Homeಸಾಮಾಜಿಕಈ ವಯಸ್ಸಿನಲ್ಲಿ ಇಂಥ ಆಪಾದನೆ ಬರಬಾರದಿತ್ತು!

ಈ ವಯಸ್ಸಿನಲ್ಲಿ ಇಂಥ ಆಪಾದನೆ ಬರಬಾರದಿತ್ತು!

- Advertisement -
- Advertisement -

ಕರ್ನಾಟಕದ ಜನಸ್ತೋಮಕ್ಕೆ ಅನ್ನ ನೀರು ವಸತಿ ಮತ್ತು ಉದ್ಯೋಗ ನೀಡುವ ಜವಾಬ್ದಾರಿ ಹೊತ್ತವರಂತೆ ಬೊಬ್ಬಿರಿಯುತ್ತಿದ್ದ ಅಷ್ಟಮಠಗಳ ಯತಿಗಳ ಕರ್ಮಕಾಂಡ ಅಷ್ಟ ದಿಕ್ಕಿಗೂ ಹರಡುತ್ತಿದೆಯಲ್ಲಾ.
ಕರ್ಮಕಾಂಡದ ರುವಾರಿಯಾಗಿದ್ದ ಶಿರೂರು ಸ್ವಾಮಿ ನಿಜಕ್ಕೂ ಈ ಸಮಯದಲ್ಲಿ ಹುತಾತ್ಮರಂತೆ ಕಾಣುತ್ತಿದ್ದಾರೆ. ಸದರಿ ಸ್ವಾಮಿಯನ್ನು ಏಳನೇ ವರ್ಷಕ್ಕೆ ಸನ್ಯಾಸಿ ಮಾಡಲಾಗಿತ್ತು ಪ್ರಾಪ್ತವಯಸ್ಸಿಗೆ ಬಂದ ಶಿರೂರು ಯಾವ ಎಗ್ಗೂಇಲ್ಲದೆ ಪಂಚೇಂದ್ರಿಯಗಳನ್ನ ಧಾರಾಳವಾಗಿಯೇ ಬಳಸತೊಡಗಿದ್ದಲ್ಲದೆ ತನ್ನ ಬಗ್ಗೆ ಮಾತನಾಡಲು ಮುಂದಾದ ಇತರ ಸ್ವಾಮಿಗಳ ಜಾತಕವನ್ನೇ ಬಿಚ್ಚಿಡುವುದಾಗಿ ಬೆದರಿಕೆ ಹಾಕಿದ್ದರಂತಲ್ಲಾ. ಹಾಗೆ ನೋಡಿದರೆ ಇದು ಬೆದರಿಕೆಯಲ್ಲ ನಿಮ್ಮ ಕೆಲಸವನ್ನ ನೀವು ಮಾಡಿ ನನ್ನ ಕೆಲಸವನ್ನ ನಾನು ಮಾಡುತ್ತೇನೆ ಎಂದ ಶಿರೂರು ಎಲ್ಲವನ್ನ ಕಂಠಪೂರ್ತಿ ಅನುಭವಿಸಿದರಂತಲ್ಲಾ. ಅಂತೂ ಬುದ್ದಿ ಮತ್ತು ಭಾಷೆಯ ಬಗ್ಗೆ ನಿಯಂತ್ರಣ ಕಳೆದುಕೊಂಡ ಶಿರೂರು ಅಷ್ಟಮಠಕ್ಕೆ ಅನಿಷ್ಟವಾದ ಕೂಡಲೇ ಅವರ ಕೊಲೆಯಾಯ್ತಂತಲ್ಲಾ ಥೂತ್ತೇರಿ.

*****

ಶಿರೂರು ಸ್ವಾಮಿಯ ಅಕ್ರಮ ಸಂತಾನದಂತಿರುವ ಕೆಲವೇ ಕೆಲವು ಮಾಧ್ಯಮದ ಮುಸಂಡಿಗಳು ಶಿರೂರನ ಬಾಲಲೀಲೆ, ಪ್ರಾಪ್ತ ವಯಸ್ಸಿನ ಬಾನಗಡಿ ಹಾಗೂ ಸ್ವಾಮಿಯಾದ ನಂತರ ನಡೆಸಿದ ಕಾಮಕ್ರೀಡೆಯನ್ನ ಮರೆಮಾಚಿ ರಮ್ಯಾಶೆಟ್ಟಿ ಎಂಬುವಳು ಮಾಯಾಂಗನೆ, ವಿಷಕನ್ಯೆ, ನಯವಂಚಕಿ ಶಿರೂರು ಶಿರಭಾಗದಲ್ಲಿದ್ದ ಸರವನ್ನು ಲಫಟಾಯಿಸಿದ್ದಾಳೆ. ಕೈ ಕಡಗವನ್ನು ಕಿತ್ತುಕೊಂಡಿದ್ದಾಳೆ. ಇವೆಲ್ಲವನ್ನ ದೋಚಿಕೊಂಡು ಹೋಗುವ ಮುನ್ನ ಪಾಪ ದೇವರಂತಹ ಶಿರೂರು ಸ್ವಾಮಿಗೆ ವಿಷಪ್ರಾಶನ ಮಾಡಿಸಿರಲುಬಹುದು. ಆಕೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವಂತಹ ಬುರ್ಖಾ ಧರಿಸಿದ್ದಳು ಎಂದರೆ, ಪಾತಕಕೃತ್ಯ ನಡೆಸಿರುವುದಕ್ಕೆ ಇನ್ನಾವ ಸಾಕ್ಷಿ ಬೇಕು ಎಂಬಂತೆ ಬಿತ್ತರಿಸುತ್ತ ಕೂತಿವೆಯಂತಲ್ಲಾ ಥೂತ್ತೇರಿ.

*****

ಅಷ್ಟಮಠದ ಯತಿಗಳಲ್ಲೇ ಸರ್ವಶ್ರೇಷ್ಠರೂ, ಮನುಕುಲತಿಲಕರೂ ಮತ್ತು ಕೃಷ್ಣನ ಭಾಗಕ್ಕೆ ವಾಸುದೇವನಂತಿರುವ ಪೇಜಾವರ ಶ್ರೀಗಳನ್ನ ಮಾತನಾಡಿಸಿದರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಟೋನ್…… ಕೃಷ್ಣ ನೀ ಬೇಗನೇ ಬಾರೋ, ಬೇಗನೆ ಬಂದು ಮುಕ್ತಿಯ ತೋರೋ. ಕೃಷ್ಣಾ………….. ಹಲೋ
“ನಮಸ್ಕಾರ ಸ್ವಾಮೀಜಿ ನಾನು ಯಾಹೂ.”
“ಯಾರ ಬಳಿಯಲ್ಲೂ ಮಾತನಾಡಲು ಸಮಯವಿಲ್ಲ.”
ಒಂದೇ ನಿಮಿಷ ಸ್ವಾಮಿ.”
“ಸಾಧ್ಯವಿಲ್ಲ.”
“ಹಾಗಾದ್ರೆ ನಮ್ಮ ಮನಸ್ಸಿಗೆ ಬಂದದ್ದನ್ನ ಬರಕೊಳ್ತೀವಿ ಸ್ವಾಮಿ.”
“ಎರಡೇ ಮಾತಲ್ಲಿ ಕೇಳಿ.”
“ಧರ್ಮರಾಯ ಇದ್ದ ಜಾಗದಲ್ಲಿ ಮಳೆ ಬೆಳೆ ಜೊತೆಗೆ ಅಪರಾಧಗಳು ನಡೀತಿರಲಿಲ್ಲ. ಹಾಗೇ ನಮ್ಮ ಪೇಜಾವರರು ನೆಲೆಸಿದ ಜಾಗ ಅಂದುಕೊಂಡಿದ್ದೋ.”
“ಆ ನಂಬಿಕೆಗೆ ಈಗ ಯಾವ ತೊಂದರೆಯೂ ಆಗಿಲ್ಲ.”
“ಇದೇನು ಸ್ವಾಮಿ ಹೀಗಂತಿರಿ, ಪ್ರಳಯದಂತಹ ಮಳೆ ಆಗಿದೆ, ಶಿರೂರು ಸ್ವಾಮಿ ಕೊಲೆಯಾಗಿದೆ.”
“ಅದನ್ನ ಕೊಲೆ ಅಂತ ಈಗಲೇ ಹೇಳಲು ಬರುವುದಿಲ್ಲ.”
“ನಂತರ ಹೇಳಬಹುದಾ.”
“ನೋಡಿ ಇವರೆ ಈಗ ನಾವು ಯಾವ ವಿಷಯ ಕುರಿತು ಏನೂ ಹೇಳುವುದಿಲ್ಲ.”
“ಅಂತಹ ಸ್ಥಿತಿ ಶಿರೂರು ತಂದಿಟ್ಟರಲ್ಲಾ ಸ್ವಾಮೀಜಿ.”
“ಅಂತಹ ಸ್ಥಿತಿ ಬಂದಿಲ್ಲ.”
“ನಿಮ್ಮ ಬುಡಕ್ಕೆ ಬಂದಿದೆಯಲ್ಲಾ ಸ್ವಾಮಿ.”
“ನಮ್ಮ ಬುಡಕ್ಕೆ ಯಂತ ಬಂದಿಲ್ಲ.”
“ಪೇಜಾವರಶ್ರೀ ತಾರುಣ್ಯದಲ್ಲಿ ತರುಣಿಯ ಸಂಗ ಮಾಡಿದ್ದರು ಅದರ ಫಲವಾಗಿ ಮಗಳಿದ್ದಾಳೆ ಅಂತ ದೂರಿದೆಯಲ್ಲ ಸ್ವಾಮೀಜಿ.”
“ಅದನ್ನ ಸಾಭೀತುಮಾಡಿದರೆ ಪೀಠತ್ಯಾಗ ಮಾಡುತ್ತೇನೆ.”
“ನೀವು ಮಾಡದೆಯಿದ್ರೂ ಆಯಸ್ಸು ಅವಧಿ ಎಲ್ಲ ಮುಗಿದಿದೆ, ಈಗಿನ ನಿಮ್ಮ ತ್ಯಾಗ ಒಂಥರ ಮಾಧ್ವ ಕುಲವೇ ತಲೆತಗ್ಗಿಸುವಂತದ್ದು.”
“ಮಾಧ್ವಕುಲ ತಲೆತಗ್ಗಿಸುವಂತಹ ಕೆಲಸ ನಾವು ಮಾಡಿಲ್ಲ.”
“ನೀವು ಮಾಡದೇಯಿದ್ರೂ ಮಾಡೋರಿಗೆ ಪುಸಲಾಯಿಸಿದ್ದೀರಿ.”
“ಅದನ್ನ ಸಬೀತು ಮಾಡಿದರೆ ಪೀಠತ್ಯಾಗ ಮಾಡ್ತೇನೆ.”
“ಮಾಡಬೇಡಿ ಅಲ್ಲೇ ಇರಿ, ಆದರೆ ಈ ಹಿಂದೆ ಹೆಣ್ಣಿನ ಸಂಗದ ಬಗ್ಗೆ ಪ್ರಚೋದನೆಗೊಂಡ ಸ್ವಾಮಿಯೊಬ್ಬರು ಪೀಠತ್ಯಾಗ ಮಾಡಿ ಸಂಸಾರಿಯಾಗುತ್ತೇನೆ ಅಂದಾಗ ತಾವು ಹಾಗೆ ಮಾಡಬೇಡಿ, ಪೀಠದಲ್ಲಿ ಇದ್ದುಕೊಂಡೇ ಗುಟ್ಟಾಗಿ ನಿಭಾಯಿಸಿ ಅನ್ನೋ ಮಾತನ್ನ ತಾವು ಹೇಳಿದ್ದೀರಿ.”
“ಇಲ್ಲ ನಾನು ಹಾಗೆ ಹೇಳಿಲ.್ಲ”
“ತಮ್ಮ ಮಾತನ್ನ ಮೀರಿ ಪೀಠತ್ಯಾಗ ಮಾಡಿ ಈಗ ಅಮೇರಿಕದಲ್ಲಿ ಸಂಸಾರಿಯಾಗಿರೊ ವ್ಯಕ್ತಿ, ನಮ್ಮ ಜೊತೆ ನಿಮ್ಮ ಸಂಧಾನದ ಮಾತನ್ನ ಹಂಚಿಕೊಂಡ್ರು ಇದಕ್ಕಿಂತ ಸಾಕ್ಷಿಬೇಕೆ”
“ನೋಡಿ ಇವರೆ ನಾನು ಹೇಳಿದ್ದು ಸನ್ಯಾಸಿ ಜೀವನ ಕಷ್ಟಕರವಾದದ್ದು ಅದನ್ನ ನಿಭಾಯಿಸಿ ಅಂತ ಹೇಳಿದ್ದು.”
“ಹೊಂದಾಣಿಕೆಯಿಂದ.”
“ಹಾಗಲ್ಲ ಕೃಷ್ಣಪೂಜೆ ಓದು ಧ್ಯಾನವ್ರತಗಳನ್ನ ಮಾಡಿಕೊಂಡು ನಮ್ಮ ಮನಸ್ಸನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಸನ್ಯಾಸಿ ಜೀವನವನ್ನ ಸಾಗಿಸಬೇಕು.”
“ಅದು ಸರಿ ಸ್ವಾಮಿ ನೀವು ಪೂಜೆ ಮಾಡೋ ದೇವರೆ ಸ್ತ್ರೀಲೋಲ. ಮತ್ತೆ ಪೀಡಕನಾಗಿದ್ದ. ಅವನು ಕಟ್ಟಿಕೊಂಡ ಸ್ತ್ರೀಯರ ಸಂಖ್ಯೆ ಅಗಣಿತ, ಅಂತಹ ವ್ಯಕ್ತಿಯನ್ನ ಪೂಜೆ ಮಾಡೋರು ಸನ್ಯಾಸಿ ಜೀವನ ಮಾಡದು ಸುಳ್ಳಲ್ಲವ.”
“ನಾವಿದ್ದೇವಲ್ಲ.”
“ನಿಮ್ಮ ಮಠದಲ್ಲಿದ್ದವರಿಂದಲೇ ನಿಮ್ಮ ಜೀವನವೂ ಅನಾವರಣವಾಯ್ತಲ್ಲ ಸ್ವಾಮಿ.”
“ಯಂತ ಅನಾವರಣವಾಯ್ತು.”
“ಬೇರೆಯವರಿಗೆ ಗೌಪ್ಯ ಸುಖಸಂಸಾರ ಹೇಳಿಕೊಟ್ಟವರು, ಹಾಗೇ ತಾವೂ ಮಾಡುತ್ತಿರಬಹುದಲ್ಲ, ಇಂತ ಅನುಮಾನಗಳು ಈಗ ಹುಟ್ಟಿಕೊಂಡಿವೆ, ತಡವಾದರೂ ಸತ್ಯದರ್ಶನವಾಗುತ್ತಿವೆ. ಕರ್ನಾಟಕದ ಮಠಗಳ ಮಾನ ಹರಾಜಾಗ್ತಾಯಿದೆ. ಇಷ್ಟರ ನಡುವೆ ಇನ್ನೂ ಕೆಲವು ಮಠಗಳು ತಮ್ಮ ನೈತಿಕ ಜವಬ್ದಾರಿ ಬಿಟ್ಟುಕೊಟ್ಟಿಲ್ಲ. ಆದರೆ ನಿಮ್ಮ ಮಠಗಳು ಹಣ ಅಧಿಕಾರ ಸ್ತ್ರೀಶಕ್ತಿ ಮತ್ತು ಮತಾಂಧತೆಯಿಂದ ಪತನವಾಗ್ತಾಯಿವೆ. ಅದೂ ನೈತಿಕವಾಗಿ ನಿಮಗೂ ಹಿಂಗನ್ಸಲ್ಲ ಸ್ವಾಮೀಜಿ……. ಹಲೋ ಹಲೋ ಹಲೋ ಮಾತಾಡಿ ಸ್ವಾಮೀಜಿ..
ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...