Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

ಯುಜಿಸಿ ರದ್ಧತಿ ಎಂಬುದು ಉನ್ನತ ಶಿಕ್ಷಣವನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ

- Advertisement -
- Advertisement -

ಸಾರ್ವಜನಿಕ ಉತ್ಪಾದನೆ ಮತ್ತು ಸೇವಾಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವುದರಿಂದ ಮಾತ್ರ ದೇಶದಲ್ಲಿ ಶೀಘ್ರಗತಿಯ ಅಭಿವೃದ್ಧಿಯನ್ನು ತರಬಹುದೆಂಬ ನವಉದಾರೀಕರಣದ ನೀತಿ ಜಾರಿಗೆ ಬಂದಾಗಿನಿಂದಲೂ ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ಹಳಿತಪ್ಪುತ್ತಾ ಬಂದಿದೆ. ಈ ನೀತಿಯ ಭಾಗವಾಗಿ ಶಿಕ್ಷಣ ಕ್ಷೇತ್ರವನ್ನು ಮೆರಿಟ್ ಮತ್ತು ನಾನ್ ಮೆರಿಟ್ ಎಂಬ ಎರಡು ಭಾಗವನ್ನಾಗಿ ವಿಂಗಡಿಸಲಾಯಿತು. ಇದರ ಪ್ರಕಾರ ನಾನ್‌ಮೆರಿಟ್ ಗುಂಪಿನಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಖಾಸಗೀಕರಣವನ್ನು ತರುವ ಪ್ರಯತ್ನ ಮೊದಲಾಯಿತು. ಉನ್ನತ ಶಿಕ್ಷಣವನ್ನೂ ನಾನ್‌ಮೆರಿಟ್ ಕ್ಷೇತ್ರಕ್ಕೆ ಸೇರಿಸಿದ್ದರಿಂದ ಆರ್ಥಿಕ ಅನುದಾನವನ್ನು ಹಂತಹಂತವಾಗಿ ಕಡಿತಗೊಳಿಸಿಕೊಂಡು ಬರಲಾಯಿತು. ಇದರಿಂದ ಖಾಸಗೀ ಉದ್ಯಮಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸಾಧ್ಯವಾಗುತ್ತದೆ ಎನ್ನುವ ವಾದವನ್ನು ಮುಂದೊಡ್ಡಲಾಯಿತು. ಇದರ ನೇರ ಪರಿಣಾಮ ಎಂದರೆ ಶಿಕ್ಷಣ ಒಂದು ಸರಕಾಗಿ ಮಾರ್ಪಟ್ಟು, ವಿದ್ಯಾರ್ಥಿಗಳು ಗ್ರಾಹಕರಾಗಿ ಬದಲಾದರು. ಇಲ್ಲಿ ಜ್ಞಾನ ಎಂದರೆ ಕೌಶಲ್ಯ, ಮಾಹಿತಿ ಸಂಗ್ರಹಣೆ ಮತ್ತು ಸಂಸ್ಕರಣೆ ಮಾತ್ರ ಎಂದಾಯಿತು. ಹೊಸ ಖಾಸಗೀ ವಿವಿಗಳು ವಿಜೃಂಭಿಸತೊಡಗಿ ಒಂದು ಕಾಲಕ್ಕೆ ಹೆಸರು ಪಡೆದಿದ್ದ ಸರ್ಕಾರಿ ವಿವಿಗಳು ತಮ್ಮ ಘನತೆ ಮತ್ತು ಆಕರ್ಷಣೆಯನ್ನು ಕಳೆದು ಕೊಂಡವು. ಕಾಲೇಜು ಮತ್ತು ವಿವಿಗಳಲ್ಲಿ ಕೆಲಸ ಮಾಡುವವರಲ್ಲಿ ಅರೆಕಾಲಿಕ ಅಥವಾ ತಾತ್ಕಾಲಿಕ ಹುದ್ದೆಗಳಲ್ಲಿರುವವರ ಸಂಖ್ಯೆ ಹೆಚ್ಚಾಯಿತು. ಹೆಚ್ಚಿನ ಸಂಬಳ ಸಿಗದ ಕಾರಣ ಪ್ರತಿಭಾವಂತರು ಶಿಕ್ಷಣ ಕ್ಷೇತ್ರದಿಂದ ವಿಮುಖರಾದರು.

ಜ್ಞಾನದ ಹಸಿವು, ಬೆಳವಣಿಗೆ, ಹೊಸಜ್ಞಾನ ಶಾಖೆಗಳ ಆವಿಷ್ಕಾರ ಎಲ್ಲವೂ ಕುಸಿಯುತ್ತಾ ಹೋಯಿತು. ಉನ್ನತ ಶಿಕ್ಷಣದ ಬಗ್ಗೆ ಮಹತ್ವದ ಧ್ಯೇಯಗಳನ್ನು ರೂಪಿಸಿದ್ದ ರಾಧಾಕೃಷ್ಣನ್, ಕೊಠಾರಿ ಇತ್ಯಾದಿ ಕಮಿಷನ್‌ಗಳ ವರದಿಯನ್ನು ಕಾರ್ಪೊರೇಟ್ ಬಂಡವಾಳಶಾಹಿಗೆ ಒಪ್ಪಿಸಲಾಗಿದೆ. ರಾಧಾಕೃಷ್ಣನ್, ಕೊಠಾರಿಗಳ ಬದಲು, ಅಂಬಾನಿ, ಬಿರ್ಲಾ ಮತ್ತು ನಾರಾಯಣಮೂರ್ತಿಗಳು ಉನ್ನತ ಶಿಕ್ಷಣದ ಯೋಜನಾ ಆಯೋಗದಲ್ಲಿ ಪ್ರವೇಶ ಪಡೆದಿದ್ದಾರೆ. ಲಾಭದಾಯಕವಾದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದರೂ, ಈಗ ಅದೇ ಮೇಲುಗೈ ಸಾಧಿಸಿದೆ. ಸಧ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀ ಸಂಸ್ಥೆಗಳ ಪಾಲು ಶೇ.59ರಷ್ಟಾಗಿದೆ.

ಇವೆಲ್ಲಾ ಬೆಳವಣಿಗೆಗಳ ಹಿಂದೆ ಉನ್ನತ ಶಿಕ್ಷಣ ಸಾರ್ವಜನಿಕ ಸೇವೆ ಅಲ್ಲ ಎನ್ನುವ ತತ್ವ ಅಡಗಿದೆ. ಇದರರ್ಥ ಈಗ ಅದೊಂದು ಮೌಲ್ಯಾಧಾರಿತ ಸರಕು. ಅಂದರೆ, ಅದನ್ನು ಬಳಸುವವರು ಅದಕ್ಕೆ ತಕ್ಕನಾದ ಶುಲ್ಕ ನಿಡಿ ಅದನ್ನು ಉಪಯೋಗಿಸಬೇಕು. ಉನ್ನತ ಶಿಕ್ಷಣಕ್ಕೆ ನಾಲ್ಕು ಮೂಲಭೂತ ಲಕ್ಷಣಗಳು ಇರ

ಬೇಕು. ಇಂದು, ಹೊಸ ಜ್ಞಾನದ ಅನ್ವೇಷಣೆ. ಎರಡು, ಅದಕ್ಕೆ ಬೇಕಾದ ತರಗತಿ, ಮೂರು, ಸಾಮಾಜಿಕ ಸೇವೆಗಳಿಗೆ ಶಿಕ್ಷಣವನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ವಿವೇಕ; ನಾಲ್ಕು, ವಿಮರ್ಶಾತ್ಮಕ ಧೋರಣೆಯನ್ನು ಬೆಳೆಸುವುದು. ಇದರಲ್ಲಿ ಕಡೆಯದು ಅತ್ಯಂತ ಪ್ರಮುಖವಾದ ಸಾಮಾಜಿಕ ನೈತಿಕತೆಯನ್ನು ಬೆಳೆಸುವುದೂ ಸೇರಿದೆ.
ಆದರೆ ಉನ್ನತ ಶಿಕ್ಷಣವನ್ನು ಒಂದು

 ವ್ಯಾಪಾರವನ್ನಾಗಿಸಿದಾಗ ಈ ನಾಲ್ಕು ಅಂಶಗಳೂ ಮರೆಯಾಗುತ್ತವೆ. ಜ್ಞಾನದ ಅನ್ವೇಷಣೆ ಅಂದರೆ ಇಲ್ಲಿ ಹೊಸ ಬಂಡವಾಳವನ್ನು ಸ್ಥಾಪಿಸಲು ಅಥವಾ ಇರುವ ಹುಡಿಕೆಯನ್ನು ವೃದ್ಧಿಸಲು ಬೇಕಾದ ಕೌಶಲ್ಯವಾಗಿಬಿಡುತ್ತದೆ. ತರಬೇತಿ ಎಂದರೆ, ಕೌಶಲ್ಯ ಪಾಠ ಮಾಡುವ, ಕಲಿಯುವ ತಂತ್ರಜ್ಞಾನಕ್ಕೆ ಸೀಮಿತವಾಗುತ್ತದೆ. ಸಾಮಾಜಿಕ ಸೇವೆಗಳ ಬದಲು ಹೊಸ ಸರಕನ್ನು ಸೃಷ್ಟಿಸುವುದೇ ಮುಖ್ಯವಾಗುತ್ತದೆ. ವಿಮರ್ಶಾತ್ಮಕ ಧೋರಣೆ ಬೆಳೆಸುವುದಂತೂ ನವ ಶಿಕ್ಷಣ ನೀತಿಯಲ್ಲಿ ಸಂಪೂರ್ಣ ನಿಷೇಧಕ್ಕೆ ಒಳಪಡುತ್ತದೆ.

ಇತ್ತೀಚೆಗೆ ಯುಜಿಸಿ ಹೊರಡಿಸಿರುವ ಸುತ್ತೋಲೆ ಪ್ರಕಾರ ಇನ್ನು ಮುಂದೆ ವಿವಿ ಅಧ್ಯಾಪಕರು ಸರ್ಕಾರದ ನೀತಿಗಳನ್ನು ಕುರಿತು ವಿಮರ್ಶೆ ಮಾಡುವಂತಿಲ್ಲ. ಇದರಿಂದ ಈಗಾಗಲೇ ಸೊಂಟ ಬಗ್ಗಿರುವ ಅಧ್ಯಾಪಕರು ಇನ್ನು ಮುಂದೆ ತೆವಳುವಂತಾಗುತ್ತದೆ. ಈ ನೀತಿ ಕೇವಲ ಅಧ್ಯಾಪಕರ ಧ್ವನಿಯನ್ನು ದಮನಮಾಡುವುದಿಲ್ಲ; ವಿದ್ಯಾರ್ಥಿಗಳ ಯೋಜನಾ ಶಕ್ತಿಯನ್ನೇ ಕುಂಠಿಸುತ್ತದೆ.

ಇದಕ್ಕಿಂತಲೂ ದೊಡ್ಡ ಹೊಡೆತವೆಂದರೆ, ಈ ಖಾಸಗೀಕರಣ ಉಳ್ಳವರಿಗಾಗಿ ಮಾತ್ರ ತೆರೆದುಕೊಳ್ಳುವುದರಿಂದ ದೇಶದ ಬಹುತೇಕ ಯುವಜನತೆ ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಾರೆ ಅಥವಾ ಕಳಪೆ ಕಾಲೇಜು/ವಿವಿಗಳಲ್ಲಿ ಮಾತ್ರ ಕಲಿಯುವಂತಾಗುತ್ತದೆ. ಕಾಲೇಜು/ವಿವಿಗಳ ಸ್ವಾಯತ್ತತೆ ಮೇಲೆ ಈಗ ವಿಶೇಷ ಗಮನ ನೀಡಲಾಗುತ್ತಿದೆ. ಅದನ್ನು ಬಯಸದೇ ಇದ್ದ ಸಂಸ್ಥೆಗಳ ಮೇಲೂ ಸ್ವಾಯತ್ತತೆಯನ್ನು ಹೇರಲಾಗುತ್ತಿದೆ. ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ತಮಗಿಷ್ಟ ಬಂದ ಶಿಕ್ಷಣ ಕ್ರಮ, ಸೇವಾ ನಿಯಮ, ಶುಲ್ಕ ಇತ್ಯಾದಿಗಳನ್ನು ಅಳವಡಿಸಿಕೊಳ್ಳಬಹುದಾದ್ದರಿಂದ ಶಿಕ್ಷಣದ ಮೂಲ ಧ್ಯೇಯಗಳಲ್ಲಿ ಒಂದಾದ ಒಳಗೊಳ್ಳುವಿಕೆಗೆ ಧಕ್ಕೆ ಬರುತ್ತದೆ.

ಇವೆಲ್ಲಕ್ಕೂ ಬರೆ ಇಟ್ಟಂತೆ ಇದೇ ವರ್ಷದ ಜೂನ್ 27ರಂದು ಯುಜಿಸಿಯನ್ನು ವಿಸರ್ಜಿಸಿ ಅದರ ಜಾಗದಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು ಸ್ಥಾಪಿಸುವ ಹೊಸ ಮಸೂದೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಇದರಿಂದ ಉನ್ನತ ಶಿಕ್ಷಣ ಮತ್ತಷ್ಟು ಬಲಗೊಂಡು ಹೆಚ್ಚಿನ ಸ್ವಾಯತ್ತತೆಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಆದರೆ ಒಂದು ಕಡೆ ಸ್ವಾಯತ್ತತೆಯ ಮಾತನ್ನಾಡುತ್ತಲೇ ಇನ್ನೊಂದು ಕಡೆ ಇಡೀ ಉನ್ನತ ಶಿಕ್ಷಣವನ್ನು ಒಂದು ಕೇಂದ್ರೀಕೃತ ವ್ಯವಸ್ಥೆಗೆ ತರುವ ಹುನ್ನಾರ ಇದು. ಇದರಲ್ಲಿ ರಾಜ್ಯದ ವಿವಿಗಳು ಮಾತ್ರ ಕಾಲೇಜು ಆಡಳಿತ ಮಂಡಳಿಗಳಿಗೆ ಯಾವ ಅಧಿಕಾರವೂ ಇರುವುದಿಲ್ಲ. ಇಲ್ಲಿಯವರೆಗೆ ಆಡಳಿತ ಮಾತ್ರ ಹಣಕಾಸಿನ ನಿರ್ವಹಣೆ-ಇವೆರಡನ್ನು ಯುಜಿಸಿ ನೋಡಿಕೊಳ್ಳುತ್ತಿತ್ತು. ಈಗ ಅದನ್ನು ಬೇರ್ಪಡಿಸಲಾಗಿದೆ. ಹಣಕಾಸಿನ ನಿರ್ವಹಣೆ ಇನ್ನುಮುಂದೆ ನೇರವಾಗಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ನೋಡಿಕೊಳ್ಳುತ್ತದೆ. ಅರ್ಥಾತ್ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ನೇರವಾಗಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ಇದು ಶಿಕ್ಷಣದಲ್ಲಿ ರಾಜಕೀಯ ಪಕ್ಷಗಳು ಮೂಗು ತೂರಿಸಲು ದಾರಿಯನ್ನು ಸುಗಮಗೊಳಿಸುತ್ತದೆ.

47ರಿಂದ ಇಲ್ಲಿಯವರೆಗೆ ಉನ್ನತ ಶಿಕ್ಷಣ ಕುರಿತು ಬಂದಿರುವ ವಿವಿಧ ಆಯೋಗಗಳ ವರದಿಗಳು ಹೊಸ ಶಿಕ್ಷಣ ನೀತಿಗಳು, ಮಸೂದೆಗಳನ್ನು ನೋಡಿದರೆ ದೊಡ್ಡ ಗೊಂದಲ ಎದ್ದು ಕಾಣುತ್ತದೆ. ಇಷ್ಟೆಲ್ಲಾ ಅಧ್ಯಯನ ವಿಶೇಷ ವರದಿಗಳಿದ್ದರೂ ನಮ್ಮ ದೇಶದ ಉನ್ನತ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಸೋಲಿಗೆ ಕೇವಲ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ರಾಜಕೀಯ ಇಚ್ಛಾಶಕ್ತಿ ಖಾಸಗೀಕರಣದ ಕಡೆಗೆ ಒಂದಿರುವುದರಿಂದಲೇ ಶಿಕ್ಷಣದಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆ ಆಗಿಲ್ಲ ಇಂದು ದೇಶದ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಜೆಎನ್‌ಯು, ಹೈದರಾಬಾದ್, ದೆಹಲಿ ವಿವಿಗಳಲ್ಲಿ ವಿದ್ಯಾರ್ಥಿ ಸಮೂಹ ಎಚ್ಚೆತ್ತುಕೊಂಡಿದ್ದರೆ, ಪ್ರಭುತ್ವಕ್ಕೆ ಹೊಸ ಪ್ರಶ್ನೆಗಳನ್ನು ಕೇಳುತ್ತಿದೆ ಎಂದಾದರೆ, ಅದು ಅಲ್ಲಿನ ಪಠ್ಯಕ್ರಮ ಅಥವಾ ಕಲಿಕಾ ಪದ್ದತಿಯಿಂದ ಪಡೆದ ಎಚ್ಚರವಲ್ಲ ಬದಲಿಗೆ ವಿದ್ಯಾರ್ಥಿಗಳು ತರಗತಿಯ ಹೊರಗಡೆ ಜನಸಮುದಾಯವನ್ನು ನೋಡಿ ಕಲಿತದ್ದರಿಂದ ಮೂಡಿಬಂದ ಎಚ್ಚರ. ಹೀಗಾಗಿ ಉನ್ನತ ಶಿಕ್ಷಣ ತನ್ನ ಮೂಲ ಧ್ಯೇಯೋದ್ದೇಶಗಳನ್ನು ಮರಳಿ ಪಡೆದು, ಸರಕಿನಿಂದ ಸೇವೆಗೆ ಪಲ್ಲಟಗೊಳ್ಳಬೇಕಾದರೆ ಅದು ವಿದ್ಯಾರ್ಥಿ ಮತ್ತು ಅಧ್ಯಾಪಕರ ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...