Homeನಿಜವೋ ಸುಳ್ಳೋFact check: ಕೊರೊನಾ ಮಾನವ ನಿರ್ಮಿತ ವೈರಸ್ ಎಂದು ಜಪಾನ್‌ನ ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆಯೇ?

Fact check: ಕೊರೊನಾ ಮಾನವ ನಿರ್ಮಿತ ವೈರಸ್ ಎಂದು ಜಪಾನ್‌ನ ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆಯೇ?

- Advertisement -
- Advertisement -

ಕೊರೊನಾ ವೈರಸ್ ನೈಸರ್ಗಿದಕವಲ್ಲ, ಇದನ್ನು ತಯಾರಿದಲಾಗಿದೆ ಎಂದು ಜಪಾನಿನ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಹೇಳಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಜಪಾನಿನ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಕ್ಯಾನ್ಸರ್ ಚಿಕಿತ್ಸೆಯ ವಿಭಿನ್ನ ಆವಿಷ್ಕಾರಕ್ಕಾಗಿ 2018 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.

ವೈರಲಾಗುತ್ತಿರುವ ಸಂದೇಶ ಕೆಳಗಿನಂತಿದೆ.

“ಜಪಾನ್‌ನ ಔಷಧ ವಿಭಾಗದ ಪ್ರಾಧ್ಯಾಪಕ, ಪ್ರೊಫೆಸರ್ ಡಾ. ತಸುಕು ಹೊಂಜೊ, ಕೊರೊನಾ ವೈರಸ್ ನೈಸರ್ಗಿಕವಲ್ಲ ಎಂದು ಹೇಳುವ ಮೂಲಕ ಮಾಧ್ಯಮಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಇದು ಸ್ವಾಭಾವಿಕವಾಗಿದ್ದರೆ ಇಡೀ ಪ್ರಪಂಚದ ಮೇಲೆ ಈ ರೀತಿಯ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಪ್ರಕೃತಿಯ ಪ್ರಕಾರ, ವಿವಿಧ ದೇಶಗಳಲ್ಲಿ ತಾಪಮಾನವು ವಿಭಿನ್ನವಾಗಿರುತ್ತದೆ. ವೈರಸ್ ಸ್ವಾಭಾವಿಕವಾಗಿದ್ದರೆ ಅದು ಚೀನಾದಂತೆಯೇ ಇರುವ ತಾಪಮಾನದಲ್ಲಿ ಮಾತ್ರ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಆದರೆ ಇದು ಸ್ವಿಟ್ಜರ್ಲೆಂಡ್‌ನಂತಹ ದೇಶದಲ್ಲಿ ಹರಡುತ್ತಿದೆ, ಅದೇ ರೀತಿ ಮರುಭೂಮಿಯಲ್ಲಿ ಕೂಡಾ ಹರಡುತ್ತಿದೆ… ಪ್ರಾಣಿಗಳು ಮತ್ತು ವೈರಸ್‌ಗಳ ಬಗ್ಗೆ ನಾನು 40 ವರ್ಷಗಳ ಸಂಶೋಧನೆ ಮಾಡಿದ್ದೇನೆ. ಇದು ಸ್ವಾಭಾವಿಕವಲ್ಲ, ಇದನ್ನು ತಯಾರಿಸಲಾಗಿದೆ ಹಾಗೂ ಸಂಪೂರ್ಣವಾಗಿ ಕೃತಕವಾಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ನಾನು 4 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಆ ಪ್ರಯೋಗಾಲಯದ ಎಲ್ಲಾ ಸಿಬ್ಬಂದಿಗಳು ನನಗೆ ಪರಿಚಯವಿದೆ. ಕೊರೊನಾ ಅಪಘಾತದ ನಂತರ ನಾನು ಅವರೆಲ್ಲರಿಗೂ ಫೋನ್ ಮಾಡುತ್ತಿದ್ದೇನೆ. ಆದರೆ ಅವರೆಲ್ಲರ ಫೋನ್ ಮೂರು ತಿಂಗಳಿನಿಂದ ಡೆಡ್ ಆಗಿದೆ. ಈ ಎಲ್ಲಾ ಲ್ಯಾಬ್ ತಂತ್ರಜ್ಞರು ಸಾವನ್ನಪ್ಪಿದ್ದಾರೆ ಎಂಬುವುದು ನನ್ನ ನಿಲುವ”

“ಇಲ್ಲಿಯವರೆಗಿನ ನನ್ನ ಎಲ್ಲ ಜ್ಞಾನ ಮತ್ತು ಸಂಶೋಧನೆಯ ಆಧಾರದ ಮೇಲೆ ಹೇಳುತ್ತಿದ್ದೇನೆ, ಕೊರೊನಾ ಸ್ವಾಭಾವಿಕವಲ್ಲ ಎಂದು 100% ಆತ್ಮವಿಶ್ವಾಸದಿಂದ ಹೇಳಬಲ್ಲೆ. ಇದು ಬಾವಲಿಗಳಿಂದ ಬಂದಿಲ್ಲ, ಚೀನಾ ಇದನ್ನು ತಯಾರಿಸಿದೆ. ನಾನು ಹೇಳುತ್ತಿರುವುದು ಈಗ ಅಥವಾ ನನ್ನ ಮರಣದ ನಂತರ ಸುಳ್ಳು ಎಂದು ಸಾಬೀತಾದರೆ, ನನ್ನ ನೊಬೆಲ್ ಪ್ರಶಸ್ತಿಯನ್ನು ವಾಪಾಸು ಪಡೆಯಬಹುದು. ಚೀನಾ ಸುಳ್ಳು ಹೇಳುತ್ತಿದೆ ಹಾಗೂ ಸತ್ಯವು ಒಂದು ದಿನ ಎಲ್ಲರೆದುರು ಬಹಿರಂಗಗೊಳ್ಳುತ್ತದೆ. ”

ಈ ಸಂದೇಶವು ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯದ ಪ್ರೊ.ತಸುಕು ಹೊಂಜೊ ಅವರು ಹೇಳುತ್ತಿದ್ದಾರೆ, ನಾನು ನನ್ನ ಜೀವನದ 40 ವರ್ಷಗಳನ್ನು ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದ್ದೇನೆ. ಕೊರೊನಾ ವೈರಸ್ ಚೀನಾ ಪ್ರಯೋಗಾಲಯದಲ್ಲಿ ಅಸ್ವಾಭಾವಿಕವಾಗಿ ಸಿದ್ಧಪಡಿಸಿದೆ, ಎಂದು ಬಿಜೆಪಿಯ ಡಿ. ಆರ್. ಯಶ್ಪಾಲ್ ಸಿಂಗ್ ಟ್ವೀಟ್ ಮಾಡಿದ್ದರು.

ಫ್ಯಾಕ್ಟ್ ಚೆಕ್:

ವೈರಲ್ ಸಂದೇಶದಲ್ಲಿ ಇರುವಂತೆ ತಸುಕು ಹೊಂಜೊ, ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕ ಎಂಬುವುದು ನಿಜ. ಕ್ಯಾನ್ಸರ್ ಚಿಕಿತ್ಸೆಯ ಆವಿಷ್ಕಾರಕ್ಕಾಗಿ ಅವರು ಜೇಮ್ಸ್ ಆಲಿಸನ್ ಅವರೊಂದಿಗೆ 2018 ರಲ್ಲಿ ಔಷಧಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪುರಸ್ಕೃತರಾಗಿದ್ದರು. ನ್ಯೂಸ್‌ಮೀಟರ್ ಎಂಬ ಸುದ್ದಿ ಸಂಸ್ಥೆ ಈ-ಮೇಲ್ ಮುಖಾಂತರ ಪ್ರಾಧ್ಯಾಪಕರನ್ನು ಇದರ ಬಗ್ಗೆ ಕೇಳಿದಾಗ ಅವರು, ಈ ಎಲ್ಲಾ ಸುದ್ದಿಗಳುನ್ನು ನಿರಾಕರಿಸಿದ್ದಾರೆ. ಇ-ಮೇಲ್‌ನಲ್ಲಿ, ತಸುಕು ಹೊಂಜೊ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪಿಎಚ್ಡಿ ವಿದ್ಯಾರ್ಥಿ ಅಲೋಕ್ ಕುಮಾರ್ ಪ್ರಾಧ್ಯಾಪಕರ ಪರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.

“ಪ್ರೊ. ಹೊಂಜೊ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಸಂದೇಶದ ಪ್ರತಿಯೊಂದು ವಾಕ್ಯವೂ ಸಂಪೂರ್ಣವಾಗಿ ಸುಳ್ಳು ಮತ್ತು ಸತ್ಯದೊಂದಿಗೆ ಯಾವುದೇ ಸಂಬಂಧವಿಲ್ಲ. ಪ್ರೊ. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ಕೆಲಸ ಮಾಡಲಿಲ್ಲ, ಎಂದಿಗೂ ಅಲ್ಲಿಗೆ ಕರೆ ಮಾಡಿಲ್ಲ ಹಾಗೂ ಅವರು ವೈರಸ್ ಮೂಲ ಮತ್ತು ಕಾರ್ಯಗಳು, ಇತರ ಸಂಬಂಧಿತ ವಿಷಯಗಳ ಬಗ್ಗೆ ಕೆಲಸ ಮಾಡಲಿಲ್ಲ.” ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ವೈರಲ್ ಸಂದೇಶದಲ್ಲಿ ಇರುವಂತೆ, ಪ್ರೊಫೆಸರ್ ತಸುಕು ಹೊಂಜೊ ಕಳೆದ ನಾಲ್ಕು ವರ್ಷಗಳಿಂದ ಚೀನಾದ ವುಹಾನ್‌ನಲ್ಲಿರುವ ಯಾವುದೇ ಪ್ರಯೋಗಾಲಯದಲ್ಲಿ ಕೆಲಸ ಮಾಡಿಲ್ಲ. ಕ್ಯೋಟೋ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ ನ ಅವರ ಜೀವನಚರಿತ್ರೆಯಲ್ಲಿ, ಪ್ರಾಧ್ಯಾಪಕರು 1984 ರಿಂದ 2005 ರವರೆಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಪೂರ್ಣ ಸಮಯ ಬೋಧಿಸುತ್ತಿದ್ದಾರೆಂದು ಹೇಳುತ್ತಿದೆ. ಪ್ರಸ್ತುತ, ಅವರು ಕ್ಯೋಟೋ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಮತ್ತು ಜೀನೋಮಿಕ್ ಮೆಡಿಸಿನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.


ಇದನ್ನೂ ಓದಿ: ಮುಸ್ಲಿಮರಿಂದ ಕಲ್ಲು ತೂರಾಟಕ್ಕೊಳಗಾಗಿ ಯುಪಿ ವೈದ್ಯೆ ವಂದನಾ ತಿವಾರಿ ಸಾವಿಗೀಡಾದರೆ?


ಕೊರೊನಾ ವೈರಸ್ ಸ್ವಾಭಾವಿಕವಲ್ಲ’ ​​ಎಂಬ ಹೇಳಿಕೆಯ ಬಗ್ಗೆ ಗೂಗಲ್ ನಲ್ಲಿ ಹುಡುಕಾಡಿದರೆ ಈ ಸಂಬಂಧ ಹುಡುಕಾಟ ನಡೆಸಿದರೆ ಪ್ರಾಧ್ಯಾಪಕ ತಸುಕು ಹಂಜೊ ಹೇಳಿರುವ ಯಾವುದೇ ಫಲಿತಾಂಶಗಳು ನೀಡುವುದಿಲ್ಲ. ವಾಸ್ತವವಾಗಿ ತಸುಕು ಹಂಜೊ 2020 ರ ಏಪ್ರಿಲ್ 10 ರಂದು ಪ್ರಕಟವಾದ ಜಪಾನ್ ಮೂಲದ ಸುದ್ದಿ ಪೋರ್ಟಲ್ ನಿಕ್ಕಿ ಏಷ್ಯನ್ ರಿವ್ಯೂಗೆ ಸಂದರ್ಶನವೊಂದನ್ನು ನೀಡಿ “ರೋಗವೂ ಚೀನಾದಲ್ಲಿ ಹುಟ್ಟಿಕೊಂಡಿತು ಆದರೆ ದೇಶವು ಮೊದಲನೆಯದಾಗಿ ಚೇತರಿಸಿಕೊಂಡಿತು. ಇದರಿಂದಾಗಿ ಚೀನಾ ಪ್ರಭಾವವನ್ನು ಹೆಚ್ಚಿಸುತ್ತದೆ ಅಥವಾ ಜಗತ್ತು ಚೀನಾವನ್ನು ದೂರವಿಡುತ್ತದೆಯೆ ಎಂದು ನಾನು ಹೇಳಲಾರೆ, ಆದರೆ ವೈರಸ್ ಸ್ಪೋಟಗೊಂಡ ನಂತರ ಜಾಗತಿಕ ಕ್ರಮವು ಬದಲಾಗುವ ಸಾಧ್ಯತೆಯಿದೆ.” ಎಂದಷ್ಟೆ ಹೇಳಿದ್ದರು. ಆದರೆ ಕೊರೊನಾ ಮಾನವ ನಿರ್ಮಿತ ವೈರಸ್ ಎಂಬ ಬಗ್ಗೆ ತಸುಕು ಹಂಜೊ ಎಲ್ಲೂ ಉಲ್ಲೇಖಿಸಿಲ್ಲ.

ಆದರೆ, ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ವೈರಾಲಜಿಸ್ಟ್ ವೈರಸ್ ಮಾನವ ನಿರ್ಮಿತ ಎಂದಿದ್ದಾರೆಂದು ಹೇಳಿರುವ ಮಾಧ್ಯಮ ವರದಿಗಳಿವೆ. “ಫ್ರೆಂಚ್ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ, ಔಷಧದಲ್ಲಿ 2008 ರ ನೊಬೆಲ್ ಪ್ರಶಸ್ತಿಯನ್ನು ಪಡೆದ ಏಡ್ಸ್ ವೈರಸ್ನ ಸಹ-ಅನ್ವೇಷಕ, ಕೊರೊನಾ ವೈರಸ್ ಜೀನೋಮ್ನಲ್ಲಿ ಎಚ್ಐವಿ ಮತ್ತು ಮಲೇರಿಯಾದ ಸೂಕ್ಷ್ಮಾಣು ಅಂಶಗಳು ಹೆಚ್ಚು ಶಂಕಿತವಾಗಿದೆ ಮತ್ತು ವೈರಸ್ನ ಗುಣಲಕ್ಷಣಗಳು ಸ್ವಾಭಾವಿಕವಾಗಿ ಹುಟ್ಟಿಕೊಂಡಿಲ್ಲ ”ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ಪ್ರೊ. ತಸುಕು ಹೊಂಜೊ ಎಂಬ ಹೆಸರಿನ ಖಾತೆ “ಕೊರೊನಾ ವೈರಸ್ ಯಾವ ಉದ್ದೇಶಕ್ಕಾಗಿ ಉತ್ಪತ್ತಿಯಾಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ಇದು ಮಾನವ ನಿರ್ಮಿತ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.” ಎಂದು ಬರೆದಿದೆ. ಆದರೆ ಟ್ವಿಟರ್ ಹ್ಯಾಂಡಲ್ ಅದು ತಸುಕು ಹೊಂಜೊ ಅವರದೆ ಎಂಬ ಬಗ್ಗೆ ಪರಿಶೀಲಿಸಲಾಗಿಲ್ಲ. ಹೊಂಜೊ ಅವರ ಹೇಳಿಕೆಯಂತೆ “ನೀವು ಪ್ರಸ್ತಾಪಿಸಿದ ಟ್ವಿಟರ್ ಹ್ಯಾಂಡಲ್ ಪ್ರೊ. ತಸುಕು ಹೊಂಜೊಗೆ ಸೇರಿಲ್ಲ. ದುರುದ್ದೇಶಪೂರಿತ ಉದ್ದೇಶಗಳೊಂದಿಗೆ ಇದನ್ನು ಯಾರೋ ರಚಿಸಿದ್ದಾರೆ. ದಯವಿಟ್ಟು ಈ ನಕಲಿ ಸುದ್ದಿಯನ್ನು ನಿಲ್ಲಿಸಿ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹುಡುಕಾಟ ನಡೆಸಿದರೆ ಈ ಖಾತೆಯನ್ನು 2020 ರ ಏಪ್ರಿಲ್‌ನಲ್ಲಿ ರಚಿಸಲಾಗಿದೆ ಎಂದು ತಿಳಿಯಬಹುದು, ಏಪ್ರಿಲ್ 24 ರಿಂದ ಕೇವಲ ಎರಡು ಟ್ವೀಟ್‌ಗಳು ಇದ್ದು, ಇದು ನಕಲಿ ಖಾತೆ ಎಂದು ಸೂಚಿಸುತ್ತದೆ.

ಈ ಮೂಲಕ ನಾವು ತಸುಕು ಅವರದ್ದು ಎಂದು ಹೇಳಿಕೊಂಡು ವೈರಲಾಗಿರುವ ಸಂದೇಶವೂ ಸುಳ್ಳು ಎಂದು ತಿಳಿದುಕೊಳ್ಳಬಹುದು. ಕೊರೊನಾವನ್ನು ತಯಾರಿಸಲಾಗಿದೆ ಮತ್ತು ವೈರಸ್ ಸಂಪೂರ್ಣವಾಗಿ ಕೃತಕವಾಗಿದೆ ಎಂದು ತಸುಕು ಹೊಂಜೊ ಹೇಳಿದ್ದಾರೆನ್ನುವ ಸಂದೇಶ ಸುಳ್ಳಾಗಿದೆ. ಯಾಕೆಂದರೆ ಪ್ರೊ. ಹೊಂಜೊ ಅವರೆ ಸ್ವತಃ ಇದನ್ನು ನಿರಾಕರಿಸಿದ್ದಾರೆ. ಅಲ್ಲದೆ ಕೊರೊನಾ ವೈರಸನ್ನು ತಯಾರಿಸಲಾಗಿದೆ ಎಂದ ಪ್ರೊ.ತಾಸುಕು ಹೊಂಜೊ ಕುರಿತ ಯಾವುದೇ ಮಾಧ್ಯಮ ವರದಿಗಳಿಲ್ಲ.

ಜಪಾನಿನ ಪ್ರೊಫೆಸರ್ ವುಹಾನ್ ಲ್ಯಾಬ್‌ನಲ್ಲಿ 4 ವರ್ಷಗಳನ್ನು ಕಳೆದಿದ್ದಾರೆ ಎಂಬ ಸುದ್ದಿ ಕೂಡಾ ಸುಳ್ಳಾಗಿದ್ದು. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ನಾಲ್ಕು ವರ್ಷಗಳನ್ನು ಕಳೆದಿಲ್ಲ ಎಂದು ಅವರ ಜೀವನಚರಿತ್ರೆ ಹೇಳುತ್ತದೆ, ಹಾಗೂ ಅವರದು ಎಂದು ಹೇಳಿಕೊಳ್ಳುವ ಟ್ವಿಟರ್ ಹ್ಯಾಂಡಲ್ ಕೂಡಾ ನಕಲಿಯಾಗಿದೆ.


ಇದನ್ನೂ ಓದಿ:  ಅರ್ನಬ್ ಗೋಸ್ವಾಮಿಯ ದಾಳಿಯ ವಿಡಿಯೋ, ದಾಳಿಗೂ ಮುನ್ನವೇ ಮಾಡಲಾಗಿತ್ತೇ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...