Homeಸಾಮಾಜಿಕಈ ವಯಸ್ಸಿನಲ್ಲಿ ಇಂಥ ಆಪಾದನೆ ಬರಬಾರದಿತ್ತು!

ಈ ವಯಸ್ಸಿನಲ್ಲಿ ಇಂಥ ಆಪಾದನೆ ಬರಬಾರದಿತ್ತು!

- Advertisement -
- Advertisement -

ಕರ್ನಾಟಕದ ಜನಸ್ತೋಮಕ್ಕೆ ಅನ್ನ ನೀರು ವಸತಿ ಮತ್ತು ಉದ್ಯೋಗ ನೀಡುವ ಜವಾಬ್ದಾರಿ ಹೊತ್ತವರಂತೆ ಬೊಬ್ಬಿರಿಯುತ್ತಿದ್ದ ಅಷ್ಟಮಠಗಳ ಯತಿಗಳ ಕರ್ಮಕಾಂಡ ಅಷ್ಟ ದಿಕ್ಕಿಗೂ ಹರಡುತ್ತಿದೆಯಲ್ಲಾ.
ಕರ್ಮಕಾಂಡದ ರುವಾರಿಯಾಗಿದ್ದ ಶಿರೂರು ಸ್ವಾಮಿ ನಿಜಕ್ಕೂ ಈ ಸಮಯದಲ್ಲಿ ಹುತಾತ್ಮರಂತೆ ಕಾಣುತ್ತಿದ್ದಾರೆ. ಸದರಿ ಸ್ವಾಮಿಯನ್ನು ಏಳನೇ ವರ್ಷಕ್ಕೆ ಸನ್ಯಾಸಿ ಮಾಡಲಾಗಿತ್ತು ಪ್ರಾಪ್ತವಯಸ್ಸಿಗೆ ಬಂದ ಶಿರೂರು ಯಾವ ಎಗ್ಗೂಇಲ್ಲದೆ ಪಂಚೇಂದ್ರಿಯಗಳನ್ನ ಧಾರಾಳವಾಗಿಯೇ ಬಳಸತೊಡಗಿದ್ದಲ್ಲದೆ ತನ್ನ ಬಗ್ಗೆ ಮಾತನಾಡಲು ಮುಂದಾದ ಇತರ ಸ್ವಾಮಿಗಳ ಜಾತಕವನ್ನೇ ಬಿಚ್ಚಿಡುವುದಾಗಿ ಬೆದರಿಕೆ ಹಾಕಿದ್ದರಂತಲ್ಲಾ. ಹಾಗೆ ನೋಡಿದರೆ ಇದು ಬೆದರಿಕೆಯಲ್ಲ ನಿಮ್ಮ ಕೆಲಸವನ್ನ ನೀವು ಮಾಡಿ ನನ್ನ ಕೆಲಸವನ್ನ ನಾನು ಮಾಡುತ್ತೇನೆ ಎಂದ ಶಿರೂರು ಎಲ್ಲವನ್ನ ಕಂಠಪೂರ್ತಿ ಅನುಭವಿಸಿದರಂತಲ್ಲಾ. ಅಂತೂ ಬುದ್ದಿ ಮತ್ತು ಭಾಷೆಯ ಬಗ್ಗೆ ನಿಯಂತ್ರಣ ಕಳೆದುಕೊಂಡ ಶಿರೂರು ಅಷ್ಟಮಠಕ್ಕೆ ಅನಿಷ್ಟವಾದ ಕೂಡಲೇ ಅವರ ಕೊಲೆಯಾಯ್ತಂತಲ್ಲಾ ಥೂತ್ತೇರಿ.

*****

ಶಿರೂರು ಸ್ವಾಮಿಯ ಅಕ್ರಮ ಸಂತಾನದಂತಿರುವ ಕೆಲವೇ ಕೆಲವು ಮಾಧ್ಯಮದ ಮುಸಂಡಿಗಳು ಶಿರೂರನ ಬಾಲಲೀಲೆ, ಪ್ರಾಪ್ತ ವಯಸ್ಸಿನ ಬಾನಗಡಿ ಹಾಗೂ ಸ್ವಾಮಿಯಾದ ನಂತರ ನಡೆಸಿದ ಕಾಮಕ್ರೀಡೆಯನ್ನ ಮರೆಮಾಚಿ ರಮ್ಯಾಶೆಟ್ಟಿ ಎಂಬುವಳು ಮಾಯಾಂಗನೆ, ವಿಷಕನ್ಯೆ, ನಯವಂಚಕಿ ಶಿರೂರು ಶಿರಭಾಗದಲ್ಲಿದ್ದ ಸರವನ್ನು ಲಫಟಾಯಿಸಿದ್ದಾಳೆ. ಕೈ ಕಡಗವನ್ನು ಕಿತ್ತುಕೊಂಡಿದ್ದಾಳೆ. ಇವೆಲ್ಲವನ್ನ ದೋಚಿಕೊಂಡು ಹೋಗುವ ಮುನ್ನ ಪಾಪ ದೇವರಂತಹ ಶಿರೂರು ಸ್ವಾಮಿಗೆ ವಿಷಪ್ರಾಶನ ಮಾಡಿಸಿರಲುಬಹುದು. ಆಕೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವಂತಹ ಬುರ್ಖಾ ಧರಿಸಿದ್ದಳು ಎಂದರೆ, ಪಾತಕಕೃತ್ಯ ನಡೆಸಿರುವುದಕ್ಕೆ ಇನ್ನಾವ ಸಾಕ್ಷಿ ಬೇಕು ಎಂಬಂತೆ ಬಿತ್ತರಿಸುತ್ತ ಕೂತಿವೆಯಂತಲ್ಲಾ ಥೂತ್ತೇರಿ.

*****

ಅಷ್ಟಮಠದ ಯತಿಗಳಲ್ಲೇ ಸರ್ವಶ್ರೇಷ್ಠರೂ, ಮನುಕುಲತಿಲಕರೂ ಮತ್ತು ಕೃಷ್ಣನ ಭಾಗಕ್ಕೆ ವಾಸುದೇವನಂತಿರುವ ಪೇಜಾವರ ಶ್ರೀಗಳನ್ನ ಮಾತನಾಡಿಸಿದರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಟೋನ್…… ಕೃಷ್ಣ ನೀ ಬೇಗನೇ ಬಾರೋ, ಬೇಗನೆ ಬಂದು ಮುಕ್ತಿಯ ತೋರೋ. ಕೃಷ್ಣಾ………….. ಹಲೋ
“ನಮಸ್ಕಾರ ಸ್ವಾಮೀಜಿ ನಾನು ಯಾಹೂ.”
“ಯಾರ ಬಳಿಯಲ್ಲೂ ಮಾತನಾಡಲು ಸಮಯವಿಲ್ಲ.”
ಒಂದೇ ನಿಮಿಷ ಸ್ವಾಮಿ.”
“ಸಾಧ್ಯವಿಲ್ಲ.”
“ಹಾಗಾದ್ರೆ ನಮ್ಮ ಮನಸ್ಸಿಗೆ ಬಂದದ್ದನ್ನ ಬರಕೊಳ್ತೀವಿ ಸ್ವಾಮಿ.”
“ಎರಡೇ ಮಾತಲ್ಲಿ ಕೇಳಿ.”
“ಧರ್ಮರಾಯ ಇದ್ದ ಜಾಗದಲ್ಲಿ ಮಳೆ ಬೆಳೆ ಜೊತೆಗೆ ಅಪರಾಧಗಳು ನಡೀತಿರಲಿಲ್ಲ. ಹಾಗೇ ನಮ್ಮ ಪೇಜಾವರರು ನೆಲೆಸಿದ ಜಾಗ ಅಂದುಕೊಂಡಿದ್ದೋ.”
“ಆ ನಂಬಿಕೆಗೆ ಈಗ ಯಾವ ತೊಂದರೆಯೂ ಆಗಿಲ್ಲ.”
“ಇದೇನು ಸ್ವಾಮಿ ಹೀಗಂತಿರಿ, ಪ್ರಳಯದಂತಹ ಮಳೆ ಆಗಿದೆ, ಶಿರೂರು ಸ್ವಾಮಿ ಕೊಲೆಯಾಗಿದೆ.”
“ಅದನ್ನ ಕೊಲೆ ಅಂತ ಈಗಲೇ ಹೇಳಲು ಬರುವುದಿಲ್ಲ.”
“ನಂತರ ಹೇಳಬಹುದಾ.”
“ನೋಡಿ ಇವರೆ ಈಗ ನಾವು ಯಾವ ವಿಷಯ ಕುರಿತು ಏನೂ ಹೇಳುವುದಿಲ್ಲ.”
“ಅಂತಹ ಸ್ಥಿತಿ ಶಿರೂರು ತಂದಿಟ್ಟರಲ್ಲಾ ಸ್ವಾಮೀಜಿ.”
“ಅಂತಹ ಸ್ಥಿತಿ ಬಂದಿಲ್ಲ.”
“ನಿಮ್ಮ ಬುಡಕ್ಕೆ ಬಂದಿದೆಯಲ್ಲಾ ಸ್ವಾಮಿ.”
“ನಮ್ಮ ಬುಡಕ್ಕೆ ಯಂತ ಬಂದಿಲ್ಲ.”
“ಪೇಜಾವರಶ್ರೀ ತಾರುಣ್ಯದಲ್ಲಿ ತರುಣಿಯ ಸಂಗ ಮಾಡಿದ್ದರು ಅದರ ಫಲವಾಗಿ ಮಗಳಿದ್ದಾಳೆ ಅಂತ ದೂರಿದೆಯಲ್ಲ ಸ್ವಾಮೀಜಿ.”
“ಅದನ್ನ ಸಾಭೀತುಮಾಡಿದರೆ ಪೀಠತ್ಯಾಗ ಮಾಡುತ್ತೇನೆ.”
“ನೀವು ಮಾಡದೆಯಿದ್ರೂ ಆಯಸ್ಸು ಅವಧಿ ಎಲ್ಲ ಮುಗಿದಿದೆ, ಈಗಿನ ನಿಮ್ಮ ತ್ಯಾಗ ಒಂಥರ ಮಾಧ್ವ ಕುಲವೇ ತಲೆತಗ್ಗಿಸುವಂತದ್ದು.”
“ಮಾಧ್ವಕುಲ ತಲೆತಗ್ಗಿಸುವಂತಹ ಕೆಲಸ ನಾವು ಮಾಡಿಲ್ಲ.”
“ನೀವು ಮಾಡದೇಯಿದ್ರೂ ಮಾಡೋರಿಗೆ ಪುಸಲಾಯಿಸಿದ್ದೀರಿ.”
“ಅದನ್ನ ಸಬೀತು ಮಾಡಿದರೆ ಪೀಠತ್ಯಾಗ ಮಾಡ್ತೇನೆ.”
“ಮಾಡಬೇಡಿ ಅಲ್ಲೇ ಇರಿ, ಆದರೆ ಈ ಹಿಂದೆ ಹೆಣ್ಣಿನ ಸಂಗದ ಬಗ್ಗೆ ಪ್ರಚೋದನೆಗೊಂಡ ಸ್ವಾಮಿಯೊಬ್ಬರು ಪೀಠತ್ಯಾಗ ಮಾಡಿ ಸಂಸಾರಿಯಾಗುತ್ತೇನೆ ಅಂದಾಗ ತಾವು ಹಾಗೆ ಮಾಡಬೇಡಿ, ಪೀಠದಲ್ಲಿ ಇದ್ದುಕೊಂಡೇ ಗುಟ್ಟಾಗಿ ನಿಭಾಯಿಸಿ ಅನ್ನೋ ಮಾತನ್ನ ತಾವು ಹೇಳಿದ್ದೀರಿ.”
“ಇಲ್ಲ ನಾನು ಹಾಗೆ ಹೇಳಿಲ.್ಲ”
“ತಮ್ಮ ಮಾತನ್ನ ಮೀರಿ ಪೀಠತ್ಯಾಗ ಮಾಡಿ ಈಗ ಅಮೇರಿಕದಲ್ಲಿ ಸಂಸಾರಿಯಾಗಿರೊ ವ್ಯಕ್ತಿ, ನಮ್ಮ ಜೊತೆ ನಿಮ್ಮ ಸಂಧಾನದ ಮಾತನ್ನ ಹಂಚಿಕೊಂಡ್ರು ಇದಕ್ಕಿಂತ ಸಾಕ್ಷಿಬೇಕೆ”
“ನೋಡಿ ಇವರೆ ನಾನು ಹೇಳಿದ್ದು ಸನ್ಯಾಸಿ ಜೀವನ ಕಷ್ಟಕರವಾದದ್ದು ಅದನ್ನ ನಿಭಾಯಿಸಿ ಅಂತ ಹೇಳಿದ್ದು.”
“ಹೊಂದಾಣಿಕೆಯಿಂದ.”
“ಹಾಗಲ್ಲ ಕೃಷ್ಣಪೂಜೆ ಓದು ಧ್ಯಾನವ್ರತಗಳನ್ನ ಮಾಡಿಕೊಂಡು ನಮ್ಮ ಮನಸ್ಸನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಸನ್ಯಾಸಿ ಜೀವನವನ್ನ ಸಾಗಿಸಬೇಕು.”
“ಅದು ಸರಿ ಸ್ವಾಮಿ ನೀವು ಪೂಜೆ ಮಾಡೋ ದೇವರೆ ಸ್ತ್ರೀಲೋಲ. ಮತ್ತೆ ಪೀಡಕನಾಗಿದ್ದ. ಅವನು ಕಟ್ಟಿಕೊಂಡ ಸ್ತ್ರೀಯರ ಸಂಖ್ಯೆ ಅಗಣಿತ, ಅಂತಹ ವ್ಯಕ್ತಿಯನ್ನ ಪೂಜೆ ಮಾಡೋರು ಸನ್ಯಾಸಿ ಜೀವನ ಮಾಡದು ಸುಳ್ಳಲ್ಲವ.”
“ನಾವಿದ್ದೇವಲ್ಲ.”
“ನಿಮ್ಮ ಮಠದಲ್ಲಿದ್ದವರಿಂದಲೇ ನಿಮ್ಮ ಜೀವನವೂ ಅನಾವರಣವಾಯ್ತಲ್ಲ ಸ್ವಾಮಿ.”
“ಯಂತ ಅನಾವರಣವಾಯ್ತು.”
“ಬೇರೆಯವರಿಗೆ ಗೌಪ್ಯ ಸುಖಸಂಸಾರ ಹೇಳಿಕೊಟ್ಟವರು, ಹಾಗೇ ತಾವೂ ಮಾಡುತ್ತಿರಬಹುದಲ್ಲ, ಇಂತ ಅನುಮಾನಗಳು ಈಗ ಹುಟ್ಟಿಕೊಂಡಿವೆ, ತಡವಾದರೂ ಸತ್ಯದರ್ಶನವಾಗುತ್ತಿವೆ. ಕರ್ನಾಟಕದ ಮಠಗಳ ಮಾನ ಹರಾಜಾಗ್ತಾಯಿದೆ. ಇಷ್ಟರ ನಡುವೆ ಇನ್ನೂ ಕೆಲವು ಮಠಗಳು ತಮ್ಮ ನೈತಿಕ ಜವಬ್ದಾರಿ ಬಿಟ್ಟುಕೊಟ್ಟಿಲ್ಲ. ಆದರೆ ನಿಮ್ಮ ಮಠಗಳು ಹಣ ಅಧಿಕಾರ ಸ್ತ್ರೀಶಕ್ತಿ ಮತ್ತು ಮತಾಂಧತೆಯಿಂದ ಪತನವಾಗ್ತಾಯಿವೆ. ಅದೂ ನೈತಿಕವಾಗಿ ನಿಮಗೂ ಹಿಂಗನ್ಸಲ್ಲ ಸ್ವಾಮೀಜಿ……. ಹಲೋ ಹಲೋ ಹಲೋ ಮಾತಾಡಿ ಸ್ವಾಮೀಜಿ..
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...