Homeರಾಜಕೀಯಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

ಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

- Advertisement -
- Advertisement -

ಕೇಂದ್ರ ಸಚಿವ, ಕರ್ನಾಟಕದ ಭಾಜಪ ನಾಯಕ ಅನಂತಕುಮಾರ್ ಅವರು ಅಕಾಲಿಕ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ, ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬರುತ್ತಿದೆ. ಅಚ್ಚರಿ ಎಂದರೆ ಅವರ ಭಾಜಪ ಅಭಿಮಾನಿಗಳಷ್ಟೆÃ ಅವರ ತಾತ್ವಿಕ ವಿರೋಧಿಗಳೂ ನಮನ ಸಲ್ಲಿಸುತ್ತಿದ್ದಾರೆ. ಸಾವಿನ ಸಂದರ್ಭದಲ್ಲಿ ಕುಹಕದ ವಿಕೃತಿಗಳು ಇರಕೂಡದು ಎಂಬ ನಡವಳಿಕೆ ಎಲ್ಲಾ ನಾಗರಿಕತೆಗಳಲ್ಲೂ ಇದೆ. ನಮ್ಮಲ್ಲೂ ಅಳಿದಿಲ್ಲ ಎಂಬುದು ಗಮನಾರ್ಹ.
ಈ ಗೌರವ ಸಲ್ಲಿಕೆ ಅನಂತಕುಮಾರ್ ಅವರ ರಾಜಕೀಯ, ತಾತ್ವಿಕ ವಿರೋಧಿಗಳಿಂದ ಬಂದಿದೆ ಎಂಬುದು ಈ ಮಂದಿಯ ಸಾಂಸದಿಕ ನಡವಳಿಕೆಯನ್ನು ತೋರಿಸುತ್ತದೆ. ಹಲವರು ಗಮನಿಸಿದಂತೆ, ಇದೇ ಕಾಂಗ್ರೆಸ್‌ನ ಯಾರಾದರೂ ಸತ್ತಿದ್ದರೆ, ಭಾಜಪ/ ಹಿಂದುತ್ವ ಬಳಗದ ವಿಕೃತರ ಪೈಶಾಚಿಕ ಪೋಸ್ಟ್ಗಳು ಹೇಗಿರುತ್ತಿದ್ದವು ಎಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಈ ಸಂತಾಪ ತೋರಿದ ಭಾಜಪ ವಿರೋಧಿಗಳೇ ಈ ದೇಶದ ಪ್ರಜಾಸತ್ತೆಯನ್ನು ಉಳಿಸುವ ಶಕ್ತಿ.
ಅನಂತಕುಮಾರ್ ಅವರಿಗೆ ಈ ಶ್ರದ್ಧಾಂಜಲಿ ಹೇಗೆ ಹರಿದುಬಂತು? ಕಾಟಾಚಾರಕ್ಕೊÃ, ಹಿಂದುತ್ವದ ವಿಕೃತರ ಎದುರು, ‘ನಾವು ನೋಡಿ ಎಷ್ಟು ಶಿಷ್ಟವಾಗಿ ಪ್ರತಿಕ್ರಿಯಿಸುತ್ತಿದ್ದೆÃವೆ’ ಎಂಬ ತೋರುಗಾಣಿಕೆ ಈ ಪೋಸ್ಟುಗಳಲ್ಲಿ ಕಾಣಿಸಲಿಲ್ಲ. ಇದರರ್ಥ ಅನಂತಕುಮಾರ್ ವ್ಯಕ್ತಿತ್ವ ಯಾವುದೋ ಬಗೆಯಲ್ಲಿ ನಮ್ಮನ್ನು ತಟ್ಟಿದೆ.
ನಮ್ಮ ಸಾಮಾಜಿಕ ,ರಾಜಕೀಯ ಬದುಕಿನಲ್ಲಿ ದಿನಗಳೆದಂತೆ ಕೆಡುತ್ತಿದೆ, ಮೌಲ್ಯಗಳು ಶಿಥಿಲವಾಗುತ್ತಿದೆ ಎಂಬ ನಂಬಿಕೆ ದೃಢವಾಗುವಂಥಾ ಪುರಾವೆಗಳು ಹಿಡಿಯುತ್ತಲೇ ಇವೆ. ಇದನ್ನು ಠಿಡಿogಡಿessive ಆegeಟಿeಡಿಚಿಣioಟಿ ಅಂತ ಕರೆಯುವುದಿದೆ. ಅಂದರೆ ಒಂದು ನಾಗರಿಕತೆ ವಿಕಾಸಗೊಂಡು ಉತ್ತಮವಾಗುವ ಬದಲು ದಿನೇ ದಿನೇ ಇನ್ನಷ್ಟು ಕೆಡುತ್ತಾ, ಕೊಳೆಯುತ್ತಾ ಹೋಗುತ್ತಿದೆ ಎಂಬ ಹತಾಶೆ ಇದು. ಹಿಂದಿನ ಕಾಲ ಎಷ್ಟು ಚೆನ್ನಾಗಿತ್ತು ಎಂಬ ಹಿನ್ನೊÃಟದ ಹಳಹಳಿಕೆ ಎಲ್ಲಾ ತಲೆಮಾರಿಗೂ ಇದೆ. ಆದರೆ ಈ ದುಗುಡ ಅದಕ್ಕಿಂತ ಗುಣಾತ್ಮಕವಾಗಿ ಭಿನ್ನ. ಅಂದರೆ ಹಿಂದಿನದ್ದಕ್ಕಿಂತ ಈಗಿರುವುದು ಇನ್ನಷ್ಟು ಕೆಡುಕಾಗಿ ತೋರುವ ಬಗೆ. ಗುಂಡೂರಾವ್ ಬಂದಾಗ ಅರಸು ಬೆಟರ್ ಅನ್ನಿಸುತ್ತೆ. ಮೋದಿ ಕಂಡಾಗ ಇಂದಿರಾ ಕೊಡುಗೆ ಕಾಡುತ್ತದೆ. ಹೀಗೆ.. (ಸ್ವತಃ ಮೋದಿಯಂಥವರಿಗೆ ಈ ಚಾರಿತ್ರಿಕ ಗ್ರಹಿಕೆ ಅರ್ಥವಾಗುವುದಿಲ್ಲ, ಅದು ಬೇರೆ ಮಾತು.)
ನಾಗರಿಕತೆಯ ಮಾನದಂಡದಲ್ಲಿ ಹಿಂದಿನದ್ದು ಉತ್ತಮ ಎಂಬ ಗ್ರಹಿಕೆಗೆ ಇಂಬು ನೀಡುವಂಥಾ ನಡಾವಳಿಗಳು ಜರುಗಿದಷ್ಟೂ ಸಾಮೂಹಿಕ ಸ್ಮೃತಿಯಲ್ಲಿ ಇದು ಗಟ್ಟಿಯಾಗುತ್ತಾ ಹೋಗುತ್ತದೆ. ಈ ಮಾನದಂಡವನ್ನು ಪ್ರಜೆಗಳು ನಿರ್ವಚಿಸುವ ರೀತಿ ಸುಲಭ ಅಕಡೆಮಿಕ್ ಗ್ರಹಿಕೆಗೆ ನಿಲುಕುವಂಥಾದ್ದಲ್ಲ.
ಅನಂತಕುಮಾರ್ ಅವರ ಸಾವಿನ ಹಿನ್ನೆಲೆಯಲ್ಲಿ ಇದು ಪ್ರಸ್ತುತ. ಸ್ವತಃ ಅನಂತಕುಮಾರ್, ಅಧ್ವಾನಿಯವರು ಕಟ್ಟೆಯೊಡೆದು ಬಿಟ್ಟ ರೂಕ್ಷ ಕೋಮು ಧ್ರುವೀಕರಣದ ಕೂಸು. ಆದರೆ ಅನಂತಕುಮಾರ್ ಈ ಕೋಮು ಕಿರುಚಾಟದ ಭಾಗವಾಗಿರಲಿಲ್ಲ. ಅದರ ಸೂತ್ರಧಾರರಾಗಿದ್ದರು. ಹಲವರು ಗುರುತಿಸಿದಂತೆ ಅವರು ತೆರೆಮರೆಯ ಕೆಲಸಗಾರ. ‘90ರ ದಶಕದಲ್ಲಿ ನಿಷ್ಕರುಣ ಲೆಕ್ಕಾಚಾರದ ರಾಜಕಾರಣದ ಪ್ರತೀಕವಾಗಿ ಕಂಡಿದ್ದ ಅದ್ವಾನಿ ಮೋದಿ ಆಗಮನದ ಬಳಿಕ ಬಸವಳಿದ ಪಾಳೇಗಾರನ ತರ ಕಾಣುತ್ತಿದ್ದಾರೆ. ಅದ್ವಾನಿಯ ಸಂಸದೀಯ ನಡವಳಿಕೆ ಆಪ್ಯಾಯಮಾನವಾಗಿ ಕಾಣುತ್ತಿದೆ. ಅನಂತಕುಮಾರ ಕೂಡಾ ಅಷ್ಟೆÃ. ಬಾಯಿಗೆ ಬಂದ ಹಾಗೆ ಮಾತಾಡುವ, ಬೆಂಕಿ ಇಡುವ ಅಸಭ್ಯ ಮಾತೇ ನಾಯಕತ್ವದ ಲಕ್ಷಣ ಎಂಬಂತೆ ವರ್ತಿಸುವ ಹಿಂದುತ್ವದ ಪಡ್ಡೆ ಸ್ವಭಾವದೆದುರು, ಅನಂತಕುಮಾರ್ ತಾವು ರೂಢಿಸಿಕೊಂಡು ಬಂದಿದ್ದ ತಾಳ್ಮೆ, ಭಾಷೆಯ ಸಂಯಮ, ಸಂವಾದದ ಜಾಣ್ಮೆಯ ಕಾರಣಕ್ಕೆ ಈಗ ಹಿತವಾಗಿ ಕಾಣಿಸುತ್ತಿದ್ದಾರೆ. ನಮ್ಮ ಕಾಲದ ಪ್ರಭಾವ ಇದು. ನಾಲಗೆ ಅಷ್ಟಾಗಿ ಸಡಿಲು ಬಿಡದ ಅನಂತಕುಮಾರ್ ವಿವಾದಾತ್ಮಕ ವಿಷಯಗಳು ಬಂದಾಗ ಮೆತ್ತಗೆ ದೂರ ಉಳಿವ ಜಾಣ್ಮೆ ಉಳ್ಳವರು. ಮೈಕ್ ಕಂಡ ತಕ್ಷಣ ಬೆದೆಗೆ ಬಂದ ಹೋರಿಗಳ ತರ ಆಡುವ ಇತರರ ಎದುರು ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತದೆ.
ಇನ್ನು ಆಡಳಿತಾತ್ಮಕ ದಕ್ಷತೆ ಇತ್ಯಾದಿಗಳು ಹೀಗೆ ನೀಗಿಕೊಂಡಾಗ ಮುನ್ನೆಲೆಗೆ ಬರುವ ಸಂಗತಿ. ಮೋದಿ ಸರ್ಕಾರದ ದುಸ್ಥಿತಿ ಹೇಗಿದೆಯೆಂದರೆ ಬೆರಳೆಣಿಕೆಯ ಸಚಿವರು ಬಿಟ್ಟರೆ ಉಳಿದವರ ಹೆಸರೂ ಜನರಿಗೆ ಗೊತ್ತಿಲ್ಲ. ಈ ದೃಷ್ಟಿಯಲ್ಲಿ ಅನಂತ್ ಕುಮಾರ್ ಸುಮಾರಾಗಿ ಕೆಲಸ ನಿರ್ವಹಿಸಿದ್ದಾರೆ. ಅದಕ್ಕಿಂತಲೂ ಈಗ ಅವರ ಬಗ್ಗೆ ಸದಭಿಪ್ರಾಯ ಮೂಡಿರುವುದು ದೆಹಲಿಯ ಚಕ್ರವ್ಯೂಹದಲ್ಲಿ ಕನ್ನಡ/ ಕರ್ನಾಟಕದ ಕೆಲಸಗಳ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಸ್ಪಂದಿಸಿದ ಬಗ್ಗೆ. ಹಲವಾರು ಹೆಸರಾಂತ ವ್ಯಕ್ತಿಗಳ ಜೊತೆ ಅನಾಮಿಕರೂ ತಮಗೆ ಅನಂತಕುಮಾರ್ ಸ್ಪಂದಿಸಿದ ಬಗ್ಗೆ ಬರೆದಿದ್ದಾರೆ. ಈ ಗುಡ್‌ವಿಲ್ ರಾಜಕಾರಣಿಗೆ ಆಪತ್ಕಾಲದ ಗಂಟು. ಮುಖ್ಯತಃ ಪಕ್ಷ/ ಸೈದ್ಧಾಂತಿಕ ವಿರೋಧಿಗಳ ಜೊತೆಯೂ ಒಂದು ಕಿಂಡಿ ಸದಾ ತೆರೆÀದಿಟ್ಟುಕೊಂಡ ವ್ಯಕ್ತಿ ಅನಂತಕುಮಾರ್.
“ಬರಡು ಬಯಲಲ್ಲಿ ತುಂಬೆ ಗಿಡವೂ ಮರವೇ..” ಎಂಬ ಮಾತಿದೆ. ಹಿಂದುತ್ವದ ಅಮಾನುಷ ವಿಕೃತಿಯ ಪ್ರೆÃತಕುಣಿತದ ನಡುವೆ ಸೌಜನ್ಯದ ಸಂವಾದದ ಕಲೆ ರೂಢಿಸಿಕೊಂಡಿದ್ದ ಅನಂತಕುಮಾರ್ ಹೊಂಗೆ ಮರದ ಹಾಗೆ ಕಂಡಿದ್ದು ಅಚ್ಚರಿ ಅಲ್ಲ. ದೊಡ್ಡ ನಾಯಕನ ವಿಶಿಷ್ಟ ಗುಣ ಅವರಲ್ಲಿ ಕಾಣಿಸಲಿಲ್ಲ. ದಿವಾನರ ಶೈಲಿಯ ಪ್ರಭಾವಿ ಗುಣವಷ್ಟೆÃ ಅವರಲ್ಲಿದ್ದದ್ದು. ಯುವಜನರಿಗೆ ಸ್ಪಂದಿಸುವ ಸುವರ್ಣಾವಕಾಶ ತಟ್ಟೆಯಲ್ಲಿಟ್ಟು ಕೊಟ್ಟಾಗಲೂ ಕೆಡವಿ ಕೂತ ಅನಂತಕುಮಾರ ಹೆಗ್ಡೆಯಂಥಾ ಅಪ್ರಬುದ್ಧರನ್ನು ಕಂಡಾಗ ಈ ಸೀನಿಯರ್ ಅನಂತಕುಮಾರ್ ಗಮನ ಸೆಳೆಯುತ್ತಾರೆ!!! ಪುಣ್ಯಕ್ಕೆ ಅವರು ಅಧ್ವಾನಿ, ಯೆಡಿಯೂರಪ್ಪನವರ ತರ ನಿಸ್ತೆÃಜಗೊಂಡು ನಿರ್ಗಮನದ ಸಿದ್ಧತೆಯಲ್ಲಿರುವ ನಾಯಕನ ತರ ಕಾಣಿಸಲಿಲ್ಲ. ಉತ್ತುಂಗದಲ್ಲಿ ನಿರ್ಗಮಿಸಬೇಕು ಎನ್ನುವ ಆಸೆ ಮನುಷ್ಯನಿಗಿರುತ್ತದೆ. ಆದರೆ ಅದು ಕೈಗೂಡುವುದು ಕಡಿಮೆ. ಈ ಕಾಲದಲ್ಲಿ ಹರಿ ಚಿತ್ತವೆಂಬುದು ಪ್ರಜಾ ಚಿತ್ತ. ಆದರೆ ಅನಂತಕುಮಾರ್ ವಿಷಯದಲ್ಲಿ ವಿಧಿ ಕೊಂಚ ಕ್ರೂರವಾಯಿತು.

  • ಕೆ.ಪಿ.ಸುರೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...