗೆ ಹುರಿದುಂಬಸತಾಳು.

ಇದರ ಹಿನ್ನೆಲೆ ಎನಂದರ 1994 ಬೇಸಿಗೆಯೊಳಗ ಮಧ್ಯ ಆಫ್ರಿಕಾದ ಸಣ್ಣ ದೇಶ ರುವಾಂಡದಾಗ ಹುಟು ಹಾಗೂ ಟುಟ್ಸಿ ಅವರ ನಡುವೆ ಜನಾಂಗೀಯ ಕದನ ನಡೀತು. ಬಹುಸಂಖ್ಯಾತ ಹುಟುರವರಲ್ಲಿನ ಉಗ್ರವಾದಿಗಳು ಅಲ್ಪ ಸಂಖ್ಯಾತ ಟುಟ್ಸಿ ಹಾಗೂ ಸೌಮ್ಯವಾದಿ ಹುಟು ಜನರನ್ನ ಕೊಂದರು. ಅಸಂಖ್ಯ ಜನ ಸತ್ತರು, ಎಷ್ಟೋ ಜನ ನಾಪತ್ತೆಯಾದರು, ಹಲವರು ವಿದೇಶಗಳಿಗೆ ಓಡಿ ಹೋದರು.


ಇದನ್ನೂ ಓದಿ:  ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?


ನಿನ್ನೆ ಮೊನ್ನೆ ನೆರೆಹೊರೆಯವರಾಗಿದ್ದ ಜನರನ್ನ ರಕ್ತ ಪಿಪಾಸುಗಳಾಗುವಂತೆ ಮಾಡಿದ್ದು ಯಾರಂದರ ರುವಾಂಡ ರೇಡಿಯೋದ ಪತ್ರಕರ್ತರು. ʻಟುಟ್ಸಿಗಳು ವಿಷದ ಹಾವು – ಚೇಳು- ಜಿರಲೆ. ಅವರನ್ನು ಕೊಲ್ಲಿರಿ. ದೇವರು ನಿಮಗೆ ಶಹಬ್ಬಾಸು ಗಿರಿ ಕೊಡತಾನೆ. ಚಿಕ್ಕ ಮಕ್ಕಳು ಅಂತ ಬಿಡಬೇಡಿ, ಹಾವುಗಳಲ್ಲಿ ಹುಟ್ಟಿನಿಂದ ವಿಷ ತುಂಬಿರತದೆʼ ಅಂತ ಇಪ್ಪತ್ನಾಕು ತಾಸು ಪ್ರಸಾರ ಮಾಡಿದರು.

ಆರು ವರ್ಷಗಳ ಹಿಂಸೆ- ಕ್ಷಾಮ- ದುರಾಡಳಿತದ ನಂತರ ಚುನಾವಣೆಯಾಗಿ ರುವಾಂಡದಾಗ ಶಾಂತಿ ಪ್ರಿಯ ಸರಕಾರ ಬಂತು. ಈಗ ಆಫ್ರಿಕಾ ಖಂಡದ 54 ದೇಶಗಳೊಳಗ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ರವಾಂಡ. ಟುಟ್ಸಿ ರಾಜಮನೆತನಕ್ಕ ಸೇರಿದ ಅದರ ಅಧ್ಯಕ್ಷ ಪಾಲ ಕಗಾಮೆ ಎಲ್ಲಾ ಜನಾಂಗಗಳನ್ನು ಜೊತೆಯಲ್ಲಿ ಸೇರಿಸಿ ಕರೆದುಕೊಂಡು ಹೋಗುವ ಮಾತಾಡತಾನು. ಅಲ್ಲಿನ ಸಂಸತ್ತಿನಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆದಾಗ ಅದಾರು. ಅರಣ್ಯ – ವನ್ಯಜೀವಿ ರಕ್ಷಣೆ ಛಲೋ ಮಾಡತಾರು ಅಂತ ಹೇಳಿ ಅವರಿಗೆ ಪ್ರಶಸ್ತಿ ಕೊಟ್ಟೇತಿ. ರೇಡಿಯೋ ರವಾಂಡಾದ ಕೆಲವು (ಅನೌನ್ಸರು) ಕಿರಚಾಟಿಗಳ ಮ್ಯಾಲೆ ಮೊಕದ್ದಮೆ ನಡದು ಜೈಲಿಗೆ ಹೋಗ್ಯಾರು. ಅದರಾಗಿನ ಕಾರ್ಯಕ್ರಮದ ಗುಣಮಟ್ಟ ಬ್ಯಾರೆ ಈಗ ಆಗೇತಿ.

ನಮ್ಮ ಮಾಧ್ಯಮಗಳು ಈ ಭೂಮಿಯನ್ನ ಸ್ವರ್ಗ ಮಾಡೋದು ಹೋಗಲಿ. ನರಕಾ ಅಂತೂ ಮಾಡಬಾರದು ಅಂತ ಹೇಳಿ ರಘುಪತಿ ರಾಘವನಲ್ಲೆ ಪ್ರಾರ್ಥನೆ ಮಾಡೋಣು. ಅದರಕಿಂತಾ ಮೊದಲಿಗೆ ಠೀವಿ ಬಂದು ಮಾಡೋಣು, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ವಿಡಿಯೊ ನೋಡಿ: ಕೊರೊನಾಗೆ ಚಿಕಿತ್ಸೆ ಏನು? ವ್ಯಾಕ್ಸೀನ್‌ ತಯಾರಿ ಎಲ್ಲಿಯವರೆಗೆ ಬಂದಿದೆ? ಅಂತಿಮ ಪರಿಹಾರ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...