Homeಅಂಕಣಗಳುಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

ಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

- Advertisement -
- Advertisement -

ಕೇಳುಗರಿಗೆಲ್ಲ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಉಡುಪಿಯ ಅಷ್ಟಮಠದ ಶಿರೂರು ಸ್ವಾಮಿಗಳ ಪಾಯ್ಸನ್ ಫುಡ್ ಸಾವಿಗೆ ಕಿಂಚಿತ್ತೂ ಕರುಳು ಕರಗದ ತೇಜಾವರ ಸ್ವಾಮಿಗಳು, ಆ ಸ್ವಾಮಿ ನಂತರ ಫೊರೆನ್ಸಿಕ್ ಸೈನ್ಸನ್ನೇ ನುಣ್ಣಗೆ ಅರೆದು ಗಟಗಟ ಕುಡಿದವರಂತೆ ಕೆಕರುಮಕರಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಸ್ವಾಮಿ ಎಣ್ಣೆ ತಗತಿದ್ದ, ಹೆಣ್ಮಕ್ಕಳ ಮ್ಯಾಟ್ರಲ್ಲಿ ವೀಕ್ ಇದ್ದ, ಹಂಗಾಗಿ ಸತ್ತೋಗಿರಬೇಕು ಅಂತ ತೇಜಾವರರು ಕೀರಲು ದನಿಯಲ್ಲಿ ಊಳಿಟ್ಟಿದ್ದಾರೆ. ದಿವಂಗತ ಸ್ವಾಮಿ ಬದುಕಿದ್ದಾಗ “ಎಂಟು ಮಠಗಳ ಎಲ್ಲ ಸ್ವಾಮುಗೋಳು ಮ್ಯಾರೇಜ್ ಮಾಡ್ಕಂಡು, ಕದ್ದು ಮಕ್ಕಳು ಹುಟ್ಟುಸಿ, ಹುಟ್ಟಿಸಿದ ಮಕ್ಳೆಲ್ಲವನ್ನು ಕದ್ದು ಮಡಗಿದ್ದಾರೆ, ಬಾಂಬೆ, ಪೂನಾದಲ್ಲಿ ಹೋಟೆಲ್ ಬ್ಯುಜಿನೆಸ್ ನಡುಸ್ತಾವ್ರೆ, ಮೀಟ್ರುಬಡ್ಡಿಗೆ ಸಾಲ ಕೊಟ್ಟು ಪರ್ಸೆಂಟೇಜ್ ಬಡ್ಡಿ ಯವಾರ ನಡುಸ್ತಾವ್ರೆ” ಅಂತ ಮುರಕೊಂಡು ಬಿದ್ದಿದ್ದಾಗ ಬಾಯಿಗೆ ಹೊಲಿಗೆ ಹಾಕ್ಕಂಡು ಕಮಕ್ ಕಿಮಕ್ ಅನ್ನದೆ ಇದ್ದ ತೇಜಾವರರಿಗೆ ಇದ್ದಕ್ಕಿದ್ದಂತೆ ಈ ಧೈರ್ಯ ಎಲ್ಲಿಂದ ಬಂತು ಎಂದು ಭಕ್ತಾದಿಗಳೇ ಗಾಬರಿಯಾಗಿದ್ದಾರೆ. ನೂರಾರು ಸಲ ಮಠದ ಗಾಯಕಿಯೊಬ್ಬರ ಮೇಲೆ ರೇಪು ಮಾಡಿ ಕೋರ್ಟಿಂದ ಉಗಿಸಿಕೊಂಡ ಕೌಬಾಯ್ ಸ್ವಾಮಿ ವಿಷಯದಲ್ಲಿ ಲವಿಡವಿ ಸೈಲೆನ್ಸ್ ಮೈಂಟೈನ್ ಮಾಡುತ್ತ ಸಪೋರ್ಟ್ ಕೊಡೋ ತೇಜಾವರರು ತಮ್ಮ ಎಂಟು ಮಠಗಳ ಸ್ವಾಮಿಗಳ ರಹಸ್ಯವನ್ನೆಲ್ಲ ಹರಾಜು ಹಾಕುತ್ತಿದ್ದ ಸ್ವಾಮಿ ಅನುಮಾನಾಸ್ಪದವಾಗಿ ಸತ್ತ ನಂತರವೂ ಹಗೆ ಸಾಧಿಸಿ ಕಳಪೆ ಮಾತನ್ನಾಡುವುದು ಆ ಮನುಷ್ಯನ ನೀಚತನ ಎಂಬ ಜನ ಮಾತಾಡಿಕೊಳ್ಳುತ್ತಿರುವುದು ತಿಳಿದುಬಂದಿದೆ.

*****

ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ರಂಥ ಪಳಗಿದ ಆರ್ಥಿಕತಜ್ಞರಿಗೆ ಕೊಡಬಾರದ ಕಾಟ ಕೊಟ್ಟು ಒಕ್ಕಲೆಬ್ಬಿಸಿದ ಶಿಲಾಯುಗದ ಸನಾತನಿ ಪೀಡೆಗಳು, ಚೀಪಿದ ಮೂಳೆ ತಮ್ಮತ್ತ ಬಿಸಾಕುವ ಅಂಬಾನಿಗಳ ಕೊಂಪೆಯಿಂದ ಕೊಳೆತ ಮಿದುಳಿನ ಆಸಾಮಿಯನ್ನು ತಂದು ಆ ಜಾಗಕ್ಕೆ ಕೂರಿಸಿದ್ದು ಈಗ ಹಳೆಯ ವಿಷಯ, ಹೊಸ ವಿಷಯ ಏನಪ್ಪ ಅಂದ್ರೆ ರಿಸರ್ವ್ ಬ್ಯಾಂಕೆಂದರೆ ಬೊಂಬಾಯ್ ಮಿಠಾಯ್ ಮಾರೋ ಅಂಗಡಿ ಅಂತ ಭ್ರಮೆಯಲ್ಲಿರೋ ಈ ಅಂಬಾನಿ ಜವಾನನಿಗೆ ಒಂದೈವತ್ತು ಹುಚ್ಚರು ಒಮ್ಮೆಲೇ ಕಚ್ಚಿ ತಲೆ ಇನ್ಫೆಕ್ಷನ್ ಆಗಿರೋ ಸಾಧ್ಯತೆಗಳು ಕಂಡುಬರುತ್ತಿವೆ. ಜನರು ಬಳಸುತ್ತಿದ್ದ ಮುದ್ದಾದ ನೋಟುಗಳನ್ನು ಕಚಡಿ ಪಿಚಡಿ ಆಕಾರದಲ್ಲಿ ಇಷ್ಟಬಂದಂತೆ ಚಡ್ಡಿ ಬದಲಿಸಿದಂತೆ ಬದಲಿಸಿ ಒಂದರ ಹಿಂದೊಂದು ಪೀಕಲಾಟ ತಂದಿಡ್ತಿರೋ ಉರ್ಜಿತ್ ಪಟೇಲ್ ಎಟಿಎಂ ವ್ಯವಸ್ಥೆಗೇ ಡಿಚ್ಚಿ ಹೊಡೆಯುತ್ತಿದ್ದಾನೆ. ಇವನು ಬದಲಿಸೋ ನೋಟುಗಳ ಸೈಜು ಎಟಿಎಂಗಳಿಗೆ ಸರಿ ಹೋಗದೆ ಬ್ಯಾಂಕುಗಳು ಲಬೋಲಬೋ ಬಾಯಿ ಬಡ್ಕೊಂಡ್ರೂ ಹೊಸದಾಗಿ 100 ರುಪಾಯಿ ನೋಟು ಡಿಸೈನ್ ಚೇಂಜ್ ಮಾಡಿ ಚಲಾವಣೆಗೆ ಬಿಡಲಾಗಿದೆ. ನೋಟ್ ಬ್ಯಾನ್ ಟೈಮಿನಲ್ಲಿ ನಾವು ನೋಟೇ ಇಲ್ಲದ ಕ್ಯಾಶ್‍ಲೆಸ್ ಎಕಾನಮಿ ನಿರ್ಮಿಸ್ತೀವಿ ಅಂತ ಬೊಗಳಿದವರು ತಿಂಗಳಿಂದ ತಿಂಗಳಿಗೆ ನೋಟುಗಳ ಪ್ರಿಂಟಿಂಗನ್ನು ಹೆಚ್ಚಿಸ್ತಿರೋದ್ಯಾಕೆ ಅನ್ನೋ ಮರ್ಮ ಯಾರಿಗೂ ಗೊತ್ತಾಗ್ತ ಇಲ್ಲ. ಜನರ ಪಡಿಪಾಟಲುಗಳನ್ನು ಸೈಕೋಗಳಂತೆ ಎಂಜಾಯ್ ಮಾಡ್ತಿರೋ ಈ ಸನಾತನಿ ಪಿಶಾಚಿಗಳಿಗೆ ಬರಬಾರದ್ದು ಬಂದು ಹುಳ ಬಿದ್ದು ಸಾಯಲೆಂದು ಜನರು ಶಾಪ ಹಾಕುತ್ತಿರುವುದು ತಿಳಿದು ಬಂದಿದೆ.

*****

ವಯಸ್ಸಲ್ಲದ ವಯಸ್ಸಲ್ಲಿ “ಕುಚ್ ಕುಚ್ ಹೋತಾ ಹೈ, ಬ್ಲೂಜೆಪಿವಾಲೇ ಲಡ್ಕಿ ಲೇಜಾಯೇಂಗೆ” ಅಂತ ಸರ್ಕಾರಿ ಕ್ಲರ್ಕ್ ಹುಡುಗಿಯೊಂದಿಗೆ ಕದ್ದುಮುಚ್ಚಿ ಕುಸುಮುಸು ಮಾಡಿ ಕೈ ಎತ್ತಿದ್ದ ಬ್ಲೂಜೆಪಿಯ ರಾಮದಾಸನಿಗೆ ಶನಿ ಮಕದ ಮೇಲೆ ಅಂಡೂರಿ ಕುಂತುಬಿಟ್ಟಿದ್ದಾನೆ. ಎಲ್ಲ ಮುಗಿದ ಮೇಲೆ ರಾಮ್ದಾಸ ಕೈಗೆ ಸಿಗದಂಗೆ ತಪ್ಪಿಸ್ಕಂಡು ಓಡೋಗವ್ನೆ ಅಂತ ರೊಚ್ಚಿಗೆದ್ದಿರೋ ಪ್ಲೇಮಕುಮಾರಿಯೆಂಬ ರಾಮ್ದಾಸನ ಮಾಜಿ ಲವರ್ರು ಸೀದಾ ಕೈಕೊಟ್ಟ ಮಿಡಲ್ ಏಜ್ ಮನ್ಮಥನ ಆಫೀಸಿನ ಮುಂದೆ ಧುಡುಮ್ಮನೆ ಬಿದ್ದಿದೆ. ದೀಪಾವಳಿಯ ವಿಷ್ಣುಚಕ್ರದಂತೆ ಗರಗರಗರ ತಿರುಗುತ್ತ ನೆಲದ ಮೇಲೆ ಕೂಚಿಪುಡಿ-ಭರತನಾಟ್ಯ ಎರಡನ್ನೂ ಮಿಕ್ಸ್ ಮಾಡಿದ ಘನಘೋರ ನೃತ್ಯವಾಡಿ ರಾಮ್ದಾಸ್ ಕಛೇರಿಯೆದುರು ನೆರೆದ ಬ್ಲೂಜೆಪಿ ಕಾರ್ಯಕರ್ತರಿಗೆ ಪುಗ್ಸಟ್ಟೆ ಮನರಂಜನೆ ಒದಗಿಸಿದ್ದಾರೆ. ಈ ಹೆಣ್ಣಿನೊಡನೆ ಕಳ್ಳಾಟವಾಡಿ ಕೈಗೆ ಚೊಂಬು ಕೊಟ್ಟು ಯಾಮಾರಿಸಿ ಇನ್ನೊಂದರ ಬೆನ್ನುಬೀಳಲು ರೆಡಿಯಾಗಿದ್ದ ರಾಮ್ದಾಸನ ಗಂಟಲಿಗೆ ಹೆಟ್ಟಿದ ಗಢಾರಿಯಾಗಿರೋ ಪ್ಲೇಮಕುಮಾರಿ.. ನಾನು ಕುಲಗೆಟ್ಟು ಹೋಗಿರೋ ರಾಮ್ದಾಸನಿಗೆ ಬಾಳು ಕೊಡ್ತೇನೆ, ಈ ಓತಿಕ್ಯಾತದ ಮೂತಿಯವನ ಬಾಳು ಬಂಗಾರ ಮಾಡಿ, ಮಾನ ಹರಿದು ಊರು ಬಾಗಲು ಮಾಡಿ, ಅವನ ಹಣೆಗೆ ಅಕ್ಕಿಕಾಳು ಮಡಗೋತನಕ ನಾನು ಬ್ಯೂಟಿಪಾರ್ಲರಿನಲ್ಲಿ ಐಬ್ರೋ ಮಾಡ್ಸಲ್ಲ ಅಂತ ಶಪಥಗೈದಿದ್ದಾರೆ. ಈ ವೀರಪ್ರತಿಜ್ಞೆ ತಿಳಿದ ರಾಮ್ದಾಸನು ಕೆ.ಆರ್.ಪುರದ ಬಾರ್‍ನ ಟಾಯ್ಲೆಟ್ಟಿನಲ್ಲಿ ಕುಳಿತು ಗೊಳೋ ಅಂತ ಅಳುತ್ತಿದ್ದಾರೆಂದು ಬಾರ್ ಸಪ್ಲೈಯರ್ ಮಾಹಿತಿ ನೀಡಿದ್ದಾರೆ.

*****

ರಾಜಕಾರಣಿಗಳು ಜನರ ದುಡ್ಡು ದೋಚುವುದನ್ನು ನೀವು ಕೇಳಿದ್ದೀರಿ, ಈಗ ಟಾಯ್ಲೆಟ್, ಕಮೋಡ್, ಪೈಪುಗಳನ್ನೂ ಬಿಡದೆ ದೋಚುತ್ತಿರುವುದು ಹೊಸ ವಿಷಯ. ವಿಷ್ಯ ಏನಪ್ಪ ಅಂದ್ರೆ ಕಾರವಾರದ ಹಿಂದಿನ ಕೈ ಪಕ್ಷದ ಎಮ್ಮೆಲ್ಲೆ ಸತೀಶ್ ಸೈಲ್ ಎಂಬ ಗಣಿ ಗಢವನು ತನಗೆ ಸರ್ಕಾರ ಒದಗಿಸಿದ್ದ ಕಛೇರಿ ಶೌಚಾಲಯದ ಕಮೋಡು, ಪೈಪು, ಫ್ಲಶ್ ಬ್ಲಾಕ್ಸೆಲ್ಲವನ್ನೂ ಬಿಚ್ಚಿಕೊಂಡು ಮಂಗಮಾಯವಾಗಿದ್ದಾನೆ. ಹೊಸದಾಗಿ ಆಯ್ಕೆಯಾದ ಎಮ್ಮೆಲ್ಲೆ ಲೂಪಾಲಿ ನಾಯ್ಕ ಎಂಬ ಬ್ಲೂಜೆಪಿ ಎಮ್ಮೆಲ್ಲೆ ಈ ಕಛೇರಿಗೆ ಬಂದಾಗ ಟಾಯ್ಲೆಟ್ ರೂಮಿನಲ್ಲಿ ಬಕೀಟು ನಲ್ಲಿಯೊಂದನ್ನು ಬಿಟ್ಟು ಉಳಿದದ್ದೆಲ್ಲ ಠಣಾರ್ ಆಗಿರುವುದು ಕಂಡು ಕಂಗಾಲಾಗಿದ್ದಾರೆ. ಅಜೆರ್ಂಟಾಗಿ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲೂ ಸಾಧ್ಯವಾಗದಂತೆ ಪೀಕಲಾಟಕ್ಕೆ ಸಿಲುಕಿರೋ ಬ್ಲೂಜೆಪಿ ಎಮ್ಮೆಲ್ಲೆಗೆ ಸದ್ಯಕ್ಕೆ ಪೇ & ಯೂಸ್ ಸುಲಭ್ ಶೌಚಾಲಯವೇ ಗತಿಯಾಗಿದೆಯಂತೆ. ತನ್ನನ್ನು ಈ ಸ್ಥಿತಿಗೆ ನೂಕಿ ಹೋಗಿರೊ ಹಳೇ ಎಮ್ಮೆಲ್ಲೆ ಸತೀಶನ ಮೇಲೆ ಟಾಯ್ಲೆಟ್ ಕಳ್ಳತನದ ಕೇಸು ಹಾಕಲು ಲೂಪಾಲಿ ಮೇಡಂ ಸಿದ್ದರಾಗಿದ್ದಾರೆಂದು ಸುಲಭ್ ಶೌಚಾಲಯದ ಸಿಬ್ಬಂದಿ ತಿಳಿಸಿದ್ದಾರೆ. ನೂರಾರು ಕೋಟಿ ಗಣಿ ಯವಾರ ನಡೆಸೋ ಸತೀಶನಿಗೆ ಟಾಯ್ಲೆಟ್ ಐಟಂಗಳನ್ನ ಕದ್ಕೊಂಡು ಹೋಗೋ ದುರ್ಗತಿ ಯಾಕೆ ಬಂತೆಂದು ವಿಚಾರಿಸಿದಾಗ ಹೊಸ ಸಂಗತಿಯೊಂದು ಬಯಲಾಗಿದೆ. ವಾಸ್ತುಪ್ರಕಾರ ಪೂಜೆ ಮಾಡಿ ಅಳವಡಿಸಿರೋ ಇದೇ ಐಟಂಗಳನ್ನು ಬಳಸಿದ್ರೆ ನಿನಗೆ ಒಳ್ಳೆಯದೆಂದು ಗಢವ ಗೋರಿಲ್ಲ ಬ್ರಮ್ಮಾಂಡ ಪಿಂಡ ಟಾಯ್ಲೆಟ್ಟೋಪದೇಶ ಮಾಡಿದ್ದನಂತೆ. ಅದಕ್ಕೆಂದು ಅಧಿಕಾರ ಎಗರಿಹೋದ ಮೇಲೆ ಮಾಜಿ ಎಮ್ಮೆಲ್ಲೆ ಸತೀಶನು ಟಾಯ್ಲೆಟ್ಟನ್ನು ಅನಾಮತ್ತಾಗಿ ಪಾರ್ಟ್ ಪಾರ್ಟಾಗಿ ಬಿಚ್ಚಿಕೊಂಡು ಹೋಗಿದ್ದಾನೆಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.

*****

ದನದ ಮಾಂಸ ತಿನ್ನುವುದನ್ನು ನಿಲ್ಲಿಸಿದರೆ, ಗೋರಕ್ಷಕರಿಂದ ನಡೆಯುತ್ತಿರುವ ದನಸಾಗಾಟಗಾರರ ಕೊಲೆಗಳು ನಿಲ್ಲುತ್ತವೆಂದು ರಾಷ್ಟ್ರೀಯ ಸರ್ವನಾಶಕ ಸಂಘದ ಇಂದ್ರೇಶನೆಂಬ ಮುದಿಹೋರಿ ಸ್ಟೇಟ್‍ಮೆಂಟ್ ಎಸೆದಿದೆ. ‘ದನದಮಾಂಸ ತಿನ್ನುವರನ್ನು ನಾವು ಕೊಲ್ತಾನೇ ಇರ್ತೇವೆ, ಜೀವ ಬೇಕೋ ದನದ ಮಾಂಸ ಬೇಕೋ?’ ಅಂತ ಬೆದರಿಕೆಯೊಡ್ಡಿದೆ. ಇತ್ತಕಡೆ ಪಕೋಡತಾತನ ಆಳ್ವಿಕೆಯಲ್ಲಿ ಇಂಡಿಯದೇಶ ಜಗತ್ತಿನಲ್ಲೇ ಅತಿದೊಡ್ಡ ದನದಮಾಂಸ ರಫ್ತುದಾರ ದೇಶವಾಗಿದೆ. ದನಹಸುಗಳನ್ನು ಕೊಂದು ರಫ್ತುಮಾಡೋ ಕಂಪನಿಗಳಿಂದ ಎಂಜಲೆತ್ತಿಕೊಂಡು ಓಡಾಡ್ತಿರೋ ಇವರು ದನಗಳನ್ನು ರಕ್ಷಿಸೋ ಮಾತನಾಡುವುದು, ವಿಕೃತಕಾಮಿ ಉಮೇಶ್ ರೆಡ್ಡಿ ಮಹಿಳಾ ಸುರಕ್ಷತೆ ಬಗ್ಗೆ ಭಾಷಣ ಹೊಡೆದಂತೆ ಕೇಳುತ್ತದೆಯೆಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...