Homeಮುಖಪುಟಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ಸರಕಾರದ ಸಂವಹನ ಹೆಂಗದ ಅಂದರ ಅದು ಇರಲಿಲ್ಲಾ ಅಂದರೂ ಅಡ್ಡಿ ಇಲ್ಲಾ ಅನ್ನೊ ಹಂಗದ. ಭಯಂಕರ ಭೀತಿಯ ಕಾಲದಾಗ ಸಂವಹನ ಹೆಂಗ ಮಾಡಬಾರದು ಅನ್ನೋದಕ್ಕ ನಮ್ಮ ಸರಕಾರದ ಮಾತು- ಬರಹ ಉದಾಹರಣೆ ಆಗ್ಯಾವು.

- Advertisement -
- Advertisement -

ಸುದ್ದಿ ಕಾಲಮ್ಮಿನ್ಯಾಗ ಸುದ್ದಿನ ಸುದ್ದಿ ಆಗೋ ಕಾಲ ಇದು. ಈ ಕೊರೊನಾ ಅನ್ನೋ ದುಸ್ಯಾ ನಮ್ಮ ಮ್ಯಾಲ ಕಡಕೊಂಡು ಬಿದ್ದಾಗಿಂದಾ ನಾವು ಕಿರಿಕಿರಿಯೊಳಗ ಇದ್ದೇವಿ. ಅಕ್ಕಿ- ಬ್ಯಾಳಿ- ಹಾಲು- ತರಕಾರಿ ಸಿಗತದೋ ಇಲ್ಲೋ ಅಂತ ಚಿಂತಿ ಆಗೇದ.

ಅದಕ್ಕಿಂತ ದೊಡ್ಡ ಚಿಂತಿ ಅಂದರ ಮಾಹಿತಿಯದ್ದು. ಬ್ಯಾರೆ ಕೊರತೆ ಹೆಂಗಾದರೂ ತಡಕೊಳ್ಳಬಹುದು. ಮಾಹಿತಿ ಕೊರತೆ ಹೆಂಗ ತಡಕೋತೀರಿ? ಒಂದು ವೇಳೆ ಮಾಹಿತಿ ಸಿಗದೇ ಇದ್ದರೂ ಪರವಾಗಿಲ್ಲ, ತಪ್ಪು ಮಾಹಿತಿ ಸಿಗಬಾರದು. ಅದು ನಮ್ಮನ್ನ ಅಂಧಕಾರದ ಕೂಪಕ್ಕ ತಳ್ಳತದ. ನಮ್ಮವರನ್ನ ದ್ವೇಷ ಮಾಡೋ ಹಂಗ ಮಾಡತದ. ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ.

ಈಗ ನಮಗ ಅನೇಕ ಮೂಲಗಳಿಂದ ಮಾಹಿತಿ ಬರಲಿಕ್ಕೆ ಹತ್ತೇದ. ಅದರಾಗ ಮುಖ್ಯವಾದ್ದದವು ಎರಡು- ಸರಕಾರ ಹಾಗೂ ಮಾಧ್ಯಮ. ಅವು ಎರಡೂ ಸರಿಯಾಗಿಲ್ಲ. ಜನಸಮೂಹ ಹೆದರಿಕೊಂಡು ಕೂತಾಗ ಅವರ ಹೆದರಿಕೆ ಕಡಿಮಿ ಮಾಡೋದು ಬಿಟ್ಟು ಹೆಚ್ಚು ಮಾಡಲಿಕ್ಕೆ ಹತ್ಯಾರು. ಇದಕ್ಕ ನಮ್ಮ ಕಡೆ ಹೆದರಿದವರ ಮ್ಯಾಲೆ ಕಪ್ಪಿ ಒಗದಂಗ ಅಂತ ಅಂತಾರ.

ಸರಕಾರದ ಸಂವಹನ ಹೆಂಗದ ಅಂದರ ಅದು ಇರಲಿಲ್ಲಾ ಅಂದರೂ ಅಡ್ಡಿ ಇಲ್ಲಾ ಅನ್ನೊ ಹಂಗದ. ಭಯಂಕರ ಭೀತಿಯ ಕಾಲದಾಗ ಸಂವಹನ ಹೆಂಗ ಮಾಡಬಾರದು ಅನ್ನೋದಕ್ಕ ನಮ್ಮ ಸರಕಾರದ ಮಾತು- ಬರಹ ಉದಾಹರಣೆ ಆಗ್ಯಾವು. ಮಹಾಮಹಿಮ ಪಂತ ಪ್ರಧಾನರು ನಿಮ್ಮ ಮನಿಯೊಳಗ ನಿಂತು ಕೊಂಡು ಚಪ್ಪಾಳೆ ಹೊಡೀರಿ ಅಂದರ ನಮ್ಮ ಮಂದಿ ಬೀದಿಗೆ ಬಂದು ಶಂಖಾ ಹೊಡದರು. ನನ್ನ ಮಾತು ಮಂದಿ ತಪ್ಪು ತಿಳಕೋಬಹುದು ಅಂತ ವಿಚಾರ ಮಾಡದೇ ಅವರು ಇಡೀ ದೇಶಾ ಮೂರು ವಾರ ಕೀಲಿ – ಕಿಟಕ್ ಮಾಡತೇವಿ ಅಂತ ಘೋಷಣೆ ಮಾಡಿದರು. ಅದರಿಂದ ಸಾವಿರಾರು ಜನ ದುಡಕೊಂಡು ತಿನ್ನೋರು ಊರು ಬಿಟ್ಟು ರಾಜ್ಯದಿಂದ ರಾಜ್ಯಕ್ಕ ನಡಕೊಂಡು ಹೋದರು. ನಾವು ಮಾಡಿದ್ದು ನಿಮಗ ಅರ್ಥ ಆಗಲಿಲ್ಲ. ಆದರ ನಾನು ಅದನ್ನ ಮಾಡಬೇಕಿತ್ತು. ಸಾರಿ ಅಂತ ಅಂದರು.

ಎರಡು ಸರೆ ಠೀವಿಯೊಳಗ, ಒಂದು ಸರೆ ರೇಡಿಯೋದಾಗ ಮೂರು ತಾಸು ಮಾತಾಡಿದರೂ ಸಹ, ನೀವು ಹಿಂಗ ಮಾಡರಿ, ಹಿಂಗಿಂಗ ಮಾಡಬ್ಯಾಡರಿ ಅಂತ ಹೇಳಿದರೋ ಸಹಾ, ನಾವು ಏನು ಮಾಡಲಿಕ್ಕೆ ಹತ್ತೇನಿ, ಏನು ಮಾಡಲಿಕ್ಕೆ ನಮ್ಮ ಕಡೆ ಆಗವಲ್ಲತು ಅಂತ ಅವರು ಹೇಳಲಿಲ್ಲ. ರಾಷ್ಟ್ರ ಮಟ್ಟದ ಒಂದು ಸಂಶೋಧನೆ ಕೇಂದ್ರ ಮಾಡತೇವಿ, ಅಂತರಾಷ್ಟ್ರೀಯ ತಜ್ಞರೊಡನೆ ನಮ್ಮ ದೇಶದ ವಿಜ್ಞಾನಿಗಳು ಕೂಡಿ ಏನೋ ಪ್ರಯೋಗ ಮಾಡಬೇಕಂತಾರ, ಅಥವಾ ದೇಶಾದ್ಯಂತ ಇಷ್ಟು ಆಸ್ಪತ್ರೆ ತಗದೇವಿ, ಇಷ್ಟು ಉಪಕರಣ ಅದಾವು, ಇನ್ನಷ್ಟು ಬೇಕಾಗ್ಯಾವು, ಅದಕ್ಕ ಇಷ್ಟು ರೊಕ್ಕ ತಗದ ಇಟ್ಟೇವಿ ಅಂತ ಹೇಳಲಿಲ್ಲ.


ಇದನ್ನೂ ಓದಿ: ಕೊರೊನ ಸಾಂಕ್ರಾಮಿಕ ಬಿಕ್ಕಟ್ಟಿನ ಬೆಂಕಿಗೆ ಪುಳ್ಳೆಯಿಟ್ಟ ವೈಜ್ಞಾನಿಕ ಮನೋಭಾವದ ಅಭಾವ


ಅಷ್ಟಾದರೂ ನಾವು ಕಣ್ಣು – ಕಿವಿ ಮುಚಿಗೊಂಡು ಅವರಿಗೆ ಚಪ್ಪಾಳಿ ಹೊಡಿದಿವಿ. ಡಾಕ್ಟ್ರು, ಪೋಲಿಸರು, ಮಾಧ್ಯಮದವರು, ಅವಶ್ಯಕ ಸಾಮಗ್ರಿ ತಂದು ಕೋಡೋರಿಗೆ ಧನ್ಯವಾದ ಹೇಳಲಿಕ್ಕೆ ಚಪ್ಪಾಳಿ ಹೊಡೀರಿ ಅಂತ ಅವರು ಹೇಳಿದರೂ ನಾವು ಹಿಂಗ ಹೇಳ್ಯಾರಲ್ಲಾ ಅಂತ ಹೇಳಿ ಅವರಿಗೆ ಚಪ್ಪಾಳಿ ಹೊಡಿದೆವಿ. ಕೋರೋನಾ ಮುರ್ದಾಬಾದ ಅಂದಿವಿ, ಇವರಿಗೆ ಜಿಂದಾಬಾದ ಅಂದಿವಿ.

janta curfew violation Jinpar Case Book Karna Chahiye GODI Media Ye Kyun Nahi Batate

Posted by Deepika Singh Rajawat on Wednesday, April 1, 2020

ದೇಶದಾಗ ಒಬ್ಬರು ಆರೋಗ್ಯ ಮಂತ್ರಿ ಅದಾರು, ಅವರು ಕಾಲೇಜಿನ್ಯಾಗ ಡಾಕ್ಟರಿಕೆ ಓದ್ಯಾರು, ಅವರು ಕೊರೊನಾ ಸಂಬಂಧ ಏನು ಮಾಡಾಕ ಹತ್ಯಾರು ಅನ್ನೋದು ನಮಗ ಗೊತ್ತಿಲ್ಲ. ಲಾಕ್ ಡೌನ್ ಕೀಲಿ – ಕಿಟಕ್ ಮಾಡಿದಾಗ ಮಾತ್ರ ಅವರ ಮನೀಯವರ ಜೊತೆಗೆ ಅವರು ಚನ್ನೀಮಣಿ ಆಡಿದರೂ ಅಂತ ಮಾತ್ರ ಗೊತ್ತಾಗೇತಿ.

ಸರಕಾರದಿಂದಾ ಜನರಿಗೆ ಮಾಹಿತಿ ಹೆಂಗ ಬರಬೇಕು ಅನ್ನೋದಕ್ಕ ಇಂಗ್ಲಂಡಿನ್ಯಾಗ ಒಂದು ದೊಡ್ಡ ಆಂದೋಲನನ ಆಗಿ ಹೋತು. ಮಾರ್ಟಿನ ಕಟ್ಸ ಅಂತ ಹೇಳಿ ಒಬ್ಬ ಮನುಷಾ ಸರಕಾರ ಜನರಿಗೆ ಅರ್ಥವಾಗುವಂಥಾ ಭಾಷೆಯೊಳಗ ಮಾತಾಡಬೇಕು ಅಂತ ಹೇಳಿ ಹೋರಾಟ ಮಾಡಿದ. ಅವನ ಜೊತೆ ಅನೇಕರು ಸೇರಿಕೊಂಡರು. ಈಗ ಅಲ್ಲಿ ಸರಳ ಭಾಷಾ ಆಯೋಗ ಅಂತ ಒಂದು ಅದ. ಅದು ಸರಕಾರಿ ಆದೇಶಗಳಿಗೆ ಇದು ಸರಳ ಐತಿ, ಇದು ಇಲ್ಲಾ ಅಂತ ಪ್ರಮಾಣ ಪತ್ರ ಕೊಡತದ. ನಮ್ಮಲ್ಲಿ ಕಠಿಣ – ಅರ್ಥಹೀನ ಭಾಷಾ ಆಯೋಗ ಅಂತ ಮಾಡಬೇಕಾಗೇದ. ಸರಳ ಭಾಷೆ ಯೊಳಗ ಯಾವರ ಆದೇಶ ಇದ್ದರ ಅದು ಅಪವಾದ ಅನ್ನೋ ಹಂಗ ಆಗಿ ಹೋಗೇದ. ಅದರ ಬಗ್ಗೆ ಇನ್ನೊಮ್ಮೆ ನೋಡೋಣು.

ಇನ್ನ ಮಾಧ್ಯಮದವರು ʻಕೊರೋನಾ ಮಾರಿ: ಮೂರನೇ ಮಹಾಯುದ್ಧʼ ಅಂತ ಹೇಳಿ ಭೀತಿ ಹೆಚ್ಚು ಮಾಡಲಿಕ್ಕೆ ಹತ್ತಿ ಬಿಟ್ಟಾರ. ಸ್ಪೇನಿನ ಪ್ಲೇಗಿನ ಚಿತ್ರ ತೋರಿಸಿ ಸಮೂಹ ಸನ್ನಿ ಸೃಷ್ಟಸಲಿಕ್ಕೆ ಹತ್ತಿ ಬಿಟ್ಟಾರ. ಸಂಬಂಧ ಇರಲಾರದ ವಿಡಿಯೋ ತೋರಿಸಿ ನೀವು ಇವತ್ತ ನಿಮ್ಮ ಎಲ್‌ಐಸಿ ಪಾಲಿಸಿ ಸೆಟ್ಲ ಮಾಡೋ ಹಂಗ ಮಾಡಾಕ ಸುರು ಮಾಡ್ಯಾರ.

ʻಅವರು ಹೇಳಿ ಕೇಳಿ ಸುಳ್ಳುಬುರುಕರು, ಯಾವಾಗೋ ಹಾದಿ ತಪ್ಪಿ ಬಿಟ್ಟಾರ. ಅವರನ್ನ ಸರಿ ಮಾಡಲಿಕ್ಕೆ ಬರಂಗಿಲ್ಲ ಅನ್ನೋ ಮಟ್ಟಿಗೆ ಹೋಗಿಬಿಟ್ಟಾರʼ ಅಂತ ಕೆಲವರ ಅಂಬೋಣ. ಆದರ ಇಂತಹದ್ದೇ ಮಾತನ್ನ ಪತ್ರಿಕೋದ್ಯಮದ ದಂತಕಥೆಯಾದ ಗಣೇಶ ಶಂಕರ ವಿದ್ಯಾರ್ಥಿ ಅವರಿಗೆ ಯಾರೋ ಹೇಳಿದಾಗ. ಇತರರು ಹಾಳಾಗಿದ್ದಾರೆಂದು ನಾವು ಸುಮ್ಮನೇ ಕೂಡುವುದು ಬೇಡ. ನಮ್ಮ ಕೈಲಾದದ್ದು ನಾವು ಮಾಡೋಣ. ಹಸಿವೆಯಾಗಿದೆ ಎಂದು ಖಾಲಿ ಒಲೆಯ ಮುಂದೆ ಕೂತರೆ ಹೇಗೆ? ಒಲೆ ಉರಿಸಬೇಡವೇ, ರೊಟ್ಟಿ ತಟ್ಟಬೇಡವೇ ಅಂತ ಹೇಳಿದ್ದರಂತ. ನಾವೆಲ್ಲಾ ಕತ್ತಲಿನ್ಯಾಗ ಜಾರಿ ಬೀಳತಿರೋ ಈ ಟೈಂನ್ಯಾಗ ಇಂಥಾ ಬೆಳಕಿನ ಕೋಲು ನಮಗ ಆಸರೆ ಯಾಗಲಿ.

ಗಣೇಶ ಶಂಕರ ವಿದ್ಯಾರ್ಥಿ

ಕರ್ನಾಟಕ ಮೂಲದವರಾದ ಸುಪ್ರಿಂ ಕೋರ್ಟು ಮಾಜಿ ನ್ಯಾಯಮೂರ್ತಿ ಎಮ್‌ಎನ್ ವೆಂಕಟಾಚಲಯ್ಯ ಅವರು ಅಮೇರಿಕಾದ ನ್ಯಾಯಮೂರ್ತಿಯಾಗಿದ್ದ ಲೂಯಿಸ ಬ್ರ‍್ಯಾಂಡಿಸ ಅವರ ಒಂದು ಮಾತನ್ನು ಉಚ್ಛರಿಸುತ್ತಾರೆ. ಅದೇನೆಂದರೆ ʻಸೂರ್ಯನ ಬೆಳಕು ಶ್ರೇಷ್ಠ ಸೋಂಕು ನಿರೋಧಕʼ. ತನ್ನ ಒಡಲಿನಲ್ಲಿ ಅನೇಕ ಅರ್ಥಗಳನ್ನು ಒಳಗೊಂಡ ಈ ಮಾತನ್ನು ನಾವು ಮರಿಯೋದು ಬ್ಯಾಡ, ಅಲ್ಲವೇ ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಖಾಲಿ ಮೆದುಳಿನ ಸುತ್ತ….
    ಕೀಲಿ-ಕಿಟಕ್ – ಲಾಕ್‌ಡೌನ್‌ಗೆ ಎಂತಹ ಅರ್ಥಪೂರ್ಣ ಪದ. ನಗೆನೂ ಉಕ್ಕಿ ಬರಾಕ್ ಹತ್ತೆöÊತಿ.
    ಸರ‍್ಯಾನ ಬೆಳಕಿನ ಮ್ಯಾಲನು ರ‍್ದಾರ. ಅದಕಿಂತ ಸಂಡೇ ಹಚ್ಚತಾರಲ್ಲ ಬೆಂಕಿ-ಬೆಳಕು, ಅದ ಬಾಳಾ ಶ್ರೇಷ್ಠ ಅಂತಾರ ನೋಡ್ರಪ…
    -ಮಲ್ಲಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...