Homeರಾಜಕೀಯಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

ಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

- Advertisement -
- Advertisement -

ಬ್ರೆಜಿಲ್ ದೇಶವೆಂದರೆ ನಮ್ಮ ಜನಪ್ರಿಯ ಕಲ್ಪನೆಯಲ್ಲಿ ಫುಟ್‌ಬಾಲ್, ಪೆಲೆ, ಅಮೆಜಾನ್, ಸುಂದರ ಕಡಲತೀರದ ದೃಶ್ಯಗಳು ಹಾದುಹೋಗುತ್ತವೆ. ವಾಸ್ತವದಲ್ಲಿ ಬ್ರೆಜಿಲ್ ಒಂದು ಬಹುಜನಾಂಗೀಯ ಬಹುತ್ವವುಳ್ಳ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯುಳ್ಳ ದೇಶ. ಇದರ ಇತಿಹಾಸ ಮತ್ತು ವರ್ತಮಾನ ಎಲ್ಲಾ ಜಾಗತಿಕ ದಕ್ಷಿಣದ ದೇಶಗಳಂತೆ ವಸಾಹತುಶಾಹಿ ಆಳ್ವಿಕೆ, ಗುಲಾಮರ ವ್ಯಾಪಾರ, ಪ್ರಜಾಪ್ರಭುತ್ವದ ಸಂಕ್ರಮಣ, ಉಳ್ಳವರ ಕೊಳ್ಳೆ, ನಿಲ್ಲದೆ ಮುಂದುವರೆಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಆರ್ಥಿಕ ಅಸಮಾನತೆ ಮತ್ತು ಮುಂದುವರೆಯುತ್ತಿರುವ ನಿರಂತರ ವರ್ಗ ಸಂಘರ್ಷದಿಂದ ಕೂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರದ ದೃಷ್ಟಿಯಿಂದ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಉಷ್ಣವಲಯದ ಅಮಜಾನ್ ಮಳೆಗಾಡಿನ ಬಹುತೇಕ ಭಾಗ ಬ್ರೆಜಿಲ್‌ನಲ್ಲಿದೆ. ಅನೇಕಾನೇಕ ಪ್ರಾಣಿಪಕ್ಷಿಗಳು ಜೊತೆಗೆ 400 ರಿಂದ 500 ಬುಡಕಟ್ಟು ಜನಾಂಗಗಳು ಈ ಕಾಡುಗಳಲ್ಲಿ ವಾಸಿಸುತ್ತಾರೆ. ಕೆಲವು ಬುಡಕಟ್ಟು ಜನಾಂಗಗಳು ಇನ್ನೂ ಆಧುನಿಕ ಮನುಷ್ಯನ ಸಂಪರ್ಕದಿಂದ ದೂರ ಉಳಿದಿದ್ದಾರೆ. ಪ್ರಪಂಚದ ಬಹುತೇಕ ಜೀವಿಗಳು ಮತ್ತು ನಾವು ಉಸಿರಾಡುವ 20% ಆಮ್ಲಜನಕ ಅಮೆಜಾನ್ ದಟ್ಟಕಾಡುಗಳಿಂದ ಉತ್ಪಾದನೆಯಾಗುತ್ತದೆ. ಇದರಿಂದ ಕೆಲವು ಪರಿಸವಾದಿಗಳು ಅಮೆಜಾನನ್ನು ನಮ್ಮ ಗ್ರಹದ ಶ್ವಾಸಕೋಶಗಳು ಅಥವಾ ಕ್ಲೋರೋಫಿಲ್ ಎಂದು ಕರೆಯುತ್ತಾರೆ. ಅತ್ಯಂತ ಧ್ರುವೀಕರಣಗೊಂಡ ಆಕ್ಟೋಬರ್ 28ರಂದು ನಡೆದ ಬ್ರೆಜಿಲ್ ಚುನಾವಣೆಯ ಫಲಿತಾಂಶ ಪ್ರಪಂಚದ ಉಸಿರಾಟದ ಕ್ರಿಯೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಸುಮಾರು 21 ಕೋಟಿ ಜನಸಂಖ್ಯೆಯುಳ್ಳ ಬ್ರೆಜಿಲ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಭಜನೆ ಮಾಡುವ ಮಾಜಿ ಮಿಲಿಟರೀ ಅಧಿಕಾರಿ ಜೈರ್ ಬೊಲ್ಸೊನಾರೊ 55.6% ವೋಟುಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಅಲ್ಲದೆ, ಬ್ರೆಜಿಲ್ ಸೇರಿ ಒಂದೆರಡು ದಶಕಗಳಿಂದ ದಕ್ಷಿಣ ಅಮೆರಿಕ ದೇಶಗಳಲ್ಲಿ ಅಧಿಕಾರದಲ್ಲಿದ್ದ ಎಡಪಂಥೀಯ ಸರ್ಕಾರಗಳಿಗೆ ನೇರ ಬೆದರಿಕೆಯನ್ನು ಒಡ್ಡಿದ್ದಾನೆ. ಅದಲ್ಲದೆ ಬ್ರೆಜಿಲ್‌ನ ಕರಾಳ ಇತಿಹಾಸದ ಮಿಲಿಟರೀ ಆಡಳಿತವನ್ನು ಮತ್ತೆ ಮತ್ತೆ ವೈಭವೀಕರಿಸುತ್ತಾ ತನ್ನ ಧರ್ಮಾಂಧ, ಮಹಿಳಾವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ, ಪರಿಸರ ವಿರೋಧಿ ಮತ್ತು ಮಾನವ ವಿರೋಧಿ ಹೇಳಿಕೆಗಳನ್ನು ಹರಿಬಿಡುತ್ತಾ ಜನವರಿ 1 ರಂದು ಅಧಿಕಾರಕ್ಕೇರುತ್ತಿದ್ದಾನೆ. ಇದು ಬ್ರೆಜಿಲ್‌ನ ರಾಜಕೀಯ ಪ್ರಜಾತಂತ್ರವು ಸೈನ್ಯೀಕರಣಗೊಳ್ಳುತ್ತಿರುವ ಮುನ್ಸೂಚನೆ ಎಂದು ಸ್ವಾತಂತ್ರ‍್ಯ ಮತ್ತು ಸಮಾನತೆ ಬಯಸುವ ಎಲ್ಲಾ ಪ್ರಜ್ಞಾವಂತ ಜನತೆ ತಿಳಿದುಕೊಳ್ಳಬೇಕಿದೆ.
ಚುನಾವಣೆಗೂ ಮುಂಚೆಯೇ ಇದನ್ನು ‘ಪಾಶ್ಚಾತ್ಯ ಮತ್ತು ಜಾಗತಿಕ ದಕ್ಷಿಣದ ಭವಿಷ್ಯವನ್ನು ನಿರ್ಧರಿಸುವ ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ’ ಹಾಗೂ ‘21ನೇ ಶತಮಾನದ ಪ್ರಜಾತಂತ್ರ ಮತ್ತು ನಾಗರಿಕತೆಯ ವಿರುದ್ದ ನವಸರ್ವಾಧಿಕಾರ/ ಅನಾಗರಿಕತೆಯ ಸಂಘರ್ಷ’ ಎಂದು ವಿಶ್ಲೇಷಿಸಲಾಗಿತ್ತು. ಪ್ರಪಂಚದಾದ್ಯಂತ ಬಲಪಂಥೀಯ ರಾಜಕೀಯ ಬುಗ್ಗೆಗಳೇಳುತ್ತಿರುವ ಸಮಯದಲ್ಲಿ ಈ ಸರ್ವಾಧಿಕಾರದ ಗೆಲುವನ್ನು ವಿಶ್ಲೇಷಿಸಲು ಹೋದರೆ ಅದರಲ್ಲಿ ಅಮೆರಿಕಾದ ಸರ್ವಾಧಿಕಾರದ ಅತ್ಯಾಧುನಿಕ, ಮನೋವೈಜ್ಞಾನಿಕ ಯುದ್ದತಂತ್ರಗಳು ನೋಡ ಸಿಗುತ್ತವೆ. ಅಮೆರಿಕಾದ ಬೇಹುಗಾರಿಕೆ ಸಂಸ್ಥೆ ಎನ್.ಎಸ್.ಎ ನ ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡನ್ 2013ರಲ್ಲೇ 2000 ದಿಂದ ಬ್ರೆಜಿಲ್ ದೇಶ ಅತ್ಯಂತ ಬೇಹುಗಾರಿಕೆಗೆ ಒಳಪಟ್ಟಿರುವ ದೇಶ ಎಂದು ಬಹಿರಂಗಪಡಿಸಿದ್ದರು. ಅದಕ್ಕೆ ಕೆಲವು ಕಾರಣಗಳು ಇವೆ. ತನ್ನ ಸಾಮ್ರಾಜ್ಯಶಾಹಿ ಧೋರಣೆಯಿಂದ ದಕ್ಷಿಣ ಅಮೆರಿಕಾದ ದೇಶಗಳ ಸರ್ಕಾರಗಳನ್ನು ಕ್ಷಿಪ್ರ ಕ್ರಾಂತಿ, ರಾಜಕೀಯ ಹತ್ಯೆ, ನಾಯಕತ್ವ ಬದಲಾವಣೆ, ರಾಜಕೀಯ ಹಸ್ತಕ್ಷೇಪಗಳಿಂದ ತನ್ನಿಚ್ಛೆಗೆ ತಕ್ಕಂತೆ ಬದಲಿಸುತ್ತಾ ಕೆಲವೊಮ್ಮೆ ನೇರ ಮಿಲಿಟರೀ ಆಡಳಿತವನ್ನು ಅಮೆರಿಕವು ಹೇರುತ್ತಾ ಬಂದಿತ್ತು. 1964ರಲ್ಲಿ ಮಧ್ಯ ಎಡಕ್ಕೆ ಸೇರುವ ಸುಧಾರಣಾವಾದಿ ಬ್ರೆಜಿಲ್ ಲೇಬರ್ ಪಕ್ಷದ ಮಾರ್ಕುಎಸ್ ಗೌಲಾರ್ಟ್.ರನ್ನು ಕ್ಷಿಪ್ರ ಕ್ರಾಂತಿ ಮೂಲಕ ಕಿತ್ತು ಹಾಕಿ 1985ರ ವರೆಗೂ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸಿದ್ದರು. ಇದರ ಹಿಂದೆ ಅಮೆರಿಕಾದ ಬೆಂಬಲಿತ ಸ್ಥಳೀಯ ಕೃಷಿ ವ್ಯವಹಾರದ ಭೂಮಾಲೀಕರು, ಬಹುರಾಷ್ಟಿçÃಯ ಕಂಪನಿಗಳು, ಇವ್ಯಾಂಜೆಲಿಕಲ್ ಕ್ರೈಸ್ತ ಲಾಬೀ ಇದ್ದದ್ಡೇ ಅಲ್ಲದೆ, ಅದರ ಪ್ರಭಾವ ಸಮಾಜದಲ್ಲಿ ಬೆಳೆಯುತ್ತಾ ಹೋಯಿತು. ಈ ನಡೆ ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಮುಂದೆ ಆದ ರಾಜಕೀಯ ಹತ್ಯೆಗಳು, ಎಡಪಂಥೀಯ ಸರ್ಕಾರಗಳ ವಿರುದ್ದ ಮಿಲಿಟರೀ ಕ್ಷಿಪ್ರ ಕ್ರಾಂತಿ, ನಾಯಕತ್ವ ಬದಲಾವಣೆಗಳಿಗೆ ಆಳುವ ವರ್ಗದ ನೀಲಿನಕ್ಷೆಯಾಯಿತು. ತಮ್ಮ ವಿರುದ್ದವಿದ್ದ ಪರಿಸರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಕಾರ್ಮಿಕ ಸಂಘಟನೆಗಳ ಮುಖಂಡರ ಅಪಹರಣಗಳು, ಚಿತ್ರಹಿಂಸೆ, ಜೈಲುವಾಸ ಮತ್ತು ಕೊಲೆಗಳು ನಡೆದವು. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಇದರ ವಿರುದ್ಧ ಪ್ರತಿರೋಧದ ಅಲೆಯೆದ್ದು(ಗುಲಾಬಿ ಅಲೆ) ಬದಲಾವಣೆಯ ಗಾಳಿ ಬೀಸತೊಡಗಿತು. ದಕ್ಷಿಣ ಅಮೆರಿಕಾದಲ್ಲಿ ಒಂದರ ಮೇಲೆ ಒಂದು ದೇಶ ಪ್ರಗತಿಪರ, ಎಡಪಂಥೀಯ ಸರ್ಕಾರಗಳ ರಚನೆಯತ್ತ ಮುಖ ಮಾಡಿತ್ತು. ಜನರನ್ನು ಸಂಘಟಿಸಿ, ಸರ್ವಾಧಿಕಾರದ ಅನ್ಯಾಯಗಳ ವಿರುದ್ಧ ದ್ವನಿಯೆತ್ತಿ ಚಿತ್ರಹಿಂಸೆಗೆ ಒಳಪಟ್ಟಿದ್ದ ಕಾರ್ಮಿಕ ಪಕ್ಷದ ಸಹ ಸಂಸ್ಥಾಪಕ ಲೂಇಸ್ ಇನಾಸಿಯೋ ಲೂಲಾ ದ ಸಿಲ್ವ 2003ರಲ್ಲಿ ಅಧಿಕಾರ ಹಿಡಿದಿದ್ದರು. ಬ್ರೆಜಿಲ್‌ನಲ್ಲಿ ಜನಪ್ರಿಯವಾಗಿ “ಲೂಲಾ” ಎಂದು ಪ್ರಸಿದ್ದಿಯಾಗಿದ್ದ ಅವರು ತಮ್ಮ 10 ವರ್ಷದ ಅವಧಿಯಲ್ಲಿ ನಾನಾರೀತಿಯ ಜನ ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದರು. 3 ಕೋಟಿಗೂ ಹೆಚ್ಚು ಬ್ರೆಜಿಲ್ ಜನತೆಯನ್ನು ಬಡತನದಿಂದ ಮೇಲೆತ್ತಿದರು. ತಮ್ಮ ವಿಶೇಷ ಯೋಜನೆಗಳಾದ “ಬೊಳ್ಸಾ ಕುಟುಂಬ” ಪಿಂಚಣಿ ವ್ಯವಸ್ಥೆ ಮತ್ತು `ಫೊಮೆ ಝೀರೊ’ (ಶೂನ್ಯ ಹಸಿವು) ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿತ್ತು.
ಇದು ಬ್ರೆಜಿಲ್‌ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಸರಣಿ ಬರಹಗಳ ಎರಡನೇ ಭಾಗ.. ಮುಂದುವರೆಯುವುದು..

– ಭರತ್ ಹೆಬ್ಬಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...