Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

ಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

- Advertisement -
- Advertisement -

ಸಾರ್ವಜನಿಕ ಉತ್ಪಾದನೆ ಮತ್ತು ಸೇವಾಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವುದರಿಂದ ಮಾತ್ರ ದೇಶದಲ್ಲಿ ಶೀಘ್ರಗತಿಯ ಅಭಿವೃದ್ಧಿಯನ್ನು ತರಬಹುದೆಂಬ ನವಉದಾರೀಕರಣದ ನೀತಿ ಜಾರಿಗೆ ಬಂದಾಗಿನಿಂದಲೂ ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ಹಳಿತಪ್ಪುತ್ತಾ ಬಂದಿದೆ. ಈ ನೀತಿಯ ಭಾಗವಾಗಿ ಶಿಕ್ಷಣ ಕ್ಷೇತ್ರವನ್ನು ಮೆರಿಟ್ ಮತ್ತು ನಾನ್ ಮೆರಿಟ್ ಎಂಬ ಎರಡು ಭಾಗವನ್ನಾಗಿ ವಿಂಗಡಿಸಲಾಯಿತು. ಇದರ ಪ್ರಕಾರ ನಾನ್‌ಮೆರಿಟ್ ಗುಂಪಿನಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಖಾಸಗೀಕರಣವನ್ನು ತರುವ ಪ್ರಯತ್ನ ಮೊದಲಾಯಿತು. ಉನ್ನತ ಶಿಕ್ಷಣವನ್ನೂ ನಾನ್‌ಮೆರಿಟ್ ಕ್ಷೇತ್ರಕ್ಕೆ ಸೇರಿಸಿದ್ದರಿಂದ ಆರ್ಥಿಕ ಅನುದಾನವನ್ನು ಹಂತಹಂತವಾಗಿ ಕಡಿತಗೊಳಿಸಿಕೊಂಡು ಬರಲಾಯಿತು. ಇದರಿಂದ ಖಾಸಗೀ ಉದ್ಯಮಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸಾಧ್ಯವಾಗುತ್ತದೆ ಎನ್ನುವ ವಾದವನ್ನು ಮುಂದೊಡ್ಡಲಾಯಿತು. ಇದರ ನೇರ ಪರಿಣಾಮ ಎಂದರೆ ಶಿಕ್ಷಣ ಒಂದು ಸರಕಾಗಿ ಮಾರ್ಪಟ್ಟು, ವಿದ್ಯಾರ್ಥಿಗಳು ಗ್ರಾಹಕರಾಗಿ ಬದಲಾದರು. ಇಲ್ಲಿ ಜ್ಞಾನ ಎಂದರೆ ಕೌಶಲ್ಯ, ಮಾಹಿತಿ ಸಂಗ್ರಹಣೆ ಮತ್ತು ಸಂಸ್ಕರಣೆ ಮಾತ್ರ ಎಂದಾಯಿತು. ಹೊಸ ಖಾಸಗೀ ವಿವಿಗಳು ವಿಜೃಂಭಿಸತೊಡಗಿ ಒಂದು ಕಾಲಕ್ಕೆ ಹೆಸರು ಪಡೆದಿದ್ದ ಸರ್ಕಾರಿ ವಿವಿಗಳು ತಮ್ಮ ಘನತೆ ಮತ್ತು ಆಕರ್ಷಣೆಯನ್ನು ಕಳೆದು ಕೊಂಡವು. ಕಾಲೇಜು ಮತ್ತು ವಿವಿಗಳಲ್ಲಿ ಕೆಲಸ ಮಾಡುವವರಲ್ಲಿ ಅರೆಕಾಲಿಕ ಅಥವಾ ತಾತ್ಕಾಲಿಕ ಹುದ್ದೆಗಳಲ್ಲಿರುವವರ ಸಂಖ್ಯೆ ಹೆಚ್ಚಾಯಿತು. ಹೆಚ್ಚಿನ ಸಂಬಳ ಸಿಗದ ಕಾರಣ ಪ್ರತಿಭಾವಂತರು ಶಿಕ್ಷಣ ಕ್ಷೇತ್ರದಿಂದ ವಿಮುಖರಾದರು.

ಜ್ಞಾನದ ಹಸಿವು, ಬೆಳವಣಿಗೆ, ಹೊಸಜ್ಞಾನ ಶಾಖೆಗಳ ಆವಿಷ್ಕಾರ ಎಲ್ಲವೂ ಕುಸಿಯುತ್ತಾ ಹೋಯಿತು. ಉನ್ನತ ಶಿಕ್ಷಣದ ಬಗ್ಗೆ ಮಹತ್ವದ ಧ್ಯೇಯಗಳನ್ನು ರೂಪಿಸಿದ್ದ ರಾಧಾಕೃಷ್ಣನ್, ಕೊಠಾರಿ ಇತ್ಯಾದಿ ಕಮಿಷನ್‌ಗಳ ವರದಿಯನ್ನು ಕಾರ್ಪೊರೇಟ್ ಬಂಡವಾಳಶಾಹಿಗೆ ಒಪ್ಪಿಸಲಾಗಿದೆ. ರಾಧಾಕೃಷ್ಣನ್, ಕೊಠಾರಿಗಳ ಬದಲು, ಅಂಬಾನಿ, ಬಿರ್ಲಾ ಮತ್ತು ನಾರಾಯಣಮೂರ್ತಿಗಳು ಉನ್ನತ ಶಿಕ್ಷಣದ ಯೋಜನಾ ಆಯೋಗದಲ್ಲಿ ಪ್ರವೇಶ ಪಡೆದಿದ್ದಾರೆ. ಲಾಭದಾಯಕವಾದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದರೂ, ಈಗ ಅದೇ ಮೇಲುಗೈ ಸಾಧಿಸಿದೆ. ಸಧ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀ ಸಂಸ್ಥೆಗಳ ಪಾಲು ಶೇ.59ರಷ್ಟಾಗಿದೆ.

ಇವೆಲ್ಲಾ ಬೆಳವಣಿಗೆಗಳ ಹಿಂದೆ ಉನ್ನತ ಶಿಕ್ಷಣ ಸಾರ್ವಜನಿಕ ಸೇವೆ ಅಲ್ಲ ಎನ್ನುವ ತತ್ವ ಅಡಗಿದೆ. ಇದರರ್ಥ ಈಗ ಅದೊಂದು ಮೌಲ್ಯಾಧಾರಿತ ಸರಕು. ಅಂದರೆ, ಅದನ್ನು ಬಳಸುವವರು ಅದಕ್ಕೆ ತಕ್ಕನಾದ ಶುಲ್ಕ ನಿಡಿ ಅದನ್ನು ಉಪಯೋಗಿಸಬೇಕು. ಉನ್ನತ ಶಿಕ್ಷಣಕ್ಕೆ ನಾಲ್ಕು ಮೂಲಭೂತ ಲಕ್ಷಣಗಳು ಇರ

ಬೇಕು. ಇಂದು, ಹೊಸ ಜ್ಞಾನದ ಅನ್ವೇಷಣೆ. ಎರಡು, ಅದಕ್ಕೆ ಬೇಕಾದ ತರಗತಿ, ಮೂರು, ಸಾಮಾಜಿಕ ಸೇವೆಗಳಿಗೆ ಶಿಕ್ಷಣವನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ವಿವೇಕ; ನಾಲ್ಕು, ವಿಮರ್ಶಾತ್ಮಕ ಧೋರಣೆಯನ್ನು ಬೆಳೆಸುವುದು. ಇದರಲ್ಲಿ ಕಡೆಯದು ಅತ್ಯಂತ ಪ್ರಮುಖವಾದ ಸಾಮಾಜಿಕ ನೈತಿಕತೆಯನ್ನು ಬೆಳೆಸುವುದೂ ಸೇರಿದೆ.
ಆದರೆ ಉನ್ನತ ಶಿಕ್ಷಣವನ್ನು ಒಂದು

 ವ್ಯಾಪಾರವನ್ನಾಗಿಸಿದಾಗ ಈ ನಾಲ್ಕು ಅಂಶಗಳೂ ಮರೆಯಾಗುತ್ತವೆ. ಜ್ಞಾನದ ಅನ್ವೇಷಣೆ ಅಂದರೆ ಇಲ್ಲಿ ಹೊಸ ಬಂಡವಾಳವನ್ನು ಸ್ಥಾಪಿಸಲು ಅಥವಾ ಇರುವ ಹುಡಿಕೆಯನ್ನು ವೃದ್ಧಿಸಲು ಬೇಕಾದ ಕೌಶಲ್ಯವಾಗಿಬಿಡುತ್ತದೆ. ತರಬೇತಿ ಎಂದರೆ, ಕೌಶಲ್ಯ ಪಾಠ ಮಾಡುವ, ಕಲಿಯುವ ತಂತ್ರಜ್ಞಾನಕ್ಕೆ ಸೀಮಿತವಾಗುತ್ತದೆ. ಸಾಮಾಜಿಕ ಸೇವೆಗಳ ಬದಲು ಹೊಸ ಸರಕನ್ನು ಸೃಷ್ಟಿಸುವುದೇ ಮುಖ್ಯವಾಗುತ್ತದೆ. ವಿಮರ್ಶಾತ್ಮಕ ಧೋರಣೆ ಬೆಳೆಸುವುದಂತೂ ನವ ಶಿಕ್ಷಣ ನೀತಿಯಲ್ಲಿ ಸಂಪೂರ್ಣ ನಿಷೇಧಕ್ಕೆ ಒಳಪಡುತ್ತದೆ.

ಇತ್ತೀಚೆಗೆ ಯುಜಿಸಿ ಹೊರಡಿಸಿರುವ ಸುತ್ತೋಲೆ ಪ್ರಕಾರ ಇನ್ನು ಮುಂದೆ ವಿವಿ ಅಧ್ಯಾಪಕರು ಸರ್ಕಾರದ ನೀತಿಗಳನ್ನು ಕುರಿತು ವಿಮರ್ಶೆ ಮಾಡುವಂತಿಲ್ಲ. ಇದರಿಂದ ಈಗಾಗಲೇ ಸೊಂಟ ಬಗ್ಗಿರುವ ಅಧ್ಯಾಪಕರು ಇನ್ನು ಮುಂದೆ ತೆವಳುವಂತಾಗುತ್ತದೆ. ಈ ನೀತಿ ಕೇವಲ ಅಧ್ಯಾಪಕರ ಧ್ವನಿಯನ್ನು ದಮನಮಾಡುವುದಿಲ್ಲ; ವಿದ್ಯಾರ್ಥಿಗಳ ಯೋಜನಾ ಶಕ್ತಿಯನ್ನೇ ಕುಂಠಿಸುತ್ತದೆ.

ಇದಕ್ಕಿಂತಲೂ ದೊಡ್ಡ ಹೊಡೆತವೆಂದರೆ, ಈ ಖಾಸಗೀಕರಣ ಉಳ್ಳವರಿಗಾಗಿ ಮಾತ್ರ ತೆರೆದುಕೊಳ್ಳುವುದರಿಂದ ದೇಶದ ಬಹುತೇಕ ಯುವಜನತೆ ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಾರೆ ಅಥವಾ ಕಳಪೆ ಕಾಲೇಜು/ವಿವಿಗಳಲ್ಲಿ ಮಾತ್ರ ಕಲಿಯುವಂತಾಗುತ್ತದೆ. ಕಾಲೇಜು/ವಿವಿಗಳ ಸ್ವಾಯತ್ತತೆ ಮೇಲೆ ಈಗ ವಿಶೇಷ ಗಮನ ನೀಡಲಾಗುತ್ತಿದೆ. ಅದನ್ನು ಬಯಸದೇ ಇದ್ದ ಸಂಸ್ಥೆಗಳ ಮೇಲೂ ಸ್ವಾಯತ್ತತೆಯನ್ನು ಹೇರಲಾಗುತ್ತಿದೆ. ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ತಮಗಿಷ್ಟ ಬಂದ ಶಿಕ್ಷಣ ಕ್ರಮ, ಸೇವಾ ನಿಯಮ, ಶುಲ್ಕ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬಹುದಾದ್ದರಿಂದ ಶಿಕ್ಷಣದ ಮೂಲ ಧ್ಯೇಯಗಳಲ್ಲಿ ಒಂದಾದ ಒಳಗೊಳ್ಳುವಿಕೆಗೆ ಧಕ್ಕೆ ಬರುತ್ತದೆ.

ಇವೆಲ್ಲಕ್ಕೂ ಬರೆ ಇಟ್ಟಂತೆ ಇದೇ ವರ್ಷದ ಜೂನ್ 27ರಂದು ಯುಜಿಸಿಯನ್ನು ವಿಸರ್ಜಿಸಿ ಅದರ ಜಾಗದಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು ಸ್ಥಾಪಿಸುವ ಹೊಸ ಮಸೂದೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಇದರಿಂದ ಉನ್ನತ ಶಿಕ್ಷಣ ಮತ್ತಷ್ಟು ಬಲಗೊಂಡು ಹೆಚ್ಚಿನ ಸ್ವಾಯತ್ತತೆಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಆದರೆ ಒಂದು ಕಡೆ ಸ್ವಾಯತ್ತತೆಯ ಮಾತನ್ನಾಡುತ್ತಲೇ ಇನ್ನೊಂದು ಕಡೆ ಇಡೀ ಉನ್ನತ ಶಿಕ್ಷಣವನ್ನು ಒಂದು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ ಇದು. ಇದರಲ್ಲಿ ರಾಜ್ಯದ ವಿವಿಗಳು ಮಾತ್ರ ಕಾಲೇಜು ಆಡಳಿತ ಮಂಡಳಿಗಳಿಗೆ ಯಾವ ಅಧಿಕಾರವೂ ಇರುವುದಿಲ್ಲ. ಇಲ್ಲಿಯವರೆಗೆ ಆಡಳಿತ ಮಾತ್ರ ಹಣಕಾಸಿನ ನಿರ್ವಹಣೆ-ಇವೆರಡನ್ನು ಯುಜಿಸಿ ನೋಡಿಕೊಳ್ಳುತ್ತಿತ್ತು. ಈಗ ಅದನ್ನು ಬೇರ್ಪಡಿಸಲಾಗಿದೆ. ಹಣಕಾಸಿನ ನಿರ್ವಹಣೆ ಇನ್ನುಮುಂದೆ ನೇರವಾಗಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ನೋಡಿಕೊಳ್ಳುತ್ತದೆ. ಅರ್ಥಾತ್ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನೇರವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ಇದು ಶಿಕ್ಷಣದಲ್ಲಿ ರಾಜಕೀಯ ಪಕ್ಷಗಳು ಮೂಗು ತೂರಿಸಲು ದಾರಿಯನ್ನು ಸುಗಮಗೊಳಿಸುತ್ತದೆ.

47ರಿಂದ ಇಲ್ಲಿಯವರೆಗೆ ಉನ್ನತ ಶಿಕ್ಷಣ ಕುರಿತು ಬಂದಿರುವ ವಿವಿಧ ಆಯೋಗಗಳ ವರದಿಗಳು ಹೊಸ ಶಿಕ್ಷಣ ನೀತಿಗಳು, ಮಸೂದೆಗಳನ್ನು ನೋಡಿದರೆ ದೊಡ್ಡ ಗೊಂದಲ ಎದ್ದು ಕಾಣುತ್ತದೆ. ಇಷ್ಟೆಲ್ಲಾ ಅಧ್ಯಯನ ವಿಶೇಷ ವರದಿಗಳಿದ್ದರೂ ನಮ್ಮ ದೇಶದ ಉನ್ನತ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಸೋಲಿಗೆ ಕೇವಲ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ರಾಜಕೀಯ ಇಚ್ಛಾಶಕ್ತಿ ಖಾಸಗೀಕರಣದ ಕಡೆಗೆ ಒಂದಿರುವುದರಿಂದಲೇ ಶಿಕ್ಷಣದಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆ ಆಗಿಲ್ಲ ಇಂದು ದೇಶದ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಜೆಎನ್‌ಯು, ಹೈದರಾಬಾದ್, ದೆಹಲಿ ವಿವಿಗಳಲ್ಲಿ ವಿದ್ಯಾರ್ಥಿ ಸಮೂಹ ಎಚ್ಚೆತ್ತುಕೊಂಡಿದ್ದರೆ, ಪ್ರಭುತ್ವಕ್ಕೆ ಹೊಸ ಪ್ರಶ್ನೆಗಳನ್ನು ಕೇಳುತ್ತಿದೆ ಎಂದಾದರೆ, ಅದು ಅಲ್ಲಿನ ಪಠ್ಯಕ್ರಮ ಅಥವಾ ಕಲಿಕಾ ಪದ್ದತಿಯಿಂದ ಪಡೆದ ಎಚ್ಚರವಲ್ಲ ಬದಲಿಗೆ ವಿದ್ಯಾರ್ಥಿಗಳು ತರಗತಿಯ ಹೊರಗಡೆ ಜನಸಮುದಾಯವನ್ನು ನೋಡಿ ಕಲಿತದ್ದರಿಂದ ಮೂಡಿಬಂದ ಎಚ್ಚರ. ಹೀಗಾಗಿ ಉನ್ನತ ಶಿಕ್ಷಣ ತನ್ನ ಮೂಲ ಧ್ಯೇಯೋದ್ದೇಶಗಳನ್ನು ಮರಳಿ ಪಡೆದು, ಸರಕಿನಿಂದ ಸೇವೆಗೆ ಪಲ್ಲಟಗೊಳ್ಳಬೇಕಾದರೆ ಅದು ವಿದ್ಯಾರ್ಥಿ ಮತ್ತು ಅಧ್ಯಾಪಕರ ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...