Homeಡೇಟಾ ಖೋಲಿಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

ಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

- Advertisement -
- Advertisement -

ʻʻಕವಿ ಅನ್ನುವವನು ಹಕ್ಕಿ ಇದ್ದಂಗಿರಬೇಕು, ಅವ ಕಾಣಬಾರದು ಆದರ ಅವನ ದನಿ ಕೇಳಸಬೇಕು,ʼʼ ಅಂತ ಮೊನ್ನೆ ತೀರಿಹೋದ ಹಿರಿಯ ಕಲಾವಿದ- ಕವಿ ಚಂದ್ರಕಾಂತ ಕುಸನೂರ ಹೇಳತಿದ್ದರು. ಆ ಮಾತಿಗೆ ತಕ್ಕಂತೆ ಇರುವ ಭಾರತದ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ ಅವರು ಮೊನ್ನೆ ಒಂದು ಮುತ್ತಿನಂಥ ಮಾತು ಹೇಳ್ಯಾರ.

ʻಕೀಲಿ ಕಿಟಕ್ (ಲಾಕು ಡೌನು) ಅನ್ನುವುದು ನಮ್ಮ ದೇಶಕ್ಕೆ ಸಾಮಾಜಿಕ ಲಸಿಕೆ ಇದ್ದಂತೆ. ದೇಹಾರೋಗ್ಯಕ್ಕೆ ರಸಾಯನಿಕ ಲಸಿಕೆ ಬೇಕಾದರೆ ಸಮಾಜದ ಆರೋಗ್ಯಕ್ಕೆ ಈ ಲಸಿಕೆ ಬೇಕುʼ ಅಂತ.

ಇದು ಹೌದಾ? ಖರೇನ? ಹೌದು ಅಂತಾದರ ಸರಕಾರದ ಉದ್ದೇಶ ಅರ ಏನು? ಈ ಕೀಲಿ ಕಿಟಕ್ ಟೈಂದಾಗ ಅವರು ಏನು ಮಾಡ್ಯಾರ? ಮುಂದ ಏನು ಮಾಡಬೇಕಂತ ಯೋಜನೆ ಇಟಗೊಂಡಾರ? ಅದರ ತಯಾರಿ ಏನು ನಡದದ? ರಸ್ತೆ ಮ್ಯಾಲೆ ತೊಡರು ಪಟ್ಟಿ ಹಾಕೋದು, ಯಾರರ ಬಡವರು ಹೊಂಟರ ಅವರಿಗೆ ಬಡದು ಎಲಬು ಮುರಿಯೋದು, ಸಾಹುಕಾರರ ಹೊಂಟರ ಕಿಸಿ ಕಿಸಿ ನಗೋದು, ಪುಢಾರಿ ಹೊಂಟರ ಸೆಲ್ಯೂಟು ಹೊಡೆಯೋದು ಇವಿಷ್ಟ ಮಾಡಬೇಕು ಅಂತ ಪೊಲಿಸರು ತಿಳಕೊಂಡಾರ.

ನಾವು ಏನಾದರೂ ಮಾಡಿದಂಗ ತೋರಸಬೇಕು ಅಂತ ಹೇಳಿ ನಗರಸಭೆಯವರು ಎಲ್ಲಿ ಬೇಕಲ್ಲಿ ಫಿನಾಯಿಲು- ನೀರು ಹೊಡೀಲಿಕ್ಕೆ ಹತ್ಯಾರ.

ಖಾಸಗಿ ಡಾಕ್ಟರು ಹೆದರಿಕೊಂಡು ಮನ್ಯಾಗ ಕೂತಾರ, ಸರಕಾರಿ ಡಾಕ್ಟರು (ಪಿಪಿಈ) ವೈಯಕ್ತಿಕ ಸಂರಕ್ಷಣೆ ಸಲಕರಣೆ ಇಲ್ಲದನ ದುಡೀಲಿಕ್ಕೆ ಹತ್ಯಾರ. ಐಎಎಸ್ಸು ಅಧಿಕಾರಿ ಇದು ಇನ್ನೂ ಎಲ್ -ಟೂ ಎರಡನೇ ಮಟ್ಟ. ಇನ್ನೂ ಮೂರು ಮಟ್ಟ ಅದಾವು ಇದು ಮುಗಿಲಾಕ. ಅವು ಮುಗಿಯೋದರಾಗ ನಾವರ ಅದನ್ನ ಮಟ್ಟ ಹಾಕಬೇಕು, ಅಥವಾ ಆದರ ನಮ್ಮನ್ನ ಮಟ್ಟ ಹಾಕಬೇಕು, ಅಂತ ಸಿಗರೇಟು ಸೇದಿಕೊಂತ ಸ್ವಗತದ ಹಂಗ ಮಾತಾಡಾಕ ಹತ್ಯಾರು. ಎಂದಿನಂತೆ `ಒಳ್ಳೇದಾದರ ನಾ ಮಾಡೇನಿ, ಕೆಟ್ಟಾದಾದರ ನನಗ ಸಂಬಂಧನ ಇಲ್ಲ’ ಅಂತ ರಾಜಕಾರಣಿಗಳು ಗುಮ್ಮನ ಗುಸಗನಂಗ ಕೂತಾರ.

ಸತ್ಯ ಅನ್ನೋದು ಮಾತ್ರ ಇವೆಲ್ಲದರ ನಡುವ ಐತಿ.

ಈ ಎಲ್ ಟೂ ಅಂದರೇನು? ಎಲ್ ಒನ್ ಅಂದರ ವಿದೇಶದಿಂದ ಬಂದವರು ರೋಗ ಹರಡೋದು. ಎಲ್ ಟೂ ಅಂದರ ಅವರ ಸಂಪರ್ಕಕ್ಕ ಬಂದವರು ಹರಡೋದು. ಎಲ್ ಥ್ರೀ ಅಂದರ ಸೋಂಕು ಎಲ್ಲಿಂದ ಬಂದದ ಅನ್ನೋದು ಗೊತ್ತಾಗಲಾರದ ಹಂಗ ಇರೋದು. ಎಲ್ ಫೋರು ಅಂದರ ಭಾಳ ಜನರಿಗೆ ಬರೋ ಅಂಟು ರೋಗ. ಎಲ್ ಫೈವ್ ಅಂದರ ಒಂದು ದೇಶ/ ಸಮಾಜ/ ರಾಜ್ಯದಾಗ ಸರಿ ಸುಮಾರು ಎಲ್ಲರಲ್ಲೂ ಇರೋ ರೋಗ.

ಈ ಲೆವಲ್ಲುಗಳನ್ನು ಹೆಂಗ ಗುರತು ಮಾಡ್ಯಾರ ಅನ್ನೋದು ತಿಳಕೊಂಡರ ನಮ್ಮ ಸರಕಾರದ ಲೆವಲ್ಲು ತಿಳೀತದ. ಮೊದಲಿಗೆ ವಿದೇಶ ಪ್ರವಾಸಿಗರ ಲೆಕ್ಕ ನೋಡರಿ. ಜನವರಿ ಒಂದರಿಂದ ಮಾರ್ಚು 23 ರ ತನಕಾ ಸುಮಾರು 15 ಲಕ್ಷ ಮಂದಿ ಭಾರತಕ್ಕ ಬ್ಯಾರ ಬ್ಯಾರೆ ದೇಶದಿಂದಾ ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳ್ಯಾರ. ಇವರಿಗೆ ಎಲ್ಲಾರಿಗೂ ಕೊರೊನಾ ಟೆಸ್ಟು ಮಾಡೀರೇನು? ಭಾರತದಾಗ ಇಲ್ಲೀ ತನಕಾ ಇದ್ದವರು, ಹೋದವರು ಬಂದವರು ಎಲ್ಲಾ ಸೇರಿ ಬರೇ ನಾಲ್ಕು ಲಕ್ಷ ಟೆಸ್ಟು ಮಾಡ್ಯಾರ ಅಂದ ಮ್ಯಾಲೆ ಇದರ ಹಕೀಕತ್ತು ಗೊತ್ತಾಗತದ.

ಅವರೆಲ್ಲಾರೂ ಗೃಹ ಬಂಧನದಾಗ ಇರಬೇಕು ಅಂತ ಒಂದು ಕಾಯಿದೆ ಮಾಡಿದರು. ಆದರ ಅವರ ಪರೀಕ್ಷೆ ಮಾಡಲಿಲ್ಲ. ಇದು ಒಂದೀಟು ನೆನಪ ಇಟಗೋರಿ.

ಇನ್ನ ಎಲ್ ಟೂ. ಈ ರೋಗ ಈಟ ಭಯಂಕರ ಐತಿ ಅಂತ ಯಾವಾನಿಗೂ ಗೊತ್ತಿರಾಕಿಲ್ಲ. ಇದನ್ನ ಹೆಂಗ ಬಗೀ ಹರಸಬೇಕು ಅಂತ ಸರಕಾರಕ್ಕ ಹೊಳೀಲಿಲ್ಲ.

ಆವಾಗ ಅವರ ಕೈಗೆ ಸಿಕ್ಕವರು ತಬಲೀಘಿ ಜಮಾತಿನವರು. ಅವರು ಸುಮಾರು ಮೂರು ಸಾವಿರ ಜನ ದೆಹಲಿ ನಿಜಾಮುದ್ದೀನ ಮಸೀದಿಯೊಳಗ ಸೇರಿದ್ದರು, ಅದರಾಗ ಮಾರ್ಚು 28ರ ರಾತ್ರಿ ಪೋಲಿಸರು ಬಂದು ರೇಡು ಮಾಡಿ ಒಂದೂವರೆ ಸಾವಿರ ಜನರನ್ನ ಹೊರಗ ಹಾಕಿದರು, ಹೌದ? ಅವರನ್ನ ಅವರವರ ಊರಿಗೆ ಕಳಸದೇ ಅಲ್ಲೇ ದೆಹಲಿಯೊಳಗ ಇಟಗೊಂಡಿದ್ದರ ಅವರು ಸಾವಿರಾರು ಕಿಲೋಮೀಟರು ರೇಲ್ವೇದಾಗ ಪ್ರವಾಸ ಮಾಡೋ ನೌಬತ್ತು ಬರತಿರಲಿಲ್ಲ. ಅವರಿಂದ ಬ್ಯಾರೆದವರಿಗೆ ಸೋಂಕು ತಗಲೋ ಪರಿಸ್ಥಿತಿ ಇರತಿರಲಿಲ್ಲ.

ಈಗ ವಿದೇಶದಿಂದ ಬಂದವರು ಎಷ್ಟು ಜನರಿಗೆ ಸೋಂಕು ಹಚ್ಚಿದರು ಅಂತ ಯಾವಾನಿಗೂ ಗೊತ್ತಿಲ್ಲ. ಆದರ ದೆಹಲಿಗೆ ಹೋದವರಿಗೆ ಎಷ್ಟು ಮಂದೀಗೆ ಬಂದೇತಿ, ಅವರಿಂದ ಎಷ್ಟು ಜನರಿಗೆ ಬಂದೇತಿ ಅನ್ನೋದು ಗೊತ್ತೈತಿ. ಯಾಕಂದರ ಸರಕಾರದವರು ಇವರಿಗೆ ನಿಜಾಮುದ್ದೀನ ಪ್ರವಾಸ/ದೆಹಲಿ ಪ್ರವಾಸದಿಂದ ಬಂದಿದೆ ಅಂತ ಹೇಳತಾರ. ವಿದೇಶಿ ಪ್ರವಾಸದಿಂದ/ವಿದೇಶಕ್ಕ ಹೋದವರ ಸಂಪರ್ಕದಿಂದ ಬಂದೇತಿ ಅಂತ ಹೇಳೋದಿಲ್ಲ. ಬೆಂಗಳೂರು, ಬಾಗಲಕೋಟಿ, ಮಂಗಳೂರಿನ್ಯಾಗ ವಿದೇಶ ಸಂಚಾರಿ ಬಿಳೀ ಕಾಲರಿನ ಐಟಿ/ಬೀಟಿ ಮಂದಿಗೆನೂ ರೋಗ ಬಂದೇತಿ, ಅವರಿಂದ ಅವರ ಮನೀಯವರಿಗೆ ಬಂದೇತಿ. ಗುಜರಾತು-ರಾಜಸ್ಥಾನ- ಮೈಸೂರು -ಮಹಾರಾಷ್ಟ್ರದಾಗ ಚೀನಾಕ್ಕ ಹೋಗಿ ಬಂದವರಿಗೆ ಬಂದೇತಿ. ಅದನ್ನ ಯಾರೂ ಹೇಳಾಕ ಹತ್ತಿಲ್ಲ.

ಇದೂ ನೆನಪ ಇಟಗೋರಿ.

ಅಧಿಕಾರಿಗಳು ಹುಡುಕಿ -ಹುಡುಕಿ ಮುಸಲ್ಮಾನರಿಗೆ ಪರೀಕ್ಷೆ ಮಾಡತಾರು. ಐಸೋಲೇಷನ್ನು – ಕಂಟೇನಮೆಂಟು ಝೋನಿನ್ಯಾಗ ಸಹಿತ ಎತಿಗೊಂಡು ಹೋಗಿ ರಾಂಡಮ್ ಟೆಸ್ಟ (ಯಾದೃಶ್ಚಿಕ/ ಅನಿಶ್ಚಿತ ಪರೀಕ್ಷೆ)ಮಾಡಾಕ ಹತ್ಯಾರು. ಕಂಟೇನುಮೆಂಟು ಝೋನಿನ್ಯಾಗ ಯಾರೂ ಹೊರಗ ಹೋಗಂಗಿಲ್ಲ, ಒಳಗ ಬರಂಗಿಲ್ಲ. ಹಂಗಾರ ಅವರಿಗೆ ಪರೀಕ್ಷೆ ಅನಿಶ್ಚಿತ ಪರೀಕ್ಷೆ ಮಾಡೋ ಜರೂರತ್ತು ಏನೈತಿ? ಕೆಲವು ಜಿಲ್ಲೆಯೊಳಗ ಅಂತೂ ಇನ್ನು ಮುಂದೆ ಕಂಟೇನುಮೆಂಟ ಆಗಬಹುದಾದ ಪ್ರದೇಶ ಅಂತ ಸುದ್ದಿ ಬರತಾವು. ಕೀಲಿ ಕಿಟಕ್ಕಿನ ನಂತರ ದೇಶದಾಗ ನೂರಾರು ಊರಾಗ ಸಾವಿರಾರು ಜಾತ್ರಿ ಆಗ್ಯಾವು. ಅದರಾಗ ಲಕ್ಷಾಂತರ ಮಂದಿ ಭಾಗವಹಿಸಿದಾರ. ಆದರ ಅವರೆಲ್ಲಾರಿಗೂ ಟೆಸ್ಟು ಮಾಡ್ಯಾರೇನು? ಇಲ್ಲ.

ಇನ್ನ ಇದು ಮಸಲ್ಮಾನರನ್ನ ನೇರವಾಗಿ ಸಂಬಂಧಿಸಿದ ರೋಗ, ಅವರು ಬೇಕಂತಲೇ ಬ್ಯಾರೆದವರಿಗೆ ಹಚ್ಚಾಕುಂತಾರು, ಅವರು ಟೆಸ್ಟು ಮಾಡಿಸಿಕೊಳ್ಳಾಕ ಒಲ್ಲೆ ಅಂತಾರು, ಡಾಕ್ಟರಿಗೆ ಹೊಡ್ಯಾಕ ಕುಂತಾರು ಅನ್ನೋದು ಖರೇ ಆದರ, ಅದಕ್ಕ ಸರಕಾರ ಮಾಹಿತಿ ನೀಡಿ ಜಾಗೃತಿ ಕೊಡೋ ಕೆಲಸ ಮಾಡಬೇಕಾಗಿತ್ತು. ಅದಕ್ಕ ಬೇಕಾದ ಸಾಹಿತ್ಯ ಉರ್ದು- ಬ್ಯಾರಿ- ನವಾಯಿತಿ, ಮುಂತಾದ ಆ ಜನಾಂಗದ ಜನಾ ಮಾತಾಡೋ ಭಾಷೆದಾಗ ತಯಾರು ಮಾಡಬೇಕಾಗಿತ್ತು. ಹಂಗ ಮಾಡೇತೇನು?

ಅವರ ಸಮಾಜದ ರಾಜಕೀಯ- ಧಾರ್ಮಿಕ- ಸಾಂಸ್ಕೃತಿಕ ನಾಯಕರ ಕೂಡಾ ಕುತಗೊಂಡ ಮಾತಾಡಿ ನಿಮ್ಮ ಜನರಿಗೆ ನೀವು ಮನ ಒಲಸರಿ ಅಂತ ಹೇಳಬೇಕಾಗಿತ್ತು. ಹೇಳ್ಯಾರೇನು?

ಇನ್ನ ಮ್ಯಾಲೆ ಎಲ್ ಥ್ರೀದಾಗ ಜಾಸ್ತಿ ಜನರಿಗೆ ರೋಗ ಬಂದರ ಅದರ ಮೂಲ ಗೊತ್ತಿಲ್ಲ ಅಂತ ಅಂದು ಕೈ ತೊಳಕೊಂಡ ಬಿಡೋದು. ಗೈರು ಮುಸ್ಲೀಮರು ಯಾರರ ವಿದೇಶ ಪ್ರವಾಸ, ದೇವಸ್ಥಾನ, ಜಾತ್ರಿ, ಗುರುದ್ವಾರ, ಚರ್ಚು -ಬೂದಿ ಬಾಬಾಗಳ ಕಡೆ ಹೋದವರು ಇದ್ದರ, ಅವರಿಗೆ ಅಲ್ಲಿಗೆ ಹೋಗಿದ್ದಕ್ಕ ರೋಗ ಬಂದಿದ್ದರ ಅದನ್ನ ಈ ಮೂಲದಿಂದ ಬಂದವರು ಅಂತ ಗುರುತು ಹಿಡಯಲಾರದೇ ʻಅಸ್ಪಷ್ಟ ಮೂಲಗಳುʼ, ʻಅನಾಮಿಕ ಮೂಲಗಳುʼ ಅಂತ ಹೇಳಿ ಬಿಡೋದು. ಆಳುವ ಪಕ್ಷದ ಐಟಿ ಸೆಲ್ಲಿನ್ಯಾಗ ಇವರ ಮನಿ ಬಾಜೂಕ ಮಸೀದಿ ಇತ್ತು, ಇವರ ಮನ್ಯಾಗ ಕೆಲಸಾ ಮಾಡೋರು ಮುಸಲ್ಮಾನರು, ಇವರ ಹೊಲದಾಗ ದುಡಿಯೋರು ಮುಸಲ್ಮಾನರು- ಇವರು ಬೆಳಿಯೋ ಕಾಯಿ ಪಲ್ಯಾ ಖರೀದಿ ಮಾಡೋರು ಮುಸಲ್ಮಾನರು. ಅವರಿಂದ ಇವರಿಗೆಲ್ಲಾ ಬಂದೇತಿ ಅಂತ ಒಂದು ನೂರು ವರ್ಷದ ಹಳೇ ಬ್ಲಾಕ್ ಅಂಡ ವೈಟು ವಿಡಿಯೋ ಬಿಟ್ಟು ನಂಬಿಸಿ ಬಿಡೋದು. ಇದು ಎಲ್ ಥ್ರೀ ಲೆಕ್ಕಾಚಾರ.

ಇದನ್ನ ನೆನಪ ಇಟಗೋರಿ.

ಯಾರ ಎನ ತಿಪ್ಪರಲಾಗಾ ಹೊಡದರೂ ಸಹಿತ ಎಲ್ ಫೋರು ತಪ್ಪಸಲಿಕ್ಕೆ ಆಗಂಗಿಲ್ಲ ಅಂತ ವಿಜ್ಞಾನಿಗಳು ಹೇಳಾಕ ಹತ್ಯಾರು. ಆವಾಗ ಸೋಂಕು ಮತ್ತು ಸಾವಿನ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚು ಆಗತೇತಿ ಅಂತಾರು. ಆಗ ಸತ್ತವರು ಸಾಯಲಿ, ಇಷ್ಟು ಜನಾ ಮುಂಬಯಿದಾಗ ಪ್ರವಾಹ ಬಂದಾಗ ಸಾಯತಾರು ಅಂತ ಸುಮ್ಮನಾಗಿ ಬಿಡೋದು. ಅಥವಾ ಸುಮಾರು ಎರಡು ಲಕ್ಷ ಜನಾ ಸತ್ತರು ಅಂದರ ನಾವು ಒಳ್ಳೇ ರೀತಿಯಿಂದ ರೋಗ ನಿರ್ವಹಣೆ ಮಾಡೇವಿ ಅಂತ ಅರ್ಥ ಅಂತ ಟ್ರಂಪಣ್ಣನವರ ಹೇಳಿದಂಗ ಮಾಡಿ ಕಿರು ನಗೆ ಸೂಸೋದು.

ಕಡೀಕೆ ಎಲ್ ಫೈವು. ಅದರಾಗ ಶೇಕಡಾ 80- 90 ಜನರ ದೇಹದಾಗ ಈ ವೈರಸ್ಸು ಇರತೇತಿ. ಆದರ ಸಾವಿನ ಸಂಖ್ಯೆ ಕಮ್ಮಿ ಇರತೇತಿ. ಒಂದು ಉದಾಹರಣೆ ಕೊಡಬೇಕು ಅಂದರ ಕ್ಯಾನ್ಸರ ರೋಗದಿಂದ ಭಾರತದಾಗ 1,300 ಜನಾ ದಿನಾ ಸಾಯತಾರು. ಕರೋನಾ ಇದನ್ನಂತೂ ಹಿಂದ ಹಾಕಲಿಕ್ಕೆ ಸಾಧ್ಯ ಇಲ್ಲ. ಹಿಂಗಾಗಿ ಸಮರ್ಥ ನಿರ್ವಹಣಾಕಾರರಾಗಿ, ವಿಶ್ವಗುರುವಾಗಿ, ಹೊಸಾ ಷೇರವಾನಿ ಪೈಜಾಮಾ ಧರಿಸಿ ಪೋಸು ಕೊಡೋದು.

ಇವಿಷ್ಟು ನಮ್ಮ ಸರಕಾರದ ಲೆವಲ್ಲಿನ ವಿಚಾರ. ಇಷ್ಟೊತ್ತಿನ ತನಕಾ ಹೇಳಿದ್ದು ರೋಗದ ಲೆವಲ್ಲಿನ ಬಗ್ಗೆ. ಆಳುವ ಪಕ್ಷದ ಚುನಾವಣಾ ತಂತ್ರದ ಹಂತಗಳು ಅಂತ ತಿಳದ-ಗಿಳದೀರಿ ಮತ್ತ ಎಲ್ಲರ ನೀವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...