Homeಡೇಟಾ ಖೋಲಿಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

ಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

- Advertisement -
- Advertisement -

ʻʻಕವಿ ಅನ್ನುವವನು ಹಕ್ಕಿ ಇದ್ದಂಗಿರಬೇಕು, ಅವ ಕಾಣಬಾರದು ಆದರ ಅವನ ದನಿ ಕೇಳಸಬೇಕು,ʼʼ ಅಂತ ಮೊನ್ನೆ ತೀರಿಹೋದ ಹಿರಿಯ ಕಲಾವಿದ- ಕವಿ ಚಂದ್ರಕಾಂತ ಕುಸನೂರ ಹೇಳತಿದ್ದರು. ಆ ಮಾತಿಗೆ ತಕ್ಕಂತೆ ಇರುವ ಭಾರತದ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ ಅವರು ಮೊನ್ನೆ ಒಂದು ಮುತ್ತಿನಂಥ ಮಾತು ಹೇಳ್ಯಾರ.

ʻಕೀಲಿ ಕಿಟಕ್ (ಲಾಕು ಡೌನು) ಅನ್ನುವುದು ನಮ್ಮ ದೇಶಕ್ಕೆ ಸಾಮಾಜಿಕ ಲಸಿಕೆ ಇದ್ದಂತೆ. ದೇಹಾರೋಗ್ಯಕ್ಕೆ ರಸಾಯನಿಕ ಲಸಿಕೆ ಬೇಕಾದರೆ ಸಮಾಜದ ಆರೋಗ್ಯಕ್ಕೆ ಈ ಲಸಿಕೆ ಬೇಕುʼ ಅಂತ.

ಇದು ಹೌದಾ? ಖರೇನ? ಹೌದು ಅಂತಾದರ ಸರಕಾರದ ಉದ್ದೇಶ ಅರ ಏನು? ಈ ಕೀಲಿ ಕಿಟಕ್ ಟೈಂದಾಗ ಅವರು ಏನು ಮಾಡ್ಯಾರ? ಮುಂದ ಏನು ಮಾಡಬೇಕಂತ ಯೋಜನೆ ಇಟಗೊಂಡಾರ? ಅದರ ತಯಾರಿ ಏನು ನಡದದ? ರಸ್ತೆ ಮ್ಯಾಲೆ ತೊಡರು ಪಟ್ಟಿ ಹಾಕೋದು, ಯಾರರ ಬಡವರು ಹೊಂಟರ ಅವರಿಗೆ ಬಡದು ಎಲಬು ಮುರಿಯೋದು, ಸಾಹುಕಾರರ ಹೊಂಟರ ಕಿಸಿ ಕಿಸಿ ನಗೋದು, ಪುಢಾರಿ ಹೊಂಟರ ಸೆಲ್ಯೂಟು ಹೊಡೆಯೋದು ಇವಿಷ್ಟ ಮಾಡಬೇಕು ಅಂತ ಪೊಲಿಸರು ತಿಳಕೊಂಡಾರ.

ನಾವು ಏನಾದರೂ ಮಾಡಿದಂಗ ತೋರಸಬೇಕು ಅಂತ ಹೇಳಿ ನಗರಸಭೆಯವರು ಎಲ್ಲಿ ಬೇಕಲ್ಲಿ ಫಿನಾಯಿಲು- ನೀರು ಹೊಡೀಲಿಕ್ಕೆ ಹತ್ಯಾರ.

ಖಾಸಗಿ ಡಾಕ್ಟರು ಹೆದರಿಕೊಂಡು ಮನ್ಯಾಗ ಕೂತಾರ, ಸರಕಾರಿ ಡಾಕ್ಟರು (ಪಿಪಿಈ) ವೈಯಕ್ತಿಕ ಸಂರಕ್ಷಣೆ ಸಲಕರಣೆ ಇಲ್ಲದನ ದುಡೀಲಿಕ್ಕೆ ಹತ್ಯಾರ. ಐಎಎಸ್ಸು ಅಧಿಕಾರಿ ಇದು ಇನ್ನೂ ಎಲ್ -ಟೂ ಎರಡನೇ ಮಟ್ಟ. ಇನ್ನೂ ಮೂರು ಮಟ್ಟ ಅದಾವು ಇದು ಮುಗಿಲಾಕ. ಅವು ಮುಗಿಯೋದರಾಗ ನಾವರ ಅದನ್ನ ಮಟ್ಟ ಹಾಕಬೇಕು, ಅಥವಾ ಆದರ ನಮ್ಮನ್ನ ಮಟ್ಟ ಹಾಕಬೇಕು, ಅಂತ ಸಿಗರೇಟು ಸೇದಿಕೊಂತ ಸ್ವಗತದ ಹಂಗ ಮಾತಾಡಾಕ ಹತ್ಯಾರು. ಎಂದಿನಂತೆ `ಒಳ್ಳೇದಾದರ ನಾ ಮಾಡೇನಿ, ಕೆಟ್ಟಾದಾದರ ನನಗ ಸಂಬಂಧನ ಇಲ್ಲ’ ಅಂತ ರಾಜಕಾರಣಿಗಳು ಗುಮ್ಮನ ಗುಸಗನಂಗ ಕೂತಾರ.

ಸತ್ಯ ಅನ್ನೋದು ಮಾತ್ರ ಇವೆಲ್ಲದರ ನಡುವ ಐತಿ.

ಈ ಎಲ್ ಟೂ ಅಂದರೇನು? ಎಲ್ ಒನ್ ಅಂದರ ವಿದೇಶದಿಂದ ಬಂದವರು ರೋಗ ಹರಡೋದು. ಎಲ್ ಟೂ ಅಂದರ ಅವರ ಸಂಪರ್ಕಕ್ಕ ಬಂದವರು ಹರಡೋದು. ಎಲ್ ಥ್ರೀ ಅಂದರ ಸೋಂಕು ಎಲ್ಲಿಂದ ಬಂದದ ಅನ್ನೋದು ಗೊತ್ತಾಗಲಾರದ ಹಂಗ ಇರೋದು. ಎಲ್ ಫೋರು ಅಂದರ ಭಾಳ ಜನರಿಗೆ ಬರೋ ಅಂಟು ರೋಗ. ಎಲ್ ಫೈವ್ ಅಂದರ ಒಂದು ದೇಶ/ ಸಮಾಜ/ ರಾಜ್ಯದಾಗ ಸರಿ ಸುಮಾರು ಎಲ್ಲರಲ್ಲೂ ಇರೋ ರೋಗ.

ಈ ಲೆವಲ್ಲುಗಳನ್ನು ಹೆಂಗ ಗುರತು ಮಾಡ್ಯಾರ ಅನ್ನೋದು ತಿಳಕೊಂಡರ ನಮ್ಮ ಸರಕಾರದ ಲೆವಲ್ಲು ತಿಳೀತದ. ಮೊದಲಿಗೆ ವಿದೇಶ ಪ್ರವಾಸಿಗರ ಲೆಕ್ಕ ನೋಡರಿ. ಜನವರಿ ಒಂದರಿಂದ ಮಾರ್ಚು 23 ರ ತನಕಾ ಸುಮಾರು 15 ಲಕ್ಷ ಮಂದಿ ಭಾರತಕ್ಕ ಬ್ಯಾರ ಬ್ಯಾರೆ ದೇಶದಿಂದಾ ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳ್ಯಾರ. ಇವರಿಗೆ ಎಲ್ಲಾರಿಗೂ ಕೊರೊನಾ ಟೆಸ್ಟು ಮಾಡೀರೇನು? ಭಾರತದಾಗ ಇಲ್ಲೀ ತನಕಾ ಇದ್ದವರು, ಹೋದವರು ಬಂದವರು ಎಲ್ಲಾ ಸೇರಿ ಬರೇ ನಾಲ್ಕು ಲಕ್ಷ ಟೆಸ್ಟು ಮಾಡ್ಯಾರ ಅಂದ ಮ್ಯಾಲೆ ಇದರ ಹಕೀಕತ್ತು ಗೊತ್ತಾಗತದ.

ಅವರೆಲ್ಲಾರೂ ಗೃಹ ಬಂಧನದಾಗ ಇರಬೇಕು ಅಂತ ಒಂದು ಕಾಯಿದೆ ಮಾಡಿದರು. ಆದರ ಅವರ ಪರೀಕ್ಷೆ ಮಾಡಲಿಲ್ಲ. ಇದು ಒಂದೀಟು ನೆನಪ ಇಟಗೋರಿ.

ಇನ್ನ ಎಲ್ ಟೂ. ಈ ರೋಗ ಈಟ ಭಯಂಕರ ಐತಿ ಅಂತ ಯಾವಾನಿಗೂ ಗೊತ್ತಿರಾಕಿಲ್ಲ. ಇದನ್ನ ಹೆಂಗ ಬಗೀ ಹರಸಬೇಕು ಅಂತ ಸರಕಾರಕ್ಕ ಹೊಳೀಲಿಲ್ಲ.

ಆವಾಗ ಅವರ ಕೈಗೆ ಸಿಕ್ಕವರು ತಬಲೀಘಿ ಜಮಾತಿನವರು. ಅವರು ಸುಮಾರು ಮೂರು ಸಾವಿರ ಜನ ದೆಹಲಿ ನಿಜಾಮುದ್ದೀನ ಮಸೀದಿಯೊಳಗ ಸೇರಿದ್ದರು, ಅದರಾಗ ಮಾರ್ಚು 28ರ ರಾತ್ರಿ ಪೋಲಿಸರು ಬಂದು ರೇಡು ಮಾಡಿ ಒಂದೂವರೆ ಸಾವಿರ ಜನರನ್ನ ಹೊರಗ ಹಾಕಿದರು, ಹೌದ? ಅವರನ್ನ ಅವರವರ ಊರಿಗೆ ಕಳಸದೇ ಅಲ್ಲೇ ದೆಹಲಿಯೊಳಗ ಇಟಗೊಂಡಿದ್ದರ ಅವರು ಸಾವಿರಾರು ಕಿಲೋಮೀಟರು ರೇಲ್ವೇದಾಗ ಪ್ರವಾಸ ಮಾಡೋ ನೌಬತ್ತು ಬರತಿರಲಿಲ್ಲ. ಅವರಿಂದ ಬ್ಯಾರೆದವರಿಗೆ ಸೋಂಕು ತಗಲೋ ಪರಿಸ್ಥಿತಿ ಇರತಿರಲಿಲ್ಲ.

ಈಗ ವಿದೇಶದಿಂದ ಬಂದವರು ಎಷ್ಟು ಜನರಿಗೆ ಸೋಂಕು ಹಚ್ಚಿದರು ಅಂತ ಯಾವಾನಿಗೂ ಗೊತ್ತಿಲ್ಲ. ಆದರ ದೆಹಲಿಗೆ ಹೋದವರಿಗೆ ಎಷ್ಟು ಮಂದೀಗೆ ಬಂದೇತಿ, ಅವರಿಂದ ಎಷ್ಟು ಜನರಿಗೆ ಬಂದೇತಿ ಅನ್ನೋದು ಗೊತ್ತೈತಿ. ಯಾಕಂದರ ಸರಕಾರದವರು ಇವರಿಗೆ ನಿಜಾಮುದ್ದೀನ ಪ್ರವಾಸ/ದೆಹಲಿ ಪ್ರವಾಸದಿಂದ ಬಂದಿದೆ ಅಂತ ಹೇಳತಾರ. ವಿದೇಶಿ ಪ್ರವಾಸದಿಂದ/ವಿದೇಶಕ್ಕ ಹೋದವರ ಸಂಪರ್ಕದಿಂದ ಬಂದೇತಿ ಅಂತ ಹೇಳೋದಿಲ್ಲ. ಬೆಂಗಳೂರು, ಬಾಗಲಕೋಟಿ, ಮಂಗಳೂರಿನ್ಯಾಗ ವಿದೇಶ ಸಂಚಾರಿ ಬಿಳೀ ಕಾಲರಿನ ಐಟಿ/ಬೀಟಿ ಮಂದಿಗೆನೂ ರೋಗ ಬಂದೇತಿ, ಅವರಿಂದ ಅವರ ಮನೀಯವರಿಗೆ ಬಂದೇತಿ. ಗುಜರಾತು-ರಾಜಸ್ಥಾನ- ಮೈಸೂರು -ಮಹಾರಾಷ್ಟ್ರದಾಗ ಚೀನಾಕ್ಕ ಹೋಗಿ ಬಂದವರಿಗೆ ಬಂದೇತಿ. ಅದನ್ನ ಯಾರೂ ಹೇಳಾಕ ಹತ್ತಿಲ್ಲ.

ಇದೂ ನೆನಪ ಇಟಗೋರಿ.

ಅಧಿಕಾರಿಗಳು ಹುಡುಕಿ -ಹುಡುಕಿ ಮುಸಲ್ಮಾನರಿಗೆ ಪರೀಕ್ಷೆ ಮಾಡತಾರು. ಐಸೋಲೇಷನ್ನು – ಕಂಟೇನಮೆಂಟು ಝೋನಿನ್ಯಾಗ ಸಹಿತ ಎತಿಗೊಂಡು ಹೋಗಿ ರಾಂಡಮ್ ಟೆಸ್ಟ (ಯಾದೃಶ್ಚಿಕ/ ಅನಿಶ್ಚಿತ ಪರೀಕ್ಷೆ)ಮಾಡಾಕ ಹತ್ಯಾರು. ಕಂಟೇನುಮೆಂಟು ಝೋನಿನ್ಯಾಗ ಯಾರೂ ಹೊರಗ ಹೋಗಂಗಿಲ್ಲ, ಒಳಗ ಬರಂಗಿಲ್ಲ. ಹಂಗಾರ ಅವರಿಗೆ ಪರೀಕ್ಷೆ ಅನಿಶ್ಚಿತ ಪರೀಕ್ಷೆ ಮಾಡೋ ಜರೂರತ್ತು ಏನೈತಿ? ಕೆಲವು ಜಿಲ್ಲೆಯೊಳಗ ಅಂತೂ ಇನ್ನು ಮುಂದೆ ಕಂಟೇನುಮೆಂಟ ಆಗಬಹುದಾದ ಪ್ರದೇಶ ಅಂತ ಸುದ್ದಿ ಬರತಾವು. ಕೀಲಿ ಕಿಟಕ್ಕಿನ ನಂತರ ದೇಶದಾಗ ನೂರಾರು ಊರಾಗ ಸಾವಿರಾರು ಜಾತ್ರಿ ಆಗ್ಯಾವು. ಅದರಾಗ ಲಕ್ಷಾಂತರ ಮಂದಿ ಭಾಗವಹಿಸಿದಾರ. ಆದರ ಅವರೆಲ್ಲಾರಿಗೂ ಟೆಸ್ಟು ಮಾಡ್ಯಾರೇನು? ಇಲ್ಲ.

ಇನ್ನ ಇದು ಮಸಲ್ಮಾನರನ್ನ ನೇರವಾಗಿ ಸಂಬಂಧಿಸಿದ ರೋಗ, ಅವರು ಬೇಕಂತಲೇ ಬ್ಯಾರೆದವರಿಗೆ ಹಚ್ಚಾಕುಂತಾರು, ಅವರು ಟೆಸ್ಟು ಮಾಡಿಸಿಕೊಳ್ಳಾಕ ಒಲ್ಲೆ ಅಂತಾರು, ಡಾಕ್ಟರಿಗೆ ಹೊಡ್ಯಾಕ ಕುಂತಾರು ಅನ್ನೋದು ಖರೇ ಆದರ, ಅದಕ್ಕ ಸರಕಾರ ಮಾಹಿತಿ ನೀಡಿ ಜಾಗೃತಿ ಕೊಡೋ ಕೆಲಸ ಮಾಡಬೇಕಾಗಿತ್ತು. ಅದಕ್ಕ ಬೇಕಾದ ಸಾಹಿತ್ಯ ಉರ್ದು- ಬ್ಯಾರಿ- ನವಾಯಿತಿ, ಮುಂತಾದ ಆ ಜನಾಂಗದ ಜನಾ ಮಾತಾಡೋ ಭಾಷೆದಾಗ ತಯಾರು ಮಾಡಬೇಕಾಗಿತ್ತು. ಹಂಗ ಮಾಡೇತೇನು?

ಅವರ ಸಮಾಜದ ರಾಜಕೀಯ- ಧಾರ್ಮಿಕ- ಸಾಂಸ್ಕೃತಿಕ ನಾಯಕರ ಕೂಡಾ ಕುತಗೊಂಡ ಮಾತಾಡಿ ನಿಮ್ಮ ಜನರಿಗೆ ನೀವು ಮನ ಒಲಸರಿ ಅಂತ ಹೇಳಬೇಕಾಗಿತ್ತು. ಹೇಳ್ಯಾರೇನು?

ಇನ್ನ ಮ್ಯಾಲೆ ಎಲ್ ಥ್ರೀದಾಗ ಜಾಸ್ತಿ ಜನರಿಗೆ ರೋಗ ಬಂದರ ಅದರ ಮೂಲ ಗೊತ್ತಿಲ್ಲ ಅಂತ ಅಂದು ಕೈ ತೊಳಕೊಂಡ ಬಿಡೋದು. ಗೈರು ಮುಸ್ಲೀಮರು ಯಾರರ ವಿದೇಶ ಪ್ರವಾಸ, ದೇವಸ್ಥಾನ, ಜಾತ್ರಿ, ಗುರುದ್ವಾರ, ಚರ್ಚು -ಬೂದಿ ಬಾಬಾಗಳ ಕಡೆ ಹೋದವರು ಇದ್ದರ, ಅವರಿಗೆ ಅಲ್ಲಿಗೆ ಹೋಗಿದ್ದಕ್ಕ ರೋಗ ಬಂದಿದ್ದರ ಅದನ್ನ ಈ ಮೂಲದಿಂದ ಬಂದವರು ಅಂತ ಗುರುತು ಹಿಡಯಲಾರದೇ ʻಅಸ್ಪಷ್ಟ ಮೂಲಗಳುʼ, ʻಅನಾಮಿಕ ಮೂಲಗಳುʼ ಅಂತ ಹೇಳಿ ಬಿಡೋದು. ಆಳುವ ಪಕ್ಷದ ಐಟಿ ಸೆಲ್ಲಿನ್ಯಾಗ ಇವರ ಮನಿ ಬಾಜೂಕ ಮಸೀದಿ ಇತ್ತು, ಇವರ ಮನ್ಯಾಗ ಕೆಲಸಾ ಮಾಡೋರು ಮುಸಲ್ಮಾನರು, ಇವರ ಹೊಲದಾಗ ದುಡಿಯೋರು ಮುಸಲ್ಮಾನರು- ಇವರು ಬೆಳಿಯೋ ಕಾಯಿ ಪಲ್ಯಾ ಖರೀದಿ ಮಾಡೋರು ಮುಸಲ್ಮಾನರು. ಅವರಿಂದ ಇವರಿಗೆಲ್ಲಾ ಬಂದೇತಿ ಅಂತ ಒಂದು ನೂರು ವರ್ಷದ ಹಳೇ ಬ್ಲಾಕ್ ಅಂಡ ವೈಟು ವಿಡಿಯೋ ಬಿಟ್ಟು ನಂಬಿಸಿ ಬಿಡೋದು. ಇದು ಎಲ್ ಥ್ರೀ ಲೆಕ್ಕಾಚಾರ.

ಇದನ್ನ ನೆನಪ ಇಟಗೋರಿ.

ಯಾರ ಎನ ತಿಪ್ಪರಲಾಗಾ ಹೊಡದರೂ ಸಹಿತ ಎಲ್ ಫೋರು ತಪ್ಪಸಲಿಕ್ಕೆ ಆಗಂಗಿಲ್ಲ ಅಂತ ವಿಜ್ಞಾನಿಗಳು ಹೇಳಾಕ ಹತ್ಯಾರು. ಆವಾಗ ಸೋಂಕು ಮತ್ತು ಸಾವಿನ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚು ಆಗತೇತಿ ಅಂತಾರು. ಆಗ ಸತ್ತವರು ಸಾಯಲಿ, ಇಷ್ಟು ಜನಾ ಮುಂಬಯಿದಾಗ ಪ್ರವಾಹ ಬಂದಾಗ ಸಾಯತಾರು ಅಂತ ಸುಮ್ಮನಾಗಿ ಬಿಡೋದು. ಅಥವಾ ಸುಮಾರು ಎರಡು ಲಕ್ಷ ಜನಾ ಸತ್ತರು ಅಂದರ ನಾವು ಒಳ್ಳೇ ರೀತಿಯಿಂದ ರೋಗ ನಿರ್ವಹಣೆ ಮಾಡೇವಿ ಅಂತ ಅರ್ಥ ಅಂತ ಟ್ರಂಪಣ್ಣನವರ ಹೇಳಿದಂಗ ಮಾಡಿ ಕಿರು ನಗೆ ಸೂಸೋದು.

ಕಡೀಕೆ ಎಲ್ ಫೈವು. ಅದರಾಗ ಶೇಕಡಾ 80- 90 ಜನರ ದೇಹದಾಗ ಈ ವೈರಸ್ಸು ಇರತೇತಿ. ಆದರ ಸಾವಿನ ಸಂಖ್ಯೆ ಕಮ್ಮಿ ಇರತೇತಿ. ಒಂದು ಉದಾಹರಣೆ ಕೊಡಬೇಕು ಅಂದರ ಕ್ಯಾನ್ಸರ ರೋಗದಿಂದ ಭಾರತದಾಗ 1,300 ಜನಾ ದಿನಾ ಸಾಯತಾರು. ಕರೋನಾ ಇದನ್ನಂತೂ ಹಿಂದ ಹಾಕಲಿಕ್ಕೆ ಸಾಧ್ಯ ಇಲ್ಲ. ಹಿಂಗಾಗಿ ಸಮರ್ಥ ನಿರ್ವಹಣಾಕಾರರಾಗಿ, ವಿಶ್ವಗುರುವಾಗಿ, ಹೊಸಾ ಷೇರವಾನಿ ಪೈಜಾಮಾ ಧರಿಸಿ ಪೋಸು ಕೊಡೋದು.

ಇವಿಷ್ಟು ನಮ್ಮ ಸರಕಾರದ ಲೆವಲ್ಲಿನ ವಿಚಾರ. ಇಷ್ಟೊತ್ತಿನ ತನಕಾ ಹೇಳಿದ್ದು ರೋಗದ ಲೆವಲ್ಲಿನ ಬಗ್ಗೆ. ಆಳುವ ಪಕ್ಷದ ಚುನಾವಣಾ ತಂತ್ರದ ಹಂತಗಳು ಅಂತ ತಿಳದ-ಗಿಳದೀರಿ ಮತ್ತ ಎಲ್ಲರ ನೀವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...