Homeಮುಖಪುಟಇದಕ್ಕೊಂದು ತಲೆಬರಹ ನೀಡುವಿರಾ? -ದೇವನೂರ ಮಹಾದೇವ

ಇದಕ್ಕೊಂದು ತಲೆಬರಹ ನೀಡುವಿರಾ? -ದೇವನೂರ ಮಹಾದೇವ

ದೇವರ ಆಟವೋ ಏನೋ ಗೊತ್ತಿಲ್ಲ, ಆದರೆ ದೆವ್ವ ಭೂತಗಳಂತೂ ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸಿ ಬಿಡುತ್ತದೆ.

- Advertisement -
- Advertisement -

ನನ್ನ ಮಾತುಗಳನ್ನ ಶೇಕ್ಸ್‌ಪಿಯರ್‌ನ ಜೂಲಿಯಸ್ ಸೀಜರ್ ದುರಂತ ನಾಟಕದಿಂದ ಆರಂಭಿಸುತ್ತೇನೆ. ಸೀಜರ್ ಜಗತ್ತನ್ನೇ ಗೆಲ್ಲುವ ತಾಕತ್ತಿದ್ದ ಯುದ್ಧ ನಿಪುಣ. ರೋಮ್ ಸಾಮ್ರಾಜ್ಯದ ಸೈನ್ಯದ ಮುಖ್ಯಸ್ಥ, ಸೇನಾಧಿಕಾರಿ, ರೋಮ್ ದೇಶವನ್ನು ಶ್ರೀಮಂತಗೊಳಿಸಿದವನು.

ಇವನ ಮಹತ್ವಾಕಾಂಕ್ಷೆಗೆ ಅವನ ಸುತ್ತಲಿನ ಗೆಳೆಯರೇ ಭೀತಿಗೊಳಗಾಗುತ್ತಾರೆ. ಸೀಜರ್‌ನನ್ನು ಮುಗಿಸಲು ತವಕಿಸುತ್ತಾರೆ. ಆದರೆ ಯಾರಿಗೂ ಮುಟ್ಟಲು ಎದೆಗಾರಿಕೆ ಇರಲಿಲ್ಲ. ಕೊನೆಗವರು ಹುಡುಕುವುದು ಸೀಜರ್‌ನ ಪರಮಾಪ್ತ ನಂಬಿಕಸ್ಥ ಬ್ರೂಟಸ್‌ನನ್ನು.

ಇದನ್ನೂ ಓದಿ: ಪೋಲಿ ಕಥೆಗೆ ಬಹುಮಾನ ಬಂದ ಕತೆ: ದೇವನೂರು ಮಹಾದೇವರ ಮಾತಲ್ಲಿ ಕೇಳಿ

ಬ್ರೂಟಸ್ ಅಪ್ರತಿಮ ದೇಶಭಕ್ತ ಎಂದೂ ಕೂಡ ಹೆಸರು ಪಡೆದವನು. ಬ್ರೂಟಸ್, ಸೀಜರ್‌ನ ಹೃದಯಕ್ಕೆ ಚೂರಿ ಹಾಕುತ್ತಾನೆ. ದೇಶಭಕ್ತ ಎಂದು ಬ್ರಾಂಡ್ ಆದವರು ಏನುಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದೆಂದು ಕಾಣುತ್ತದೆ! ಆ ಸೀಜರ್‌ನ ಹೆಣದ ಮುಂದೆ ಮಾರ್ಕ್ ಆಂಟ್ಯೋನಿ ‘The most unkindest cut of all’ ಎಂದು ಉದ್ಗಾರ ಮಾಡುತ್ತಾನೆ.

ವ್ಯಾಕರಣದ ಪ್ರಕಾರ, The most ಮತ್ತು Unkindest – ಈ ಎರಡೂ ಅತಿಶಯೋಕ್ತಿಗಳು ಒಂದೇ ವಾಕ್ಯದಲ್ಲಿ ಬರಬಾರದು. ಆದರೆ ಶೇಕ್ಸ್‌ಪಿಯರ್‌ ನಂಬಿಕಸ್ಥನೇ ಕೊಲೆ ಮಾಡುವ ಈ ಘಾತುಕ ಕೃತ್ಯವನ್ನು ಹೇಗಿದೆಯೋ ಹಾಗೆಯೇ ಕಟ್ಟಿಕೊಡಲು ವ್ಯಾಕರಣವನ್ನೇ ಮುರಿದು ಕಟ್ಟುತ್ತಾನೆ. ಈ ದುರಂತ ನಾಟಕವನ್ನು ಇಲ್ಲಿಗೇ ಬಿಡೋಣ. ಯಥಾವತ್ತಾಗಿ ಇಂದಿಗೆ ಇಲ್ಲಿಗೆ ಅಳವಡಿಸಿಕೊಳ್ಳಲೂ ಆಗದು. ಆದರೆ ನಂಬಿಕಸ್ಥನೇ ಕೊಲೆ ಮಾಡಿದ್ದಕ್ಕೆ ಅಭಿವ್ಯಕ್ತಿಗೊಂಡ ‘The most …. all’ ಎಂಬ ಮಾತು? ಇಂದು ಇದು ಭಾರತದಲ್ಲಿ ಜರುಗುತ್ತಿಲ್ಲವೇ? ಹೌದು ಎಂದೆನ್ನಿಸಿಬಿಡುತ್ತದೆ.

ಈಗ ಕರ್ನಾಟಕ ರಾಜ್ಯ ಸರ್ಕಾರ ಜೂನ್ 2020 ರಂದು ಭೂಸುಧಾರಣೆ ಕಾಯ್ದೆಗೆ ಹೊರಡಿಸಿರುವ ಸುಗ್ರೀವಾಜ್ಞೆ ಕೂಡ ರೈತರ ಏಳ್ಗೆಗಾಗಿ ಎನ್ನುತ್ತಲೇ ಅವರ ಬದುಕನ್ನೇ ಎತ್ತಂಗಡಿಯಾಗಿಸುತ್ತದೆ. ಇದರ ಮೂಲ ಹುಡುಕಿದರೆ ಇದರ ಕಾರಸ್ಥಾನ ತಮಗೆಲ್ಲಾ ಗೊತ್ತಿರಬಹುದು. ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಪ್ರಗತಿಪರವಾದ 2013 ರ ಭೂಸ್ವಾಧೀನ ಕಾಯ್ದೆಗೆ 2015 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸುಗ್ರೀವಾಜ್ಞೆ ತಂದು ಭೂಸುಧಾರಣೆಯ ಬುಡವನ್ನೇ ಕತ್ತರಿಸಿ ಧ್ವಂಸ ಮಾಡಲು ಹವಣಿಸಿತ್ತು.

ಇದರೂ ಓದ: ಬುಡ ಅಲ್ಲಾಡಿಸುತ್ತಿರುವ ಭೂಷಣ್ ಟ್ವೀಟ್ಸ್ – ದೇವನೂರ ಮಹಾದೇವ

ಬ್ರಿಟಿಷ್ ಕಾಲದ 1894 ರ ಕಾಯ್ದೆಯಲ್ಲಿ ಭೂಮಿಯ ಮಾಲೀಕರಿಗೆ ಆಕ್ಷೇಪ ಎತ್ತಲು ಅವಕಾಶವಾದರೂ ಇತ್ತು. ಆದರೆ ಆ ಬಿಜೆಪಿ ಸುಗ್ರೀವಾಜ್ಞೆ ಅದನ್ನೂ ಕಿತ್ತುಕೊಂಡಿತ್ತು. ಇದನ್ನು ಎಂ.ಲಕ್ಷ್ಮಣ ಅವರು 8 ಪುಟಗಳ ಒಂದು ಫೋಲ್ಡರ್‌‌ನಲ್ಲಿ ಬಿಜೆಪಿಯ ಅಮಾನುಷ ಸುಗ್ರೀವಾಜ್ಞೆಯ ವಿವರಗಳನ್ನು ಬಿಚ್ಚಿಡುತ್ತಾರೆ. ಆ ಸುಗ್ರೀವಾಜ್ಞೆಯ ವಿರುದ್ಧ ಆಗ ಭುಗಿಲೆದ್ದ ಪ್ರತಿಭಟನೆಗಳು ಬಿಜೆಪಿ ಸುಗ್ರೀವಾಜ್ಞೆಯನ್ನು ತಡೆಗಟ್ಟುತ್ತವೆ. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರ ಆ ಸುಗ್ರೀವಾಜ್ಞೆಯನ್ನೇನೋ ಹಿಂತೆಗೆದುಕೊಳ್ಳುತ್ತದೆ. ನೆನಪಿರಲಿ, ಅದನ್ನು ರದ್ದು ಮಾಡಿಲ್ಲ! ಬಹುಶಃ ಹೊಂಚು ಹಾಕುತ್ತಿದೆ.

ಇದರ ವಾಸನೆ ಹಿಡಿದು ನೋಡುವುದಾದರೆ, ಟೆಸ್ಟಿಂಗ್ ಡೋಸ್ ಎಂಬಂತೆ ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಈ ತಿದ್ದುಪಡಿ ಸುಗ್ರೀವಾಜ್ಞೆ ತಂದಿರಬಹುದು ಅನ್ನಿಸುತ್ತದೆ. ರೈತಾಪಿ ಹಿತ ಕಾಪಾಡುವ ದೇವರಾಜ್ ಅರಸು ಅವರ 1974 ರ ಕಾಯ್ದೆಗಳನ್ನೆಲ್ಲಾ ನಿರ್ದಯವಾಗಿ ಈ ಸುಗ್ರೀವಾಜ್ಞೆ ಕತ್ತರಿಸಿ ಹಾಕಿದೆ.

ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಮನಮುಟ್ಟುವಂತೆ ಮಾತಾಡಿದ್ದಾರೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಂಭೀರವಾದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಹಾಗೆ ಶಿವಸುಂದರ್ ಚಿಕಿತ್ಸಕ ನೋಟ ಬೀರಿದ್ದಾರೆ. ಹೆಚ್ಚು ವಿವರಗಳಿಗೆ ನಾನು ಹೋಗುವುದಿಲ್ಲ. ಎಷ್ಟೂಂತ, ಯಾವು ಯಾವುದು ಅಂತ ಹೇಳುವುದು?

ಇದನ್ನೂ ಓದಿ: ಪ್ರೀತಿಯ ಜರೀನ್ ತಾಜ್, : ದೇವನೂರು ಮಹದೇವರವರು ಬರೆದ ಕ್ಷಮಾಪಣಾ ಪತ್ರ

‘ಕೊರೋನಾ ಎಂಬ ದೇವರ ಆಟದಿಂದ ರಾಜ್ಯಗಳ ಬಾಬ್ತು ನೀಡಲು ಆಗುತ್ತಿಲ್ಲ’ ಎನ್ನುವ ಅರ್ಥಸಚಿವರನ್ನು ಭಾರತ ಪಡೆದಿದೆ! ಭಾರತದ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಡಿದು ಹಾಕಿ, ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್‌ಟಿ ತಂದು ದೆವ್ವದ ಆಟ ಆಡಿದವರು ಯಾರು? ಜನರಿಗೆ ಕನಸು ಕಾಣಿಸಿ ನೋಟ್‌ಬ್ಯಾನ್ ತಂದು ಭಾರತದ ಬದುಕನ್ನ ದುಃಸ್ವಪ್ನ ಮಾಡಿದ ಭೂತದ ಆಟ ಆಡಿದವರು ಯಾರು? ದೇವರ ಆಟವೋ ಏನೋ ಗೊತ್ತಿಲ್ಲ, ಆದರೆ ದೆವ್ವ ಭೂತಗಳಂತೂ ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸಿ ಬಿಡುತ್ತದೆ.

ಯಾಕೆಂದರೆ ಕೊರೋನಾ ಭೀಕರ ವಾತಾವರಣದಲ್ಲಿ ಜನ ಸಮುದಾಯ ಧ್ವನಿ ತೆಗೆಯಲು ಕಷ್ಟಕರವಾದ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು, ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಸರ್ವಸ್ವವನ್ನೂ ಧಾರೆ ಎರೆಯುವ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದನ್ನು ನೋಡುತ್ತಿದ್ದರೆ ಇನ್ನೇನು ಹೇಳಬೇಕು? ‘The most unkindest cut of all’ ಎಂದೇ ಅನ್ನಿಸುತ್ತದೆ.

ಇಂತಹ ಧಾರುಣ ಪರಿಸ್ಥಿತಿಯಲ್ಲೂ, ಎಷ್ಟೆಂದರೆ, ಬಾಲಾಕೋಟ್ ವಾಯುದಾಳಿಯ ಸಂದರ್ಭದಲ್ಲಿ “…ಮೋಡಗಳಿವೆ, ಮಳೆ ಬರ‍್ತಾ ಇದೆ ಅಂದರೆ ನಾವು ರಾಡಾರ್‌ನಿಂದ ಬಚಾವ್ ಆಗಬಹುದು. ದಾಳಿ ಮಾಡಿ” ಎಂದು ದೇಶದ ಚುಕ್ಕಾಣಿ ಹಿಡಿದ ವ್ಯಕ್ತಿ ಸ್ಪ್ಯಾನಿಷ್ ಲೇಖಕ ಸರ್ವಂಟೀಸ್‌ನ ಕಾದಂಬರಿಯ ನಾಯಕ ಡಾನ್‌ಕ್ವಿಕ್ಯಾಟ್‌ನ ತದ್ರೂಪಿಯಂತೆ ವರ್ತಿಸುತ್ತಿದ್ದರೂ ಇದನ್ನೆಲ್ಲಾ ನೋಡಿಯೂ ಭ್ರಮಾಲೋಕದಲ್ಲಿ ಬದುಕುತ್ತಿರುವುದೇನೋ ಎಂಬಂತಿರುವ ಭಾರತಕ್ಕೆ, ಇಂದು ಸೆಪ್ಟೆಂಬರ್ 5, 2020 ಸುಮಾರು 500 ರಷ್ಟು ಮಹಿಳಾ ಮತ್ತು ಮಾನವ ಹಕ್ಕುಗಳ ಸಂಘಟನೆಗಳು “ನಾವೆದ್ದು ನಿಲ್ಲದಿದ್ದರೆ” ಎಂದು ಒಕ್ಕೊರಲಿನಿಂದ ಕೂಗಿ ಹೇಳುತ್ತಿವೆ.

ಅವರು ಮಹಿಳೆಯರ ಸಮಸ್ಯೆಗಳನ್ನು ಮಾತ್ರ ಎತ್ತುತ್ತಿಲ್ಲ; ರೈತ, ದಲಿತ, ಕಾರ್ಮಿಕ, ದಿನಗೂಲಿ, ವಲಸೆ ಕಾರ್ಮಿಕರು, ಪೌರ ಕಾರ್ಮಿಕರು, ಪ್ರಕೃತಿ-ಪರಿಸರ, ಪೌರತ್ವದ ಪ್ರಶ್ನೆ, ರಾಜಕೀಯ ಕೈದು, ಮಾಹಿತಿ ಹಕ್ಕು ಕಾಯ್ದೆ… ಇತ್ಯಾದಿ ಹೀಗೆ ಎಲ್ಲವನ್ನೂ ಕೂಡಿಸಿ ಹೇಳುತ್ತಾ “ನಮ್ಮ ಸಂವಿಧಾನ ಮತ್ತು ಪ್ರಜಾತಂತ್ರವನ್ನು ರಕ್ಷಿಸಿಕೊಳ್ಳಲು ನಾವು ಒಂದುಗೂಡುತ್ತಿದ್ದೇವೆ” ಎಂದು ಕೂಗಿ ಹೇಳುತ್ತಿದ್ದಾರೆ. ಒಂಟಿ ಸಂಘಟನೆಗಳಾದ ನಾವೂ ಕೂಡ ಒಕ್ಕೂಟವಾಗಬೇಕಾಗಿದೆ. ಎಲ್ಲರೂ ಸಮುದಾಯದೊಳಗೆ ಕರಗಿ ಹೋಗಬೇಕಾಗಿದೆ.

ಸಮುದಾಯದೊಳಗಿಂದ ಹೊಸ ಮಾತು, ಹೊಸ ನುಡಿಗಟ್ಟು, ಹೊಸ ನಡೆ ಹುಟ್ಟಬೇಕಾಗಿದೆ. ಅದು ಇದೀಗ ಚಿಗುರೊಡೆಯುತ್ತಿದೆ ಎಂದೆನಿಸುತ್ತಿದೆ.

ಕೃಪೆ: ನಮ್ಮ ಬನವಾಸಿ


ಇದನ್ನೂ ಓದಿ: ಸಂವಿಧಾನಕ್ಕೆ ಮೊದಲು ನಮಸ್ಕರಿಸಿ, ಆಮೇಲೆ ಅದರ ಆಶಯಕ್ಕೆ ಗುಂಡು ಹೊಡೆದ ಮೋದಿ: ದೇವನೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...