Homeರಾಜಕೀಯಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

ಅನಂತಕುಮಾರ್ ಏಕೆ ಎಲ್ಲರ ಶ್ರದ್ಧಾಂಜಲಿ ಪಡೆದರು?

- Advertisement -
- Advertisement -

ಕೇಂದ್ರ ಸಚಿವ, ಕರ್ನಾಟಕದ ಭಾಜಪ ನಾಯಕ ಅನಂತಕುಮಾರ್ ಅವರು ಅಕಾಲಿಕ ನಿಧನ ಹೊಂದಿದ್ದಾರೆ. ಅವರ ಸಾವಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ, ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬರುತ್ತಿದೆ. ಅಚ್ಚರಿ ಎಂದರೆ ಅವರ ಭಾಜಪ ಅಭಿಮಾನಿಗಳಷ್ಟೆÃ ಅವರ ತಾತ್ವಿಕ ವಿರೋಧಿಗಳೂ ನಮನ ಸಲ್ಲಿಸುತ್ತಿದ್ದಾರೆ. ಸಾವಿನ ಸಂದರ್ಭದಲ್ಲಿ ಕುಹಕದ ವಿಕೃತಿಗಳು ಇರಕೂಡದು ಎಂಬ ನಡವಳಿಕೆ ಎಲ್ಲಾ ನಾಗರಿಕತೆಗಳಲ್ಲೂ ಇದೆ. ನಮ್ಮಲ್ಲೂ ಅಳಿದಿಲ್ಲ ಎಂಬುದು ಗಮನಾರ್ಹ.
ಈ ಗೌರವ ಸಲ್ಲಿಕೆ ಅನಂತಕುಮಾರ್ ಅವರ ರಾಜಕೀಯ, ತಾತ್ವಿಕ ವಿರೋಧಿಗಳಿಂದ ಬಂದಿದೆ ಎಂಬುದು ಈ ಮಂದಿಯ ಸಾಂಸದಿಕ ನಡವಳಿಕೆಯನ್ನು ತೋರಿಸುತ್ತದೆ. ಹಲವರು ಗಮನಿಸಿದಂತೆ, ಇದೇ ಕಾಂಗ್ರೆಸ್‌ನ ಯಾರಾದರೂ ಸತ್ತಿದ್ದರೆ, ಭಾಜಪ/ ಹಿಂದುತ್ವ ಬಳಗದ ವಿಕೃತರ ಪೈಶಾಚಿಕ ಪೋಸ್ಟ್ಗಳು ಹೇಗಿರುತ್ತಿದ್ದವು ಎಂದು ಊಹಿಸಲೂ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಈ ಸಂತಾಪ ತೋರಿದ ಭಾಜಪ ವಿರೋಧಿಗಳೇ ಈ ದೇಶದ ಪ್ರಜಾಸತ್ತೆಯನ್ನು ಉಳಿಸುವ ಶಕ್ತಿ.
ಅನಂತಕುಮಾರ್ ಅವರಿಗೆ ಈ ಶ್ರದ್ಧಾಂಜಲಿ ಹೇಗೆ ಹರಿದುಬಂತು? ಕಾಟಾಚಾರಕ್ಕೊÃ, ಹಿಂದುತ್ವದ ವಿಕೃತರ ಎದುರು, ‘ನಾವು ನೋಡಿ ಎಷ್ಟು ಶಿಷ್ಟವಾಗಿ ಪ್ರತಿಕ್ರಿಯಿಸುತ್ತಿದ್ದೆÃವೆ’ ಎಂಬ ತೋರುಗಾಣಿಕೆ ಈ ಪೋಸ್ಟುಗಳಲ್ಲಿ ಕಾಣಿಸಲಿಲ್ಲ. ಇದರರ್ಥ ಅನಂತಕುಮಾರ್ ವ್ಯಕ್ತಿತ್ವ ಯಾವುದೋ ಬಗೆಯಲ್ಲಿ ನಮ್ಮನ್ನು ತಟ್ಟಿದೆ.
ನಮ್ಮ ಸಾಮಾಜಿಕ ,ರಾಜಕೀಯ ಬದುಕಿನಲ್ಲಿ ದಿನಗಳೆದಂತೆ ಕೆಡುತ್ತಿದೆ, ಮೌಲ್ಯಗಳು ಶಿಥಿಲವಾಗುತ್ತಿದೆ ಎಂಬ ನಂಬಿಕೆ ದೃಢವಾಗುವಂಥಾ ಪುರಾವೆಗಳು ಹಿಡಿಯುತ್ತಲೇ ಇವೆ. ಇದನ್ನು ಠಿಡಿogಡಿessive ಆegeಟಿeಡಿಚಿಣioಟಿ ಅಂತ ಕರೆಯುವುದಿದೆ. ಅಂದರೆ ಒಂದು ನಾಗರಿಕತೆ ವಿಕಾಸಗೊಂಡು ಉತ್ತಮವಾಗುವ ಬದಲು ದಿನೇ ದಿನೇ ಇನ್ನಷ್ಟು ಕೆಡುತ್ತಾ, ಕೊಳೆಯುತ್ತಾ ಹೋಗುತ್ತಿದೆ ಎಂಬ ಹತಾಶೆ ಇದು. ಹಿಂದಿನ ಕಾಲ ಎಷ್ಟು ಚೆನ್ನಾಗಿತ್ತು ಎಂಬ ಹಿನ್ನೊÃಟದ ಹಳಹಳಿಕೆ ಎಲ್ಲಾ ತಲೆಮಾರಿಗೂ ಇದೆ. ಆದರೆ ಈ ದುಗುಡ ಅದಕ್ಕಿಂತ ಗುಣಾತ್ಮಕವಾಗಿ ಭಿನ್ನ. ಅಂದರೆ ಹಿಂದಿನದ್ದಕ್ಕಿಂತ ಈಗಿರುವುದು ಇನ್ನಷ್ಟು ಕೆಡುಕಾಗಿ ತೋರುವ ಬಗೆ. ಗುಂಡೂರಾವ್ ಬಂದಾಗ ಅರಸು ಬೆಟರ್ ಅನ್ನಿಸುತ್ತೆ. ಮೋದಿ ಕಂಡಾಗ ಇಂದಿರಾ ಕೊಡುಗೆ ಕಾಡುತ್ತದೆ. ಹೀಗೆ.. (ಸ್ವತಃ ಮೋದಿಯಂಥವರಿಗೆ ಈ ಚಾರಿತ್ರಿಕ ಗ್ರಹಿಕೆ ಅರ್ಥವಾಗುವುದಿಲ್ಲ, ಅದು ಬೇರೆ ಮಾತು.)
ನಾಗರಿಕತೆಯ ಮಾನದಂಡದಲ್ಲಿ ಹಿಂದಿನದ್ದು ಉತ್ತಮ ಎಂಬ ಗ್ರಹಿಕೆಗೆ ಇಂಬು ನೀಡುವಂಥಾ ನಡಾವಳಿಗಳು ಜರುಗಿದಷ್ಟೂ ಸಾಮೂಹಿಕ ಸ್ಮೃತಿಯಲ್ಲಿ ಇದು ಗಟ್ಟಿಯಾಗುತ್ತಾ ಹೋಗುತ್ತದೆ. ಈ ಮಾನದಂಡವನ್ನು ಪ್ರಜೆಗಳು ನಿರ್ವಚಿಸುವ ರೀತಿ ಸುಲಭ ಅಕಡೆಮಿಕ್ ಗ್ರಹಿಕೆಗೆ ನಿಲುಕುವಂಥಾದ್ದಲ್ಲ.
ಅನಂತಕುಮಾರ್ ಅವರ ಸಾವಿನ ಹಿನ್ನೆಲೆಯಲ್ಲಿ ಇದು ಪ್ರಸ್ತುತ. ಸ್ವತಃ ಅನಂತಕುಮಾರ್, ಅಧ್ವಾನಿಯವರು ಕಟ್ಟೆಯೊಡೆದು ಬಿಟ್ಟ ರೂಕ್ಷ ಕೋಮು ಧ್ರುವೀಕರಣದ ಕೂಸು. ಆದರೆ ಅನಂತಕುಮಾರ್ ಈ ಕೋಮು ಕಿರುಚಾಟದ ಭಾಗವಾಗಿರಲಿಲ್ಲ. ಅದರ ಸೂತ್ರಧಾರರಾಗಿದ್ದರು. ಹಲವರು ಗುರುತಿಸಿದಂತೆ ಅವರು ತೆರೆಮರೆಯ ಕೆಲಸಗಾರ. ‘90ರ ದಶಕದಲ್ಲಿ ನಿಷ್ಕರುಣ ಲೆಕ್ಕಾಚಾರದ ರಾಜಕಾರಣದ ಪ್ರತೀಕವಾಗಿ ಕಂಡಿದ್ದ ಅದ್ವಾನಿ ಮೋದಿ ಆಗಮನದ ಬಳಿಕ ಬಸವಳಿದ ಪಾಳೇಗಾರನ ತರ ಕಾಣುತ್ತಿದ್ದಾರೆ. ಅದ್ವಾನಿಯ ಸಂಸದೀಯ ನಡವಳಿಕೆ ಆಪ್ಯಾಯಮಾನವಾಗಿ ಕಾಣುತ್ತಿದೆ. ಅನಂತಕುಮಾರ ಕೂಡಾ ಅಷ್ಟೆÃ. ಬಾಯಿಗೆ ಬಂದ ಹಾಗೆ ಮಾತಾಡುವ, ಬೆಂಕಿ ಇಡುವ ಅಸಭ್ಯ ಮಾತೇ ನಾಯಕತ್ವದ ಲಕ್ಷಣ ಎಂಬಂತೆ ವರ್ತಿಸುವ ಹಿಂದುತ್ವದ ಪಡ್ಡೆ ಸ್ವಭಾವದೆದುರು, ಅನಂತಕುಮಾರ್ ತಾವು ರೂಢಿಸಿಕೊಂಡು ಬಂದಿದ್ದ ತಾಳ್ಮೆ, ಭಾಷೆಯ ಸಂಯಮ, ಸಂವಾದದ ಜಾಣ್ಮೆಯ ಕಾರಣಕ್ಕೆ ಈಗ ಹಿತವಾಗಿ ಕಾಣಿಸುತ್ತಿದ್ದಾರೆ. ನಮ್ಮ ಕಾಲದ ಪ್ರಭಾವ ಇದು. ನಾಲಗೆ ಅಷ್ಟಾಗಿ ಸಡಿಲು ಬಿಡದ ಅನಂತಕುಮಾರ್ ವಿವಾದಾತ್ಮಕ ವಿಷಯಗಳು ಬಂದಾಗ ಮೆತ್ತಗೆ ದೂರ ಉಳಿವ ಜಾಣ್ಮೆ ಉಳ್ಳವರು. ಮೈಕ್ ಕಂಡ ತಕ್ಷಣ ಬೆದೆಗೆ ಬಂದ ಹೋರಿಗಳ ತರ ಆಡುವ ಇತರರ ಎದುರು ಅನಂತಕುಮಾರ್ ಪರವಾಗಿಲ್ಲ ಅನ್ನಿಸುತ್ತದೆ.
ಇನ್ನು ಆಡಳಿತಾತ್ಮಕ ದಕ್ಷತೆ ಇತ್ಯಾದಿಗಳು ಹೀಗೆ ನೀಗಿಕೊಂಡಾಗ ಮುನ್ನೆಲೆಗೆ ಬರುವ ಸಂಗತಿ. ಮೋದಿ ಸರ್ಕಾರದ ದುಸ್ಥಿತಿ ಹೇಗಿದೆಯೆಂದರೆ ಬೆರಳೆಣಿಕೆಯ ಸಚಿವರು ಬಿಟ್ಟರೆ ಉಳಿದವರ ಹೆಸರೂ ಜನರಿಗೆ ಗೊತ್ತಿಲ್ಲ. ಈ ದೃಷ್ಟಿಯಲ್ಲಿ ಅನಂತ್ ಕುಮಾರ್ ಸುಮಾರಾಗಿ ಕೆಲಸ ನಿರ್ವಹಿಸಿದ್ದಾರೆ. ಅದಕ್ಕಿಂತಲೂ ಈಗ ಅವರ ಬಗ್ಗೆ ಸದಭಿಪ್ರಾಯ ಮೂಡಿರುವುದು ದೆಹಲಿಯ ಚಕ್ರವ್ಯೂಹದಲ್ಲಿ ಕನ್ನಡ/ ಕರ್ನಾಟಕದ ಕೆಲಸಗಳ ಬಗ್ಗೆ ವೈಯಕ್ತಿಕ ನೆಲೆಯಲ್ಲಿ ಸ್ಪಂದಿಸಿದ ಬಗ್ಗೆ. ಹಲವಾರು ಹೆಸರಾಂತ ವ್ಯಕ್ತಿಗಳ ಜೊತೆ ಅನಾಮಿಕರೂ ತಮಗೆ ಅನಂತಕುಮಾರ್ ಸ್ಪಂದಿಸಿದ ಬಗ್ಗೆ ಬರೆದಿದ್ದಾರೆ. ಈ ಗುಡ್‌ವಿಲ್ ರಾಜಕಾರಣಿಗೆ ಆಪತ್ಕಾಲದ ಗಂಟು. ಮುಖ್ಯತಃ ಪಕ್ಷ/ ಸೈದ್ಧಾಂತಿಕ ವಿರೋಧಿಗಳ ಜೊತೆಯೂ ಒಂದು ಕಿಂಡಿ ಸದಾ ತೆರೆÀದಿಟ್ಟುಕೊಂಡ ವ್ಯಕ್ತಿ ಅನಂತಕುಮಾರ್.
“ಬರಡು ಬಯಲಲ್ಲಿ ತುಂಬೆ ಗಿಡವೂ ಮರವೇ..” ಎಂಬ ಮಾತಿದೆ. ಹಿಂದುತ್ವದ ಅಮಾನುಷ ವಿಕೃತಿಯ ಪ್ರೆÃತಕುಣಿತದ ನಡುವೆ ಸೌಜನ್ಯದ ಸಂವಾದದ ಕಲೆ ರೂಢಿಸಿಕೊಂಡಿದ್ದ ಅನಂತಕುಮಾರ್ ಹೊಂಗೆ ಮರದ ಹಾಗೆ ಕಂಡಿದ್ದು ಅಚ್ಚರಿ ಅಲ್ಲ. ದೊಡ್ಡ ನಾಯಕನ ವಿಶಿಷ್ಟ ಗುಣ ಅವರಲ್ಲಿ ಕಾಣಿಸಲಿಲ್ಲ. ದಿವಾನರ ಶೈಲಿಯ ಪ್ರಭಾವಿ ಗುಣವಷ್ಟೆÃ ಅವರಲ್ಲಿದ್ದದ್ದು. ಯುವಜನರಿಗೆ ಸ್ಪಂದಿಸುವ ಸುವರ್ಣಾವಕಾಶ ತಟ್ಟೆಯಲ್ಲಿಟ್ಟು ಕೊಟ್ಟಾಗಲೂ ಕೆಡವಿ ಕೂತ ಅನಂತಕುಮಾರ ಹೆಗ್ಡೆಯಂಥಾ ಅಪ್ರಬುದ್ಧರನ್ನು ಕಂಡಾಗ ಈ ಸೀನಿಯರ್ ಅನಂತಕುಮಾರ್ ಗಮನ ಸೆಳೆಯುತ್ತಾರೆ!!! ಪುಣ್ಯಕ್ಕೆ ಅವರು ಅಧ್ವಾನಿ, ಯೆಡಿಯೂರಪ್ಪನವರ ತರ ನಿಸ್ತೆÃಜಗೊಂಡು ನಿರ್ಗಮನದ ಸಿದ್ಧತೆಯಲ್ಲಿರುವ ನಾಯಕನ ತರ ಕಾಣಿಸಲಿಲ್ಲ. ಉತ್ತುಂಗದಲ್ಲಿ ನಿರ್ಗಮಿಸಬೇಕು ಎನ್ನುವ ಆಸೆ ಮನುಷ್ಯನಿಗಿರುತ್ತದೆ. ಆದರೆ ಅದು ಕೈಗೂಡುವುದು ಕಡಿಮೆ. ಈ ಕಾಲದಲ್ಲಿ ಹರಿ ಚಿತ್ತವೆಂಬುದು ಪ್ರಜಾ ಚಿತ್ತ. ಆದರೆ ಅನಂತಕುಮಾರ್ ವಿಷಯದಲ್ಲಿ ವಿಧಿ ಕೊಂಚ ಕ್ರೂರವಾಯಿತು.

  • ಕೆ.ಪಿ.ಸುರೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...