Homeಅಂಕಣಗಳುಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

ಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು -15

ಕಾಫಿ ನಾಡಿನಲ್ಲಿ ಹೆಚ್ಚಿನ ಎಲ್ಲಾ ಪ್ಲಾಂಟೇಷನ್‌ಗಳೂ ಬ್ರಿಟಿಷರಿಂದ ಪ್ರಾರಂಭವಾದವುಗಳು. ಎಲ್ಲಾ ಜನರಲ್ಲಿ ಇರುವಂತೆ ಅವರಲ್ಲಿಯೂ ಕೆಟ್ಟವರೂ ಇದ್ದರು, ಒಳ್ಳೆಯವರೂ ಇದ್ದರು. ಆದರೆ ಅವರೆಲ್ಲರಲ್ಲಿ ಒಂದು ಸಾಮಾನ್ಯವಾದ ಗುಣವಿತ್ತು. ಕೆಟ್ಟದ್ದಾಗಲೀ ಒಳ್ಳೆಯದಾಗಲೀ, ಹೆಚ್ಚಿನವರು ಶಿಸ್ತಿನವರು ಮತ್ತು ದೂರ ದೃಷ್ಟಿಯುಳ್ಳವರು. ಅವರು ಕಾಫಿ ತೋಟಗಳನ್ನು ಮಾಡಿದ್ದು ಅದು ರೊಬಸ್ಟವಿರಲಿ, ಅರೇಬಿಕಾ ಇರಲಿ ಅದು ಯಾವ ಪ್ರದೇಶಕ್ಕೆ ಮತ್ತು ಹವಾಗುಣಕ್ಕೆ ಯಾವುದು ಸೂಕ್ತವೋ ಅಲ್ಲಲ್ಲಿಗೆ ಅದನ್ನು ಬಳಸಿದರು. ತೋಟಮಾಡುವಾಗ ಅತ್ಯುತ್ತಮ ನೆಲವನ್ನು ಹುಡಕಿ ಅಲ್ಲಿಯೇ ಮಾಡಿದರು. ತೋಟದ ಬಂಗಲೆಗಳಿರಲಿ, ಇತರ ಯಾವುದೇ ಕಟ್ಟಡಗಳಿರಲಿ ಹೆಚ್ಚಾಗಿ ಎತ್ತರದ ಸ್ಥಳಗಳಲ್ಲಿ ಭವ್ಯವಾಗಿ ಕಟ್ಟಿದರು. ಅಷ್ಟೇ ಸಾಹಸಿಗಳೂ ಕೂಡಾ. ಸ್ಥಳೀಯರ ಜೊತೆ ಶಿಕಾರಿಗೆ ಹೋಗುತ್ತಿದ್ದವರ ಕತೆಗಳು ಹಲವಾರು ಅಂದಿನ ಹಿರಿಯರಲ್ಲಿ ಬಾಯಿಪಾಠವಾಗಿರುತ್ತಿದ್ದವು.

ಕೊಡಗಿನಲ್ಲಿ ಎಡ್ವರ್ಡ್ ಚಾರ್ಲ್ಸ್ ವೈಟ್, ಸಿ.ಎಲ್.ಜೆ ಹಂಫ್ರಿಸ್, ಐವರ್ ಬುಲ್, ಜೆ.ಹೆಚ್. ಸ್ಪ್ರಾಟ್, ಜೆ.ಹೆಚ್.ಎಸ್ ಮೋರ್ಗನ್,  ಇ.ಆರ್. ವಾಕರ್ ಮುಂತಾದ ಬ್ರಿಟಿಷ್ ಪ್ಲಾಂಟರುಗಳಿದ್ದರೆ, ಮಂಜ್ರಾಬಾದ್ ವಲಯದಲ್ಲಿ ಕ್ರಾಫರ್ಡ್ ಸಹೋದರರು, ಆರ್.ಜಿ ಫಾಸ್ಟರ್. ಆಟ್ಟರ್, ಆರ್.ಹೆಚ್ ಎಲಿಯಟ್. ಇ.ಹೆಚ್.ಯಂಗ್, ಅಟ್ಲೀ, ಮಿಡ್ಲ್ ಟನ್ ಅವರುಗಳಿದ್ದರು.

ಬ್ರಿಟಿಷ್ ಪ್ಲಾಂಟರುಗಳ ಬಗ್ಗೆಯೇ ಒಂದು ಮಹಾನ್ ಗ್ರಂಥ ರಚಿಸುವಷ್ಟು ಕತೆಗಳು, ದಂತಕಥೆಗಳೂ ಮಲೆನಾಡಿನ ತುಂಬ ಹರಿದಾಡುತ್ತಿದ್ದವು. ಅದರಲ್ಲಿ ನಾನಾ ಬಗೆಯ ಕಥೆಗಳಿವೆ.

ಕರ್ನಲ್ ಕ್ರಾಫರ್ಡ್ಒಬ್ಬ ಬ್ರಿಟಿಷ್ ಪ್ಲಾಂಟರ್, ಸೋಮವಾರಪೇಟೆಯ ಬಳಿಯವನು. ಯಾರಾದರೂ ಬೇರೆ ಕೃಷಿಕರ ದನಗಳು ಈತನ ತೋಟಕ್ಕೆ ಬಂದರೆ ಅದನ್ನು ಕಟ್ಟಿ ಹಾಕುತ್ತಿದ್ದ. ಅದನ್ನು ಹುಡುಕಿಕೊಂಡು ಅದರ ಮಾಲಿಕ ಬಂದರೆ ಆತನನ್ನು ಹಿಡಿಸಿ ಕೊಟ್ಟಿಗೆಯಲ್ಲಿ ಅವನ ದನದ ಪಕ್ಕದಲ್ಲೇ ಕಟ್ಟಿ ಅವನ ಮುಂದೆ ಹುಲ್ಲು ನೀರು ಇಡುತ್ತಿದ್ದನಂತೆ. ಸಂಜೆಯವರೆಗೂ ಹಾಗೇ ಕಟ್ಟಿಹಾಕಿ ನಂತರ ಅವನನ್ನೂ ದನವನ್ನೂ ಬಿಟ್ಟು ಕಳುಹಿಸುತ್ತಿದ್ದನಂತೆ!

ರಕ್ಷಿದಿ ಎಸ್ಟೇಟಿನ ಅಟ್ಳಿ ಸಾಹೇಬರದು ಇನ್ನೊಂದು ಕಥೆ. ಮಿಲಿಟರಿ ಅಧಿಕಾರಿಯಾಗಿದ್ದ ಅಟ್ಲಿ ನಂತರ ರಕ್ಷಿದಿಯಲ್ಲಿ ಕಾಫಿ ತೋಟವನ್ನು ಮಾಡಿದರು. ರಕ್ಷಿದಿ ಊರಿನ ಪಕ್ಕದಲ್ಲೇ ಇದ್ದ ಇವರ ತೋಟ ಕ್ಯಾಮನಹಳ್ಳಿ ಕಂದಾಯ ಗ್ರಾಮಕ್ಕೇ ಸೇರಿತ್ತು. ಈ ಅಟ್ಳೀ ಸಾಹೇಬರಿಗೂ ಕ್ಯಾಮನಹಳ್ಳಿ ಗ್ರಾಮಸ್ಥರಿಗೂ ಒಂದು ಶಿಕಾರಿಯ ಕಾರಣಕ್ಕೆ ಜಗಳ ಹುಟ್ಟಿಕೊಂಡಿತು. ಗ್ರಾಮಸ್ಥರು, “ನಾವು ಊರವರು, ನಮ್ಮ ಗ್ರಾಮದ ವಿಷಯದಲ್ಲಿ ನಮ್ಮ ತೀರ್ಮಾನವೇ ಅಂತಿಮ” ಎಂದರಂತೆ. ಇದರಿಂದ ಸಿಟ್ಟಿಗೆದ್ದ ಅಟ್ಲೀ ಸಾಹೇಬರು, ಒಂಬೈನೂರು ಎಕರೆಗಳಷ್ಟಿದ್ದ ತನ್ನ ರಕ್ಷಿದಿ ಎಸ್ಟೇಟನ್ನು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕ ಕಂದಾಯ ಗ್ರಾಮವಾಗಿ ಪರಿವರ್ತನೆ ಮಾಡಿಕೊಂಡರಂತೆ. ಹಾಗೆ ಅದು ರಕ್ಷಿದಿ ಕಂದಾಯ ಗ್ರಾಮವಾಗಿ ಕ್ಯಾಮನಹಳ್ಳಿಯಿಂದ ಬೇರೆಯಾಯಿತು. ಆದರೆ ಗೇರು ಹಣ್ಣಿನ ಬೀಜದಂತೆ ರಕ್ಷಿದಿ ಊರು ರಕ್ಷಿದಿ ಕಂದಾಯ ಗ್ರಾಮದಿಂದ ಹೊರಗೇ ಉಳಿಯಿತು!

ಇದಕ್ಕೆ ವ್ಯತಿರಿಕ್ತವಾಗಿ ಜನಪರನೂ ಜನಾನುರಾಗಿಯೂ ಆಗಿದ್ದಾತ ಕರ್ನಲ್ ಕ್ರಾಫರ್ಡ್. ಇವರಿಗೆ ಸಕಲೇಶಪುರದಲ್ಲಿ ತೋಟವಿತ್ತು. ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆ ಇವರ ಕೊಡುಗೆ. ಆ ಕಾಲದಲ್ಲೇ ಇದಕ್ಕೆ ಆತ ಮಾಡಿದ ಖರ್ಚು ಒಂದು ಲಕ್ಷದ ಹದಿನೇಳು ಸಾವಿರ ರೂಪಾಯಿ. ಭವ್ಯವಾದ ಕಟ್ಟಡ ಸಕಲೇಶಪುರ ನಗರದ ಮದ್ಯಭಾಗದಲ್ಲಿ ಎತ್ತರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ಇದೆ. ಈ ಕಟ್ಟಡದ ಮುಂಭಾಗದಲ್ಲಿ ಇದರ ಸೌಂದರ್ಯವನ್ನು ಕೆಡಿಸುವ ಯಾವುದೇ ಕಟ್ಟಡವನ್ನು ಕಟ್ಟಬಾರದೆಂದು ಅಂದೇ ಸರ್ಕಾರದ ಜೊತೆ ಕರಾರು ಮಾಡಿಕೊಂಡು ಕಟ್ಟಿದ್ದು ಕ್ರಾಫರ್ಡ್‌ನ ಸೌಂದರ್ಯ ಪ್ರಜ್ಞೆಗೂ ದೂರ ದೃಷ್ಟಿಗೂ ಸಾಕ್ಷಿ. ಈ ಆಸ್ಪತ್ರೆಯ ಉದ್ಘಾಟನೆ ಮೈಸೂರು ಮಹಾರಾಜರೇ ಬಂದಿದ್ದರು.

ಕರ್ನಲ್ ಕ್ರಾಫರ್ಡ್

ಶಿಕ್ಷಣ, ವೈದ್ಯಕೀಯ ಸೌಲಭ್ಯ, ಭೂಮಾಪನ, ಇತ್ಯಾದಿ ಹಲವಾರು ಕಾರ್ಯಗಳು ಇವರ ಕೊಡುಗೆ. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯನಾಗಿ, ರಾಜಸಭಾ ಭೂಷಣ ಎಂಬ ಗೌರವಕ್ಕೆ ಪಾತ್ರನಾಗಿದ್ದ. ಸಕಲೇಶಪುರದ ಮಹಿಳಾ ಸಮಾಜದ ಕ್ರಾಫರ್ಡ್ ವಿಂಗ್, ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್ ಮುಂತಾದ ಅನೇಕ ರಚನೆಗಳು ಕೂಡಾ ಇವರ ಕೊಡುಗೆ. ಸಕಲೇಶಪುರ ಮಂಜ್ರಾಬಾದ್ ಕ್ಲಬ್‌ನ ಅಧ್ಯಕ್ಷನಾಗಿ, ದಕ್ಷಿಣಭಾರತದ ಪ್ಲಾಂಟೇಷನ್ ಬೆಳೆಗಾರರ ಒಕ್ಕೂಟದ (UPASI)  ಉಪಾಧ್ಯಕ್ಷನೂ ಆಗಿದ್ದ ಕ್ರಾಫರ್ಡ್‌ಗೆ ಮಲೆನಾಡಿನ ಬಗ್ಗೆ ಅಪಾರ ಪ್ರೀತಿ. ಇಲ್ಲಿನ ದಟ್ಟ ಕಾನನದ ಪರಿಚಯ ಚೆನ್ನಾಗಿದ್ದ ಕ್ರಾಫರ್ಢ್ ಇದರ ಉಳಿವಿನ ಬಗ್ಗೆಯೂ ತುಂಬು ಕಾಳಜಿ ಇತ್ತು. ಇಲ್ಲಿನ ಬೆಟ್ಟಗಳಲ್ಲಿ ಕುದುರೆಯನ್ನೇರಿ ತಿರುಗುತ್ತಿದ್ದ. ಅವೆಲ್ಲ ಈಗ ಕ್ರಾಫರ್ಡ್ ದಾರಿಗಳೆಂದು ಕರೆಯಲ್ಪಡುತ್ತಿವೆ.

ಸಕಲೇಶಪುರದ ಕ್ರಾಫರ್ಡ್ ‌ಆಸ್ಪತ್ರೆ ಆ ಕಾಲದಲ್ಲೇ ಶಿಕಾರಿಯನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನ ಪಟ್ಟು ಹಲವರ ವಿರೋಧದಿಂದ ಅದು ಸಾದ್ಯವಾಗದೆ ಕೊನೆಗೆ ಹೆಣ್ಣು ಜಿಂಕೆಯನ್ನು ಕೊಲ್ಲಬಾರದು ಎಂದು ಕಾನೂನು ಹೊರಡಿಸಲಷ್ಟೇ ಶಕ್ತನಾದ.

ಬಾಳೆಹೊನ್ನೂರಿನಲ್ಲಿರುವ ಕಾಫಿ ಸಂಶೋಧನಾ ಕೇಂದ್ರಕ್ಕೂ ಪ್ರಾರಂಭದಲ್ಲಿ ಸ್ಥಳದಾನ ಮಾಡಿದವರು ಕೂಡಾ ಇವರೇ.

“ಇಂಡಿಯಾದ ಮಲೆನಾಡು ಬಹು ಸುಂದರವಾದುದು. ಇಲ್ಲಿಯ ಜನ  ಸೌಜನ್ಯಶೀಲರು, ಗೌರವವಂತರು, ನಮ್ಮನ್ನೆಂದೂ ವಿದೇಶೀಯರೆಂದು ನೋಡಲಿಲ್ಲ. ಮೋಸ ಮಾಡಲಿಲ್ಲ, ಜಗಳ ತೆಗೆಯಲಿಲ್ಲ” ಎಂದು ಅವರು ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ”.

ತನ್ನ ತೋಟದ ಕೆಲಸಗಾರರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದ ಕ್ರಾಫರ್ಡ್, ಜನರಿಗೆ ಕುಡಿಯಲು ಶುದ್ಧ ನೀರು, ಒಳ್ಳೆಯ ವಸತಿ ಮತ್ತು ಕಾಲ ಕಾಲಕ್ಕೆ ವೈದ್ಯಕೀಯ ಸೌಲಭ್ಯ ನೀಡಲು ಪ್ರಾಮುಖ್ಯತೆ ನೀಡುತ್ತಿದ್ದರು. ಇವೆಲ್ಲ ಕಾರಣಗಳಿಂದ ಕರ್ನಾಟಕದ ಕಾಫಿ ವಲಯದಲ್ಲಿ ಕ್ರಾಫರ್ಡ್‌ರ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವ ಇದೆ.

ಕ್ರಾಫರ್ಡ್‌ನ ವಂಶಸ್ಥರು ಊಟಿಯಲ್ಲಿ ನೆಲೆಸಿದ್ದು ವರ್ಷಕ್ಕೊಮ್ಮೆ ಸಕಲೇಶಪುರದ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.

ಕ್ರಾಫರ್ಡ್ ಆಸ್ಪತ್ರೆಯಲ್ಲಿ ಒಂದು ವಾರ್ಡನ್ನು ಗಣಪಯ್ಯನವರು ಕಟ್ಟಿಸಿಕೊಟ್ಟರು. ಹಾಗೂ ಒಳಾಂಗಣದಲ್ಲಿ ಉದ್ಯಾನವನ್ನು ನಿರ್ಮಿಸಿ ಮದ್ಯದಲ್ಲಿ ಒಂದು ಚಿಲುಮೆಯನ್ನು ನಿರ್ಮಾಣ ಮಾಡಿಸಿದ್ದರು.

ಉದ್ಯಾನದ ನಡುವೆ ಗಣಪಯ್ಯನವರ ಹೆಸರು ಕಿತ್ತು ಹೋಗಿರುವುದು

ಇನ್ನೊಂದು ವಾರ್ಡನ್ನು ಸಕಲೇಶಪುರದಲ್ಲಿ ಶಾಪ್ ಸಿದ್ದೇಗೌಡ ಕಟ್ಟಿಸಿದ. ಪ್ರಾಥಮಿಕ ಶಾಲೆ, ಶಾಪ್ ಬಸಪ್ಪ ಪಶು ಆಸ್ಪತ್ರೆ ಮುಂತಾದವುಗಳನ್ನು ಅನೇಕ ಜನಪರ ಕೆಲಸಗಳನ್ನು ಮಾಡಿರುವ ಶಾಪ್ ಸಿದ್ದೇಗೌಡರ ಕುಟುಂಬ ವರ್ಗದವರು ಕಟ್ಟಿಸಿದ್ದರು. ಈಗ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಆಗಲೀ ಉದ್ಯಾನದಲ್ಲಾಗಲೀ ದಾನಿಗಳ ಹೆಸರೇ ನಾಪತ್ತೆಯಾಗಿದೆ. ಕಟ್ಟಡದ ಮೇಲೆ ಕ್ರಾಫರ್ಡ್‌ರ ಹೆಸರು ಹೇಗೋ ಉಳಿದುಕೊಂಡಿದೆ.

ಸಕಲೇಶಪುರದ ಇನ್ನೊಬ್ಬ ಪ್ಲಾಂಟರ್ “ಇ.ಹೆಚ್. ಯಂಗ್ಸ್” ಎಂಬವರು ಕಟ್ಟಿಸಿದ ಸರ್ಕಾರಿ ಪ್ರೌಢಶಾಲೆಯಿದೆ. ಅದು ಸಕಲೇಶಪುರದ ಮಂಜ್ರಾಬಾದ್ ಕ್ಲಬ್ಬಿನ ಪಶ್ಚಿಮಕ್ಕೆ, ಹತ್ತಿರದಲ್ಲೇ ಹೆದ್ದಾರಿಯ ಪಕ್ಕದಲ್ಲಿಯೇ ಇದೆ. ಅದೊಂದು ಸುಂದರ ಕಟ್ಟಡ. ಅದರ ಮುಂಭಾಗದಲ್ಲಿ ಯಂಗ್ಸ್ ಹೆಸರು ಕೆತ್ತಲ್ಪಟ್ಟಿತ್ತು. ಆತನ ಹೆಸರನ್ನು ಒಮ್ಮೆ  ಕಟ್ಟಡದಿಂದ ತೆಗೆದು ಹಾಕಿದ್ದರು. ಜನರ ವಿರೋಧದ ನಂತರ ಅದನ್ನು ಮತ್ತೆ ಬರೆಸಲಾಯಿತು.

ಉದ್ಯಾನದ ನಡುವೆ ಗಣಪಯ್ಯನವರ ಹೆಸರು ಕಿತ್ತು ಹೋಗಿರುವುದುಇನ್ನೊಬ್ಬ ಜನಾನುರಾಗಿ ಹಾಗೂ ಅದ್ಭುತ ವ್ಯಕ್ತಿ ಬ್ರಿಟಿಷ್ ಅಧಿಕಾರಿ ರ್ಯಾಡ್ ಕ್ಲಿಫ್. ಇವರು ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟದ (UPASI) ಕಾರ್ಯದರ್ಶಿಯಾಗಿ ಒಳ್ಳೆಯ ಕೆಲಸವನ್ನು ಮಾಡಿ ಹೆಸರು ಗಳಿಸಿದವರು. ಇವರು ಕೂಡಾ ಸಕಲೇಶಪುರದ ನಿವಾಸಿ. ಹಾಸನ ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ  7.ಕಿ.ಮೀ ದೂರದ ಹೊಸ್ಸೂರ್ ಎಸ್ಟೇಟ್ ಬಳಿ ಹೆದ್ದಾರಿ ಪಕ್ಕದಲ್ಲೇ ಪ್ರವಾಸಿಗರು ರ್ಯಾಡ್ ಕ್ಲಿಫ್ ಬಂಗಲೆಯನ್ನು ಕಾಣಬಹುದು.

ಕಾರ್ಮಿಕರ ಹಿತ ರಕ್ಷಣೆ ಮತ್ತು ಸುಧಾರಣೆಯಲ್ಲಿ ರ್ಯಾಡ್ ಕ್ಲಿಫ್‌ರ ಕೊಡುಗೆ ದೊಡ್ಡದು.

ರ್ಯಾಡ್ ಕ್ಲಿಪ್, ಕಾಫಿತೋಟಗಳಲ್ಲಿ ಕೆಲಸಗಾರರ ಕೂಲಿ ದಿನವೊಂದಕ್ಕೆ ಒಂದೂವರೆ ಆಣೆ ಇದ್ದಾಗ, ಅಂದರೆ 60 ವರ್ಷಗಳ ಹಿಂದೆ  “2000 ಇಸವಿಯ ವೇಳೆಗೆ ಒಬ್ಬನ ದಿನಗೂಲಿ ನೂರು ರುಪಾಯಿ ಆಗಲಿದೆ ಎಂದರು!” ಆಗ ನೂರು ರೂಪಾಯಿಗೆ ಹತ್ತು ಎಕರೆ ಜಮೀನು ಸಿಗುತ್ತಿತ್ತು. ಜನರು ರ್ಯಾಡ್ ಕ್ಲಿಫ್‌ನಿಗೆ ತಲೆ ಕೆಟ್ಟಿದೆ ಎಂದರು.

ಆದರೆ ಆತ ಹೇಳಿದ ವಾಯಿದೆಗಿಂತ ಒಂದು ವರ್ಷ ಮೊದಲೇ 1999ರಲ್ಲಿ ದಿನಗೂಲಿ ನೂರು ರೂ ಆಯಿತು!

ರ್ಯಾಡ್ ಕ್ಲಿಫ್ ಹಲವು ವರ್ಷಗಳ ಮುಂದಿನದನ್ನು ತರ್ಕಬದ್ಧವಾಗಿ ಕಾಣಬಲ್ಲವನಾಗಿದ್ದರು.

  • ಪ್ರಸಾದ್ ರಕ್ಷಿದಿ
ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ಕೃಷಿಯಿಂದಾಗಿ ಕೋಟಿಗಟ್ಟಲೆ ಟನ್ ಮಣ್ಣು ಅರಬ್ಬೀ ಸಮುದ್ರ ಸೇರ್ತಾ ಇದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...