Homeಮುಖಪುಟಬಿಜೆಪಿ ನಿಕಟವರ್ತಿ ಸಂಸ್ಥೆಗಳ ಚೀನಾ ಹಣಕಾಸು ನಂಟು!: ವಿದೇಶಾಂಗ ಸಚಿವ, ರಕ್ಷಣಾ ಸಲಹೆಗಾರರ ಸಂಬಂಧಿತ ಸಂಸ್ಥೆಗಳಿಗೆ...

ಬಿಜೆಪಿ ನಿಕಟವರ್ತಿ ಸಂಸ್ಥೆಗಳ ಚೀನಾ ಹಣಕಾಸು ನಂಟು!: ವಿದೇಶಾಂಗ ಸಚಿವ, ರಕ್ಷಣಾ ಸಲಹೆಗಾರರ ಸಂಬಂಧಿತ ಸಂಸ್ಥೆಗಳಿಗೆ ಚೀನಾದ ಹಣ

ಓಆರ್‌ಎಫ್ 2016ಲ್ಲಿ ಚೀನಾದ ಉಪರಾಯಭಾರಿ (ಕಾನ್ಸ್ಯೂಲೇಟ್ ಜನರಲ್)ಯಿಂದ ಒಟ್ಟು 1.25 ಕೋಟಿ ರೂ. ಮೊತ್ತದ ಮೂರು ದೇಣಿಗಳನ್ನು ಮತ್ತು ಮರುವರ್ಷ 50 ಲಕ್ಷ ರೂ.ಗಳ ದೇಣಿಗೆಯನ್ನು ಪಡೆದಿತ್ತು.

- Advertisement -
- Advertisement -

ಚೀನಾದ ಸಂಸ್ಥೆಗಳಿಂದ ಹಣ ಸ್ವೀಕರಿಸುವುದೆಂದರೆ ಉಯ್ಯಾಲೆಯಲ್ಲಿ ಜಾಗ ಹಂಚಿಕೊಳ್ಳುವಷ್ಟೇ ಸಹಜ ಮತ್ತು ಸ್ವೀಕಾರಾರ್ಹ ಎನಿಸಿದ್ದ ಕಾಲವಿತ್ತು. ಹಾಗಿದ್ದರೂ ಬಿಜೆಪಿಯು ಗಾಲ್ವಾನ್ ಪ್ರಮಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಧಾವಂತದಲ್ಲಿ ಒಂದು ಆಡುಮಾತನ್ನು ಮರೆತುಬಿಟ್ಟಿದೆ. ಅದೆಂದರೆ ನೀವು ಬೇರೆಯವರ ಕಡೆಗೆ ಬೆರಳು ತೋರಿಸಿದಾಗ ಮೂರು ಬೆರಳುಗಳು ನಿಮ್ಮನ್ನು ತೋರಿಸುತ್ತವೆ. ಈ ಪ್ರಕರಣದಲ್ಲಿ ಕನಿಷ್ಟ ಎರಡು ಬೆರಳುಗಳು ಬಿಜೆಪಿಯ ಆಂತರಿಕ ವ್ಯವಸ್ಥೆಯತ್ತ ತೋರಿಸುತ್ತಿವೆ.

ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಅವರ ಮಗನ ವಿದೇಶಾಂಗ ಧೋರಣೆಯ ಚಿಂತನಾ ಚಾವಡಿಯಾದ “ದಿ ಒಬ್ಸರ್ವರ್ ರಿಸರ್ಚ್ ಫೌಂಡೇಶನ್” (ಓಆರ್‌ಎಫ್) 2016ರಲ್ಲಿ ಕೋಲ್ಕತ್ತಾದ ಸೇರಿದಂತೆ ಚೀನಾದ ಉಪರಾಯಭಾರ ಕಚೇರಿಗಳಿಂದ (ಕಾನ್ಸ್ಯೂಲೇಟ್) ಹಣಕಾಸು ಪಡೆದಿದೆ. ಅಲ್ಲದೇ ಓಆರ್‌ಎಫ್‌ಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಹಣಕಾಸು ಬೆಂಬಲವೂ ಇದೆ.

ಆರೆಸ್ಸೆಸ್‌ಗೆ ಹತ್ತಿರವಾಗಿರುವ ಇನ್ನೊಂದು ಚಿಂತನಾ ಚಾವಡಿಯಾಗಿರುವ ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್ ತನ್ನ ವೆಬ್‌ಸೈಟಿನಲ್ಲಿ, ತಾನು ವಿದೇಶಾಂಗ ಮತ್ತು ಕಾರ್ಯವ್ಯೂಹಾತ್ಮಕ ಧೋರಣೆಯ ವಿಷಯದಲ್ಲಿ ಒಂಬತ್ತು ಚೀನಿ ಸಂಸ್ಥೆಗಳೊಂದಿಗೆ ವೃತ್ತಿಪರ ಸಂಬಂಧ ಹೊಂದಿರುವುದಾಗಿ ಘೋಷಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ (ವಿಐಎಫ್)ನ ಸ್ಥಾಪಕ ನಿರ್ದೇಶಕರಾಗಿದ್ದು, ಅದು ಬಿಜೆಪಿ ಮತ್ತು ಆರೆಸ್ಸೆಸ್ ಜೊತೆ ನಿಕಟ ನಂಟು ಹೊಂದಿದೆ. ಈ ಎರಡೂ ಸಂಸ್ಥೆಗಳು ಈ ಮಾಹಿತಿಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊಂಡಿವೆ.

ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್ ನಲ್ಲಿ ಅಜಿತ್ ದೋವಲ್. (ಬಲದಿಂದ ಮೊದಲನೆಯವರು)

ಒಂದು ವೇಳೆ ಬಿಜೆಪಿಯು 2005-06ರಷ್ಟು ಹಿಂದೆ ಪಡೆದ ಹಣವನ್ನು ಆಧರಿಸಿ ಕಾಂಗ್ರೆಸ್ ಪಕ್ಷವು ಚೀನಾ ನಂಟು ಹೊಂದಿದೆ ಎಂದು ಆರೋಪಿಸಿ ನಗಣ್ಯ ವಿಷಯವನ್ನು ಒಂದು ದೊಡ್ಡ ರಾಷ್ಟ್ರೀಯ ಭದ್ರತಾ ವಿಷಯವನ್ನಾಗಿ ಮಾಡಲು ಹೊರಡದಿದ್ದರೆ, ಈ ಎರಡೂ ಸಂಸ್ಥೆಗೆ ದೇಣಿಗೆ ನೀಡಿದ ದಾನಿಗಳ ಗುರುತು ಪರಿಚಯ ಯಾರ ಗಮನವನ್ನೂ ಸೆಳೆಯುತ್ತಿರಲಿಲ್ಲ. ವಿಶ್ವದಾದ್ಯಂತ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯುವುದು ಸಾಮಾನ್ಯವಾಗಿದೆ.

ವಿದೇಶಾಂಗ ಸಚಿವರ ಮಗ ಧ್ರುವ ಜೈಶಂಕರ್ ಒಬ್ಸರ್ವರ್ ರಿಸರ್ಚ್ ಫೌಂಡೇಶನ್‌ನಲ್ಲಿ ಕಳೆದ ವರ್ಷ ಯುಎಸ್‌ಎಗೆ ಸಂಬಂಧಿಸಿದ ವಿಷಯಗಳ ನಿರ್ದೇಶಕರಾದರು. ಚೀನಾ ದೇಶಕ್ಕೆ ಭಾರತದ ಮಾಜಿ ರಾಯಭಾರಿಯೂ ಆಗಿರುವ ವಿದೇಶಾಂಗ ಸಚಿವರು ಓಆರ್‌ಎಫ್‌ಗೆ ನಿಯಮಿತವಾಗಿ ಭೇಟಿ ನೀಡಿ, ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಉಪನ್ಯಾಸಗಳನ್ನು ನೀಡುತ್ತಾರೆ.

ಧ್ರುವ ಜೈಶಂಕರ್ ಒಬ್ಸರ್ವರ್ ರಿಸರ್ಚ್ ಫೌಂಡೇಶನ್‌ನಲ್ಲಿ ಮಾತನಾಡುತ್ತಿರುವುದು

ಜೈಶಂಕರ್ ಅವರ ಓಆರ್‌ಎಫ್‌ನ ವೆಬ್‌ಸೈಟಿನಲ್ಲಿ ವಿದೇಶಿ ದಾನಿಗಳ ಪಟ್ಟಿಯನ್ನು ನೀಡಲಾಗಿದ್ದು, ಅವರಿಂದ ಪಡೆದ ಹಣದ ಮೊತ್ತವನ್ನೂ ನಮೂದಿಸಲಾಗಿದೆ. ಅದರಂತೆ, ಓಆರ್‌ಎಫ್ 2016ಲ್ಲಿ ಚೀನಾದ ಉಪರಾಯಭಾರಿ (ಕಾನ್ಸ್ಯೂಲೇಟ್ ಜನರಲ್)ಯಿಂದ ಒಟ್ಟು 1.25 ಕೋಟಿ ರೂ. ಮೊತ್ತದ ಮೂರು ದೇಣಿಗಳನ್ನು ಮತ್ತು ಮರುವರ್ಷ 50 ಲಕ್ಷ ರೂ.ಗಳ ದೇಣಿಗೆಯನ್ನು ಪಡೆದಿತ್ತು.

ಸಂಸ್ಥೆಯು ಕೊಲ್ಕತ್ತಾದ “ಕಾನ್ಸ್ಯೂಲೇಟ್ ಜನರಲ್ ಆಫ್ ರಿಪಬ್ಲಿಕ್ ಆಫ್ ಚೈನಾ”ದಿಂದ ಎಪ್ರಿಲ್ 29, 2016ರಂದು 7.7 ಲಕ್ಷ ರೂ., ಅದೇ ವರ್ಷ ನವಂಬರ್ 4ರಂದು 11.55 ಲಕ್ಷ ರೂ. ಮತ್ತೊಮ್ಮೆ ಡಿಸೆಂಬರ್ 1, 2017ರಂದು 50 ಲಕ್ಷ ರೂ. ದೇಣಿಗೆ ಪಡೆದಿದೆ.

ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ತಾನು ಸಂಬಂಧ ಹೊಂದಿರುವ ಚೀನಾದ ಸಂಸ್ಥೆಗಳ ಪಟ್ಟಿ ನೀಡಿದೆ. ಅವುಗಳೆಂದರೆ, ಬೀಜಿಂಗ್‌ನ ಚೈನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟ್ರಾಟಜಿಕ್ ಸ್ಟಡೀಸ್; ಬೀಜಿಂಗ್‌ನ ಚೈನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್  ಸ್ಟಡೀಸ್; ಬೀಜಿಂಗ್‌ನ ಸೆಂಟರ್ ಫಾರ್ ಸೌತ್ ಏಷ್ಯನ್ ಸ್ಟಡೀಸ್; ಬೀಜಿಂಗ್‌ನ ಪೆಕಿಂಗ್ ಯುನಿವರ್ಸಿಟಿ; ಕುನ್‌ಮಿಂಗ್‌ನ ಯುನಾನ್ ಯುನಿವರ್ಸಿಟಿ ಆಫ್ ಫೈನಾನ್ಸ್ ಎಂಡ್ ಇಕನಾಮಿಕ್ಸ್‌ನ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಇಂಡಿಯನ್ ಓಶನ್ ಸ್ಟಡೀಸ್; ಬೀಜಿಂಗ್‌ನ ಚೈನೀಸ್ ಅಕಾಡೆಮಿ ಆಫ್ ಸೋಷಿಯಲ್ ಸಾಯನ್ಸಸ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟ್ರಾಟಜಿ; ಚೆಂಗ್ಡೂವಿನ ಸೆಂಟರ್ ಫಾರ್ ಸೌತ್ ಏಷ್ಯಾ ಎಂಡ್ ವೆಸ್ಟ್ ಚೈನಾ ಕೊಅಪರೇಷನ್ ಎಂಡ್ ಡೆವಲಪ್‌ಮೆಂಟ್ ಯುನಿವರ್ಸಿಟಿ; ಚೆಂಗ್ಡೂವಿನ ಸಿಚುವಾನ್ ಯುನಿವರ್ಸಿಟಿಯ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್; ಬೀಜಿಂಗ್‌ನ ಸಿಲ್ಕ್ ರೋಡ್ ಥಿಂಕ್ ಟ್ಯಾಂಕ್ ನೆಟ್‌ವರ್ಕ್ ಡೆವಲಪ್‌ಮೆಂಟ್ ರಿಸರ್ಚ್ ಕೌನ್ಸಿಲ್; ಮತ್ತು ಶೆನ್‌ಝೆನ್‌ನ ಸೆಂಟರ್ ಫಾರ್ ಇಂಡಿಯನ್ ಸ್ಟಡೀಸ್.

ಭಾರತದಲ್ಲಿ ಹೂಡಿಕೆಯ ಸಾಧ್ಯತೆಗಳ ಕುರಿತು ಒಆರ್‌ಎಫ್‌ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚೀನಾದ ಪ್ರತಿನಿಧಿಗಳು ಭಾಗವಹಿಸಿರುವುದು

ರಕ್ಷಣಾ ವಲಯದ ಮೂಲಗಳ ಪ್ರಕಾರ ಈ ಎರಡು ಚಿಂತನಾ ಚಾವಡಿಗಳ ಸದಸ್ಯರಿಗೆ ಆಡಳಿತದ ನಾರ್ಥ್ ಬ್ಲಾಕ್ ಮತ್ತು ಸೌತ್ ಬ್ಲಾಕ್ (ಹಣಕಾಸು ಮತ್ತು ವಿದೇಶಾಂಗ ಸಚಿವಾಲಯಗಳು)ಗಳಿಗೆ ಸಾಕಷ್ಟು ಮುಕ್ತವಾದ ಪ್ರವೇಶವಿದೆ.

ಎರಡೂ ಸಂಸ್ಥೆಗಳನ್ನು ಇ- ಮೈಲ್ ಮತ್ತು ಟ್ವಿಟ್ಟರ್ ಮೂಲಕ ಸಂಪರ್ಕಿಸಿದಾಗ ಯಾವುದೇ ವಿವರಣೆ ಬಂದಿಲ್ಲವಾದರೂ, ಈ ವರದಿಯು ಈ ದೇಣಿಗೆಗಳು ಕಾನೂನುಬದ್ಧವಲ್ಲ ಎಂದು ಸೂಚಿಸುತ್ತಿಲ್ಲ.

ಆದರೆ, ತನ್ನ ವಿದೇಶಾಂಗ ಸಚಿವರು ಮತ್ತು ಸರಕಾರದ ಭದ್ರತಾ ಸಲಹೆಗಾರರು ಭಾಗಿಯಾಗಿರುವ ಮತ್ತು ತನಗೆ ನಿಕಟವಾಗಿರುವ ಸಂಸ್ಥೆಗಳು ಚೀನಾದ ಸರಕಾರ ಮತ್ತು ಸಂಸ್ಥೆಗಳಿಂದ ದೇಣಿಗೆ ಪಡೆದಿರುವಾಗ, ಒಂದೂವರೆ ದಶಕದ ಹಿಂದೆ ಕಾಂಗ್ರೆಸ್ ಪಡೆದುಕೊಂಡ ದೇಣಿಗೆಯನ್ನು  ಹಿಡಿದುಕೊಂಡು ರಾಷ್ಟ್ರೀಯ ಭದ್ರತಾ ಪ್ರಶ್ನೆಯನ್ನು ಎತ್ತಿರುವ ಬಿಜೆಪಿ ನಡೆಯು ತನ್ನ ಬಟ್ಟಲಿನಲ್ಲಿ ಹೆಗ್ಗಣ ಇಟ್ಟುಕೊಂಡು, ಕಾಂಗ್ರೆಸ್ ಬಟ್ಟಲಿನಲ್ಲಿ ನೊಣವನ್ನು ತೋರಿಸಿದಂತಾಗಿದೆ.

ಕೃಪೆ: ಟೆಲಿಗ್ರಾಫ್‌ಇಂಡಿಯಾ

ಅನುವಾದ: ನಿಖಲ್ ಕೋಲ್ಪೆ


ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...