Homeಅಂಕಣಗಳುಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

ಕ್ಯಾಶ್‍ಲೆಸ್ ಎಕಾನಮಿ ಅಂದಿದ್ದವ್ರು ಕಲರ್‍ಕಲರ್ ನೋಟು ಪ್ರಿಂಟ್ ಮಾಡ್ತಾ ಅವುರೆ

- Advertisement -
- Advertisement -

ಕೇಳುಗರಿಗೆಲ್ಲ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಉಡುಪಿಯ ಅಷ್ಟಮಠದ ಶಿರೂರು ಸ್ವಾಮಿಗಳ ಪಾಯ್ಸನ್ ಫುಡ್ ಸಾವಿಗೆ ಕಿಂಚಿತ್ತೂ ಕರುಳು ಕರಗದ ತೇಜಾವರ ಸ್ವಾಮಿಗಳು, ಆ ಸ್ವಾಮಿ ನಂತರ ಫೊರೆನ್ಸಿಕ್ ಸೈನ್ಸನ್ನೇ ನುಣ್ಣಗೆ ಅರೆದು ಗಟಗಟ ಕುಡಿದವರಂತೆ ಕೆಕರುಮಕರಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಸ್ವಾಮಿ ಎಣ್ಣೆ ತಗತಿದ್ದ, ಹೆಣ್ಮಕ್ಕಳ ಮ್ಯಾಟ್ರಲ್ಲಿ ವೀಕ್ ಇದ್ದ, ಹಂಗಾಗಿ ಸತ್ತೋಗಿರಬೇಕು ಅಂತ ತೇಜಾವರರು ಕೀರಲು ದನಿಯಲ್ಲಿ ಊಳಿಟ್ಟಿದ್ದಾರೆ. ದಿವಂಗತ ಸ್ವಾಮಿ ಬದುಕಿದ್ದಾಗ “ಎಂಟು ಮಠಗಳ ಎಲ್ಲ ಸ್ವಾಮುಗೋಳು ಮ್ಯಾರೇಜ್ ಮಾಡ್ಕಂಡು, ಕದ್ದು ಮಕ್ಕಳು ಹುಟ್ಟುಸಿ, ಹುಟ್ಟಿಸಿದ ಮಕ್ಳೆಲ್ಲವನ್ನು ಕದ್ದು ಮಡಗಿದ್ದಾರೆ, ಬಾಂಬೆ, ಪೂನಾದಲ್ಲಿ ಹೋಟೆಲ್ ಬ್ಯುಜಿನೆಸ್ ನಡುಸ್ತಾವ್ರೆ, ಮೀಟ್ರುಬಡ್ಡಿಗೆ ಸಾಲ ಕೊಟ್ಟು ಪರ್ಸೆಂಟೇಜ್ ಬಡ್ಡಿ ಯವಾರ ನಡುಸ್ತಾವ್ರೆ” ಅಂತ ಮುರಕೊಂಡು ಬಿದ್ದಿದ್ದಾಗ ಬಾಯಿಗೆ ಹೊಲಿಗೆ ಹಾಕ್ಕಂಡು ಕಮಕ್ ಕಿಮಕ್ ಅನ್ನದೆ ಇದ್ದ ತೇಜಾವರರಿಗೆ ಇದ್ದಕ್ಕಿದ್ದಂತೆ ಈ ಧೈರ್ಯ ಎಲ್ಲಿಂದ ಬಂತು ಎಂದು ಭಕ್ತಾದಿಗಳೇ ಗಾಬರಿಯಾಗಿದ್ದಾರೆ. ನೂರಾರು ಸಲ ಮಠದ ಗಾಯಕಿಯೊಬ್ಬರ ಮೇಲೆ ರೇಪು ಮಾಡಿ ಕೋರ್ಟಿಂದ ಉಗಿಸಿಕೊಂಡ ಕೌಬಾಯ್ ಸ್ವಾಮಿ ವಿಷಯದಲ್ಲಿ ಲವಿಡವಿ ಸೈಲೆನ್ಸ್ ಮೈಂಟೈನ್ ಮಾಡುತ್ತ ಸಪೋರ್ಟ್ ಕೊಡೋ ತೇಜಾವರರು ತಮ್ಮ ಎಂಟು ಮಠಗಳ ಸ್ವಾಮಿಗಳ ರಹಸ್ಯವನ್ನೆಲ್ಲ ಹರಾಜು ಹಾಕುತ್ತಿದ್ದ ಸ್ವಾಮಿ ಅನುಮಾನಾಸ್ಪದವಾಗಿ ಸತ್ತ ನಂತರವೂ ಹಗೆ ಸಾಧಿಸಿ ಕಳಪೆ ಮಾತನ್ನಾಡುವುದು ಆ ಮನುಷ್ಯನ ನೀಚತನ ಎಂಬ ಜನ ಮಾತಾಡಿಕೊಳ್ಳುತ್ತಿರುವುದು ತಿಳಿದುಬಂದಿದೆ.

*****

ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ರಂಥ ಪಳಗಿದ ಆರ್ಥಿಕತಜ್ಞರಿಗೆ ಕೊಡಬಾರದ ಕಾಟ ಕೊಟ್ಟು ಒಕ್ಕಲೆಬ್ಬಿಸಿದ ಶಿಲಾಯುಗದ ಸನಾತನಿ ಪೀಡೆಗಳು, ಚೀಪಿದ ಮೂಳೆ ತಮ್ಮತ್ತ ಬಿಸಾಕುವ ಅಂಬಾನಿಗಳ ಕೊಂಪೆಯಿಂದ ಕೊಳೆತ ಮಿದುಳಿನ ಆಸಾಮಿಯನ್ನು ತಂದು ಆ ಜಾಗಕ್ಕೆ ಕೂರಿಸಿದ್ದು ಈಗ ಹಳೆಯ ವಿಷಯ, ಹೊಸ ವಿಷಯ ಏನಪ್ಪ ಅಂದ್ರೆ ರಿಸರ್ವ್ ಬ್ಯಾಂಕೆಂದರೆ ಬೊಂಬಾಯ್ ಮಿಠಾಯ್ ಮಾರೋ ಅಂಗಡಿ ಅಂತ ಭ್ರಮೆಯಲ್ಲಿರೋ ಈ ಅಂಬಾನಿ ಜವಾನನಿಗೆ ಒಂದೈವತ್ತು ಹುಚ್ಚರು ಒಮ್ಮೆಲೇ ಕಚ್ಚಿ ತಲೆ ಇನ್ಫೆಕ್ಷನ್ ಆಗಿರೋ ಸಾಧ್ಯತೆಗಳು ಕಂಡುಬರುತ್ತಿವೆ. ಜನರು ಬಳಸುತ್ತಿದ್ದ ಮುದ್ದಾದ ನೋಟುಗಳನ್ನು ಕಚಡಿ ಪಿಚಡಿ ಆಕಾರದಲ್ಲಿ ಇಷ್ಟಬಂದಂತೆ ಚಡ್ಡಿ ಬದಲಿಸಿದಂತೆ ಬದಲಿಸಿ ಒಂದರ ಹಿಂದೊಂದು ಪೀಕಲಾಟ ತಂದಿಡ್ತಿರೋ ಉರ್ಜಿತ್ ಪಟೇಲ್ ಎಟಿಎಂ ವ್ಯವಸ್ಥೆಗೇ ಡಿಚ್ಚಿ ಹೊಡೆಯುತ್ತಿದ್ದಾನೆ. ಇವನು ಬದಲಿಸೋ ನೋಟುಗಳ ಸೈಜು ಎಟಿಎಂಗಳಿಗೆ ಸರಿ ಹೋಗದೆ ಬ್ಯಾಂಕುಗಳು ಲಬೋಲಬೋ ಬಾಯಿ ಬಡ್ಕೊಂಡ್ರೂ ಹೊಸದಾಗಿ 100 ರುಪಾಯಿ ನೋಟು ಡಿಸೈನ್ ಚೇಂಜ್ ಮಾಡಿ ಚಲಾವಣೆಗೆ ಬಿಡಲಾಗಿದೆ. ನೋಟ್ ಬ್ಯಾನ್ ಟೈಮಿನಲ್ಲಿ ನಾವು ನೋಟೇ ಇಲ್ಲದ ಕ್ಯಾಶ್‍ಲೆಸ್ ಎಕಾನಮಿ ನಿರ್ಮಿಸ್ತೀವಿ ಅಂತ ಬೊಗಳಿದವರು ತಿಂಗಳಿಂದ ತಿಂಗಳಿಗೆ ನೋಟುಗಳ ಪ್ರಿಂಟಿಂಗನ್ನು ಹೆಚ್ಚಿಸ್ತಿರೋದ್ಯಾಕೆ ಅನ್ನೋ ಮರ್ಮ ಯಾರಿಗೂ ಗೊತ್ತಾಗ್ತ ಇಲ್ಲ. ಜನರ ಪಡಿಪಾಟಲುಗಳನ್ನು ಸೈಕೋಗಳಂತೆ ಎಂಜಾಯ್ ಮಾಡ್ತಿರೋ ಈ ಸನಾತನಿ ಪಿಶಾಚಿಗಳಿಗೆ ಬರಬಾರದ್ದು ಬಂದು ಹುಳ ಬಿದ್ದು ಸಾಯಲೆಂದು ಜನರು ಶಾಪ ಹಾಕುತ್ತಿರುವುದು ತಿಳಿದು ಬಂದಿದೆ.

*****

ವಯಸ್ಸಲ್ಲದ ವಯಸ್ಸಲ್ಲಿ “ಕುಚ್ ಕುಚ್ ಹೋತಾ ಹೈ, ಬ್ಲೂಜೆಪಿವಾಲೇ ಲಡ್ಕಿ ಲೇಜಾಯೇಂಗೆ” ಅಂತ ಸರ್ಕಾರಿ ಕ್ಲರ್ಕ್ ಹುಡುಗಿಯೊಂದಿಗೆ ಕದ್ದುಮುಚ್ಚಿ ಕುಸುಮುಸು ಮಾಡಿ ಕೈ ಎತ್ತಿದ್ದ ಬ್ಲೂಜೆಪಿಯ ರಾಮದಾಸನಿಗೆ ಶನಿ ಮಕದ ಮೇಲೆ ಅಂಡೂರಿ ಕುಂತುಬಿಟ್ಟಿದ್ದಾನೆ. ಎಲ್ಲ ಮುಗಿದ ಮೇಲೆ ರಾಮ್ದಾಸ ಕೈಗೆ ಸಿಗದಂಗೆ ತಪ್ಪಿಸ್ಕಂಡು ಓಡೋಗವ್ನೆ ಅಂತ ರೊಚ್ಚಿಗೆದ್ದಿರೋ ಪ್ಲೇಮಕುಮಾರಿಯೆಂಬ ರಾಮ್ದಾಸನ ಮಾಜಿ ಲವರ್ರು ಸೀದಾ ಕೈಕೊಟ್ಟ ಮಿಡಲ್ ಏಜ್ ಮನ್ಮಥನ ಆಫೀಸಿನ ಮುಂದೆ ಧುಡುಮ್ಮನೆ ಬಿದ್ದಿದೆ. ದೀಪಾವಳಿಯ ವಿಷ್ಣುಚಕ್ರದಂತೆ ಗರಗರಗರ ತಿರುಗುತ್ತ ನೆಲದ ಮೇಲೆ ಕೂಚಿಪುಡಿ-ಭರತನಾಟ್ಯ ಎರಡನ್ನೂ ಮಿಕ್ಸ್ ಮಾಡಿದ ಘನಘೋರ ನೃತ್ಯವಾಡಿ ರಾಮ್ದಾಸ್ ಕಛೇರಿಯೆದುರು ನೆರೆದ ಬ್ಲೂಜೆಪಿ ಕಾರ್ಯಕರ್ತರಿಗೆ ಪುಗ್ಸಟ್ಟೆ ಮನರಂಜನೆ ಒದಗಿಸಿದ್ದಾರೆ. ಈ ಹೆಣ್ಣಿನೊಡನೆ ಕಳ್ಳಾಟವಾಡಿ ಕೈಗೆ ಚೊಂಬು ಕೊಟ್ಟು ಯಾಮಾರಿಸಿ ಇನ್ನೊಂದರ ಬೆನ್ನುಬೀಳಲು ರೆಡಿಯಾಗಿದ್ದ ರಾಮ್ದಾಸನ ಗಂಟಲಿಗೆ ಹೆಟ್ಟಿದ ಗಢಾರಿಯಾಗಿರೋ ಪ್ಲೇಮಕುಮಾರಿ.. ನಾನು ಕುಲಗೆಟ್ಟು ಹೋಗಿರೋ ರಾಮ್ದಾಸನಿಗೆ ಬಾಳು ಕೊಡ್ತೇನೆ, ಈ ಓತಿಕ್ಯಾತದ ಮೂತಿಯವನ ಬಾಳು ಬಂಗಾರ ಮಾಡಿ, ಮಾನ ಹರಿದು ಊರು ಬಾಗಲು ಮಾಡಿ, ಅವನ ಹಣೆಗೆ ಅಕ್ಕಿಕಾಳು ಮಡಗೋತನಕ ನಾನು ಬ್ಯೂಟಿಪಾರ್ಲರಿನಲ್ಲಿ ಐಬ್ರೋ ಮಾಡ್ಸಲ್ಲ ಅಂತ ಶಪಥಗೈದಿದ್ದಾರೆ. ಈ ವೀರಪ್ರತಿಜ್ಞೆ ತಿಳಿದ ರಾಮ್ದಾಸನು ಕೆ.ಆರ್.ಪುರದ ಬಾರ್‍ನ ಟಾಯ್ಲೆಟ್ಟಿನಲ್ಲಿ ಕುಳಿತು ಗೊಳೋ ಅಂತ ಅಳುತ್ತಿದ್ದಾರೆಂದು ಬಾರ್ ಸಪ್ಲೈಯರ್ ಮಾಹಿತಿ ನೀಡಿದ್ದಾರೆ.

*****

ರಾಜಕಾರಣಿಗಳು ಜನರ ದುಡ್ಡು ದೋಚುವುದನ್ನು ನೀವು ಕೇಳಿದ್ದೀರಿ, ಈಗ ಟಾಯ್ಲೆಟ್, ಕಮೋಡ್, ಪೈಪುಗಳನ್ನೂ ಬಿಡದೆ ದೋಚುತ್ತಿರುವುದು ಹೊಸ ವಿಷಯ. ವಿಷ್ಯ ಏನಪ್ಪ ಅಂದ್ರೆ ಕಾರವಾರದ ಹಿಂದಿನ ಕೈ ಪಕ್ಷದ ಎಮ್ಮೆಲ್ಲೆ ಸತೀಶ್ ಸೈಲ್ ಎಂಬ ಗಣಿ ಗಢವನು ತನಗೆ ಸರ್ಕಾರ ಒದಗಿಸಿದ್ದ ಕಛೇರಿ ಶೌಚಾಲಯದ ಕಮೋಡು, ಪೈಪು, ಫ್ಲಶ್ ಬ್ಲಾಕ್ಸೆಲ್ಲವನ್ನೂ ಬಿಚ್ಚಿಕೊಂಡು ಮಂಗಮಾಯವಾಗಿದ್ದಾನೆ. ಹೊಸದಾಗಿ ಆಯ್ಕೆಯಾದ ಎಮ್ಮೆಲ್ಲೆ ಲೂಪಾಲಿ ನಾಯ್ಕ ಎಂಬ ಬ್ಲೂಜೆಪಿ ಎಮ್ಮೆಲ್ಲೆ ಈ ಕಛೇರಿಗೆ ಬಂದಾಗ ಟಾಯ್ಲೆಟ್ ರೂಮಿನಲ್ಲಿ ಬಕೀಟು ನಲ್ಲಿಯೊಂದನ್ನು ಬಿಟ್ಟು ಉಳಿದದ್ದೆಲ್ಲ ಠಣಾರ್ ಆಗಿರುವುದು ಕಂಡು ಕಂಗಾಲಾಗಿದ್ದಾರೆ. ಅಜೆರ್ಂಟಾಗಿ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲೂ ಸಾಧ್ಯವಾಗದಂತೆ ಪೀಕಲಾಟಕ್ಕೆ ಸಿಲುಕಿರೋ ಬ್ಲೂಜೆಪಿ ಎಮ್ಮೆಲ್ಲೆಗೆ ಸದ್ಯಕ್ಕೆ ಪೇ & ಯೂಸ್ ಸುಲಭ್ ಶೌಚಾಲಯವೇ ಗತಿಯಾಗಿದೆಯಂತೆ. ತನ್ನನ್ನು ಈ ಸ್ಥಿತಿಗೆ ನೂಕಿ ಹೋಗಿರೊ ಹಳೇ ಎಮ್ಮೆಲ್ಲೆ ಸತೀಶನ ಮೇಲೆ ಟಾಯ್ಲೆಟ್ ಕಳ್ಳತನದ ಕೇಸು ಹಾಕಲು ಲೂಪಾಲಿ ಮೇಡಂ ಸಿದ್ದರಾಗಿದ್ದಾರೆಂದು ಸುಲಭ್ ಶೌಚಾಲಯದ ಸಿಬ್ಬಂದಿ ತಿಳಿಸಿದ್ದಾರೆ. ನೂರಾರು ಕೋಟಿ ಗಣಿ ಯವಾರ ನಡೆಸೋ ಸತೀಶನಿಗೆ ಟಾಯ್ಲೆಟ್ ಐಟಂಗಳನ್ನ ಕದ್ಕೊಂಡು ಹೋಗೋ ದುರ್ಗತಿ ಯಾಕೆ ಬಂತೆಂದು ವಿಚಾರಿಸಿದಾಗ ಹೊಸ ಸಂಗತಿಯೊಂದು ಬಯಲಾಗಿದೆ. ವಾಸ್ತುಪ್ರಕಾರ ಪೂಜೆ ಮಾಡಿ ಅಳವಡಿಸಿರೋ ಇದೇ ಐಟಂಗಳನ್ನು ಬಳಸಿದ್ರೆ ನಿನಗೆ ಒಳ್ಳೆಯದೆಂದು ಗಢವ ಗೋರಿಲ್ಲ ಬ್ರಮ್ಮಾಂಡ ಪಿಂಡ ಟಾಯ್ಲೆಟ್ಟೋಪದೇಶ ಮಾಡಿದ್ದನಂತೆ. ಅದಕ್ಕೆಂದು ಅಧಿಕಾರ ಎಗರಿಹೋದ ಮೇಲೆ ಮಾಜಿ ಎಮ್ಮೆಲ್ಲೆ ಸತೀಶನು ಟಾಯ್ಲೆಟ್ಟನ್ನು ಅನಾಮತ್ತಾಗಿ ಪಾರ್ಟ್ ಪಾರ್ಟಾಗಿ ಬಿಚ್ಚಿಕೊಂಡು ಹೋಗಿದ್ದಾನೆಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.

*****

ದನದ ಮಾಂಸ ತಿನ್ನುವುದನ್ನು ನಿಲ್ಲಿಸಿದರೆ, ಗೋರಕ್ಷಕರಿಂದ ನಡೆಯುತ್ತಿರುವ ದನಸಾಗಾಟಗಾರರ ಕೊಲೆಗಳು ನಿಲ್ಲುತ್ತವೆಂದು ರಾಷ್ಟ್ರೀಯ ಸರ್ವನಾಶಕ ಸಂಘದ ಇಂದ್ರೇಶನೆಂಬ ಮುದಿಹೋರಿ ಸ್ಟೇಟ್‍ಮೆಂಟ್ ಎಸೆದಿದೆ. ‘ದನದಮಾಂಸ ತಿನ್ನುವರನ್ನು ನಾವು ಕೊಲ್ತಾನೇ ಇರ್ತೇವೆ, ಜೀವ ಬೇಕೋ ದನದ ಮಾಂಸ ಬೇಕೋ?’ ಅಂತ ಬೆದರಿಕೆಯೊಡ್ಡಿದೆ. ಇತ್ತಕಡೆ ಪಕೋಡತಾತನ ಆಳ್ವಿಕೆಯಲ್ಲಿ ಇಂಡಿಯದೇಶ ಜಗತ್ತಿನಲ್ಲೇ ಅತಿದೊಡ್ಡ ದನದಮಾಂಸ ರಫ್ತುದಾರ ದೇಶವಾಗಿದೆ. ದನಹಸುಗಳನ್ನು ಕೊಂದು ರಫ್ತುಮಾಡೋ ಕಂಪನಿಗಳಿಂದ ಎಂಜಲೆತ್ತಿಕೊಂಡು ಓಡಾಡ್ತಿರೋ ಇವರು ದನಗಳನ್ನು ರಕ್ಷಿಸೋ ಮಾತನಾಡುವುದು, ವಿಕೃತಕಾಮಿ ಉಮೇಶ್ ರೆಡ್ಡಿ ಮಹಿಳಾ ಸುರಕ್ಷತೆ ಬಗ್ಗೆ ಭಾಷಣ ಹೊಡೆದಂತೆ ಕೇಳುತ್ತದೆಯೆಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...