Homeಅಂಕಣಗಳುಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

ಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು -15

ಕಾಫಿ ನಾಡಿನಲ್ಲಿ ಹೆಚ್ಚಿನ ಎಲ್ಲಾ ಪ್ಲಾಂಟೇಷನ್‌ಗಳೂ ಬ್ರಿಟಿಷರಿಂದ ಪ್ರಾರಂಭವಾದವುಗಳು. ಎಲ್ಲಾ ಜನರಲ್ಲಿ ಇರುವಂತೆ ಅವರಲ್ಲಿಯೂ ಕೆಟ್ಟವರೂ ಇದ್ದರು, ಒಳ್ಳೆಯವರೂ ಇದ್ದರು. ಆದರೆ ಅವರೆಲ್ಲರಲ್ಲಿ ಒಂದು ಸಾಮಾನ್ಯವಾದ ಗುಣವಿತ್ತು. ಕೆಟ್ಟದ್ದಾಗಲೀ ಒಳ್ಳೆಯದಾಗಲೀ, ಹೆಚ್ಚಿನವರು ಶಿಸ್ತಿನವರು ಮತ್ತು ದೂರ ದೃಷ್ಟಿಯುಳ್ಳವರು. ಅವರು ಕಾಫಿ ತೋಟಗಳನ್ನು ಮಾಡಿದ್ದು ಅದು ರೊಬಸ್ಟವಿರಲಿ, ಅರೇಬಿಕಾ ಇರಲಿ ಅದು ಯಾವ ಪ್ರದೇಶಕ್ಕೆ ಮತ್ತು ಹವಾಗುಣಕ್ಕೆ ಯಾವುದು ಸೂಕ್ತವೋ ಅಲ್ಲಲ್ಲಿಗೆ ಅದನ್ನು ಬಳಸಿದರು. ತೋಟಮಾಡುವಾಗ ಅತ್ಯುತ್ತಮ ನೆಲವನ್ನು ಹುಡಕಿ ಅಲ್ಲಿಯೇ ಮಾಡಿದರು. ತೋಟದ ಬಂಗಲೆಗಳಿರಲಿ, ಇತರ ಯಾವುದೇ ಕಟ್ಟಡಗಳಿರಲಿ ಹೆಚ್ಚಾಗಿ ಎತ್ತರದ ಸ್ಥಳಗಳಲ್ಲಿ ಭವ್ಯವಾಗಿ ಕಟ್ಟಿದರು. ಅಷ್ಟೇ ಸಾಹಸಿಗಳೂ ಕೂಡಾ. ಸ್ಥಳೀಯರ ಜೊತೆ ಶಿಕಾರಿಗೆ ಹೋಗುತ್ತಿದ್ದವರ ಕತೆಗಳು ಹಲವಾರು ಅಂದಿನ ಹಿರಿಯರಲ್ಲಿ ಬಾಯಿಪಾಠವಾಗಿರುತ್ತಿದ್ದವು.

ಕೊಡಗಿನಲ್ಲಿ ಎಡ್ವರ್ಡ್ ಚಾರ್ಲ್ಸ್ ವೈಟ್, ಸಿ.ಎಲ್.ಜೆ ಹಂಫ್ರಿಸ್, ಐವರ್ ಬುಲ್, ಜೆ.ಹೆಚ್. ಸ್ಪ್ರಾಟ್, ಜೆ.ಹೆಚ್.ಎಸ್ ಮೋರ್ಗನ್,  ಇ.ಆರ್. ವಾಕರ್ ಮುಂತಾದ ಬ್ರಿಟಿಷ್ ಪ್ಲಾಂಟರುಗಳಿದ್ದರೆ, ಮಂಜ್ರಾಬಾದ್ ವಲಯದಲ್ಲಿ ಕ್ರಾಫರ್ಡ್ ಸಹೋದರರು, ಆರ್.ಜಿ ಫಾಸ್ಟರ್. ಆಟ್ಟರ್, ಆರ್.ಹೆಚ್ ಎಲಿಯಟ್. ಇ.ಹೆಚ್.ಯಂಗ್, ಅಟ್ಲೀ, ಮಿಡ್ಲ್ ಟನ್ ಅವರುಗಳಿದ್ದರು.

ಬ್ರಿಟಿಷ್ ಪ್ಲಾಂಟರುಗಳ ಬಗ್ಗೆಯೇ ಒಂದು ಮಹಾನ್ ಗ್ರಂಥ ರಚಿಸುವಷ್ಟು ಕತೆಗಳು, ದಂತಕಥೆಗಳೂ ಮಲೆನಾಡಿನ ತುಂಬ ಹರಿದಾಡುತ್ತಿದ್ದವು. ಅದರಲ್ಲಿ ನಾನಾ ಬಗೆಯ ಕಥೆಗಳಿವೆ.

ಕರ್ನಲ್ ಕ್ರಾಫರ್ಡ್ಒಬ್ಬ ಬ್ರಿಟಿಷ್ ಪ್ಲಾಂಟರ್, ಸೋಮವಾರಪೇಟೆಯ ಬಳಿಯವನು. ಯಾರಾದರೂ ಬೇರೆ ಕೃಷಿಕರ ದನಗಳು ಈತನ ತೋಟಕ್ಕೆ ಬಂದರೆ ಅದನ್ನು ಕಟ್ಟಿ ಹಾಕುತ್ತಿದ್ದ. ಅದನ್ನು ಹುಡುಕಿಕೊಂಡು ಅದರ ಮಾಲಿಕ ಬಂದರೆ ಆತನನ್ನು ಹಿಡಿಸಿ ಕೊಟ್ಟಿಗೆಯಲ್ಲಿ ಅವನ ದನದ ಪಕ್ಕದಲ್ಲೇ ಕಟ್ಟಿ ಅವನ ಮುಂದೆ ಹುಲ್ಲು ನೀರು ಇಡುತ್ತಿದ್ದನಂತೆ. ಸಂಜೆಯವರೆಗೂ ಹಾಗೇ ಕಟ್ಟಿಹಾಕಿ ನಂತರ ಅವನನ್ನೂ ದನವನ್ನೂ ಬಿಟ್ಟು ಕಳುಹಿಸುತ್ತಿದ್ದನಂತೆ!

ರಕ್ಷಿದಿ ಎಸ್ಟೇಟಿನ ಅಟ್ಳಿ ಸಾಹೇಬರದು ಇನ್ನೊಂದು ಕಥೆ. ಮಿಲಿಟರಿ ಅಧಿಕಾರಿಯಾಗಿದ್ದ ಅಟ್ಲಿ ನಂತರ ರಕ್ಷಿದಿಯಲ್ಲಿ ಕಾಫಿ ತೋಟವನ್ನು ಮಾಡಿದರು. ರಕ್ಷಿದಿ ಊರಿನ ಪಕ್ಕದಲ್ಲೇ ಇದ್ದ ಇವರ ತೋಟ ಕ್ಯಾಮನಹಳ್ಳಿ ಕಂದಾಯ ಗ್ರಾಮಕ್ಕೇ ಸೇರಿತ್ತು. ಈ ಅಟ್ಳೀ ಸಾಹೇಬರಿಗೂ ಕ್ಯಾಮನಹಳ್ಳಿ ಗ್ರಾಮಸ್ಥರಿಗೂ ಒಂದು ಶಿಕಾರಿಯ ಕಾರಣಕ್ಕೆ ಜಗಳ ಹುಟ್ಟಿಕೊಂಡಿತು. ಗ್ರಾಮಸ್ಥರು, “ನಾವು ಊರವರು, ನಮ್ಮ ಗ್ರಾಮದ ವಿಷಯದಲ್ಲಿ ನಮ್ಮ ತೀರ್ಮಾನವೇ ಅಂತಿಮ” ಎಂದರಂತೆ. ಇದರಿಂದ ಸಿಟ್ಟಿಗೆದ್ದ ಅಟ್ಲೀ ಸಾಹೇಬರು, ಒಂಬೈನೂರು ಎಕರೆಗಳಷ್ಟಿದ್ದ ತನ್ನ ರಕ್ಷಿದಿ ಎಸ್ಟೇಟನ್ನು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕ ಕಂದಾಯ ಗ್ರಾಮವಾಗಿ ಪರಿವರ್ತನೆ ಮಾಡಿಕೊಂಡರಂತೆ. ಹಾಗೆ ಅದು ರಕ್ಷಿದಿ ಕಂದಾಯ ಗ್ರಾಮವಾಗಿ ಕ್ಯಾಮನಹಳ್ಳಿಯಿಂದ ಬೇರೆಯಾಯಿತು. ಆದರೆ ಗೇರು ಹಣ್ಣಿನ ಬೀಜದಂತೆ ರಕ್ಷಿದಿ ಊರು ರಕ್ಷಿದಿ ಕಂದಾಯ ಗ್ರಾಮದಿಂದ ಹೊರಗೇ ಉಳಿಯಿತು!

ಇದಕ್ಕೆ ವ್ಯತಿರಿಕ್ತವಾಗಿ ಜನಪರನೂ ಜನಾನುರಾಗಿಯೂ ಆಗಿದ್ದಾತ ಕರ್ನಲ್ ಕ್ರಾಫರ್ಡ್. ಇವರಿಗೆ ಸಕಲೇಶಪುರದಲ್ಲಿ ತೋಟವಿತ್ತು. ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆ ಇವರ ಕೊಡುಗೆ. ಆ ಕಾಲದಲ್ಲೇ ಇದಕ್ಕೆ ಆತ ಮಾಡಿದ ಖರ್ಚು ಒಂದು ಲಕ್ಷದ ಹದಿನೇಳು ಸಾವಿರ ರೂಪಾಯಿ. ಭವ್ಯವಾದ ಕಟ್ಟಡ ಸಕಲೇಶಪುರ ನಗರದ ಮದ್ಯಭಾಗದಲ್ಲಿ ಎತ್ತರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ಇದೆ. ಈ ಕಟ್ಟಡದ ಮುಂಭಾಗದಲ್ಲಿ ಇದರ ಸೌಂದರ್ಯವನ್ನು ಕೆಡಿಸುವ ಯಾವುದೇ ಕಟ್ಟಡವನ್ನು ಕಟ್ಟಬಾರದೆಂದು ಅಂದೇ ಸರ್ಕಾರದ ಜೊತೆ ಕರಾರು ಮಾಡಿಕೊಂಡು ಕಟ್ಟಿದ್ದು ಕ್ರಾಫರ್ಡ್‌ನ ಸೌಂದರ್ಯ ಪ್ರಜ್ಞೆಗೂ ದೂರ ದೃಷ್ಟಿಗೂ ಸಾಕ್ಷಿ. ಈ ಆಸ್ಪತ್ರೆಯ ಉದ್ಘಾಟನೆ ಮೈಸೂರು ಮಹಾರಾಜರೇ ಬಂದಿದ್ದರು.

ಕರ್ನಲ್ ಕ್ರಾಫರ್ಡ್

ಶಿಕ್ಷಣ, ವೈದ್ಯಕೀಯ ಸೌಲಭ್ಯ, ಭೂಮಾಪನ, ಇತ್ಯಾದಿ ಹಲವಾರು ಕಾರ್ಯಗಳು ಇವರ ಕೊಡುಗೆ. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯನಾಗಿ, ರಾಜಸಭಾ ಭೂಷಣ ಎಂಬ ಗೌರವಕ್ಕೆ ಪಾತ್ರನಾಗಿದ್ದ. ಸಕಲೇಶಪುರದ ಮಹಿಳಾ ಸಮಾಜದ ಕ್ರಾಫರ್ಡ್ ವಿಂಗ್, ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್ ಮುಂತಾದ ಅನೇಕ ರಚನೆಗಳು ಕೂಡಾ ಇವರ ಕೊಡುಗೆ. ಸಕಲೇಶಪುರ ಮಂಜ್ರಾಬಾದ್ ಕ್ಲಬ್‌ನ ಅಧ್ಯಕ್ಷನಾಗಿ, ದಕ್ಷಿಣಭಾರತದ ಪ್ಲಾಂಟೇಷನ್ ಬೆಳೆಗಾರರ ಒಕ್ಕೂಟದ (UPASI)  ಉಪಾಧ್ಯಕ್ಷನೂ ಆಗಿದ್ದ ಕ್ರಾಫರ್ಡ್‌ಗೆ ಮಲೆನಾಡಿನ ಬಗ್ಗೆ ಅಪಾರ ಪ್ರೀತಿ. ಇಲ್ಲಿನ ದಟ್ಟ ಕಾನನದ ಪರಿಚಯ ಚೆನ್ನಾಗಿದ್ದ ಕ್ರಾಫರ್ಢ್ ಇದರ ಉಳಿವಿನ ಬಗ್ಗೆಯೂ ತುಂಬು ಕಾಳಜಿ ಇತ್ತು. ಇಲ್ಲಿನ ಬೆಟ್ಟಗಳಲ್ಲಿ ಕುದುರೆಯನ್ನೇರಿ ತಿರುಗುತ್ತಿದ್ದ. ಅವೆಲ್ಲ ಈಗ ಕ್ರಾಫರ್ಡ್ ದಾರಿಗಳೆಂದು ಕರೆಯಲ್ಪಡುತ್ತಿವೆ.

ಸಕಲೇಶಪುರದ ಕ್ರಾಫರ್ಡ್ ‌ಆಸ್ಪತ್ರೆ ಆ ಕಾಲದಲ್ಲೇ ಶಿಕಾರಿಯನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನ ಪಟ್ಟು ಹಲವರ ವಿರೋಧದಿಂದ ಅದು ಸಾದ್ಯವಾಗದೆ ಕೊನೆಗೆ ಹೆಣ್ಣು ಜಿಂಕೆಯನ್ನು ಕೊಲ್ಲಬಾರದು ಎಂದು ಕಾನೂನು ಹೊರಡಿಸಲಷ್ಟೇ ಶಕ್ತನಾದ.

ಬಾಳೆಹೊನ್ನೂರಿನಲ್ಲಿರುವ ಕಾಫಿ ಸಂಶೋಧನಾ ಕೇಂದ್ರಕ್ಕೂ ಪ್ರಾರಂಭದಲ್ಲಿ ಸ್ಥಳದಾನ ಮಾಡಿದವರು ಕೂಡಾ ಇವರೇ.

“ಇಂಡಿಯಾದ ಮಲೆನಾಡು ಬಹು ಸುಂದರವಾದುದು. ಇಲ್ಲಿಯ ಜನ  ಸೌಜನ್ಯಶೀಲರು, ಗೌರವವಂತರು, ನಮ್ಮನ್ನೆಂದೂ ವಿದೇಶೀಯರೆಂದು ನೋಡಲಿಲ್ಲ. ಮೋಸ ಮಾಡಲಿಲ್ಲ, ಜಗಳ ತೆಗೆಯಲಿಲ್ಲ” ಎಂದು ಅವರು ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ”.

ತನ್ನ ತೋಟದ ಕೆಲಸಗಾರರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದ ಕ್ರಾಫರ್ಡ್, ಜನರಿಗೆ ಕುಡಿಯಲು ಶುದ್ಧ ನೀರು, ಒಳ್ಳೆಯ ವಸತಿ ಮತ್ತು ಕಾಲ ಕಾಲಕ್ಕೆ ವೈದ್ಯಕೀಯ ಸೌಲಭ್ಯ ನೀಡಲು ಪ್ರಾಮುಖ್ಯತೆ ನೀಡುತ್ತಿದ್ದರು. ಇವೆಲ್ಲ ಕಾರಣಗಳಿಂದ ಕರ್ನಾಟಕದ ಕಾಫಿ ವಲಯದಲ್ಲಿ ಕ್ರಾಫರ್ಡ್‌ರ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವ ಇದೆ.

ಕ್ರಾಫರ್ಡ್‌ನ ವಂಶಸ್ಥರು ಊಟಿಯಲ್ಲಿ ನೆಲೆಸಿದ್ದು ವರ್ಷಕ್ಕೊಮ್ಮೆ ಸಕಲೇಶಪುರದ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.

ಕ್ರಾಫರ್ಡ್ ಆಸ್ಪತ್ರೆಯಲ್ಲಿ ಒಂದು ವಾರ್ಡನ್ನು ಗಣಪಯ್ಯನವರು ಕಟ್ಟಿಸಿಕೊಟ್ಟರು. ಹಾಗೂ ಒಳಾಂಗಣದಲ್ಲಿ ಉದ್ಯಾನವನ್ನು ನಿರ್ಮಿಸಿ ಮದ್ಯದಲ್ಲಿ ಒಂದು ಚಿಲುಮೆಯನ್ನು ನಿರ್ಮಾಣ ಮಾಡಿಸಿದ್ದರು.

ಉದ್ಯಾನದ ನಡುವೆ ಗಣಪಯ್ಯನವರ ಹೆಸರು ಕಿತ್ತು ಹೋಗಿರುವುದು

ಇನ್ನೊಂದು ವಾರ್ಡನ್ನು ಸಕಲೇಶಪುರದಲ್ಲಿ ಶಾಪ್ ಸಿದ್ದೇಗೌಡ ಕಟ್ಟಿಸಿದ. ಪ್ರಾಥಮಿಕ ಶಾಲೆ, ಶಾಪ್ ಬಸಪ್ಪ ಪಶು ಆಸ್ಪತ್ರೆ ಮುಂತಾದವುಗಳನ್ನು ಅನೇಕ ಜನಪರ ಕೆಲಸಗಳನ್ನು ಮಾಡಿರುವ ಶಾಪ್ ಸಿದ್ದೇಗೌಡರ ಕುಟುಂಬ ವರ್ಗದವರು ಕಟ್ಟಿಸಿದ್ದರು. ಈಗ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಆಗಲೀ ಉದ್ಯಾನದಲ್ಲಾಗಲೀ ದಾನಿಗಳ ಹೆಸರೇ ನಾಪತ್ತೆಯಾಗಿದೆ. ಕಟ್ಟಡದ ಮೇಲೆ ಕ್ರಾಫರ್ಡ್‌ರ ಹೆಸರು ಹೇಗೋ ಉಳಿದುಕೊಂಡಿದೆ.

ಸಕಲೇಶಪುರದ ಇನ್ನೊಬ್ಬ ಪ್ಲಾಂಟರ್ “ಇ.ಹೆಚ್. ಯಂಗ್ಸ್” ಎಂಬವರು ಕಟ್ಟಿಸಿದ ಸರ್ಕಾರಿ ಪ್ರೌಢಶಾಲೆಯಿದೆ. ಅದು ಸಕಲೇಶಪುರದ ಮಂಜ್ರಾಬಾದ್ ಕ್ಲಬ್ಬಿನ ಪಶ್ಚಿಮಕ್ಕೆ, ಹತ್ತಿರದಲ್ಲೇ ಹೆದ್ದಾರಿಯ ಪಕ್ಕದಲ್ಲಿಯೇ ಇದೆ. ಅದೊಂದು ಸುಂದರ ಕಟ್ಟಡ. ಅದರ ಮುಂಭಾಗದಲ್ಲಿ ಯಂಗ್ಸ್ ಹೆಸರು ಕೆತ್ತಲ್ಪಟ್ಟಿತ್ತು. ಆತನ ಹೆಸರನ್ನು ಒಮ್ಮೆ  ಕಟ್ಟಡದಿಂದ ತೆಗೆದು ಹಾಕಿದ್ದರು. ಜನರ ವಿರೋಧದ ನಂತರ ಅದನ್ನು ಮತ್ತೆ ಬರೆಸಲಾಯಿತು.

ಉದ್ಯಾನದ ನಡುವೆ ಗಣಪಯ್ಯನವರ ಹೆಸರು ಕಿತ್ತು ಹೋಗಿರುವುದುಇನ್ನೊಬ್ಬ ಜನಾನುರಾಗಿ ಹಾಗೂ ಅದ್ಭುತ ವ್ಯಕ್ತಿ ಬ್ರಿಟಿಷ್ ಅಧಿಕಾರಿ ರ್ಯಾಡ್ ಕ್ಲಿಫ್. ಇವರು ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟದ (UPASI) ಕಾರ್ಯದರ್ಶಿಯಾಗಿ ಒಳ್ಳೆಯ ಕೆಲಸವನ್ನು ಮಾಡಿ ಹೆಸರು ಗಳಿಸಿದವರು. ಇವರು ಕೂಡಾ ಸಕಲೇಶಪುರದ ನಿವಾಸಿ. ಹಾಸನ ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ  7.ಕಿ.ಮೀ ದೂರದ ಹೊಸ್ಸೂರ್ ಎಸ್ಟೇಟ್ ಬಳಿ ಹೆದ್ದಾರಿ ಪಕ್ಕದಲ್ಲೇ ಪ್ರವಾಸಿಗರು ರ್ಯಾಡ್ ಕ್ಲಿಫ್ ಬಂಗಲೆಯನ್ನು ಕಾಣಬಹುದು.

ಕಾರ್ಮಿಕರ ಹಿತ ರಕ್ಷಣೆ ಮತ್ತು ಸುಧಾರಣೆಯಲ್ಲಿ ರ್ಯಾಡ್ ಕ್ಲಿಫ್‌ರ ಕೊಡುಗೆ ದೊಡ್ಡದು.

ರ್ಯಾಡ್ ಕ್ಲಿಪ್, ಕಾಫಿತೋಟಗಳಲ್ಲಿ ಕೆಲಸಗಾರರ ಕೂಲಿ ದಿನವೊಂದಕ್ಕೆ ಒಂದೂವರೆ ಆಣೆ ಇದ್ದಾಗ, ಅಂದರೆ 60 ವರ್ಷಗಳ ಹಿಂದೆ  “2000 ಇಸವಿಯ ವೇಳೆಗೆ ಒಬ್ಬನ ದಿನಗೂಲಿ ನೂರು ರುಪಾಯಿ ಆಗಲಿದೆ ಎಂದರು!” ಆಗ ನೂರು ರೂಪಾಯಿಗೆ ಹತ್ತು ಎಕರೆ ಜಮೀನು ಸಿಗುತ್ತಿತ್ತು. ಜನರು ರ್ಯಾಡ್ ಕ್ಲಿಫ್‌ನಿಗೆ ತಲೆ ಕೆಟ್ಟಿದೆ ಎಂದರು.

ಆದರೆ ಆತ ಹೇಳಿದ ವಾಯಿದೆಗಿಂತ ಒಂದು ವರ್ಷ ಮೊದಲೇ 1999ರಲ್ಲಿ ದಿನಗೂಲಿ ನೂರು ರೂ ಆಯಿತು!

ರ್ಯಾಡ್ ಕ್ಲಿಫ್ ಹಲವು ವರ್ಷಗಳ ಮುಂದಿನದನ್ನು ತರ್ಕಬದ್ಧವಾಗಿ ಕಾಣಬಲ್ಲವನಾಗಿದ್ದರು.

  • ಪ್ರಸಾದ್ ರಕ್ಷಿದಿ
ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ಕೃಷಿಯಿಂದಾಗಿ ಕೋಟಿಗಟ್ಟಲೆ ಟನ್ ಮಣ್ಣು ಅರಬ್ಬೀ ಸಮುದ್ರ ಸೇರ್ತಾ ಇದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...