Homeಮುಖಪುಟನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -
- Advertisement -

ಭರತಖಂಡವನ್ನೇ ಅಖಂಡವಾಗಿ ಬೆಚ್ಚಿಬೀಳಿಸಿದ ನಿರ್ಭಯಾ ಪ್ರಕರಣದ ಪಾತಕಿಗಳನ್ನು ಗಲ್ಲಿಗೇರಿಸಲಾಗಿದೆ. ಅಮಾಯಕ ಹುಡುಗಿಯ ಮೇಲೆ ಬರ್ಬರ ಲೈಂಗಿಕ ದಾಳಿ ನಡೆಸಿ ಕೊಂದು ಹಾಕಿದ್ದ ಪಾತಕಿಗಳು ಪ್ರಭಾವಿಗಳಾಗಿರಲಿಲ್ಲ, ಅಧಿಕಾರಸ್ಥರ ವಂಶಜರೂ ಆಗಿರಲಿಲ್ಲ. ಬಹುಷಃ ಈ ಕಾರಣದಿಂದಲೇ ಸದರಿ ರೇಪ್ ಅಂಡ್ ಮರ್ಡರ್ ಕೇಸ್‌ನ ತನಿಖೆಯಲ್ಲಿ ದೊಡ್ಡ ಅಡ್ಡಿ ಎದುರಾಗಿರಲಿಲ್ಲ. ಅಂತಿಮವಾಗಿ ನ್ಯಾಯಾಲಯಗಳೂ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿದವು. ಅದು ಮೊನ್ನೆ ಜಾರಿಯೂ ಆಯಿತು. ಈ ಹೊತ್ತಲ್ಲಿ ನಿರ್ಭಯಳಷ್ಟೇ ಕ್ರೂರವಾಗಿ ಅತ್ಯಾಚಾರ ಹತ್ಯೆಗೀಡಾದ ದಕ್ಷಿಣ ಕನ್ನಡದ ಧರ್ಮಸ್ಥಳದ ’ನಿರ್ಭಯ’ ಗೌಡ ಎಂಬ ಪಾಪದ ವಿದ್ಯಾರ್ಥಿನಿ ಕರಾವಳಿಗರಿಗೆ ನೆನಪಾಗುತ್ತಿದ್ದಾಳೆ!!

’ನಿರ್ಭಯಳನ್ನು ಅತ್ಯಾಚಾರವೆಸಗಿ ಸಾಯಿಸಿರುವ ಸಂಶಯ ದೇವದೂತ ಪ್ರಭಾವಳಿಯ ಪರಿವಾರದ ಮೇಲಿದೆ. ಈ ಕುಟುಂಬದ ಯಜಮಾನ ಸಾಕ್ಷಾತ್ ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ ಸರ್ಕಾರಗಳ ನಡೆಸುವ ಅಷ್ಟೂ ಅಧಿಕಾರಸ್ಥರನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದ ಸರ್ವಶಕ್ತ!! ಹೀಗಾಗಿಯೇ ನ್ಯಾಯದೇವತೆ ಎಂಬ ಪ್ರತೀತಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಪಾತಕ ಪ್ರಕರಣ ನ್ಯಾಯದ ಪರಿಧಿಗೆ ಒಳಪಡುತ್ತಲೇ ಇಲ್ಲವೆಂಬ ಚರ್ಚೆ ಇವತ್ತಿಗೂ ನಡೆಯುತ್ತಿದೆ!!. ಕಾಲೇಜಿನಿಂದ ಮನೆಗೆ ಹೋಗುವಾಗ ಉಜಿರೆ-ಧರ್ಮಸ್ಥಳ ಹೆದ್ದಾರಿಯಲ್ಲಿ ಹಾಡುಹಗಲೇ ಅಪಹರಿಸಲ್ಪಟ್ಟ ಹುಡುಗಿ ಕಣ್ಮರೆಯಾದ ಕ್ಷಣದಿಂದಲೇ ತನಿಖೆಯ ದಿಕ್ಕುತಪ್ಪಿಸುವ ವ್ಯವಸ್ಥಿತ ಸ್ಕೆಚ್ ಒಂದು ಕಾರ್ಯಾಚರಣೆ ನಾಜೂಕಾಗಿ ನಡೆಯುತ್ತಲೇ ಇದೆ. ಈ ಪ್ರಕರಣಕ್ಕೆ ನ್ಯಾಯ ಸಿಗುವ ಸಾಧ್ಯತೆ ದಿನಕಳೆದಂತೆ ಕಮ್ಮಿಯಾಗುತ್ತಲೇ ಇದೆ.

ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ-ಕೊಲೆ ನಡೆದಿದ್ದು 2012ರ ಡಿಸೆಂಬರ್ 16ರಂದು ಅದಕ್ಕೂ ಎರಡು ಕಾಲು ತಿಂಗಳು ಮೊದಲು ಅಂದರೆ 2012 ಅಕ್ಟೋಬರ್ 8ರಂದು ಧರ್ಮಸ್ಥಳದ ನಿರ್ಭಯಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಆಕೆಯ ಮನೆ ಹತ್ತಿರ ಕಾಡಿನಲ್ಲಿ ಎಸೆಯಲಾಗಿತ್ತು. ಆಕೆ ಕಾಣೆಯಾದಾಗ ರಾತ್ರಿಯಿಡೀ ಹುಡುಕಾಡಿದ ಕಾಡಿನಲ್ಲೆ ಬೆಳಿಗ್ಗೆ ಅತ್ಯಾಚಾರಗೊಂಡಿದ್ದ ದೇಹ ಕಂಡುಬಂದಿತ್ತು. ಆಕೆಯ ಮರ್ಮಾಂಗಕ್ಕೆ ಮಣ್ಣು ಹಾಕಿ ವೀರ್ಯ ಪರೀಕ್ಷೆ ವಿಫಲಗೊಳಿಸುವ ಯೋಜನೆ ಮಾಡಲಾಗಿತ್ತು. ಆ ರಾತ್ರಿ ಮಳೆಯಾಗಿತ್ತು, ಆದರೆ ಮೃತ ದೇಹದ ಹತ್ತಿರವೇ ಬಿದ್ದಿದ್ದ ಆಕೆಯ ಪಠ್ಯಪುಸ್ತಕ ಒಂಚೂರು ಒದ್ದೆಯಾಗಿರಲಿಲ್ಲ. ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ನಾಶ ಮಾಡುವ ಶತಪ್ರಯತ್ನ ರೇಪಿಸ್ಟ್ ಗ್ಯಾಂಗ್ ಮಾಡಿತ್ತು.

ಉಜಿರೆ-ಧರ್ಮಸ್ಥಳದಲ್ಲಿ ಪ್ರತಿಭಟನೆಗಳು ಸರಣಿಯಾಗಿ ಭುಗಿಲೆದ್ದು ಇಡೀ ದಕ್ಷಿಣ ಕನ್ನಡಕ್ಕೆ ಹೋರಾಟದ ಕಿಚ್ಚು ವ್ಯಾಪಿಸಿತ್ತು. ಪ್ರತಿಭಟನಾಕಾರರ ಆಕ್ರೋಶ, ಅನುಮಾನ ಧರ್ಮ ವ್ಯಾಪಾರಿಯ ರಕ್ತಸಂಬಂಧಿ ಪುಂಡ ಹುಡುಗರ ಮೇಲೆ ಕೇಂದ್ರೀಕೃತವಾಗಿತ್ತು. ಜನರು ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ ಪೋಲಿಸರು ಪ್ರಕರಣ ಹಳ್ಳ ಹಿಡಿಸಲು ಹವಣಿಸುತ್ತಿದ್ದರು. ಧರ್ಮಸ್ಥಳದ ಮಂಜುನಾಥ, ಧರ್ಮ ದೇವತೆ ಅಣ್ಣಪ್ಪ ಸ್ವಾಮಿ ಅಂಗಳದಲ್ಲಿ ಅಂಡೆಲೆಯುತ್ತಿದ್ದ ಮಾನಸಿಕ ಅಸ್ವಸ್ಥ ಸಂತೋಷ್‌ರಾವ್ ಹುಡುಗಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಕತೆ ಕಟ್ಟಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಯೂ ದೈವ ಸ್ವರೂಪಿ ಎಂದೇ ಧರ್ಮಸ್ಥಳದ ಶ್ರದ್ಧಾಳುಗಳು ನಂಬುವ ವೀರೇಂದ್ರ ಹೆಗ್ಗಡೆ ಪರಿವಾರದ ಉದಯ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಎಂಬ ನವ ತರುಣರು ಸಂತೋಷ್‌ರಾವ್‌ನೇ ಅತ್ಯಾಚಾರಿ ಎಂದು ತೀರ್ಪು ಕೊಟ್ಟು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು! ಇಲ್ಲಿ ಅಡಗಿದೆ ನಿರ್ಭಯಳ ರೇಪ್ ಆಂಡ್ ಮರ್ಡರ್ ಮಿಸ್ಟರಿ!!

ಧರ್ಮಸ್ಥಳ ದೇವರ ದೊರೆಗಳ ಪರಿವಾರದ ಮೇಲಿದ್ದ ಜನತೆಯ ಶಂಕೆ ಬಲವಾಯಿತು. ಧರ್ಮಸ್ಥಳದಲ್ಲಿ ಅಸಂಖ್ಯಾ ಹೆಣ್ಣು ಜೀವಗಳ ಅಸಹಜ ಸಾವು ಸಂಭವಿಸುತ್ತಿರುವ ಪುಕಾರುಗಳು ಎದ್ದವು. ಪೊಲೀಸರೇ ಕೊಟ್ಟ ಮಾಹಿತಿಯಂತೆ ನಿರ್ಭಯಳಿಗಿಂತ ಮೊದಲು ದೇವ ಸನ್ನಿಧಿಯಲ್ಲಿ ನೂರಾರು ಹೆಣ್ಣು ಬಲಿ-ಬಲಾತ್ಕಾರ ನಡೆದಿರುವುದು ಹೊರಗೆ ಬಂದಿತು. ಸಿಬಿಐನಿಂದಲೇ ನಿರ್ಭಯ ಅತ್ಯಾಚಾರದ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಇಟ್ಟರು. ಸ್ಥಳೀಯ ಪೊಲೀಸರು ನೈಜ ಅಪರಾಧಿಗಳನ್ನು ರಕ್ಷಿಸಲು ನಾಟಕ ನಡೆಸುತ್ತಿದ್ದಾರೆಂಬ ಅನಿಸಿಕೆ ಜನರದ್ದಾಗಿತ್ತು. ಕೊನೆಗೆ ಸರ್ಕಾರವು ಸಿಬಿಐಗೆ ಸೌಜನ್ಯ ಪ್ರಕರಣವನ್ನು ಹಸ್ತಾಂತರಿಸಬೇಕಾಗಿ ಬಂತು. ಆದರೆ ಸಿಬಿಐ ಸಹ ಪ್ರಾಮಾಣಿಕ ತನಿಖೆ ನಡೆಸಲೇ ಇಲ್ಲ. ಸ್ಥಳೀಯ ಪೊಲೀಸರ ತನಿಖೆ ಜಾಡಿನಲ್ಲೇ ಸಾಗಿದ ಸಿಬಿಐ ಶೂರರು ಅಪರಾಧಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗುವಂತ “ತನಿಖೆ” ತಂತ್ರ ನಡೆಸಿತು.

2017ರಲ್ಲಿ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಸಿಬಿಐ ವೈಫಲ್ಯವನ್ನು ನ್ಯಾಯಾಧೀಶೆ ಬಿ.ಎಸ್. ರೇಖಾ ಎತ್ತಿ ತೋರಿಸಿದರು. ಸರಿಯಾಗಿ ಯಾಕೆ ತನಿಖೆ ನಡೆಸಿಲ್ಲವೆಂದು ಕಟುವಾಗಿ ಸಿಬಿಐಗೆ ಪ್ರಶ್ನಿಸಿದ್ದರು. ವೈದ್ಯರುಗಳ ಪ್ರಕಾರ ಅರೆಹುಚ್ಚ ಸಂತೋಷ್ ರಾವ್‌ಗೆ ಲೈಂಗಿಕ ಸಾಮರ್ಥ್ಯವೇ ಇಲ್ಲ. ವೈಜ್ಞಾನಿಕ ವಿವರಗಳಂತೆ ಸೌಜನ್ಯಳ ಮೃತದೇಹದಲ್ಲಿ ಸಿಕ್ಕ ಕೂದಲೂ ಸಂತೋಷ್ ರಾವ್‌ನದ್ದಾಗಿರಲಿಲ್ಲ. ವೀರ್ಯ ಸಂಗ್ರಹಿಸದಿರುವುದು ಸೇರಿದಂತೆ ಹಲವು ಲೋಪ-ದೋಷಗಳ ಬಗ್ಗೆ ನ್ಯಾಯಾಧೀಶರು ಸಿಬಿಐ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇವ ಪರಿವಾರದ ಜೈನ್‌ಗಳನ್ನು ಸಿಬಿಐ ನಿಷ್ಠುರ ತನಿಖೆಗೆ ಒಳಪಡಿಸಿರಲೇ ಇಲ್ಲ.

ನಿರ್ಭಯಳ ತಂದೆ ಚಂದಪ್ಪಗೌಡ ತನಗೆ ಉದಯ್ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಮೇಲೆ ಬಲವಾದ ಅನುಮಾನವಿದೆ ಎಂದು ಹೇಳಿದ್ದರು. ಸಿಬಿಐ ನ್ಯಾಯಾಲಯ ಈ ತ್ರಿಮೂರ್ತಿಗಳಿಗೆ ಸಮನ್ಸ್ ಕಳುಹಿಸಿತ್ತು, ಅದಕ್ಕೆ ಅವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದರು. ಈ ನಡುವೆ ನಿರ್ಭಯಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದ ರವಿ ಪೂಜಾರಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡರು. ಕೇಸ್ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಬಡ್ತಿ ಪಡೆದುಕೊಂಡರು. ವಿಚಾರಣೆಗೆ ಬಿದ್ದಿರುವ ತಡೆ ತೆರವಾಗುವ ಲಕ್ಷಣವೊಂದೂ ಕಾಣಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಧರ್ಮವ್ಯಾಪಾರಿಯ ಶಿಷ್ಯರೇ ಆಡಳಿತ ನಡೆಸುತ್ತಿದ್ದಾರೆ. ಈ ಧರ್ಮಾಡಳಿತದಲ್ಲಿ ನಿರ್ಭಯಾಗೆ ಸಿಕ್ಕಂತೆ ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

(ಸಂತ್ರಸ್ತೆಯ ನಿಜವಾದ ಹೆಸರನ್ನು ಧರ್ಮಸ್ಥಳದ ನಿರ್ಭಯ ಎಂದು ಬದಲಿಸಲಾಗಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...

ತಿರುವನಂತಪುರಂ | 20 ಬಿಜೆಪಿ ಕೌನ್ಸಿಲರ್‌ಗಳ ಪ್ರಮಾಣವಚನ ಅಸಿಂಧು : ಹೈಕೋರ್ಟ್ ಮಹತ್ವದ ಆದೇಶ

ತಿರುವನಂತಪುರಂ ಮಹಾನಗರ ಪಾಲಿಕೆಯ 20 ಬಿಜೆಪಿ ಕೌನ್ಸಿಲರ್‌ಗಳಿಗೆ ನಾಲ್ಕು ವಾರಗಳ ಒಳಗೆ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ಜೂ.24) ಆದೇಶಿಸಿದೆ. ಜನವರಿ ತಿಂಗಳಲ್ಲಿ ಕೌನ್ಸಿಲರ್‌ಗಳ ಪ್ರಮಾಣವಚನ ನಡೆದಿತ್ತು. ಡೆಪ್ಯುಟಿ ಮೇಯರ್...

ಎಸ್‌ಐಆರ್‌ನಿಂದ ಹೊರಗಿಡಲಾದ ಜನರಿಗೆ ಪಡಿತರ ನಿರಾಕರಣೆ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಕಲ್ಕತ್ತಾ ಹೈಕೋರ್ಟ್‌ಗೆ ಹೋಗಲು ಸೂಚನೆ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಪಡಿತರ ಸೌಲಭ್ಯ ಸೇರಿದಂತೆ ಇತರೆ ಕಲ್ಯಾಣ ಯೋಜನೆಗಳನ್ನು ನಿರಾಕರಿಸುತ್ತಿರುವ ಪಶ್ಚಿಮ ಬಂಗಾಳ...

ಪಶ್ಚಿಮ ಬಂಗಾಳ: ಸರ್ಕಾರಿ ಶಾಲಾ ಬಿಸಿಯೂಟದ ಜವಾಬ್ದಾರಿ ಇಸ್ಕಾನ್‌ಗೆ, ಊಟದಿಂದ ‘ಮೊಟ್ಟೆ’ ಔಟ್

ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳ ಬಿಸಿಯೂಟದ ಮೆನುವಿನಲ್ಲಿ ಇನ್ಮೇಲೆ ಮೊಟ್ಟೆಗಳು ಇರುವುದಿಲ್ಲ. ಅವುಗಳ ಬದಲಿಗೆ ಮಕ್ಕಳಿಗೆ ಪನೀರ್ ಮತ್ತು ರಾಜ್ಮಾವನ್ನು ನೀಡಲಾಗುತ್ತದೆ. ಕೋಲ್ಕತ್ತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ...

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...