Homeಅಂತರಾಷ್ಟ್ರೀಯದೇಹದ ವಾಸನೆ ಗ್ರಹಿಸಿ ಕೊರೋನಾ ಸೋಂಕು ಪತ್ತೆಹಚ್ಚುವ ಉಪಕರಣಗಳನ್ನು ಕಂಡು ಹಿಡಿದ ಬ್ರಿಟನ್‌

ದೇಹದ ವಾಸನೆ ಗ್ರಹಿಸಿ ಕೊರೋನಾ ಸೋಂಕು ಪತ್ತೆಹಚ್ಚುವ ಉಪಕರಣಗಳನ್ನು ಕಂಡು ಹಿಡಿದ ಬ್ರಿಟನ್‌

- Advertisement -
- Advertisement -

ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಎರಡನೇಯ ಅಲೆಯ ಪ್ರಭಾವ ಸಾಕಷ್ಟು ಇಳಿಮುಖವಾಗಿದೆ. ಅನೇಕ ನಗರಗಳು ಲಾಕ್‌ ಡೌನ್‌ ನಿಂದ ತೆರೆದುಕೊಳ್ಳುತ್ತಿವೆ. ಈ ನಡುವೆ ಜನರ ಓಡಾಟದಿಂದ ಮತ್ತಷ್ಟು ಸೋಂಕು ಹೆಚ್ಚಳವಾಗುವ ಆತಂಕವನ್ನು ತಜ್ಞರು ಹೊರಹಾಕಿದ್ದಾರೆ. ಕೊರೋನಾ ವ್ಯಾಕ್ಸಿನೇಶನ್‌ ಕೂಡ ಸೋಂಕು ನಿಯಂತ್ರಣಕ್ಕೆ ಸಹಾಯ ಮಾಡುವ ಇನ್ನೊಂದು ಅಸ್ತ್ರ. ವ್ಯಾಕ್ಸಿನೇಶನ್‌ ಜೊತೆಗೆ ಕೊರೋನಾ ಸೋಂಕಿತರನ್ನು ಅಂತರದಿಂದಲೇ ಗುರುತಿಸಿ ಕ್ವಾರಂಟೈನ್‌ ಅಥವಾ ಐಸೋಲೇಶನ್‌ ವ್ಯವಸ್ಥೆ ಮಾಡಲು ಸಾಧ್ಯವಾದರೆ? ಹೌದು ಬ್ರಿಟನ್‌ ಒಂದು ಇಂತಹ ತಂತ್ರಜ್ಞಾನದ ಸಂಶೋಧನೆಯಲ್ಲಿ ತೊಡಗಿದೆ. ಸಾರ್ವಜನಿಕ ಪ್ರದೇಶದಲ್ಲಿರುವ ಕೊರೋನಾ ಸೋಂಕಿತರನ್ನು ಪತ್ತೆಹಚ್ಚುವ ವಿಶೇಷ ಸ್ಕಾನಿಂಗ್‌ ತಂತ್ರಜ್ಞಾನವನ್ನು ಬ್ರಿಟನ್‌ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸುತ್ತಿದೆ. ಈ ತಂತ್ರಜ್ಞಾನ ಉಪಕರಣಕ್ಕೆ ಕೋವಿಡ್‌ ಅಲರಾಮ್‌ ಎಂದು ಹೆಸರಿಸಲಾಗಿದೆ.

ಈ ವಿಶೇಷ ಕೋವಿಡ್‌ ಅಲರಾಮ್‌ ಜನನಿಬಿಡ ಮಾರುಕಟ್ಟೆ, ನಗರಗಳ ಬೀದಿಯಲ್ಲಿ ದೂರದಿಂದಲೇ ಜನರ ದೇಹವನ್ನು ಪರೀಕ್ಷಿಸಲು ಶಕ್ತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂತರದಿಂದಲೇ ದೇಹದಲ್ಲಿರುವ ವೈರಸ್‌ ಲಕ್ಷಣವನ್ನು ಪತ್ತೆ ಹಚ್ಚಿ ಇದು ಅಲರಾಮ್‌ ನೀಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದರೆ ವೈರಸ್‌ನ ಜೀವರಾಸಾಯನಿಕ ಕ್ರಿಯೆಯಿಂದ ಆ ವ್ಯಕ್ತಿಯ ದೇಹದಲ್ಲಿ ವಿಭಿನ್ನವಾದ ವಾಸನೆ ಉತ್ಪತ್ತಿಯಾಗುತ್ತದೆ. ಈ ವಾಸನೆಯನ್ನು ಕಂಡು ಹಿಡಿಯುವ ಸೆನ್ಸಾರ್‌ಗಳನ್ನು ಅಭಿವೃದ್ಧಿಡಿಸಿದ್ದೇವೆ ಎಂದು ಲಂಡನ್‌ ಸ್ಕೂಲ್‌ ಆಫ್‌ ಹೈಜಿನ್‌ ಎಂಡ್‌ ಟ್ರೋಪಿಕಲ್‌ ಮೆಡಿಸಿನ್ಸ್‌ ( LSHTM) ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಅಧಿಕಾರ ಕಳೆದುಕೊಂಡ ನೆತನ್ಯಾಹು: ನಫ್ತಾಲಿ ಬೆನೆಟ್ ಇಸ್ರೇಲ್‍ನ ಹೊಸ ಪ್ರಧಾನಿ

LSHTM ಮತ್ತು ಡರ್ಹಾಮ್‌ ವಿಶ್ವವಿದ್ಯಾಲಯದ  ರೋಬೋ ಸೈಂಟಿಫಿಕ್‌ ಲಿಮಿಟೆಡ್‌ ಎಂಬ ಬಯೋಟೆಕ್‌ ಕಂಪನಿಗಳು ಜಂಟಿಯಾಗಿ ಈ ಸಂಶೋಧನೆಯನ್ನು ನಡೆಸುತ್ತಿವೆ. ಈ ಸಂಬಂಧ ಒರ್ಗಾನಿಕ್‌ ಸೆಮಿಕಂಡಕ್ಟಿಂಗ್ ಸೆನ್ಸರ್‌ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದುವರೆಗಿನ ಪರೀಕ್ಷೆಗಳು ಅತ್ಯಂತ ನಿಖರವಾದ ಫಲಿತಾಂಶಗಳನ್ನು ನೀಡಿವೆ. ಈ ಉಪಕರಣ ಕೊರೋನಾ ಟೆಸ್ಟಿಂಗ್‌ಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ ಎಂದು  ಲಂಡ್‌ ಸ್ಕೂಲ್‌ ಆಫ್‌ ಹೈಜಿನ್‌ನ ವಿಜ್ಞಾನಿ ಪ್ರೊಫೆಸರ್‌ ಜೇಮ್ಸ್‌ ಲೋಗಾನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಸೆನ್ಸಾರ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರೆ ಸಾರ್ವಜನಿಕ ಪ್ರದೇಶಗಳಲ್ಲಿ ಯಶಸ್ವಿಯಾಗಿ ಅಳವಡಿಸಬಹುದು. ಇದು ಅಷ್ಟೊಂದು ದುಬಾರಿ ಬೆಲೆಯ ಉಪಕರಣವಲ್ಲ. ಮುಂದೆ ಸಂಭವಿಸಬಹುದಾದ ಇತರ ಸೋಂಕುಗಳನ್ನು ಈ ಉಪಕರಣದಿಂದ ಪತ್ತೆಹಚ್ಚಲು ಸಾಧ್ಯವಿದೆ ಎಂದು ಜೇಮ್ಸ್‌ ಲೋಗಾನ್‌ ಅಭಿಪ್ರಾಯಪಡುತ್ತಾರೆ.

ಇದುವರೆಗೆ ಈ ತಂತ್ರಜ್ಞಾನದಿಂದ 54 ಜನರಲ್ಲಿ 27 ಜನರು ಕೋವಿಡ್‌ ಸೋಂಕಿಗೆ ಒಳಗಾಗಿರುವುದನ್ನು ಪತ್ತೆ ಹಚ್ಚಲಾಗಿದೆ. ವ್ಯಕ್ತಿಗಳು ಸೋಂಕು ಲಕ್ಷಣ ಹೊಂದಿರದಿದ್ದರೂ ಈ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿದ್ದೇವೆ. ಸಾಕ್ಸ್‌ ಸೇರಿದಂತೆ ವಿವಿಧ ಸೂಕ್ಷ್ಮಾತಿ ಸೂಕ್ಷ್ಮ ವಾಸನೆಯನ್ನು ಉಪಕರಣ ಗುರುತಿಸಿ ಕೊರೋನಾ ಸೋಂಕು ಇರುವುದನ್ನು ಪತ್ತೆಹಚ್ಚಿದೆ.  ನಾವು ಆರಂಭದಲ್ಲಿ ಕೋವಿಡ್‌ ಸೋಂಕಿತರಲ್ಲಿ ವಿಭಿನ್ನವಾದ ವಾಸನೆಯೊಂದು ಇರುವುದನ್ನು ಮತ್ತು ಸೋಂಕು ಇಲ್ಲದಿರುವವರಲ್ಲಿ ಅಂತಹ ಯಾವುದೇ ವಾಸನೆ ಇಲ್ಲದಿರುವುದನ್ನು ಕಂಡುಕೊಂಡೆವು. ನಮ್ಮ ಅಧ್ಯಯನವು ಈ ಸೂಕ್ಷ್ಮ ವಾಸನೆಯನ್ನು ಗ್ರಹಿಸುವ ಸೆನ್ಸರ್‌ ಒಂದನ್ನು ರೂಪಿಸುವ ಪ್ರಯತ್ನಕ್ಕೆ ತೊಡಗಿದೆವು. ಅದು ಯಶಸ್ವಿಯಾಗಿದೆ. ಬೇರೆ ಎಲ್ಲಾ ರೀತಿಯ ಟೆಸ್ಟಿಂಗ್‌ ವಿಧಾನಗಳಿಗಿಂತ ನಮ್ಮ ಕೋವಿಡ್‌ ಅಲಾರಾಮ್‌ ಟೆಸ್ಟಿಂಗ್‌ ವಿಧಾನವು  ನಿಖರವಾಗಿರುವುದು ಕಂಡುಬಂದಿದೆ. 100%  ಸರಿಯಾದ ಫಲಿತಾಂಶವನ್ನು ನಾವು ಪಡೆದಿದ್ದೇವೆ ಎಂದು ರೋಬೋಸೈಂಟಿಫಿಕ್‌ ಸಂಸ್ಥೆಯು ಹೇಳಿದೆ.

ರೋಬೋ ಸೌಂಟಿಫಿಕ್‌ ಸಂಸ್ಥೆಯು ಈ ತಂತ್ರಜ್ಞಾನದ ಸಹಾಯದಿಂದ ಎರಡು ರೀತಿಯ ಉಪಕರಣವನ್ನು ತಯಾರಿಸಲು ಹೊರಟಿದೆ. ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸಣ್ಣ ಉಪಕರಣ. ಮತ್ತೊಂದು ಕೋಣೆಯಲ್ಲಿ ಅಳವಡಿಸಬಹುದಾದ ಟೆಸ್ಟಿಂಗ್‌ ಉಪಕರಣ. ಈ ಉಪಕರಣಗಳನ್ನು ಹೆಚ್ಚಾಗಿ ಸ್ಕೂಲ್‌, ವಿಮಾನಗಳು, ಸರ್ಕಾರಿ ಬಸ್‌ಗಳು, ಕಚೇರಿಗಳು, ಕಂಪನಿಗಳು ಸೇರಿ ಹಲವುಕಡೆ ಪರಿಣಾಮಕಾರಿಯಾಗಿ ಕೊರೋನಾ ಟೆಸ್ಟ್‌ಗೆ ಬಳಸಿಕೊಳ್ಳಬಹುದು ಎಂದು ಕಂಪನಿಯು ತಿಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಈ ಉಪಕರಣಗಳಿಂದ ಅತ್ಯಂತ ಸುಲಭವಾಗಿ ಕೊರೋನಾ ಪರೀಕ್ಷೆಯನ್ನು ನಡೆಸಬಹುದಾಗಿದೆ. ಆಟೋಮೇಟಿಕ್‌ ತಂತ್ರಜ್ಞಾನವಾಗಿರುವುದರಿಂದ ಕೊರೋನಾ ಟೆಸ್ಟಿಂಗ್‌ ನಡೆಸಲು ಹೆಚ್ಚಿನ ಜನರ ಅವಶ್ಯಕತೆಯೂ ಇಲ್ಲ. ಜನರು ಸ್ವಯೋ ಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಿ ತಮಗೆ ತಾವೇ ಫಲಿತಾಂಶವನ್ನು ತಿಳಿದುಕೊಳ್ಳುವ ವ್ಯವಸ್ಥೆ ಇದಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿತರನ್ನು ಪತ್ತೆಹಚ್ಚಿ ಅಲಾರ್ಮ್‌ ನೀಡಲು ಈ ಉಪಕರಣ ಅತ್ಯಂತ ಸಹಾಯಕಾರಿಯಾಗಲಿದೆ ಎಂದು ರೋಬೋ ಸೈಂಟಿಫಿಕ್‌ ಸಂಸ್ಥೆ ಮಾಹಿತಿ ನೀಡಿದೆ.

ಒಟ್ಟಿನಲ್‌ ಕೊರೋನಾ ಟೆಸ್ಟಿಂಗ್‌ ಕೂಡ ಅತ್ಯಂತ ಅಪಾಯಕಾರಿ ಕೆಲಸವಾಗಿರುವ ನಮ್ಮ ದೇಶದಲ್ಲಿ ಇಂತಹ ಆಟೋಮ್ಯಾಟಿಕ್‌ ಉಪಕರಣಗಳ ಅವಶ್ಯಕತೆ ಇದೆ. ಟೆಸ್ಟಿಂಗ್‌ ಕೂಡ ಸಾಧ್ಯವಿಲ್ಲದಷ್ಟು ಬೃಹತ್‌ ಜನಸಂಖ್ಯೆಯ ಭಾರತದಲ್ಲಿ ಇಂತಹ ಸ್ವಯಂಚಾಲಿತ ತಂತ್ರಜ್ಞಾನ ವ್ಯವಸ್ಥೆಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ. ಆದರೆ ಈ ಕೋವಿಡ್‌ ಅಲಾರಾಮ್‌ ತಂತ್ರಜ್ಞಾನ ಬ್ರಿಟನ್‌ನಲ್ಲಿ ಅಭಿವೃದ್ಧಿಗೊಂಡು ಭಾರತಕ್ಕೆ ಬರಲು ಎಷ್ಟು ಕಾಲ ಬೇಕಾಗಬಹದು ಎಂಬುದು  ತಿಳಿದಿಲ್ಲ.


ಇದನ್ನೂ ಓದಿ :ಎಲ್‌‌ಜೆಪಿಯಲ್ಲಿ ಬಂಡಾಯ; ಸೇಡು ತೀರಿಸುತ್ತಿದ್ದಾರೆಯೆ ನಿತೀಶ್ ಕುಮಾರ್‌?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...