Homeಅಂತರಾಷ್ಟ್ರೀಯದೇಹದ ವಾಸನೆ ಗ್ರಹಿಸಿ ಕೊರೋನಾ ಸೋಂಕು ಪತ್ತೆಹಚ್ಚುವ ಉಪಕರಣಗಳನ್ನು ಕಂಡು ಹಿಡಿದ ಬ್ರಿಟನ್‌

ದೇಹದ ವಾಸನೆ ಗ್ರಹಿಸಿ ಕೊರೋನಾ ಸೋಂಕು ಪತ್ತೆಹಚ್ಚುವ ಉಪಕರಣಗಳನ್ನು ಕಂಡು ಹಿಡಿದ ಬ್ರಿಟನ್‌

- Advertisement -
- Advertisement -

ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಎರಡನೇಯ ಅಲೆಯ ಪ್ರಭಾವ ಸಾಕಷ್ಟು ಇಳಿಮುಖವಾಗಿದೆ. ಅನೇಕ ನಗರಗಳು ಲಾಕ್‌ ಡೌನ್‌ ನಿಂದ ತೆರೆದುಕೊಳ್ಳುತ್ತಿವೆ. ಈ ನಡುವೆ ಜನರ ಓಡಾಟದಿಂದ ಮತ್ತಷ್ಟು ಸೋಂಕು ಹೆಚ್ಚಳವಾಗುವ ಆತಂಕವನ್ನು ತಜ್ಞರು ಹೊರಹಾಕಿದ್ದಾರೆ. ಕೊರೋನಾ ವ್ಯಾಕ್ಸಿನೇಶನ್‌ ಕೂಡ ಸೋಂಕು ನಿಯಂತ್ರಣಕ್ಕೆ ಸಹಾಯ ಮಾಡುವ ಇನ್ನೊಂದು ಅಸ್ತ್ರ. ವ್ಯಾಕ್ಸಿನೇಶನ್‌ ಜೊತೆಗೆ ಕೊರೋನಾ ಸೋಂಕಿತರನ್ನು ಅಂತರದಿಂದಲೇ ಗುರುತಿಸಿ ಕ್ವಾರಂಟೈನ್‌ ಅಥವಾ ಐಸೋಲೇಶನ್‌ ವ್ಯವಸ್ಥೆ ಮಾಡಲು ಸಾಧ್ಯವಾದರೆ? ಹೌದು ಬ್ರಿಟನ್‌ ಒಂದು ಇಂತಹ ತಂತ್ರಜ್ಞಾನದ ಸಂಶೋಧನೆಯಲ್ಲಿ ತೊಡಗಿದೆ. ಸಾರ್ವಜನಿಕ ಪ್ರದೇಶದಲ್ಲಿರುವ ಕೊರೋನಾ ಸೋಂಕಿತರನ್ನು ಪತ್ತೆಹಚ್ಚುವ ವಿಶೇಷ ಸ್ಕಾನಿಂಗ್‌ ತಂತ್ರಜ್ಞಾನವನ್ನು ಬ್ರಿಟನ್‌ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸುತ್ತಿದೆ. ಈ ತಂತ್ರಜ್ಞಾನ ಉಪಕರಣಕ್ಕೆ ಕೋವಿಡ್‌ ಅಲರಾಮ್‌ ಎಂದು ಹೆಸರಿಸಲಾಗಿದೆ.

ಈ ವಿಶೇಷ ಕೋವಿಡ್‌ ಅಲರಾಮ್‌ ಜನನಿಬಿಡ ಮಾರುಕಟ್ಟೆ, ನಗರಗಳ ಬೀದಿಯಲ್ಲಿ ದೂರದಿಂದಲೇ ಜನರ ದೇಹವನ್ನು ಪರೀಕ್ಷಿಸಲು ಶಕ್ತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂತರದಿಂದಲೇ ದೇಹದಲ್ಲಿರುವ ವೈರಸ್‌ ಲಕ್ಷಣವನ್ನು ಪತ್ತೆ ಹಚ್ಚಿ ಇದು ಅಲರಾಮ್‌ ನೀಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದರೆ ವೈರಸ್‌ನ ಜೀವರಾಸಾಯನಿಕ ಕ್ರಿಯೆಯಿಂದ ಆ ವ್ಯಕ್ತಿಯ ದೇಹದಲ್ಲಿ ವಿಭಿನ್ನವಾದ ವಾಸನೆ ಉತ್ಪತ್ತಿಯಾಗುತ್ತದೆ. ಈ ವಾಸನೆಯನ್ನು ಕಂಡು ಹಿಡಿಯುವ ಸೆನ್ಸಾರ್‌ಗಳನ್ನು ಅಭಿವೃದ್ಧಿಡಿಸಿದ್ದೇವೆ ಎಂದು ಲಂಡನ್‌ ಸ್ಕೂಲ್‌ ಆಫ್‌ ಹೈಜಿನ್‌ ಎಂಡ್‌ ಟ್ರೋಪಿಕಲ್‌ ಮೆಡಿಸಿನ್ಸ್‌ ( LSHTM) ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಅಧಿಕಾರ ಕಳೆದುಕೊಂಡ ನೆತನ್ಯಾಹು: ನಫ್ತಾಲಿ ಬೆನೆಟ್ ಇಸ್ರೇಲ್‍ನ ಹೊಸ ಪ್ರಧಾನಿ

LSHTM ಮತ್ತು ಡರ್ಹಾಮ್‌ ವಿಶ್ವವಿದ್ಯಾಲಯದ  ರೋಬೋ ಸೈಂಟಿಫಿಕ್‌ ಲಿಮಿಟೆಡ್‌ ಎಂಬ ಬಯೋಟೆಕ್‌ ಕಂಪನಿಗಳು ಜಂಟಿಯಾಗಿ ಈ ಸಂಶೋಧನೆಯನ್ನು ನಡೆಸುತ್ತಿವೆ. ಈ ಸಂಬಂಧ ಒರ್ಗಾನಿಕ್‌ ಸೆಮಿಕಂಡಕ್ಟಿಂಗ್ ಸೆನ್ಸರ್‌ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದುವರೆಗಿನ ಪರೀಕ್ಷೆಗಳು ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡಿವೆ. ಈ ಉಪಕರಣ ಕೊರೋನಾ ಟೆಸ್ಟಿಂಗ್‌ಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ ಎಂದು  ಲಂಡ್‌ ಸ್ಕೂಲ್‌ ಆಫ್‌ ಹೈಜಿನ್‌ನ ವಿಜ್ಞಾನಿ ಪ್ರೊಫೆಸರ್‌ ಜೇಮ್ಸ್‌ ಲೋಗಾನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಸೆನ್ಸಾರ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರೆ ಸಾರ್ವಜನಿಕ ಪ್ರದೇಶಗಳಲ್ಲಿ ಯಶಸ್ವಿಯಾಗಿ ಅಳವಡಿಸಬಹುದು. ಇದು ಅಷ್ಟೊಂದು ದುಬಾರಿ ಬೆಲೆಯ ಉಪಕರಣವಲ್ಲ. ಮುಂದೆ ಸಂಭವಿಸಬಹುದಾದ ಇತರ ಸೋಂಕುಗಳನ್ನು ಈ ಉಪಕರಣದಿಂದ ಪತ್ತೆಹಚ್ಚಲು ಸಾಧ್ಯವಿದೆ ಎಂದು ಜೇಮ್ಸ್‌ ಲೋಗಾನ್‌ ಅಭಿಪ್ರಾಯಪಡುತ್ತಾರೆ.

ಇದುವರೆಗೆ ಈ ತಂತ್ರಜ್ಞಾನದಿಂದ 54 ಜನರಲ್ಲಿ 27 ಜನರು ಕೋವಿಡ್‌ ಸೋಂಕಿಗೆ ಒಳಗಾಗಿರುವುದನ್ನು ಪತ್ತೆ ಹಚ್ಚಲಾಗಿದೆ. ವ್ಯಕ್ತಿಗಳು ಸೋಂಕು ಲಕ್ಷಣ ಹೊಂದಿರದಿದ್ದರೂ ಈ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿದ್ದೇವೆ. ಸಾಕ್ಸ್‌ ಸೇರಿದಂತೆ ವಿವಿಧ ಸೂಕ್ಷ್ಮಾತಿ ಸೂಕ್ಷ್ಮ ವಾಸನೆಯನ್ನು ಉಪಕರಣ ಗುರುತಿಸಿ ಕೊರೋನಾ ಸೋಂಕು ಇರುವುದನ್ನು ಪತ್ತೆಹಚ್ಚಿದೆ.  ನಾವು ಆರಂಭದಲ್ಲಿ ಕೋವಿಡ್‌ ಸೋಂಕಿತರಲ್ಲಿ ವಿಭಿನ್ನವಾದ ವಾಸನೆಯೊಂದು ಇರುವುದನ್ನು ಮತ್ತು ಸೋಂಕು ಇಲ್ಲದಿರುವವರಲ್ಲಿ ಅಂತಹ ಯಾವುದೇ ವಾಸನೆ ಇಲ್ಲದಿರುವುದನ್ನು ಕಂಡುಕೊಂಡೆವು. ನಮ್ಮ ಅಧ್ಯಯನವು ಈ ಸೂಕ್ಷ್ಮ ವಾಸನೆಯನ್ನು ಗ್ರಹಿಸುವ ಸೆನ್ಸರ್‌ ಒಂದನ್ನು ರೂಪಿಸುವ ಪ್ರಯತ್ನಕ್ಕೆ ತೊಡಗಿದೆವು. ಅದು ಯಶಸ್ವಿಯಾಗಿದೆ. ಬೇರೆ ಎಲ್ಲಾ ರೀತಿಯ ಟೆಸ್ಟಿಂಗ್‌ ವಿಧಾನಗಳಿಗಿಂತ ನಮ್ಮ ಕೋವಿಡ್‌ ಅಲಾರಾಮ್‌ ಟೆಸ್ಟಿಂಗ್‌ ವಿಧಾನವು  ನಿಖರವಾಗಿರುವುದು ಕಂಡುಬಂದಿದೆ. 100%  ಸರಿಯಾದ ಫಲಿತಾಂಶವನ್ನು ನಾವು ಪಡೆದಿದ್ದೇವೆ ಎಂದು ರೋಬೋಸೈಂಟಿಫಿಕ್‌ ಸಂಸ್ಥೆಯು ಹೇಳಿದೆ.

ರೋಬೋ ಸೌಂಟಿಫಿಕ್‌ ಸಂಸ್ಥೆಯು ಈ ತಂತ್ರಜ್ಞಾನದ ಸಹಾಯದಿಂದ ಎರಡು ರೀತಿಯ ಉಪಕರಣವನ್ನು ತಯಾರಿಸಲು ಹೊರಟಿದೆ. ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸಣ್ಣ ಉಪಕರಣ. ಮತ್ತೊಂದು ಕೋಣೆಯಲ್ಲಿ ಅಳವಡಿಸಬಹುದಾದ ಟೆಸ್ಟಿಂಗ್‌ ಉಪಕರಣ. ಈ ಉಪಕರಣಗಳನ್ನು ಹೆಚ್ಚಾಗಿ ಸ್ಕೂಲ್‌, ವಿಮಾನಗಳು, ಸರ್ಕಾರಿ ಬಸ್‌ಗಳು, ಕಚೇರಿಗಳು, ಕಂಪನಿಗಳು ಸೇರಿ ಹಲವುಕಡೆ ಪರಿಣಾಮಕಾರಿಯಾಗಿ ಕೊರೋನಾ ಟೆಸ್ಟ್‌ಗೆ ಬಳಸಿಕೊಳ್ಳಬಹುದು ಎಂದು ಕಂಪನಿಯು ತಿಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಈ ಉಪಕರಣಗಳಿಂದ ಅತ್ಯಂತ ಸುಲಭವಾಗಿ ಕೊರೋನಾ ಪರೀಕ್ಷೆಯನ್ನು ನಡೆಸಬಹುದಾಗಿದೆ. ಆಟೋಮೇಟಿಕ್‌ ತಂತ್ರಜ್ಞಾನವಾಗಿರುವುದರಿಂದ ಕೊರೋನಾ ಟೆಸ್ಟಿಂಗ್‌ ನಡೆಸಲು ಹೆಚ್ಚಿನ ಜನರ ಅವಶ್ಯಕತೆಯೂ ಇಲ್ಲ. ಜನರು ಸ್ವಯೋ ಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಿ ತಮಗೆ ತಾವೇ ಫಲಿತಾಂಶವನ್ನು ತಿಳಿದುಕೊಳ್ಳುವ ವ್ಯವಸ್ಥೆ ಇದಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿತರನ್ನು ಪತ್ತೆಹಚ್ಚಿ ಅಲಾರ್ಮ್‌ ನೀಡಲು ಈ ಉಪಕರಣ ಅತ್ಯಂತ ಸಹಾಯಕಾರಿಯಾಗಲಿದೆ ಎಂದು ರೋಬೋ ಸೈಂಟಿಫಿಕ್‌ ಸಂಸ್ಥೆ ಮಾಹಿತಿ ನೀಡಿದೆ.

ಒಟ್ಟಿನಲ್‌ ಕೊರೋನಾ ಟೆಸ್ಟಿಂಗ್‌ ಕೂಡ ಅತ್ಯಂತ ಅಪಾಯಕಾರಿ ಕೆಲಸವಾಗಿರುವ ನಮ್ಮ ದೇಶದಲ್ಲಿ ಇಂತಹ ಆಟೋಮ್ಯಾಟಿಕ್‌ ಉಪಕರಣಗಳ ಅವಶ್ಯಕತೆ ಇದೆ. ಟೆಸ್ಟಿಂಗ್‌ ಕೂಡ ಸಾಧ್ಯವಿಲ್ಲದಷ್ಟು ಬೃಹತ್‌ ಜನಸಂಖ್ಯೆಯ ಭಾರತದಲ್ಲಿ ಇಂತಹ ಸ್ವಯಂಚಾಲಿತ ತಂತ್ರಜ್ಞಾನ ವ್ಯವಸ್ಥೆಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ. ಆದರೆ ಈ ಕೋವಿಡ್‌ ಅಲಾರಾಮ್‌ ತಂತ್ರಜ್ಞಾನ ಬ್ರಿಟನ್‌ನಲ್ಲಿ ಅಭಿವೃದ್ಧಿಗೊಂಡು ಭಾರತಕ್ಕೆ ಬರಲು ಎಷ್ಟು ಕಾಲ ಬೇಕಾಗಬಹದು ಎಂಬುದು  ತಿಳಿದಿಲ್ಲ.


ಇದನ್ನೂ ಓದಿ :ಎಲ್‌‌ಜೆಪಿಯಲ್ಲಿ ಬಂಡಾಯ; ಸೇಡು ತೀರಿಸುತ್ತಿದ್ದಾರೆಯೆ ನಿತೀಶ್ ಕುಮಾರ್‌?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...