Homeರಾಜಕೀಯಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

ಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

- Advertisement -
- Advertisement -

ಬ್ರೆಜಿಲ್ ದೇಶವೆಂದರೆ ನಮ್ಮ ಜನಪ್ರಿಯ ಕಲ್ಪನೆಯಲ್ಲಿ ಫುಟ್‌ಬಾಲ್, ಪೆಲೆ, ಅಮೆಜಾನ್, ಸುಂದರ ಕಡಲತೀರದ ದೃಶ್ಯಗಳು ಹಾದುಹೋಗುತ್ತವೆ. ವಾಸ್ತವದಲ್ಲಿ ಬ್ರೆಜಿಲ್ ಒಂದು ಬಹುಜನಾಂಗೀಯ ಬಹುತ್ವವುಳ್ಳ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯುಳ್ಳ ದೇಶ. ಇದರ ಇತಿಹಾಸ ಮತ್ತು ವರ್ತಮಾನ ಎಲ್ಲಾ ಜಾಗತಿಕ ದಕ್ಷಿಣದ ದೇಶಗಳಂತೆ ವಸಾಹತುಶಾಹಿ ಆಳ್ವಿಕೆ, ಗುಲಾಮರ ವ್ಯಾಪಾರ, ಪ್ರಜಾಪ್ರಭುತ್ವದ ಸಂಕ್ರಮಣ, ಉಳ್ಳವರ ಕೊಳ್ಳೆ, ನಿಲ್ಲದೆ ಮುಂದುವರೆಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಆರ್ಥಿಕ ಅಸಮಾನತೆ ಮತ್ತು ಮುಂದುವರೆಯುತ್ತಿರುವ ನಿರಂತರ ವರ್ಗ ಸಂಘರ್ಷದಿಂದ ಕೂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರದ ದೃಷ್ಟಿಯಿಂದ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಉಷ್ಣವಲಯದ ಅಮಜಾನ್ ಮಳೆಗಾಡಿನ ಬಹುತೇಕ ಭಾಗ ಬ್ರೆಜಿಲ್‌ನಲ್ಲಿದೆ. ಅನೇಕಾನೇಕ ಪ್ರಾಣಿಪಕ್ಷಿಗಳು ಜೊತೆಗೆ 400 ರಿಂದ 500 ಬುಡಕಟ್ಟು ಜನಾಂಗಗಳು ಈ ಕಾಡುಗಳಲ್ಲಿ ವಾಸಿಸುತ್ತಾರೆ. ಕೆಲವು ಬುಡಕಟ್ಟು ಜನಾಂಗಗಳು ಇನ್ನೂ ಆಧುನಿಕ ಮನುಷ್ಯನ ಸಂಪರ್ಕದಿಂದ ದೂರ ಉಳಿದಿದ್ದಾರೆ. ಪ್ರಪಂಚದ ಬಹುತೇಕ ಜೀವಿಗಳು ಮತ್ತು ನಾವು ಉಸಿರಾಡುವ 20% ಆಮ್ಲಜನಕ ಅಮೆಜಾನ್ ದಟ್ಟಕಾಡುಗಳಿಂದ ಉತ್ಪಾದನೆಯಾಗುತ್ತದೆ. ಇದರಿಂದ ಕೆಲವು ಪರಿಸವಾದಿಗಳು ಅಮೆಜಾನನ್ನು ನಮ್ಮ ಗ್ರಹದ ಶ್ವಾಸಕೋಶಗಳು ಅಥವಾ ಕ್ಲೋರೋಫಿಲ್ ಎಂದು ಕರೆಯುತ್ತಾರೆ. ಅತ್ಯಂತ ಧ್ರುವೀಕರಣಗೊಂಡ ಆಕ್ಟೋಬರ್ 28ರಂದು ನಡೆದ ಬ್ರೆಜಿಲ್ ಚುನಾವಣೆಯ ಫಲಿತಾಂಶ ಪ್ರಪಂಚದ ಉಸಿರಾಟದ ಕ್ರಿಯೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಸುಮಾರು 21 ಕೋಟಿ ಜನಸಂಖ್ಯೆಯುಳ್ಳ ಬ್ರೆಜಿಲ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಭಜನೆ ಮಾಡುವ ಮಾಜಿ ಮಿಲಿಟರೀ ಅಧಿಕಾರಿ ಜೈರ್ ಬೊಲ್ಸೊನಾರೊ 55.6% ವೋಟುಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಅಲ್ಲದೆ, ಬ್ರೆಜಿಲ್ ಸೇರಿ ಒಂದೆರಡು ದಶಕಗಳಿಂದ ದಕ್ಷಿಣ ಅಮೆರಿಕ ದೇಶಗಳಲ್ಲಿ ಅಧಿಕಾರದಲ್ಲಿದ್ದ ಎಡಪಂಥೀಯ ಸರ್ಕಾರಗಳಿಗೆ ನೇರ ಬೆದರಿಕೆಯನ್ನು ಒಡ್ಡಿದ್ದಾನೆ. ಅದಲ್ಲದೆ ಬ್ರೆಜಿಲ್‌ನ ಕರಾಳ ಇತಿಹಾಸದ ಮಿಲಿಟರೀ ಆಡಳಿತವನ್ನು ಮತ್ತೆ ಮತ್ತೆ ವೈಭವೀಕರಿಸುತ್ತಾ ತನ್ನ ಧರ್ಮಾಂಧ, ಮಹಿಳಾವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ, ಪರಿಸರ ವಿರೋಧಿ ಮತ್ತು ಮಾನವ ವಿರೋಧಿ ಹೇಳಿಕೆಗಳನ್ನು ಹರಿಬಿಡುತ್ತಾ ಜನವರಿ 1 ರಂದು ಅಧಿಕಾರಕ್ಕೇರುತ್ತಿದ್ದಾನೆ. ಇದು ಬ್ರೆಜಿಲ್‌ನ ರಾಜಕೀಯ ಪ್ರಜಾತಂತ್ರವು ಸೈನ್ಯೀಕರಣಗೊಳ್ಳುತ್ತಿರುವ ಮುನ್ಸೂಚನೆ ಎಂದು ಸ್ವಾತಂತ್ರ‍್ಯ ಮತ್ತು ಸಮಾನತೆ ಬಯಸುವ ಎಲ್ಲಾ ಪ್ರಜ್ಞಾವಂತ ಜನತೆ ತಿಳಿದುಕೊಳ್ಳಬೇಕಿದೆ.
ಚುನಾವಣೆಗೂ ಮುಂಚೆಯೇ ಇದನ್ನು ‘ಪಾಶ್ಚಾತ್ಯ ಮತ್ತು ಜಾಗತಿಕ ದಕ್ಷಿಣದ ಭವಿಷ್ಯವನ್ನು ನಿರ್ಧರಿಸುವ ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ’ ಹಾಗೂ ‘21ನೇ ಶತಮಾನದ ಪ್ರಜಾತಂತ್ರ ಮತ್ತು ನಾಗರಿಕತೆಯ ವಿರುದ್ದ ನವಸರ್ವಾಧಿಕಾರ/ ಅನಾಗರಿಕತೆಯ ಸಂಘರ್ಷ’ ಎಂದು ವಿಶ್ಲೇಷಿಸಲಾಗಿತ್ತು. ಪ್ರಪಂಚದಾದ್ಯಂತ ಬಲಪಂಥೀಯ ರಾಜಕೀಯ ಬುಗ್ಗೆಗಳೇಳುತ್ತಿರುವ ಸಮಯದಲ್ಲಿ ಈ ಸರ್ವಾಧಿಕಾರದ ಗೆಲುವನ್ನು ವಿಶ್ಲೇಷಿಸಲು ಹೋದರೆ ಅದರಲ್ಲಿ ಅಮೆರಿಕಾದ ಸರ್ವಾಧಿಕಾರದ ಅತ್ಯಾಧುನಿಕ, ಮನೋವೈಜ್ಞಾನಿಕ ಯುದ್ದತಂತ್ರಗಳು ನೋಡ ಸಿಗುತ್ತವೆ. ಅಮೆರಿಕಾದ ಬೇಹುಗಾರಿಕೆ ಸಂಸ್ಥೆ ಎನ್.ಎಸ್.ಎ ನ ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡನ್ 2013ರಲ್ಲೇ 2000 ದಿಂದ ಬ್ರೆಜಿಲ್ ದೇಶ ಅತ್ಯಂತ ಬೇಹುಗಾರಿಕೆಗೆ ಒಳಪಟ್ಟಿರುವ ದೇಶ ಎಂದು ಬಹಿರಂಗಪಡಿಸಿದ್ದರು. ಅದಕ್ಕೆ ಕೆಲವು ಕಾರಣಗಳು ಇವೆ. ತನ್ನ ಸಾಮ್ರಾಜ್ಯಶಾಹಿ ಧೋರಣೆಯಿಂದ ದಕ್ಷಿಣ ಅಮೆರಿಕಾದ ದೇಶಗಳ ಸರ್ಕಾರಗಳನ್ನು ಕ್ಷಿಪ್ರ ಕ್ರಾಂತಿ, ರಾಜಕೀಯ ಹತ್ಯೆ, ನಾಯಕತ್ವ ಬದಲಾವಣೆ, ರಾಜಕೀಯ ಹಸ್ತಕ್ಷೇಪಗಳಿಂದ ತನ್ನಿಚ್ಛೆಗೆ ತಕ್ಕಂತೆ ಬದಲಿಸುತ್ತಾ ಕೆಲವೊಮ್ಮೆ ನೇರ ಮಿಲಿಟರೀ ಆಡಳಿತವನ್ನು ಅಮೆರಿಕವು ಹೇರುತ್ತಾ ಬಂದಿತ್ತು. 1964ರಲ್ಲಿ ಮಧ್ಯ ಎಡಕ್ಕೆ ಸೇರುವ ಸುಧಾರಣಾವಾದಿ ಬ್ರೆಜಿಲ್ ಲೇಬರ್ ಪಕ್ಷದ ಮಾರ್ಕುಎಸ್ ಗೌಲಾರ್ಟ್.ರನ್ನು ಕ್ಷಿಪ್ರ ಕ್ರಾಂತಿ ಮೂಲಕ ಕಿತ್ತು ಹಾಕಿ 1985ರ ವರೆಗೂ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸಿದ್ದರು. ಇದರ ಹಿಂದೆ ಅಮೆರಿಕಾದ ಬೆಂಬಲಿತ ಸ್ಥಳೀಯ ಕೃಷಿ ವ್ಯವಹಾರದ ಭೂಮಾಲೀಕರು, ಬಹುರಾಷ್ಟಿçÃಯ ಕಂಪನಿಗಳು, ಇವ್ಯಾಂಜೆಲಿಕಲ್ ಕ್ರೈಸ್ತ ಲಾಬೀ ಇದ್ದದ್ಡೇ ಅಲ್ಲದೆ, ಅದರ ಪ್ರಭಾವ ಸಮಾಜದಲ್ಲಿ ಬೆಳೆಯುತ್ತಾ ಹೋಯಿತು. ಈ ನಡೆ ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಮುಂದೆ ಆದ ರಾಜಕೀಯ ಹತ್ಯೆಗಳು, ಎಡಪಂಥೀಯ ಸರ್ಕಾರಗಳ ವಿರುದ್ದ ಮಿಲಿಟರೀ ಕ್ಷಿಪ್ರ ಕ್ರಾಂತಿ, ನಾಯಕತ್ವ ಬದಲಾವಣೆಗಳಿಗೆ ಆಳುವ ವರ್ಗದ ನೀಲಿನಕ್ಷೆಯಾಯಿತು. ತಮ್ಮ ವಿರುದ್ದವಿದ್ದ ಪರಿಸರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಕಾರ್ಮಿಕ ಸಂಘಟನೆಗಳ ಮುಖಂಡರ ಅಪಹರಣಗಳು, ಚಿತ್ರಹಿಂಸೆ, ಜೈಲುವಾಸ ಮತ್ತು ಕೊಲೆಗಳು ನಡೆದವು. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಇದರ ವಿರುದ್ಧ ಪ್ರತಿರೋಧದ ಅಲೆಯೆದ್ದು(ಗುಲಾಬಿ ಅಲೆ) ಬದಲಾವಣೆಯ ಗಾಳಿ ಬೀಸತೊಡಗಿತು. ದಕ್ಷಿಣ ಅಮೆರಿಕಾದಲ್ಲಿ ಒಂದರ ಮೇಲೆ ಒಂದು ದೇಶ ಪ್ರಗತಿಪರ, ಎಡಪಂಥೀಯ ಸರ್ಕಾರಗಳ ರಚನೆಯತ್ತ ಮುಖ ಮಾಡಿತ್ತು. ಜನರನ್ನು ಸಂಘಟಿಸಿ, ಸರ್ವಾಧಿಕಾರದ ಅನ್ಯಾಯಗಳ ವಿರುದ್ಧ ದ್ವನಿಯೆತ್ತಿ ಚಿತ್ರಹಿಂಸೆಗೆ ಒಳಪಟ್ಟಿದ್ದ ಕಾರ್ಮಿಕ ಪಕ್ಷದ ಸಹ ಸಂಸ್ಥಾಪಕ ಲೂಇಸ್ ಇನಾಸಿಯೋ ಲೂಲಾ ದ ಸಿಲ್ವ 2003ರಲ್ಲಿ ಅಧಿಕಾರ ಹಿಡಿದಿದ್ದರು. ಬ್ರೆಜಿಲ್‌ನಲ್ಲಿ ಜನಪ್ರಿಯವಾಗಿ “ಲೂಲಾ” ಎಂದು ಪ್ರಸಿದ್ದಿಯಾಗಿದ್ದ ಅವರು ತಮ್ಮ 10 ವರ್ಷದ ಅವಧಿಯಲ್ಲಿ ನಾನಾರೀತಿಯ ಜನ ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದರು. 3 ಕೋಟಿಗೂ ಹೆಚ್ಚು ಬ್ರೆಜಿಲ್ ಜನತೆಯನ್ನು ಬಡತನದಿಂದ ಮೇಲೆತ್ತಿದರು. ತಮ್ಮ ವಿಶೇಷ ಯೋಜನೆಗಳಾದ “ಬೊಳ್ಸಾ ಕುಟುಂಬ” ಪಿಂಚಣಿ ವ್ಯವಸ್ಥೆ ಮತ್ತು `ಫೊಮೆ ಝೀರೊ’ (ಶೂನ್ಯ ಹಸಿವು) ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿತ್ತು.
ಇದು ಬ್ರೆಜಿಲ್‌ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಸರಣಿ ಬರಹಗಳ ಎರಡನೇ ಭಾಗ.. ಮುಂದುವರೆಯುವುದು..

– ಭರತ್ ಹೆಬ್ಬಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಸೋರಿಕೆಯಾದ ಸಂಪೂರ್ಣ ಆಡಿಯೋ ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2023ರ ಜನಾಂಗೀಯ ಹಿಂಸಾಚಾರದಲ್ಲಿ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಪಾತ್ರವನ್ನು ಸೂಚಿಸಿರುವ ಅರ್ಜಿಯಲ್ಲಿ ಲಭ್ಯವಿರುವ ಸಂಪೂರ್ಣ ಸೋರಿಕೆಯಾದ ಆಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಏಕೆ ಕಳುಹಿಸಲಿಲ್ಲ ಎಂದು...

ಎಸ್‌ಐಆರ್‌ ಭಯಕ್ಕೆ ಮತ್ತೊಂದು ಬಲಿ: ಬಂಗಾಳದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ, ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದ ಭಯದಿಂದ ವೃದ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತರನ್ನು ರಣಘಾಟ್‌ನ...

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ...

ಕೇರಳ: ಕೊಲ್ಲಂ ಕಾರ್ಪೊರೇಷನ್‌ನಲ್ಲಿ 25 ವರ್ಷಗಳ ಎಲ್‌ಡಿಎಫ್‌ ಆಳ್ವಿಕೆ ಕೊನೆಗೊಳಿಸಿದ ಯುಡಿಎಫ್

2025 ರ ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಅತ್ಯಂತ ಅಚ್ಚರಿಯ ರಾಜಕೀಯ ಫಲಿತಾಂಶಳನ್ನು ನೀಡಿವೆ. ಅದರಲ್ಲಿ, ಕೊಲ್ಲಂ ಕಾರ್ಪೊರೇಷನ್‌ನಲ್ಲಿ ಎಡಪಂಥೀಯ ಪ್ರಜಾಸತ್ತಾತ್ಮಕ ರಂಗದ ನಿರಂತರ 25 ವರ್ಷಗಳ ನಿಯಂತ್ರಣವನ್ನು ಯುನೈಟೆಡ್...

‘ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’: ಕಾಂಗ್ರೆಸ್‌ನ ‘ವೋಟ್ ಚೋರಿ’ ಅಭಿಯಾನದ ಬಗ್ಗೆ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕಾಂಗ್ರೆಸ್‌ನ "ಮತ ಚೋರಿ" ಅಭಿಯಾನದಿಂದ ದೂರ ಉಳಿದಿದ್ದಾರೆ, ಈ ವಿಷಯವು ಒಟ್ಟಾರೆಯಾಗಿ ವಿರೋಧ ಪಕ್ಷದ ಇಂಡಿಯಾ ಬಣದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೋಮವಾರ...

ಇಂಡಿಗೋ ವಿಮಾನ ರದ್ದತಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನೂರಾರು ಇಂಡಿಗೋ ವಿಮಾನಗಳ ರದ್ದತಿಗೆ ನ್ಯಾಯಾಂಗ ಹಸ್ತಕ್ಷೇಪ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸೋಮವಾರ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿದಾರರು ತಮ್ಮ ದೂರುಗಳೊಂದಿಗೆ ದೆಹಲಿ ಹೈಕೋರ್ಟ್ ಅನ್ನು...

ಹಣ ಅಕ್ರಮ ವರ್ಗಾವಣೆ ಪ್ರಕರಣ : ಪತ್ರಕರ್ತ ಮಹೇಶ್ ಲಾಂಗಾಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು

ವಂಚನೆ ಆರೋಪದ ಮೇಲೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಮಹೇಶ್ ಲಾಂಗಾ ಅವರಿಗೆ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ (ಡಿ.15) ಮಧ್ಯಂತರ ಜಾಮೀನು ನೀಡಿದೆ. ಜಿಎಸ್‌ಟಿ ವಂಚನೆ...

‘ಮಹಿಳೆಯರು ಗಂಡಂದಿರ ಜೊತೆ ಮಲಗಲು ಮಾತ್ರ’: ಸಿಪಿಎಂ ನಾಯಕನ ಅಸೂಕ್ಷ್ಮ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ ನಂತರ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.  ಸಯೀದ್ ಅಲಿ ಮಜೀದ್, ತೆನ್ನೆಲಾ ಪಂಚಾಯತ್ ವಾರ್ಡ್ ಅನ್ನು...

ಅಖ್ಲಾಕ್ ಹತ್ಯೆ ಪ್ರಕರಣ ಹಿಂತೆಗೆದುಕೊಳ್ಳುವುದು ನ್ಯಾಯಾಂಗ ಪ್ರಕ್ರಿಯೆ ಹಳಿತಪ್ಪಿಸುವ ಪ್ರಯತ್ನ: ಬೃಂದಾ ಕಾರಟ್

ರಾಜ್ಯಪಾಲರ ಅನುಮತಿಯೊಂದಿಗೆ ಮೊಹಮ್ಮದ್ ಅಖ್ಲಾಕ್ ಅವರ ಕೊಲೆ ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಖಂಡಿಸಿ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಹಿರಿಯ ನಾಯಕಿ ಬೃಂದಾ ಕಾರಟ್...

ಮತ್ತೆ ಮುನ್ನೆಲೆಗೆ ಬಂದ ‘Avalkoppam’: ದಿಲೀಪ್ ಖುಲಾಸೆ ಬಳಿಕ ಕೇರಳದಾದ್ಯಂತ ಪ್ರತಿಭಟನೆ

ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. 2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ...