Homeಮುಖಪುಟಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

- Advertisement -
- Advertisement -

ಒಂದಾನೊಂದು ಕಾಲದಾಗ ಜಾನ್ ಕೆನಡಿ ಅಂತ ಒಬ್ಬರು ಇದ್ದರು. ಅವರು ಅಮೆರಿಕದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಸಣ್ಣ ಜೀವನ ಕಾಲದಾಗ ಅನೇಕ ಒಳ್ಳೆ ಕೆಲಸ ಮಾಡಿದರು.

ಅವರು 1960ರೊಳಗ ತಮ್ಮ 43ನೇ ವಯಸ್ಸಿಗೆ ಅಧ್ಯಕ್ಷೀಯ ಚುನಾವಣೆ ಗೆದ್ದು ಅತಿಕಮ್ಮಿ ವಯಸ್ಸಿನ ಅಧ್ಯಕ್ಷ ಅಂತ ಅಮೆರಿಕದ ಇತಿಹಾಸದಾಗ ದಾಖಲು ಮಾಡಿದರು. ಆರ್ಥಿಕ ಹಿಂಜರಿಕೆಯಿಂದ ಹೊಡೆತ ತಿಂದಿದ್ದ ಅಮೆರಿಕಾವನ್ನು ಬೆಳವಣಿಗೆಯ ದಾರಿಯೊಳಗ ದೂಡಿದರು. ವಿಶ್ವಾದ್ಯಂತ ಶಾಂತಿ ಹಾಗೂ ಅಭಿವೃದ್ಧಿ ಸ್ಥಾಪಿಸಲಿಕ್ಕೆ ಪೀಸ್‍ಕೋರ್ ಅನ್ನೋ ಸಂಸ್ಥೆ ಸುರು ಮಾಡಿದರು. ರಷಿಯಾ ಒಕ್ಕೂಟದ ಅಧ್ಯಕ್ಷ ಕ್ರುಷೇವ ಅವರ ಜೊತೆಗೆ ಶಾಂತಿ ಒಪ್ಪಂದ ಸಹಿ ಮಾಡಿ ಪರಮಾಣು ಯುದ್ಧ ತಪ್ಪಿಸಿದರು. ನಿರುದ್ಯೋಗಿಗಳಿಗೆ ಭತ್ಯೆ, ಕೌಶಲ್ಯ ತರಬೇತಿ ಮುಂತಾದ ಯೋಜನೆಗಳನ್ನು ಆರಂಭ ಮಾಡಿದರು. ಕರಿಯರು ಹೆಚ್ಚಾಗಿ ಇದ್ದ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು, ಕರಿಯರ ಶಿಕ್ಷಣದ ಸಲುವಾಗಿ ತೆರೆಯಲಾದ ವಿಶೇಷ ಕಾಲೇಜುಗಳನ್ನು ಬೆಳೆಸಲು ಅನುದಾನ ನೀಡಿದರು. ಮಹಿಳಾ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯ ಅನುವಾಗಿ ಹೆಚ್ಚಿನ ಕೂಲಿ ಸಿಗುವಂತೆ ಕಾನೂನು ಮಾಡಿದರು, ಇತ್ಯಾದಿ.

ಜಾನ್ ಕೆನಡಿ

ತಮ್ಮ ಚುನಾವಣೆಯ ಗೆಲುವನ್ನು ಅವರು ಇದು `ಒಂದು ಪಕ್ಷದ ಗೆಲುವು ಅಲ್ಲ. ಸ್ವಾತಂತ್ರ್ಯದ ಉತ್ಸವ’ ಅಂತ ಬಣ್ಣಿಸಿದರು. ಇದು ಮನುಷ್ಯರೆಲ್ಲರ ಉತ್ಥಾನದ ಅವಕಾಶದ ದಾರಿ. ಎಲ್ಲ ರೀತಿಯ ಬಡತನವನ್ನೂ, ಗುಲಾಮಗಿರಿಯನ್ನು ತೊಡೆದುಹಾಕುವ ಅವಕಾಶ ಈಗ ನಮ್ಮ ಮುಂದೆ ಇದೆ ಎಂದವರು. ಆದರ ಅವರ ಒಂದು ಮಾತು ಭಾಳ ಫೇಮಸ್ಸು. ಅದು ನಮಗೆಲ್ಲರಿಗೂ ಗೊತ್ತು. ನಿಮಗಾಗಿ ಈ ದೇಶ ಏನು ಮಾಡುತ್ತದೆ ಎಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ನೀಡಬಲ್ಲಿರಿ ಎನ್ನುವುದನ್ನು ಕೇಳಿಕೊಳ್ಳಿರಿ.

ಅವರ ವಿಚಾರಗಳನ್ನು, ಸಿದ್ಧಾಂತಗಳನ್ನು ಮನಸೋ ಇಚ್ಛೆ ಪಾಲಿಸುವವರಿಗೆ ಕೆನಡಿಯನ್ ಅಂತ ಕರೀತಾರ. ಹಂಗಂದರ ಕೆನಡಾದಿಂದ ಬಂದವರು ಅಂತ ಅಲ್ಲ. ಜಾನ್ ಕೆನಡಿಯವರ ವಿಚಾರಗಳನ್ನ, ಕಾರ್ಯಕ್ರಮ- ಯೋಜನೆಗಳನ್ನು ಒಪ್ಪಿಕೊಂಡು ನಡೆಯುವವರು ಅಂತ. ಈಗಿನ ನಮ್ಮ ನಾಯಕರನ್ನು ಕೆನೆಡಿಯನ್ ಅಂತ ಕರೀಬಹುದು ಅಂತೀರೇನು?

ಒಂದು ರೀತಿಯಿಂದ ಅನಬಹುದೋ ಏನೋ. ಅದು ಏನಪಾ ಅಂದರ `ನೀವು ದೇಶಕ್ಕೆ ಏನು ಮಾಡಬಲ್ಲಿರಿ’ ಅನ್ನೋ ಮಾತು. ಇಡೀ ಜಗತ್ತಿನ 177 ದೇಶಗಳಲ್ಲಿ ಈ ಕೊರೊನಾ ವ್ಯಾಧಿ ಹೊಡಕೊಂಡದ. ದೊಡ್ಡ ಸಾಹುಕಾರ ಟ್ರಂಪಣ್ಣನವರಿಂದಾ ಹಿಡಕೊಂಡು ಸಣ್ಣಂಗಡಿ ಶೆಟ್ಟರಾದ ಉಗಾಂಡಾದ ಯಾವೋರಿ ಮುಸೇವಿನಿ ಅವರ ತನಕಾ ಎಲ್ಲಾರೂ ಜನರಿಗೆ `ಹಿಂಗ ಮಾಡರಿ, ಹಂಗ ಮಾಡರಿ, ಹಂಗಂತ ಹಂಗ ಮಾಡಬ್ಯಾಡ್ರಿ’ ಅಂತ ಹೇಳಲಿಕ್ಕೆ ಹತ್ಯಾರ. ಯಾರೂ ನಿಮ್ಮ ಸಲುವಾಗಿ ನಾವು ಏನು ಮಾಡತೇವಿ ಅನ್ನೋದನ್ನ ಹೇಳಲಿಕ್ಕೆ ಒಲ್ಲರು. ಊರು ಮುಂದಿನ ಹಣಮಂತನದೇವರ ಗುಡಿ ಸ್ವಾಮಿ ವಾರಕ್ಕೊಮ್ಮೆ ನೀತಿಪಾಠ ಹೇಳಿದಂಗ ಅವರು ಹೇಳಲಿಕ್ಕೆ ಹತ್ಯಾರ.

ಅವರು ಹೇಳಿದ್ದನ್ನ ನಾವು ಜೀ ಹುಜೂರ್ ಅಂತ ಕೇಳಲಿಕ್ಕೆ ಹತ್ತೇವಿ. ತಿರುಗಿ ಮಾತನಾಡಲಿಕ್ಕೆ ಹತ್ತಿಲ್ಲ. ಪ್ರಶ್ನೆ ಕೇಳಲಿಕ್ಕೆ ನಮಗ ಬರಂಗಿಲ್ಲ.

ಉದಾಹರಣೆಗೆ ಮಹಾಮಹಿಮ ಪ್ರಧಾನಿಗಳು ನೀವು ಕಫ್ರ್ಯೂ ಪಾಲಿಸಿರಿ, 14 ತಾಸು ಹೊರಗ ಬರಬ್ಯಾಡ್ರಿ, ಗಾಡಿ ಓಡಸಬ್ಯಾಡ್ರಿ, ಏನೂ ಖರೀದಿ ಮಾಡಬ್ಯಾಡ್ರಿ, ಒಬ್ಬರಿಗೊಬ್ಬರು ಮಾತು ಆಡಬ್ಯಾಡ್ರಿ, ಇತ್ಯಾದಿ ಇತ್ಯಾದಿ ಅಂತ ಫರಮಾನು ಹೊರಡಿಸಿದಾಗ, ನಾವು ಸುಮ್ಮನೇ ಇದ್ದಿವಿ. ಬೆಂದಕಾಳೂರಿನ ದಂಡಾಧಿಕಾರಿಗಳು ಹೊರಗ ಬಂದರ ಕೇಸು ಹಾಕತೇವಿ ಅಂದರು. ಅವಾಗನೂ ಸುಮ್ಮನೇ ಇದ್ದೆವಿ. ಸಂಜೀಕೆ ಐದಕ್ಕ ಮನೀ ಬಾಲ್ಕನಿಯೊಳಗ ಹೋಗಿ ಚಪ್ಪಾಳೆ ಹೊಡಿಯಿರಿ ಅಂದರ ನಾವು ಶಂಖ, ಜಾಗಟೆ, ತಾಳ, ಡಮರು, ತಾಟು, ತಂಬಿಗಿ ಎಲ್ಲಾನೂ ಬಾರಿಸಿದಿವಿ. ಗುಂಪು ಕಟಿಗೋಬ್ಯಾಡ್ರಿ ಅಂತ ಅವರು ಹೇಳಿದರ ನಾವು ಚಪ್ಪಾಳೆ ಹೊಡೆಯೋ ಪವಿತ್ರ ಕಾರ್ಯಕ್ಕಾಗಿ ಗುಂಪು ಕಟ್ಟಿಕೊಂಡು ಬಿಟ್ಟಿವಿ. ಅದು ಬ್ಯಾರೆ ಮಾತು.

ನಮ್ಮ ಪಂತ ಪ್ರಧಾನರು ನೀವು ಹಿಂಗ ಮಾಡ್ರಿ ಅಂದರು ಆದರ ನಾವು ಏನು ಮಾಡತೇವಿ ಅಂತ ಹೇಳಲಿಲ್ಲ. ಒಂದು ತಾಸು ಭಾಷಣ ಮಾಡಿದರೂ ಸಹಿತ ಕೊರೊನಾ ವಿರುದ್ಧ ಸರಕಾರದ ಯೋಜನೆಗಳು ಏನು ಅನ್ನೋದು ಬಾಯಿ ಬಿಡಲಿಲ್ಲ.

ಹಂಗಾರ ಅವರು ಏನು ಹೇಳಬಹುದಿತ್ತು?-
ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಅದರ ಪರಿಹಾರಕ್ಕ ಏನೇನು ಮಾಡಬಹುದು ಅಂತ ತಿಳಿಸಬಹುದಿತ್ತು. ಆದರ ಅವರು ಅದನ್ನು ಹೇಳಲಿಲ್ಲ. ಚುನಾವಣೆ ರಣತಂತ್ರಜ್ಞ ಪ್ರಶಾಂತ ಕಿಶೋರ ಅವರು ಮೋದಿ ಅವರು ಯಾವ ಕೆಟ್ಟ ಸುದ್ದಿಯನ್ನೂ ಕೊಡಬಾರದು. ಅವರು ಯಾವಾಗಲೂ ಬರೇ ಒಳ್ಳೆ ಸುದ್ದಿ ಕೊಡಬೇಕು ಅಂತ ಹೇಳಿಕೊಟ್ಟಿದ್ದರಂತ. ಇವರು ಅದನ್ನು ಚುನಾವಣೆ ಮುಗದ ಮ್ಯಾಲನೂ ಪಾಲಸಲಿಕ್ಕೆ ಹತ್ಯಾರ.

ಇದಕ್ಕ ಎಷ್ಟು ರೊಕ್ಕ ಇಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಗಿಂತ ಮುಂಚೆ ಹಣಕಾಸಿನ ಮಾತು ಹಗಲೆಲ್ಲಾ ಆಡಿದ ಮೋದಿ ಅವರು ಈಗ ಮಾತಾಡವಲ್ಲರು.

ಅದಕ್ಕೊಂದು ವಿಶೇಷ ತಂಡ ಕಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಕಾರ್ಯಕ್ಕೆ, ಪಕ್ಕದ ಕೆಲಸಕ್ಕೆ ತಂಡ ಕಟ್ಟೋರು ವಿಪತ್ತಿನ ನಿರ್ವಹಣೆಗೆ ಕಟ್ಟತಾರೋ ಇಲ್ಲವೋ, ಗೊತ್ತಿಲ್ಲ.

ಅದರ ಸಲುವಾಗಿ ಒಂದು ಆಸ್ಪತ್ರೆ, ಸಂಶೋಧನಾ ಕೇಂದ್ರ, ಪ್ರಯೋಗಾಲಯ ಇತ್ಯಾದಿ ಮೀಸಲು ಇಡತೇವಿ, ಹೊಸದಾಗಿ ಆರಂಭ ಮಾಡತೇವಿ ಅಂತ ಅನ್ನಬಹುದಿತ್ತು. ಅದನ್ನು ಅನ್ನಲಿಲ್ಲ. ರವಾಂಡಾ, ಸಿಯಾರಾ ಲಿಯೋನ್ ಮುಂತಾದ ಸಣ್ಣಸಣ್ಣ ದೇಶಗಳು ಮಾಡಲಿಕ್ಕೆ ಹತ್ಯಾವು.

ಚೀನಾದವರು ಹತ್ತು ದಿನದಾಗ ಹೊಸಾ ಆಸ್ಪತ್ರೆ ಕಟ್ಟಿದ್ದು ನಾವೆಲ್ಲಾ ನೋಡಿ ಚಪ್ಪಾಳೆ ತಟ್ಟೇವಿ. ಆದರ ಈಗ ನಾಯಕರು ಹೇಳಿದರು ಅಂತ ಚಪ್ಪಾಳೆ ತಟ್ಟಿದಿವಿ. ಅದಕ್ಕೂ ಇದಕ್ಕೂ ನಮಗ ವ್ಯತ್ಯಾಸ ಗೊತ್ತಿಲ್ಲ.

ಚೀನಾದ ಕೊರೊನಾ ಆಸ್ಪತ್ರೆ

ಈಗ ನಮ್ಮ ಮುಂದ ಇರೋದು ಏನು-ಯುದ್ಧನೋ? ಸರ್ಜಿಕಲ್ ಸ್ಟ್ರೈಕೋ? ಹೋರಾಟನೋ? ಅಥವಾ ವಿಪತ್ತೋ? ಕೊರೊನಾ ರೋಗದ ಜೊತೆ ಹೊಡೆದಾಟ ಅಂದರ ಜನರ ಹತ್ತರ ಮುಚ್ಚಿ-ಮುಚ್ಚಿ ಇಡುವಂಥಾ ಸೀಕ್ರೆಟ್ ಏನರ ಅದ ಏನು? ಇದನ್ನ ತಿಳಕೋಬೇಕಾರ ನೀವು ಏನು ಸೈನ್ಯದ ಅಧಿಕಾರಿ ಆಗಿರಬೇಕಿಲ್ಲ. ನಿಮಗ ಕನಿಷ್ಠ ಸಾಮಾನ್ಯ ಜ್ಞಾನ ಇದ್ದರ ಸಾಕು. ಆದರ ಈಗಿನ ಕಾಲ ಹೆಂಗಂದ ಅಂದರ ಬ್ಯಾರೆ ಬೇಕಾದ್ದು ಸಿಗತದ, ಸಾಮಾನ್ಯ ಜ್ಞಾನ ಸಿಗಂಗಿಲ್ಲ. ಅದು ಎಷ್ಟು ಅಪರೂಪ ಅಂದರ ರೊಕ್ಕ ಅಲ್ಲಾ, ಜೀವಾ ಕೊಟ್ಟರೂ ಸಿಗಂಗಿಲ್ಲ. ಇದನ್ನು ಸರಿಮಾಡುವುದು ಘಟಾನುಘಟಿ ನಾಯಕರ ಕಡೆನೂ ಸಾಧ್ಯ ಇಲ್ಲ, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...