Homeಮುಖಪುಟಬಸವ ಜಯಂತಿ ಕುರಿತು ಪಿಣರಾಯಿ ವಿಜಯನ್‌ರಿಂದ‌ ಕನ್ನಡದಲ್ಲಿ ಟ್ವೀಟ್‌: ನೆಟ್ಟಿಗರು ಫಿದಾ!

ಬಸವ ಜಯಂತಿ ಕುರಿತು ಪಿಣರಾಯಿ ವಿಜಯನ್‌ರಿಂದ‌ ಕನ್ನಡದಲ್ಲಿ ಟ್ವೀಟ್‌: ನೆಟ್ಟಿಗರು ಫಿದಾ!

- Advertisement -
- Advertisement -

ಬಸವ ಜಯಂತಿಯ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರು ಕನ್ನಡದಲ್ಲಿ ಬಸವಣ್ಣನವರ ವಚನವನ್ನು ಟ್ವೀಟ್‌ ಮಾಡುವ ಮೂಲಕ ಸಾವಿರಾರು ಕನ್ನಡ ಅಭಿಮಾನಿಗಳು ಮನಗೆದ್ದಿದ್ದಾರೆ.

ಬಸವ ಜಯಂತಿ ಗ್ರೀಟಿಂಗ್ಸ್‌ ಎಂಬ ವಾಕ್ಯಗಳಿಂದ ಆರಂಭವಾಗುವ ಅವರ ಟ್ವೀಟ್‌ “ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮಹಾನ್‌ ಬಸವಣ್ಣನವರು ಮಾರ್ಗದರ್ಶಕರಾಗಲಿ. ನಾವು ವಿಭಜಿತವಾಗಿದ್ದರೆ ಈ ಸಾಂಕ್ರಾಮಿಕದ ವಿರುದ್ಧ ಜಯಿಸಲು ಸಾಧ್ಯವಿಲ್ಲ. ಗೆಲ್ಲಲ್ಲು ಅದು ನಮ್ಮ ಒಗ್ಗಟ್ಟನ್ನು ಕೇಳುತ್ತದೆ” ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಮುಂದುವರಿದು “”ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ.” ಎಂಬ ಬಸವಣ್ಣನವರ ಖ್ಯಾತ ವಚನವನ್ನು ಟ್ವೀಟ್‌ ಮಾಡುವ ಮೂಲಕ ಬಸವಣ್ಣನವರನ್ನು ಸ್ಮರಿಸಿದ್ದಾರೆ.

ಪಿಣರಾಯಿ ವಿಜಯನ್‌ರವರ ಬಸವ ಜಯಂತಿಯ ಕುರಿತು ಈ ಟ್ವೀಟ್‌ ಮಾಡುತ್ತಲೇ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬಹಳಷ್ಟು ನೆಟ್ಟಿಗರು ಅವರ ಟ್ವೀಟ್‌ಗೆ ಫಿದಾ ಆಗಿದ್ದು ಅದನ್ನು ಹಂಚಿಕೊಂಡಿದ್ದಾರೆ.

ಕೇರಳ CM ಅವರಿಂದ ಬಸವ ಜಯಂತಿಯ ಶುಭಾಶಯ ❤️

Posted by Sharath Chandra on Sunday, April 26, 2020

#Pinarayivijayan ❤️❤️ದುರಂತ ಅಂದರೆ ನಮ್ಮ ರಾಜ್ಯಾಧವರಿಗೆ ಬಸವ ತತ್ವ ಬೇಡ ಲಿಂಗಾಯತರ ವೋಟ್ ಬ್ಯಾಂಕ್ ಸಾಕು.

Posted by Vinay Shivanna on Sunday, April 26, 2020

ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕೇರಳದ ರೋಗಿಗಳನ್ನು ಕರ್ನಾಟಕಕ್ಕೆ ಬರದಂತೆ ರಸ್ತೆ ಮುಚ್ಚಲಾಗಿತ್ತು. ಈ ಕುರಿತು ಪರವಿರೋಧದ ಅಭಿಪ್ರಾಯಗಳು ದಾಖಲಾಗಿದ್ದವು. ಕೊನೆಗೆ ವಿಷಯ ಕೋರ್ಟ್ ಮೆಟ್ಟಿಲೇರಿತ್ತು ಸಹ. ಈ ಹಿನ್ನೆಲೆಯಲ್ಲಿ ಪಿಣರಾಯಿರವರು ಕೊರೊನಾ ಸಾಂಕ್ರಾಮಿಕದ ವಿರುದ್ಧ ಜೊತೆಯಾಗಿ ಹೋರಾಡೋಣ ಎಂಬ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read