Homeಮುಖಪುಟಬಿಜೆಪಿ ನಿಕಟವರ್ತಿ ಸಂಸ್ಥೆಗಳ ಚೀನಾ ಹಣಕಾಸು ನಂಟು!: ವಿದೇಶಾಂಗ ಸಚಿವ, ರಕ್ಷಣಾ ಸಲಹೆಗಾರರ ಸಂಬಂಧಿತ ಸಂಸ್ಥೆಗಳಿಗೆ...

ಬಿಜೆಪಿ ನಿಕಟವರ್ತಿ ಸಂಸ್ಥೆಗಳ ಚೀನಾ ಹಣಕಾಸು ನಂಟು!: ವಿದೇಶಾಂಗ ಸಚಿವ, ರಕ್ಷಣಾ ಸಲಹೆಗಾರರ ಸಂಬಂಧಿತ ಸಂಸ್ಥೆಗಳಿಗೆ ಚೀನಾದ ಹಣ

ಓಆರ್‌ಎಫ್ 2016ಲ್ಲಿ ಚೀನಾದ ಉಪರಾಯಭಾರಿ (ಕಾನ್ಸ್ಯೂಲೇಟ್ ಜನರಲ್)ಯಿಂದ ಒಟ್ಟು 1.25 ಕೋಟಿ ರೂ. ಮೊತ್ತದ ಮೂರು ದೇಣಿಗಳನ್ನು ಮತ್ತು ಮರುವರ್ಷ 50 ಲಕ್ಷ ರೂ.ಗಳ ದೇಣಿಗೆಯನ್ನು ಪಡೆದಿತ್ತು.

- Advertisement -
- Advertisement -

ಚೀನಾದ ಸಂಸ್ಥೆಗಳಿಂದ ಹಣ ಸ್ವೀಕರಿಸುವುದೆಂದರೆ ಉಯ್ಯಾಲೆಯಲ್ಲಿ ಜಾಗ ಹಂಚಿಕೊಳ್ಳುವಷ್ಟೇ ಸಹಜ ಮತ್ತು ಸ್ವೀಕಾರಾರ್ಹ ಎನಿಸಿದ್ದ ಕಾಲವಿತ್ತು. ಹಾಗಿದ್ದರೂ ಬಿಜೆಪಿಯು ಗಾಲ್ವಾನ್ ಪ್ರಮಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಧಾವಂತದಲ್ಲಿ ಒಂದು ಆಡುಮಾತನ್ನು ಮರೆತುಬಿಟ್ಟಿದೆ. ಅದೆಂದರೆ ನೀವು ಬೇರೆಯವರ ಕಡೆಗೆ ಬೆರಳು ತೋರಿಸಿದಾಗ ಮೂರು ಬೆರಳುಗಳು ನಿಮ್ಮನ್ನು ತೋರಿಸುತ್ತವೆ. ಈ ಪ್ರಕರಣದಲ್ಲಿ ಕನಿಷ್ಟ ಎರಡು ಬೆರಳುಗಳು ಬಿಜೆಪಿಯ ಆಂತರಿಕ ವ್ಯವಸ್ಥೆಯತ್ತ ತೋರಿಸುತ್ತಿವೆ.

ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಅವರ ಮಗನ ವಿದೇಶಾಂಗ ಧೋರಣೆಯ ಚಿಂತನಾ ಚಾವಡಿಯಾದ “ದಿ ಒಬ್ಸರ್ವರ್ ರಿಸರ್ಚ್ ಫೌಂಡೇಶನ್” (ಓಆರ್‌ಎಫ್) 2016ರಲ್ಲಿ ಕೋಲ್ಕತ್ತಾದ ಸೇರಿದಂತೆ ಚೀನಾದ ಉಪರಾಯಭಾರ ಕಚೇರಿಗಳಿಂದ (ಕಾನ್ಸ್ಯೂಲೇಟ್) ಹಣಕಾಸು ಪಡೆದಿದೆ. ಅಲ್ಲದೇ ಓಆರ್‌ಎಫ್‌ಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಹಣಕಾಸು ಬೆಂಬಲವೂ ಇದೆ.

ಆರೆಸ್ಸೆಸ್‌ಗೆ ಹತ್ತಿರವಾಗಿರುವ ಇನ್ನೊಂದು ಚಿಂತನಾ ಚಾವಡಿಯಾಗಿರುವ ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್ ತನ್ನ ವೆಬ್‌ಸೈಟಿನಲ್ಲಿ, ತಾನು ವಿದೇಶಾಂಗ ಮತ್ತು ಕಾರ್ಯವ್ಯೂಹಾತ್ಮಕ ಧೋರಣೆಯ ವಿಷಯದಲ್ಲಿ ಒಂಬತ್ತು ಚೀನಿ ಸಂಸ್ಥೆಗಳೊಂದಿಗೆ ವೃತ್ತಿಪರ ಸಂಬಂಧ ಹೊಂದಿರುವುದಾಗಿ ಘೋಷಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ (ವಿಐಎಫ್)ನ ಸ್ಥಾಪಕ ನಿರ್ದೇಶಕರಾಗಿದ್ದು, ಅದು ಬಿಜೆಪಿ ಮತ್ತು ಆರೆಸ್ಸೆಸ್ ಜೊತೆ ನಿಕಟ ನಂಟು ಹೊಂದಿದೆ. ಈ ಎರಡೂ ಸಂಸ್ಥೆಗಳು ಈ ಮಾಹಿತಿಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊಂಡಿವೆ.

ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಶನ್ ನಲ್ಲಿ ಅಜಿತ್ ದೋವಲ್. (ಬಲದಿಂದ ಮೊದಲನೆಯವರು)

ಒಂದು ವೇಳೆ ಬಿಜೆಪಿಯು 2005-06ರಷ್ಟು ಹಿಂದೆ ಪಡೆದ ಹಣವನ್ನು ಆಧರಿಸಿ ಕಾಂಗ್ರೆಸ್ ಪಕ್ಷವು ಚೀನಾ ನಂಟು ಹೊಂದಿದೆ ಎಂದು ಆರೋಪಿಸಿ ನಗಣ್ಯ ವಿಷಯವನ್ನು ಒಂದು ದೊಡ್ಡ ರಾಷ್ಟ್ರೀಯ ಭದ್ರತಾ ವಿಷಯವನ್ನಾಗಿ ಮಾಡಲು ಹೊರಡದಿದ್ದರೆ, ಈ ಎರಡೂ ಸಂಸ್ಥೆಗೆ ದೇಣಿಗೆ ನೀಡಿದ ದಾನಿಗಳ ಗುರುತು ಪರಿಚಯ ಯಾರ ಗಮನವನ್ನೂ ಸೆಳೆಯುತ್ತಿರಲಿಲ್ಲ. ವಿಶ್ವದಾದ್ಯಂತ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯುವುದು ಸಾಮಾನ್ಯವಾಗಿದೆ.

ವಿದೇಶಾಂಗ ಸಚಿವರ ಮಗ ಧ್ರುವ ಜೈಶಂಕರ್ ಒಬ್ಸರ್ವರ್ ರಿಸರ್ಚ್ ಫೌಂಡೇಶನ್‌ನಲ್ಲಿ ಕಳೆದ ವರ್ಷ ಯುಎಸ್‌ಎಗೆ ಸಂಬಂಧಿಸಿದ ವಿಷಯಗಳ ನಿರ್ದೇಶಕರಾದರು. ಚೀನಾ ದೇಶಕ್ಕೆ ಭಾರತದ ಮಾಜಿ ರಾಯಭಾರಿಯೂ ಆಗಿರುವ ವಿದೇಶಾಂಗ ಸಚಿವರು ಓಆರ್‌ಎಫ್‌ಗೆ ನಿಯಮಿತವಾಗಿ ಭೇಟಿ ನೀಡಿ, ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಉಪನ್ಯಾಸಗಳನ್ನು ನೀಡುತ್ತಾರೆ.

ಧ್ರುವ ಜೈಶಂಕರ್ ಒಬ್ಸರ್ವರ್ ರಿಸರ್ಚ್ ಫೌಂಡೇಶನ್‌ನಲ್ಲಿ ಮಾತನಾಡುತ್ತಿರುವುದು

ಜೈಶಂಕರ್ ಅವರ ಓಆರ್‌ಎಫ್‌ನ ವೆಬ್‌ಸೈಟಿನಲ್ಲಿ ವಿದೇಶಿ ದಾನಿಗಳ ಪಟ್ಟಿಯನ್ನು ನೀಡಲಾಗಿದ್ದು, ಅವರಿಂದ ಪಡೆದ ಹಣದ ಮೊತ್ತವನ್ನೂ ನಮೂದಿಸಲಾಗಿದೆ. ಅದರಂತೆ, ಓಆರ್‌ಎಫ್ 2016ಲ್ಲಿ ಚೀನಾದ ಉಪರಾಯಭಾರಿ (ಕಾನ್ಸ್ಯೂಲೇಟ್ ಜನರಲ್)ಯಿಂದ ಒಟ್ಟು 1.25 ಕೋಟಿ ರೂ. ಮೊತ್ತದ ಮೂರು ದೇಣಿಗಳನ್ನು ಮತ್ತು ಮರುವರ್ಷ 50 ಲಕ್ಷ ರೂ.ಗಳ ದೇಣಿಗೆಯನ್ನು ಪಡೆದಿತ್ತು.

ಸಂಸ್ಥೆಯು ಕೊಲ್ಕತ್ತಾದ “ಕಾನ್ಸ್ಯೂಲೇಟ್ ಜನರಲ್ ಆಫ್ ರಿಪಬ್ಲಿಕ್ ಆಫ್ ಚೈನಾ”ದಿಂದ ಎಪ್ರಿಲ್ 29, 2016ರಂದು 7.7 ಲಕ್ಷ ರೂ., ಅದೇ ವರ್ಷ ನವಂಬರ್ 4ರಂದು 11.55 ಲಕ್ಷ ರೂ. ಮತ್ತೊಮ್ಮೆ ಡಿಸೆಂಬರ್ 1, 2017ರಂದು 50 ಲಕ್ಷ ರೂ. ದೇಣಿಗೆ ಪಡೆದಿದೆ.

ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ತಾನು ಸಂಬಂಧ ಹೊಂದಿರುವ ಚೀನಾದ ಸಂಸ್ಥೆಗಳ ಪಟ್ಟಿ ನೀಡಿದೆ. ಅವುಗಳೆಂದರೆ, ಬೀಜಿಂಗ್‌ನ ಚೈನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟ್ರಾಟಜಿಕ್ ಸ್ಟಡೀಸ್; ಬೀಜಿಂಗ್‌ನ ಚೈನಾ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್  ಸ್ಟಡೀಸ್; ಬೀಜಿಂಗ್‌ನ ಸೆಂಟರ್ ಫಾರ್ ಸೌತ್ ಏಷ್ಯನ್ ಸ್ಟಡೀಸ್; ಬೀಜಿಂಗ್‌ನ ಪೆಕಿಂಗ್ ಯುನಿವರ್ಸಿಟಿ; ಕುನ್‌ಮಿಂಗ್‌ನ ಯುನಾನ್ ಯುನಿವರ್ಸಿಟಿ ಆಫ್ ಫೈನಾನ್ಸ್ ಎಂಡ್ ಇಕನಾಮಿಕ್ಸ್‌ನ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಇಂಡಿಯನ್ ಓಶನ್ ಸ್ಟಡೀಸ್; ಬೀಜಿಂಗ್‌ನ ಚೈನೀಸ್ ಅಕಾಡೆಮಿ ಆಫ್ ಸೋಷಿಯಲ್ ಸಾಯನ್ಸಸ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟ್ರಾಟಜಿ; ಚೆಂಗ್ಡೂವಿನ ಸೆಂಟರ್ ಫಾರ್ ಸೌತ್ ಏಷ್ಯಾ ಎಂಡ್ ವೆಸ್ಟ್ ಚೈನಾ ಕೊಅಪರೇಷನ್ ಎಂಡ್ ಡೆವಲಪ್‌ಮೆಂಟ್ ಯುನಿವರ್ಸಿಟಿ; ಚೆಂಗ್ಡೂವಿನ ಸಿಚುವಾನ್ ಯುನಿವರ್ಸಿಟಿಯ ಇನ್ಸ್ಟಿಟ್ಯೂಟ್ ಆಫ್ ಸೌತ್ ಏಷ್ಯನ್ ಸ್ಟಡೀಸ್; ಬೀಜಿಂಗ್‌ನ ಸಿಲ್ಕ್ ರೋಡ್ ಥಿಂಕ್ ಟ್ಯಾಂಕ್ ನೆಟ್‌ವರ್ಕ್ ಡೆವಲಪ್‌ಮೆಂಟ್ ರಿಸರ್ಚ್ ಕೌನ್ಸಿಲ್; ಮತ್ತು ಶೆನ್‌ಝೆನ್‌ನ ಸೆಂಟರ್ ಫಾರ್ ಇಂಡಿಯನ್ ಸ್ಟಡೀಸ್.

ಭಾರತದಲ್ಲಿ ಹೂಡಿಕೆಯ ಸಾಧ್ಯತೆಗಳ ಕುರಿತು ಒಆರ್‌ಎಫ್‌ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚೀನಾದ ಪ್ರತಿನಿಧಿಗಳು ಭಾಗವಹಿಸಿರುವುದು

ರಕ್ಷಣಾ ವಲಯದ ಮೂಲಗಳ ಪ್ರಕಾರ ಈ ಎರಡು ಚಿಂತನಾ ಚಾವಡಿಗಳ ಸದಸ್ಯರಿಗೆ ಆಡಳಿತದ ನಾರ್ಥ್ ಬ್ಲಾಕ್ ಮತ್ತು ಸೌತ್ ಬ್ಲಾಕ್ (ಹಣಕಾಸು ಮತ್ತು ವಿದೇಶಾಂಗ ಸಚಿವಾಲಯಗಳು)ಗಳಿಗೆ ಸಾಕಷ್ಟು ಮುಕ್ತವಾದ ಪ್ರವೇಶವಿದೆ.

ಎರಡೂ ಸಂಸ್ಥೆಗಳನ್ನು ಇ- ಮೈಲ್ ಮತ್ತು ಟ್ವಿಟ್ಟರ್ ಮೂಲಕ ಸಂಪರ್ಕಿಸಿದಾಗ ಯಾವುದೇ ವಿವರಣೆ ಬಂದಿಲ್ಲವಾದರೂ, ಈ ವರದಿಯು ಈ ದೇಣಿಗೆಗಳು ಕಾನೂನುಬದ್ಧವಲ್ಲ ಎಂದು ಸೂಚಿಸುತ್ತಿಲ್ಲ.

ಆದರೆ, ತನ್ನ ವಿದೇಶಾಂಗ ಸಚಿವರು ಮತ್ತು ಸರಕಾರದ ಭದ್ರತಾ ಸಲಹೆಗಾರರು ಭಾಗಿಯಾಗಿರುವ ಮತ್ತು ತನಗೆ ನಿಕಟವಾಗಿರುವ ಸಂಸ್ಥೆಗಳು ಚೀನಾದ ಸರಕಾರ ಮತ್ತು ಸಂಸ್ಥೆಗಳಿಂದ ದೇಣಿಗೆ ಪಡೆದಿರುವಾಗ, ಒಂದೂವರೆ ದಶಕದ ಹಿಂದೆ ಕಾಂಗ್ರೆಸ್ ಪಡೆದುಕೊಂಡ ದೇಣಿಗೆಯನ್ನು  ಹಿಡಿದುಕೊಂಡು ರಾಷ್ಟ್ರೀಯ ಭದ್ರತಾ ಪ್ರಶ್ನೆಯನ್ನು ಎತ್ತಿರುವ ಬಿಜೆಪಿ ನಡೆಯು ತನ್ನ ಬಟ್ಟಲಿನಲ್ಲಿ ಹೆಗ್ಗಣ ಇಟ್ಟುಕೊಂಡು, ಕಾಂಗ್ರೆಸ್ ಬಟ್ಟಲಿನಲ್ಲಿ ನೊಣವನ್ನು ತೋರಿಸಿದಂತಾಗಿದೆ.

ಕೃಪೆ: ಟೆಲಿಗ್ರಾಫ್‌ಇಂಡಿಯಾ

ಅನುವಾದ: ನಿಖಲ್ ಕೋಲ್ಪೆ


ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...