Homeರಾಜಕೀಯಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

ಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

- Advertisement -
- Advertisement -

ಬ್ರೆಜಿಲ್ ದೇಶವೆಂದರೆ ನಮ್ಮ ಜನಪ್ರಿಯ ಕಲ್ಪನೆಯಲ್ಲಿ ಫುಟ್‌ಬಾಲ್, ಪೆಲೆ, ಅಮೆಜಾನ್, ಸುಂದರ ಕಡಲತೀರದ ದೃಶ್ಯಗಳು ಹಾದುಹೋಗುತ್ತವೆ. ವಾಸ್ತವದಲ್ಲಿ ಬ್ರೆಜಿಲ್ ಒಂದು ಬಹುಜನಾಂಗೀಯ ಬಹುತ್ವವುಳ್ಳ ದಕ್ಷಿಣ ಅಮೆರಿಕಾದಲ್ಲೇ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯುಳ್ಳ ದೇಶ. ಇದರ ಇತಿಹಾಸ ಮತ್ತು ವರ್ತಮಾನ ಎಲ್ಲಾ ಜಾಗತಿಕ ದಕ್ಷಿಣದ ದೇಶಗಳಂತೆ ವಸಾಹತುಶಾಹಿ ಆಳ್ವಿಕೆ, ಗುಲಾಮರ ವ್ಯಾಪಾರ, ಪ್ರಜಾಪ್ರಭುತ್ವದ ಸಂಕ್ರಮಣ, ಉಳ್ಳವರ ಕೊಳ್ಳೆ, ನಿಲ್ಲದೆ ಮುಂದುವರೆಯುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಆರ್ಥಿಕ ಅಸಮಾನತೆ ಮತ್ತು ಮುಂದುವರೆಯುತ್ತಿರುವ ನಿರಂತರ ವರ್ಗ ಸಂಘರ್ಷದಿಂದ ಕೂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪರಿಸರದ ದೃಷ್ಟಿಯಿಂದ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಉಷ್ಣವಲಯದ ಅಮಜಾನ್ ಮಳೆಗಾಡಿನ ಬಹುತೇಕ ಭಾಗ ಬ್ರೆಜಿಲ್‌ನಲ್ಲಿದೆ. ಅನೇಕಾನೇಕ ಪ್ರಾಣಿಪಕ್ಷಿಗಳು ಜೊತೆಗೆ 400 ರಿಂದ 500 ಬುಡಕಟ್ಟು ಜನಾಂಗಗಳು ಈ ಕಾಡುಗಳಲ್ಲಿ ವಾಸಿಸುತ್ತಾರೆ. ಕೆಲವು ಬುಡಕಟ್ಟು ಜನಾಂಗಗಳು ಇನ್ನೂ ಆಧುನಿಕ ಮನುಷ್ಯನ ಸಂಪರ್ಕದಿಂದ ದೂರ ಉಳಿದಿದ್ದಾರೆ. ಪ್ರಪಂಚದ ಬಹುತೇಕ ಜೀವಿಗಳು ಮತ್ತು ನಾವು ಉಸಿರಾಡುವ 20% ಆಮ್ಲಜನಕ ಅಮೆಜಾನ್ ದಟ್ಟಕಾಡುಗಳಿಂದ ಉತ್ಪಾದನೆಯಾಗುತ್ತದೆ. ಇದರಿಂದ ಕೆಲವು ಪರಿಸವಾದಿಗಳು ಅಮೆಜಾನನ್ನು ನಮ್ಮ ಗ್ರಹದ ಶ್ವಾಸಕೋಶಗಳು ಅಥವಾ ಕ್ಲೋರೋಫಿಲ್ ಎಂದು ಕರೆಯುತ್ತಾರೆ. ಅತ್ಯಂತ ಧ್ರುವೀಕರಣಗೊಂಡ ಆಕ್ಟೋಬರ್ 28ರಂದು ನಡೆದ ಬ್ರೆಜಿಲ್ ಚುನಾವಣೆಯ ಫಲಿತಾಂಶ ಪ್ರಪಂಚದ ಉಸಿರಾಟದ ಕ್ರಿಯೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಸುಮಾರು 21 ಕೋಟಿ ಜನಸಂಖ್ಯೆಯುಳ್ಳ ಬ್ರೆಜಿಲ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಭಜನೆ ಮಾಡುವ ಮಾಜಿ ಮಿಲಿಟರೀ ಅಧಿಕಾರಿ ಜೈರ್ ಬೊಲ್ಸೊನಾರೊ 55.6% ವೋಟುಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದೇ ಅಲ್ಲದೆ, ಬ್ರೆಜಿಲ್ ಸೇರಿ ಒಂದೆರಡು ದಶಕಗಳಿಂದ ದಕ್ಷಿಣ ಅಮೆರಿಕ ದೇಶಗಳಲ್ಲಿ ಅಧಿಕಾರದಲ್ಲಿದ್ದ ಎಡಪಂಥೀಯ ಸರ್ಕಾರಗಳಿಗೆ ನೇರ ಬೆದರಿಕೆಯನ್ನು ಒಡ್ಡಿದ್ದಾನೆ. ಅದಲ್ಲದೆ ಬ್ರೆಜಿಲ್‌ನ ಕರಾಳ ಇತಿಹಾಸದ ಮಿಲಿಟರೀ ಆಡಳಿತವನ್ನು ಮತ್ತೆ ಮತ್ತೆ ವೈಭವೀಕರಿಸುತ್ತಾ ತನ್ನ ಧರ್ಮಾಂಧ, ಮಹಿಳಾವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ, ಪರಿಸರ ವಿರೋಧಿ ಮತ್ತು ಮಾನವ ವಿರೋಧಿ ಹೇಳಿಕೆಗಳನ್ನು ಹರಿಬಿಡುತ್ತಾ ಜನವರಿ 1 ರಂದು ಅಧಿಕಾರಕ್ಕೇರುತ್ತಿದ್ದಾನೆ. ಇದು ಬ್ರೆಜಿಲ್‌ನ ರಾಜಕೀಯ ಪ್ರಜಾತಂತ್ರವು ಸೈನ್ಯೀಕರಣಗೊಳ್ಳುತ್ತಿರುವ ಮುನ್ಸೂಚನೆ ಎಂದು ಸ್ವಾತಂತ್ರ‍್ಯ ಮತ್ತು ಸಮಾನತೆ ಬಯಸುವ ಎಲ್ಲಾ ಪ್ರಜ್ಞಾವಂತ ಜನತೆ ತಿಳಿದುಕೊಳ್ಳಬೇಕಿದೆ.
ಚುನಾವಣೆಗೂ ಮುಂಚೆಯೇ ಇದನ್ನು ‘ಪಾಶ್ಚಾತ್ಯ ಮತ್ತು ಜಾಗತಿಕ ದಕ್ಷಿಣದ ಭವಿಷ್ಯವನ್ನು ನಿರ್ಧರಿಸುವ ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ’ ಹಾಗೂ ‘21ನೇ ಶತಮಾನದ ಪ್ರಜಾತಂತ್ರ ಮತ್ತು ನಾಗರಿಕತೆಯ ವಿರುದ್ದ ನವಸರ್ವಾಧಿಕಾರ/ ಅನಾಗರಿಕತೆಯ ಸಂಘರ್ಷ’ ಎಂದು ವಿಶ್ಲೇಷಿಸಲಾಗಿತ್ತು. ಪ್ರಪಂಚದಾದ್ಯಂತ ಬಲಪಂಥೀಯ ರಾಜಕೀಯ ಬುಗ್ಗೆಗಳೇಳುತ್ತಿರುವ ಸಮಯದಲ್ಲಿ ಈ ಸರ್ವಾಧಿಕಾರದ ಗೆಲುವನ್ನು ವಿಶ್ಲೇಷಿಸಲು ಹೋದರೆ ಅದರಲ್ಲಿ ಅಮೆರಿಕಾದ ಸರ್ವಾಧಿಕಾರದ ಅತ್ಯಾಧುನಿಕ, ಮನೋವೈಜ್ಞಾನಿಕ ಯುದ್ದತಂತ್ರಗಳು ನೋಡ ಸಿಗುತ್ತವೆ. ಅಮೆರಿಕಾದ ಬೇಹುಗಾರಿಕೆ ಸಂಸ್ಥೆ ಎನ್.ಎಸ್.ಎ ನ ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡನ್ 2013ರಲ್ಲೇ 2000 ದಿಂದ ಬ್ರೆಜಿಲ್ ದೇಶ ಅತ್ಯಂತ ಬೇಹುಗಾರಿಕೆಗೆ ಒಳಪಟ್ಟಿರುವ ದೇಶ ಎಂದು ಬಹಿರಂಗಪಡಿಸಿದ್ದರು. ಅದಕ್ಕೆ ಕೆಲವು ಕಾರಣಗಳು ಇವೆ. ತನ್ನ ಸಾಮ್ರಾಜ್ಯಶಾಹಿ ಧೋರಣೆಯಿಂದ ದಕ್ಷಿಣ ಅಮೆರಿಕಾದ ದೇಶಗಳ ಸರ್ಕಾರಗಳನ್ನು ಕ್ಷಿಪ್ರ ಕ್ರಾಂತಿ, ರಾಜಕೀಯ ಹತ್ಯೆ, ನಾಯಕತ್ವ ಬದಲಾವಣೆ, ರಾಜಕೀಯ ಹಸ್ತಕ್ಷೇಪಗಳಿಂದ ತನ್ನಿಚ್ಛೆಗೆ ತಕ್ಕಂತೆ ಬದಲಿಸುತ್ತಾ ಕೆಲವೊಮ್ಮೆ ನೇರ ಮಿಲಿಟರೀ ಆಡಳಿತವನ್ನು ಅಮೆರಿಕವು ಹೇರುತ್ತಾ ಬಂದಿತ್ತು. 1964ರಲ್ಲಿ ಮಧ್ಯ ಎಡಕ್ಕೆ ಸೇರುವ ಸುಧಾರಣಾವಾದಿ ಬ್ರೆಜಿಲ್ ಲೇಬರ್ ಪಕ್ಷದ ಮಾರ್ಕುಎಸ್ ಗೌಲಾರ್ಟ್.ರನ್ನು ಕ್ಷಿಪ್ರ ಕ್ರಾಂತಿ ಮೂಲಕ ಕಿತ್ತು ಹಾಕಿ 1985ರ ವರೆಗೂ ಮಿಲಿಟರಿ ಸರ್ವಾಧಿಕಾರವನ್ನು ಸ್ಥಾಪಿಸಿದ್ದರು. ಇದರ ಹಿಂದೆ ಅಮೆರಿಕಾದ ಬೆಂಬಲಿತ ಸ್ಥಳೀಯ ಕೃಷಿ ವ್ಯವಹಾರದ ಭೂಮಾಲೀಕರು, ಬಹುರಾಷ್ಟಿçÃಯ ಕಂಪನಿಗಳು, ಇವ್ಯಾಂಜೆಲಿಕಲ್ ಕ್ರೈಸ್ತ ಲಾಬೀ ಇದ್ದದ್ಡೇ ಅಲ್ಲದೆ, ಅದರ ಪ್ರಭಾವ ಸಮಾಜದಲ್ಲಿ ಬೆಳೆಯುತ್ತಾ ಹೋಯಿತು. ಈ ನಡೆ ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಮುಂದೆ ಆದ ರಾಜಕೀಯ ಹತ್ಯೆಗಳು, ಎಡಪಂಥೀಯ ಸರ್ಕಾರಗಳ ವಿರುದ್ದ ಮಿಲಿಟರೀ ಕ್ಷಿಪ್ರ ಕ್ರಾಂತಿ, ನಾಯಕತ್ವ ಬದಲಾವಣೆಗಳಿಗೆ ಆಳುವ ವರ್ಗದ ನೀಲಿನಕ್ಷೆಯಾಯಿತು. ತಮ್ಮ ವಿರುದ್ದವಿದ್ದ ಪರಿಸರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಕಾರ್ಮಿಕ ಸಂಘಟನೆಗಳ ಮುಖಂಡರ ಅಪಹರಣಗಳು, ಚಿತ್ರಹಿಂಸೆ, ಜೈಲುವಾಸ ಮತ್ತು ಕೊಲೆಗಳು ನಡೆದವು. ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಇದರ ವಿರುದ್ಧ ಪ್ರತಿರೋಧದ ಅಲೆಯೆದ್ದು(ಗುಲಾಬಿ ಅಲೆ) ಬದಲಾವಣೆಯ ಗಾಳಿ ಬೀಸತೊಡಗಿತು. ದಕ್ಷಿಣ ಅಮೆರಿಕಾದಲ್ಲಿ ಒಂದರ ಮೇಲೆ ಒಂದು ದೇಶ ಪ್ರಗತಿಪರ, ಎಡಪಂಥೀಯ ಸರ್ಕಾರಗಳ ರಚನೆಯತ್ತ ಮುಖ ಮಾಡಿತ್ತು. ಜನರನ್ನು ಸಂಘಟಿಸಿ, ಸರ್ವಾಧಿಕಾರದ ಅನ್ಯಾಯಗಳ ವಿರುದ್ಧ ದ್ವನಿಯೆತ್ತಿ ಚಿತ್ರಹಿಂಸೆಗೆ ಒಳಪಟ್ಟಿದ್ದ ಕಾರ್ಮಿಕ ಪಕ್ಷದ ಸಹ ಸಂಸ್ಥಾಪಕ ಲೂಇಸ್ ಇನಾಸಿಯೋ ಲೂಲಾ ದ ಸಿಲ್ವ 2003ರಲ್ಲಿ ಅಧಿಕಾರ ಹಿಡಿದಿದ್ದರು. ಬ್ರೆಜಿಲ್‌ನಲ್ಲಿ ಜನಪ್ರಿಯವಾಗಿ “ಲೂಲಾ” ಎಂದು ಪ್ರಸಿದ್ದಿಯಾಗಿದ್ದ ಅವರು ತಮ್ಮ 10 ವರ್ಷದ ಅವಧಿಯಲ್ಲಿ ನಾನಾರೀತಿಯ ಜನ ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದರು. 3 ಕೋಟಿಗೂ ಹೆಚ್ಚು ಬ್ರೆಜಿಲ್ ಜನತೆಯನ್ನು ಬಡತನದಿಂದ ಮೇಲೆತ್ತಿದರು. ತಮ್ಮ ವಿಶೇಷ ಯೋಜನೆಗಳಾದ “ಬೊಳ್ಸಾ ಕುಟುಂಬ” ಪಿಂಚಣಿ ವ್ಯವಸ್ಥೆ ಮತ್ತು `ಫೊಮೆ ಝೀರೊ’ (ಶೂನ್ಯ ಹಸಿವು) ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿತ್ತು.
ಇದು ಬ್ರೆಜಿಲ್‌ನಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಸರಣಿ ಬರಹಗಳ ಎರಡನೇ ಭಾಗ.. ಮುಂದುವರೆಯುವುದು..

– ಭರತ್ ಹೆಬ್ಬಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...