Homeಡೇಟಾ ಖೋಲಿಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

ಕೊರೊನಾಲಜಿ: ಐದು ಹಂತಗಳಲ್ಲಿ ಈಗ ನಾವಿರೋದು ಲೆವಲ್ ಥ್ರೀ

- Advertisement -
- Advertisement -

ʻʻಕವಿ ಅನ್ನುವವನು ಹಕ್ಕಿ ಇದ್ದಂಗಿರಬೇಕು, ಅವ ಕಾಣಬಾರದು ಆದರ ಅವನ ದನಿ ಕೇಳಸಬೇಕು,ʼʼ ಅಂತ ಮೊನ್ನೆ ತೀರಿಹೋದ ಹಿರಿಯ ಕಲಾವಿದ- ಕವಿ ಚಂದ್ರಕಾಂತ ಕುಸನೂರ ಹೇಳತಿದ್ದರು. ಆ ಮಾತಿಗೆ ತಕ್ಕಂತೆ ಇರುವ ಭಾರತದ ಆರೋಗ್ಯ ಮಂತ್ರಿ ಡಾ. ಹರ್ಷವರ್ಧನ ಅವರು ಮೊನ್ನೆ ಒಂದು ಮುತ್ತಿನಂಥ ಮಾತು ಹೇಳ್ಯಾರ.

ʻಕೀಲಿ ಕಿಟಕ್ (ಲಾಕು ಡೌನು) ಅನ್ನುವುದು ನಮ್ಮ ದೇಶಕ್ಕೆ ಸಾಮಾಜಿಕ ಲಸಿಕೆ ಇದ್ದಂತೆ. ದೇಹಾರೋಗ್ಯಕ್ಕೆ ರಸಾಯನಿಕ ಲಸಿಕೆ ಬೇಕಾದರೆ ಸಮಾಜದ ಆರೋಗ್ಯಕ್ಕೆ ಈ ಲಸಿಕೆ ಬೇಕುʼ ಅಂತ.

ಇದು ಹೌದಾ? ಖರೇನ? ಹೌದು ಅಂತಾದರ ಸರಕಾರದ ಉದ್ದೇಶ ಅರ ಏನು? ಈ ಕೀಲಿ ಕಿಟಕ್ ಟೈಂದಾಗ ಅವರು ಏನು ಮಾಡ್ಯಾರ? ಮುಂದ ಏನು ಮಾಡಬೇಕಂತ ಯೋಜನೆ ಇಟಗೊಂಡಾರ? ಅದರ ತಯಾರಿ ಏನು ನಡದದ? ರಸ್ತೆ ಮ್ಯಾಲೆ ತೊಡರು ಪಟ್ಟಿ ಹಾಕೋದು, ಯಾರರ ಬಡವರು ಹೊಂಟರ ಅವರಿಗೆ ಬಡದು ಎಲಬು ಮುರಿಯೋದು, ಸಾಹುಕಾರರ ಹೊಂಟರ ಕಿಸಿ ಕಿಸಿ ನಗೋದು, ಪುಢಾರಿ ಹೊಂಟರ ಸೆಲ್ಯೂಟು ಹೊಡೆಯೋದು ಇವಿಷ್ಟ ಮಾಡಬೇಕು ಅಂತ ಪೊಲಿಸರು ತಿಳಕೊಂಡಾರ.

ನಾವು ಏನಾದರೂ ಮಾಡಿದಂಗ ತೋರಸಬೇಕು ಅಂತ ಹೇಳಿ ನಗರಸಭೆಯವರು ಎಲ್ಲಿ ಬೇಕಲ್ಲಿ ಫಿನಾಯಿಲು- ನೀರು ಹೊಡೀಲಿಕ್ಕೆ ಹತ್ಯಾರ.

ಖಾಸಗಿ ಡಾಕ್ಟರು ಹೆದರಿಕೊಂಡು ಮನ್ಯಾಗ ಕೂತಾರ, ಸರಕಾರಿ ಡಾಕ್ಟರು (ಪಿಪಿಈ) ವೈಯಕ್ತಿಕ ಸಂರಕ್ಷಣೆ ಸಲಕರಣೆ ಇಲ್ಲದನ ದುಡೀಲಿಕ್ಕೆ ಹತ್ಯಾರ. ಐಎಎಸ್ಸು ಅಧಿಕಾರಿ ಇದು ಇನ್ನೂ ಎಲ್ -ಟೂ ಎರಡನೇ ಮಟ್ಟ. ಇನ್ನೂ ಮೂರು ಮಟ್ಟ ಅದಾವು ಇದು ಮುಗಿಲಾಕ. ಅವು ಮುಗಿಯೋದರಾಗ ನಾವರ ಅದನ್ನ ಮಟ್ಟ ಹಾಕಬೇಕು, ಅಥವಾ ಆದರ ನಮ್ಮನ್ನ ಮಟ್ಟ ಹಾಕಬೇಕು, ಅಂತ ಸಿಗರೇಟು ಸೇದಿಕೊಂತ ಸ್ವಗತದ ಹಂಗ ಮಾತಾಡಾಕ ಹತ್ಯಾರು. ಎಂದಿನಂತೆ `ಒಳ್ಳೇದಾದರ ನಾ ಮಾಡೇನಿ, ಕೆಟ್ಟಾದಾದರ ನನಗ ಸಂಬಂಧನ ಇಲ್ಲ’ ಅಂತ ರಾಜಕಾರಣಿಗಳು ಗುಮ್ಮನ ಗುಸಗನಂಗ ಕೂತಾರ.

ಸತ್ಯ ಅನ್ನೋದು ಮಾತ್ರ ಇವೆಲ್ಲದರ ನಡುವ ಐತಿ.

ಈ ಎಲ್ ಟೂ ಅಂದರೇನು? ಎಲ್ ಒನ್ ಅಂದರ ವಿದೇಶದಿಂದ ಬಂದವರು ರೋಗ ಹರಡೋದು. ಎಲ್ ಟೂ ಅಂದರ ಅವರ ಸಂಪರ್ಕಕ್ಕ ಬಂದವರು ಹರಡೋದು. ಎಲ್ ಥ್ರೀ ಅಂದರ ಸೋಂಕು ಎಲ್ಲಿಂದ ಬಂದದ ಅನ್ನೋದು ಗೊತ್ತಾಗಲಾರದ ಹಂಗ ಇರೋದು. ಎಲ್ ಫೋರು ಅಂದರ ಭಾಳ ಜನರಿಗೆ ಬರೋ ಅಂಟು ರೋಗ. ಎಲ್ ಫೈವ್ ಅಂದರ ಒಂದು ದೇಶ/ ಸಮಾಜ/ ರಾಜ್ಯದಾಗ ಸರಿ ಸುಮಾರು ಎಲ್ಲರಲ್ಲೂ ಇರೋ ರೋಗ.

ಈ ಲೆವಲ್ಲುಗಳನ್ನು ಹೆಂಗ ಗುರತು ಮಾಡ್ಯಾರ ಅನ್ನೋದು ತಿಳಕೊಂಡರ ನಮ್ಮ ಸರಕಾರದ ಲೆವಲ್ಲು ತಿಳೀತದ. ಮೊದಲಿಗೆ ವಿದೇಶ ಪ್ರವಾಸಿಗರ ಲೆಕ್ಕ ನೋಡರಿ. ಜನವರಿ ಒಂದರಿಂದ ಮಾರ್ಚು 23 ರ ತನಕಾ ಸುಮಾರು 15 ಲಕ್ಷ ಮಂದಿ ಭಾರತಕ್ಕ ಬ್ಯಾರ ಬ್ಯಾರೆ ದೇಶದಿಂದಾ ಬಂದಾರ ಅಂತ ಕೇಂದ್ರ ವಿಮಾನಯಾನ ಕಾರ್ಯದರ್ಶಿ ಹೇಳ್ಯಾರ. ಇವರಿಗೆ ಎಲ್ಲಾರಿಗೂ ಕೊರೊನಾ ಟೆಸ್ಟು ಮಾಡೀರೇನು? ಭಾರತದಾಗ ಇಲ್ಲೀ ತನಕಾ ಇದ್ದವರು, ಹೋದವರು ಬಂದವರು ಎಲ್ಲಾ ಸೇರಿ ಬರೇ ನಾಲ್ಕು ಲಕ್ಷ ಟೆಸ್ಟು ಮಾಡ್ಯಾರ ಅಂದ ಮ್ಯಾಲೆ ಇದರ ಹಕೀಕತ್ತು ಗೊತ್ತಾಗತದ.

ಅವರೆಲ್ಲಾರೂ ಗೃಹ ಬಂಧನದಾಗ ಇರಬೇಕು ಅಂತ ಒಂದು ಕಾಯಿದೆ ಮಾಡಿದರು. ಆದರ ಅವರ ಪರೀಕ್ಷೆ ಮಾಡಲಿಲ್ಲ. ಇದು ಒಂದೀಟು ನೆನಪ ಇಟಗೋರಿ.

ಇನ್ನ ಎಲ್ ಟೂ. ಈ ರೋಗ ಈಟ ಭಯಂಕರ ಐತಿ ಅಂತ ಯಾವಾನಿಗೂ ಗೊತ್ತಿರಾಕಿಲ್ಲ. ಇದನ್ನ ಹೆಂಗ ಬಗೀ ಹರಸಬೇಕು ಅಂತ ಸರಕಾರಕ್ಕ ಹೊಳೀಲಿಲ್ಲ.

ಆವಾಗ ಅವರ ಕೈಗೆ ಸಿಕ್ಕವರು ತಬಲೀಘಿ ಜಮಾತಿನವರು. ಅವರು ಸುಮಾರು ಮೂರು ಸಾವಿರ ಜನ ದೆಹಲಿ ನಿಜಾಮುದ್ದೀನ ಮಸೀದಿಯೊಳಗ ಸೇರಿದ್ದರು, ಅದರಾಗ ಮಾರ್ಚು 28ರ ರಾತ್ರಿ ಪೋಲಿಸರು ಬಂದು ರೇಡು ಮಾಡಿ ಒಂದೂವರೆ ಸಾವಿರ ಜನರನ್ನ ಹೊರಗ ಹಾಕಿದರು, ಹೌದ? ಅವರನ್ನ ಅವರವರ ಊರಿಗೆ ಕಳಸದೇ ಅಲ್ಲೇ ದೆಹಲಿಯೊಳಗ ಇಟಗೊಂಡಿದ್ದರ ಅವರು ಸಾವಿರಾರು ಕಿಲೋಮೀಟರು ರೇಲ್ವೇದಾಗ ಪ್ರವಾಸ ಮಾಡೋ ನೌಬತ್ತು ಬರತಿರಲಿಲ್ಲ. ಅವರಿಂದ ಬ್ಯಾರೆದವರಿಗೆ ಸೋಂಕು ತಗಲೋ ಪರಿಸ್ಥಿತಿ ಇರತಿರಲಿಲ್ಲ.

ಈಗ ವಿದೇಶದಿಂದ ಬಂದವರು ಎಷ್ಟು ಜನರಿಗೆ ಸೋಂಕು ಹಚ್ಚಿದರು ಅಂತ ಯಾವಾನಿಗೂ ಗೊತ್ತಿಲ್ಲ. ಆದರ ದೆಹಲಿಗೆ ಹೋದವರಿಗೆ ಎಷ್ಟು ಮಂದೀಗೆ ಬಂದೇತಿ, ಅವರಿಂದ ಎಷ್ಟು ಜನರಿಗೆ ಬಂದೇತಿ ಅನ್ನೋದು ಗೊತ್ತೈತಿ. ಯಾಕಂದರ ಸರಕಾರದವರು ಇವರಿಗೆ ನಿಜಾಮುದ್ದೀನ ಪ್ರವಾಸ/ದೆಹಲಿ ಪ್ರವಾಸದಿಂದ ಬಂದಿದೆ ಅಂತ ಹೇಳತಾರ. ವಿದೇಶಿ ಪ್ರವಾಸದಿಂದ/ವಿದೇಶಕ್ಕ ಹೋದವರ ಸಂಪರ್ಕದಿಂದ ಬಂದೇತಿ ಅಂತ ಹೇಳೋದಿಲ್ಲ. ಬೆಂಗಳೂರು, ಬಾಗಲಕೋಟಿ, ಮಂಗಳೂರಿನ್ಯಾಗ ವಿದೇಶ ಸಂಚಾರಿ ಬಿಳೀ ಕಾಲರಿನ ಐಟಿ/ಬೀಟಿ ಮಂದಿಗೆನೂ ರೋಗ ಬಂದೇತಿ, ಅವರಿಂದ ಅವರ ಮನೀಯವರಿಗೆ ಬಂದೇತಿ. ಗುಜರಾತು-ರಾಜಸ್ಥಾನ- ಮೈಸೂರು -ಮಹಾರಾಷ್ಟ್ರದಾಗ ಚೀನಾಕ್ಕ ಹೋಗಿ ಬಂದವರಿಗೆ ಬಂದೇತಿ. ಅದನ್ನ ಯಾರೂ ಹೇಳಾಕ ಹತ್ತಿಲ್ಲ.

ಇದೂ ನೆನಪ ಇಟಗೋರಿ.

ಅಧಿಕಾರಿಗಳು ಹುಡುಕಿ -ಹುಡುಕಿ ಮುಸಲ್ಮಾನರಿಗೆ ಪರೀಕ್ಷೆ ಮಾಡತಾರು. ಐಸೋಲೇಷನ್ನು – ಕಂಟೇನಮೆಂಟು ಝೋನಿನ್ಯಾಗ ಸಹಿತ ಎತಿಗೊಂಡು ಹೋಗಿ ರಾಂಡಮ್ ಟೆಸ್ಟ (ಯಾದೃಶ್ಚಿಕ/ ಅನಿಶ್ಚಿತ ಪರೀಕ್ಷೆ)ಮಾಡಾಕ ಹತ್ಯಾರು. ಕಂಟೇನುಮೆಂಟು ಝೋನಿನ್ಯಾಗ ಯಾರೂ ಹೊರಗ ಹೋಗಂಗಿಲ್ಲ, ಒಳಗ ಬರಂಗಿಲ್ಲ. ಹಂಗಾರ ಅವರಿಗೆ ಪರೀಕ್ಷೆ ಅನಿಶ್ಚಿತ ಪರೀಕ್ಷೆ ಮಾಡೋ ಜರೂರತ್ತು ಏನೈತಿ? ಕೆಲವು ಜಿಲ್ಲೆಯೊಳಗ ಅಂತೂ ಇನ್ನು ಮುಂದೆ ಕಂಟೇನುಮೆಂಟ ಆಗಬಹುದಾದ ಪ್ರದೇಶ ಅಂತ ಸುದ್ದಿ ಬರತಾವು. ಕೀಲಿ ಕಿಟಕ್ಕಿನ ನಂತರ ದೇಶದಾಗ ನೂರಾರು ಊರಾಗ ಸಾವಿರಾರು ಜಾತ್ರಿ ಆಗ್ಯಾವು. ಅದರಾಗ ಲಕ್ಷಾಂತರ ಮಂದಿ ಭಾಗವಹಿಸಿದಾರ. ಆದರ ಅವರೆಲ್ಲಾರಿಗೂ ಟೆಸ್ಟು ಮಾಡ್ಯಾರೇನು? ಇಲ್ಲ.

ಇನ್ನ ಇದು ಮಸಲ್ಮಾನರನ್ನ ನೇರವಾಗಿ ಸಂಬಂಧಿಸಿದ ರೋಗ, ಅವರು ಬೇಕಂತಲೇ ಬ್ಯಾರೆದವರಿಗೆ ಹಚ್ಚಾಕುಂತಾರು, ಅವರು ಟೆಸ್ಟು ಮಾಡಿಸಿಕೊಳ್ಳಾಕ ಒಲ್ಲೆ ಅಂತಾರು, ಡಾಕ್ಟರಿಗೆ ಹೊಡ್ಯಾಕ ಕುಂತಾರು ಅನ್ನೋದು ಖರೇ ಆದರ, ಅದಕ್ಕ ಸರಕಾರ ಮಾಹಿತಿ ನೀಡಿ ಜಾಗೃತಿ ಕೊಡೋ ಕೆಲಸ ಮಾಡಬೇಕಾಗಿತ್ತು. ಅದಕ್ಕ ಬೇಕಾದ ಸಾಹಿತ್ಯ ಉರ್ದು- ಬ್ಯಾರಿ- ನವಾಯಿತಿ, ಮುಂತಾದ ಆ ಜನಾಂಗದ ಜನಾ ಮಾತಾಡೋ ಭಾಷೆದಾಗ ತಯಾರು ಮಾಡಬೇಕಾಗಿತ್ತು. ಹಂಗ ಮಾಡೇತೇನು?

ಅವರ ಸಮಾಜದ ರಾಜಕೀಯ- ಧಾರ್ಮಿಕ- ಸಾಂಸ್ಕೃತಿಕ ನಾಯಕರ ಕೂಡಾ ಕುತಗೊಂಡ ಮಾತಾಡಿ ನಿಮ್ಮ ಜನರಿಗೆ ನೀವು ಮನ ಒಲಸರಿ ಅಂತ ಹೇಳಬೇಕಾಗಿತ್ತು. ಹೇಳ್ಯಾರೇನು?

ಇನ್ನ ಮ್ಯಾಲೆ ಎಲ್ ಥ್ರೀದಾಗ ಜಾಸ್ತಿ ಜನರಿಗೆ ರೋಗ ಬಂದರ ಅದರ ಮೂಲ ಗೊತ್ತಿಲ್ಲ ಅಂತ ಅಂದು ಕೈ ತೊಳಕೊಂಡ ಬಿಡೋದು. ಗೈರು ಮುಸ್ಲೀಮರು ಯಾರರ ವಿದೇಶ ಪ್ರವಾಸ, ದೇವಸ್ಥಾನ, ಜಾತ್ರಿ, ಗುರುದ್ವಾರ, ಚರ್ಚು -ಬೂದಿ ಬಾಬಾಗಳ ಕಡೆ ಹೋದವರು ಇದ್ದರ, ಅವರಿಗೆ ಅಲ್ಲಿಗೆ ಹೋಗಿದ್ದಕ್ಕ ರೋಗ ಬಂದಿದ್ದರ ಅದನ್ನ ಈ ಮೂಲದಿಂದ ಬಂದವರು ಅಂತ ಗುರುತು ಹಿಡಯಲಾರದೇ ʻಅಸ್ಪಷ್ಟ ಮೂಲಗಳುʼ, ʻಅನಾಮಿಕ ಮೂಲಗಳುʼ ಅಂತ ಹೇಳಿ ಬಿಡೋದು. ಆಳುವ ಪಕ್ಷದ ಐಟಿ ಸೆಲ್ಲಿನ್ಯಾಗ ಇವರ ಮನಿ ಬಾಜೂಕ ಮಸೀದಿ ಇತ್ತು, ಇವರ ಮನ್ಯಾಗ ಕೆಲಸಾ ಮಾಡೋರು ಮುಸಲ್ಮಾನರು, ಇವರ ಹೊಲದಾಗ ದುಡಿಯೋರು ಮುಸಲ್ಮಾನರು- ಇವರು ಬೆಳಿಯೋ ಕಾಯಿ ಪಲ್ಯಾ ಖರೀದಿ ಮಾಡೋರು ಮುಸಲ್ಮಾನರು. ಅವರಿಂದ ಇವರಿಗೆಲ್ಲಾ ಬಂದೇತಿ ಅಂತ ಒಂದು ನೂರು ವರ್ಷದ ಹಳೇ ಬ್ಲಾಕ್ ಅಂಡ ವೈಟು ವಿಡಿಯೋ ಬಿಟ್ಟು ನಂಬಿಸಿ ಬಿಡೋದು. ಇದು ಎಲ್ ಥ್ರೀ ಲೆಕ್ಕಾಚಾರ.

ಇದನ್ನ ನೆನಪ ಇಟಗೋರಿ.

ಯಾರ ಎನ ತಿಪ್ಪರಲಾಗಾ ಹೊಡದರೂ ಸಹಿತ ಎಲ್ ಫೋರು ತಪ್ಪಸಲಿಕ್ಕೆ ಆಗಂಗಿಲ್ಲ ಅಂತ ವಿಜ್ಞಾನಿಗಳು ಹೇಳಾಕ ಹತ್ಯಾರು. ಆವಾಗ ಸೋಂಕು ಮತ್ತು ಸಾವಿನ ಸಂಖ್ಯೆ ಎಷ್ಟೋ ಪಟ್ಟು ಹೆಚ್ಚು ಆಗತೇತಿ ಅಂತಾರು. ಆಗ ಸತ್ತವರು ಸಾಯಲಿ, ಇಷ್ಟು ಜನಾ ಮುಂಬಯಿದಾಗ ಪ್ರವಾಹ ಬಂದಾಗ ಸಾಯತಾರು ಅಂತ ಸುಮ್ಮನಾಗಿ ಬಿಡೋದು. ಅಥವಾ ಸುಮಾರು ಎರಡು ಲಕ್ಷ ಜನಾ ಸತ್ತರು ಅಂದರ ನಾವು ಒಳ್ಳೇ ರೀತಿಯಿಂದ ರೋಗ ನಿರ್ವಹಣೆ ಮಾಡೇವಿ ಅಂತ ಅರ್ಥ ಅಂತ ಟ್ರಂಪಣ್ಣನವರ ಹೇಳಿದಂಗ ಮಾಡಿ ಕಿರು ನಗೆ ಸೂಸೋದು.

ಕಡೀಕೆ ಎಲ್ ಫೈವು. ಅದರಾಗ ಶೇಕಡಾ 80- 90 ಜನರ ದೇಹದಾಗ ಈ ವೈರಸ್ಸು ಇರತೇತಿ. ಆದರ ಸಾವಿನ ಸಂಖ್ಯೆ ಕಮ್ಮಿ ಇರತೇತಿ. ಒಂದು ಉದಾಹರಣೆ ಕೊಡಬೇಕು ಅಂದರ ಕ್ಯಾನ್ಸರ ರೋಗದಿಂದ ಭಾರತದಾಗ 1,300 ಜನಾ ದಿನಾ ಸಾಯತಾರು. ಕರೋನಾ ಇದನ್ನಂತೂ ಹಿಂದ ಹಾಕಲಿಕ್ಕೆ ಸಾಧ್ಯ ಇಲ್ಲ. ಹಿಂಗಾಗಿ ಸಮರ್ಥ ನಿರ್ವಹಣಾಕಾರರಾಗಿ, ವಿಶ್ವಗುರುವಾಗಿ, ಹೊಸಾ ಷೇರವಾನಿ ಪೈಜಾಮಾ ಧರಿಸಿ ಪೋಸು ಕೊಡೋದು.

ಇವಿಷ್ಟು ನಮ್ಮ ಸರಕಾರದ ಲೆವಲ್ಲಿನ ವಿಚಾರ. ಇಷ್ಟೊತ್ತಿನ ತನಕಾ ಹೇಳಿದ್ದು ರೋಗದ ಲೆವಲ್ಲಿನ ಬಗ್ಗೆ. ಆಳುವ ಪಕ್ಷದ ಚುನಾವಣಾ ತಂತ್ರದ ಹಂತಗಳು ಅಂತ ತಿಳದ-ಗಿಳದೀರಿ ಮತ್ತ ಎಲ್ಲರ ನೀವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....