Homeರಾಜಕೀಯಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

ಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

- Advertisement -
- Advertisement -

ಬ್ರೆಜಿಲ್ ದೇಶವೆಂದರೆ ನಮ್ಮ ಜನಪ್ರಿಯ ಕಲ್ಪನೆಯಲ್ಲಿ ಫುಟ್‌ಬಾಲ್, ಪೆಲೆ, ಅಮೆಜಾನ್, ಸುಂದರ ಕಡಲತೀರದ ದೃಶ್ಯಗಳು ಹಾದುಹೋಗುತ್ತವೆ. ವಾಸ್ತವದಲ್ಲಿ ಬ್ರೆಜಿಲ್ ಒಂದು ಬಹುಜನಾಂಗೀಯ ಬಹುತ್ವವುಳ್ಳ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯುಳ್ಳ ದೇಶ. ಇದರ ಇತಿಹಾಸ ಮತ್ತು ವರ್ತಮಾನ ಎಲ್ಲಾ ಜಾಗತಿಕ ದಕ್ಷಿಣದ ದೇಶಗಳಂತೆ ವಸಾಹತುಶಾಹಿ ಆಳ್ವಿಕೆ, ಗುಲಾಮರ ವ್ಯಾಪಾರ, ಪ್ರಜಾಪ್ರಭುತ್ವದ ಸಂಕ್ರಮಣ, ಉಳ್ಳವರ ಕೊಳ್ಳೆ, ನಿಲ್ಲದೆ ಮುಂದುವರೆಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಆರ್ಥಿಕ ಅಸಮಾನತೆ ಮತ್ತು ಮುಂದುವರೆಯುತ್ತಿರುವ ನಿರಂತರ ವರ್ಗ ಸಂಘರ್ಷದಿಂದ ಕೂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರದ ದೃಷ್ಟಿಯಿಂದ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಉಷ್ಣವಲಯದ ಅಮಜಾನ್ ಮಳೆಗಾಡಿನ ಬಹುತೇಕ ಭಾಗ ಬ್ರೆಜಿಲ್‌ನಲ್ಲಿದೆ. ಅನೇಕಾನೇಕ ಪ್ರಾಣಿಪಕ್ಷಿಗಳು ಜೊತೆಗೆ 400 ರಿಂದ 500 ಬುಡಕಟ್ಟು ಜನಾಂಗಗಳು ಈ ಕಾಡುಗಳಲ್ಲಿ ವಾಸಿಸುತ್ತಾರೆ. ಕೆಲವು ಬುಡಕಟ್ಟು ಜನಾಂಗಗಳು ಇನ್ನೂ ಆಧುನಿಕ ಮನುಷ್ಯನ ಸಂಪರ್ಕದಿಂದ ದೂರ ಉಳಿದಿದ್ದಾರೆ. ಪ್ರಪಂಚದ ಬಹುತೇಕ ಜೀವಿಗಳು ಮತ್ತು ನಾವು ಉಸಿರಾಡುವ 20% ಆಮ್ಲಜನಕ ಅಮೆಜಾನ್ ದಟ್ಟಕಾಡುಗಳಿಂದ ಉತ್ಪಾದನೆಯಾಗುತ್ತದೆ. ಇದರಿಂದ ಕೆಲವು ಪರಿಸವಾದಿಗಳು ಅಮೆಜಾನನ್ನು ನಮ್ಮ ಗ್ರಹದ ಶ್ವಾಸಕೋಶಗಳು ಅಥವಾ ಕ್ಲೋರೋಫಿಲ್ ಎಂದು ಕರೆಯುತ್ತಾರೆ. ಅತ್ಯಂತ ಧ್ರುವೀಕರಣಗೊಂಡ ಆಕ್ಟೋಬರ್ 28ರಂದು ನಡೆದ ಬ್ರೆಜಿಲ್ ಚುನಾವಣೆಯ ಫಲಿತಾಂಶ ಪ್ರಪಂಚದ ಉಸಿರಾಟದ ಕ್ರಿಯೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಸುಮಾರು 21 ಕೋಟಿ ಜನಸಂಖ್ಯೆಯುಳ್ಳ ಬ್ರೆಜಿಲ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಭಜನೆ ಮಾಡುವ ಮಾಜಿ ಮಿಲಿಟರೀ ಅಧಿಕಾರಿ ಜೈರ್ ಬೊಲ್ಸೊನಾರೊ 55.6% ವೋಟುಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಅಲ್ಲದೆ, ಬ್ರೆಜಿಲ್ ಸೇರಿ ಒಂದೆರಡು ದಶಕಗಳಿಂದ ದಕ್ಷಿಣ ಅಮೆರಿಕ ದೇಶಗಳಲ್ಲಿ ಅಧಿಕಾರದಲ್ಲಿದ್ದ ಎಡಪಂಥೀಯ ಸರ್ಕಾರಗಳಿಗೆ ನೇರ ಬೆದರಿಕೆಯನ್ನು ಒಡ್ಡಿದ್ದಾನೆ. ಅದಲ್ಲದೆ ಬ್ರೆಜಿಲ್‌ನ ಕರಾಳ ಇತಿಹಾಸದ ಮಿಲಿಟರೀ ಆಡಳಿತವನ್ನು ಮತ್ತೆ ಮತ್ತೆ ವೈಭವೀಕರಿಸುತ್ತಾ ತನ್ನ ಧರ್ಮಾಂಧ, ಮಹಿಳಾವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ, ಪರಿಸರ ವಿರೋಧಿ ಮತ್ತು ಮಾನವ ವಿರೋಧಿ ಹೇಳಿಕೆಗಳನ್ನು ಹರಿಬಿಡುತ್ತಾ ಜನವರಿ 1 ರಂದು ಅಧಿಕಾರಕ್ಕೇರುತ್ತಿದ್ದಾನೆ. ಇದು ಬ್ರೆಜಿಲ್‌ನ ರಾಜಕೀಯ ಪ್ರಜಾತಂತ್ರವು ಸೈನ್ಯೀಕರಣಗೊಳ್ಳುತ್ತಿರುವ ಮುನ್ಸೂಚನೆ ಎಂದು ಸ್ವಾತಂತ್ರ‍್ಯ ಮತ್ತು ಸಮಾನತೆ ಬಯಸುವ ಎಲ್ಲಾ ಪ್ರಜ್ಞಾವಂತ ಜನತೆ ತಿಳಿದುಕೊಳ್ಳಬೇಕಿದೆ.
ಚುನಾವಣೆಗೂ ಮುಂಚೆಯೇ ಇದನ್ನು ‘ಪಾಶ್ಚಾತ್ಯ ಮತ್ತು ಜಾಗತಿಕ ದಕ್ಷಿಣದ ಭವಿಷ್ಯವನ್ನು ನಿರ್ಧರಿಸುವ ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ’ ಹಾಗೂ ‘21ನೇ ಶತಮಾನದ ಪ್ರಜಾತಂತ್ರ ಮತ್ತು ನಾಗರಿಕತೆಯ ವಿರುದ್ದ ನವಸರ್ವಾಧಿಕಾರ/ ಅನಾಗರಿಕತೆಯ ಸಂಘರ್ಷ’ ಎಂದು ವಿಶ್ಲೇಷಿಸಲಾಗಿತ್ತು. ಪ್ರಪಂಚದಾದ್ಯಂತ ಬಲಪಂಥೀಯ ರಾಜಕೀಯ ಬುಗ್ಗೆಗಳೇಳುತ್ತಿರುವ ಸಮಯದಲ್ಲಿ ಈ ಸರ್ವಾಧಿಕಾರದ ಗೆಲುವನ್ನು ವಿಶ್ಲೇಷಿಸಲು ಹೋದರೆ ಅದರಲ್ಲಿ ಅಮೆರಿಕಾದ ಸರ್ವಾಧಿಕಾರದ ಅತ್ಯಾಧುನಿಕ, ಮನೋವೈಜ್ಞಾನಿಕ ಯುದ್ದತಂತ್ರಗಳು ನೋಡ ಸಿಗುತ್ತವೆ. ಅಮೆರಿಕಾದ ಬೇಹುಗಾರಿಕೆ ಸಂಸ್ಥೆ ಎನ್.ಎಸ್.ಎ ನ ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡನ್ 2013ರಲ್ಲೇ 2000 ದಿಂದ ಬ್ರೆಜಿಲ್ ದೇಶ ಅತ್ಯಂತ ಬೇಹುಗಾರಿಕೆಗೆ ಒಳಪಟ್ಟಿರುವ ದೇಶ ಎಂದು ಬಹಿರಂಗಪಡಿಸಿದ್ದರು. ಅದಕ್ಕೆ ಕೆಲವು ಕಾರಣಗಳು ಇವೆ. ತನ್ನ ಸಾಮ್ರಾಜ್ಯಶಾಹಿ ಧೋರಣೆಯಿಂದ ದಕ್ಷಿಣ ಅಮೆರಿಕಾದ ದೇಶಗಳ ಸರ್ಕಾರಗಳನ್ನು ಕ್ಷಿಪ್ರ ಕ್ರಾಂತಿ, ರಾಜಕೀಯ ಹತ್ಯೆ, ನಾಯಕತ್ವ ಬದಲಾವಣೆ, ರಾಜಕೀಯ ಹಸ್ತಕ್ಷೇಪಗಳಿಂದ ತನ್ನಿಚ್ಛೆಗೆ ತಕ್ಕಂತೆ ಬದಲಿಸುತ್ತಾ ಕೆಲವೊಮ್ಮೆ ನೇರ ಮಿಲಿಟರೀ ಆಡಳಿತವನ್ನು ಅಮೆರಿಕವು ಹೇರುತ್ತಾ ಬಂದಿತ್ತು. 1964ರಲ್ಲಿ ಮಧ್ಯ ಎಡಕ್ಕೆ ಸೇರುವ ಸುಧಾರಣಾವಾದಿ ಬ್ರೆಜಿಲ್ ಲೇಬರ್ ಪಕ್ಷದ ಮಾರ್ಕುಎಸ್ ಗೌಲಾರ್ಟ್.ರನ್ನು ಕ್ಷಿಪ್ರ ಕ್ರಾಂತಿ ಮೂಲಕ ಕಿತ್ತು ಹಾಕಿ 1985ರ ವರೆಗೂ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸಿದ್ದರು. ಇದರ ಹಿಂದೆ ಅಮೆರಿಕಾದ ಬೆಂಬಲಿತ ಸ್ಥಳೀಯ ಕೃಷಿ ವ್ಯವಹಾರದ ಭೂಮಾಲೀಕರು, ಬಹುರಾಷ್ಟಿçÃಯ ಕಂಪನಿಗಳು, ಇವ್ಯಾಂಜೆಲಿಕಲ್ ಕ್ರೈಸ್ತ ಲಾಬೀ ಇದ್ದದ್ಡೇ ಅಲ್ಲದೆ, ಅದರ ಪ್ರಭಾವ ಸಮಾಜದಲ್ಲಿ ಬೆಳೆಯುತ್ತಾ ಹೋಯಿತು. ಈ ನಡೆ ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಮುಂದೆ ಆದ ರಾಜಕೀಯ ಹತ್ಯೆಗಳು, ಎಡಪಂಥೀಯ ಸರ್ಕಾರಗಳ ವಿರುದ್ದ ಮಿಲಿಟರೀ ಕ್ಷಿಪ್ರ ಕ್ರಾಂತಿ, ನಾಯಕತ್ವ ಬದಲಾವಣೆಗಳಿಗೆ ಆಳುವ ವರ್ಗದ ನೀಲಿನಕ್ಷೆಯಾಯಿತು. ತಮ್ಮ ವಿರುದ್ದವಿದ್ದ ಪರಿಸರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಕಾರ್ಮಿಕ ಸಂಘಟನೆಗಳ ಮುಖಂಡರ ಅಪಹರಣಗಳು, ಚಿತ್ರಹಿಂಸೆ, ಜೈಲುವಾಸ ಮತ್ತು ಕೊಲೆಗಳು ನಡೆದವು. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಇದರ ವಿರುದ್ಧ ಪ್ರತಿರೋಧದ ಅಲೆಯೆದ್ದು(ಗುಲಾಬಿ ಅಲೆ) ಬದಲಾವಣೆಯ ಗಾಳಿ ಬೀಸತೊಡಗಿತು. ದಕ್ಷಿಣ ಅಮೆರಿಕಾದಲ್ಲಿ ಒಂದರ ಮೇಲೆ ಒಂದು ದೇಶ ಪ್ರಗತಿಪರ, ಎಡಪಂಥೀಯ ಸರ್ಕಾರಗಳ ರಚನೆಯತ್ತ ಮುಖ ಮಾಡಿತ್ತು. ಜನರನ್ನು ಸಂಘಟಿಸಿ, ಸರ್ವಾಧಿಕಾರದ ಅನ್ಯಾಯಗಳ ವಿರುದ್ಧ ದ್ವನಿಯೆತ್ತಿ ಚಿತ್ರಹಿಂಸೆಗೆ ಒಳಪಟ್ಟಿದ್ದ ಕಾರ್ಮಿಕ ಪಕ್ಷದ ಸಹ ಸಂಸ್ಥಾಪಕ ಲೂಇಸ್ ಇನಾಸಿಯೋ ಲೂಲಾ ದ ಸಿಲ್ವ 2003ರಲ್ಲಿ ಅಧಿಕಾರ ಹಿಡಿದಿದ್ದರು. ಬ್ರೆಜಿಲ್‌ನಲ್ಲಿ ಜನಪ್ರಿಯವಾಗಿ “ಲೂಲಾ” ಎಂದು ಪ್ರಸಿದ್ದಿಯಾಗಿದ್ದ ಅವರು ತಮ್ಮ 10 ವರ್ಷದ ಅವಧಿಯಲ್ಲಿ ನಾನಾರೀತಿಯ ಜನ ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದರು. 3 ಕೋಟಿಗೂ ಹೆಚ್ಚು ಬ್ರೆಜಿಲ್ ಜನತೆಯನ್ನು ಬಡತನದಿಂದ ಮೇಲೆತ್ತಿದರು. ತಮ್ಮ ವಿಶೇಷ ಯೋಜನೆಗಳಾದ “ಬೊಳ್ಸಾ ಕುಟುಂಬ” ಪಿಂಚಣಿ ವ್ಯವಸ್ಥೆ ಮತ್ತು `ಫೊಮೆ ಝೀರೊ’ (ಶೂನ್ಯ ಹಸಿವು) ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿತ್ತು.
ಇದು ಬ್ರೆಜಿಲ್‌ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಸರಣಿ ಬರಹಗಳ ಎರಡನೇ ಭಾಗ.. ಮುಂದುವರೆಯುವುದು..

– ಭರತ್ ಹೆಬ್ಬಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...