Homeಮುಖಪುಟಸಿಜೆಐ ಅಂದ್ರೆ ಸುಪ್ರೀಂ ಕೋರ್ಟ್ ಅಲ್ಲ: ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು - ಪ್ರಶಾಂತ್ ಭೂಷಣ್

ಸಿಜೆಐ ಅಂದ್ರೆ ಸುಪ್ರೀಂ ಕೋರ್ಟ್ ಅಲ್ಲ: ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು – ಪ್ರಶಾಂತ್ ಭೂಷಣ್

ಕೊನೆಯ ನಾಲ್ವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ನಡವಳಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತಿರುವ ಪ್ರಶಾಂತ್ ಭೂಷಣ್

- Advertisement -
- Advertisement -

ನ್ಯಾಯಾಂಗದ ಸಮಗ್ರತೆಯ ಕುರಿತು ಪ್ರಶ್ನಿಸುವ ಎರಡು ಟ್ವೀಟ್‌ಗಳಿಗಾಗಿ ತನಗೆ ನೀಡಲಾದ ನ್ಯಾಯಾಂಗ ನಿಂದನೆಯ ಸುಪ್ರೀಂಕೋರ್ಟ್ ನೋಟೀಸಿಗೆ ಸ್ಫೋಟಕ ಉತ್ತರ ನೀಡಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಅಲ್ಲಿಗೇ ವಿಷಯ ಕೊನೆಗೊಳಿಸಿಲ್ಲ. ಅವರು ಅದೇ ಉತ್ತರದಲ್ಲಿ ಸುಪ್ರೀಂಕೋರ್ಟಿನ ಕೊನೆಯ ನಾಲ್ವರು ಮುಖ್ಯ ನ್ಯಾಯಾಧೀಶರ ನಡವಳಿಕೆಗಳ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ನ್ಯಾಯಾಂಗದ ಸಮಗ್ರತೆ ಮತ್ತು ಪಾವಿತ್ರ್ಯ ಉಳಿಯಬೇಕೆಂದಿದ್ದರೆ ಪ್ರಜೆಗಳು ಈ ಕುರಿತು ತಿಳಿದುಕೊಂಡು ಚಿಂತಿಸುವುದು ಅಗತ್ಯ.
…..

ನ್ಯಾಯಾಂಗ ನಿಂದನೆಯ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಜೆ.ಎಸ್. ಖೆಹರ್‌ರಿಂದ ಹಿಡಿದು, ಕೊನೆಯ ನಾಲ್ವರು ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಕರಿ ನೆರಳು ಚೆಲ್ಲಿದ ಪ್ರಮುಖ ಪ್ರಕರಣಗಳನ್ನು ತನಗೆ ನೀಡಲಾದ ನೋಟೀಸಿಗೆ ತಾನು ನೀಡಿರುವ ಉತ್ತರದಲ್ಲಿ ಪಟ್ಟಿ ಮಾಡಿದ್ದಾರೆ. ನ್ಯಾ. ಖೆಹರ್ ಅವರ ಅವಧಿಯಲ್ಲಿನ ಸಹಾರ ಬಿರ್ಲಾ ಪ್ರಕರಣ, ಕಾಲಿಖೋ ಪೌಲ್ ಆತ್ಮಹತ್ಯಾ ಚೀಟಿ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು, ಈ ಕುರಿತು ಸರಿಯಾದ ತನಿಖೆ ನಡೆಯದೆ ಸಾರ್ವಜನಿಕರ ಸಂಶಯ ದೂರವಾಗುವುದಿಲ್ಲ ಎಂದು ವಿವರಿಸಿದ್ದಾರೆ.

ಮಾಜಿ ಮುಖ್ಯ ನ್ಯಾಯಮೂರ್ತಿ ಖೆಹರ್

ನ್ಯಾ. ದೀಪಕ್ ಮಿಶ್ರಾ ಅವಧಿ

ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್ ಮಿಶ್ರಾ ಅವರ ಅವಧಿಯು “ಅನೇಕ ವಿಷಯಗಳಲ್ಲಿ ವಿವಾದಾಸ್ಪದವಾಗಿತ್ತು” ಎಂದು ಹೇಳಿರುವ ಭೂಷಣ್, ಸುಪ್ರೀಂಕೋರ್ಟಿನ ಘನತೆಯು ಇಳಿಮುಖವಾಗುವುದರಲ್ಲಿ ಅವರು ಪಾಲು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೆಡಿಕಲ್ ಕಾಲೇಜು ಲಂಚ ಪ್ರಕರಣ ಮತ್ತು ಪಿಐಎಂಎಸ್ ಹಗರಣದಲ್ಲಿ ಆರೋಪಿಯಾಗಿದ್ದು, ಇತ್ತೀಚೆಗೆ ನಿವೃತ್ತರಾದ ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶ ನಾರಾಯಣ್ ಶುಕ್ಲಾ ವಿರುದ್ಧ ಸಿಬಿಐಗೆ ಎಫ್‌ಐಆರ್ ದಾಖಲಿಸಲು ಅನುಮತಿ ನಿರಾಕರಣೆ ಪ್ರಕರಣಗಳನ್ನು ಭೂಷಣ್ ವಿವರವಾಗಿ ತನ್ನ ಉತ್ತರದಲ್ಲಿ ನೆನಪಿಸಿದ್ದಾರೆ.

ನಂತರ ಭೂಷಣ್ ಅವರು, ಮುಖ್ಯ ನ್ಯಾಯಾಧೀಶರಾಗಿದ್ದ ದೀಪಕ್ ಮಿಶ್ರಾ ಪ್ರಕರಣಗಳನ್ನು “ಮನಬಂದಂತೆ” ಹಂಚುವುದನ್ನು ವಿರೋಧಿಸಿ ಸುಪ್ರೀಂಕೋರ್ಟಿನ ನಾಲ್ವರು ಅತ್ಯಂತ ಹಿರಿಯ ನ್ಯಾಯಾಧೀಶರು ಮೊತ್ತಮೊದಲ ಬಾರಿಗೆ ಜನವರಿ 2018ರಲ್ಲಿ ನಡೆಸಿದ ಪ್ರಖ್ಯಾತ ಜಂಟಿ ಪತ್ರಿಕಾಗೋಷ್ಟಿಯನ್ನೂ ನೆನಪಿಸಿದ್ದಾರೆ. ಮುಖ್ಯ ನ್ಯಾಯಾಧೀಶರು ಪ್ರಕರಣಗಳನ್ನು ಇತರ ನ್ಯಾಯಾಧೀಶರಿಗೆ ವಹಿಸುವ ಅಧಿಕಾರ ಉಳ್ಳವರಾಗಿ ಅಸಮರ್ಪಕವಾಗಿ ಪ್ರಕರಣಗಳನ್ನು ಹಂಚಿದ ಹಲವಾರು ಉದಾಹರಣೆಗಳನ್ನು ಭೂಷಣ್ ನೀಡಿದ್ದಾರೆ. ಭೂಷಣ್ ಅವರ ಪ್ರಕಾರ, ರಾಜಕೀಯವಾಗಿ ಸೂಕ್ಷ್ಮವಾದ ಮತ್ತು ಆಳುವ ಪಕ್ಷದ ನಾಯಕರು ಮತ್ತು/ ಅಥವಾ ವಿರೋಧ ಪಕ್ಷಗಳ ನಾಯಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಕೆಲವು ನಿರ್ದಿಷ್ಟ ಪೀಠಗಳಿಗೆ ಮಾತ್ರ ಕೊಡಲಾಗಿತ್ತು.

ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ

ಮುಖ್ಯ ನ್ಯಾಯಾಧೀಶರಾಗಿದ್ದ ಮಿಶ್ರಾ, ನ್ಯಾಯಾಂಗದ ಆಡಳಿತಾತ್ಮಕ ವಿಷಯಗಳಲ್ಲಿ ಕಾರ್ಯಾಂಗವು ಹಾಕುತ್ತಿದ್ದ ಅನುಚಿತ ಒತ್ತಡಗಳನ್ನು ಸಮರ್ಥವಾಗಿ ಎದುರಿಸುತ್ತಿರಲಿಲ್ಲ ಎಂದು ಭೂಷಣ್ ಆರೋಪಿಸಿದ್ದಾರೆ. ಅವರ ಅವಧಿಯಲ್ಲಿ ಸುಪ್ರೀಂಕೋರ್ಟಿನ ಕೊಲೇಜಿಯಂನ ಶಿಫಾರಸುಗಳನ್ನು ಕೇಂದ್ರ ಸರಕಾರವು ಮತ್ತೆಮತ್ತೆ ಬುಡಮೇಲು ಮಾಡುವುದು ಸಾಮಾನ್ಯ ವಿಷಯವಾಗಿತ್ತು ಮತ್ತು ಇಂತಹ ಲಜ್ಜೆಗೇಡಿತನದ ಎದುರು ಕೂಡಾ ಅವರು ಮಣಿಯುತ್ತಿದ್ದರು ಎಂದು ಭೂಷಣ್ ಅವರು ತನ್ನ ಉತ್ತರದಲ್ಲಿ ಆರೋಪಿಸಿದ್ದಾರೆ.

ನ್ಯಾ. ಲೋಯಾ ಮತ್ತು ಭೀಮಾ ಕೋರೆಗಾಂವ್ ಪ್ರಕರಣಗಳನ್ನು ಎತ್ತಿರುವ ಭೂಷಣ್, ಸುಪ್ರೀಂಕೋರ್ಟ್ ಇಂದಿನ ದಿನಗಳಲ್ಲಿ ನಾಗರಿಕರ ಸ್ವಾತಂತ್ರ್ಯವು ಆದ್ಯತೆಯ ವಿಷಯವೆಂದಾಗಲೀ, ತೀರಾ ಆತಂಕಕಾರಿ ವಿಷಯವೆಂದಾಗಲೀ ಪರಿಗಣಿಸುತ್ತಲೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ದುರದೃಷ್ಟವಶಾತ್ ಇದು ಸುಪ್ರೀಂಕೋರ್ಟ್ ಹೆಚ್ಚುಹೆಚ್ಚಾಗಿ ಕಾರ್ಯಾಂಗಕ್ಕಿಂತಲೂ ಹೆಚ್ಚು ಕಾರ್ಯಾಂಗ ಮನೋಭಾವದ್ದಾಗುತ್ತಿದೆ ಎಂಬ ನಂಬಿಕೆ ಭಾರತೀಯ ನ್ಯಾಯಾಂಗದ ಹಿತಚಿಂತಕರ ನಡುವೆ ಬೆಳೆಯುತ್ತಾ ಹೋಗುವುದಕ್ಕೆ ಕಾರಣವಾಗಿದೆ” ಎಂದು ಅವರು ಬರೆದಿದ್ದಾರೆ.

ನ್ಯಾ. ರಂಜನ್ ಗೊಗೊಯ್ ಅವಧಿ

ಮುಖ್ಯ ನ್ಯಾಯಾಧೀಶರಾಗಿ ರಂಜನ್ ಗೊಗೊಯ್ ಅವರ ಅವಧಿಯು ಭೂಷಣ್ ಅವರ ತೀವ್ರತರ ಟೀಕೆಗೆ ಗುರಿಯಾಗಿದೆ. ಕಾರ್ಯಾಂಗದ ಜೊತೆ “ಕಸಿವಿಸಿ ಉಂಟುಮಾಡುವಷ್ಟು” ನಿಕಟತೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಅವಗಣನೆ ಅದರ ಗುಣಲಕ್ಷಣಗಳಾಗಿದ್ದವು ಎಂದು ಅವರು ಬರೆದಿದ್ದಾರೆ. ಕಾರ್ಯಕ್ರಮ ಪಟ್ಟಿ ರೂಪಿಸುವ ಅಧಿಕಾರ ಹೊಂದಿದವರಾಗಿ ಅವರ ಆದ್ಯತೆಗಳನ್ನು ಪ್ರಶ್ನಿಸಿರುವ ಭೂಷಣ್,  ಬಿಜೆಪಿಗೆ ಭಾರೀ ಲಾಭ ತಂದುಕೊಟ್ಟಿರುವ ಚುನಾವಣಾ ಬಾಂಡ್, ಸಂವಿಧಾನದ ವಿಧಿ 370ರ ರದ್ದತಿ, ಆಗಸ್ಟ್ 5, 2019ರ ದಿಗ್ಬಂಧನದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ನಿರಂಕುಶ ಬಂಧನ ಸರಣಿ, ಸಿಬಿಐ ನಿರ್ದೇಶಕ ಆಲೋಕ್ ವರ್ಮಾರ ಸೇವಾವಧಿಯ ಕಡಿತ ಇತ್ಯಾದಿಗಳನ್ನು ಪ್ರಶ್ನಿಸುವ ಪ್ರಕರಣಗಳ ವಿಚಾರಣೆಯನ್ನೇ ನಡೆಸದಿರುವುದು ಮುಂತಾದ ಪ್ರಶ್ನೆಗಳನ್ನು ಭೂಷಣ್ ಎತ್ತಿತೋರಿಸಿದ್ದಾರೆ. ಅದೇ ಹೊತ್ತಿಗೆ, ಗೊಗೋಯ್ ಅವಧಿಯಲ್ಲಿ ಅಯೋಧ್ಯಾ ಪ್ರಕರಣದ ತ್ವರಿತಗತಿಯ ವಿಚಾರಣೆಯ ವಿಷಯವನ್ನು ಎತ್ತಿರುವ ಅವರು, ಆ ಪ್ರಕರಣದ ಅಂತಿಮ ಪರಿಣಾಮವು ಆಳುವ ಪಕ್ಷದ ಚುನಾವಣಾ ಭವಿಷ್ಯವನ್ನು ಬಲಪಡಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ಅವರನ್ನು ಅಯೋಧ್ಯೆಗೆ ಆಹ್ವಾನಿಸದಿರುವುದು ಅನ್ಯಾಯ: ಯಶ್ವಂತ್ ಸಿನ್ಹಾ
ಮಾಜಿ ಸಿಜೆಐ ರಂಜನ್ ಗೊಗೊಯ್

ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ಆರೋಪವನ್ನು ಮಾಡಿರುವ ಭೂಷಣ್, ದೂರುದಾರರನ್ನೇ ಬಲಿಪಶು ಮಾಡಲು ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರಕಾರ ಸಮನ್ವಯದಿಂದ ಕೆಲಸ ಮಾಡಿರುವ ಸಾಧ್ಯತೆಯ ಪ್ರಶ್ನೆಯನ್ನು ಎತ್ತಿದ್ದಾರೆ. ಪ್ರಮುಖವಾದ ಪ್ರಕರಣಗಳನ್ನು ನಿರ್ಧರಿಸುವಾಗ ಕಾರ್ಯಾಂಗದಿಂದ ಗೊಗೋಯ್ ಅವರಿಗಿದ್ದ ಸ್ವಾತಂತ್ರ್ಯವನ್ನು ಅವರು ಪ್ರಶ್ನಿಸಿದ್ದಾರೆ. ಆ ಮಹಿಳೆಯು ತಾನು ಲೈಂಗಿಕ ಕಿರುಕುಳದ ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡಿದ ನಂತರ ಆಕೆಯನ್ನು ಮರಳಿ ಸುಪ್ರೀಂಕೋರ್ಟಿನ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಭರವಸೆಯನ್ನು “ಸರಕಾರದ ಉನ್ನತ ಸ್ಥಾನದಲ್ಲಿರುವ” ವ್ಯಕ್ತಿಯ ಒತ್ತಡದ ಬಳಿಕ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿರುವುದು, ಅವರು ಮತ್ತು ಕೇಂದ್ರ ಸರಕಾರದ ನಡುವೆ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಕೊಡುಕೊಳ್ಳುವಿಕೆಯ ಕುರಿತು ಗಂಭೀರವಾದ ಆತಂಕವನ್ನೆಬ್ಬಿಸುತ್ತದೆ ಎಂದು ಭೂಷಣ್ ಆರೋಪಿಸಿದ್ದಾರೆ.


ಇದನ್ನೂ ಓದಿ: ಸರ್ಕಾರದ ಪರವಾಗಿ ರಫೇಲ್, ಅಯೋಧ್ಯಾ, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ಸಿಗುತ್ತದೆ: ಇದರ ಅರ್ಥವೇನು? 


ನ್ಯಾ. ಎ.ಎಸ್. ಬೋಬ್ಡೆ ಅವಧಿ

ಪೌರತ್ವ (ತಿದ್ದುಪಡಿ) ಕಾಯಿದೆ (ಸಿಎಎ)ಯ ಸಂವಿಧಾನಬದ್ಧತೆಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಅವುಗಳನ್ನು ಸಲ್ಲಿಸಿ ತಿಂಗಳುಗಳಾದರೂ ನಡೆಸದೇ ಇರುವುದು, ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ದ್ವೇಷ ಕಾರುವ ಭಾಷಣದ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ತಕ್ಷಣ ನ್ಯಾ. ಎಸ್. ಮುರಳೀಧರ್ ಅವರನ್ನು ದಿಲ್ಲಿ ಹೈಕೋರ್ಟಿನಿಂದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಿರುವುದು, ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ನಿರ್ಬಂಧವನ್ನು ಮುಂದುವರಿಸಿರುವುದು “ಪ್ರಜಾಪ್ರಭುತ್ವದ ಅವಗಣನೆ”ಯಲ್ಲಿ ನ್ಯಾಯಾಲಯದ ಪಾತ್ರದ ಬಗ್ಗೆ ತನ್ನ ಅಭಿಪ್ರಾಯವನ್ನು ರೂಪಿಸಲು ಸಾಕು ಎಂದು ಭೂಷಣ್ ತನ್ನ ಉತ್ತರದಲ್ಲಿ ಬರೆದಿದ್ದಾರೆ.

 

 

ಸಂವಿಧಾನದ ವಿಧಿ 19 (1)(ಎ) ಅನ್ವಯ ಅಂತಹ ನಿಷ್ಕಪಟ ಅಭಿಪ್ರಾಯವನ್ನು ರೂಪಿಸಿಕೊಳ್ಳಲು, ಹೊಂದಿರಲು ಮತ್ತು ಅಭಿವ್ಯಕ್ತಿಪಡಿಸಲು ತಾನು ಸ್ವತಂತ್ರನಿದ್ದೇನೆ ಎಂದು ಭೂಷಣ್ ವಾದಿಸಿದ್ದಾರೆ.

ಹಾಲಿ ಮುಖ್ಯನ್ಯಾಯಮೂರ್ತಿ ಎ.ಎಸ್‌ ಬಾಬ್ಡೆ

ಅದಕ್ಕಿಂತಲೂ ಮುಖ್ಯವಾಗಿ, ಕೊನೆಯ ನಾಲ್ಕು ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿಯ ಕುರಿತು ತನಗಿರುವ ಆತಂಕವು ತನ್ನ ವಿರುದ್ಧ ವಿಚಾರಣೆ ಆರಂಭಿಸಲು ನೆಲೆಗಟ್ಟು ಒದಗಿಸುವುದಿಲ್ಲ; ಏಕೆಂದರೆ, ಸುಪ್ರೀಂಕೋರ್ಟ್ ಎಂಬುದನ್ನು ಒಂದು ಸಂಸ್ಥೆಯಾಗಿ- ಮುಖ್ಯ ನ್ಯಾಯಾಧೀಶರ ಅವಧಿ ಬಿಡಿ, ಸ್ವತಃ ಮುಖ್ಯ ನ್ಯಾಯಾಧೀಶರ ಜೊತೆಯೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ತನ್ನ ಉತ್ತರದಲ್ಲಿ ಬರೆದಿರುವ ಪ್ರಶಾಂತ್ ಭೂಷಣ್, ನ್ಯಾಯಾಧೀಶರಿಗಿಂತ ನ್ಯಾಯಾಲಯ ದೊಡ್ಡದು ಎಂಬ ಬಡಿದೆಬ್ಬಿಸುವ ವಾದವನ್ನು ಮುಂದಿಟ್ಟಿದ್ದಾರೆ.

ಸುಪ್ರೀಂಕೋರ್ಟ್ ತನಗೆ ನೀಡಿದ ನ್ಯಾಯಾಂಗ ನಿಂದನೆ ನೋಟೀಸಿಗೆ ಪ್ರಶಾಂತ್ ಭೂಷಣ್ ಅವರು ನೀಡಿರುವ ಅಂಶ ಅಂಶಗಳ ಖಚಿತ ಉತ್ತರದಿಂದಾಗಿ, ಎರಡು ನಿರುಪದ್ರವಿ ಟ್ವೀಟ್‌ಗಳಿಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಅಧಿಕಾರದ ಅಸ್ತ್ರವನ್ನು ಬಳಸುವುದರ ಮೂಲಕ ಸುಪ್ರೀಂಕೋರ್ಟ್- ಇತ್ತೀಚಿನ ವರ್ಷಗಳಲ್ಲಿ ತಾನು ಮಾಡಿದ ತಪ್ಪುಗಳು ಮತ್ತು ಲೋಪಗಳ ಕುರಿತು ಹೊಸದಾಗಿ ಜನರ ಪರಿಶೀಲನೆಗೆ ಒಳಗಾಗುವ ಇರಿಸುಮುರುಸನ್ನು ತಾನೇ ಮೈಮೇಲೆ ಎಳೆದುಕೊಂಡಿದೆಯೇ ಎಂದು ಎಲ್ಲರೂ ಯೋಚಿಸುವಂತಾಗಿದೆ.

ವಿ. ವೆಂಕಟೇಸನ್

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಸುಪ್ರೀಂಕೋರ್ಟಿನ ನ್ಯಾಯಾಂಗ ನಿಂದನೆ ನೋಟೀಸಿಗೆ ವಕೀಲ ಪ್ರಶಾಂತ್ ಭೂಷಣ್ ಸ್ಫೋಟಕ ಉತ್ತರ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...