Homeಅಂಕಣಗಳುಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

ಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

- Advertisement -
- Advertisement -

ಕೇಳುಗರಿಗೆಲ್ಲ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಉಡುಪಿಯ ಅಷ್ಟಮಠದ ಶಿರೂರು ಸ್ವಾಮಿಗಳ ಪಾಯ್ಸನ್ ಫುಡ್ ಸಾವಿಗೆ ಕಿಂಚಿತ್ತೂ ಕರುಳು ಕರಗದ ತೇಜಾವರ ಸ್ವಾಮಿಗಳು, ಆ ಸ್ವಾಮಿ ನಂತರ ಫೊರೆನ್ಸಿಕ್ ಸೈನ್ಸನ್ನೇ ನುಣ್ಣಗೆ ಅರೆದು ಗಟಗಟ ಕುಡಿದವರಂತೆ ಕೆಕರುಮಕರಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಸ್ವಾಮಿ ಎಣ್ಣೆ ತಗತಿದ್ದ, ಹೆಣ್ಮಕ್ಕಳ ಮ್ಯಾಟ್ರಲ್ಲಿ ವೀಕ್ ಇದ್ದ, ಹಂಗಾಗಿ ಸತ್ತೋಗಿರಬೇಕು ಅಂತ ತೇಜಾವರರು ಕೀರಲು ದನಿಯಲ್ಲಿ ಊಳಿಟ್ಟಿದ್ದಾರೆ. ದಿವಂಗತ ಸ್ವಾಮಿ ಬದುಕಿದ್ದಾಗ “ಎಂಟು ಮಠಗಳ ಎಲ್ಲ ಸ್ವಾಮುಗೋಳು ಮ್ಯಾರೇಜ್ ಮಾಡ್ಕಂಡು, ಕದ್ದು ಮಕ್ಕಳು ಹುಟ್ಟುಸಿ, ಹುಟ್ಟಿಸಿದ ಮಕ್ಳೆಲ್ಲವನ್ನು ಕದ್ದು ಮಡಗಿದ್ದಾರೆ, ಬಾಂಬೆ, ಪೂನಾದಲ್ಲಿ ಹೋಟೆಲ್ ಬ್ಯುಜಿನೆಸ್ ನಡುಸ್ತಾವ್ರೆ, ಮೀಟ್ರುಬಡ್ಡಿಗೆ ಸಾಲ ಕೊಟ್ಟು ಪರ್ಸೆಂಟೇಜ್ ಬಡ್ಡಿ ಯವಾರ ನಡುಸ್ತಾವ್ರೆ” ಅಂತ ಮುರಕೊಂಡು ಬಿದ್ದಿದ್ದಾಗ ಬಾಯಿಗೆ ಹೊಲಿಗೆ ಹಾಕ್ಕಂಡು ಕಮಕ್ ಕಿಮಕ್ ಅನ್ನದೆ ಇದ್ದ ತೇಜಾವರರಿಗೆ ಇದ್ದಕ್ಕಿದ್ದಂತೆ ಈ ಧೈರ್ಯ ಎಲ್ಲಿಂದ ಬಂತು ಎಂದು ಭಕ್ತಾದಿಗಳೇ ಗಾಬರಿಯಾಗಿದ್ದಾರೆ. ನೂರಾರು ಸಲ ಮಠದ ಗಾಯಕಿಯೊಬ್ಬರ ಮೇಲೆ ರೇಪು ಮಾಡಿ ಕೋರ್ಟಿಂದ ಉಗಿಸಿಕೊಂಡ ಕೌಬಾಯ್ ಸ್ವಾಮಿ ವಿಷಯದಲ್ಲಿ ಲವಿಡವಿ ಸೈಲೆನ್ಸ್ ಮೈಂಟೈನ್ ಮಾಡುತ್ತ ಸಪೋರ್ಟ್ ಕೊಡೋ ತೇಜಾವರರು ತಮ್ಮ ಎಂಟು ಮಠಗಳ ಸ್ವಾಮಿಗಳ ರಹಸ್ಯವನ್ನೆಲ್ಲ ಹರಾಜು ಹಾಕುತ್ತಿದ್ದ ಸ್ವಾಮಿ ಅನುಮಾನಾಸ್ಪದವಾಗಿ ಸತ್ತ ನಂತರವೂ ಹಗೆ ಸಾಧಿಸಿ ಕಳಪೆ ಮಾತನ್ನಾಡುವುದು ಆ ಮನುಷ್ಯನ ನೀಚತನ ಎಂಬ ಜನ ಮಾತಾಡಿಕೊಳ್ಳುತ್ತಿರುವುದು ತಿಳಿದುಬಂದಿದೆ.

*****

ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ರಂಥ ಪಳಗಿದ ಆರ್ಥಿಕತಜ್ಞರಿಗೆ ಕೊಡಬಾರದ ಕಾಟ ಕೊಟ್ಟು ಒಕ್ಕಲೆಬ್ಬಿಸಿದ ಶಿಲಾಯುಗದ ಸನಾತನಿ ಪೀಡೆಗಳು, ಚೀಪಿದ ಮೂಳೆ ತಮ್ಮತ್ತ ಬಿಸಾಕುವ ಅಂಬಾನಿಗಳ ಕೊಂಪೆಯಿಂದ ಕೊಳೆತ ಮಿದುಳಿನ ಆಸಾಮಿಯನ್ನು ತಂದು ಆ ಜಾಗಕ್ಕೆ ಕೂರಿಸಿದ್ದು ಈಗ ಹಳೆಯ ವಿಷಯ, ಹೊಸ ವಿಷಯ ಏನಪ್ಪ ಅಂದ್ರೆ ರಿಸರ್ವ್ ಬ್ಯಾಂಕೆಂದರೆ ಬೊಂಬಾಯ್ ಮಿಠಾಯ್ ಮಾರೋ ಅಂಗಡಿ ಅಂತ ಭ್ರಮೆಯಲ್ಲಿರೋ ಈ ಅಂಬಾನಿ ಜವಾನನಿಗೆ ಒಂದೈವತ್ತು ಹುಚ್ಚರು ಒಮ್ಮೆಲೇ ಕಚ್ಚಿ ತಲೆ ಇನ್ಫೆಕ್ಷನ್ ಆಗಿರೋ ಸಾಧ್ಯತೆಗಳು ಕಂಡುಬರುತ್ತಿವೆ. ಜನರು ಬಳಸುತ್ತಿದ್ದ ಮುದ್ದಾದ ನೋಟುಗಳನ್ನು ಕಚಡಿ ಪಿಚಡಿ ಆಕಾರದಲ್ಲಿ ಇಷ್ಟಬಂದಂತೆ ಚಡ್ಡಿ ಬದಲಿಸಿದಂತೆ ಬದಲಿಸಿ ಒಂದರ ಹಿಂದೊಂದು ಪೀಕಲಾಟ ತಂದಿಡ್ತಿರೋ ಉರ್ಜಿತ್ ಪಟೇಲ್ ಎಟಿಎಂ ವ್ಯವಸ್ಥೆಗೇ ಡಿಚ್ಚಿ ಹೊಡೆಯುತ್ತಿದ್ದಾನೆ. ಇವನು ಬದಲಿಸೋ ನೋಟುಗಳ ಸೈಜು ಎಟಿಎಂಗಳಿಗೆ ಸರಿ ಹೋಗದೆ ಬ್ಯಾಂಕುಗಳು ಲಬೋಲಬೋ ಬಾಯಿ ಬಡ್ಕೊಂಡ್ರೂ ಹೊಸದಾಗಿ 100 ರುಪಾಯಿ ನೋಟು ಡಿಸೈನ್ ಚೇಂಜ್ ಮಾಡಿ ಚಲಾವಣೆಗೆ ಬಿಡಲಾಗಿದೆ. ನೋಟ್ ಬ್ಯಾನ್ ಟೈಮಿನಲ್ಲಿ ನಾವು ನೋಟೇ ಇಲ್ಲದ ಕ್ಯಾಶ್‍ಲೆಸ್ ಎಕಾನಮಿ ನಿರ್ಮಿಸ್ತೀವಿ ಅಂತ ಬೊಗಳಿದವರು ತಿಂಗಳಿಂದ ತಿಂಗಳಿಗೆ ನೋಟುಗಳ ಪ್ರಿಂಟಿಂಗನ್ನು ಹೆಚ್ಚಿಸ್ತಿರೋದ್ಯಾಕೆ ಅನ್ನೋ ಮರ್ಮ ಯಾರಿಗೂ ಗೊತ್ತಾಗ್ತ ಇಲ್ಲ. ಜನರ ಪಡಿಪಾಟಲುಗಳನ್ನು ಸೈಕೋಗಳಂತೆ ಎಂಜಾಯ್ ಮಾಡ್ತಿರೋ ಈ ಸನಾತನಿ ಪಿಶಾಚಿಗಳಿಗೆ ಬರಬಾರದ್ದು ಬಂದು ಹುಳ ಬಿದ್ದು ಸಾಯಲೆಂದು ಜನರು ಶಾಪ ಹಾಕುತ್ತಿರುವುದು ತಿಳಿದು ಬಂದಿದೆ.

*****

ವಯಸ್ಸಲ್ಲದ ವಯಸ್ಸಲ್ಲಿ “ಕುಚ್ ಕುಚ್ ಹೋತಾ ಹೈ, ಬ್ಲೂಜೆಪಿವಾಲೇ ಲಡ್ಕಿ ಲೇಜಾಯೇಂಗೆ” ಅಂತ ಸರ್ಕಾರಿ ಕ್ಲರ್ಕ್ ಹುಡುಗಿಯೊಂದಿಗೆ ಕದ್ದುಮುಚ್ಚಿ ಕುಸುಮುಸು ಮಾಡಿ ಕೈ ಎತ್ತಿದ್ದ ಬ್ಲೂಜೆಪಿಯ ರಾಮದಾಸನಿಗೆ ಶನಿ ಮಕದ ಮೇಲೆ ಅಂಡೂರಿ ಕುಂತುಬಿಟ್ಟಿದ್ದಾನೆ. ಎಲ್ಲ ಮುಗಿದ ಮೇಲೆ ರಾಮ್ದಾಸ ಕೈಗೆ ಸಿಗದಂಗೆ ತಪ್ಪಿಸ್ಕಂಡು ಓಡೋಗವ್ನೆ ಅಂತ ರೊಚ್ಚಿಗೆದ್ದಿರೋ ಪ್ಲೇಮಕುಮಾರಿಯೆಂಬ ರಾಮ್ದಾಸನ ಮಾಜಿ ಲವರ್ರು ಸೀದಾ ಕೈಕೊಟ್ಟ ಮಿಡಲ್ ಏಜ್ ಮನ್ಮಥನ ಆಫೀಸಿನ ಮುಂದೆ ಧುಡುಮ್ಮನೆ ಬಿದ್ದಿದೆ. ದೀಪಾವಳಿಯ ವಿಷ್ಣುಚಕ್ರದಂತೆ ಗರಗರಗರ ತಿರುಗುತ್ತ ನೆಲದ ಮೇಲೆ ಕೂಚಿಪುಡಿ-ಭರತನಾಟ್ಯ ಎರಡನ್ನೂ ಮಿಕ್ಸ್ ಮಾಡಿದ ಘನಘೋರ ನೃತ್ಯವಾಡಿ ರಾಮ್ದಾಸ್ ಕಛೇರಿಯೆದುರು ನೆರೆದ ಬ್ಲೂಜೆಪಿ ಕಾರ್ಯಕರ್ತರಿಗೆ ಪುಗ್ಸಟ್ಟೆ ಮನರಂಜನೆ ಒದಗಿಸಿದ್ದಾರೆ. ಈ ಹೆಣ್ಣಿನೊಡನೆ ಕಳ್ಳಾಟವಾಡಿ ಕೈಗೆ ಚೊಂಬು ಕೊಟ್ಟು ಯಾಮಾರಿಸಿ ಇನ್ನೊಂದರ ಬೆನ್ನುಬೀಳಲು ರೆಡಿಯಾಗಿದ್ದ ರಾಮ್ದಾಸನ ಗಂಟಲಿಗೆ ಹೆಟ್ಟಿದ ಗಢಾರಿಯಾಗಿರೋ ಪ್ಲೇಮಕುಮಾರಿ.. ನಾನು ಕುಲಗೆಟ್ಟು ಹೋಗಿರೋ ರಾಮ್ದಾಸನಿಗೆ ಬಾಳು ಕೊಡ್ತೇನೆ, ಈ ಓತಿಕ್ಯಾತದ ಮೂತಿಯವನ ಬಾಳು ಬಂಗಾರ ಮಾಡಿ, ಮಾನ ಹರಿದು ಊರು ಬಾಗಲು ಮಾಡಿ, ಅವನ ಹಣೆಗೆ ಅಕ್ಕಿಕಾಳು ಮಡಗೋತನಕ ನಾನು ಬ್ಯೂಟಿಪಾರ್ಲರಿನಲ್ಲಿ ಐಬ್ರೋ ಮಾಡ್ಸಲ್ಲ ಅಂತ ಶಪಥಗೈದಿದ್ದಾರೆ. ಈ ವೀರಪ್ರತಿಜ್ಞೆ ತಿಳಿದ ರಾಮ್ದಾಸನು ಕೆ.ಆರ್.ಪುರದ ಬಾರ್‍ನ ಟಾಯ್ಲೆಟ್ಟಿನಲ್ಲಿ ಕುಳಿತು ಗೊಳೋ ಅಂತ ಅಳುತ್ತಿದ್ದಾರೆಂದು ಬಾರ್ ಸಪ್ಲೈಯರ್ ಮಾಹಿತಿ ನೀಡಿದ್ದಾರೆ.

*****

ರಾಜಕಾರಣಿಗಳು ಜನರ ದುಡ್ಡು ದೋಚುವುದನ್ನು ನೀವು ಕೇಳಿದ್ದೀರಿ, ಈಗ ಟಾಯ್ಲೆಟ್, ಕಮೋಡ್, ಪೈಪುಗಳನ್ನೂ ಬಿಡದೆ ದೋಚುತ್ತಿರುವುದು ಹೊಸ ವಿಷಯ. ವಿಷ್ಯ ಏನಪ್ಪ ಅಂದ್ರೆ ಕಾರವಾರದ ಹಿಂದಿನ ಕೈ ಪಕ್ಷದ ಎಮ್ಮೆಲ್ಲೆ ಸತೀಶ್ ಸೈಲ್ ಎಂಬ ಗಣಿ ಗಢವನು ತನಗೆ ಸರ್ಕಾರ ಒದಗಿಸಿದ್ದ ಕಛೇರಿ ಶೌಚಾಲಯದ ಕಮೋಡು, ಪೈಪು, ಫ್ಲಶ್ ಬ್ಲಾಕ್ಸೆಲ್ಲವನ್ನೂ ಬಿಚ್ಚಿಕೊಂಡು ಮಂಗಮಾಯವಾಗಿದ್ದಾನೆ. ಹೊಸದಾಗಿ ಆಯ್ಕೆಯಾದ ಎಮ್ಮೆಲ್ಲೆ ಲೂಪಾಲಿ ನಾಯ್ಕ ಎಂಬ ಬ್ಲೂಜೆಪಿ ಎಮ್ಮೆಲ್ಲೆ ಈ ಕಛೇರಿಗೆ ಬಂದಾಗ ಟಾಯ್ಲೆಟ್ ರೂಮಿನಲ್ಲಿ ಬಕೀಟು ನಲ್ಲಿಯೊಂದನ್ನು ಬಿಟ್ಟು ಉಳಿದದ್ದೆಲ್ಲ ಠಣಾರ್ ಆಗಿರುವುದು ಕಂಡು ಕಂಗಾಲಾಗಿದ್ದಾರೆ. ಅಜೆರ್ಂಟಾಗಿ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲೂ ಸಾಧ್ಯವಾಗದಂತೆ ಪೀಕಲಾಟಕ್ಕೆ ಸಿಲುಕಿರೋ ಬ್ಲೂಜೆಪಿ ಎಮ್ಮೆಲ್ಲೆಗೆ ಸದ್ಯಕ್ಕೆ ಪೇ & ಯೂಸ್ ಸುಲಭ್ ಶೌಚಾಲಯವೇ ಗತಿಯಾಗಿದೆಯಂತೆ. ತನ್ನನ್ನು ಈ ಸ್ಥಿತಿಗೆ ನೂಕಿ ಹೋಗಿರೊ ಹಳೇ ಎಮ್ಮೆಲ್ಲೆ ಸತೀಶನ ಮೇಲೆ ಟಾಯ್ಲೆಟ್ ಕಳ್ಳತನದ ಕೇಸು ಹಾಕಲು ಲೂಪಾಲಿ ಮೇಡಂ ಸಿದ್ದರಾಗಿದ್ದಾರೆಂದು ಸುಲಭ್ ಶೌಚಾಲಯದ ಸಿಬ್ಬಂದಿ ತಿಳಿಸಿದ್ದಾರೆ. ನೂರಾರು ಕೋಟಿ ಗಣಿ ಯವಾರ ನಡೆಸೋ ಸತೀಶನಿಗೆ ಟಾಯ್ಲೆಟ್ ಐಟಂಗಳನ್ನ ಕದ್ಕೊಂಡು ಹೋಗೋ ದುರ್ಗತಿ ಯಾಕೆ ಬಂತೆಂದು ವಿಚಾರಿಸಿದಾಗ ಹೊಸ ಸಂಗತಿಯೊಂದು ಬಯಲಾಗಿದೆ. ವಾಸ್ತುಪ್ರಕಾರ ಪೂಜೆ ಮಾಡಿ ಅಳವಡಿಸಿರೋ ಇದೇ ಐಟಂಗಳನ್ನು ಬಳಸಿದ್ರೆ ನಿನಗೆ ಒಳ್ಳೆಯದೆಂದು ಗಢವ ಗೋರಿಲ್ಲ ಬ್ರಮ್ಮಾಂಡ ಪಿಂಡ ಟಾಯ್ಲೆಟ್ಟೋಪದೇಶ ಮಾಡಿದ್ದನಂತೆ. ಅದಕ್ಕೆಂದು ಅಧಿಕಾರ ಎಗರಿಹೋದ ಮೇಲೆ ಮಾಜಿ ಎಮ್ಮೆಲ್ಲೆ ಸತೀಶನು ಟಾಯ್ಲೆಟ್ಟನ್ನು ಅನಾಮತ್ತಾಗಿ ಪಾರ್ಟ್ ಪಾರ್ಟಾಗಿ ಬಿಚ್ಚಿಕೊಂಡು ಹೋಗಿದ್ದಾನೆಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.

*****

ದನದ ಮಾಂಸ ತಿನ್ನುವುದನ್ನು ನಿಲ್ಲಿಸಿದರೆ, ಗೋರಕ್ಷಕರಿಂದ ನಡೆಯುತ್ತಿರುವ ದನಸಾಗಾಟಗಾರರ ಕೊಲೆಗಳು ನಿಲ್ಲುತ್ತವೆಂದು ರಾಷ್ಟ್ರೀಯ ಸರ್ವನಾಶಕ ಸಂಘದ ಇಂದ್ರೇಶನೆಂಬ ಮುದಿಹೋರಿ ಸ್ಟೇಟ್‍ಮೆಂಟ್ ಎಸೆದಿದೆ. ‘ದನದಮಾಂಸ ತಿನ್ನುವರನ್ನು ನಾವು ಕೊಲ್ತಾನೇ ಇರ್ತೇವೆ, ಜೀವ ಬೇಕೋ ದನದ ಮಾಂಸ ಬೇಕೋ?’ ಅಂತ ಬೆದರಿಕೆಯೊಡ್ಡಿದೆ. ಇತ್ತಕಡೆ ಪಕೋಡತಾತನ ಆಳ್ವಿಕೆಯಲ್ಲಿ ಇಂಡಿಯದೇಶ ಜಗತ್ತಿನಲ್ಲೇ ಅತಿದೊಡ್ಡ ದನದಮಾಂಸ ರಫ್ತುದಾರ ದೇಶವಾಗಿದೆ. ದನಹಸುಗಳನ್ನು ಕೊಂದು ರಫ್ತುಮಾಡೋ ಕಂಪನಿಗಳಿಂದ ಎಂಜಲೆತ್ತಿಕೊಂಡು ಓಡಾಡ್ತಿರೋ ಇವರು ದನಗಳನ್ನು ರಕ್ಷಿಸೋ ಮಾತನಾಡುವುದು, ವಿಕೃತಕಾಮಿ ಉಮೇಶ್ ರೆಡ್ಡಿ ಮಹಿಳಾ ಸುರಕ್ಷತೆ ಬಗ್ಗೆ ಭಾಷಣ ಹೊಡೆದಂತೆ ಕೇಳುತ್ತದೆಯೆಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...