Homeಕರ್ನಾಟಕದ್ಯಾವೇಗೌಡ್ರು ಖರಗೆ ಭುಜ ಇಡಕಂಡು ಪಾರ್ಲಿಮೆಂಟಿಗೆ ಹೋಗದೆ ಚೆಂದ ಕಣ್ಳಾ..

ದ್ಯಾವೇಗೌಡ್ರು ಖರಗೆ ಭುಜ ಇಡಕಂಡು ಪಾರ್ಲಿಮೆಂಟಿಗೆ ಹೋಗದೆ ಚೆಂದ ಕಣ್ಳಾ..

- Advertisement -
- Advertisement -

‘ನನಿಗನ್ನುಸ್ತಾ ಅದೆ’ ಎಂದು ಗಡ್ಡ ಕೆರೆದ ವಾಟಿಸ್ಸೆ.
‘ಅದೇನನ್ನಸ್ತು ಹೇಳ್ಳ’ ಎಂದಳು ಜುಮ್ಮಿ.
‘ಈ ಕರೋನ ಅಷ್ಟು ಸುಲಬಾಗಿ ಹೋಗದಿಲ್ಲ ಕಣಕ್ಕ’.
‘ಯಾಕ್ಲ’.
‘ಯಾಕೆ ಅಂದ್ರೆ ಅದು ಅವರಿಸಿಗಳದ್ಕೂ ಮದ್ಲು ಇಡೀ ಇಂಡಿಯಾ ಲಾಕ್‍ಡವುನ್ ಅಂದ್ರು. ಅವುರೇಳಿದಂಗೆ ಕೇಳಿದೊ ಈಗ ಅದು ಜಾಸ್ತಿಯಾದ ಮ್ಯಾಲೆ ಲಾಕ್‍ಡವುನ್ ತಗದವುರೆ ಹಿಂಗಾದ್ರೆ ಯಂಗೋಯ್ತದೇ?’.
‘ಹೋಗದಿಲ್ಲ ಅಂತಿಯಾ’.
‘ಚಾನ್ಸೆಯಿಲ್ಲ ದಿನೇ ದಿನೇ ಜಾಸ್ತಿಯಾಯ್ತದೆ’.
‘ಸದ್ಯ ನಮ್ಮೂರಿಗೆ ಬರಲಿಲವಲ್ಲ ಹೇಳು’.
‘ಅಂಗೇಳಂಗೇಯಿಲ್ಲ ಕಣೆ. ಬೊಂಬಾಯಿಲಿರೋರು ಬಂದ್ರೇ ಅದು ಬತ್ತದೆ’.
‘ಮದ್ಲು ಬಂಬಾಯಿಲಿರೋರು ಬಂದಾಗ ಯೇಡಸ ತಂದ್ರು, ಈಗಿವುರು ಬಂದು ಕರೋನ ತತ್ತರಲ್ಲ ಹೇಳು’.
‘ಹೆದರುಬ್ಯಾಡ ಕಣಕ್ಕ ಕರೋನ ಕ್ಯೂರಬಲ್ಲು ಅದೇ ಏಡಸು ನಾನ್ ಕ್ಯೂರಬಲ್’.
‘ಅಂಗದ್ರೆ ಕರೋನ ಬಂದೋರು ಉಸಾರಾಗಿ ಮನಿಗೆದ್ದೊಯ್ತರೆ. ಅದೇ ಏಡಸಾದ್ರೆ ಚಟ್ಟಕಟ್ಟದೆಯ’.
‘ಮತ್ಯಾಕೆ ಹೆದ್ರಿಕಳದು ಬುಡ್ಳ’
‘ನಾನಂತೂ ಯಾವತ್ತು ಹೆದರಿಲ್ಲ ಕಣಕ್ಕ ಈ ಉಗ್ರಿನೆ ಹೆದರಿ ನಡಗ್ತನಂಗೆಯ’.
‘ಅದ್ಯಾಕ್ಲ ಹೆದರತಿ ಉಗ್ರಿ’.
‘ಕ್ವಾರಂಟೈನು ಮಾಡಿ ನಾಯಿ ನೋಡಿದಂಗೆ ನೋಡಿಕತ್ತರಂತೆ. ದೂರ ನಿಂತಗಂಡು ಬಿಸ್ಕತ್ತ ಯಸಿತರಂತೆ. ಅದ್ಕೆ ಕಣೆ’.
‘ಇನ್ನೆನು ನಿನಗೆ ತ್ವಡೆಮ್ಯಾಲೆ ಕುಂಡ್ರಿಸಿಗಂಡು ಉಣ್ಣುಸ್ತರ್ಲ. ಕಾಯಿಲೆ ಬಂದಾಗ ಯಲ್ಲಾನು ಅನುಬವುಸಬೇಕು’.
‘ಯಾವ ಕಾಯಿಲೆ ಬಂದ್ರು ಹೆದರಸೋ ಧೈರ್ಯ ಬರಬೇಕಾದ್ರೆ ವಳ್ಳೆ ಸರಕಾರ ಇರಬೇಕು ಕಣೆ. ಈ ಹಾಳು ಸರಕಾರ ಯಂಗದೆ ಅಂತೀ. ಇದಿಲ್ದೆಯಿದ್ರೆ ಯಂಗೋ ಚನ್ನಾಗಿರತಿದ್ದೊ’.
‘ಮಿಸ್ಟರ್ ಉಗ್ರಿ ಬಿಜೆಪಿ ಸರಕಾರ ಇರದೇ ಹಿಂಗಲವೇನೋ ಅದು ಗೊತ್ತಿಲವೆ ನಿನಗೆ’.
‘ಇರದೆ ಹಿಂಗೆ ಅಂದ್ರೆ’.
‘ಅಂದ್ರೆ ಈ ಸರಕಾರ ನಡೆಸೋರು ಪರಂಪರೆ ಜನ. ಪರಕೀಯರು ದಾಳಿ ಮಾಡಿ ಇಂಡಿಯಾ ದೇಸವ ಆಳತಾಯಿದ್ರೆ ಅವುರು ದೇವಸ್ಥಾನದಲ್ಲಿ ಭಜನೆ ಮಾಡಿಕೊಂಡು ಪ್ರಸಾದ ತಿಂತಾಯಿದ್ರಂತೆ. ಈಗ್ಲು ಅಂಗೇ ಅವುರೆ. ಕೊರೋನಾ ಬಂದ್ರೇನು, ಜನ ಸತ್ತರೆ ಅವುರಿಗೇನೂ. ಯಾವುದ್ಕು ಕೇರ್ ಮಾಡದಂಗೆ ತಾವು ಒಂದು ವರುಸದಲ್ಲಿ ಏನೇನು ಮಾಡಿದೊ ಅಂತ ಪುಸ್ತಕ ಬರದು ಹಂಚತಾಕುಂತವುರೆ ಇದಕೇನೇಳ್ತೀ’.
‘ಹೇಳದಿನ್ನೇನು ನೀನು ಮದ್ಲೆ ಹೇಳಿದಲ್ಲ ಅಂಗೆ ಆಗ್ಯಾದೆ’.
‘ಈಗ್ಯಾವುದೊ ಯಲಕ್ಸನ್ನ ಬಂದು ದ್ಯಾವೇಗೌಡ್ರು ನಿಂತವುರಂತಲ್ಲಾ ಯಾವುದ್ಲ’ ಎಂದಳು ಜುಮ್ಮಿ.
‘ಅದು ಧಾರುಣವಾದ ಯಲಕ್ಸನ್ನು ಕಣಕ್ಕ’.
‘ಅದ್ಯಾಕ್ಲ’.
‘ಪಾಪ ಆ ಉಮೇಸ್ ಕತ್ತಿ ಬಂಡಾಯದ ನಾಟಕ ಎಬ್ಬಿಸಿ ತನ್ನ ತಮ್ಮನಿಗೇ ಟಿಕೇಟು ಗ್ಯಾರಂಟಿ ಅಂತ ಕಾಯ್ತಾಯಿದ್ದ. ಇನ್ನು ಎಜುಕೇಷನ್ ಮಾರ್ವಾಡಿಯಂತಿರೊ ಕೋರೆ, ಈಗಾಗ್ಲೇ ಎಲ್ಡು ಸಲ ಆಗಿದ್ದು ಸಾಲ್ದು ಅಂತ ಮೂರ್ನೇ ಸಲಕ್ಕೂ ಯಡ್ಯೂರಪ್ಪನ ಜಪ ಮಾಡಿಕ್ಯಂಡು ಕುಂತಿದ್ದ. ಅಂತೋರಿಗೆಲ್ಲ ರಾಜ್ಯಸಭೆ ಸಿಗಲಿಲ್ಲ. ಅಂಗಾಗಿ ಅವುರ ಪಾಲಿಗೆ ಇದು ಧಾರುಣವಾದ ವಿಷಯ’.
‘ಮತ್ಯಾರಿಗೆ ಕೊಟ್ರು’.
‘ಬಿಜೆಪೀಲಿ ಯಾವುದೇ ಬೆನಿಫಿಟ್ ಕೊಡಬೇಕಾದ್ರು ಸಣ್ಣುಡಗರಿಂದ ಲಾಟಿ ಬೀಸಿರಬೇಕು. ಅಂಗಾಗಿ ಬೆಳಗಾವಿ ಈರಣ್ಣ, ರಾಯಚೂರು ಅಶೋಕ ಅನ್ನೊರ್ನ ಕ್ಯಾಂಡಿಡೇಟ್ ಮಾಡಿದ್ರು ಕಣಕ್ಕ. ಅವುರು ಹುಟ್ಟಿದಾಗಿಂದ ಲಾಟಿ ಬೀಸಿದ್ರಂತೆ’.
‘ಕಾಂಗ್ರೆಸ್ಸಿಂದ ಯಾರ್ಲ’.
‘ಕಾಂಗ್ರೆಸ್ಸಿಂದ ಖರಗೆ, ದ್ಯಾವೇಗೌಡ್ರು ಕಣಕ್ಕ. ಕಾಂಗ್ರೆಸ್ಸಲ್ಲಿ ಜಾಸ್ತಿ ಓಟಿದ್ದವಂತೆ ಅದ ದ್ಯಾವೇಗೌಡ್ರಿಗೆ ಕೊಡ್ತರೆ ಅಂಗಾಗಿ ದ್ಯಾವೇಗೌಡ್ರು ಅರ್ಧ ಕಾಂಗ್ರೆಸ್ಸು, ಅರ್ಧ ದಳದ ಕ್ಯಾಂಡೇಟು’.
‘ಈ ಯಂಬತ್ತೇಳನೇ ವಯಸಲ್ಲಿ ಅವುರಿಗೆ ಬೇಕಿತ್ತೆ’ ಎಂದ ಉಗ್ರಿ.
‘ಯಂಬತ್ತೇಳು ಅವರ ಶರೀರಕ್ಕಾಗ್ಯದೆ ಮನಸಿಗಲ್ಲ ಕಣೊ, ನೋಡಿವಿರು ಗೆದ್ದು ಪಾರ್ಲಿಮೆಂಟಿಗೆ ಯಂಗೆ ಇಬ್ಬರು ಭುಜ ಹಿಡಕಂಡೋಯ್ತರೆ ಅದ ನೋಡಕ್ಕೆ ಚಂದ’.


ಇದನ್ನು ಓದಿ: ನಮ್ಮೂರ ಡಾ.ಎಚ್ಚೆನ್‍ಗೆ ನೂರು: ವೈಯಕ್ತಿಕ ನೆನಪುಗಳ ಹಿನ್ನೆಲೆಯಲ್ಲೊಂದು ಸಾಮಾಜಿಕ ನೋಟ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...