Homeಮುಖಪುಟಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

ಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

- Advertisement -
- Advertisement -

ಸಾಮಾನ್ಯ ಭಾರತೀಯನಿಗಿಂತ ಹೆಚ್ಚು ಎತ್ತರದಾಗ ತೇಲಾಡೋ ಹೀರೋ ಅಮಿತಾಬ ಬಚ್ಚನ ಅವರು ʻಹಮ್ʼ (ನಾವು) ಅಂತ ಒಂದು ಪಿಚ್ಚರು ಮಾಡಿದ್ದರು. ಅದರಾಗ ಒಂದು ಡಯಲಾಗು ಇತ್ತು. ʻʻʻದೇಖೋ ಗೊನಸಾಲ್ವಿಸ್. ಇಸ್ ದುನಿಯಾ ಮೆ ದೊ ತರಹ ಕಾ ಕೀಡಾ ಹೋತಾ ಹೈ,ʼʼ ಅಂತ ಶುರು ಆಗುವ ಆ ಮಾತು ಬಹಳ ಜನಪ್ರಿಯವಾಗಿತ್ತು.

ʻʻಎಕ್ ವೊ ಜೊ ಕಚರೇ ಸೆ ಉಠತಾ ಹೈ. ದೂಸರಾ ಪಾಪ ಕಿ ಗಂದಗೀ ಸೆ ಉಠತಾ ಹೈ. ಕಚರೇ ಕಾ ಕೀಡಾ ಇನ್ಸಾನ ಕೋ ಬೀಮಾರ ಕರತಾ ಹೈ. ಲೆಕಿನ್ ಪಾಪ ಕಿ ಗಂದಗೀ ಸೆ ನಿಕಲನೆ ವಾಲಾ ಕೀಡಾ ಪೂರೆ ಸಮಾಜ ಕೊ ಬೀಮಾರ ಕರತಾ ಹೈ. ಕಚರೇ ಕಾ ಕೀಡಾ ಮಾರನೆ ಕೆ ಲಿಯೆ ಫ್ಲಿಟ್ ಬಾಜಾರ್ ಮೆ ಮಿಲತಾ ಹೈ. ಲೆಕಿನ ಪಾಪ ಕಿ ಗಂದಗೀ ಕಾ ಕೀಡಾ ಮಾರನೆ ಕೆ ಲಿಯೆ ಸಾಲಾ ಫ್ಲಿಟ್ ಅಭೀ ತಕ ಬನಾ ನಹೀಂʼʼ ಸಮಾಜದಲ್ಲಿರುವುದು ಎರಡು ರೀತಿಯ ಕ್ರಿಮಿ. ಒಂದು ಕಸದಿಂದ ಬರುವುದು, ಇನ್ನೊಂದು ಪಾಪದಿಂದ ಹುಟ್ಟುವುದು. ಮೊದಲನೆಯದರಿಂದ ಮನುಷ್ಯರಿಗೆ ರೋಗ ಬಂದರೆ ಎರಡನೇಯದರಿಂದ ಇಡೀ ಸಮಾಜಕ್ಕೆ ರೋಗ ಬರತದೆ. ಒಂದನೇಯದಕ್ಕೆ ಔಷಧಿ ಇದೆ. ಇನ್ನೊಂದಕ್ಕಿಲ್ಲ,ʼʼ ಅಂತ.

 

ಇವತ್ತು ನಮ್ಮೆದುರಿಗೆ ಇರುವುದು ಸಹ ಎರಡು – ಕೊರೋನಾ ಕ್ರಿಮಿ ಮತ್ತು ಕೋಮು ಕ್ರಿಮಿ. ಕೊರೋನಾ ರೋಗಿಷ್ಟರ ಕೆಮ್ಮು – ಕಫಾದಾಗ ಇದ್ದರ. ಎರಡನೇದು ಠೀವಿ ಗೂಟಗಳ (ಟೀವಿ ಆಂಕರುಗಳ) ಒದರಿಕೆಯಿಂದ ಬರತೇತಿ. ಕೊರೋನಾ ಬರಾಕ ನೀವು ರೋಗಿ ಎದರಿಗೆ ಇರಬೇಕು. ಎರಡನೇದು ಬರಾಕ ನಿಮ್ಮ ಮನ್ಯಾಗ ಠೀವಿ ಇದ್ದರ ಸಾಕು. ನೀವು ಅದರ ಎದರಿಗೆ ಇರಬೇಕು ಅಂತ ಏನಿಲ್ಲ.


ಇದನ್ನೂ ಓದಿ: ಆನಿ ಬಂದವು ಆನಿ ಎರಡೆರಡು ಆನಿ – ಒಂದು ಅಂಬಾನಿ, ಇನ್ನೊಂದು ಅಡಾನಿ


ಇಂತ ದುರಿತ ಕಾಲದಾಗ ಅವರ ಕೆಲಸ ಏನಪಾ ಅಂದರ ಜನರ ಅಂಜಿಕಿ ಕಮ್ಮಿ ಮಾಡೋದು. ಆದರ ಅವರು ಏನು ಮಾಡಾಕ ಹತ್ಯಾರು ಅಂದರ ಜನರ ಅಂಜಿಕಿ ಜಾಸ್ತಿ ಮಾಡಾಕ ಹತ್ಯಾರು. ಹೆದರಿದವರ ಮ್ಯಾಗ ಹಲ್ಲಿ ಒಗದಿದ್ದರು ಅಂದಂಗ ಇಲ್ಲದ್ದು – ಬಿಟ್ಟದ್ದು ಎಲ್ಲಾ ಹುಡಿಕಿ ಹುಡಿಕಿ ಮಂದೀಗೆ ಹೆದರಸಾಕ ಹತ್ಯಾರು.

ಅವರು ರೋಗದ ಬಗ್ಗೆ- ವೈರಸ್ಸ ಬಗ್ಗೆ ತಪ್ಪು ಮಾಹಿತಿ ಕೊಡತಾರು. ಮತ್ತ ಆ ನೆವದಿಂದ ಜನಾಂಗೀಯ ದ್ವೇಷ ಹುಟ್ಟಸಾಕ- ಹೆಚ್ಚು ಮಾಡಾಕ ಕುಂತಾರು.

ನಮ್ಮ ಒಳಗ ಇದ್ದಿರಬಹುದಾದ ದ್ವೇಷ ಹೊಡದ ಎಬ್ಬಸಾಕ ಹತ್ಯಾರು. ಅವರಿಗೆ ಏನು ಗೊತ್ತಿಲ್ಲಾ ಅಂದರ ಒಂದ ಸಲಾ ಇದು ಸುರು ಆತಂದರ ಅದನ್ನ ನಿಲ್ಲಸಾಕ ಆಗಂಗಿಲ್ಲ. ಅದಕ್ಕ ದಿನಾ ಸಂಜೀಕೆ ನರಬಲಿ ಕೊಡಬೇಕು. ಕಡೀಕೆ ಅದು ಫ್ರಾಂಕೆನ್ ಸ್ಟೈನ್ ರಾಕ್ಷಸನ ಗತೆ, ತಮ್ಮ ಸೃಷ್ಟಿ ಮಾಡಿದವರನ್ನ ತಿಂದು ಬಿಡತೇತಿ.

ಹದಿನೈದನೇ ಶತಮಾನದ ಸಂತ ನಾರ್ಸಿ ಮೆಹತಾ ಅವರ ಭಜನೆಯ ಆಶಯದಂತೆ ಆ ಭಗವಂತ ನಮಗೂ ಅವರಿಗೂ, ಸಬಕೋ ಸನ್ಮತಿ ಕೊಡಲಿ.

ಈ ಕೀಲಿ ಕಿಟಕ್ಕಿನ್ಯಾಗ ಎಲ್ಲಾರೂ ಪಿಚ್ಚರು ನೋಡಾಕ ಹತ್ಯಾರು. ನೀವು ಸಹಿತ ʻಇಂಗೋಮಾನ್ಷಯಾʼ (ಸಿಹಿ ಕನಸು) ಅನ್ನುವ ಒಂದು ಸಾಕ್ಷ ಚಿತ್ರ ಸಿಕ್ಕರೆ ನೋಡ್ರಿ. ಅದು ರುವಾಂಡ ದೇಶದಲ್ಲಿ 1994 ರಾಗ ನಡೆದ ನರಮೇಧದ ನಂತರ ಹುಟು ಮತ್ತು ಟುಟ್ಸಿ ಎಂಬ ವಿರೋಧಿ ಜನಾಂಗೀಯ ಗುಂಪುಗಳ ಹೆಣ್ಣು ಮಕ್ಕಳು ಕೂಡಿ ಒಂದು ಡೊಳ್ಳು ಕುಣಿತದ ತಂಡ ಹಾಗೂ ಒಂದು ಐಸ್ ಕ್ರೀಮು ಅಂಗಡಿ ಹಾಕಿ ಒಗ್ಗಟ್ಟು ಸಾರಿದ್ದರ ಬಗ್ಗೆ ಐತಿ. ಅದನ್ನ ಮಾಡಾಕ ಕೀಕೀ ಅನ್ನೋ ಪಾಪ್ ಹಾಡುಗಾರ್ತಿ ಅವರಿಗೆ ಹುರಿದುಂಬಸತಾಳು.

ಇದರ ಹಿನ್ನೆಲೆ ಎನಂದರ 1994 ಬೇಸಿಗೆಯೊಳಗ ಮಧ್ಯ ಆಫ್ರಿಕಾದ ಸಣ್ಣ ದೇಶ ರುವಾಂಡದಾಗ ಹುಟು ಹಾಗೂ ಟುಟ್ಸಿ ಅವರ ನಡುವೆ ಜನಾಂಗೀಯ ಕದನ ನಡೀತು. ಬಹುಸಂಖ್ಯಾತ ಹುಟುರವರಲ್ಲಿನ ಉಗ್ರವಾದಿಗಳು ಅಲ್ಪ ಸಂಖ್ಯಾತ ಟುಟ್ಸಿ ಹಾಗೂ ಸೌಮ್ಯವಾದಿ ಹುಟು ಜನರನ್ನ ಕೊಂದರು. ಅಸಂಖ್ಯ ಜನ ಸತ್ತರು, ಎಷ್ಟೋ ಜನ ನಾಪತ್ತೆಯಾದರು, ಹಲವರು ವಿದೇಶಗಳಿಗೆ ಓಡಿ ಹೋದರು.


ಇದನ್ನೂ ಓದಿ:  ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?


ನಿನ್ನೆ ಮೊನ್ನೆ ನೆರೆಹೊರೆಯವರಾಗಿದ್ದ ಜನರನ್ನ ರಕ್ತ ಪಿಪಾಸುಗಳಾಗುವಂತೆ ಮಾಡಿದ್ದು ಯಾರಂದರ ರುವಾಂಡ ರೇಡಿಯೋದ ಪತ್ರಕರ್ತರು. ʻಟುಟ್ಸಿಗಳು ವಿಷದ ಹಾವು – ಚೇಳು- ಜಿರಲೆ. ಅವರನ್ನು ಕೊಲ್ಲಿರಿ. ದೇವರು ನಿಮಗೆ ಶಹಬ್ಬಾಸು ಗಿರಿ ಕೊಡತಾನೆ. ಚಿಕ್ಕ ಮಕ್ಕಳು ಅಂತ ಬಿಡಬೇಡಿ, ಹಾವುಗಳಲ್ಲಿ ಹುಟ್ಟಿನಿಂದ ವಿಷ ತುಂಬಿರತದೆʼ ಅಂತ ಇಪ್ಪತ್ನಾಕು ತಾಸು ಪ್ರಸಾರ ಮಾಡಿದರು.

ಆರು ವರ್ಷಗಳ ಹಿಂಸೆ- ಕ್ಷಾಮ- ದುರಾಡಳಿತದ ನಂತರ ಚುನಾವಣೆಯಾಗಿ ರುವಾಂಡದಾಗ ಶಾಂತಿ ಪ್ರಿಯ ಸರಕಾರ ಬಂತು. ಈಗ ಆಫ್ರಿಕಾ ಖಂಡದ 54 ದೇಶಗಳೊಳಗ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ರವಾಂಡ. ಟುಟ್ಸಿ ರಾಜಮನೆತನಕ್ಕ ಸೇರಿದ ಅದರ ಅಧ್ಯಕ್ಷ ಪಾಲ ಕಗಾಮೆ ಎಲ್ಲಾ ಜನಾಂಗಗಳನ್ನು ಜೊತೆಯಲ್ಲಿ ಸೇರಿಸಿ ಕರೆದುಕೊಂಡು ಹೋಗುವ ಮಾತಾಡತಾನು. ಅಲ್ಲಿನ ಸಂಸತ್ತಿನಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆದಾಗ ಅದಾರು. ಅರಣ್ಯ – ವನ್ಯಜೀವಿ ರಕ್ಷಣೆ ಛಲೋ ಮಾಡತಾರು ಅಂತ ಹೇಳಿ ಅವರಿಗೆ ಪ್ರಶಸ್ತಿ ಕೊಟ್ಟೇತಿ. ರೇಡಿಯೋ ರವಾಂಡಾದ ಕೆಲವು (ಅನೌನ್ಸರು) ಕಿರಚಾಟಿಗಳ ಮ್ಯಾಲೆ ಮೊಕದ್ದಮೆ ನಡದು ಜೈಲಿಗೆ ಹೋಗ್ಯಾರು. ಅದರಾಗಿನ ಕಾರ್ಯಕ್ರಮದ ಗುಣಮಟ್ಟ ಬ್ಯಾರೆ ಈಗ ಆಗೇತಿ.

ನಮ್ಮ ಮಾಧ್ಯಮಗಳು ಈ ಭೂಮಿಯನ್ನ ಸ್ವರ್ಗ ಮಾಡೋದು ಹೋಗಲಿ. ನರಕಾ ಅಂತೂ ಮಾಡಬಾರದು ಅಂತ ಹೇಳಿ ರಘುಪತಿ ರಾಘವನಲ್ಲೆ ಪ್ರಾರ್ಥನೆ ಮಾಡೋಣು. ಅದರಕಿಂತಾ ಮೊದಲಿಗೆ ಠೀವಿ ಬಂದು ಮಾಡೋಣು, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ವಿಡಿಯೊ ನೋಡಿ: ಕೊರೊನಾಗೆ ಚಿಕಿತ್ಸೆ ಏನು? ವ್ಯಾಕ್ಸೀನ್‌ ತಯಾರಿ ಎಲ್ಲಿಯವರೆಗೆ ಬಂದಿದೆ? ಅಂತಿಮ ಪರಿಹಾರ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...