HomeಮುಖಪುಟMNREGA ಮೊತ್ತ ಮೂರುಪಟ್ಟು ಹೆಚ್ಚಾಗದೆ ಗ್ರಾಮ ಭಾರತ ಕೋವಿಡ್ ಬಿಕ್ಕಟ್ಟಿನಿಂದ ಪಾರಾಗದು..

MNREGA ಮೊತ್ತ ಮೂರುಪಟ್ಟು ಹೆಚ್ಚಾಗದೆ ಗ್ರಾಮ ಭಾರತ ಕೋವಿಡ್ ಬಿಕ್ಕಟ್ಟಿನಿಂದ ಪಾರಾಗದು..

- Advertisement -
- Advertisement -

20 ಲಕ್ಷ ಕೋಟಿ ಕೋವಿಡ್ ಪ್ಯಾಕೇಜಿನ ಬಡಾಯಿಯಲ್ಲಿ ಸಂತ್ರಸ್ತ ಜನರಿಗೆ ನೇರವಾಗಿ ದಕ್ಕುವುದು ಕೇವಲ 76,000 ಕೋಟಿ ಮಾತ್ರವೆಂದು ಈಗಾಗಲೇ ಹಲವಾರು ಸ್ವತಂತ್ರ ಅಧ್ಯಯನಗಳು ಸ್ಪಷ್ಟಪಡಿಸಿವೆ. ಹೀಗಾಗಿ ಈ ಕೋವಿಡ್ ಪ್ಯಾಕೇಜು ಜನರ ಬದುಕನ್ನು ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಕಿಂಚಿತ್ತೂ ಸಹಾಯ ಮಾಡುವುದಿಲ್ಲವೆಂದು ಮೋದಿ ಮಿತ್ರರಾದ ಹಲವಾರು ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳೇ ಹೇಳುತ್ತಿವೆ.

ಅಷ್ಟೆಲ್ಲಾ ಹತಾಶೆಯ ನಡುವೆಯೂ MNREGA ಗೆ ಮೊದಲು ನೀಡಿದ್ದ 61,500 ಕೋಟಿ ಹಾಗು ಪ್ಯಾಕೇಜಿನ ಭಾಗವಾಗಿ ಹೆಚ್ಚುವರಿಯಾಗಿ ಒದಗಿಸಲಾದ 40,000, -ಒಟ್ಟು 1,05,000 ಕೋಟಿ- ಗ್ರಾಮ ಭಾರತವನ್ನು ಉದ್ಧಾರ ಮಾಡಲು ಸಾಕಾಗುವುದೆಂದು ಸರ್ಕಾರ ಹೇಳಿದ್ದನ್ನು ಬಹುಪಾಲು ಭಾರತ ಒಪ್ಪಿಕೊಂಡಿತ್ತು

ಆದರೆ ವಾಸ್ತವವೆಂದರೆ ಕೋವಿಡ್ ನ ಆರ್ಥಿಕ ಪರಿಣಾಮಗಳಿಂದ ಹಾಲಿ ಗ್ರಾಮೀಣ ಬಿಕ್ಕಟ್ಟು ಯಾವ ಪರಿಯಲ್ಲಿ ಉಲ್ಬಣಗೊಂಡಿದೆ ಎಂದರೆ ಭಾರತದ ಗ್ರಾಮಗಳನ್ನು ಉದ್ಧಾರವಾಗುವುದಿರಲಿ, ಇರುವಂತೆ ಉಳಿಸಿಕೊಳ್ಳಬೇಕೆಂದರೂ ಈಗ MNREGA ಒದಗಿಸಿರುವ ಸಂಪನ್ಮೂಲದ ಕನಿಷ್ಠ ಪಕ್ಷ ಮೂರೂ ಪಟ್ಟು ಸಂಪನ್ಮೂಲದ ಅತ್ಯಗತ್ಯವಿದೆಯೆಂದು CGBA ಯ ಮಂಪಿ ಬೋಸ್ ಮತ್ತು TERI ಶಂತನು ರಾಯ್ ಅವರ ಜಂಟಿ ಅಧ್ಯಯನವೊಂದು ತಿಳಿಸುತ್ತದೆ.

MNREGA ಬೇಡಿಕೆಯನ್ನಾಧರಿಸಿದ ಯೋಜನೆಯಾಗಿದ್ದು, ಗ್ರಾಮಗಳಲ್ಲಿ ಕೆಲಸ ಮಾಡಲು ನೋಂದಾಯಿಸಿಕೊಳ್ಳುವ ಪ್ರತಿಮನೆಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸವನ್ನು ಕಡ್ಡಾಯವಾಗಿ ಒದಗಿಸಬೇಕು. ಕಳೆದ 15 ವರ್ಷಗಳಲ್ಲಿ ಈ ಯೋಜನೆಯಿಂದಾಗಿ ಹಳ್ಳಿಗಾಡಿನಲ್ಲಿ ಭೂರಹಿತ ಕೂಲಿಗಳ ಬದುಕು ಮತ್ತು ಸ್ವಾಭಿಮಾನದ ಒಂದಷ್ಟು ರಕ್ಷಣೆಯಾದರೂ ಆಗಿದೆ. ಗ್ರಾಮೀಣ ಬಡಜನರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡು ಗ್ರಾಮಭಾರತದಲ್ಲಿ ನಡೆಯುತ್ತಿದ್ದ ಜೀತ-ಕಡಿಮೆ ಕೂಲಿಗಳ ಶೋಷಣೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಿತ್ತು. ಹಾಗೆಯೇ ಗ್ರಾಮಕೂಲಿ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಾಗುವಂತೆ ಮಾಡಿತ್ತು.

ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ MNREGA ಪರಿಕಲ್ಪನೆಯನ್ನೇ ಪರೋಕ್ಷವಾಗಿ ರದ್ದುಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ.

ಉದಾಹರಣೆಗೆ : 2019-20ರ ಪರಿಷ್ಕೃತ ಬಜೆಟ್ಟಿನ ಪ್ರಕಾರ MNREGA ಯೋಜನೆಗೆ 71,000 ಕೋಟಿ ವೆಚ್ಚ ದಾಖಲಾಗಿದ್ದರು 2020-21 ರ ಬಜೆಟ್ಟಿನಲ್ಲಿ ಮೋದಿ ಸರ್ಕಾರ ಒದಗಿಸಿದ್ದು ಕೇವಲ 61,000 ಕೋಟಿ ಮಾತ್ರ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಬೇಡಿಕೆಯು ಹೆಚ್ಚಿದೆಯೆಂದು ತಿಳಿದುಬಂದಿದ್ದರು ಕೂಡ ಉದ್ದೇಶಪೂರ್ವಕವಾಗಿ 10,000 ಕೋಟಿ ಯಷ್ಟು ಕಡಿಮೆ ಮಾಡಲಾಗಿದೆ.

– ಇದರಿಂದಾಗಿ 2019-20ರ ಸಾಲಿನಲ್ಲಿ 5.78 ಕೋಟಿ ಕುಟುಂಬಗಳು ಕೆಲಸಕ್ಕೆ ಅರ್ಜಿ ಹಾಕಿಕೊಂಡಿದ್ದರು ಕೆಲಸ ಕೊಟ್ಟಿದ್ದು ಮಾತ್ರ ಕೇವಲ 5.12 ಕೋಟಿ ಕುಟುಂಬಗಳಿಗೆ ಮಾತ್ರ.

– 2017-19ರ ಅವಧಿಯಲ್ಲಿ ಈ ಸಂಪನ್ಮೂಲ ಬೇಡಿಕೆಯಿದ್ದರೂ, ದುಡಿಯುವ ಕೈಗಳಿದ್ದರೂ ದೇಶದ ಯಾವ ರಾಜ್ಯಗಳಲ್ಲಿಯೂ 100 ದಿನಗಳ ಕೆಲಸವನ್ನು ಒದಗಿಸಲಾಗಿಲ್ಲ. 19 ಪ್ರಮುಖ ರಾಜ್ಯಗಳ ಪೈಕಿ 14 ರಾಜ್ಯಗಳಲ್ಲಿ 50 ದಿನಗಳ ಕೆಲಸವನ್ನೂ ಸಹ ಒದಗಿಸಲಾಗಿಲ್ಲ. ಇದರಲ್ಲಿ ಗುಜರಾತ್ ರಾಜ್ಯದದ್ದು ಎಲ್ಲಾ ರಾಜ್ಯಗಳಿಗಿಂತಲೂ ನಿಕೃಷ್ಟ ಪರಿಸ್ಥಿತಿ.

– ದೇಶದ ಬಹುಪಾಲು ಪ್ರಮುಖ ರಾಜ್ಯಗಳಲ್ಲಿ MNREGA ಕೂಲಿ ದರವು ಆಯಾ ರಾಜ್ಯಗಳು ನಿಗದಿ ಮಾಡಿರುವ ಕನಿಷ್ಠ ಕೂಲಿಗಿಂತ ಕಡಿಮೆ ಇದೆ.

ಉದಾಹರಣೆಗೆ ಉತ್ತರಪ್ರದೇಶದಲ್ಲಿ ರಾಜ್ಯ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಕೂಲಿ ದರ 318 ರು. ಗಳಾಗಿದ್ದರೂ ಆ ರಾಜ್ಯದಲ್ಲಿ ಕೊಡುತ್ತಿರುವ MNREGA ಕೂಲಿ ದರ ಮಾತ್ರ ಕೇವಲ 182 ರೂ.

ಅದೇ ರೀತಿ ಕರ್ನಾಟಕದಲ್ಲಿ ಘೋಷಿತ ಕನಿಷ್ಠ ಕೂಲಿ ರೂ. 350 ಆಗಿದ್ದರೂ MNREGA ಕೂಲಿ 246 ರೂ . ಮಾತ್ರ.

ಇದು ಕೋವಿಡ್ ಪೂರ್ವ ಪರಿಸ್ಥಿತಿ. ಈಗ..?

ಕೇಂದ್ರ ಸರ್ಕಾರವು ಮೊನ್ನೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರವೇ ಅಂದಾಜು 1 ಕೋಟಿ ಯಷ್ಟು ವಲಸೆ ಕಾರ್ಮಿಕರು ಹಳ್ಳಿಗಳಿಗೆ ಮರಳಿದ್ದಾರೆ. ಹಾಗು ಎಲ್ಲಾ ಬಗೆಯ ಆದಾಯ, ಉಳಿತಾಯವೂ ಕಳೆದುಕೊಂಡು ಕಂಗೆಟ್ಟಿದ್ದಾರೆ. ಹಾಗೂ ಅವರಲ್ಲಿ ಬಹುಪಾಲು ಜನ ಈ ಸದ್ಯಕ್ಕೆ ನಗರಗಳಿಗೆ ಮರಳುವ ಪರಿಸ್ಥಿತಿಯಲ್ಲೂ -ಮನಸ್ಥಿತಿಯಲ್ಲೂ ಇಲ್ಲ. ನಗರಗಳೂ ಕೂಡಾ ಈ ಸದ್ಯಕ್ಕೆ ಅವರಿಗೆ ಕೆಲಸ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಹಾಗು ನಗರಗಳಲ್ಲಾಗಲಿ ಅಥವಾ ಗ್ರಾಮಗಳಲ್ಲಾಗಲಿ ಖಾಸಗಿ ಬಂಡವಾಳವು ಈ ಹೆಚ್ಚುವರಿ ಶ್ರಮಜೀವಿಗಳಿಗೆ ಜೀವನೋಪಾಯಗಳನ್ನು ಒದಗಿಸುವ ಪರಿಸ್ಥಿತಿಯಲ್ಲಿ ಇಲ್ಲ.

ಹೀಗಾಗಿ ಇಂದು ಭಾರತದ ಗ್ರಾಮಗಳು ಈ ಹೆಚ್ಚುವರಿ ಕೋವಿಡ್ ಭಾರವನ್ನು ತಡೆದುಕೊಳ್ಳಬೇಕೆಂದರೆ ಕಡ್ಡಾಯವಾಗಿ ಸರ್ಕಾರವೇ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳ ಮೇಲೆ ವೆಚ್ಚವನ್ನು ಮಾಡಬೇಕಿದೆ.

ಹೀಗಾಗಿ ಸರ್ಕಾರವು ಕೋವಿಡ್ ಸಂದರ್ಭದಲ್ಲಿ ಹೆಚ್ಚುವರಿ ಜನರಿಗಾಗಿ ಮತ್ತು ಹೆಚ್ಚುವರಿ ದಿನಗಳಿಗಾಗಿ ಅಂದರೆ ಕನಿಷ್ಠ ಮುಂದಿನ 200 ದಿನಗಳಿಗಾಗಿ ಘನತೆಯಿಂದ ಬದುಕಲು ಕನಿಷ್ಠ ಕೊಲಿ ಯನ್ನು ಒದಗಿಸುವಂತೆ MNREGA ವನ್ನು ಸಜ್ಜುಗೊಳಿಸಬೇಕಿದೆ.

ಈ ನಿಟ್ಟಿನಲ್ಲಿ CGBA ಯ ಮಂಪಿ ಬೋಸ್ ಮತ್ತು TERI ಶಂತನು ರಾಯ್ ಅವರು ಇಂದಿನ ಪರಿಸ್ಥಿತಿಯಲ್ಲಿ MNREGA ಯೋಜನೆಯ ಮೂಲಕ ಗ್ರಾಮಭಾರತವನ್ನು ಉಳಿಸಲು ಮತ್ತು ಬೆಳೆಸಲು ಎಷ್ಟು ಹಣ ಬೇಕಾಗಬಹುದೆಂದು ಅಂದಾಜು ಮಾಡಿದ್ದಾರೆ.

ಆ ಅಧ್ಯಯನದ ಪ್ರಕಾರ:

– ಈಗ ಕೊಡಲಾಗುತ್ತಿರುವ ಕೂಲಿ ದರದಲ್ಲೇ ಕನಿಷ್ಠ 100 ದಿನಗಳ ಕೆಲಸವನ್ನು ಒದಗಿಸಬೇಕೆಂದರೂ 1,05, 242 ಕೋಟಿ ರೂ . ಬೇಕಾಗುತ್ತದೆ. ಎಂದರೆ ಈಗ MNREGA ಗೆ ಕೋವಿಡ್ ಪ್ಯಾಕೇಜನ್ನು ಒಳಗೊಂಡು ಒದಗಿಸಲಾಗಿರುವ ಮೊತ್ತಕ್ಕಿಂತ 4000 ಕೋಟಿ ಹೆಚ್ಚು ಹಣ ಬೇಕಾಗುತ್ತದೆ.

– ಅಥವಾ ಇಂದಿನ ಬಿಕ್ಕಟ್ಟನ್ನು ಗಮನದಲ್ಲಿರಿಸಿಕೊಂಡು ಕೆಲಸ ಕೇಳುವ ಎಲ್ಲಾ ಕುಟುಂಬಗಳಿಗೂ ಆಯಾ ರಾಜ್ಯಗಳು ನಿಗದಿ ಮಾಡಿರುವ ಕನಿಷ್ಠ ಕೂಲಿ ದರವನ್ನು ನೀಡುವುದಾದರೆ ಈ ವರ್ಷ MNREGA ಯೋಜನೆಗೆ 1,56, 871 ಕೋಟಿ ಯನ್ನು ಒದಗಿಸಬೇಕಾಗುತ್ತದೆ. ಅಂದರೆ ಈಗ ಒದಗಿಸಿರುವುದಕ್ಕಿಂತ 55,371 ಕೋಟಿ ಹಣ ಹೆಚ್ಚಿಗೆ ಬೇಕಾಗುತ್ತದೆ.

– ಒಂದು ವೇಳೆ ಕೋವಿಡ್ ಬಿಕ್ಕಟ್ಟಿನ ದೀರ್ಘಾವಧಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು MNREGA ಯೋಜನೆಯನ್ನು 200 ದಿನಗಳಿಗೆ ವಿಸ್ತರಿಸಿ ಈಗ ಕೊಡುತ್ತಿರುವ ಸರಾಸರಿ MNREGA ಕೂಲಿಯನ್ನೇ ಕೊಡುವುದಾದರೆ ಈ ವರ್ಷ 2,10,483 ಕೋಟಿ ಅಗತ್ಯ ಬೀಳುತ್ತದೆ.

– MNREGA ಯೋಜನೆಯನ್ನು 200 ವಿಸ್ತರಿಸಿ ಆಯಾ ರಾಜ್ಯಗಳಲ್ಲಿ ನಿಗದಿ ಪಡಿಸಿರುವ ಹೆಚ್ಚುವರಿ ಕನಿಷ್ಠ ಕೂಲಿಯನ್ನು ಕೊಡುವುದಾದರೆ 3,13,741 ಕೋಟಿ ಬೇಕಾಗುತ್ತದೆ.

ಅಂದರೆ ಈಗ ಒಟ್ಟಾರೆಯಾಗಿ ಒದಗಿಸಿರುವುದಕ್ಕಿಂತ 2,08,741 ಕೋಟಿ ರೂ.ಗಳು ಮಾತ್ರ.

ಈ ಮೊತ್ತವು ನಮ್ಮ ಜಿಡಿಪಿಯ ಕೇವಲ ಶೇ. 1.41 ಭಾಗ ಮಾತ್ರ ಆಗುತ್ತದೆ. ಆದರೆ ಮೋದಿ ಸರ್ಕಾರ ಹೆಚ್ಚುವರಿಯಾಗಿ ಕೊಟ್ಟಿರುವುದು ಜಿಡಿಪಿಯ ಕೇವಲ ಶೇ. 0.26 ಮಾತ್ರ. ಆದರೂ ಪ್ರಚಾರ ಮಾತ್ರ ಜಿಡಿಪಿಯ ಶೇ. 10 ರಷ್ಟು..

ಈ ದೇಶದ 5000 ದೊಡ್ಡ ಉದ್ದಿಮೆಪತಿಗಳು ತಮ್ಮ ಲಾಭದ ದರ ಕಡಿಮೆಯಾಗುತ್ತಿದೆ ಎಂದು ಗೊಣಗಾಡಿದ್ದಕ್ಕೆ ಕಳೆದ ಸೆಪ್ಟೆಂಬರ್ ನಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಶೇ. 10 ರಷ್ಟು ಇಳಿಸಿ 1.46,000 ಕೋಟಿ ವರ್ಗಾವಣೆ ಮಾಡಿದ್ದು ಇದೆ ಮೋದಿ ಸರ್ಕಾರ…

ಅದು ಸಾಧ್ಯವಾಗಬಹುದಾದಲ್ಲಿ ಈ ದೇಶದ 80 ಕೋಟಿ ಯಷ್ಟಿರುವ ರೈತಾಪಿ ಮತ್ತು ಗ್ರಾಮೀಣ ಬಡಜನ ಕೋವಿಡ್ ಆಘಾತದಿಂದ ಬದುಕುಳಿಯಲು ಬೇಕಾಗಿರುವ 2,08,741 ಕೋಟಿ ರೂ ಅನ್ನು ಭಾರತ ಸರ್ಕಾರ ಕೊಡಲಾಗದೆ?

ಖಂಡಿತಾ ಸಾಧ್ಯ..

ಕೋವಿಡ್ ಅವಧಿಯಲ್ಲಿ ಅನಗತ್ಯವಾಗಿ ಹೆಚ್ಚಿಸಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಳೆಯಿಂದ ಭಾರತ ಸರ್ಕಾರ ಈ ವರ್ಷ 4 ಲಕ್ಷ ಕೋಟಿ ರೂ ಗಳನ್ನೂ ಸಂಗ್ರಹಿಸಲಿದೆ. ರೈತರ ಬದುಕಿಗೆ ಬೇಕಿರುವುದು ಅದರ ಅರ್ಧ ಭಾಗ ಅಷ್ಟೇ..

ಈ ದೇಶದ ಕೇವಲ 100 ದೊಡ್ಡ ಉದ್ದಿಮೆಪತಿಗಳ ಬಳಿ ಈ ದೇಶದ ರೈತ-ಕಾರ್ಮಿಕರ ಶ್ರಮವನ್ನು ಲೂಟಿ ಮಾಡಿ ಸಂಪಾದಿಸಿರುವ 25 ಲಕ್ಷ ಕೋಟಿ ರೂ.ಗಳಷ್ಟು ಸಂಪತ್ತಿದೆ. ಅದರ ಮೇಲೆ ಕೇವಲ ಶೇ. 1 ರಷ್ಟು ಸೆಸ್ ಹಾಕಿದರೂ ಗ್ರಾಮಭಾರತದ ಉಸಿರಿಗೆ ಬೇಕಿರುವ ಮೊತ್ತಕ್ಕಿಂತ ಹೆಚ್ಚಿಗೆ ಸಂಪನ್ಮೂಲವೇ ದೊರಕುತ್ತದೆ.

ಆದರೆ ಅದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ…ಅದು ಮೋದಿಗಿದೆಯೇ?


ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ ವೇತನ ಪಾವತಿಸದ ಕಂಪೆನಿಗಳ ವಿರುದ್ಧ ಯಾವುದೇ ಕ್ರಮವಿಲ್ಲ: ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...