Homeಮುಖಪುಟಚಂಪಾ ಎಂಬ ವಿಸ್ಮಯ

ಚಂಪಾ ಎಂಬ ವಿಸ್ಮಯ

- Advertisement -
- Advertisement -

ಪ್ರೊ. ಚಂದ್ರಶೇಖರ ಪಾಟೀಲರು ’ಚಂಪಾ’ ಎಂಬ ಕಾವ್ಯನಾಮದಿಂದ ತಮ್ಮ ಸಾಹಿತ್ಯ ರಚನೆ ಮಾಡುತ್ತಿದ್ದದ್ದು ಉದ್ದೇಶಪೂರ್ವಕವೋ ಅಲ್ಲವೋ ಎಂದು ಅನೇಕರು ಆಶ್ಚರ್ಯಪಟ್ಟಿದ್ದುಂಟು. ಚಂಪಾ ಎಂಬ ಹೆಸರಿನ ಮೂಲಕ ಬರೆಯುತ್ತಿದ್ದ ಕಾಲದಲ್ಲಿ ಅನೇಕ ಬಿಸಿರಕ್ತದ ತರುಣರು ಬೇಸ್ತುಬಿದ್ದದ್ದು ಉಂಟು. ಆದರೆ ’ಚಂಪಾ’ ಅವರಿಗೆ ಇದು ಉದ್ದೇಶಪೂರ್ವಕವಾದ ಕ್ರಿಯೆಯಾಗಿತ್ತು. ಅಂದರೆ ತನ್ನ ಹೆಸರಿನಲ್ಲಿದ್ದ ಪಾಟೀಲನನ್ನು ಮೆಟ್ಟಿ ನಿಲ್ಲಬೇಕಿತ್ತು. ಜಾತಿಸೂಚಕ ಚಂದ್ರಶೇಖರನಿಂದ ಮೀರಿ ಹೊರಬರಬೇಕಾಗಿತ್ತು. ಹುಟ್ಟಿನಿಂದ ಲಿಂಗಾಯತ ಜಂಗಮರಾಗಿದ್ದ ಚಂಪಾ, ಜಂಗಮೋ ಜಗದ್ಘಾತುಕ, ಬ್ರಾಹ್ಮಣ ಬ್ರಹ್ಮಾಂಡಘಾತುಕನೆಂದು ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುತ್ತಿದ್ದರು. ಚಂಪಾ ಎಂಬ ಕಾವ್ಯನಾಮ ಅನೇಕ ಯುವಕರನ್ನು, ಯುವತಿಯರನ್ನು ಮರಳು ಮಾಡುತ್ತಿರುವ ಅರಿವಿದ್ದ ಪಾಟೀಲರು ಅದರ ಸವಿಯನ್ನು ಅನುಭವಿಸುತ್ತಲೇ ಕರ್ನಾಟಕದ್ಯಾಂತ ಚಂಪಾ ಎಂದೇ ಪ್ರಸಿದ್ಧರಾಗಿದ್ದರು.

ಸರಿಸುಮಾರು ನಾಲ್ಕು ದಶಕಗಳ ಕಾಲ ನಿಕಟವರ್ತಿಯಾಗಿ ಚಂಪಾ ಅವರನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ಜೊತೆ ತುಂಬಾ ಸೌಹಾರ್ದಯುತವಾದ ಸ್ನೇಹವಿತ್ತು. ವಯಸ್ಸಿನಲ್ಲಿ ಹಿರಿಯರಾದ ಚಂಪಾ ಎಂದೂ ನಮ್ಮನ್ನು ಕಿರಿಯ ವಯಸ್ಸಿನವರೆಂದು ಭಾವಿಸಿದ ಸಂಗಾತಿಗಳೆಂದೇ ತಿಳಿದಿದ್ದರು. ಸಮಾಜವಾದಿ ಚಿಂತನೆಯ ಚಂಪಾ ಅಪ್ಪಟ ಲೋಹಿಯಾವಾದಿಯಾಗಿದ್ದರು. ಕಮ್ಯುನಿಸ್ಟರ ಜೊತೆ ತಾತ್ವಿಕ ಭಿನ್ನಾಭಿಪ್ರಾಯ ಇಟ್ಟುಕೊಂಡು ಬಂಡಾಯದ ಕಾಮ್ರೆಡ್‌ಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಜೊತೆ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕನಾಗಿ ಕೆಲಸ ಮಾಡಿದ್ದ ನನ್ನನ್ನು ಉತ್ತರ ಕರ್ನಾಟಕ ಬಂಡಾಯ ಸಾಹಿತ್ಯ ಸಮ್ಮೇಳನದ ಉದ್ಘಾಟಕನಾಗಿ ಕರೆದು ಪ್ರೀತಿ ತೋರಿಸಿದ್ದರು. ಅವರ ತಾತ್ವಿಕ ಬದ್ಧತೆ ನಮ್ಮ ಗೌರವವನ್ನು ಇಮ್ಮಡಿಗೊಳಿಸಿತ್ತು.

ಬಂಡಾಯ ಸಾಹಿತ್ಯ ಸಂಘಟನೆ ನಮ್ಮೆಲ್ಲರಿಗೆ ಬಹುದೊಡ್ಡ ಬದ್ಧತೆಯನ್ನು ಕಲಿಸಿತ್ತು. 1979ರ ಮೊದಲ ಸಮ್ಮೇಳನದಿಂದ ಸುಮಾರು ಹತ್ತಾರು ವರ್ಷಗಳು ತಾತ್ವಿಕವಾಗಿ ಸಮಾಜವಾದಿ ಚಿಂತನೆಯ ಹಾದಿಯಲ್ಲಿ ನಡೆಯಲು ಚಂಪಾ ಅವರು ಕೂಡ ಮುಖ್ಯ ಕಾರಣಕರ್ತರಾಗಿದ್ದರು. ಬಂಡಾಯ ಸಂಘಟನೆಯಲ್ಲಿ ಮೂವರನ್ನು ಸಂಚಾಲಕರನ್ನಾಗಿ ನೇಮಿಸಲು ತೀರ್ಮಾನ ಮಾಡಿ, ಒಬ್ಬರು ದಲಿತ ಸಮುದಾಯದಿಂದ, ಅಲ್ಪಸಂಖ್ಯಾತ ಲೇಖಕರೊಬ್ಬರನ್ನು ಹಾಗೂ ಉಳಿದ ಸಮುದಾಯಗಳಿಂದ ಲೇಖಕರೊಬ್ಬರು ಸದಸ್ಯರಾಗಬೇಕೆಂಬ ನಿಯಮವನ್ನು ಒಪ್ಪಿದ್ದ ಬಗೆಗೆ ನನ್ನ ವೈಯಕ್ತಿಕ ಮೆಚ್ಚುಗೆ ಈಗಲೂ ಇದೆ. ಇದರಲ್ಲಿ ಪ್ರಸಿದ್ಧ ಲೇಖಕರಲ್ಲದವರನ್ನೂ ಸಂಘಟನೆಯ ನಾಯಕರನ್ನಾಗಿ ಒಪ್ಪಿ ಅವರ ನೇತೃತ್ವದಲ್ಲಿ ಮುನ್ನಡೆಸಿದ್ದು ಸಾಮಾನ್ಯ ಸಂಗತಿಯಲ್ಲ. ತಮ್ಮ ವ್ಯಕ್ತಿಗತ ನಂಬಿಕೆಗಳಿಂದ ದೂರ ಉಳಿದವರನ್ನೂ ಕೂಡ ಗೌರವದಿಂದ ಕಾಣುತ್ತಲೇ ಎಲ್ಲರನ್ನು ಒಳಗೊಳ್ಳುವ ಪ್ರಯತ್ನ ಮಾಡಿದ್ದು ಚಂಪಾ ಅವರಂತಹ ಲೇಖಕರ ಹೆಚ್ಚುಗಾರಿಕೆ ಆಗಿತ್ತು.

ಚಂಪಾ ಮತ್ತು ಸಂಕ್ರಮಣ ಪತ್ರಿಕೆ ಬೇರೆ ಬೇರೆಯಲ್ಲ ಎನ್ನುವಷ್ಟು ಅವಿನಾಭಾವ ಸಂಬಂಧವಿದ್ದದ್ದು ನಾಡಿಗೆ ತಿಳಿದ ಸಂಗತಿಯೇ. ಸಿದ್ದಲಿಂಗ ಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜ ಮತ್ತು ಚಂಪಾ, ಈ ಮೂರು ಜನ ಸೇರಿ ಆರಂಭಿಸಿದ ಸಂಕ್ರಮಣ ಕೊನೆಗೆ ಚಂಪಾ ಅವರ ಹೆಗಲಿಗೆ ಬಿತ್ತು. ಅದನ್ನು ಚೊಕ್ಕವಾಗಿ ಸಂಪಾದಿಸಿ ಅನೇಕ ಯುವ ಬರಹಗಾರರಿಗೆ ಸ್ಫೂರ್ತಿಯ ಸೆಲೆಯಾದದ್ದು ಮಹತ್ವದ ಸಂಗತಿ. ಚಂಪಾ ಎಂದೂ ಅಹಮ್ಮಿಗೆ ಬೀಳದೆ ಪತ್ರಿಕೆಯನ್ನು ಅದ್ಭುತವಾಗಿ ಸಂಪಾದಿಸುತ್ತಿದ್ದುದು ಅನುಕರಣೀಯ ಸಂಗತಿ. ಸಂಕ್ರಮಣ ಪತ್ರಿಕೆಯ ಅಂಬೇಡ್ಕರ್ ವಿಶೇಷಾಂಕ, ಲೋಹಿಯಾ ವಿಶೇಷಾಂಕ ಮತ್ತು ಮೀಸಲಾತಿ ಕುರಿತ ವಿಶೇಷಾಂಕಗಳು ಎಲ್ಲ ಲೇಖಕರ ಗ್ರಂಥಾಲಯಗಳಲ್ಲಿರಬೇಕಾದ ಸಂಗ್ರಹಯೋಗ್ಯ ಸಂಚಿಕೆಗಳು. ಯುವಪೀಳಿಗೆಯ ಅನೇಕ ಲೇಖಕರಿಗೆ ಸಂಕ್ರಮಣದಲ್ಲಿ ತಮ್ಮ ಕಥೆ, ಕವಿತೆ ಪ್ರಕಟವಾಗುವುದು ಪ್ರತಿಷ್ಠೆಯ ವಿಷಯವಾಗಿದ್ದ ಕಾಲವದು. ಯಾವ ಮುಲಾಜೂ ಇಲ್ಲದೆ ನಮ್ಮ ಲೇಖಕರಿಂದ ಚಂದಾ ಪಡೆಯುತ್ತಿದ್ದ ಚಂಪಾ ಅವರನ್ನು ’ಚಂದಮಾಮ’ ಎಂದು ರೇಗಿಸುತ್ತಿದ್ದದ್ದುಂಟು. ಅದನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದ ಚಂಪಾ ಅವರು, ಸಮಯ ಬಂದಾಗ ಛೇಡಿಸಿ ಆನಂದಿಸುತ್ತಿದ್ದರು. ಕನ್ನಡ ಸಾಹಿತ್ಯ-ಸಾಂಸ್ಕೃತಿಕ-ರಾಜಕೀಯ ಲೋಕಕ್ಕೆ ಸಂಕ್ರಮಣದ ಕೊಡುಗೆಯನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಅನೇಕ ಸಾಹಿತ್ಯ ಪತ್ರಿಕೆಗಳನ್ನು ಆರಂಭಿಸಿದ ನಮ್ಮ ಲೇಖಕ-ಸಂಪಾದಕರನ್ನು ನೋಡಿದ ಮೇಲೆ, ಸಾಹಿತ್ಯ ಪತ್ರಿಕೆಯೊಂದನ್ನು ಯಶಸ್ವಿಯಾಗಿ ನಡೆಸಿದವರು ’ಚಂಪಾ’ ಎಂದು ನಿರ್ವಿವಾದವಾಗಿ ಹೇಳಬಹುದು.

ತಮ್ಮ ಸಾಹಿತ್ಯದ ತೀವ್ರ ಮೊನಚಿನಂತೆಯೇ, ಚಂಪಾ ಅವರು ವೈಯಕ್ತಿಕವಾಗಿ ತಮ್ಮನ್ನೇ ಗೇಲಿ ಮಾಡಿಕೊಂಡು ಸ್ನೇಹಿತರ ಜೊತೆ ಹಂಚಿಕೊಳ್ಳುತ್ತಿದ್ದರು. ಕನ್ನಡದ ಲೇಖಕಿಯೊಬ್ಬರ ಕುರಿತು ಮಾತನಾಡುವಾಗ ಅವರು ತಮ್ಮ ಆತ್ಮಕಥೆ ಬರೆದರೆ ಕರ್ನಾಟಕದ ವಿವಿಧ ಭಾಗದ ಕೆರೆಗಳಲ್ಲಿ ಅನೇಕ ಹೆಣಗಳು ತೇಲುತ್ತವೆ ಎಂದು ತಮಾಷೆ ಮಾಡುತ್ತಿದ್ದೆವು. ಎಲ್ಲಿ ಹೆಣ ತೇಲುತ್ತದೋ ಇಲ್ಲವೋ ಧಾರವಾಡದ ಕೆರೆಯಲ್ಲಿ ಒಂದು ಹೆಣ ತೇಲುವುದು ಗ್ಯಾರಂಟಿ ಎಂದು ಹೇಳಿದಾಗ ಇಡೀ ದಿನ ನಕ್ಕಿದ್ದೇವೆ. ತಾವು ನಂಬಿದ ತತ್ವಗಳನ್ನು ಬಿಟ್ಟು ಚಂಪಾ ರಾಜಿ ಮಾಡಿಕೊಂಡಿದ್ದಿಲ್ಲ. ಬಂಡಾಯ ಸಾಹಿತ್ಯ ಸಂಘಟನೆಯು ಕೋಲಾರದಲ್ಲಿ ನಡೆಸಿದ ಸಮ್ಮೇಳನದಲ್ಲಿ, ರಾತ್ರಿ ನಡೆದ ಒಂದು ಚರ್ಚೆಯ ವೇಳೆ, ಗೋಕಾಕ್ ಚಳವಳಿ ಕುರಿತ ಮುಂದೇನು ಎಂಬ ಮಾತುಕತೆ ರಂಗೇರಿ, ಇಡೀ ಬಂಡಾಯದ ಲೇಖಕರೆಲ್ಲ ಒಂದು ಕಡೆ ನಿಂತರೆ, ಚಂಪಾ ಒಬ್ಬರೇ ಗೋಕಾಕ್ ಚಳವಳಿಯ ಪರ ನಿಲುವು ತಳೆದು ಹೊರನಡೆದರು. ಎಲ್ಲರಿಗೂ ಗಾಬರಿ ತಂದ ಅವರ ನಿರ್ಧಾರ, ಮುಂದೆ ಬಂಡಾಯದ ಜೊತೆಗೆ ಸೇರಿ ಹೆಜ್ಜೆ ಹಾಕಿದಾಗ ಸರಿಯಾಯಿತು. ಚಂಪಾ ಅವರಿಗೆ ಸಾಹಿತ್ಯ ಕೃಷಿ ಎಷ್ಟು ಗಂಭೀರವಾದದ್ದೋ ಸಾಮಾಜಿಕ ಸಂಗತಿಗಳೂ ಅಷ್ಟೇ ಮಹತ್ವದ್ದಾಗಿದ್ದವು. ಭಾಷೆಯ ಹೋರಾಟ, ಕೋಮುವಾದಿ ವಿರೋಧದ ಚಳವಳಿ ಮತ್ತು ಜಾತಿ ವಿರೋಧಿ ಹೋರಾಟಗಳಲ್ಲಿ ಸದಾ ಮುಂದಿರುತ್ತಿದ್ದ ಚಂಪಾ ಎಲ್ಲ ಜನಪರ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದರು.

ಚಂಪಾ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಾನು ಅದರ ಕಾರ್ಯಕಾರಿ ಸಮಿತಿಗೆ ನಾಮಕರಣಗೊಂಡ ಸದಸ್ಯನಾಗಿದ್ದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸಬೇಕೆಂಬ ಒತ್ತಾಯದ ಜೊತೆಗೆ ಅದನ್ನು ಒಂದನೇ ತರಗತಿಯಿಂದಲೇ ಕಲಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ಚಂಪಾ ಅವರು ಮೂರನೇ ತರಗತಿಯಿಂದ ಕಲಿಸಬೇಕು ಎಂದು ಹೇಳುತ್ತಿದ್ದರು. ನಾನು ಇದರಿಂದ ಕೊಂಚ ವಿಚಲಿತನಾಗಿ ಕಾರ್ಯಕಾರಿ ಸಮಿತಿಗೆ ರಾಜಿನಾಮೆ ನೀಡುತ್ತೇನೆಂದು ತಿಳಿಸಿದೆ. ಇದಕ್ಕೆ ಒಪ್ಪದ ಚಂಪಾ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸಾಧ್ಯ, ರಾಜೀನಾಮೆಯ ಅಗತ್ಯವಿಲ್ಲವೆಂದು ನನಗೆ ತಿಳಿಸಿ ಮುಂದುವರೆಯುವಂತೆ ಮಾಡಿದರು. ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ ಚಂಪಾ ಅವರು ಸದಾ ಜನಪರವಾಗಿರುವುದಕ್ಕೆ ಈ ಘಟನೆ ಸಾಕ್ಷಿ. ಸಮಕಾಲೀನ ದಿಗ್ಗಜ ಲೇಖಕರ ಜೊತೆ ಜಗಳವಾಡುತ್ತಲೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡವರು ಅವರು. ಅನಂತಮೂರ್ತಿ, ಲಂಕೇಶ್‌ರಂತಹ ಲೇಖಕರನ್ನು ಎದುರು ಹಾಕಿಕೊಂಡು ತಾವೆಂದೂ ಒಂಟಿಯಲ್ಲವೆಂದು ಭಾವಿಸಿಕೊಂಡು ಬಂಡಾಯ ಸಾಹಿತ್ಯ ಸಂಘಟನೆಯ ಚಾಲಕರಾಗಿ ಕೊನೆವರೆಗೆ ಇದ್ದವರು.

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಘೋಷಣೆಯಾದ ಸಂದರ್ಭ; ನಾವೆಲ್ಲ ಒಂದಷ್ಟು ಜನ ಹಿರಿಯೂರಿನ ರಂಗೇನಹಳ್ಳಿಯ ಸಭೆಯೊಂದರಲ್ಲಿ ಭಾಗವಹಿಸಿದ್ದೆವು. ಅಲ್ಲಿದ್ದವರೊಬ್ಬರು ಹನುಮಂತಯ್ಯ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗ್ತಿದ್ದಾರೆ ಎಂದರು. ಸದಾ ವಿರೋಧ ಪಕ್ಷದ ನಾಯಕನಂತೆ ಚಂಪಾ, ಹನುಮಂತಯ್ಯ ಒಳ್ಳೆ ಕೆಲಸ ಮಾಡಿದರೆ ನಮ್ಮ ಬೆಂಬಲ, ಇಲ್ಲವಾದರೆ ಪ್ರತಿಭಟನೆ ಇದ್ದದ್ದೆ ಎಂದರು. ಅವರಿಗೆ ಪ್ರತಿಭಟನೆಯ ಅವಕಾಶ ಸಿಗಲಿಲ್ಲವೆಂಬುದು ಬೇರೆ ಮಾತು. ಚಂಪಾ ನನಗಿಂತಲೂ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು. ನಾನು ಅವರ ಜೊತೆಯಲ್ಲಿದ್ದೆ. ಆಗಿನ ಮಂತ್ರಿಯಾಗಿದ್ದ ಎಂ.ಪಿ ಪ್ರಕಾಶ್ ನೋಡಲು ಹೋಗುತ್ತಿದ್ದೆವು. ಹೋಗುವ ದಾರಿಯಲ್ಲಿ ಅವರು ಹೇಳಿದ ಮಾತು ಇನ್ನೂ ನನ್ನ ನೆನಪಿನಲ್ಲಿದೆ. ಇನ್ನು ಮೂರುವರ್ಷಗಳು ನನ್ನ ಕವಿತೆಗಳಲ್ಲಿ ಹೂವು, ಹಣ್ಣು, ತಾರೆಗಳನ್ನು ಕುರಿತೇ ಬರೆಯಬೇಕೆಂದೆನಿಸುತ್ತದೆ ಎಂದರು. ಅವರ ಸಮಯಪ್ರಜ್ಞೆ, ಸಾಹಿತ್ಯ ಬದ್ಧತೆಯ ಕುರಿತು ಮೆಚ್ಚುಗೆಯಾಯಿತು.

ಅಪಾರ ತಾತ್ವಿಕ ಬದ್ಧತೆಯ ಮಹತ್ವದ ಕವಿ ನಾಟಕಕಾರ ಚಂಪಾ 83ರ ತುಂಬು ಜೀವನ ನಡೆಸಿದ್ದಾರೆ. ಕೊನೆಯರಡು ವರ್ಷಗಳು ಅನಾರೋಗ್ಯದಿಂದ ನರಳಿದ್ದು ದುಃಖ ತಂದಿದೆ. ಬಹುಶಃ ಚಂಪಾ ಎಂದೊಡನೆ ನಮ್ಮ ಕಣ್ಮುಂದೆ ಬರುವ ಅವರ ಕವಿತೆಯ ಸಾಲು:
ನಾವು ಹೂವಿನ ಬಗ್ಗೆ ನಾವು ಹೆಣ್ಣಿನ ಬಗ್ಗೆ
ನಾವು ತಾರೆಯ ಬಗ್ಗೆ ಹಾಡುವುದು ಬೇಡ
ಅಂತ ಹೇಳುವುದು ಬೇಡ ಗೆಳೆಯಾ

ಡಾ. ಎಲ್. ಹನುಮಂತಯ್ಯ

ಡಾ. ಎಲ್. ಹನುಮಂತಯ್ಯ
ಕವಿ, ಬರಹಗಾರ ಮತ್ತು ರಾಜ್ಯಸಭಾ ಸದಸ್ಯರು. ’ಬಂಡಾಯ ಕತೆಗಳಲ್ಲಿ ದಲಿತ ಪ್ರಜ್ಞೆ’ ಸಂಶೋಧನಾ ಪ್ರಭಂದ, ’ಕಪ್ಪು ಕಣ್ಣಿನ ಹುಡುಗಿ’, ’ಅವ್ವ ಅವ್ವನ ಕವಿತೆ’, ’ಜೀವಗಾನ’, ’ಕರ್ಣರಾಗ’ ಕವನ ಸಂಕಲನಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.


ಇದನ್ನೂ ಓದಿ: ಛಲಬಿಡದ ಕನ್ನಡ ಪ್ರೇಮಿ ಸೈಯದ್ ಇಸಾಕ್‌: ಗಣರಾಜ್ಯ ದಿನದಂದು ಗ್ರಂಥಾಲಯ ಓಪನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...