Homeಮುಖಪುಟಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ಸರಕಾರದ ಸಂವಹನ ಹೆಂಗದ ಅಂದರ ಅದು ಇರಲಿಲ್ಲಾ ಅಂದರೂ ಅಡ್ಡಿ ಇಲ್ಲಾ ಅನ್ನೊ ಹಂಗದ. ಭಯಂಕರ ಭೀತಿಯ ಕಾಲದಾಗ ಸಂವಹನ ಹೆಂಗ ಮಾಡಬಾರದು ಅನ್ನೋದಕ್ಕ ನಮ್ಮ ಸರಕಾರದ ಮಾತು- ಬರಹ ಉದಾಹರಣೆ ಆಗ್ಯಾವು.

- Advertisement -
- Advertisement -

ಸುದ್ದಿ ಕಾಲಮ್ಮಿನ್ಯಾಗ ಸುದ್ದಿನ ಸುದ್ದಿ ಆಗೋ ಕಾಲ ಇದು. ಈ ಕೊರೊನಾ ಅನ್ನೋ ದುಸ್ಯಾ ನಮ್ಮ ಮ್ಯಾಲ ಕಡಕೊಂಡು ಬಿದ್ದಾಗಿಂದಾ ನಾವು ಕಿರಿಕಿರಿಯೊಳಗ ಇದ್ದೇವಿ. ಅಕ್ಕಿ- ಬ್ಯಾಳಿ- ಹಾಲು- ತರಕಾರಿ ಸಿಗತದೋ ಇಲ್ಲೋ ಅಂತ ಚಿಂತಿ ಆಗೇದ.

ಅದಕ್ಕಿಂತ ದೊಡ್ಡ ಚಿಂತಿ ಅಂದರ ಮಾಹಿತಿಯದ್ದು. ಬ್ಯಾರೆ ಕೊರತೆ ಹೆಂಗಾದರೂ ತಡಕೊಳ್ಳಬಹುದು. ಮಾಹಿತಿ ಕೊರತೆ ಹೆಂಗ ತಡಕೋತೀರಿ? ಒಂದು ವೇಳೆ ಮಾಹಿತಿ ಸಿಗದೇ ಇದ್ದರೂ ಪರವಾಗಿಲ್ಲ, ತಪ್ಪು ಮಾಹಿತಿ ಸಿಗಬಾರದು. ಅದು ನಮ್ಮನ್ನ ಅಂಧಕಾರದ ಕೂಪಕ್ಕ ತಳ್ಳತದ. ನಮ್ಮವರನ್ನ ದ್ವೇಷ ಮಾಡೋ ಹಂಗ ಮಾಡತದ. ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ.

ಈಗ ನಮಗ ಅನೇಕ ಮೂಲಗಳಿಂದ ಮಾಹಿತಿ ಬರಲಿಕ್ಕೆ ಹತ್ತೇದ. ಅದರಾಗ ಮುಖ್ಯವಾದ್ದದವು ಎರಡು- ಸರಕಾರ ಹಾಗೂ ಮಾಧ್ಯಮ. ಅವು ಎರಡೂ ಸರಿಯಾಗಿಲ್ಲ. ಜನಸಮೂಹ ಹೆದರಿಕೊಂಡು ಕೂತಾಗ ಅವರ ಹೆದರಿಕೆ ಕಡಿಮಿ ಮಾಡೋದು ಬಿಟ್ಟು ಹೆಚ್ಚು ಮಾಡಲಿಕ್ಕೆ ಹತ್ಯಾರು. ಇದಕ್ಕ ನಮ್ಮ ಕಡೆ ಹೆದರಿದವರ ಮ್ಯಾಲೆ ಕಪ್ಪಿ ಒಗದಂಗ ಅಂತ ಅಂತಾರ.

ಸರಕಾರದ ಸಂವಹನ ಹೆಂಗದ ಅಂದರ ಅದು ಇರಲಿಲ್ಲಾ ಅಂದರೂ ಅಡ್ಡಿ ಇಲ್ಲಾ ಅನ್ನೊ ಹಂಗದ. ಭಯಂಕರ ಭೀತಿಯ ಕಾಲದಾಗ ಸಂವಹನ ಹೆಂಗ ಮಾಡಬಾರದು ಅನ್ನೋದಕ್ಕ ನಮ್ಮ ಸರಕಾರದ ಮಾತು- ಬರಹ ಉದಾಹರಣೆ ಆಗ್ಯಾವು. ಮಹಾಮಹಿಮ ಪಂತ ಪ್ರಧಾನರು ನಿಮ್ಮ ಮನಿಯೊಳಗ ನಿಂತು ಕೊಂಡು ಚಪ್ಪಾಳೆ ಹೊಡೀರಿ ಅಂದರ ನಮ್ಮ ಮಂದಿ ಬೀದಿಗೆ ಬಂದು ಶಂಖಾ ಹೊಡದರು. ನನ್ನ ಮಾತು ಮಂದಿ ತಪ್ಪು ತಿಳಕೋಬಹುದು ಅಂತ ವಿಚಾರ ಮಾಡದೇ ಅವರು ಇಡೀ ದೇಶಾ ಮೂರು ವಾರ ಕೀಲಿ – ಕಿಟಕ್ ಮಾಡತೇವಿ ಅಂತ ಘೋಷಣೆ ಮಾಡಿದರು. ಅದರಿಂದ ಸಾವಿರಾರು ಜನ ದುಡಕೊಂಡು ತಿನ್ನೋರು ಊರು ಬಿಟ್ಟು ರಾಜ್ಯದಿಂದ ರಾಜ್ಯಕ್ಕ ನಡಕೊಂಡು ಹೋದರು. ನಾವು ಮಾಡಿದ್ದು ನಿಮಗ ಅರ್ಥ ಆಗಲಿಲ್ಲ. ಆದರ ನಾನು ಅದನ್ನ ಮಾಡಬೇಕಿತ್ತು. ಸಾರಿ ಅಂತ ಅಂದರು.

ಎರಡು ಸರೆ ಠೀವಿಯೊಳಗ, ಒಂದು ಸರೆ ರೇಡಿಯೋದಾಗ ಮೂರು ತಾಸು ಮಾತಾಡಿದರೂ ಸಹ, ನೀವು ಹಿಂಗ ಮಾಡರಿ, ಹಿಂಗಿಂಗ ಮಾಡಬ್ಯಾಡರಿ ಅಂತ ಹೇಳಿದರೋ ಸಹಾ, ನಾವು ಏನು ಮಾಡಲಿಕ್ಕೆ ಹತ್ತೇನಿ, ಏನು ಮಾಡಲಿಕ್ಕೆ ನಮ್ಮ ಕಡೆ ಆಗವಲ್ಲತು ಅಂತ ಅವರು ಹೇಳಲಿಲ್ಲ. ರಾಷ್ಟ್ರ ಮಟ್ಟದ ಒಂದು ಸಂಶೋಧನೆ ಕೇಂದ್ರ ಮಾಡತೇವಿ, ಅಂತರಾಷ್ಟ್ರೀಯ ತಜ್ಞರೊಡನೆ ನಮ್ಮ ದೇಶದ ವಿಜ್ಞಾನಿಗಳು ಕೂಡಿ ಏನೋ ಪ್ರಯೋಗ ಮಾಡಬೇಕಂತಾರ, ಅಥವಾ ದೇಶಾದ್ಯಂತ ಇಷ್ಟು ಆಸ್ಪತ್ರೆ ತಗದೇವಿ, ಇಷ್ಟು ಉಪಕರಣ ಅದಾವು, ಇನ್ನಷ್ಟು ಬೇಕಾಗ್ಯಾವು, ಅದಕ್ಕ ಇಷ್ಟು ರೊಕ್ಕ ತಗದ ಇಟ್ಟೇವಿ ಅಂತ ಹೇಳಲಿಲ್ಲ.


ಇದನ್ನೂ ಓದಿ: ಕೊರೊನ ಸಾಂಕ್ರಾಮಿಕ ಬಿಕ್ಕಟ್ಟಿನ ಬೆಂಕಿಗೆ ಪುಳ್ಳೆಯಿಟ್ಟ ವೈಜ್ಞಾನಿಕ ಮನೋಭಾವದ ಅಭಾವ


ಅಷ್ಟಾದರೂ ನಾವು ಕಣ್ಣು – ಕಿವಿ ಮುಚಿಗೊಂಡು ಅವರಿಗೆ ಚಪ್ಪಾಳಿ ಹೊಡಿದಿವಿ. ಡಾಕ್ಟ್ರು, ಪೋಲಿಸರು, ಮಾಧ್ಯಮದವರು, ಅವಶ್ಯಕ ಸಾಮಗ್ರಿ ತಂದು ಕೋಡೋರಿಗೆ ಧನ್ಯವಾದ ಹೇಳಲಿಕ್ಕೆ ಚಪ್ಪಾಳಿ ಹೊಡೀರಿ ಅಂತ ಅವರು ಹೇಳಿದರೂ ನಾವು ಹಿಂಗ ಹೇಳ್ಯಾರಲ್ಲಾ ಅಂತ ಹೇಳಿ ಅವರಿಗೆ ಚಪ್ಪಾಳಿ ಹೊಡಿದೆವಿ. ಕೋರೋನಾ ಮುರ್ದಾಬಾದ ಅಂದಿವಿ, ಇವರಿಗೆ ಜಿಂದಾಬಾದ ಅಂದಿವಿ.

janta curfew violation Jinpar Case Book Karna Chahiye GODI Media Ye Kyun Nahi Batate

Posted by Deepika Singh Rajawat on Wednesday, April 1, 2020

ದೇಶದಾಗ ಒಬ್ಬರು ಆರೋಗ್ಯ ಮಂತ್ರಿ ಅದಾರು, ಅವರು ಕಾಲೇಜಿನ್ಯಾಗ ಡಾಕ್ಟರಿಕೆ ಓದ್ಯಾರು, ಅವರು ಕೊರೊನಾ ಸಂಬಂಧ ಏನು ಮಾಡಾಕ ಹತ್ಯಾರು ಅನ್ನೋದು ನಮಗ ಗೊತ್ತಿಲ್ಲ. ಲಾಕ್ ಡೌನ್ ಕೀಲಿ – ಕಿಟಕ್ ಮಾಡಿದಾಗ ಮಾತ್ರ ಅವರ ಮನೀಯವರ ಜೊತೆಗೆ ಅವರು ಚನ್ನೀಮಣಿ ಆಡಿದರೂ ಅಂತ ಮಾತ್ರ ಗೊತ್ತಾಗೇತಿ.

ಸರಕಾರದಿಂದಾ ಜನರಿಗೆ ಮಾಹಿತಿ ಹೆಂಗ ಬರಬೇಕು ಅನ್ನೋದಕ್ಕ ಇಂಗ್ಲಂಡಿನ್ಯಾಗ ಒಂದು ದೊಡ್ಡ ಆಂದೋಲನನ ಆಗಿ ಹೋತು. ಮಾರ್ಟಿನ ಕಟ್ಸ ಅಂತ ಹೇಳಿ ಒಬ್ಬ ಮನುಷಾ ಸರಕಾರ ಜನರಿಗೆ ಅರ್ಥವಾಗುವಂಥಾ ಭಾಷೆಯೊಳಗ ಮಾತಾಡಬೇಕು ಅಂತ ಹೇಳಿ ಹೋರಾಟ ಮಾಡಿದ. ಅವನ ಜೊತೆ ಅನೇಕರು ಸೇರಿಕೊಂಡರು. ಈಗ ಅಲ್ಲಿ ಸರಳ ಭಾಷಾ ಆಯೋಗ ಅಂತ ಒಂದು ಅದ. ಅದು ಸರಕಾರಿ ಆದೇಶಗಳಿಗೆ ಇದು ಸರಳ ಐತಿ, ಇದು ಇಲ್ಲಾ ಅಂತ ಪ್ರಮಾಣ ಪತ್ರ ಕೊಡತದ. ನಮ್ಮಲ್ಲಿ ಕಠಿಣ – ಅರ್ಥಹೀನ ಭಾಷಾ ಆಯೋಗ ಅಂತ ಮಾಡಬೇಕಾಗೇದ. ಸರಳ ಭಾಷೆ ಯೊಳಗ ಯಾವರ ಆದೇಶ ಇದ್ದರ ಅದು ಅಪವಾದ ಅನ್ನೋ ಹಂಗ ಆಗಿ ಹೋಗೇದ. ಅದರ ಬಗ್ಗೆ ಇನ್ನೊಮ್ಮೆ ನೋಡೋಣು.

ಇನ್ನ ಮಾಧ್ಯಮದವರು ʻಕೊರೋನಾ ಮಾರಿ: ಮೂರನೇ ಮಹಾಯುದ್ಧʼ ಅಂತ ಹೇಳಿ ಭೀತಿ ಹೆಚ್ಚು ಮಾಡಲಿಕ್ಕೆ ಹತ್ತಿ ಬಿಟ್ಟಾರ. ಸ್ಪೇನಿನ ಪ್ಲೇಗಿನ ಚಿತ್ರ ತೋರಿಸಿ ಸಮೂಹ ಸನ್ನಿ ಸೃಷ್ಟಸಲಿಕ್ಕೆ ಹತ್ತಿ ಬಿಟ್ಟಾರ. ಸಂಬಂಧ ಇರಲಾರದ ವಿಡಿಯೋ ತೋರಿಸಿ ನೀವು ಇವತ್ತ ನಿಮ್ಮ ಎಲ್‌ಐಸಿ ಪಾಲಿಸಿ ಸೆಟ್ಲ ಮಾಡೋ ಹಂಗ ಮಾಡಾಕ ಸುರು ಮಾಡ್ಯಾರ.

ʻಅವರು ಹೇಳಿ ಕೇಳಿ ಸುಳ್ಳುಬುರುಕರು, ಯಾವಾಗೋ ಹಾದಿ ತಪ್ಪಿ ಬಿಟ್ಟಾರ. ಅವರನ್ನ ಸರಿ ಮಾಡಲಿಕ್ಕೆ ಬರಂಗಿಲ್ಲ ಅನ್ನೋ ಮಟ್ಟಿಗೆ ಹೋಗಿಬಿಟ್ಟಾರʼ ಅಂತ ಕೆಲವರ ಅಂಬೋಣ. ಆದರ ಇಂತಹದ್ದೇ ಮಾತನ್ನ ಪತ್ರಿಕೋದ್ಯಮದ ದಂತಕಥೆಯಾದ ಗಣೇಶ ಶಂಕರ ವಿದ್ಯಾರ್ಥಿ ಅವರಿಗೆ ಯಾರೋ ಹೇಳಿದಾಗ. ಇತರರು ಹಾಳಾಗಿದ್ದಾರೆಂದು ನಾವು ಸುಮ್ಮನೇ ಕೂಡುವುದು ಬೇಡ. ನಮ್ಮ ಕೈಲಾದದ್ದು ನಾವು ಮಾಡೋಣ. ಹಸಿವೆಯಾಗಿದೆ ಎಂದು ಖಾಲಿ ಒಲೆಯ ಮುಂದೆ ಕೂತರೆ ಹೇಗೆ? ಒಲೆ ಉರಿಸಬೇಡವೇ, ರೊಟ್ಟಿ ತಟ್ಟಬೇಡವೇ ಅಂತ ಹೇಳಿದ್ದರಂತ. ನಾವೆಲ್ಲಾ ಕತ್ತಲಿನ್ಯಾಗ ಜಾರಿ ಬೀಳತಿರೋ ಈ ಟೈಂನ್ಯಾಗ ಇಂಥಾ ಬೆಳಕಿನ ಕೋಲು ನಮಗ ಆಸರೆ ಯಾಗಲಿ.

ಗಣೇಶ ಶಂಕರ ವಿದ್ಯಾರ್ಥಿ

ಕರ್ನಾಟಕ ಮೂಲದವರಾದ ಸುಪ್ರಿಂ ಕೋರ್ಟು ಮಾಜಿ ನ್ಯಾಯಮೂರ್ತಿ ಎಮ್‌ಎನ್ ವೆಂಕಟಾಚಲಯ್ಯ ಅವರು ಅಮೇರಿಕಾದ ನ್ಯಾಯಮೂರ್ತಿಯಾಗಿದ್ದ ಲೂಯಿಸ ಬ್ರ‍್ಯಾಂಡಿಸ ಅವರ ಒಂದು ಮಾತನ್ನು ಉಚ್ಛರಿಸುತ್ತಾರೆ. ಅದೇನೆಂದರೆ ʻಸೂರ್ಯನ ಬೆಳಕು ಶ್ರೇಷ್ಠ ಸೋಂಕು ನಿರೋಧಕʼ. ತನ್ನ ಒಡಲಿನಲ್ಲಿ ಅನೇಕ ಅರ್ಥಗಳನ್ನು ಒಳಗೊಂಡ ಈ ಮಾತನ್ನು ನಾವು ಮರಿಯೋದು ಬ್ಯಾಡ, ಅಲ್ಲವೇ ಮನೋಲ್ಲಾಸಿನಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಖಾಲಿ ಮೆದುಳಿನ ಸುತ್ತ….
    ಕೀಲಿ-ಕಿಟಕ್ – ಲಾಕ್‌ಡೌನ್‌ಗೆ ಎಂತಹ ಅರ್ಥಪೂರ್ಣ ಪದ. ನಗೆನೂ ಉಕ್ಕಿ ಬರಾಕ್ ಹತ್ತೆöÊತಿ.
    ಸರ‍್ಯಾನ ಬೆಳಕಿನ ಮ್ಯಾಲನು ರ‍್ದಾರ. ಅದಕಿಂತ ಸಂಡೇ ಹಚ್ಚತಾರಲ್ಲ ಬೆಂಕಿ-ಬೆಳಕು, ಅದ ಬಾಳಾ ಶ್ರೇಷ್ಠ ಅಂತಾರ ನೋಡ್ರಪ…
    -ಮಲ್ಲಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...