Homeಮುಖಪುಟಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

- Advertisement -
- Advertisement -

ಒಂದಾನೊಂದು ಕಾಲದಾಗ ಜಾನ್ ಕೆನಡಿ ಅಂತ ಒಬ್ಬರು ಇದ್ದರು. ಅವರು ಅಮೆರಿಕದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಸಣ್ಣ ಜೀವನ ಕಾಲದಾಗ ಅನೇಕ ಒಳ್ಳೆ ಕೆಲಸ ಮಾಡಿದರು.

ಅವರು 1960ರೊಳಗ ತಮ್ಮ 43ನೇ ವಯಸ್ಸಿಗೆ ಅಧ್ಯಕ್ಷೀಯ ಚುನಾವಣೆ ಗೆದ್ದು ಅತಿಕಮ್ಮಿ ವಯಸ್ಸಿನ ಅಧ್ಯಕ್ಷ ಅಂತ ಅಮೆರಿಕದ ಇತಿಹಾಸದಾಗ ದಾಖಲು ಮಾಡಿದರು. ಆರ್ಥಿಕ ಹಿಂಜರಿಕೆಯಿಂದ ಹೊಡೆತ ತಿಂದಿದ್ದ ಅಮೆರಿಕಾವನ್ನು ಬೆಳವಣಿಗೆಯ ದಾರಿಯೊಳಗ ದೂಡಿದರು. ವಿಶ್ವಾದ್ಯಂತ ಶಾಂತಿ ಹಾಗೂ ಅಭಿವೃದ್ಧಿ ಸ್ಥಾಪಿಸಲಿಕ್ಕೆ ಪೀಸ್‍ಕೋರ್ ಅನ್ನೋ ಸಂಸ್ಥೆ ಸುರು ಮಾಡಿದರು. ರಷಿಯಾ ಒಕ್ಕೂಟದ ಅಧ್ಯಕ್ಷ ಕ್ರುಷೇವ ಅವರ ಜೊತೆಗೆ ಶಾಂತಿ ಒಪ್ಪಂದ ಸಹಿ ಮಾಡಿ ಪರಮಾಣು ಯುದ್ಧ ತಪ್ಪಿಸಿದರು. ನಿರುದ್ಯೋಗಿಗಳಿಗೆ ಭತ್ಯೆ, ಕೌಶಲ್ಯ ತರಬೇತಿ ಮುಂತಾದ ಯೋಜನೆಗಳನ್ನು ಆರಂಭ ಮಾಡಿದರು. ಕರಿಯರು ಹೆಚ್ಚಾಗಿ ಇದ್ದ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು, ಕರಿಯರ ಶಿಕ್ಷಣದ ಸಲುವಾಗಿ ತೆರೆಯಲಾದ ವಿಶೇಷ ಕಾಲೇಜುಗಳನ್ನು ಬೆಳೆಸಲು ಅನುದಾನ ನೀಡಿದರು. ಮಹಿಳಾ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯ ಅನುವಾಗಿ ಹೆಚ್ಚಿನ ಕೂಲಿ ಸಿಗುವಂತೆ ಕಾನೂನು ಮಾಡಿದರು, ಇತ್ಯಾದಿ.

ಜಾನ್ ಕೆನಡಿ

ತಮ್ಮ ಚುನಾವಣೆಯ ಗೆಲುವನ್ನು ಅವರು ಇದು `ಒಂದು ಪಕ್ಷದ ಗೆಲುವು ಅಲ್ಲ. ಸ್ವಾತಂತ್ರ್ಯದ ಉತ್ಸವ’ ಅಂತ ಬಣ್ಣಿಸಿದರು. ಇದು ಮನುಷ್ಯರೆಲ್ಲರ ಉತ್ಥಾನದ ಅವಕಾಶದ ದಾರಿ. ಎಲ್ಲ ರೀತಿಯ ಬಡತನವನ್ನೂ, ಗುಲಾಮಗಿರಿಯನ್ನು ತೊಡೆದುಹಾಕುವ ಅವಕಾಶ ಈಗ ನಮ್ಮ ಮುಂದೆ ಇದೆ ಎಂದವರು. ಆದರ ಅವರ ಒಂದು ಮಾತು ಭಾಳ ಫೇಮಸ್ಸು. ಅದು ನಮಗೆಲ್ಲರಿಗೂ ಗೊತ್ತು. ನಿಮಗಾಗಿ ಈ ದೇಶ ಏನು ಮಾಡುತ್ತದೆ ಎಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ನೀಡಬಲ್ಲಿರಿ ಎನ್ನುವುದನ್ನು ಕೇಳಿಕೊಳ್ಳಿರಿ.

ಅವರ ವಿಚಾರಗಳನ್ನು, ಸಿದ್ಧಾಂತಗಳನ್ನು ಮನಸೋ ಇಚ್ಛೆ ಪಾಲಿಸುವವರಿಗೆ ಕೆನಡಿಯನ್ ಅಂತ ಕರೀತಾರ. ಹಂಗಂದರ ಕೆನಡಾದಿಂದ ಬಂದವರು ಅಂತ ಅಲ್ಲ. ಜಾನ್ ಕೆನಡಿಯವರ ವಿಚಾರಗಳನ್ನ, ಕಾರ್ಯಕ್ರಮ- ಯೋಜನೆಗಳನ್ನು ಒಪ್ಪಿಕೊಂಡು ನಡೆಯುವವರು ಅಂತ. ಈಗಿನ ನಮ್ಮ ನಾಯಕರನ್ನು ಕೆನೆಡಿಯನ್ ಅಂತ ಕರೀಬಹುದು ಅಂತೀರೇನು?

ಒಂದು ರೀತಿಯಿಂದ ಅನಬಹುದೋ ಏನೋ. ಅದು ಏನಪಾ ಅಂದರ `ನೀವು ದೇಶಕ್ಕೆ ಏನು ಮಾಡಬಲ್ಲಿರಿ’ ಅನ್ನೋ ಮಾತು. ಇಡೀ ಜಗತ್ತಿನ 177 ದೇಶಗಳಲ್ಲಿ ಈ ಕೊರೊನಾ ವ್ಯಾಧಿ ಹೊಡಕೊಂಡದ. ದೊಡ್ಡ ಸಾಹುಕಾರ ಟ್ರಂಪಣ್ಣನವರಿಂದಾ ಹಿಡಕೊಂಡು ಸಣ್ಣಂಗಡಿ ಶೆಟ್ಟರಾದ ಉಗಾಂಡಾದ ಯಾವೋರಿ ಮುಸೇವಿನಿ ಅವರ ತನಕಾ ಎಲ್ಲಾರೂ ಜನರಿಗೆ `ಹಿಂಗ ಮಾಡರಿ, ಹಂಗ ಮಾಡರಿ, ಹಂಗಂತ ಹಂಗ ಮಾಡಬ್ಯಾಡ್ರಿ’ ಅಂತ ಹೇಳಲಿಕ್ಕೆ ಹತ್ಯಾರ. ಯಾರೂ ನಿಮ್ಮ ಸಲುವಾಗಿ ನಾವು ಏನು ಮಾಡತೇವಿ ಅನ್ನೋದನ್ನ ಹೇಳಲಿಕ್ಕೆ ಒಲ್ಲರು. ಊರು ಮುಂದಿನ ಹಣಮಂತನದೇವರ ಗುಡಿ ಸ್ವಾಮಿ ವಾರಕ್ಕೊಮ್ಮೆ ನೀತಿಪಾಠ ಹೇಳಿದಂಗ ಅವರು ಹೇಳಲಿಕ್ಕೆ ಹತ್ಯಾರ.

ಅವರು ಹೇಳಿದ್ದನ್ನ ನಾವು ಜೀ ಹುಜೂರ್ ಅಂತ ಕೇಳಲಿಕ್ಕೆ ಹತ್ತೇವಿ. ತಿರುಗಿ ಮಾತನಾಡಲಿಕ್ಕೆ ಹತ್ತಿಲ್ಲ. ಪ್ರಶ್ನೆ ಕೇಳಲಿಕ್ಕೆ ನಮಗ ಬರಂಗಿಲ್ಲ.

ಉದಾಹರಣೆಗೆ ಮಹಾಮಹಿಮ ಪ್ರಧಾನಿಗಳು ನೀವು ಕಫ್ರ್ಯೂ ಪಾಲಿಸಿರಿ, 14 ತಾಸು ಹೊರಗ ಬರಬ್ಯಾಡ್ರಿ, ಗಾಡಿ ಓಡಸಬ್ಯಾಡ್ರಿ, ಏನೂ ಖರೀದಿ ಮಾಡಬ್ಯಾಡ್ರಿ, ಒಬ್ಬರಿಗೊಬ್ಬರು ಮಾತು ಆಡಬ್ಯಾಡ್ರಿ, ಇತ್ಯಾದಿ ಇತ್ಯಾದಿ ಅಂತ ಫರಮಾನು ಹೊರಡಿಸಿದಾಗ, ನಾವು ಸುಮ್ಮನೇ ಇದ್ದಿವಿ. ಬೆಂದಕಾಳೂರಿನ ದಂಡಾಧಿಕಾರಿಗಳು ಹೊರಗ ಬಂದರ ಕೇಸು ಹಾಕತೇವಿ ಅಂದರು. ಅವಾಗನೂ ಸುಮ್ಮನೇ ಇದ್ದೆವಿ. ಸಂಜೀಕೆ ಐದಕ್ಕ ಮನೀ ಬಾಲ್ಕನಿಯೊಳಗ ಹೋಗಿ ಚಪ್ಪಾಳೆ ಹೊಡಿಯಿರಿ ಅಂದರ ನಾವು ಶಂಖ, ಜಾಗಟೆ, ತಾಳ, ಡಮರು, ತಾಟು, ತಂಬಿಗಿ ಎಲ್ಲಾನೂ ಬಾರಿಸಿದಿವಿ. ಗುಂಪು ಕಟಿಗೋಬ್ಯಾಡ್ರಿ ಅಂತ ಅವರು ಹೇಳಿದರ ನಾವು ಚಪ್ಪಾಳೆ ಹೊಡೆಯೋ ಪವಿತ್ರ ಕಾರ್ಯಕ್ಕಾಗಿ ಗುಂಪು ಕಟ್ಟಿಕೊಂಡು ಬಿಟ್ಟಿವಿ. ಅದು ಬ್ಯಾರೆ ಮಾತು.

ನಮ್ಮ ಪಂತ ಪ್ರಧಾನರು ನೀವು ಹಿಂಗ ಮಾಡ್ರಿ ಅಂದರು ಆದರ ನಾವು ಏನು ಮಾಡತೇವಿ ಅಂತ ಹೇಳಲಿಲ್ಲ. ಒಂದು ತಾಸು ಭಾಷಣ ಮಾಡಿದರೂ ಸಹಿತ ಕೊರೊನಾ ವಿರುದ್ಧ ಸರಕಾರದ ಯೋಜನೆಗಳು ಏನು ಅನ್ನೋದು ಬಾಯಿ ಬಿಡಲಿಲ್ಲ.

ಹಂಗಾರ ಅವರು ಏನು ಹೇಳಬಹುದಿತ್ತು?-
ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಅದರ ಪರಿಹಾರಕ್ಕ ಏನೇನು ಮಾಡಬಹುದು ಅಂತ ತಿಳಿಸಬಹುದಿತ್ತು. ಆದರ ಅವರು ಅದನ್ನು ಹೇಳಲಿಲ್ಲ. ಚುನಾವಣೆ ರಣತಂತ್ರಜ್ಞ ಪ್ರಶಾಂತ ಕಿಶೋರ ಅವರು ಮೋದಿ ಅವರು ಯಾವ ಕೆಟ್ಟ ಸುದ್ದಿಯನ್ನೂ ಕೊಡಬಾರದು. ಅವರು ಯಾವಾಗಲೂ ಬರೇ ಒಳ್ಳೆ ಸುದ್ದಿ ಕೊಡಬೇಕು ಅಂತ ಹೇಳಿಕೊಟ್ಟಿದ್ದರಂತ. ಇವರು ಅದನ್ನು ಚುನಾವಣೆ ಮುಗದ ಮ್ಯಾಲನೂ ಪಾಲಸಲಿಕ್ಕೆ ಹತ್ಯಾರ.

ಇದಕ್ಕ ಎಷ್ಟು ರೊಕ್ಕ ಇಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಗಿಂತ ಮುಂಚೆ ಹಣಕಾಸಿನ ಮಾತು ಹಗಲೆಲ್ಲಾ ಆಡಿದ ಮೋದಿ ಅವರು ಈಗ ಮಾತಾಡವಲ್ಲರು.

ಅದಕ್ಕೊಂದು ವಿಶೇಷ ತಂಡ ಕಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಕಾರ್ಯಕ್ಕೆ, ಪಕ್ಕದ ಕೆಲಸಕ್ಕೆ ತಂಡ ಕಟ್ಟೋರು ವಿಪತ್ತಿನ ನಿರ್ವಹಣೆಗೆ ಕಟ್ಟತಾರೋ ಇಲ್ಲವೋ, ಗೊತ್ತಿಲ್ಲ.

ಅದರ ಸಲುವಾಗಿ ಒಂದು ಆಸ್ಪತ್ರೆ, ಸಂಶೋಧನಾ ಕೇಂದ್ರ, ಪ್ರಯೋಗಾಲಯ ಇತ್ಯಾದಿ ಮೀಸಲು ಇಡತೇವಿ, ಹೊಸದಾಗಿ ಆರಂಭ ಮಾಡತೇವಿ ಅಂತ ಅನ್ನಬಹುದಿತ್ತು. ಅದನ್ನು ಅನ್ನಲಿಲ್ಲ. ರವಾಂಡಾ, ಸಿಯಾರಾ ಲಿಯೋನ್ ಮುಂತಾದ ಸಣ್ಣಸಣ್ಣ ದೇಶಗಳು ಮಾಡಲಿಕ್ಕೆ ಹತ್ಯಾವು.

ಚೀನಾದವರು ಹತ್ತು ದಿನದಾಗ ಹೊಸಾ ಆಸ್ಪತ್ರೆ ಕಟ್ಟಿದ್ದು ನಾವೆಲ್ಲಾ ನೋಡಿ ಚಪ್ಪಾಳೆ ತಟ್ಟೇವಿ. ಆದರ ಈಗ ನಾಯಕರು ಹೇಳಿದರು ಅಂತ ಚಪ್ಪಾಳೆ ತಟ್ಟಿದಿವಿ. ಅದಕ್ಕೂ ಇದಕ್ಕೂ ನಮಗ ವ್ಯತ್ಯಾಸ ಗೊತ್ತಿಲ್ಲ.

ಚೀನಾದ ಕೊರೊನಾ ಆಸ್ಪತ್ರೆ

ಈಗ ನಮ್ಮ ಮುಂದ ಇರೋದು ಏನು-ಯುದ್ಧನೋ? ಸರ್ಜಿಕಲ್ ಸ್ಟ್ರೈಕೋ? ಹೋರಾಟನೋ? ಅಥವಾ ವಿಪತ್ತೋ? ಕೊರೊನಾ ರೋಗದ ಜೊತೆ ಹೊಡೆದಾಟ ಅಂದರ ಜನರ ಹತ್ತರ ಮುಚ್ಚಿ-ಮುಚ್ಚಿ ಇಡುವಂಥಾ ಸೀಕ್ರೆಟ್ ಏನರ ಅದ ಏನು? ಇದನ್ನ ತಿಳಕೋಬೇಕಾರ ನೀವು ಏನು ಸೈನ್ಯದ ಅಧಿಕಾರಿ ಆಗಿರಬೇಕಿಲ್ಲ. ನಿಮಗ ಕನಿಷ್ಠ ಸಾಮಾನ್ಯ ಜ್ಞಾನ ಇದ್ದರ ಸಾಕು. ಆದರ ಈಗಿನ ಕಾಲ ಹೆಂಗಂದ ಅಂದರ ಬ್ಯಾರೆ ಬೇಕಾದ್ದು ಸಿಗತದ, ಸಾಮಾನ್ಯ ಜ್ಞಾನ ಸಿಗಂಗಿಲ್ಲ. ಅದು ಎಷ್ಟು ಅಪರೂಪ ಅಂದರ ರೊಕ್ಕ ಅಲ್ಲಾ, ಜೀವಾ ಕೊಟ್ಟರೂ ಸಿಗಂಗಿಲ್ಲ. ಇದನ್ನು ಸರಿಮಾಡುವುದು ಘಟಾನುಘಟಿ ನಾಯಕರ ಕಡೆನೂ ಸಾಧ್ಯ ಇಲ್ಲ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...