Homeಮುಖಪುಟಇದಕ್ಕೊಂದು ತಲೆಬರಹ ನೀಡುವಿರಾ? -ದೇವನೂರ ಮಹಾದೇವ

ಇದಕ್ಕೊಂದು ತಲೆಬರಹ ನೀಡುವಿರಾ? -ದೇವನೂರ ಮಹಾದೇವ

ದೇವರ ಆಟವೋ ಏನೋ ಗೊತ್ತಿಲ್ಲ, ಆದರೆ ದೆವ್ವ ಭೂತಗಳಂತೂ ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸಿ ಬಿಡುತ್ತದೆ.

- Advertisement -
- Advertisement -

ನನ್ನ ಮಾತುಗಳನ್ನ ಶೇಕ್ಸ್‌ಪಿಯರ್‌ನ ಜೂಲಿಯಸ್ ಸೀಜರ್ ದುರಂತ ನಾಟಕದಿಂದ ಆರಂಭಿಸುತ್ತೇನೆ. ಸೀಜರ್ ಜಗತ್ತನ್ನೇ ಗೆಲ್ಲುವ ತಾಕತ್ತಿದ್ದ ಯುದ್ಧ ನಿಪುಣ. ರೋಮ್ ಸಾಮ್ರಾಜ್ಯದ ಸೈನ್ಯದ ಮುಖ್ಯಸ್ಥ, ಸೇನಾಧಿಕಾರಿ, ರೋಮ್ ದೇಶವನ್ನು ಶ್ರೀಮಂತಗೊಳಿಸಿದವನು.

ಇವನ ಮಹತ್ವಾಕಾಂಕ್ಷೆಗೆ ಅವನ ಸುತ್ತಲಿನ ಗೆಳೆಯರೇ ಭೀತಿಗೊಳಗಾಗುತ್ತಾರೆ. ಸೀಜರ್‌ನನ್ನು ಮುಗಿಸಲು ತವಕಿಸುತ್ತಾರೆ. ಆದರೆ ಯಾರಿಗೂ ಮುಟ್ಟಲು ಎದೆಗಾರಿಕೆ ಇರಲಿಲ್ಲ. ಕೊನೆಗವರು ಹುಡುಕುವುದು ಸೀಜರ್‌ನ ಪರಮಾಪ್ತ ನಂಬಿಕಸ್ಥ ಬ್ರೂಟಸ್‌ನನ್ನು.

ಇದನ್ನೂ ಓದಿ: ಪೋಲಿ ಕಥೆಗೆ ಬಹುಮಾನ ಬಂದ ಕತೆ: ದೇವನೂರು ಮಹಾದೇವರ ಮಾತಲ್ಲಿ ಕೇಳಿ

ಬ್ರೂಟಸ್ ಅಪ್ರತಿಮ ದೇಶಭಕ್ತ ಎಂದೂ ಕೂಡ ಹೆಸರು ಪಡೆದವನು. ಬ್ರೂಟಸ್, ಸೀಜರ್‌ನ ಹೃದಯಕ್ಕೆ ಚೂರಿ ಹಾಕುತ್ತಾನೆ. ದೇಶಭಕ್ತ ಎಂದು ಬ್ರಾಂಡ್ ಆದವರು ಏನುಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದೆಂದು ಕಾಣುತ್ತದೆ! ಆ ಸೀಜರ್‌ನ ಹೆಣದ ಮುಂದೆ ಮಾರ್ಕ್ ಆಂಟ್ಯೋನಿ ‘The most unkindest cut of all’ ಎಂದು ಉದ್ಗಾರ ಮಾಡುತ್ತಾನೆ.

ವ್ಯಾಕರಣದ ಪ್ರಕಾರ, The most ಮತ್ತು Unkindest – ಈ ಎರಡೂ ಅತಿಶಯೋಕ್ತಿಗಳು ಒಂದೇ ವಾಕ್ಯದಲ್ಲಿ ಬರಬಾರದು. ಆದರೆ ಶೇಕ್ಸ್‌ಪಿಯರ್‌ ನಂಬಿಕಸ್ಥನೇ ಕೊಲೆ ಮಾಡುವ ಈ ಘಾತುಕ ಕೃತ್ಯವನ್ನು ಹೇಗಿದೆಯೋ ಹಾಗೆಯೇ ಕಟ್ಟಿಕೊಡಲು ವ್ಯಾಕರಣವನ್ನೇ ಮುರಿದು ಕಟ್ಟುತ್ತಾನೆ. ಈ ದುರಂತ ನಾಟಕವನ್ನು ಇಲ್ಲಿಗೇ ಬಿಡೋಣ. ಯಥಾವತ್ತಾಗಿ ಇಂದಿಗೆ ಇಲ್ಲಿಗೆ ಅಳವಡಿಸಿಕೊಳ್ಳಲೂ ಆಗದು. ಆದರೆ ನಂಬಿಕಸ್ಥನೇ ಕೊಲೆ ಮಾಡಿದ್ದಕ್ಕೆ ಅಭಿವ್ಯಕ್ತಿಗೊಂಡ ‘The most …. all’ ಎಂಬ ಮಾತು? ಇಂದು ಇದು ಭಾರತದಲ್ಲಿ ಜರುಗುತ್ತಿಲ್ಲವೇ? ಹೌದು ಎಂದೆನ್ನಿಸಿಬಿಡುತ್ತದೆ.

ಈಗ ಕರ್ನಾಟಕ ರಾಜ್ಯ ಸರ್ಕಾರ ಜೂನ್ 2020 ರಂದು ಭೂಸುಧಾರಣೆ ಕಾಯ್ದೆಗೆ ಹೊರಡಿಸಿರುವ ಸುಗ್ರೀವಾಜ್ಞೆ ಕೂಡ ರೈತರ ಏಳ್ಗೆಗಾಗಿ ಎನ್ನುತ್ತಲೇ ಅವರ ಬದುಕನ್ನೇ ಎತ್ತಂಗಡಿಯಾಗಿಸುತ್ತದೆ. ಇದರ ಮೂಲ ಹುಡುಕಿದರೆ ಇದರ ಕಾರಸ್ಥಾನ ತಮಗೆಲ್ಲಾ ಗೊತ್ತಿರಬಹುದು. ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಪ್ರಗತಿಪರವಾದ 2013 ರ ಭೂಸ್ವಾಧೀನ ಕಾಯ್ದೆಗೆ 2015 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸುಗ್ರೀವಾಜ್ಞೆ ತಂದು ಭೂಸುಧಾರಣೆಯ ಬುಡವನ್ನೇ ಕತ್ತರಿಸಿ ಧ್ವಂಸ ಮಾಡಲು ಹವಣಿಸಿತ್ತು.

ಇದರೂ ಓದ: ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್ – ದೇವನೂರ ಮಹಾದೇವ

ಬ್ರಿಟಿಷ್ ಕಾಲದ 1894 ರ ಕಾಯ್ದೆಯಲ್ಲಿ ಭೂಮಿಯ ಮಾಲೀಕರಿಗೆ ಆಕ್ಷೇಪ ಎತ್ತಲು ಅವಕಾಶವಾದರೂ ಇತ್ತು. ಆದರೆ ಆ ಬಿಜೆಪಿ ಸುಗ್ರೀವಾಜ್ಞೆ ಅದನ್ನೂ ಕಿತ್ತುಕೊಂಡಿತ್ತು. ಇದನ್ನು ಎಂ.ಲಕ್ಷ್ಮಣ ಅವರು 8 ಪುಟಗಳ ಒಂದು ಫೋಲ್ಡರ್‌‌ನಲ್ಲಿ ಬಿಜೆಪಿಯ ಅಮಾನುಷ ಸುಗ್ರೀವಾಜ್ಞೆಯ ವಿವರಗಳನ್ನು ಬಿಚ್ಚಿಡುತ್ತಾರೆ. ಆ ಸುಗ್ರೀವಾಜ್ಞೆಯ ವಿರುದ್ಧ ಆಗ ಭುಗಿಲೆದ್ದ ಪ್ರತಿಭಟನೆಗಳು ಬಿಜೆಪಿ ಸುಗ್ರೀವಾಜ್ಞೆಯನ್ನು ತಡೆಗಟ್ಟುತ್ತವೆ. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರ ಆ ಸುಗ್ರೀವಾಜ್ಞೆಯನ್ನೇನೋ ಹಿಂತೆಗೆದುಕೊಳ್ಳುತ್ತದೆ. ನೆನಪಿರಲಿ, ಅದನ್ನು ರದ್ದು ಮಾಡಿಲ್ಲ! ಬಹುಶಃ ಹೊಂಚು ಹಾಕುತ್ತಿದೆ.

ಇದರ ವಾಸನೆ ಹಿಡಿದು ನೋಡುವುದಾದರೆ, ಟೆಸ್ಟಿಂಗ್ ಡೋಸ್ ಎಂಬಂತೆ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಈ ತಿದ್ದುಪಡಿ ಸುಗ್ರೀವಾಜ್ಞೆ ತಂದಿರಬಹುದು ಅನ್ನಿಸುತ್ತದೆ. ರೈತಾಪಿ ಹಿತ ಕಾಪಾಡುವ ದೇವರಾಜ್ ಅರಸು ಅವರ 1974 ರ ಕಾಯ್ದೆಗಳನ್ನೆಲ್ಲಾ ನಿರ್ದಯವಾಗಿ ಈ ಸುಗ್ರೀವಾಜ್ಞೆ ಕತ್ತರಿಸಿ ಹಾಕಿದೆ.

ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಮನಮುಟ್ಟುವಂತೆ ಮಾತಾಡಿದ್ದಾರೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಂಭೀರವಾದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಹಾಗೆ ಶಿವಸುಂದರ್ ಚಿಕಿತ್ಸಕ ನೋಟ ಬೀರಿದ್ದಾರೆ. ಹೆಚ್ಚು ವಿವರಗಳಿಗೆ ನಾನು ಹೋಗುವುದಿಲ್ಲ. ಎಷ್ಟೂಂತ, ಯಾವು ಯಾವುದು ಅಂತ ಹೇಳುವುದು?

ಇದನ್ನೂ ಓದಿ: ಪ್ರೀತಿಯ ಜರೀನ್ ತಾಜ್, : ದೇವನೂರು ಮಹದೇವರವರು ಬರೆದ ಕ್ಷಮಾಪಣಾ ಪತ್ರ

‘ಕೊರೋನಾ ಎಂಬ ದೇವರ ಆಟದಿಂದ ರಾಜ್ಯಗಳ ಬಾಬ್ತು ನೀಡಲು ಆಗುತ್ತಿಲ್ಲ’ ಎನ್ನುವ ಅರ್ಥಸಚಿವರನ್ನು ಭಾರತ ಪಡೆದಿದೆ! ಭಾರತದ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಡಿದು ಹಾಕಿ, ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್‌ಟಿ ತಂದು ದೆವ್ವದ ಆಟ ಆಡಿದವರು ಯಾರು? ಜನರಿಗೆ ಕನಸು ಕಾಣಿಸಿ ನೋಟ್‌ಬ್ಯಾನ್ ತಂದು ಭಾರತದ ಬದುಕನ್ನ ದುಃಸ್ವಪ್ನ ಮಾಡಿದ ಭೂತದ ಆಟ ಆಡಿದವರು ಯಾರು? ದೇವರ ಆಟವೋ ಏನೋ ಗೊತ್ತಿಲ್ಲ, ಆದರೆ ದೆವ್ವ ಭೂತಗಳಂತೂ ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸಿ ಬಿಡುತ್ತದೆ.

ಯಾಕೆಂದರೆ ಕೊರೋನಾ ಭೀಕರ ವಾತಾವರಣದಲ್ಲಿ ಜನ ಸಮುದಾಯ ಧ್ವನಿ ತೆಗೆಯಲು ಕಷ್ಟಕರವಾದ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು, ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಸರ್ವಸ್ವವನ್ನೂ ಧಾರೆ ಎರೆಯುವ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದನ್ನು ನೋಡುತ್ತಿದ್ದರೆ ಇನ್ನೇನು ಹೇಳಬೇಕು? ‘The most unkindest cut of all’ ಎಂದೇ ಅನ್ನಿಸುತ್ತದೆ.

ಇಂತಹ ಧಾರುಣ ಪರಿಸ್ಥಿತಿಯಲ್ಲೂ, ಎಷ್ಟೆಂದರೆ, ಬಾಲಾಕೋಟ್ ವಾಯುದಾಳಿಯ ಸಂದರ್ಭದಲ್ಲಿ “…ಮೋಡಗಳಿವೆ, ಮಳೆ ಬರ‍್ತಾ ಇದೆ ಅಂದರೆ ನಾವು ರಾಡಾರ್‌ನಿಂದ ಬಚಾವ್ ಆಗಬಹುದು. ದಾಳಿ ಮಾಡಿ” ಎಂದು ದೇಶದ ಚುಕ್ಕಾಣಿ ಹಿಡಿದ ವ್ಯಕ್ತಿ ಸ್ಪ್ಯಾನಿಷ್ ಲೇಖಕ ಸರ್ವಂಟೀಸ್‌ನ ಕಾದಂಬರಿಯ ನಾಯಕ ಡಾನ್‌ಕ್ವಿಕ್ಯಾಟ್‌ನ ತದ್ರೂಪಿಯಂತೆ ವರ್ತಿಸುತ್ತಿದ್ದರೂ ಇದನ್ನೆಲ್ಲಾ ನೋಡಿಯೂ ಭ್ರಮಾಲೋಕದಲ್ಲಿ ಬದುಕುತ್ತಿರುವುದೇನೋ ಎಂಬಂತಿರುವ ಭಾರತಕ್ಕೆ, ಇಂದು ಸೆಪ್ಟೆಂಬರ್ 5, 2020 ಸುಮಾರು 500 ರಷ್ಟು ಮಹಿಳಾ ಮತ್ತು ಮಾನವ ಹಕ್ಕುಗಳ ಸಂಘಟನೆಗಳು “ನಾವೆದ್ದು ನಿಲ್ಲದಿದ್ದರೆ” ಎಂದು ಒಕ್ಕೊರಲಿನಿಂದ ಕೂಗಿ ಹೇಳುತ್ತಿವೆ.

ಅವರು ಮಹಿಳೆಯರ ಸಮಸ್ಯೆಗಳನ್ನು ಮಾತ್ರ ಎತ್ತುತ್ತಿಲ್ಲ; ರೈತ, ದಲಿತ, ಕಾರ್ಮಿಕ, ದಿನಗೂಲಿ, ವಲಸೆ ಕಾರ್ಮಿಕರು, ಪೌರ ಕಾರ್ಮಿಕರು, ಪ್ರಕೃತಿ-ಪರಿಸರ, ಪೌರತ್ವದ ಪ್ರಶ್ನೆ, ರಾಜಕೀಯ ಕೈದು, ಮಾಹಿತಿ ಹಕ್ಕು ಕಾಯ್ದೆ… ಇತ್ಯಾದಿ ಹೀಗೆ ಎಲ್ಲವನ್ನೂ ಕೂಡಿಸಿ ಹೇಳುತ್ತಾ “ನಮ್ಮ ಸಂವಿಧಾನ ಮತ್ತು ಪ್ರಜಾತಂತ್ರವನ್ನು ರಕ್ಷಿಸಿಕೊಳ್ಳಲು ನಾವು ಒಂದುಗೂಡುತ್ತಿದ್ದೇವೆ” ಎಂದು ಕೂಗಿ ಹೇಳುತ್ತಿದ್ದಾರೆ. ಒಂಟಿ ಸಂಘಟನೆಗಳಾದ ನಾವೂ ಕೂಡ ಒಕ್ಕೂಟವಾಗಬೇಕಾಗಿದೆ. ಎಲ್ಲರೂ ಸಮುದಾಯದೊಳಗೆ ಕರಗಿ ಹೋಗಬೇಕಾಗಿದೆ.

ಸಮುದಾಯದೊಳಗಿಂದ ಹೊಸ ಮಾತು, ಹೊಸ ನುಡಿಗಟ್ಟು, ಹೊಸ ನಡೆ ಹುಟ್ಟಬೇಕಾಗಿದೆ. ಅದು ಇದೀಗ ಚಿಗುರೊಡೆಯುತ್ತಿದೆ ಎಂದೆನಿಸುತ್ತಿದೆ.

ಕೃಪೆ: ನಮ್ಮ ಬನವಾಸಿ


ಇದನ್ನೂ ಓದಿ: ಸಂವಿಧಾನಕ್ಕೆ ಮೊದಲು ನಮಸ್ಕರಿಸಿ, ಆಮೇಲೆ ಅದರ ಆಶಯಕ್ಕೆ ಗುಂಡು ಹೊಡೆದ ಮೋದಿ: ದೇವನೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...