ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯಗೊಂಡ ಬಳಿಕ ಟಿವಿ ವಾಹಿನಿಗಳಲ್ಲಿ ನಡೆಯುವ ಮತದಾನೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್)ಯ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ.
ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದ ಕಾಂಗ್ರೆಸ್ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಪವನ್ ಖೇರಾ, ಪಕ್ಷವು “ಟಿಆರ್ಪಿಗಾಗಿ ಊಹಾಪೋಹಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಸ್ಲಗ್ಫೆಸ್ಟ್” ಮಾಡಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
“ಜನರು ಮತ ಚಲಾಯಿಸಿದ್ದಾರೆ ಮತ್ತು ಫಲಿತಾಂಶ ಜೂನ್ 4ರಂದು ಬರಲಿದೆ. ಊಹಾಪೋಹದಲ್ಲಿ ತೊಡಗಿ, ಟಿಆರ್ಪಿ ಕದನದಲ್ಲಿ ಪಾಲ್ಗೊಳ್ಳಲು ನಮಗೆ ಯಾವುದೇ ಕಾರಣ ಗೋಚರಿಸುತ್ತಿಲ್ಲ” ಎಂದು ಪವನ್ ಖೇರಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Our statement on the reason for not participating in #ExitPolls
Voters have cast their votes and their verdict has been secured.
The results will be out on 4th June. Prior to that, we do not see any reason to indulge in speculation and slugfest for TRP.
The Indian National…
— Pawan Khera 🇮🇳 (@Pawankhera) May 31, 2024
“ಕಾಂಗ್ರೆಸ್ ಪಕ್ಷವು ಮತದಾನೋತ್ತರ ಸಮೀಕ್ಷೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಯಾವುದೇ ಚರ್ಚೆಯ ಗುರಿ, ಜನರಿಗೆ ಮಾಹಿತಿ ನೀಡುವುದು. ಜೂನ್ 4ರ ನಂತರ ನಾವು ಚರ್ಚೆಗಳಲ್ಲಿ ಸಂತೋಷದಿಂದ ಭಾಗವಹಿಸುತ್ತೇವೆ” ಎಂದಿದ್ದಾರೆ.
ಏಳು ಹಂತಗಳ ಮತದಾನ ಮುಗಿಯುವ ಮುನ್ನ ಮಧ್ಯದಲ್ಲಿ ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟಿಸದಂತೆ ಚುನಾವಣಾ ಆಯೋಗ ಮಾಧ್ಯಮಗಳಿಗೆ ಸೂಚಿಸಿತ್ತು. ಅದರಂತೆ, ಸುಮ್ಮನಾಗಿರುವ ಮಾಧ್ಯಮಗಳು, ಇಂದು 7ನೇ ಹಂತದ ಮತದಾನ ಕೊನೆಗೊಂಡ ಬಳಿಕ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿ, ಚರ್ಚೆ ನಡೆಸುವ ನಿರೀಕ್ಷೆಯಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆ : ಇಂದು ಕೊನೆಯ ಹಂತದ ಮತದಾನ


